ಒಟ್ಟು 2701 ಕಡೆಗಳಲ್ಲಿ , 120 ದಾಸರು , 1995 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

208ಎಂಥ ಚೆಲುವೆಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮ |ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮಪಮನೆಯೆಂಬುದು ಸ್ಮಶಾನವು ನೋಡೇಗಜಚರ್ಮಾಂಬರವಮ್ಮಮ್ಮ |ಹಣವೊಂದೆಂಬುದು ಕೈಯೊಳಗಿಲ್ಲವುಕಪ್ಪರವಿದೆ ನೋಡಮ್ಮಮ್ಮ 1ಮೋರೆಗಳೈದು-ಮೂರು ಕಣ್ಣಗಳುವಿಪರೀತವ ನೋಡಮ್ಮಮ್ಮಘೋರವಾದ ರುಂಡಮಾಲೆಉರಗಭೂಷಣವನು ನೋಡಮ್ಮಮ್ಮ 2ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |ಈತನ ನಾಮವು ಒಂದೇ ಮಂಗಳಕರವುಹರನ ನೋಡಮ್ಮಮ್ಮ 3ತಲೆಯೆಂಬುದು ನೋಡಿದರೆ ಜಡೆಯುಹೊಳೆಯುತಿದೆ ನೋಡಮ್ಮಮ್ಮಹಲವು ಕಾಲದ ತಪಸಿ ರುದ್ರನಮೈಬೂದಿಯು ನೋಡಮ್ಮಮ್ಮ 4ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ |ಇಂದಿರೆರಮಣನ ಪುರಂದರವಿಠಲನಹೊಂದಿದವನ ನೋಡಮ್ಮಮ್ಮ 5
--------------
ಪುರಂದರದಾಸರು
3 ಆತ್ಮ ನಿವೇದನೆ190ಅಂಜಿಕ್ಯಾಕೆನಗಂಜಿಕೆಕಂಜನಾಭಶ್ರೀನಿವಾಸನ ದಯವಿರಲುಪ.ಅಶನವಸನವನ್ನು ಕುಳಿತಲ್ಲೆ ನಡೆಸುವನಿಶಿದಿನ ನೀಚರಾಧೀನ ಮಾಡದೆಹಸನಾಗಿ ತನ್ನಂಘ್ರಿ ನೆರಳೊಳು ಬಚ್ಚಿಟ್ಟುಕುಶಲದಿ ಸಾಕುವ ದೊರೆಯ ನಂಬಿದ ಬಳಿಕ 1ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿಎಲ್ಲ ವ್ಯವಹಾರವ ಮಾಡುವ ಬಲ ನನಗಿಲ್ಲೆಂದು ಆಯಾಸಬಡಲೀಸದವನಿರೆ 2ಆವಾವ ಕಾಲದಿ ಆವಾವ ದೇಶದಿಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶಸಾವು ಕಳೆದು ಜೀವಕಾಶ್ರಯನಾಗಿರೆ 3
--------------
ಪ್ರಸನ್ನವೆಂಕಟದಾಸರು
ಅ. ಗಣಪತಿ ಸರಸ್ವತಿಯರು261ಶ್ರೀ ಗಣನಾಥನಿಗೆ | ಶಾರದಾಂಬಿಕೆಗೆಶ್ರೀ ಗೌರಿ ಭೂದೇವಿ ಶ್ರೀದೇವಿಗೆ |ಶ್ರೀಗುರುಮಹಾವಿಷ್ಣು ಬ್ರಹ್ಮರುದ್ರಾದ್ಯರಿಗೆಸಿರಿಚರಣ ಪಂಕಜಗೆ ನಮಿಸಿ ನುತಿಸುವೆನು 1ಅಷ್ಟ ದಿಕ್ಪಾಲರಿಗೆ ಶಿಷ್ಯಮರುದ್ಗಣಗಳಿಗೆಅಷ್ಟವಸು ಸಪ್ತಋಷಿ ನವಗ್ರಹಾದ್ಯರಿಗೆ |ಶ್ರೇಷ್ಠ ಹನುಮಂತನಿಗೆ ಕನಕಾದಿ ದಾಸರಿಗೆಸೃಷ್ಟಿಯೊಳು ಕವಿಜನಕೆ ಕೈಮುಗಿವೆನು 2ವಿಪ್ರಕುಲ ಸಂಜಾತ ಮಯ್ಯೂರ ಮಡಿಪುರದೊ-ಳಿಪ್ಪ ವೆಂಕಟರಾಯ ಗೋಳೇರ ಸುಕುಮಾರ |ಸರ್ಪಶಯನನ ದಾಸ ಗೋವಿಂದನೆಂಬವನುಜಲ್ವಿಸಿಯೆ ವಿರಚಿಸಿದೆನೀ ಕೃತಿಯನು 3ಯತಿಗಣ ಪ್ರಾಸ ವಿಷಮಾಕ್ಷರಗಳೊಂದರಿಯೆಕೃತ ದೋಷ ರಾಗ ಲಯ ಭೇದವನು ತಿಳಿಯೆ |ಪೃಥುವಿಯೊಳು ಕವಿಗಳಂತಗ್ಗಳನು ನಾನಲ್ಲಅತಿಶಯದ ನ್ಯೂನತೆಯ ಬಲ್ಲ ಶ್ರೀನಲ್ಲ 4ತಪ್ಪು ಸಾವಿರವಿರಲು ತಿದ್ದಿ ಬಲ್ಲವರಿದನುಒಪ್ಪುವಂದದಿ ಜಗದಿ | ಮೆರೆಸಿ ವಾಚಕರುಸರ್ಪಶಯನನ ಕೃಪೆಗೆ ಪಾತ್ರರಾಗುತ ನೀವುಕ್ಷಿಪ್ರದಲಿ ಗೋವಿಂದದಾಸ£À£Àು ಪರಸಿ ಮನ್ನಿಪುದು 5
--------------
ಗೋವಿಂದದಾಸ
ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು ||ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು ||ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು ||ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3
--------------
ಪುರಂದರದಾಸರು
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5
--------------
ಪ್ರಸನ್ನವೆಂಕಟದಾಸರು
ಅಂದಿಂದ ನಾ ನಿನ್ನನೆರೆನಂಬಿದೆನೊ ಕೃಷ್ಣತಂದೆ ಗೋವಿಂದ ಮುಕುಂದ ನಂದನ ಕಂದ ಪಬಲವಂತ ಉತ್ತಾನಪಾದರಾಯನ ಕಂದಮಲತಾಯಿ ನೂಕಲು ಅಡವಿಯೊಳು ||ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿಒಲಿದು ಧ್ರುವಗೆ ಪಟ್ಟಕಟ್ಟಿದ್ದಕೇಳಿ1ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳುದುಕ್ಖದಿ ಶ್ರೀಹರಿ ಸಲಹೆನ್ನಲು ||ಚಕ್ರದಿ ನೆಗಳ ಕಂಠವ ತರಿದು ಭಕ್ತನಅಕ್ಕಸಪರಿದಾದಿಮೂಲನೆಂಬುದಕೇಳಿ2ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳುಕಪಟದಿ ಸೀರೆಯ ಸೆಳೆಯುತಿರೆ ||ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನುಅಪಮಾನದಿಂದ ಕಾಯ್ದ ಹರಿಯೆಂಬುದನುಕೇಳಿ3ಹರಿನಾರಾಯಣನೆಂದು ಪ್ರಹ್ಲಾದ ಬರೆಯಲುದುರುಳದಾನವ ಅವನಿಗೆ ಮುನಿದು ||ಕರೆ ನಿನ್ನ ಒಡೆಯನ ಎಂದು ಗರ್ಜಿಸೆನರಹರಿಬಂದು ಒಡನೆಯೆ ಕಾಯ್ದನೆಂಬುದಕೇಳಿ4ಅಂಬರೀಷಗೆದೂರ್ವಾಸಶಾಪವ ಕೊಡೆಅಂಬುಜಲೋಚನ ಚಕ್ರದಿಂದ ||ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದಕಂಬುಚಕ್ರಧರಹರಿಯೆಂಬುದಕೇಳಿ5ಛಲಬೇಡ ರಾಮನ ಲಲನೆಯ ಬಿಡು ಎಂದುತಲೆಹತ್ತರವಗೆ ಪೇಳಲು ತಮ್ಮನ ||ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲುಸಲೆ ವಿಭೀಷಣಗೆ ಲಂಕೆಯನಿತ್ತುದನುಕೇಳಿ6ಸುರ-ನರ-ನಾಗಲೋಕದ ಭಕ್ತ ಜನರನುಪೊರೆಯಲೋಸುಗ ವೈಕುಂಠದಿಂದ ||ಸಿರಿಸಹಿತದಿ ಬಂದು ಶೇಷಾಚಲದಿ ನಿಂತಪುರಂದರವಿಠಲ ನಿನ್ನಯ ಚರಣವ ಕಂಡು 7
--------------
ಪುರಂದರದಾಸರು
ಅಪಮಾನವಾದರೆ ಒಳಿತು |ಅಪರೂಪ ಹರಿನಾಮ ಜಪಿಸುವ ಮನುಜಗೆ ಪಮಾನದಿಂದಲಿ ಅಭಿಮಾನ ಪುಟ್ಟವುದು |ಮಾನದಿಂದಲಿ ತಪ ಹಾನಿಯಾಯಿತು ಹಾನಿಯಾಗುವುದು ||ಮಾನಿ ಕೌರವನಿಗೆ ಹಾನಿಯಾಯಿತು-ಅನು-|ಮಾನವಿಲ್ಲವು ಮಾನ-ಅಪಮಾನ ಸಮರಿಗೆ 1ಅಪಮಾನದಿಂದಲಿ ತಪವೃದ್ಧಿಯಾಹುದು |ಅಪಮಾನದಿಂ ಪುಣ್ಯ ಸಫಲವಾಗುವುದು ||ಅಪಮಾನದಿಂದಲಿನೃಪಧ್ರುವರಾಯಗೆ |ಕಪಟನಾಟಕ ಕೃಷ್ಣ ಅಪರೋಕ್ಷನಾದನು2ನಾನೇನ ಮಾಡಲಿ ಆರಲ್ಲಿ ಪೋಗಲಿ |ಕಾನನಚರರಾರಾಧ್ಯ ನೀನಿರಲು ||ದೀನರಕ್ಷಕ ನಮ್ಮ ಪುರಂದರವಿಠಲನೆ |ಏನು ಬೇಡೆನಗಪಮಾನವೆ ಇರಲಿ 3
--------------
ಪುರಂದರದಾಸರು
ಆ ಸುಖ ಹರಿಮರೆದವಗಯ್ಯದೋಷಾಂಧಃತಮದೊಳಗೇನು ಸುಖ ಪ.ಕಂಠತ ವ್ಯಸನ ಹೊಲಬಿಲ್ಲದೆ ಧರ್ಮಕಂಟಕಶಾಸ್ತ್ರವಿಚಾರಕಗೆಎಂಟುವೃಷಭಹೂಡಿ ಮಹಾಶ್ರಮಿಸಿ ಬರೆದಂಟು ಬೆಳೆದವನಿಗೇನು ಸುಖ 1ಅನಿರುದ್ಧಗಖಿಳವರ್ಪಿಸಿದಾನಲ್ಪಗುಣದೆ ಮತಿ ದೃಢವಿಲ್ಲದ ಮಾನವಗೆಹಣ ವೆಚ್ಚಿಸಿ ರಿಣದೆಗೆದಿಟ್ಟ ಧಾನ್ಯವತೃಣಸಮ ವಿಕ್ರಿಸಲೇನು ಸುಖ 2ಶಂಖಪಾಣಿಯ ನಿಂದಿಸಿ ಕರ್ಮಶಕ್ತಿಯಶಂಕರ ರವಿಗಣೋಪಾಸಕಗೆಸಂಖ್ಯೆ ಇಲ್ಲದ ವಸ್ತು ನಿಶ್ಶೇಷದಿಸುಂಕಕೆ ತೆತ್ತಿದರಾವ ಸುಖ 3ಆಧ್ಯಾತ್ಮಾನುಭವ ಗುರುಕೃಪೆ ಇಲ್ಲದೆವಿದ್ಯೋನ್ಮತ್ತ ದಯಾಶೂನ್ಯಗೆನದ್ಯೋಲ್ಲಂಘಿಸಿ ದಡದಲಿ ನಾವೆ ಮುಳುಗಿದರೆ ಪ್ರಾಣಿಗಳಿಗೇನು ಸುಖ 4ಪ್ರಸನ್ನವೆಂಕಟ ಪದಸರೋರುಹಗಳಪ್ರಸನ್ನೀಕರಿಸದೆ ಸಾಹಸಬಡುವಅಶುಭದನುಜರು ತಪಮಾಡಿ ತುದಿಯಲಿವಿಷಮಗತಿಗ್ಹೋಗಲೇನು ಸುಖ 5
--------------
ಪ್ರಸನ್ನವೆಂಕಟದಾಸರು
ಆಕಳ ಕಾಯ್ದ ಗೋಕುಲವಾಸನುಆಕಳ ಕಾಯ್ದ ಗೋಕುಲವಾಸನನೇಕ ಗುಣನಿಧಿನಾಕೇಶವಿನುತಪುರದಲ್ಲಿದ್ದಂಥ ಕೇರಿಯ ಮಕ್ಕಳ ನೆರಹಿ ಯಾದವ ಪರಿವಾರವೆಲ್ಲನಳಿನಕೇತಕಿ ಎಳೆಯ ಮಾವಿನ ತಳಿಲ ವನದ ಒಳಗೆ ರಂಗನುತೊಂಡರೊಡಗೂಡಿಪುಂಡರೀಕಾಕ್ಷಗೋವಿಂದ ಕಾಳಿಯ ದಂಡೆಯಲ್ಲಿರಿಸಿಕಡು ತೃಷದಿ ಆ ಮಡುವಿನುದಕ ಕುಡಿದು ಗೋವುಗಳೆಲ್ಲ ನಡುಗಿ ಬೀಳಲುಹೊಕ್ಕ ಭರದಿ ದೇವಕಿ ಸುತನ ಸಿಕ್ಕಿಸಿಕೊಂಡು ಬಾಲಕೆ ಬಿಗಿಯಲುಇಂದಿರಾಪತಿ ಆನಂದದಿಂದಾಡಲು ಬಂದುಬೊಮ್ಮವಾಯುಉರಗಾಂಗನೆಯರ ಮೊರೆಯ ಲಾಲಿಸಿ ಕರುಣಿ ಅವರಿಗೆ ಗರುಡನ ಭಯಗರಳಭಯದಿ ಧರೆಗೆ ಬಿದ್ದಂಥ ತುರುಗಳಿಗೆಲ್ಲ ಸ್ಮರಣೆ ಬಪ್ಪಂತೆಮಂಗಳ ಮೂರುತಿ ಪೊಂಗೊಳಲೂದುತ್ತ ತಿಂಗಳಿನಂದದಿ
--------------
ಗೋಪಾಲದಾಸರು
ಆಗಮವ ತಮನೊಯ್ಯೆ | ಅವನ ಪಾತಾಳದಲಿ |ತಾಗಿದಲೆವರಿದು ವೇದಾವಳಿಗಳಾ |ಆಗ ತಂದ್ದತ್ತ ಮಚ್ಛಾಮಾರನೆ ವುದಯವಾಗುತಿದೆವುಪ್ಪುವಡಿಸೊ ಪಹರಿಯ ಭಾಗೀರಥಿ ಪಿತನೆ |ಭಾಗವತ ಜನಪ್ರಿಯನೆ |ಯೊಗಧೆಯ ವಪ್ಪುವಡಿಸೊ ಹರಿಯೆ | ಭಾಗೀರಥಿ ಪಿತನೆ 1ದೇವಾಸುರರು ಶಿಂದ್ಧು | ಮಥನದಲಿ ಗಿರಿ ಮುಳುಗೆ |ದೆವಾ ರಾಕ್ಷಿಸುತಾ ಕ್ಷಿಶನ ಉಳಿದೂ |ಆನೊಯಲು ವಾಗಿರಿಯ | ನಂತ ಕೂರ್ಮನೆ ವುದಯವಾಗುತಿದೆವಪ್ಪುವಡಿಸೊ ಹರಿಯೆ 2ಭೂತಳವ ಕಾದ್ದೊಯಿದ | ಹರಂಣ್ಯಕ್ಷನೆಂಬ ನರಪಾತಳದ |ಲೊರಶಿನಿಲಿಶಿದ ಜಗಂಗಳಾ | ಖ್ಯಾತಿ ಪಡೆದ ಪ್ರತಿಮ |ವರಹಾರೂಶಪನೆ ಸುಪ್ರಭಾತದಲಿವುಪ್ಪವಡಿಸೊ ಹರಿಯೇ 3ಭೂದೇವದೆವರನು | ಭಾಜಿಸುವ ಶಿವುವ ಪ್ರಹ್ಲಾದಗಾ | ಗಾಹವನುಕವಲುಗಿಶಿ ಉಗದೆ | ತೂದ ಕರುಳಿನಮಾಲೆ |ಯಪ್ಪನರಶಿಂಹ ಕಾರುಣೋದಯದೊ ವಪ್ಪವಡಿಸೊ ಹರಿಯೆ 4ಬರಿ ಭಕತಿಯಿಂದ ಮೊರಡಿನೆಲನ ಮಾತು ಕೂಡೆ |ನೆಲ ನಭನೆ ನೀರಡಿಯ ಮಾಡಿ ಬೆಳೆದೆ |ನಳಿನ ಜಾಂಡವನೊಡದೆ | ವಾಮನ ತ್ರಿವಿಕ್ರಮನೆಬೆಳಗಾಯಿತುಪ್ಪವಡಿಸೋಹರಿಯೆ 5ಕಾತ್ರ್ತವಿಯ್ರ್ಯಾರ್ಜುನನ ಕಡಿದು ಕ್ಷತ್ರಿಯ ಕುಮುದು |ಮಾತ್ರ್ತಂಡನಾದೆ ಮಾತೆಯ ಮಾತಿಗೆ ಆತ್ರ್ತಜನಬಂಧುವೆ | ಪರಶುರಾಮನೆ ಬ್ರಾಹ್ಮಿ ಮೂಹೋರ್ತದಲ್ಲಿವುಪ್ಪವಡಿಸೊ ಹರಿಯೆ 6ಪಂಪಾದಿಪನವರದ | ಅಮರಪತಿಯಾದ ಷ್ಕಂಪ್ಪರಾವಣನಗೆಲಿದವನನುಜಗೆ ಸಂತ್ಪಾರಂಪರೆಯಯಿತ್ತರಘುರಾಮದೆಶೆ | ಕೆಂಪಾಯಿತುಪ್ಪ ವಡಿಸೊಹರಿಯೆ 7ಯಿಂದು ರವಿಕುಲಗಳಲಿ | ಜನಿಶಿದಮಜರಾಜ| ಬೃಂದಾರಿಯಾಗಿಭೂಭರವಿಳಿಪಿದೆ | ನಂದನಂದನ ಕೃಷ್ಣ |ಆಂಗಯಗರಗಾಣ ಬಂದವಿದವುಪ್ಪ ವಡಿಸೊ ಹರಿಯೇ 8ತ್ರಿಪುರದಮಕಾರಿಗಳ | ಸತಿಯರಿಗೆವುಪಸತಿಗಳುಪದೆಶಗಳ ತೊಟ್ಟುಭ್ರಮಗೊಳಿಶಿದುತ್ರಿಪುರ ಹತಗಂಬಾದೆ |ತ್ರಿಪುರ ಸಾಧಕ ಜಾದ್ಕ ತಪ ನವಿದೆವುಪ್ಪವಡಿಸೊ ಹರಿಯೆ9ಆಶಿ ಖಾಡವಿಡಿದಾಶ್ವವೇರಿ ಕೋಪದಿ ವಿಷ್ಣು |ಯಶಶಿನಲಿ ಕಲ್ಕ್ಯಾವ | ತಾರನಾದೆ |ಕುಶಿರಿದರಿದಶಸುವೇಪದಶ್ಯೂಗಳಗೆಲಿದೆ | ಬಿಶಿಲಾಯಿತುಪ್ಪವಡಿಸೊ ಹರಿಯೆ 10ಯಿಂದ ಚಂದ್ದ್ರ್ಯಾದಿಗಳ್ ಬ್ರಹ್ಮ ರುದ್ದ್ರಾದಿಗಳುಪೇಂದ್ರಜಯ |ಜಯಯೆನುತ ಬಂದೈಧರೆ | ವೀಂದ್ದ್ರವಾಹನ ಪುರಂದರವಿಠಲಸೌಭಾಗ್ಯ ಸಾಂದ್ದ್ರನಿಧಿ ವುಪ್ಪವಡಿಸೊ ಹರಿಯೆ 11
--------------
ಪುರಂದರದಾಸರು
ಆತ್ಮನಿವೇದನ ಭಕುತಿ ತನ್ನಾತ್ಮವನೀವ ಪರಮಾತ್ಮ ವಿಶ್ವಾತ್ಮಗೆ ಪ.ಸರ್ವಕರ್ಮಕರ್ತ ಸರ್ವಕಾಲವರ್ತಸರ್ವಕಾರ್ಯಕೆಹರಿಸ್ವತಂತ್ರನುಸರ್ವಾರ್ಥದಲಿ ಪೂರ್ಣಸರ್ವೇಂದ್ರಿಯ ನಿಯಂತ್ರಸರ್ವದೇಶ ಕಾಲವ್ಯಾಪ್ತ ಗೋಪ್ತನೆಂದು 1ಕಾಸು ಕೋಶಗೇಹದೇಹೇಂದ್ರಿಯ ಪ್ರಾಣಸ್ತ್ರೀ ಸುತ ಪ್ರಿಯ ದಾಸಿ ದಾಸರನುಈಶಗರ್ಪಣೆ ಮಾಡಿ ದಾಸದಾಸನಾಗಿಲೇಶವು ತನಗೆನ್ನದೆ ಸರ್ವಾರ್ಪಿಸುವುದು 2ಜನ್ಮ ಜನ್ಮಾಂತರ ಧರ್ಮ ಕರ್ಮಂಗಳುನಿರ್ಮಲ ಜ್ಞಾನ ವೈರಾಗ್ಯ ಭಕ್ತಿಸ್ವರ್ಮಂದಿರ ಭವಯಾತ್ರೆ ಗರ್ಭಯಾತ್ರೆರಮೆಯ ರಮಣಗರ್ಪಣವೆಂಬ ನಿಷ್ಠೆಯ 3ಅಹರ್ನಿಶಿಶ್ವಾಸೋಚ್ಚ್ವಾಸಾವಸ್ಥಾತ್ರಯಬಹು ಜಪತಪ ಅರ್ಚನೆಸಂಭ್ರಮಬಹುಭಿ:ಶ್ರವಣ ಬಹುಧಾಶ್ರವಣ ಮನನಶ್ರೀಹರಿ ಧ್ಯಾನ ಧ್ಯಾಸಾತ್ಮಾಥರ್Àದಿ 4ಅಲಂಬುದ್ಧಿಯನು ಬಿಟ್ಟು ಅಲಸಮತಿಯನು ಸುಟ್ಟುಅಲಸಲಕ್ಷಣ ವಿಸ್ಮøತಿಯನುನೀಗಿಅಲವಬೋಧಾಚಾರ್ಯ ಮತದವರನು ಪೊಂದಿಲಲಿತ ಪ್ರಸನ್ವೆÉಂಕಟ ಚತುರಾತ್ಮಗೆ 5
--------------
ಪ್ರಸನ್ನವೆಂಕಟದಾಸರು
ಆರಿಗಾದರು ಪೂರ್ವಕಲ್ಪನೆ ತಪ್ಪದು ಪಬೇರೆ ಬಯಸಿದರೆ ಬರಲರಿಯದಯ್ಯ ಅರಾಮಚಂದ್ರನ ಸೇವೆ ಮಾಡಿ ಮೆಚ್ಚಿಸಿ ಮಹಾತಾಮಸನ ಗರ್ವವನು ಮುರಿದು ಬಂದರೋಮಕೋಟಿ ಲಿಂಗನೆನಿಸಿದ ಹುನುಮನಿಗೆ ಹೊರಗೆಗ್ರಾಮಗಳ ಕಾಯ್ದುಕೊಂಡಿಹುದೆ ಮನೆಯಾಯ್ತು1ಸುರಪತಿಯ ಗೆದ್ದು ಸುಧೆಯನು ತಂದು ಮಾತೆಯಸೆರೆಯ ಪರಿಹರಿಸಿ ಬಹು ಭಕ್ತನೆನಿಸಿಹರಿಗೆ ವಾಹನನಾಗಿ ಹದಿನಾಲ್ಕು ಲೋಕವನುಚರಿಸಿದ ಗರುಡನಿಗೆ ಮನೆ ಮರದ ಮೇಲಾಯ್ತು2ಪೊಡವಿ ಭಾರವ ಪೊತ್ತು ಮೃಡಗೆ ಭೂಷಣನಾಗಿಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡುಬಿಡದೆ ಶ್ರೀಹರಿಗೆ ಹಾಸಿಗೆಯಾದ ಫಣಿಪತಿಗೆಅಡವಿಯೊಳಗಣ ಹುತ್ತು ಮನೆಯಾಯಿತಯ್ಯ3ಮೂರು ಲೋಕದ ಒಡೆಯ ಮುಕ್ಕಣ್ಣನೆಂಬಾತಸಾರುತಿದೆ ಸಟೆಯಲ್ಲ ವೇದವಾಕ್ಯಪಾರ್ವತೀ ಪತಿಯಾದ ಕೈಲಾಸದೊಡೆಯನಿಗೆಊರ ಹೊರಗಣ ಮಸಣ ಮನೆಯಾಯಿತಯ್ಯ4ಮೀರಲಳವಲ್ಲವೋ ಮುನ್ನ ಮಾಡಿದ್ದುದನುಯಾರು ಪರಿಹರಿಸಿಕೊಂಬವರಿಲ್ಲವೊಮಾರಪಿತ ಕಾಗಿನೆಲೆಯಾದಿಕೇಶವರಾಯಕಾರಣಕೆಕರ್ತನೀ ಕಡೆ ಹಾಯಿಸಯ್ಯ5
--------------
ಕನಕದಾಸ
ಆರಿಗೂ ಕೊಟ್ಟು ನಾನ್ಹುಟ್ಟಿಲ್ಲ ಸ್ವಾಮಿಹಾರೈಸಲೆಂತೀಯ್ವಿ ಭಕ್ತಜನ ಪ್ರೇಮಿ ಪವಸನಕಾಣದೆ ಪೋಗಿ ದೆಸೆ ಬತ್ತಲೆ ಬಂದುಬಸವಳಿದು ಬಾಯಾರಿ ದೆಸೆಗೆಟ್ಟು ಬೇಡುವರಕುಶಲಂಗಳರಿಯದೆ ಹಾಸ್ಯಗೈಯುತ ನಕ್ಕೆವಸನನಾಂ ಬಯಸಲೆಂತೊಸೆದು ನೀಂ ಕೊಡುವಿ1ಧನವಂತನಾಗಿ ನಾ ಧನವಿಲ್ಲದವರಿಗೆಶುನಕನಂದದಿ ಕೂಗುತಣಕವಾಡಿದೆನುಕನಸು ಮನಸಿನಲಿ ವಿನುತಧರ್ಮವನರಿಯೆರಿಣಕಳೆದು ಹರಿಯೆನೆ ನಿನಗೆ ಕರುಣೆಂತು 2ಮೂರುದಿನವಾಯಿತು ಘೋರಬಡುವೆನು ತುಸು ಆಹಾರ ಹಾಣದೆ ಕೃಪೆ ದಾರಿಗೆ ಬರದೆನುತಭೋರಿಟ್ಟು ಕೂಗ್ವುದ ಸಾರಿ ಕೇಳುತ ನಾನುದೂರ್ಹೋದೆ ಎನ್ನ ತಪ್ಪು ಕ್ಷಮಿಸು ಶ್ರೀರಾಮ 3
--------------
ರಾಮದಾಸರು
ಆರು ಒಲಿದರೇನು ನಮಗಿನ್ನಾರು ಮುನಿದರೇನುಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆಪ.ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನುಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನುಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನುಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನುಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನುವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನುಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನುಮಾಣದೆ ಭಜಿಸುವ ಪುರಂದರವಿಠಲನಒಲುಮೆಯುಳ್ಳ ಹರಿದಾಸರಿಗೆ 3
--------------
ಪುರಂದರದಾಸರು
ಆರು ಒಲಿದರೇನು ನಮಗಿನ್ನಾರು ಮುನಿದರೇನುಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆಪ.ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನುಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನುಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನುಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನುಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನುವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನುಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನುಮಾಣದೆಭಜಿಸುವ ಪುರಂದರವಿಠಲನ ಒಲುಮೆಯುಳ್ಳ ಹರಿದಾಸರಿಗೆ3
--------------
ಪುರಂದರದಾಸರು