ಒಟ್ಟು 3226 ಕಡೆಗಳಲ್ಲಿ , 122 ದಾಸರು , 2221 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ ಸಾಸಿರನಾಮದೊಡೆಯ ಸಕಲಲೋಕಕರ್ತನಾದ ಸುಜನ ಪೋಷಕ ಭಕ್ತವಿಲಾಸ ಅ.ಪ ಪಂಕಜೋದರ ಪರಮ ಪಾವನ ಸರ್ವಜಗವ ಬಿಂಕದಿಂದ ಪೊರೆವ ದೇವನಾ ಶಂಕೆಯಿಲ್ಲದ ದನುಜ ಮರ್ದನನಾದ ತನ್ನ ಕಿಂಕರರÀನು ಬಿಡದೆ ಕಾಯುವಾ ವೆಂಕಟಾದ್ರಿ----ದ ವೇಣುನಾದದಲಿ ಬುಧವಂದ್ಯ ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ 1 -----ಶ್ವ ರೂಪನಾ ಎಂದು ಎಂದಾನಂದ ದಿಂದ ಅನುದಿನ ಚಂದದಿಂದ ---ಸನಾ |----ಭವ ಬಂಧಕವನೆ ಪರಿಹರಿಸುವನಾ ಕಂದ ಕೂಗಲು ಕಂಭದಿಂದಾ ಬಂದ ನಾರಸಿಂಹನ ಮೂರ್ತಿ 2 ----------ಮಹಾನುಭಾವ ಕಂಡ ಮುನಿಗಳಂತರ್ಭಾವನಾ ಕುಂಡಲೀಶÀ ಭೂಷಣ ಪ್ರೀಯನಾಕರ ಘನಾ ಕೋದಂಡಧರ ಶ್ರೀರಾಮನಾದನಾ ಪುಂಡಲೀಕ ವರದಹರಿ-----ತನಾದ ವೇದವೇದ್ಯ ಅಂಡಜನ--------ಹರಿ 'ಹೊನ್ನಯ್ಯ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ವಿಕ್ರಮಾ - ಪಾಹಿ - ತ್ರಿವಿಕ್ರಮಾ ಪ ವಿಕ್ರಮ ನಮಿಪೆ ನಾ ನಿನ್ನ | ನೀನುಚಕ್ರವ ಪಿಡಿದೊಂದು ದಿನ್ನ | ಆಹನಕ್ರನುದ್ದರಿಸಿದ | ಪ್ರಕ್ರಯ ನಾನರಿತುರುಕ್ರಮ ಶರಣೆಂಬೆ | ವಕ್ರ ಮನವ ಕಳೆಅ.ಪ. ಪುಟ್ಟ ರೂಪವನೆ ತಾಳುತ್ತಾ | ಬಲಿಯಇಷ್ಟಿಯೊಳವನ ಬೇಡುತ್ತಾ | ದಾನಕೊಟ್ಟೆನೆಂದವನು ಪೇಳುತ್ತಾ | ಬರೆಶಿಷ್ಟ ಶುಕ್ರನು ಬೇಡೆನ್ನುತ್ತಾ | ಆಹಕಟ್ಟಲು ಗಿಂಡೀಯ | ದಿಟ್ಟ ಶುಕ್ರನ ಕಣ್ಣಪುಟ್ಟ ದರ್ಭೆಲಿ ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ 1 ಥೋರ ರೂಪದೊಳು ಅಂಬರಾ | ಹಬ್ಬಿಧಾರುಣಿ ಅಳೆದ ಗಂಭೀರ | ಮತ್ತೆಮೂರನೇದಕೆ ಬಲಿಯ ಶಿರ | ವತ್ತಿಭಾರಿ ಪಾತಾಳಕ್ಕೆ ಧೀರಾ | ಆಹಪೌರೋಚನಿಯನ್ವತ್ತಿ | ದ್ವಾರವ ಕಾಯುತ್ತತೋರಿದೆ ಕರುಣವ | ಭೋರಿ ದೈವರ ಗಂಡ3 ಪಾದ ತೊಳೆದೂ | ಬಿಡೆಬ್ರಹ್ಮಾಂಡದೊಳು ತಾನು ಬಂದೂ | ಆಹಸುಮ್ಮನಸರ ಲೋಕ | ಕ್ರಮ್ಮಿಸುತಲಿ ಬರುವಅಮ್ಮಹ ಗಂಗೆ ಪೆ | ತ್ತೆಮ್ಮನುದ್ದರಿಸಿದಾ 3 ಬಾದರಾಯಣ ಬಳಿ ಭವ್ಯಾ | ನಾಗಿಮೋದ ತೀರ್ಥರಿಂದ ಸೇವ್ಯಾ | ನೀನುವಾದಿರಾಜರಿಗೊಲಿದು ತ್ವರ್ಯಾ | ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ | ಆಹಮೋದದಿ ನೆಲೆಸುತ್ತ | ಕಾದುಕೊಂಡಿಹೆ ನಿನ್ನಪಾದವ ಪೊಗಳೂವ | ಸಾದು ಸಂತತಿಯನ್ನ 4 ಹೀನ ಮಾನವನೆಂದು ಎನ್ನಾ | ಉದಾಸೀನ ಮಾಡುವಿಯೇನೊ ಘನ್ನ | ಕೇಳೊನೀನು ತ್ರೈಭುವದಿ ಪಾವನ್ನಾ | ನೆಂದುಗಾನದೋಳ್ ತವ ಪಾದವನ್ನಾ | ಆಹಆಗಮಿಸುತ ಬಂದ | ಮಾನವನೆನ್ನನುಧೀನನೆಂದೆನಿಸಾರೆ | ಜ್ಞಾನವ ನೀಡೆನಗೇ 5 ಪ್ರತಿ ಪ್ರತಿ ವತ್ಸರದೊಳು | ಮಾಸಹತ್ತೆರಡು ಪೂರ್ಣಿಮದೊಳು | ತವರಥದೊತ್ಸವ ಕಾರ್ಯಗಳೂ | ಬಲುಹಿತದಿ ತವ ದಾಸರುಗಳೂ | ಆಹಅತಿ ವೈಭವದಿಂದ | ವಿತರಣೆಯಿಂದಲಿಪ್ರತಿಯಿಲ್ಲವೆಂದೆನ್ನೆ | ವಿಸ್ತರಿಸುವರಯ್ಯ 6 ಪರಿ ಪೊಗಳುತ ಚೆನ್ನಾ | ಆಹಗುರು ಗೋವಿಂದ ವಿಠ್ಠಲ | ಪರಮ ಪುರುಷನೆಂದಾನರ್ತನಗೈಯುತ | ನರರೇನು ಧನ್ಯರೋ7
--------------
ಗುರುಗೋವಿಂದವಿಠಲರು
ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ. ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ 1 ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ 2 ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ 3 ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ 4 ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ 5
--------------
ಗುರುಗೋವಿಂದವಿಠಲರು
ವಿಠಲಯ್ಯ ವಿಠಲಯ್ಯ ಪ ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅ.ಪ. ಭಜಿಸುವೆ ನಿನ್ನನು ಅಜಭವ ಸುರನುತ ಭಜಕಾಮರತರು ಕುಜನ ಕುಠಾರಾ 1 ನೀ ಕರುಣಿಸದೆ ನಿರಾಕರಿಸಲು ಎನ್ನ ಸಾಕುವರಾರು ದಯಾಕರ ಮೂರುತಿ 2 ಶರಣಾಗತರನು ಪೊರೆವನೆಂಬ ತವ ಬಿರಿದು ಕಾಯೋ ಕರಿವರದ ಜಗನ್ನಾಥ 3
--------------
ಜಗನ್ನಾಥದಾಸರು
ವಿಠಲಾ ಎನ್ನಿರೊ ಸುಜನರೆಲ್ಲಾ ಪ ವಿಠಲಾ ಎಂದಾರೆ ಸುಟ್ಟುಹೋಗೊದು ಪಾಪ ಅ.ಪ ಪ್ರಾತಃ ಕಾಲದೊಳು ಸ್ನಾನಾದಿಕರ್ಮ ಮುಗಿಸೀವಿಠಲಾ.... ವಾತದೇವನ ದ್ವಾರ ಅರ್ಪಿಸುತ್ತಾ ನೀವು | ವಿಠಲಾ....1 ಗುರುಗಳಲ್ಲಿಗೆ ಪೋಗಿ ವಂದಿಸಿ ಮೆಲ್ಲಾನೆ ವಿಠಲಾ.... ಮರÀುತಮತದ ಸಚ್ಛಾಸ್ತ್ರಗಳ ನೋಡುತಾ ವಿಠಲಾ.... 2 ಪಂಚÀಭೇದ ಪ್ರಾಪಂಚ ಸರ್ವವು ತಿಳಿದು ವಿಠಲಾ... ಪಂಚಬಾಣನಯ್ಯ ಪಂಚರೂಪದಿ ತೋರುವಾ ವಿಠಲಾ.... 3 ಪ್ರಾರಂಭಮಾಡಿ ಪರಮೇಷ್ಠಿ ಪರಿಯಂತ ವಿಠಲಾ.... ಶ್ರೀಪ್ರಣವ ಪ್ರತಿಪಾದ್ಯಗಿವರು ಪ್ರತಿಬಿಂಬರೆಂದು ವಿಠಲಾ.... 4ಮಾತುಮಾತುಗಳೆಲ್ಲಾ ಶ್ರೀಹರಿಸ್ತೋತ್ರವೆಂದು ವಿಠಲಾ.... ಆತುಮಾಂತಾರಾತ್ಮನೆಂದು ಕೂಗುತ ಒಮ್ಮೆ ವಿಠಲಾ.... 5 ತೀರ್ಥಕ್ಷೇತ್ರಗಳಿಗೆ ಪೋಗಿ ಬರುವಾಗ ವಿಠಲಾ.... ಪಾರ್ಥಸಖನ ಪ್ರೇರಣೆಯಿಂದ ಮಾಡಿದೆವೆಂದು ವಿಠಲಾ.... 6 ನಂಬೀದ ಜನರೀಗೆ ಬೆಂಬಲನಾಗುವ ವಿಠಲಾ.... ಸಂಭ್ರಮದಿಂದಾ ಸಂರಕ್ಷಿಸುವನೆ ಇವನೂ ವಿಠಲಾ.... 7 ಕಂಚಿಕಾಳಾಹಸ್ತಿ ಶ್ರೀರಂU ಮೊದಲಾಗಿರುವ ವಿಠಲಾ... ವಂಚನೆಯಿಲ್ಲಾದೆ ಭಜಿಸಿದವರ ಪೊರೆವಾ ವಿಠಲಾ.... 8 ಪಂಚಪ್ರಾಣಾರಲಿನಿಂತು ಕಾರ್ಯಮಾಳ್ಪ ವಿಠಲಾ.... ಕರ್ಮ ಇವನಿಂದ ನಾಶವೆಂದು ವಿಠಲಾ.... 9 ಊಧ್ರ್ವಪುಂಡ್ರಗಳು ದ್ವಾದಶನಾಮ ಇಡುವಾಗ ವಿಠಲಾ.... ಶುದ್ಧನಾಗೀ ಶುಭ್ರಹೊಸ ವಸ್ತ್ರ ಹೊದುವಾಗ ವಿಠಲಾ..... 10 ಪಂಚಮುದ್ರೆಗಳಲಿ ಪಂಚರೂಪದಿ ಇರುವ ವಿಠಲಾ... ನಿರ್ವಂಚನಾಗಿ ಧರಿಸಿದವರಿಗೊಲಿವಾ ವಿಠಲಾ... 11 ಪರಿಯಂತ ವಿಠಲಾ... ವೇದೈಕವೇದ್ಯ ವಿಶ್ವಾಮೂರ್ತಿ ಕಾರ್ಯಗಳೆಂದು ವಿಠಲಾ.... 12 ಚೇತನಾ ಚೇತನ ಜಡದೊಳಗೆ ನೀವು ವಿಠಲಾ... ಪ್ರೀತಿಯಿಂದಾಲಿ ಪೂಜೆಮಾಡಿದವರಾಗೆ ಒಲಿವ ವಿಠಲಾ.... 13 ಪರಿ ಚಿಂತಿಸಿ ವಿಠಲಾ... ಶಾರೀರದೊಳಿÀರುವ ಪ್ರಾಜ್ಞನಲಿ ಕೂಡಿಸಿ ವಿಠಲಾ.... 14 ಮಧ್ವಾಂತರ್ಯಾಮಿಯಾಗಿ ಉಡುಪಿಯಲ್ಲಿ ನಿಂತ ವಿಠಲಾ... ಕರ್ತು ವಿಠಲಾ..... 15
--------------
ಮುದ್ದುಮೋಹನವಿಠಲದಾಸರು
ವಿದ್ಯಾ ಪ್ರಸನ್ನ ಶ್ರೀ ಯತಿಕುಲ ಗುರುರನ್ನ ಸದ್ವ್ಯೆಷ್ಣವ ಘನ್ನ ಪ. ಸಿದ್ಧಸಾಧನ ಮಧ್ವಮುನಿಯ ಚಿನ್ಹ ಧರಿಸಿದ ಬಹುಮಾನ್ಯ ಅ.ಪ. ವಿದ್ಯಾರತ್ನಾಕರ ಯತಿ ಕರಕಮಲದಿ ಜಾತ ಮುದ್ದು ಕುವರನೀತ ವಿದ್ಯಾವಾರಿಧಿ ಮುನಿಕರ ಸಂಜಾತ ಯತಿವರನಾದಾತ ಮಧ್ವಗ್ರಂಥಗಳ ಮನನ ಮಾಡಿದಾತ ಬಹುಮತಿಯುತನೀತ ಬುದ್ಧಿಕುಶಲದಿ ಬುಧರನು ಪೊರೆವಾತ ಸುಜನರ ಮನದಾತ 1 ವ್ಯಾಸತೀರ್ಥನ ಆಸ್ಥಾನಕೊಡೆಯರಾಗಿ ದುರ್ಗುಣಗಳ ನೀಗಿ ಆಸೆಯಿಂದ ಶ್ರೀ ಕೃಷ್ಣನ ಚನ್ನಾಗಿ ಪೂಜಿಸುತಲಿ ಬಾಗಿ ದಾಸತ್ವದ ಲಕ್ಷಣ ತಿಳಿದವರಾಗಿ ವಿಷಯ ಸಂಗ ತ್ಯಾಗಿ ಪಸನ್ನ ಕೃಷ್ಣನೆಂಬಂಕಿತವನೆ ಇಟ್ಟು ಪದರಚಿಸಿದ ಗುಟ್ಟು 2 `ವಿ' ಎನ್ನಲು ನರವಿಷಯ ಸಂಗದೂರ `ಧ್ಯಾ' ಎನೆ ಧ್ಯಾನವರ `ಪ್ರ' ಎನಲು ಸದ್ಗುಣನು `ನ್ನ' ಎನ್ನಲು ಶ್ರೀ ನರಹರಿ ತಾನೊಲಿವ `ತೀ' ಎನೆ ತೀರ್ವ ಭವ `ರ್ಥಾ' ಎನ್ನಲು ಪುರುಷಾರ್ಥ ಪಡೆದ ಭೋಗಿ `ರು' ಎನೆ ರುಜುಮಾರ್ಗಿ 3 ವಿದ್ಯಾಪ್ರಸನ್ನತೀರ್ಥರು ಎಂದೆನ್ನುತಲಿ ಸ್ಮರಿಪರ ಸಲಹುತಲಿ ಮುದ್ದುಕೃಷ್ಣ ಪಟ್ಟಾಭಿರಾಮನಂಘ್ರಿ ಸಚ್ಚರಿತ ಪ್ರಸಂಗಿ ಸದ್ವಿದ್ಯಗಳಿಗೆ ಗರ್ವರಹಿತ ಭಾವ ಬಹು ಸರಳ ಸ್ವಭಾವ ಹೃದ್ವನಜಸÀ್ಥನ ಕಾಂಬ ಮುನಿವರೇಣ್ಯ ಸದ್ಭಕ್ತ ಶರಣ್ಯ 4 ಮಂದ ಮತಿಯು ನಾನು ಕ್ಷಮಿಸು ತಂದೆ ನೀನು ಕುಂದನೆಣಿಸದೆ ಗುಣಗ್ರಹಿಸುತಲಿನ್ನು ಶ್ರೀ ಹರಿ ನುಡಿಸಿದನು ತಂದೆ ಮುದ್ದುಮೋಹನರ ಕೃಪೆಯಿಂದ ರಚಿತ ಪದದಂದ ಮಂದರಧರ ಗೋಪಾಲಕೃಷ್ಣವಿಠ್ಠಲ ಗರ್ಪಿತ ಗುಣಮಾಲ 5
--------------
ಅಂಬಾಬಾಯಿ
ವಿದ್ಯಾಕಾಂತಯತಿಗಳ ಕೀರ್ತನೆ ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ ನೀ ಪೇಳಬಾರದೆ ರುಕುಮಿಣಿ ನೀ ಪೇಳಬಾರದೆ ಸತ್ಯಭಾಮ ಪ ಪಾಪ ಮಾಡುವನೆಂದು ಕೋಪ ಮಾಡಿದಿರೆಂದು ನಾ ಪಾದಪದುಮಕ್ಕೆ ಶರಣೆಂಬೆ ತಾಯೆ 1 ನಿಮ್ಮ ನುಡಿಗಳಿಂದ ಸಮ್ಮತಿಸುವ ದೇವ ಸುಮ್ಮನೆ ತಿಳಿಸೆನ್ನ ಹಡದಮ್ಮ ತಾಯೆ 2 ಏನೊ ಪೇಳಿದನೆಂದು ನೀನೂಪೇಕ್ಷಿಸದಲೆ ಜಾನಕಿದೇವಿ ಪೇಳೆ ರಘೂಪತಿಗೆ ತಾಯೆ3 ಪಾದ ನಂಬಿದವರಿಗೆ ಮೋದವ ಕೊಡುವಂಥ ವೇದವ್ಯಾಸಗೆ ರಮೆ ತಿಳಿ ಹೇಳೆ ತಾಯೆ 4 ವಿದ್ಯಾಕಾಂತನ ಮನವಿದ್ದಂತೆ ಒಲಿಯುವ ಸದ್ದಯಾನಿಧಿ ನಮ್ಮ ನರಸಿಂಹ ತಾಯೆ 5 (ವಿದ್ಯಾಕಾಂತತೀರ್ಥರು (1824) ವ್ಯಾಸರಾಜ ಮಠದ 16 ನೇ ಯತಿಗಳು)
--------------
ವ್ಯಾಸತತ್ವಜ್ಞದಾಸರು
ವಿನುತ ಸಿರಿ | ರಾಮ ವಿಠಲ ಕಾಯೋ ಪ ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಅಮೃತ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ 1 ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ 2 ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ 3 ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ 4 ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ವಿಬುಧ ಪ್ರಿಯ ವಿಠಲ | ಶುಭದ ಪೊರೆ ಇವನಾ ಪ ಅಬುಜ ಜಾಂಡೋದರನೆ | ಕುಬುಜೆ ಸದ್ ವರದಾ ಅ.ಪ. ದಾಸನಾಗಲು ಇವಗೆ | ಆಶೆ ಪ್ರೇರಕನಾಗಿವಾಸು ದೇವಾಖ್ಯ ತೈ | ಜಸನೆ ಕಾರ್ಯರೂಪಿಸೂಸಿತವ ರೂಪವನು | ಲೇಸಾಗಿ ತೋರಿಸೆಹೆಕೇಶವನೆ ಅದನೆ ಉಪ | ದೇಶಿಸಿಹೆ ಹರಿಯೆ 1 ಪ್ರೀಯ ಅಪ್ರೀಯ ಉ | ಭಾಯಾನು ಭವದಲ್ಲಿಆಯುತನು ನೀನಾಗಿ | ಉದ್ವೇಗ ಕೊಡದೇನಿಯುತಕರ್ಮದಿ ರತನ | ದಯದಿಂದ ನೀಮಾಡಿಹಯಮೊಗಾಖ್ಯ ಹರಿಯೆ | ಕೈಯಪಿಡಿ ಇವನಾ 2 ಲೋಕವಾಕ್ಯದಿ ವಿರಸ | ಲೋಕೈಕನಾಥನುವಾಕ್ಯದೊಳು ರತಿಯನ್ನೆ | ನೀ ಕೊಟ್ಟಿ ಕಾಯೋ |ಮಾಕಳತ್ರನದಾಸ | ಸಂಕುಲದಿ ಸದ್‍ಭಕ್ತಿಶ್ರೀಕರನೆ ನೀನಿತ್ತು | ಸಾಕ ಬೇಕಿವನಾ 3 ಮಧ್ವಮತದಲಿ ದೀಕ್ಷೆ | ಶುದ್ಧ ಹರಿ ಗುರುಭಕ್ತಿಅದ್ವೈತ ಕ್ರಯವರಿಯೆ | ವಿದ್ಯೆ ಸಂಘಟಿಸೀಕೃದ್ಧಖಳ ನಿವಹಗಳ | ಪ್ರಧ್ವಂಸಗೈಯುತಲೀಉದ್ದರಿಸೋ ಇವನನ್ನು | ಮಧ್ವಾಂತರಾತ್ಮ 4 ವೇದ ಕದ್ದೊಯ್ದವನ | ಬಾಧೆ ನೀ ಪರಿಹರಿಸಿಸಾದುಗಳ ಪೊರೆದಂತೆ | ಆದರಿಸಲಿವನಾಮೋದಿ ಗುರು ಗೋವಿಂದ | ವಿಠಲನೆ ಬಿನ್ನವಿಪೆಮೈದೊರಿ ಸಲಹುವುದು | ಸಾಧುವಂದಿತನೇ 5
--------------
ಗುರುಗೋವಿಂದವಿಠಲರು
ವಿಶೇಷ ಸಂದರ್ಭದ ಹಾಡು ಶ್ರೀ ವರದೇಂದ್ರಾಖ್ಯಾನ ಉತ್ಸವ ವರ್ಣನೆ 39 ಇರುಳುಹಗಲು ತವಸ್ಮರಿಸುತಲಿಹ ಭಕು - ತರಿಗಿಹ ಪರಸುಖಸುರಿಸುವ ಶ್ರೀ ಗುರು ಪ ಲಿಂಗಸುಗುರುನಿವಾಸ ಭಕ್ತ ಜಂಗುಳಿ ದುರಿತವಿನಾಶ ಮಂಗಳ ಚರಿತ ಮೌನೀಶ ವಿಹಂಗವಾಹನ ನಿಜದಾಸ 1 ಸಿರಿ ವಸುಧಿಜಾಪತಿ ಪದದೂತ ವಸುಧಿಯೊಳಗೆ ವಿಖ್ಯಾತ ಸುಮನಸರ ಸುವಂಶಜನೀತ 2 ಸುದರುಶನ ಮಾಲಾ ಕಲುಷ ನಿರ್ಮೂಲಾ 3 ವಾಯುಮತಾಬ್ಧಿವಿಹಾರಾ ಕಾಷಾಯ ಕಮಂಡಲಧಾರಾ ಮಾಯಿ ಜಲಜ ಚಂದಿರ ಗುರುರಾಯರ ಮಹಿಮೆಯಪಾರಾ 4 ಪಂಡಿತಮಂಡಲಭೇಶ ಪಾಖಂಡಿಮತೋರುಗವೀಶ ಕುಲಿಶ ತನ್ನ ತೊಂಡನೆಂದವರಘನಾಶ 5 ತಿಮಿರ ತರಣಿಯೊ ಕನಳನೀ ಮುನಿಯೋ 6 ಸುರನದಿಪತಿಯೊ ಧೈರ್ಯದಿ ಭೂಭತ್ಪತಿಯೊ ಚಾತುರ್ಯದಿ ವರಬ್ರಹ್ಮಸ್ಪøತಿಯೊ 7 ದಾನದಿರವಿಜನೆನಿಪನು ಸುವಿಧಾನದಿ ಕ್ಷಿತಿಯ ಪೋಲುವನು ಮೌನದಿ ಶುಕಮುನಿವರನು ಅಸಮಾನಯೋಗಿ ಎನಿಸುವನು 8 ಹರಿಸ್ಮರಣಿಯಲಿರುತಿರುವ ನರಹರಿನಿಂದಿಪ ಮತತರಿವ ಹರಿಪನೆಂಬರೆ ಪೊರೆವ ಶ್ರೀ ಹರಿಯಿವರಗಲದಲಿರುವ9 ಪ್ರಾಣೇಶ ದಾಸರೆನಿಪರು ಶ್ರೀ ಶ್ರೀನಿವಾಸನ ವಲಿಸಿಹರು ಜ್ಞಾನಿಗಳಿಗೆಅತಿ ಪ್ರೀಯರು ಅಸಮಾನದಾಸರೆನಿಸುವರು 10 ವರಕÀವಿ ಶ್ರೀ ಜಗನ್ನಾಥಾರ್ಯರ ಕರುಣ ಪಡೆದನವರತ ಧರಣಿಯೊಳಗೆ ವಿಖ್ಯಾತ ನರಹರಿ ಯಸ್ಮರಿಸುತಿಹ ನಿರುತ 11 ಹಿಂದಿನಸುಕೃತದಿ ಫಲದಿ ವರದೆಂದ್ರಾರ್ಯರು ವಂದಿನದಿ ಚಂದದಿ ದಾಸಗೃಹದಿ ನಡೆತಂದರು ಬಹುಸಂಭ್ರಮದಿ12 ಬಿನ್ನೈಸಿದ ಭಕುತಿಂದ ಮುನಿಮಾನ್ಯದರುಶನದಿಂದ ಧನ್ಯಧನ್ಯನಾನೆಂದ ಪಾವನ್ನವಾಯ್ತು ಕುಲವೆಂದ 13 ದಾಸಾರ್ಯರ ಭಕುತಿಯನು ನಿರ್ದೋಷವಾದ ಙÁ್ಞನವನು ತೋಷಬಡುತ ಮುನಿವರನು 14 ಶ್ರೇಷ್ಠನಾದಯತಿವರನು ಉತ್ಕøಷ್ಟವಾದಸ್ಥಳವನ್ನು ನಮಗೆನುತಿಹನು15 ದೇಶಕರಿಂಗಿತವರಿದು ವರದಾಸಾರ್ಯರು ಕೈಮುಗಿದು ಈ ಶರೀರತಮ್ಮದೆಂದು ಮಧ್ವೇಶಾರ್ಪಣವೆಂತೆಂದು 16 ತಪ್ಪದೆ ಸರ್ವದೇಶದಲಿ ತಾಕಪ್ಪವ ಕೊಳುತಲ್ಲಲ್ಲಿ 17 ಸಿರಿ ನಿಲಯನಂಘ್ರಿ ಸ್ಮರಿಸುತಲಿ ಕಳೇವರ ತ್ಯಜಿಸಿದರಲ್ಲಿ ಆಬಳಿಕ ಲಿಂಗಸುಗೂರಲ್ಲಿ 18 ತುಲಸಿ ವೃಕ್ಷರೂಪದಲ್ಲಿ ಇಲ್ಲಿನೆಲೆಸಿಹವೆಂದು ಸ್ವಪ್ನದಲಿ ಗಂಜಿಯ ಮರಡಿಯಲಿ ಇದ್ದಶಿಲೆ ತರಿಸೆಂದು ಪೇಳುತಲಿ 19 ಬಣವಿಯ ತ್ವರ ತೆಗೆಸುತಲಿ ತರುಮನುಜನಸರಿನೋಡುತಲಿ ಮುನಿ ವಚನವನಂಬುತಲಿ ಶಿಲೆಯನು ತಂದಿರಿಸಿದರಿಲ್ಲಿ 20 ಪುರುದಲಾಗಯಿರುತಿಹನು ತ್ವರದಿಂದಲಿ ಕಳುಹಿದನು ನರಹರಿ ಸಾಲಿಗ್ರಾಮವನು 21 ವರಪುಣ್ಯ ಕ್ಷೇತ್ರದಲಿಂದ ಮುನಿವರ ತಾನಿಲ್ಲಿಗೆ ಬಂz ಶರಣರ ಪಾಲಿಪೆನೆಂದ ಸುಖಗರೆಯುತ ಅಲ್ಲಿಯೆ ನಿಂದ 22 ಸುಂದರಪಾದುಕೆಗಳನು ಪುಣೆಯಿಂದಿಲ್ಲಿಗೆ ತರಿಸಿದನು ವಂದಿಸುವವರ ಘಗಳನ್ನು ತ್ವರದಿಂದ ತರಿದು ಪೊರೆಯುವನು 23 ದಾಸಕುಲಾಗ್ರಣಿಯನಿಪ ಪ್ರಾಣೇಶ ಕರಾರ್ಚಿತ ಮುನಿಪ ದೇಶಿಕ ವರರೆಂದೆನಿಪ ರಘುಜೇಶ ಪದಾಂಬುಜ ಮಧುಪ 24 ವೃಂದಾವನದಿ ನಿಂದಿರುವ ರಾಘವೇಂದ್ರರ ಧ್ಯಾನದಲಿರುವ ಅಂದಣೇರಿ ತಾಮೆರೆವ ಭಕ್ತವೃಂದವ ಕಾದುಕೊಂಡಿರುವ 25 ಪ್ರತಿಗುರುವಾಸರದಲ್ಲಿ ಜನತತಿ ಸಂಭ್ರಮದಿಂದಿಲ್ಲಿ ಮಿತಿಯಿಲ್ಲದೆ ಭಕುತಿಯಲಿ ನಲಿಯುತ ವಾಲ್ಗೈಸುವರಿಲ್ಲಿ 26 ಪ್ರತಿ ಪ್ರತಿ ವತ್ಸರದಲ್ಲಿ ಗ್ರೀಷ್ಮಋತು ಆಷಾಢಮಾಸದಲ್ಲಿ ತಿಥಿ ಷಷ್ಟಿಯ ದಿವಸದಲಿ ದ್ವಿಜತತಿ ಸುಭೋಜನ ವಿಲ್ಲಿ 27 ಮರುದಿವಸದ ಸಂಭ್ರಮವು ಶ್ರಿಂಗರಿಸಿದ ರಥದುತ್ಸವವು ಪರಿಪರಿ ಜಸಂದಣಿಯು ಇದು ವರಣಿಪುದಕೆ ದುಸ್ತರವು 28 ಯತಿವರ ಪರಮಾನಂದದಿಂದ ರಥವೇರಿ ಬರುವದು ಚಂದ ಅತಿಹರುಷದಿ ಜನವೃಂದಗುರು ಸ್ತುತಿಮಾಳ್ಪದು ಮುದದಿಂದ 29 ಝಾಂಗಟಿ ದಮ್ಮುಡಿಯು ಕಾಲುಗೆಜ್ಜೆಕಟ್ಟಿದಡಿಯುದಿವ್ಯ ಮೇಲು ಸರದ ಪದನುಡಿಯು 30 ಭೇರಿ ಭಜಂತ್ರಿ ತುತ್ತೂರಿಗಂಭೀರದಿ ಹೊಡೆವನಗಾರಿ ಅಂಬರ ಮೀರಿ 31 ಪರಿ ಪರಿಧೂಪಗಳು ಫಲÀಗಳನೈವೇದ್ಯಗಳು ಮಂಗಳ ಕರ್ಪೂರ ದೀಪಗಳು 32 ಥಳಿಪ ಪತಾಕಿ ಬೆತ್ತಗಳು ಮಿಗಿಲು 33 ಸಂತಜನರ ಜಯಘೋಷ ಅತ್ಯಂತ ಮನಕೆ ಸಂತೋಷ ಕುಣಿಯುತಿಹ ಶೀಶ 34 ಕಂತುಪಿತನದಯದಿಂದ ಇಲ್ಲಿ ನಿಂತಿಹ ಸುರರಾನಂದ ಎಂತೊರಣಿಪೆ ಮತಿಮಂದ ದುರಂತ ನಿಮ್ಮಯ ಗುಣವೃಂದ 35 ಸುವಿನಯದಿಂದ ನಮಿಸುವರು ಭಯವನು, ಈಡಾಡುವರು ತಮ್ಮಬಯಕೆ ಪೂರೈಸಿಕೊಳ್ಳುವರು 36 ಜ್ವರಛಳಿ ವ್ಯಾಧಿ ಪೀಡಿತರು ಮತ್ತುರಗವೃಶ್ಚಿಕದಂಶಿಕರು ಕುಂಟರು ಬಧಿರÀರು 37 ಪರಿಪರಿಗ್ರಹಪೀಡಿತರು ಬಹುಪರಿ ಶುಭಕಾಮಿಪ ಜನರು ಪೊರೈಸಿಕೊಂಬುವರು 38 ಸಾಷ್ಟಾಂಗದಿ ವಂದಿಪರು ಅಭಿಷ್ಟೇಯ ಪಡೆದುಕೊಳ್ಳುವರು ಕಷ್ಟಗಳನು ನೀಗುವರು ಸಂತುಷ್ಟರಾಗಿ ತೆರಳುವರು 39 ಇದುಪುಣ್ಯಕ್ಷೇತ್ರ ವೆನಿಸಿತು ಶ್ರೀಪದುಮೇಶಗಾವಾಸಾಯ್ತು ಮುದದಿಂದನಲಿಯುವರಾಂತು 40 ಈಸುಪದ ಪೇಳ್ವನೆಧನ್ಯ ಜಗದೀಶನ ತುತಿಸಿದ ಪುಣ್ಯ ದೇಶಿಕಪತಿ ಮುನಿಮಾನ್ಯ ವರದೇಶ ವಿಠಲಾಗ್ರಗಣ್ಯ 41
--------------
ವರದೇಶವಿಠಲ
ವಿಶ್ವಕ್ಕೆ ಪ್ರಿಯ ಗುರುವರ್ಯ | ಕಾಯೊವಿಶ್ವಪ್ರಿಯಾಭಿಧ ಯತಿವರ್ಯ ಪ ಧೃತ - ವಿಶ್ವದೊಳಗಾವೆಲ್ಲಿ ನಿಮಗೆಣೆ | ಸುಸ್ವಭಾವ ವಿರಾಗಭೂಷಣವಿಶ್ವ ವಾಯುಪದಾರ್ಹವಂಶಜ ಹ್ರಸ್ವಗೈವುದು ಎನ್ನಕರ್ಮ ಅ.ಪ. ದಿವಿಜ | ಧೃತ | ಅಶ್ವಗ್ರೀವನ ಪಾದರಜ |ವಿಶ್ವ ಗುರು ಮಧ್ವಾರ್ಯ ಶಾಸ್ತ್ರದ | ನಿಸ್ವನವ ನಿಮ್ಮಿಂದ ಕೇಳಲುವಿಷ್ಟಕುದೇಶಗಳ ಸಜ್ಜನ | ಸತ್ವರದಿ ಉಡಪಿಯನೆ ಸಾರ್ದರು 1 ಸ್ವಪ್ನ ವೃಂದಾವನಾಖ್ಯಾನ | ನಿಮ್ಮ | ಗೊಪ್ಪಿದ ಶಿಷ್ಯರ್ಗೆ ಬೋಧನ |ಅಪ್ಪಂದದಲಿ ಮಾಡ್ದ ಕಾರಣ | ಅದು | ಒಪ್ಪಿತು ಬಹು ವಿಧ ಪ್ರಕರಣ ||ಸ್ವಪ್ನ ದ್ರಷ್ಟ್ರು ದ್ವಿಜವರೇಣ್ಯರೆ | ಅಪ್ಪ ಅಶ್ವಗ್ರೀವ ದೇವನಕೃಪ್ಪೆಯಿಂದಲಿ ಜಾತಿ ಸ್ಮøತಿಯನು | ಅಪ್ಪಿವ್ಯಕ್ತಿಯ ಜ್ಞಾನವಿತ್ತಿರಿ 2 ಮಧ್ಯವಾಟ ಪುರಟ ಸಂಪುಟ | ತಂದು | ವಿದ್ಯುಕ್ತ ಹಯಮೊಗ ನಿಕಟ |ಸದ್ಯ ಸ್ಥಾಪಿಸಿ ರಜತ ಪೀಠ | ದಲ್ಲಿ | ಪರ್ಯಾಯ ಗೈದೆಯೊ ಪಟುಭಟ ||ಆಯ್ ಗುರು ರಾಜೋಕ್ತಿಯಂದದಿ |ಕಾರ್ಯಳು ಬಹು ಭಾವಿ ನಡೆಸಿದೆಆರ್ಯ ಭಾವೀ ಇಂದ್ರ ಪದದಲಿ | ಯೋಗ್ಯರೆನಿಸಿದ ಯೋಗಿವರ್ಯ 2 ಮಾರ್ಗಣ ವಿಶ್ವ ಪ್ರಿಯಾರ್ಯ 4 ಭವ | ಭಯವನೆ ಕಳೆವುದು ರಾಯ |ದಯವನಧಿ ಕರುಣವನೆ ದೊರಕಿಸಿ | ಜಯ ಗುರು ಗೋವಿಂದ ವಿಠಲನದ್ವಯ ಪದಾಂಬುಜ ತೋರಿ ಸಲಹೊ | ವಿಯದಧಿಪ ಪದ ಪೊಂದುವವನೆ 5
--------------
ಗುರುಗೋವಿಂದವಿಠಲರು
ವಿಷಯಾಸೆ ಬಿಡಲೊಲ್ಲದೋ ದೇವ ಪ. ವಸುದೇವಸುತ ನಿನ್ನ ವಶವಾಗೋತನಕ ಅ.ಪ. ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1 ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2 ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3 ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4 ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
--------------
ವಾದಿರಾಜ
ವಿಷ್ಣು ತೀರ್ಥರಪಾದ | ನಿಷ್ಠೆಯಿಂದಲಿ ಭಜಿಸೆಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ ಪ ಜಿಷ್ಣುಸಖ ಶ್ರೀ | ಕೃಷ್ಣ ಭಕುತರುಶ್ರೇಷ್ಠ ದಂಪತಿ | ಗರ್ಭಜಾತರುಸುಷ್ಠಜಯಮುನಿ | ಸೇವೆಯಿಂದಲಿಇಷ್ಟವರದಿಂ | ದುದಯರಾದರು 1 ಬಾಲ್ಯದಲ್ಲು ಪನೀತ | ಆರ್ಯರಿಂದು ಪದಿಷ್ಟಆರ್ಯ ಐಜೀವರ್ಯ | ಗುರುಕುಲವಸಿತ |ಕ್ರೌರ್ಯ ಹರಿಜಪ | ದೈರ್ಯದಿಂದಲಿವೀರ್ಯವತ್ತರ | ಜಪಿಸಿ ಗುರುಸುತವರ್ಯನಪಮೃತಿ | ಕಳೆದು ಗುರುವಿಂಮಾನ್ಯವಂತನು | ಎನಿಸಿ ಮೆರೆದ 2 ಮಲದ ಅಪಹಾರಿಯ | ಜಲಪ್ರವಾಹದಿ ನಿಂದುಘಳಿಗೆ ಇರಲು ಉದಯ | ವಲಿಸಿ ಮಧ್ವವಿಜಯಒಲಿಮೆಯಿಂದಲಿ | ಸೂರ್ಯನಘ್ರ್ಯವಕಾಲಮೀರದೆ | ತಾನು ಕೊಡುತಲಿಮೂಲಗ್ರಂಥವ | ತಿಳಿಯ ಬೋಧವಇಳೆಯ ಸುರರಿಗೆ | ಪೇಳ್ದ ಮಹಿಮಾ 3 ಅವಧೂತ ಚರ್ಯದಿ | ಅವನಿಯೊಳ್ಚರಿಸುತ್ತಭುವನ ಪಾವನ ಸುಧೆ | ದಿವಿಜರಿ ಗುಣಿಸೀ |ಶ್ರವಣ ಗೈಸುತ | ಸುಧೆಯ ಗ್ರಂಥವಅವನಿಯೊಳು | ತತ್ವಾರ್ಥಬೋಧಿಸಿಪ್ರವರ ಭೂಸುರ | ಮುಕ್ತಿಮಾರ್ಗದಹವಣೆ ಗೈದಿಹ | ಭುವಿಯದಿವಿಜ 4 ವನವನಚರಿಸುತ್ತ | ಮುನಿವಳ್ಳಿಯಲಿಮುನಿಯೋಗ್ಯವೆನಿಸುವ | ವಾನಪ್ರಸ್ಥಾಶ್ರಮದಿ |ಘನಸುವ್ರತವನೆ | ಅಸಿಯಪತ್ರದಿಮನವನಿರಿಸುತ | ಗಣ್ಯನಾದೆಯೊಅನಘ ಹರಿಕಾ | ರುಣ್ಯ ನಿನ್ನಲಿಗಣನೆಗೈಯ್ಯಲು | ಮನುಜಗಸದಳ 5 ಯತಿ ಸತ್ಯವರರಿಂದ | ಯತಿ ಆಶ್ರಮವ ಪೊಂದಿಕ್ಷಿತಿಯ ಸಂಚರಿಸುತ್ತ | ಅನ್ನಾಳಿಗಾಗಮೀಸೀ |ಹಿತನು ದೇಶಾದಿ | ಪತಿಯ ರೋಗವಹತಗೈದು ಅನ್ನವ | ಜೊತೆಲುಂಬುವಯತನ ಸಾಧಿತ | ಪ್ರಾಪ್ತಕ್ಷಾಮವಹತವ ಗೈಸಿದೆ | ರಮೆಯನೊಲಿಸೀ 6 ಬೋಧ | ಗ್ರಂಥಗಳ್ರಚಿಸೀ |ಮೋದದಿಂ ವೃಂದಾವನಸ್ಥರುಸಾದು ಸೇವೆಗೆ ಅಭಯನೀಡುತನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತರಾಗಿಹ7
--------------
ಗುರುಗೋವಿಂದವಿಠಲರು
ವೆಂಕಟರಮಣನೆ ಸಂಕಟಹರಣನೆ ಶಂಖ ಚಕ್ರ ಪೀತಾಂಬರನೆ ಪ ಪಂಕಜನಾಭನೆ ಪರಮಗೋವಿಂದನೆ ಲಂಕೆ ವಿಭೀಷಣ ನಿಗಿತ್ತವನೇ ಅ.ಪ ಹಿಂದನ ಕರ್ಮದಿನೊಂದೆನು ನಿನ್ನಯ ಕಂದನಮೊರೆಯನು ಲಾಲಿಪುದೂ ಬಂದಿಸಿ ಭವಗಳ ಹೊಂದಿಸೊ ನಿಜಪುರ ಚಂದದೆ ಕ್ಷಿತಿಯೊಳ್ ಪಾಲಿಪುದೂ 1 ಘಾಸಿ ಬಿಡಿಸಿ ನಿಜದಾಸನ ಮಾಡೆಲೊ ಈಶನೆ ಕೇಶವ ಮೂರಿತಯೇ ಆಸೆಯ ತೀರಿಸಬೇಕೈಯಾ ಭವ ನಾಶನೆ ಪಾರ್ಥವ ಸಾರಥಿಯೆ 2 ಪರಿಪರಿ ಭವಗಳ ಹರಿಯುವನೆನ್ನುತಾ ಕರದೊಳು ಕಂಕಣ ಕಟ್ಟಿರುವೇ ಮೊರೆ ಬಿದ್ದೆನು ಶ್ರೀ ತುಲಸೀರಾಮನ ಸ್ಮರಣೆಯ ಹೃದಯದೊಳಿಟ್ಟರುವೆ 3
--------------
ಚನ್ನಪಟ್ಟಣದ ಅಹೋಬಲದಾಸರು
ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ. ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ 1 ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ 2 ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ 3 ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು