ಒಟ್ಟು 2071 ಕಡೆಗಳಲ್ಲಿ , 107 ದಾಸರು , 1650 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಕೈ ಬಿಡುವೆ ದೇವಾ |ತ್ರಿಜಗವನು ಸಾಕುವ ನೀನಭವ ||ಏಕೋ ಮೂರುತಿ ಶ್ರೀ ವೆಂಕಟಪತಿನಿನಗೆ ನಾ ಬೇಕಾದವನಲ್ಲವೆ ಸ್ವಾಮಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಬಾಲನ ಪತಿಕರಿಸಿ ಹಿರಣ್ಯಕನ | ಸೀಳಿ ರಕ್ಷಿಸಿದಂತೆ |ಶ್ರೀ ಲೋಲಾ ಗತಿಯೆಂಬೆ ||ಬ್ರಹ್ಮಸುತನಿಗೆಪಾಲನಮುದ್ರೆಯನಿತ್ತೆ ಸ್ವಾಮಿ |ಸಭೆಯೊಳು ದ್ರೌಪದಿ ಸ್ತುತಿಸೆ ನಿನ್ನ | ಅಭಿಮಾನ ಕಾಯ್ದೆ |ಗಂಡಇಭನಕ್ರನೊಳ .....................................ಧ್ರುವ ಅಂಬರೀಷಅಂಗದವಿಭೀಷಣ |ಪವನಜರುಕ್ಮಾಂಗದ |ಅವರಪಾಲಿಸಿದಂತೆ ರಕ್ಷಿಸು ಬಿಡದೆ ಎನ್ನ ||ಭವಹರಾ ಶ್ರೀ ಶಂಕರನಾತ್ಮಸಖಾ ||
--------------
ಜಕ್ಕಪ್ಪಯ್ಯನವರು
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು
ಯಾರೂ ಸಂಗಡ ಬಾಹೋರಿಲ್ಲನಾರಾಯಣ ನಿಮ್ಮ ನಾಮವೊಂದಲ್ಲದೆ ಪ.ಹೊತ್ತು ನವಮಾಸ ಪರಿಯಂತರವು ಗರ್ಭದಲಿಹೆತ್ತು ಬಲು ನೋವು ಬೇನೆಗಳಿಂದಲಿತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿಅತ್ತು ಕಳುಹುವಳಲ್ಲದೆ ನೆರೆಬಾಹಳೆ 1ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನಭಾವಶುದ್ಧಿಯಲಿ ಧಾರೆಯೆರಿಸಿಕೊಂಡದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇನ್ನಾವ ಗತಿಯೆಂದೆನುತ ಗೋಳಿಡುವಳಲ್ಲದೆ 2ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗಎತ್ತಿವನ ಹೊರಗೊಯ್ಧ ಹಾಕೆಂಬರುಎತ್ತಿದ ಕಸಕಿಂತ ಕಡೆಯಾಯಿತೀ ದೇಹವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ 3ಪುತ್ರಮಿತ್ರರು ಸಕಲ ಬಂಧು ಬಳಗಗಳೆಲ್ಲಹತ್ತಿರ ನಿಂತು ನೋಡುವರಲ್ಲದೆಮೃತ್ಯುದೇವಿಯ ಬಂದು ಅಸುಗಳನು ಸೆಳೆವಾಗಮತ್ತೆ ತನ್ನವರಿದ್ದು ಏನು ಮಾಡುವರು 4ಯಮನ ದೂತರು ಬಂದು ಪಾಶಂಗಳನೆ ಎಸೆದುಮಮತೆಯಿಲ್ಲದೆ ಪ್ರಾಣ ಎಳೆಯುತಿರಲುವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗಕಮಲಾಕ್ಷ ಪುರಂದರವಿಠಲ ನೀನಲ್ಲದೆ * 5
--------------
ಪುರಂದರದಾಸರು
ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು
ರಾಘವೇಂದ್ರಾ - ಸದ್ಗುಣಸಾಂದ್ರಾ ಪರಾಘವೇಂದ್ರಾ ಅನು - ರಾಗದಿ ಭಕ್ತರರೋಗವ ಕಳೆದು ಸು - ಭೋಗವ ಸಲಿಸೋ ಅ.ಪಧೀಮಂತರಿಗತಿ - ಕಾಮಿತವೀವೊಶ್ರೀಮಂತನೆ ಎನ - ಕಾಮಿತ ಸಲಿಸೋ 1ಆಪದ್ಬಾಂಧವ - ಕೋಪವ ಮಾಡದೆನೀ ಪಾಲಿಸೋ ಎನ್ನ - ಪಾಪವ ನೋಡದೆ 2ಅನ್ಯನಲ್ಲವೊ - ನಿನ್ನ ಸುಭಕ್ತನುಮನ್ನಿಸಿ ದಯದಿ ನೀ - ಎನ್ನನು ಕಾಯೋ 3ಜನ್ಯನ ಜನಕನು - ಮನ್ನಿಸದಿರಲುಅನ್ಯರು ಕಾಯ್ವರನನ್ಯಪಾಲಕನೇ 4ಈಶನು ನೀನೈ - ದಾಸನು ಎನ್ನನು -ದಾಶಿನ ಮಾಡದೆ - ಪೋಷಿಸಿ ಪೊರೆಯೈ 5ಎಂದಿಗೆ ನಿನ್ನನು - ಪೊಂದುವೆ ಗುರುವರತಂದೆಯೆ ತೋರಿಸೋ - ಮುಂದಿನ ಗತಿಯಾ 6ಪೋತನು ನಾನೈ - ಮಾತನು ಲಾಲಿಸೊನೀತ ಗುರುಜಗನ್ನಾಥ ವಿಠಲ ಪ್ರಿಯ 7
--------------
ಗುರುಜಗನ್ನಾಥದಾಸರು
ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು
ರಾಮ ರಾಮ ರಘುನಾಥನೆ ಸುರಸ್ತೋಮತಿಲಕ ವಿಶ್ವಕರ್ತನೆ ದಿವ್ಯಸ್ವಾಮಿ ಪುಷ್ಕರತೀರವಾಸನೆ ನನ್ನಸ್ವಾಮಿವರಾಹವೆಂಕಟೇಶನೆಪ.ಕಾಯೊ ಕಾಯೊ ಮಧುಮರ್ದನಭವಸಾಯಕದೂರ ಜನಾರ್ದನ ಯದುನಾಯಕಧೃತಗೋವರ್ಧನ ನಾರಾಯಣ ನಿಜಜನವರ್ಧನ 1ಹೊಂದಿದಭಟಕಲ್ಪವೃಕ್ಷನೆ ನನ್ನತಂದೆ ತಾಯಿ ವಿಶ್ವಕುಕ್ಷನೆಕ್ಷೀರಸಿಂಧುಮಂದಿರ ಅಧ್ಯಕ್ಷನೆ ನಿನ್ನಿಂದಾರುಗತಿ ಪದುಮಾಕ್ಷನೆ 2ಅಡಿಗಡಿಗೊದಗದ ತಪ್ಪನೆ ಇಕ್ಕಡಿಮಾಡುದೇವ ತಿಮ್ಮಪ್ಪನೆಮಾಯಾಸಡಕ ತಪ್ಪಿಸು ಸುಪ್ರದೀಪನೆನಿತ್ಯಬಿಡದೆ ಕ್ರೀಡಾದ್ರಿಯೊಳಿಪ್ಪನೆ 3ಲೇಶಭಕ್ತಿಗೆ ಮನ ಹಾರಿತು ವಿಷಯಾಸೆಯಟವಿಯನೆ ಸೇರಿತು ಈಹೇಸಿ ಚಂಚಲಚಿತ್ತ ಹೋರಿತು ತವದಾಸರ ಸಂಗಕೆ ಜಾರಿತು 4ಕುಸುಮಶರನಂತ:ತೇಜನೆ ಮಹಮಿಸುನಿವೆಟ್ಟದ ಕಲ್ಪಭೂಜನೆ ಅಜÕನಿಶಾಕುಲ ಉಡುಗಣರಾಜನೆ ಶ್ರೀಪ್ರಸನ್ವೆಂಕಟ ರಾಜಾಧಿರಾಜನೆ 5
--------------
ಪ್ರಸನ್ನವೆಂಕಟದಾಸರು
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ಪ.ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲುಭಂಗವ ಪಡುವುದ್ಯಾಕೆಮಂಗಲದಾತ ನರಸಿಂಗನ ನಾಮವಹಿಂಗದೆ ನೆನೆದರಿಷ್ಟಂಗಳ ಕೊಡುವ 1ಉಪವಾಸ ಮಾಡಲ್ಯಾಕೆ ಕಪಟದೊಳುಗುಪಿತದಿ ಕುಳ್ಳಲ್ಯಾಕೆಉಪಮೆರಹಿತ ಶ್ರೀಪತಿ ಕೃಷ್ಣರಾಯನಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ 2ಧ್ರುವನು ಸದ್ಗತಿ ಪಡೆದ ಕರುಣದಿಂದಪವಮಾನಿಗೆ ಒಲಿದಭುವನಈರಡಿಮಾಡಿ ಬಲಿಯನ್ನು ಸಲಹಿದಬವರದೊಳಗೆ ದಾನವರನ್ನು ಮಡುಹಿದ 3ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತುತೀರ್ಥಸ್ನಾನಗಳ್ಯಾತಕೋಕರ್ತುಮಾಧವಶತಪತ್ರನಾಭನ ಸಂ-ಕೀರ್ತನಾದಿಗಳೆ ಪರತ್ರಸಾಧನವಲ್ಲೊ 4ಭೂರಿಯಾಯಾಸವ್ಯಾಕೋ ಬರಿದೆ ಸಂ-ಸಾರವ ನಂಬಲ್ಯಾಕೋಮಾರಾರಿಸಖ ಲಕ್ಷ್ಮೀನಾರಾಯಣನನ್ನುಸೇರಿ ಭಜಿಪರ ಉದ್ಧಾರಮಾಡುವ ಶ್ರೀ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಯನ ಭಯವಿಲ್ಲ ಮನಕೆ ಪಶ್ರೇಯಸ್ಸು ಸೌಖ್ಯವ ನೀಡೋದು ಜನಕೆ ಅ.ಪನೀನೆ ನೀಡುವಿ ಎಂಬ ಙ್ಞÕನ ದಿಂ -ದನು ಸಂಧಾನ ಮಾಡುತಲಿಪ್ಪನರಗೆ 1ಸತಿಸುತ ಹಿತಜನ ವಿತತವೃತ್ತಿಕ್ಷೇತ್ರವ್ರತತೀಜ ಯುಗಕೀವ ಮತಿಯುಳ್ಳ ನರಗೆ 2ಪಾತಕಕರ್ಮವ ಮಾಡಲೇನುಯಾತನಮಯಭವಪಾಥೋನಿಧಿಯೋಳನೀತಗುರುಜಗನ್ನಾಥವಿಠಲಗತಿಪ್ರೀತನಾದಗುರುದೂತನಾದವಗೆ3
--------------
ಗುರುಜಗನ್ನಾಥದಾಸರು
ಲಿಂಗ ಕಟ್ಟುವೆ ಯಾಕೋ ನೀ ಲಿಂಗಲಿಂಗಾಂಗವೆಲ್ಲವು ಸರ್ವಾಂಗ ಲಿಂಗಪಉಳಿಮುಟ್ಟದ ಲಿಂಗ, ಊರು ಮುಟ್ಟದ ಲಿಂಗತಿಳಿಯೆ ತಂದೆ ತಾಯಿಗಳಿಂದಾಗದ ಲಿಂಗಕುಲಕರ್ಣಿ ಕಂಚುಗಾರರಲಿ ಹುಟ್ಟದ ಲಿಂಗನಲಿಯತು ತನ್ನಿಂ ತಾನಾದ ಲಿಂಗ1ಏಕವಾಗಿಹ ಲಿಂಗ ಎಲ್ಲವು ತಾನಾದ ಲಿಂಗಸಾಕಾರವಾಗಿ ಸಂಚರಿಸುತಿರುವ ಲಿಂಗನಾಲ್ಕು ತನುವಿಗೆ ನಿಲುಕದ ಲಿಂಗಬೇಕೆಂದ ರೂಪಿಗೆ ಬಂದಂತ ಲಿಂಗ2ಏನು ತೋರದ ಲಿಂಗ ಎಡೆದೆರೆಪಿಲ್ಲದ ಲಿಂಗಧ್ಯಾನಕೆ ಮೌನಕೆ ನಿಲುಕದ ಲಿಂಗಜ್ಞಾನ ಮೂರುತಿ ಚಿದಾನಂದ ಲಿಂಗತಾನೆ ವಿಲಾಸದಿ ಬಂದಂಥ ಲಿಂಗ3
--------------
ಚಿದಾನಂದ ಅವಧೂತರು
ಲೊಳ್ಳ ಕಳ್ಳೊಟ್ಟೆ ಜಂಬಾಳಗಟ್ಟೆ ಸಂಸಾರ ನೋಡಮ್ಮಲೊಳ್ಳ ಕಳ್ಳೊಟ್ಟೆ ಸರಸನಂಬಲುಗತಿಯದು ಲೊಳ್ಳಟ್ಯಮ್ಮಮ್ಮಪಹೆಂಡಿರು ಮಕ್ಕಳು ತಂದೆ ತಾಯಿಗಳುಭಾಗ್ಯವು ಲೊಳ್ಳಟ್ಯಮ್ಮಮ್ಮಚಂಡ ಯಮದೂತರುಮಂಡೆತಿವಿವಾಗಬಿಡಿಸುವರಾರು ಇಲ್ಲಮ್ಮ1ಶ್ರೇಷ್ಠತೆ ಚೆಲುವಿಕೆ ವಸ್ತ್ರವು ಪ್ರಾಯವುಸಿದ್ಧಿಯು ಲೊಳ್ಳಟ್ಯಮ್ಮಮ್ಮದುಷ್ಟಮದೂತರು ದುಬುದುಬು ಬಡಿವಾಗಬಿಡಿಸುವರಾರು ಇಲ್ಲಮ್ಮ2ವಾರೆ ಮುಂಡಾಸವು ಗೀರು ಗಂಧಗಳುಪೋರತನವು ಲೊಳ್ಳಟ್ಯಮ್ಮಮ್ಮಘೋರ್ಯಮದೂತರು ಘರ್ಜಿಸುತ ಒಯ್ವಾಗಬಿಡಿಸುವರಾರು ಇಲ್ಲಮ್ಮ3ಕನಸಿನ ತೆರವಿದು ಸಂಸಾರವೆಂಬುದುಅನುಮಾನವಿದಕಿಲ್ಲಮ್ಮಮ್ಮಕನಸೆಂದು ನಿಶ್ಚೈಸೆ ಕಾಲನು ಬಾರನುಮನದಲಿ ತಿಳಿದುಕೊ ನೀನಮ್ಮ4ತನ್ನನು ಮರೆತು ಸಂಸಾರ ನೆಚ್ಚಲುತಿರುಗುವ ಜನ್ಮವ ನಮ್ಮಮ್ಮಚೆನ್ನ ಚಿದಾನಂದ ಗುರುವೆಂದು ನಂಬಲುಜನ್ಮವ ಕಳೆವುವು ತಿಳಿಯಮ್ಮ5
--------------
ಚಿದಾನಂದ ಅವಧೂತರು
ವಲ್ಲೀದೇವಿಯ ವಲ್ಲಭನೆಬಲ್ಲಿದಭಕ್ತರ ಸುಲ್ಲಭನೆಪ.ಸಲ್ಲಲಿತ ಪಾದಪಲ್ಲವ ಭಜಿಸುವ-ರೆಲ್ಲರ ಮನಸಿನೊಳುಲ್ಲಸನೆ ಅ.ಪ.ವೃಂದಾರಕಮುನಿವಂದಿತನೆಕಂದರ್ಪಾಮಿತಸುಂದರನೆಸ್ಕಂದನೆ ಸಚ್ಚಿದಾನಂದನೆ ಪಾರ್ವತೀ-ನಂದನ ಸದ್ಗುಣಮಂದಿರನೆ 1ತಾರಕದೈತ್ಯ ಸಂಹಾರಕನೆಸೇರಿದ ಭಕ್ತೋದ್ಧಾರಕನೆಮಾರಾರಿಯ ಸುಕುಮಾರನೆ ಧೀರನೆಚಾರುಮಯೂರ ತುರಂಗಮನೆ2ಲಕ್ಷುಮಿನಾರಾಯಣ ಪ್ರಿಯನೆರಕ್ಕಸರಿಂಗತಿದುಃಖದನೆಕುಕ್ಕುಟವಜ್ರಾಭಯಶಕ್ತಿಹಸ್ತನೆಪ್ರಖ್ಯಾತ ಪಾವಂಜಾಖ್ಯ ಪುರವರನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವೀರ ಹನುಮ ಬಹುಪರಾಕ್ರಮ - ಸುಜ್ಞಾನವಿತ್ತುಪಾಲಿಸಯ್ಯ ಜೀವರುತ್ತಮ ಪರಾಮದೂತನೆನಿಸಿಕೊಂಡಿನೀ - ರಾಕ್ಷಸರವನವನೆಲ್ಲ ಜಯಿಸಿ ಬಂದೇ ನಿ ||ಜಾನಕಿಗೆ ಉಂಗುರವಿತ್ತುಜಗತಿಗೆಲ್ಲ ಹರುಷವಿತ್ತುಜಾತಿಮಣಿಯ ರಾಮಗಿತ್ತುಲೋಕದಿ ಪ್ರಖ್ಯಾತನಾದೆ 1ಗೋಪಿಸುತನಪಾದಪೂಜಿಸಿ - ಗದೆಯ ಧರಿಸಿ |ಕೌರವರ ಬಲವ ಸವರಿಸಿ ||ದ್ರೌಪದಿಯ ಮೊರೆಯಕೇಳಿಕರುಣದಿಂದ - ತ್ವರದಿ ಬಂದುಪಾಪಿ ಕೀಚಕನನು ಕೊಂದುಭೀಮಸೇನನೆನಿಸಿಕೊಂಡೆ 2ಮಧ್ಯಗೇಹನಲಿ ಜನಿಸಿ ನೀ - ಬಾಲ್ಯದಲ್ಲಿಮಸ್ಕರಿಯ - ರೂಪಗೊಂಡೆ ನೀ ||ಸತ್ಯವತಿಯ ಸುತನ ಭಜಿಸಿ |ಸಮ್ಮುಖದಲಿ ಭಾಷ್ಯ ಮಾಡಿಸಜ್ಜನರನು ಪಾಲಿಸಿದ - ಪುರಂದರವಿಠಲನ ದಾಸ 3
--------------
ಪುರಂದರದಾಸರು
ವೃಂದಾವನದಲಿ ನಿಂತ ಸುಯತಿವರನ್ಯಾರೇ ಪೆÉೀಳಮ್ಮಯ್ಯ ಪವಂದಿಪ ಜನರಿಗೆ ನಂದ ಕೊಡುವೊ ರಾಘ -ವೇಂದ್ರ ಮುನಿವರನೀತ ನೋಡಮ್ಮ ಅ.ಪಇಂದಿರೆ ರಮಣನ ಛಂದದಿ ಭಜಿಸ್ಯಾ-ನಂದದಲಿಹನ್ಯಾರೇ ಪೇಳಮ್ಮಯ್ಯಾನಂದತೀರ್ಥಮತ ಸಿಂಧುವರಕೆ ಬಾಲ -ಚಂದಿರನೆನಿಸಿಹನ್ಯಾರೇ ಪೇಳಮ್ಮಯ್ಯಮಂದಜನವಹರಿ ಕಂದುಗೊರಳರವೃಂದದಿ ಶೋಬಿಪನ್ಯಾರೆ ಪೇಳಮ್ಮಯ್ಯಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ -ವೇಂದ್ರ ಗುರುವರ - ನೀತ ನೋಡಮ್ಮ 1ನತಿಸುವ ಜನರಿಗೆ ಸತಿಸುತರನು ಬಲುಹಿತದಲಿ ನೀಡುವನ್ಯಾರೇ ಪೇಳಮ್ಮಯ್ಯಪ್ರತಿದಿನ ತನ್ನನು ಮತಿಪೂರ್ವಕ ಬಲುತುತಿಪರ ಪಾಲಿಪನ್ಯಾರೇ ಪೇಳಮ್ಮಯ್ಯಮತಿಯುತಪಂಡಿತ ತತಿಯಭಿಲಾಷವಸತತ ಪೂರ್ತಿಪನ್ಯಾರೇ ಪೇಳಮ್ಮಯ್ಯಕ್ಷಿತಿಸುರರಿಗೆ ಸದ್ಗತಿದಾಯಕ ಮಹಯತಿಕುಲವರ ಗುರುರಾಯ ಕಾಣಮ್ಮ 2ಮಾತೆಯು ಸುತರಲಿ ಪ್ರೀತಿಗೊಳಿಸುವತಾತನ - ತೆರದಿಹನ್ಯಾರೇ ಪೇಳಮ್ಮಯ್ಯಪ್ರೇತನಾಥ ಮಹ ಭೂತಗಣಗಳಭೀತಿಯ ಬಿಡಿಸುವನ್ಯಾರೆ ಪೇಳಮ್ಮಯ್ಯಭೂತಳ ಜನಕೃತಪಾತಕಕಾನನವೀತಿಹೋತ್ರತೆರನ್ಯಾರೇ ಪೇಳಮ್ಮಯ್ಯದಾತಗುರು ಜಗನ್ನಾಥವಿಠಲ ನಿಜದೂತ ಜನಕ ಮಹದಾತನೀತಮ್ಮ 3
--------------
ಗುರುಜಗನ್ನಾಥದಾಸರು
ವೃಂದಾವನದಲಿನಿಂದುರಾಜಿಪನ್ಯಾರೆ ಪೇಳಮ್ಮಯ್ಯಪಬಂದ ಜನರಘ - ವೃಂದ ತಳೆದು ಅ -ನಂದವಕೊಡುವೊ ರಾಘವೇಂದ್ರ ಕಾಣಮ್ಮ ಅ.ಪಮತಿರಹಿತರಿಗೆಶುಭಮತಿಯನುವಿತತ ಮಹಿಮ ಗುರುವರ್ಯ ಕಾಣಮ್ಮ 1ಸೃಷ್ಟಿ ಜನಗಳಿಗಭೀಷ್ಟವ ನೀತಮ್ಮಾ 2ದಾತಗುರುಜಗನ್ನಾಥವಿಠಲಗತಿಪ್ರೀತಿಕರ ಯತಿನಾಥ ಕಾಣಮ್ಮ 3
--------------
ಗುರುಜಗನ್ನಾಥದಾಸರು