ಒಟ್ಟು 5116 ಕಡೆಗಳಲ್ಲಿ , 113 ದಾಸರು , 2134 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಭ ಯೋಗಿ ಪುಂಗಗೆ | ಮಂಗಳಂ ಪಾಪೌಘ ಭಂಗಗೆ | ಮಂಗಳಂ ಯಾಳಗಿಯ ದೊರೆ ರಾಮಲಿಂಗನಿಗೆ ಪ ಮೋದದಲಿ ದತ್ತಾವಧೂತನು ಪೇಳಿದನು ಶ್ರೀಕಪಿಲ ಮುನಿವರ |ಗಾಧಿಯಂ ಮಣಿಚೂಲ ಶೈಲದ ಗುಹದಿ ತಪಮಾಡಿ ||ಮೇದಿನಿಯ ಜನರಿಂಗೆ ಸಹಜದಿ ವೇದ ವೇದಾರ್ಥವನು ಬೋಧಿಸಿ |ಭೇದ ಬುದ್ಧಿಯ ಬಿಡಿಸಿ ಕೃಪೆಯನು ಮಾಡಿ ಪೊರೆ ಎಂದು 1 ಕಪಿಲಮುನಿ ಲಿಂಗಾಂಬಿಕೆಗೆ ತಾ ಸ್ವಪ್ನದಲಿ ಪೇಳಿದನು ನಿಶ್ಚಯ |ಅಪರಿಮಿತ ವರ ಕೊಡುವ ಬೆಟ್ಟದ ರಾಮಲಿಂಗೇಶ ||ತಪವು ಮಾಡಲು ಕೊಡುವ ನೀ ತಪವು ಮಾಡೆಂದು ಪೇಳಿದ |ಗುಪಿತ ಮೂಲವ ತೋರಿ ಬೋಧಿಸಿ ಸುಖವ ಪಡೆ ಎಂದ 2 ಮೊದಲು ಲಿಂಗಾಂಬಿಕೆಯು ಮನದಲಿ ನೆನೆದು ಬೆಟ್ಟದ ರಾಮಲಿಂಗನ | ಪದುಳದಿಂ ಸೇವಾ ಪ್ರದಕ್ಷಿಣೆ ಭಕ್ತಿಭಾವದಲಿ |ಮುದದಿ ಪ್ರಾರ್ಥಿಸೆಗೈದು ಎನ್ನಗೆ ಸುತನ ಕೊಡಬೇಕೆಂದು ಪ್ರಾರ್ಥಿಸೆ | ಸದಮಲಾತ್ಮರಾಮಲಿಂಗನು ಜನಿಸುತಿಹನೆಂದ 3 ಸತಿ ಲಿಂಗಾಂಬೆ ಗರ್ಭದೊಳುಪಾವನಾತ್ಮಕ ಜನಿಸಿ ಬೆಳೆದುದ್ದಾಮ ಆನಂದಾಭ್ಧಿಯೊಳು ಸ- |ದ್ಭಾವದಿಂ ಮಣಿಚೂಲ ಶೈಲದಿ ತಪವನೆಸಗಿದಗೆ 4 ಕೆಲವು ದಿನ ಮಣಿಚೂಲ ಶೈಲದ ಗುಹೆಯೊಳಗೆ ತಪಗೈಯುತಿರೆ ಶ್ರೀಮಲಹರಿಯು ಪ್ರತ್ಯಕ್ಷರೂಪದಿ ಮಂತ್ರ ಬೋಧಿಸಿದ ||ಚೆಲುವ ರಾಮಪ್ಪಯ್ಯ ಮನದಲಿ ಹರುಷವಂ ಕೈಕೊಂಡು ಸಿದ್ಧಿಯಫಲವ ಪಡೆದನು ಮಂತ್ರ ಮಹಯೋಗಾದಿ ಸಿದ್ಧಿಗಳ 5 ಗೌತಮಾನ್ವಯದಲ್ಲಿ ಜನಿಸಿ ಸುಕೀರ್ತಿ-ಪಡೆದಪ್ಪಯ್ಯ ಗುರುವರ |ಮಾತು ಮಾತಿಗೆ ರಾಮಲಿಂಗನ ನೆನೆ ನೆನೆದು ಮನದಿ ||ಸಾತಿಶಯ ಮಣಿಚೂಲ ಶೈಲವ ಸೇರಿ ಕಂಡಿಹ ರಾಮಲಿಂಗನ |ಮಾತು ತಿಳುಹಿಸಿ ಗ್ರಹಕೆ ಕರಕೊಂಡು ಬಂದಿಹಗೆ 6 ಪರಮ ತಾರಕ ಮಂತ್ರ ಕರ್ಣದೊಳೊರೆದ ಗುರು ಅಪ್ಪಯ್ಯ ಮೂರ್ತಿಯ | ಚರಣವನು ಧ್ಯಾನಿಸುತೆ ಮಹಾ ವಾಕ್ಯಾರ್ಥ ಶೋಧಿಸಿದ | ಪರಿಪರಿಯ ವೇದಾರ್ಥವನು ಬಹು ಹರುಷದಿಂ ಶಿಷ್ಯರಿಗೆ ಬೋಧಿಸಿ | ನಿರುತ ಬ್ರಹ್ಮಾಕಾರ ವೃತ್ತಿಯೊಳಿರುವ ಶರಣಂಗೆ 7 ಪಂಚಲಿಂಗವು ಪಂಚ ತೀರ್ಥಗಳುಳ್ಳ ಯಾಳಗಿ ಕ್ಷೇತ್ರದಲಿ ಪ್ರ- |ಪಂಚವನು ಪರಮಾರ್ಥ ಬುದ್ಧಿಯಲಿಂದ ನೆರೆಗೈದು ||ವಂಚನಿಲ್ಲದ ರಾಮಲಿಂಗ ವಿರಂಚಿ ಭಾವದೊಳಿರ್ದು ಜನರಿಗೆಹಂಚಿಕೆಯ ಪೇಳಿದನು ಇಲ್ಲಿಗೆ ಗಂಗೆ ಬರುತಿಹಳು 8 ಇಂದು ವೇದ ರಸೈಕ ಶಕದ ವಿಕಾರಿವತ್ಸರ ದಕ್ಷಿಣಾಯನ |ಛಂದದಾಶ್ವೀನ ಶುದ್ದ ಸಪ್ತಮಿ ಸೌಮ್ಯ ವಾಸರದಿ ||ಸುಂದರದ ಜ್ಯೇಷ್ಠರ್ಕ ವೃಶ್ಚಿಕ ರಾಶಿ ಶುಭದಿನ ತೃತಿಯ ಪ್ರಹರದಿಹೊಂದಿದನು ಸುಸಮಾಧಿ ಸುಖವನು ರಾಮಗುರುವರನು 9 ಸುರರು ಅಂಬರಕೇರಿ ಪುಷ್ಪದ ಮಳೆಯ ಸುರಿದರು ಹರುಷದಿಂದಲಿಪರಮ ವಿಸ್ಮಯವಾಗೆ ಸುರದುಂದುಭಿಯ ಧ್ವನಿಕೇಳಿ || ಹರುಷ ದಿಂದಲಿ ಶಿರವ ನಲಿಯುತ ದೇವ ಗಣಿಕೆಯರು ನೃತ್ಯ ಮಾಡುತ ತರ ತರದಿ ಜಯ ಘೋಷ ಮಾಡುತ ಜನ ಸಹಿತವಾಗಿ 10|| ಜಯ ಜಯತು ಜಯ ನಿರ್ವಿಕಾರಗೆ ಜಯ ಜಯತು ಜಯ ನಿರ್ವಿಶೇಷಗೆ | ಜಯ ಜಯತು ನಿಃಸೀಮ ಪರಮಾನಂದ ರೂಪನಿಗೆ || ಜಯ ಜಯತು ಭಕ್ತಾಭಿಮಾನಿಗೆ ಜಯ ಜಯತು ಮಹ ಸಿದ್ಧ ವರದಗೆ | ಜಯ ಜಯತು ಸಿಂಧಾಪುರದ ಸಖರಾಮ ಗುರುವರಗೆ 11
--------------
ಗುರುರಾಮಲಿಂಗ
ಶುಭ ವೀರಾಂಜನೇಯಾಯ ಜಯ ಮಂಗಳಂ ಪ ಮಣಿ ಪುಂಜ ರಂಜಿತಾಯ ಶುಭಾಂಗಯ ಮಂಜುಳಾಯ 1 ಲಕ್ಷ್ಮಣ ಪ್ರಾಣ ಸಂರಕ್ಷಣಾಯ ಪಕ್ಷೀಂದ್ರ ಗಂಧವಹ ಗತಿ ಲಕ್ಷಿತಾಯ 2 ಪಂಚಾನನಾದಿ ಮುಖ ಪಂಚಕಾಯ ಪಂಚತಾಪ ಹರಾಯ ಪÀಂಚಾಕ್ಷರಾಯ 3 ಕಂದರ್ಪ ನವವರವ್ಯಾಕರಣ ನವಪಂಡಿತಾಯ ನವಪಂಚಕೋಟಿ ಯೂಧಪ ಸೇವಿತಾಯ 4 ಮಹಾಕಾಂಡ ಬೃಂದಾರಕಾಯ ಗಂಧರ್ವವೇದೇಷು ಘನ ಪಂಡಿತಾಯ 5 ಸರ್ವಮಂತ್ರಾವಳೀ ಸನ್ನುತಾಯ ಸರ್ವಭೀತಿ ಹರಾಯ ಸರ್ವಾತ್ಮಕಾಯ 6 ಶತಕೋಟಿ ಭಯವರ್ಜಿತಾಯ ಬೇಟೆರಾಯಾಖ್ಯ ದೀಕ್ಷಿತ ರಕ್ಷರಾಯ 7 ಪರಯಂತ್ರ ವಿದ್ವಂಸಕಾಯ 8
--------------
ಬೇಟೆರಾಯ ದೀಕ್ಷಿತರು
ಶುಭ ಶುಭ ನಿಧಿಗೆ ಪ ಮಂಗಳಾ ಗುರುವಾದಿರಾಜರಿಗೆ ಜಯಮಂಗಳಾ ಭಾವಿ ಮುಖ್ಯಪ್ರಾಣರಾಜನೀಗೆಅ.ಪ. ಮಾಯಾವಾದಿಗಳಾ ಗೆದ್ದ ಸ್ವಾದಿಪುರವಾಸಿಯಾದ ವಾದಿರಾಜಾ ಮಧ್ವಮುನಿಗೆ ಜಯಮಂಗಳಾ 1 ಭೂತರಾಜಾರಿಂದ ಸೇವ್ಯಾಭೂತ ಪತಿಗೊಲಿದ ಗುರು ಲಾತವ್ಯ ರಾಜರಿಗೆ ಜಯಮಂಗಳಾ 2 ಧವಳಗಂಗಾವಾಸಿಯಾದ ಹಯಗ್ರೀವ ತ್ರಿವಿಕ್ರಮಾ ವೇದವ್ಯಾಸರ ಪೂಜಿಪಗೆ ಜಯಮಂಗಳಾ 3 ಪತಿ ರಮಣ ಹರಿಯಾ ಪ್ರಥಮಾಂಗ ಮುಖ್ಯಪ್ರತಿಬಿಂಬಾಣೆಗುರುತಂದೆವರದಗೋಪಾಲವಿಠ್ಠಲನಾ ವೀಹಾರಕ್ಕಾ-ವಾಸನಾದ ಸುವ್ರೇತಾ ಘನದೂತಾ ಗುರುವಾದಿರಾಜಗೆ 4
--------------
ಗುರುತಂದೆವರದಗೋಪಾಲವಿಠಲರು
ಶುಭವೀವ ನಿರುತದಲಿ ಮಂದಹಾಸಾ ಪ ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಅ.ಪ. ಧೇನಿಪರ ಮನ ಚಿಂತಾಮಣಿಯೋ | ದೇವ | ನೀನೆ ಗತಿಯೆಂಬುವರ ಧಣಿಯೋ || ಜ್ಞಾನಮಯ ಸುಖದ ಸಂದಣಿಯೋ | ಪುಣ್ಯ | ಕಾನÀನವಾಸ ಸುರರ ಖಣಿಯೋ 1 ವಜ್ರ ಪಂಜರನೋ | ದೇವ | ದುರುಳರಿಗೆ ವೀರ ಜರ್ಝರನೋ || ದುರಿತಕದಳಿಗೆ ಕುಂಜರನೋ | ವರಕಲ್ಪ ಕಲ್ಪ ವಿಚಲನೋ 2 ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ | ಮರುತನ್ನ ಹೆಗಲೇರಿ ಬಪ್ಪಾ || ಶರಣರಿಗೆ ವರವೀಯುತಿಪ್ಪಾ | ಸಿರಿ ವಿಜಯವಿಠ್ಠಲ ತಿಮ್ಮಪ್ಪಾ 3
--------------
ವಿಜಯದಾಸ
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ಪ ಕರವ ಜೋಡಿಸಿ ಬಿನ್ನೈಪಾ || ದುರಿತ ರಾಶಿ | ಪರಿಹಾರ ಮಾಡಿಸಯ್ಯಾ 1 ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರಿಗಳಿಗೆ ನಿರುತ ಮಾರಕ ನೀನಹುದೋ2 ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ ಯುಗದೊಳು ಬಲವಾಗೋ 3 ಕಾಯ ನಿನ್ನದು ಗುಣನಿ | ಕಾಯ ನಿರ್ದೋಷ ಕಾಯಾ || ಕಾಯಾ ಐದಳಮಾನ | ಕಾಯ್ದ ಕಲಿವೈರಿ | ಕಾಯಜಪಿತನ ದೂತಾ 4 ಪಂಕಜನಾಭನ ಅಂಕದಲ್ಲಿಪ್ಪ ಬಿಂಕವ ತಾಳದಿರೊ | ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ ತ್ಪಂಕದೊಳು ತೋರಿಸೊ 5
--------------
ವಿಜಯದಾಸ
ಶೂರ್ಪಾಲಯ ಕ್ಷೇತ್ರದ ನರಹರಿ ಸ್ತೋತ್ರ (ಕೃಷ್ಣಾತೀರ) ನರಹರೀ ಪಾಹಿ | ಮರನೂರ ನರಹರೀ ಪ ಪರಿ ಭವಣೆಯ | ಪರಿಹರಿಸುತ ಮುನ್ನವರ ವೈರಾಗ್ಯವನಿತ್ತು | ಕರುಣೀಸೊ ಸಂಪನ್ನ ಅ.ಪ. ಸತಿ | ಕೃಷ್ಣೆಗಕ್ಷಯ ವಸನಸೃಷ್ಟಿಗಿತ್ತವ ಹರಿ | ಕೃಷ್ಣನೆ ಸಲಹೆನ್ನ 1 ಬುದ್ಧ | ಆಘಹರ ಕಲ್ಕಿಯೆ 2 ಜನಿತ ಸುಖ ಜಲ ಕಣ್ಣ | ಬಿಂದುಯುಗಳವು ಬೀಳೆ ಪಾವನ್ನ | ವೃಕ್ಷಯುಗಳೋದಯವಾಯ್ತು ಮುನ್ನ | ಆಹಅಗಣಿತ ಮಹಿಮ | ಅಶ್ವತ್ಥ ಸನ್ನಿಹಿತನೆನಿಗಮ ವೇದ್ಯನೆ ಸರ್ವ | ಜಗದೀಶ ಸಲಹೆನ್ನ 3 ಶೂಲಿಯಿಂದೊಡಗೂಡಿ ರಾಮ | ಚಂದ್ರಪಾಲಿಸುತಿಹ ಸಾರ್ವಭೌಮ | ಸುಜನಾಳಿ ಪಾಪಾರಣ್ಯ ಧೂಮ | ಕೇತುಓಲೈಪ ಜನರಘ ಭಸ್ಮ | ಆಹಲೀಲೆಯಿಂದಲಿ ಗೈವ | ಆಲಯವಿದು ಶೂರಪಾಲೀಯ ಕ್ಷೇತ್ರದಿ | ಶ್ರೀಲೋಲ ನರಹರಿ 4 ನಡು ನದಿಯೋಳು ಕೋಟೇಶ | ಮತ್ತೆಪಡುವಲಯದೋಳು ಕಂಕೇಶ | ಇನ್ನುಬಡಗ ನರಹರಿ ಬಳಿ ಬೈಲೇಶ | ಆಹರೊಡಗೂಡಿ ನೆಲಸೀಹ | ಕಡು ಮುದ್ದು ರೂಪದಿದೃಢ ಭಕ್ತನೆನಿಸೀಹ | ಮೃಡನಿಂದ ಪೂಜಿತ 5 ಅಜಪಿತ ಪದಜಳು ಎನಿಪ | ಮತ್ತೆಅಜಾಂಡ ಕಟಹದಿಂ ಬರ್ಪ | ಇನ್ನುಅಜಸುತ ಶಿರದಲಿ ಧರಿಪ | ಸಗರಜರ ಪಾಪವನ್ನು ಹರಿಪ | ಆಹಮಝಬಾಪು ಗಂಗೆಯ | ನಿಜ ಪಾಪ ಕಳೆಯಲುಅಜಸುತ ನಾಜ್ಞೆಯಿಂ | ಬಿಜಯಿಸಿದಳು ಇಲ್ಲಿ 6 ಪರರಘಗಳ ಹೊತ್ತು ಗಂಗೆ | ಬಂದುಹರ ಪೇಳಿದಂಥ ದ್ವಿಜಂಗೆ | ಶೂರ್ಪವರ ವಾಯು ನ್ವಿತ್ತಳವಂಗೆ | ಪಾಪಹೊರದೂಡಿದಳು ಮಂಗಳಾಂಗೆ | ಆಹಗುರುಕನ್ಯಾಗತನಾಗೆ | ಸರಿದ್ವರ ಕೃಷ್ಣೇಲಿಬೆರೆಯುತ ಸುರ ನದಿ | ಹರಿಪಳು ಜನರಘ 7 ಮಧ್ವಾರ್ಯ ಸಂತತಿ ಜಾತ | ಗುರುವಿದ್ಯಾಧೀಶರು ಇಲ್ಲಿ ಖ್ಯಾತ | ದ್ವಾದಶಬ್ದ ಪರಿಯಂತನುಷ್ಠಾತ | ಪ್ರಾಣಮುದ್ದು ಪ್ರತಿಮೆ ಪ್ರತಿಷ್ಠೀತ | ಆಹಶುದ್ಧ ದ್ವಾದಶಿ ದಿನ | ಸದ್ವೈಷ್ಣ್ವ ಲಕ್ಷರ್ಗೆವಿಧ್ಯುಕ್ತ ಭೋಜನ | ಶ್ರದ್ಧೆಯಿಂದಲಿ ಗೈದರ್ 8 ಪರ ತತ್ವವೆನಿಸಿ | ಸ್ತುತಿಸ್ಕಂದೋಕ್ತ ಮಹಿಮೆಯ ಸ್ಮರಿಸಿ | ಆಹಇಂದುಪ ಗುರು ಗೋ | ವಿಂದ ವಿಠಲನಹೊಂದಿ ಭಜಿಪರ್ಗ | ಬಂಧನವೆಲ್ಲಿಹದೋ 9
--------------
ಗುರುಗೋವಿಂದವಿಠಲರು
ಶೋಕವಾಗುವುದು ಯಾತಕೆ ಎಲಾ | ಕಾಕುಲಾತೀ ಸಲ್ಲ ಕರಣಶುದ್ಧನಾಗು ಪ ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ ಜೀವನಿತ್ಯ ಸುಖೀ ಎಲ್ಲಿದ್ದರೂ ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು ಕ್ಲೇಶ 1 ಶರೀರಕೆಂಬೆನೆ ಚೇತನ ತಪ್ಪಿದರೆ ಇರುವುದು ಜಡವಾಗಿ ಬಿದ್ದುಕೊಂಡು ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ 2 ಪರಿ ಜ್ಞಾನದಲಿದು ಸಾರ ಕಾಣಿಸದು ಸಂಸಾರದೊಳಗೆ ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು 3
--------------
ವಿಜಯದಾಸ
ಶೋಕವ್ಯಾತಕೆ ಮನವೆ ನಿನಗೆ ಇನ್ನು ಪ. ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಅ.ಪ ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠ ಪಿತೃ ಪಾರ್ಥಾದಿ ಮಹಧೀರರು ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ 1 ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು ಅಸಮ ಸಾಸಿಗರು ಮಹ ಶೀಲಜ್ಞರು ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ ವಶರಾಗಿ ಪೋದರು ನೋಡಿ ಅಚ್ಚರಿಯ2 ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ ಸಂತೋಷವನು ತೊಡೋ ಮನಸಿನಲ್ಲಿ ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ3
--------------
ವಿಜಯದಾಸ
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ಶೋಭಾನವೆನ್ನಿರೆ ಶುಭಕರ ಸಾವಿತ್ರೇರು | ಪ್ರಭುಗುರು ಆತ್ಮಾ ಶ್ರೀರಾಮಗ ಪ ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ | ತಾಮಸದವರಾ ಮದಮುರಿದು | ತಾಮಸದವರ ಮದಮುರಿದು ಹೃದಯಕ | ಪ್ರೇಮ ಜಯೋತ್ಸವದಿಂದೈ ತಂದಾ 1 ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ | ದೃಢವಿಭೀಷಣನ ಸ್ಥಾಪಿಸಿದನಾ | ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ | ಕಡಲ ಮಧ್ಯ ಪೂರದೊಳು ಈಗ 2 ವಿವೇಕ ಹರಿವಾನದಿ ಭಾವದಾರತಿಯೋಳು | ತೀವಿದ ಸಮ್ಯಜ್ಞಾನ ಜ್ಯೋತಿ | ತೀವಿದ ಸಮ್ಯಜ್ಞಾನಜ್ಯೋತಿಯಿಂದ | ದೇವದೇವೇಶಗ ತಿಂದೀಗ 3 ಅರಿಗಳ ಶಿಕ್ಷಿಸು ಶರಣರ ರಕ್ಷಿಸು | ಧರೆಯೊಳುಯೆಂದು ಹರಸುತ | ಧರೆಯೊಳು ಎಂದು ಹರಸುತ ಮುತ್ತಿನ | ಪರಮಶಾಶಯ ನೊಸಲೊಳಿಟ್ಟು 4 ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ ಮಹಿಪತಿಸುತ ಪ್ರಭು ರಘುನಾಥ | ಮಹಿಪತಿಸುತ ಪ್ರಭು ರಘುನಾಥ ನೆನೆವರ ಸಹಕಾರಿ ನಮ್ಮ ಸದೋದಿತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ | ಶೋಭಾನವೆನ್ನಿ ಶುಭವೆನ್ನಿ ಪ ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು | ಭರದಿಂದ ಇಳಿದು ಸತ್ಯಲೋಕ || ಭರದಿಂದ ಇಳಿದು ಸತ್ಯಲೋಕಕೆ ಬಂದ | ವಿರಜೆಗಾರುತಿಯ ಬೆಳಗಿರೇ 1 ಸರಸಿಜಾಸನ ನಮ್ಮ ಹರಿಪಾದ ತೊಳಿಯಲು | ಸರಸ ಸದ್ಗುಣ ಸುರಲೋಕ | ಸರಸ ಸದ್ಗುಣದಿ ಸುರಲೋಕಕೈದಿದಾ | ಸ್ವರ್ಣೆಗಾರುತಿಯ ಬೆಳಗಿರೇ 2 ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು | ಚಂದದಿಂದಲಿ ಮೇರುಗಿರಿಗೆ | ಚಂದದಿಂದಲಿ ಮೇರುಗಿರಿಗೆ ಬಂದಾ | ಸಿಂಧುವಿಗಾರುತಿಯ ಬೆಳಗಿರೇ 3 ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು | ಚತುರ್ಭಾಗವಾಗಿ ಕರೆಸಿದ | ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ | ವತಿಗಾರುತಿಯ ಬೆಳಗಿರೇ4 ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು | ಚಂದ್ರ ಯಮ ದಿಕ್ಕಿಗೆ ಭದ್ರದೇವಿ | ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ | ನಂದಿನಿಗಾರುತಿಯ ಬೆಳಗಿರೇ 5 ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ | ಹಿಂಗದೆ ಪುಟಿದು ವಾರಿನಿಧಿಯ | ಹಿಂಗದೆ ಪುಟಿದು ವಾರಿನಿಧಿಯ ನೆರದ | ಗಂಗೆಗಾರುತಿಯ ಬೆಳಗಿರೇ 6 ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು | ಪರಿದಂಬುಧಿಯ ಕೂಡಿ ಮೆರದು | ಪರಿದಂಬುಧಿಯ ಕೂಡಿ ಮೆರದಾ | ತ್ರಿದಶೇಶ್ವರಿಗಾರುತಿ ಬೆಳಗಿರೇ7 ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ | ವನಧಿ | ವನಧಿ ಕೂಡಿದಾ | ಸುಮತಿಗಾರುತಿಯ ಬೆಳಗಿರೇ 8 ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ | ಮೀರಿ ಹಿಮಗಿರಿಗೆ ಹಾರಿ ಬದರಿಗೆ | ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ | ನಾರಿಗಾರುತಿಯ ಬೆಳಗಿರೇ 9 ಕ್ಷಿತಿಪ ಭಗೀರಥನಂದು ತಪವ ಒಲಿದು| ಅತಿಶಯವಾಗಿ ಧರೆಗಿಳಿದು | ಅತಿಶಯವಾಗಿ ಧರೆಗಳಿದು ಬಂದಾ | ಭಾಗೀರಥಿಗಾರುತಿಯ ಬೆಳಗಿರೇ10 ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ | ಜನನಿ ಜಾನ್ಹವಿ ಎನಿಸಿದಾ| ಜನನಿ ಜಾನ್ಹವಿ ಎನಿಸಿದಾ ಮೂಜಗದ | ಜನನಿಗಾರುತಿಯ ಬೆಳಗಿರೇ 11 ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು | ಇಷ್ಟಾರ್ಥ ನಮಗೆ ಕೊಡುವಳು ಸತತ | ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ | ತುಷ್ಟಿಗಾರುತಿಯ ಬೆಳಗಿರೇ 12 ಕ್ರಮದಿಂದ ಬಂದು ನಲಿವುತ ಸರಸ್ವತಿ | ಯಮುನೇರ ನೆರೆದು ತ್ರಿವೇಣಿ | ಯಮುನೇರ ನೆರೆದು ತ್ರಿವೇಣಿ ಎನಿಸಿದಾ | ವಿಮಲೆಗಾರುತಿ ಬೆಳಗಿರೇ13 ತ್ರಿವಿಧ ಜೀವರು ಬರಲು | ಅತ್ಯಂತವಾಗಿ ಅವರವರ | ಅತ್ಯಂತವಾಗಿ ಅವರವರ ಗತಿ ಕೊಡುವ | ಮಿತ್ರೆಗಾರುತಿ ಬೆಳಗಿರೇ 14 ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ | ಸತಿಯಲ್ಲಿ ವೇಣಿಕೊಡಲಾಗಿ | ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ | ಪ್ರತಿಗಾರುತಿ ಬೆಳಗಿರೇ 15 ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು | ಪಡಿಗಾಣೆ | ಪಡಿಗಾಣೆ ಸುಖವೀವ | ಕಲ್ಯಾಣಿಗಾರುತಿಯ ಬೆಳಗಿರೇ 16 ಒಂದು ಜನ್ಮದಲಿ ವೇಣಿಯಿತ್ತವಳಿಗೆ | ಎಂದೆಂದು ಬಿಡದೆ ಐದೆತನವ | ಎಂದೆಂದು ಬಿಡದೆ ಐದೆತನವೀವ ಸುಖ | ಸಾಂದ್ರೆಗಾರುತಿಯ ಬೆಳಗಿರೇ 17 ವಾಚಾಮಗೋಚರೆ ವರುಣನರ್ಧಾಂಗಿನಿ | ಪ್ರಾಚೀನ ಕರ್ಮಾವಳಿ ಹಾರಿ | ಮಕರ | ವಾಚಳಿಗಾರುತಿಯ ಬೆಳಗಿರೇ 18 ಅಂತರ ಬಾಹಿರ ಪಾಪ ಅನೇಕವಾಗಿರೆ | ಸಂತೋಷದಿಂದಲಿ ಭಜಿಸಲು | ಸಂತೋಷದಿಂದಲಿ ಭಜಿಸಲು ಪೊರೆವ ಮಹಾ | ಕಾಂತೆಗಾರುತಿಯ ಬೆಳಗಿರೇ 19 ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು | ಹರಿ ಪರನೆಂದು ಪೊಗಳುವರ | ಹರಿ ಪರನೆಂದು ಪೊಗಳುವರ ಪೊರೆವ | ಕರುಣಿಗಾರುತಿಯ ಬೆಳಗಿರೇ20 ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು | ಬಗೆ ಬಗೆ ಶುಭವ ಕೊಡುವಳು | ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ | ಮಗಳಿಗಾರುತಿಯ ಬೆಳಗಿರೇ ಶೋಭಾನೆ 21
--------------
ವಿಜಯದಾಸ
ಶೌರಿ ನೀನು ಪಾದ್ಯ ಶುಕ ಬಿಂಬ ಪ ನಿತ್ಯ ವಸ್ತುವು ನೀನು ನಿತ್ಯರಲಿ ನೀ ನಿತ್ಯ ನಿತ್ಯಸುಖ ಪರಿಪೂರ್ಣ ಸತ್ಯ ಕೃತ್ಯ ಭೃತ್ಯಪಾಲಕರಲ್ಲಿ ಸಮರಿಲ್ಲ ನಿನಗಿನ್ನು ಭಕ್ತವತ್ಸಲ ಎನ್ನ ಯುಕ್ತಿಯಲಿ ಕೈಪಿಡಿಯೊ 1 ಕರ ಪೊಂದಿ ದುಮ್ಮನವ ಬೆಳೆಸಿದೆನೊ ಅವಶನಾಗಿ ನಿರ್ಮಮರದೇವ | ತ್ವದಾಸ್ಯ ಪಾಲಿಸು ಎನಗೆ ಕರ್ಮನಾಮಕ ನೀನೆ ಸದ್ಧರ್ಮಕಾರಕನೆ 2 ಎನ್ನಲ್ಲಿ ನಿನ್ನ ಕ್ರಿಯ ಅನುಭವದಿ ತಿಳಿಸೆನಗೆ ಅನ್ಯುಪಾಯವು ಇಲ್ಲ ಅಭಯಪದಕೆ ಪೂರ್ಣಪ್ರಜ್ಞರ ಗುರುವೆ ಜಯೇಶವಿಠಲ ಎನ್ನ ಮನ ಒಡಲಲ್ಲಿ ನಿನ್ನ ಮೂರ್ತಿಯ ತೋರೊ 3
--------------
ಜಯೇಶವಿಠಲ
ಶೌರಿ ಪ ಕಾಣಿಸದೆ ಖತಿಗೊಳಿಸುವುದುಚಿತಲ್ಲ ಮೊರೆ ಕೇಳು ಅ.ಪ ಕಾಣುವುದು ಕೇಳುವುದು ಗಂಧ ರಸ ಸ್ಪರ್ಶಗಳು ನಾನಾ ಬಗೆ ವಿಷಯಗಳು ನೀನೆ ರಂಗ ಭಾನು ಕೋಟಿ ತೇಜ ಭಾವ ಭಕ್ತಿ ಸುಪ್ರೀಯ ನಾ ನಿನ್ನವರ ಪಾದರಜ ರಕ್ಷಿತನೊ ಸ್ವಾಮಿ 1 ಶ್ರೀ ರಮಣಿ ಆನಂದ ಅಂಬುಧಿಯೆ ಅಬುಜಭವ ಮೃಡ ಪಾದ ವನಜ ಆರು ನಾಲ್ಕು ತತ್ವ ಆದರ್ಶ ಪ್ರತಿಫಲಿತ ಆನಂದ ಚಿತ್ಪ್ರಚುರ ಅನುರೂಪನೆ ಪಾಹೀ 2 ಕಲ್ಯಾಣ ಗುಣವನಧಿ ಜಯೇಶವಿಠಲ ಕಲ್ಯಾಣ ಮಾಡೆನಗೆ ಕಾರುಣ್ಯಸಿಂಧು ಎಲ್ಲ ಗುಣತ್ರಯ ರೂಪ ನಿನ್ನದೆಂಬೊ ಜ್ಞಾನ ಎಲ್ಲ ಕಾಲದಿ ಕೊಟ್ಟು ಶಿಷ್ಟರಲಿ ಇಡು ಎನ್ನ 3
--------------
ಜಯೇಶವಿಠಲ
ಶೌರಿ ಪ ಪ್ರಾಣಪಂಚಶರೀರ ಜೀವ ಜಡ ನಿನ್ನೊಶವೊ ಅ.ಪ ನೀನೆಂತು ನಮ್ಮಲ್ಲಿ ನಿಂತು ಕುಣಿಸಿದರಂತು ಜ್ಞಾನೇಚ್ಛೆ ಯತ್ನಮನ ಕರಣದೇಹಾ ನಾನಾಪರಿ ಅಂತೆಂತು ಕುಣಿ ಕುಣಿದÀು ಕುಣಿಬೇಕು ಆನೊಲ್ಲೆನೆಂಬ ಶಕ್ತನ್ನ ನಾ ಕಾಣೆ 1 ತನುಛಾಯದಂದಲಿ ನಮ್ಮಿರವು ನೀ ಬಲ್ಲಿ ತನುಮನದ ಯತ್ನಗಳು ನಡಿವುದೇನೊ ಅನಿಮಿತ್ತ ಸಖ ನೀನು ಅನುಗಾಲ ನಮಗೆಂದು ಅನವರತ ಶ್ರುತಿರಾಸಿ ಘೋಷಿಪದು ನಂಬಿಹೆನು 2 ಕಾಲಕರ್ಮಾಲಯನೆ ಮೂಲ ನೀ ಸರ್ವಕ್ಕೆ ಫಲಾಕ್ಷಸಖ ನೀನು ವಿಮುಖನಾಗೆ ಕೀಳು ಚೇತನ ಜಾಲ ಅಚೇತನ ಸಮರಹುದೊ ಲೋಲ ಜಯೇಶವಿಠಲ ಸುಮ್ಮನೆ ಕೃಪೆಮಾಡೊ 3
--------------
ಜಯೇಶವಿಠಲ
ಶೌರಿ ಪ ಸರ್ವಮಂಗಳಮಯನೆ ವಿಧಿತಾತ ಮುದವೀತೊ ಅ.ಪ. ಉದ್ಧವನ ಗುರುವರ್ಯ ನಿರ್ದೋಷ ಗುಣವನಧಿ ನಿದ್ದೆ ಮಾಡುವಗೊಲಿದು ಮುಕ್ತಿ ಇತ್ತೆ ಹದ್ದುಮೀರಿ ಭವದಿ ಬಿದ್ದು ಮೊರೆ ಇಡುತಿಹೆನೊ ಹೃದ್ಧಾಮದಲಿ ನಿನ್ನ ದರುಶನವ ನೀಡೆಯ್ಯ 1 ಮನದಲ್ಲಿ ಮಹಪೂಜೆಕೊಳ್ಳಯ್ಯ ಎನ್ನಿಂದ ಪ್ರಣೀತಪಾಲಕ ಕೃಷ್ಣಪೂರ್ಣ ಪುರುಷ ತೃಣಮೊದಲು ಬ್ರಹ್ಮಾಂಡ ಸರ್ವರಲಿ ಸ್ವಾತಂತ್ರ್ಯ ಅನಿಲಾತ್ಮ ಆನಂದ ಖಣಿ ಕರುಣ ಮಾಡಯ್ಯ 2 ಕೆಸರು ಕಲ್ಕಿದಜ್ಞಾನಕಳವಡುವುದೇ ನಿನ್ನ ಅಸಮ ಮಂಗಳ ಸುಗುಣ ಶ್ರುತಿ ವಿನುತನೆ ದಶಮತಿಯ ಮನದೈವ ನೀ ಕೂತು ಮನದಲ್ಲಿ ವಿಶದ ತಿಳಿಮತಿಯಿತ್ತು ವೈಭವವ ತೋರೆನಗೆ 3 ಜೀವಜಡರಲಿ ಪೊಕ್ಕಾಡುವೆ ಬಹುಲೀಲೆ ಭಾವಸೂತ್ರದಿ ನಮ್ಮ ಕಟ್ಟಿ ಕುಣಿಸಿ ಈ ವಿಧವ ಬಲ್ಲವರ ಮೇಲಾಗಿ ಪಾಲಿಸುವಿ ತಾವೀಶರೆಂಬುವರು ಮುಳುಗುವರು ದುಃಖದಲಿ 4 ದುಷ್ಟಜನ ಸಹವಾಸ ಅಷ್ಟತತ್ವಗಳಲ್ಲಿ ವೃಷ್ಣೀಶ ಬಿಡಿಸಯ್ಯ ಬಂಧ ಕಡಿದು ಇಷ್ಟಾನಿಷ್ಟ ಜೀವರಲಿ ನಿಂತು ನಟಿಸುವ ಗುಟ್ಟುತೋರಿ ಜಯೇಶವಿಠಲನೆ ಕೃಪೆಮಾಡು 5
--------------
ಜಯೇಶವಿಠಲ