ಒಟ್ಟು 3006 ಕಡೆಗಳಲ್ಲಿ , 118 ದಾಸರು , 2126 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಕ್ಷಿಪ್ತ ವಿರಾಟಪರ್ವ ಕೇಳು ಜನಮೇಜಯರಾಜ ಭೂಮಿ- ಪಾಲ ಪಾಂಡವರ ಸತ್ಕಥೆಯಪ. ಭೂರಿ ವ- ನಾಳಿಯನು ಸಂಚರಿಸಿ ಸಜ್ಜನ ಕೇಳಿಯಲಿ ವನವಾಸದವಧಿಯ ಕಾಲವನು ಕಳೆಕಳೆದು ಬಂದರುಅ.ಪ. ದರ್ವೀಧರಹಸ್ತನಾಗಿ ಮಹಾ ಪರ್ವತದಂತುರೆ ಮಸಗಿ ನಿರ್ವಹಿಸಿ ಸೂದತ್ವವನು ಸಲೆ ಗರ್ವಿತಾಧಮ ಕೀಚಕನ ಕುಲ ಸರ್ವವನು ಸಂಹರಿಪ ಭೀಮ ಪೆ- ಸರ್ವಡೆದ ಗುರುವರ್ಯ ಬಂದನು 1 ಕಡುಗಲಿ ಕಲಿಮಲಧ್ವಂಸ ಎದ್ದು ನಡೆದು ಬಂದನು ಪರಮಹಂಸ ನಿಡುಕಿ ಮನದಿ ವಿರಾಟರಾಯನ ಪೊಡವಿಗಿಡೆ ಪದ ಕೀಚಕಾಖ್ಯನ ಎಡದ ಭುಜ ಕಂಪಿಸಿತು ಮೂಜಗ ದೊಡೆಯನುಡುಪತಿಕುಲಶಿಖಾಮಣಿ2 ಗಂಗಾದಿ ನದಿಗಳ ತೀರ ಪಟ್ಟ ಣಂಗಳ ಗೈದ ಸಂಚಾರ ತುಂಗಬಲ ಮಲ್ಲರುಗಳನು ಸಲೆ ಸಂಘಟಿಸಿ ಜೀಮೂತವೀರಪ್ಪ ಸಂಗದಲಿ ವೈರಾಟಪುರ ರಾ ಜಾಂಗಣಕೆ ಭದ್ರಾಂಗ ಬಂದನು3 ಇಂತು ಮಲ್ಲರನೆಲ್ಲ ಸದೆದು ಬಲ ವಂತರಿರಲು ನೃಪಗೊಲಿದು ಸಂತಸವ ಬಡಿಸುತ್ತಲಿರಲ್ವಾ ಕುಂತಿತನಯರು ಹರಿಯ ನಾಮವ ಚಿಂತಿಸುತ ದಶಮಾಸ ಕಳೆದಾ ನಂತರದ ವೃತ್ತಾಂತವೆಲ್ಲವ4 ಕಥೆಯಂತೆ ಹಿಂದೆ ರಾವಣನ ಕೆಟ್ಟ ಗತಿಗನುಚರ ಕೀಚಕನ ಸ್ಥಿತಿಯು ದ್ರುಪದಜೆಗಾದ ಮಾನ ಚ್ಯುತಿಗೆ ಕಾರಣನಾದ ಜಡ ದು- ರ್ಮತಿ ಖಳಾಧಮನೊಂದು ದಿನ ನೃಪ ಸತಿಸಭೆಗೆ ಅತಿ ಹಿತದಿ ಬಂದನು5 ಪಾಪಿ ಕೀಚಕನಿಗಿಂತುಸುರಿ ದ್ರುಪದ ಭೂಪಾಲಕನ ಕಿಶೋರಿ ಶ್ರೀಪತಿಯ ನಾಮವನು ಸ್ಮರಿಸುತ- ಲಾ ಪತಿವ್ರತೆ ತೊಲಗಲಂಗಜ ತಾಪತಪ್ತಾಂತಃಕರಣ ನಾ ಪರಿಯ ಮತಿ ವ್ಯಾಪಿಸಿದನು6 ಲಾಲಿಸಿ ಮಾಲಿನಿವಚನ ತೋಷ ತಾಳಿದ ದುರ್ಗುಣಸದನ ಕಾಲಪಾಶದಿ ಬಿಗಿವಡೆದು ಹೇ- ರಾಳ ಮುದಕೀಲಾಲ ಸಲೆ ಕ- ಲ್ಲೋಲಜಾಲದಿ ಮುಳುಗಿ ನರ್ತನ ಶಾಲೆಗಾಗಿ ಕರಾಳ ಬಂದನು7 ಮಥಿಸಿ ಕೀಚಕನ ಮಂಟಪದಿ ದ್ರುಪದ ಸುತೆಗೆ ತೋರಿಸಲತಿ ಮುದದಿ ಸತಿಶಿರೋಮಣಿ ಕಂಡು ಮನದೊಳ- ಗತುಳ ಹರುಷವನಾಂತು ಸರ್ವೋ ನ್ನತಭುಜನ ಚುಂಬಿಸಿದಳು ಪತಿ ವ್ರತೆಯರ ಶಿರೋರತುನೆ ಪಾವನೆ8 ಇತ್ತ ವಿರಾಟನಗರದ ಸರ್ವ ವೃತ್ತಾಂತವೆಲ್ಲವ ತಿಳಿದ ಧೂರ್ತ ದುರ್ಯೋಧನ ದುರಾಗ್ರಹ ಚಿತ್ತಗ್ರಹಿಸಿದ ಕಾರ್ಯಕಾರಣ ವೃತ್ತಿಯಲ್ಲಿ ಪಾಂಡವರು ನಿಜವೆಂ- ದಾಪ್ತಜನರೊಳು ವಿಸ್ತರಿಸಿದನು9 ಕರ್ಣ ದ್ರೋಣ ಕೃಪಾ ದ್ಯರು ಕೂಡಿ ಕುಜನಪ್ರವೀಣ ಪೊರಟ ಪರಮೋತ್ಸಾಹ ಸಾಹಸ ಭರತಿ ಕೌರವರಾಯ ಮತ್ಸ್ಯನ ಪುರವರ ಸಮೀಪದಿ ಸುಶರ್ಮನ ಕರೆದೊರೆದ ಭೂವರ ನಿರ್ಧರ10 ನುಡಿಯ ಕೇಳುತಲಿ ಸುಶರ್ಮ ನಿಜ ಪಡೆಯ ನೆರಹಿ ವೈರಿವರ್ಮ ದೃಢಕರಿಸಿ ದಿನಮಣಿಯು ಪಶ್ಚಿಮ- ಕಡಲ ಸಾರುವ ಸಮಯ ಗೋವ್ಗಳ ಪಿಡಿದು ಗೋಪರ ಕೆಡಹಿ ಬೊಬ್ಬಿ- ಟ್ಟೊಡನೊಡನೆ ಪಡಿಬಲವನರಸಿದ11 ಹಾರಿಸಿದನು ರಥ ಪಾರ್ಥ ನರ ನಾರಿವೇಷದ ಪುರುಷಾರ್ಥ ತೋರಿಸುವೆನೆಂಬುತ್ಸಾಹದೊಳು ಬ್ಬೇರಿ ಮನದೊಳು ಕೃಷ್ಣನಂಘ್ರಿಸ- ರೋರುಹಕೆ ಮಣಿದುತ್ತರನ ಸಹ ಸೇರಿ ನಗರದ್ವಾರ ದಾಟಿದ12 ಭೀತಿಯ ಬಿಡು ಬಾರೆಂದು ಪುರು ಹೂತಸುತನು ಎಳತಂದು ಘಾತಿಸುವೆ ರಿಪುಬಲವನೆಂದು ವ- ರೂಥದಲಿ ಕುಳ್ಳಿರಿಸಿ ನೃಪತನು ಜಾತಸಹ ಪಿತೃವನದ ಮಧ್ಯ ಶ- ಮೀತರುವಿನೆಡೆಗೋತು ಬಂದರು13 ಇಂತು ತಿಳಿಸುತಲರ್ಜುನನು ಬಲ ವಂತನು ಧನುಶರಗಳನು ತಾಂ ತವಕದಿಂ ಧರಿಸಿ ವಿಜಯ ಮ- ಹಾಂತ ವೀರಾವೇಶಭೂಷಣ ವಾಂತು ಶಂಖನಿನಾದದಿಂ ರಿಪು ತಿಂಥಿಣಿಯ ಭಯಭ್ರಾಂತಗೊಳಿಸಿದ 14 ಹೂಡಿ ಬಾಣವನುರ್ಜುನನು ಚೆಂ- ಡಾಡಿದ ರಿಪುಬಲವನ್ನು ಮೂಢ ದುರ್ಯೋಧನನ ಕಣೆಗಳ ಜೋಡಣೆಗಳಿಂ ಬಿಗಿದು ತನ್ನೋಶ ಮಾಡಿಕೊಂಡನು ಗೋಪಗೋವ್ಗಳ ನಾಡಲೇನದ ಪ್ರೌಢತನವನು15
--------------
ತುಪಾಕಿ ವೆಂಕಟರಮಣಾಚಾರ್ಯ
ಸಖ್ಯವ್ಯಾಕೆ ಮುಖ್ಯ ಸ್ವಹಿತ ಹೇಳದನಕ |ಮಕ್ಕಳು ಯಾಕೆ ಪಿತೃಗಳ ಆಜ್ಞೆಯ ನಡೆಸದನಕ ಪ ದಾತನ್ಯಾಕೆ ಬಯಕೆ ಪೂರ್ಣ ಮಾಡದನಕ | ಬರಿ |ಮಾತು ಯಾಕೆ ಸ್ಥಿತಿಯ ಲೇಶ ಇಲ್ಲದನಕ 1 ಸಂತನ್ಯಾಕೆ ಶಾಂತಿ ನೆರಳು ಹಿಡಿಯದನಕ | ತನು |ಕಂಥೆಯಾಕೆ ಶಿವಪದಕ್ಕೆರಗೋ ತನಕ 2 ನೇಮವ್ಯಾಕೆ ಹೃದಯ ಶುದ್ಧವಾಗದ ತನಕ | ಶಿವನ |ನಾಮವ್ಯಾಕೆ ನಾಮರೂಪ ಅಳಿಯದ ತನಕ 3 ತುಂಬಿ ತುಳುಕದ ತನಕ 4 ಜಾಣನ್ಯಾಕೆ ಸಮಯ ಉಚಿತ ಅರಿಯದ ತನಕ | ಬರಿಗಾನವ್ಯಾಕೆ ಸ್ವರದ ಲಯವ ಧರಿಸದ ತನಕ 5 ಧರ್ಮವ್ಯಾಕೆ ಸಮಯ ಕಾಲಕ ಒದಗದ ತನಕ | ಸ- |ತ್ಕರ್ಮವ್ಯಾಕೆ ದಂಭತನವು ದಹಿಸದನಕ 6 ಧನ ವಿದ್ದ್ಯಾತಕೆ ಶರಣರಡಿಗೆ ತರದನ್ನಕ | ಈಮನ ವಿದ್ದ್ಯಾಕೆ ತನ್ನ ಉಗಮ ಸೇರದನ್ನಕ7 ಶಿಷ್ಯನ್ಯಾತಕೆ ಗುರುಗಳ ಹೃದಯ ತಿಳಿಯದನ್ನಕ | ಸರಸಭಾಷ್ಯವ್ಯಾತಕೆ ಶ್ರುತಿಯ ಗರ್ಭ ಉಸುರದನ್ನಕ 8 ಜ್ಞಾನವ್ಯಾಕೆ ಜ್ಞೇಯಗುರಿತವರಿಯದನಕ | ಬರಿ |ಧ್ಯಾನವ್ಯಾಕೆ ಚಿತ್ತವೃತ್ತಿ ಮರೆಯ ದನಕ 9 ಆರಾಮವ್ಯಾಕೆ ದುಃಖಸೀಮಿ ದಾಂಟದನಕ | ಶಿ- |ವರಾಮನ್ಯಾಕೆ ಪೂರ್ಣ ಸುಖದೊಳಾಡದ ತನಕ 10
--------------
ಶಿವರಾಮರು
ಸಂಗಮಾಡೆಲೋ ಶ್ರೀಹರಿ ದಾಸರಾ ಹಿಂಗಿ ಹೋಹುದು ತಾಭವದಾಸರಾ ಮಂಗಳ ಮಂಗಳಾತ್ಮಕ ಕೈಗೂಡಿ ಬಾಹನು ಅಂಗಜ ಜನಕ ಸಚತುರ್ಬಾಹನು 1 ಅವರ ವಾಕ್ಯ ಸುಧಾರಸ ಪಾನವಾ ಶ್ರವಣದಿಂದಲಿ ಮಾಡೆಲೊ ಪಾನವಾ ಭವದ ಜನ್ಮ ಜರಾಲಯ ಜಾರುವೀ ತವಕದಿಂದ ಚಿತ್ಸುಖ ಸೇರುವಿ 2 ಹಲವು ಸಾಧನಭರಿಗೆ ಬೀಳದೇ ಕಲಿತ ವಿದ್ಯತ್ವ ಗರ್ವವ ತಾಳದೇ ಬಲಿದು ಭಕ್ತಿಯ ಹೋಗದೆ ಸಿಂತರಾ ನೆಲಿಯ ಕೇಳೆಲೋಭಾವದಿ ಸಂತರಾ 3 ಮರಹು ಕತ್ತಲಿವೆಂಬುದು ಹಾರಿಸೀ ಅರಿಗಳಾರರೆ ಸಂಕಟ ಹಾರಿಸೀ ಅರಹು ಭಾಸ್ಕರ ತೋರುವ ಬೋಧಿಸಿ ಹೊರವ ಸಜ್ಜನ ಸಂಗವ ಸಾಧಿಸಿ 4 ನೆಲಿಯ ಹೊಂದುವ ಪರಿಯನಿಲ್ಲದೇ ಸುಲಭಸಾಧನ ತೋರಿಪರಲ್ಲದೇ ಬಳಲುವಾಬಾಹಳ ಸಾಪೇಳರು ಬಲಿದು ಪಾಯವ ಸಂತರ ಕೇಳರು 5 ಹರಿಕಥಾ ಮೃತಸಾರಸ ಪೇಳುತಾ ದುರಿತ ದುಷ್ಕøತ ತರುಗಳ ಶೀಳುತಾ ಪರಮ ಭಕ್ತಿಯ ಭಾಗ್ಯವ ಕುಡುವರು ಅರಿತು ಸಂತರ ಸಂಗವ ಬಿಡುವರು 6 ಏಳು ಭೂಮಿಕಿ ಮಾರ್ಗವ ತೋರಿಸಿ ಮಾಲ ಚಿತ್ಸುಖ ಮಂದಿರ ಸೇರಿಸಿ ಕಾಲಕರ್ಮದ ಕೋಟಲೆ ವಾರಿಸೀ ಪಾಲಿಸುವರು ಭವದಿಂತಾರಿಸಿ 7 ಸಂಗದಿಂ ಚಂದನಾಹದು ಪಾಮರಾ ಜಂಗಮೊತ್ತಮನಾಗನೇಪಾಮರಾ ಅಂಗದಿಂಮಾಡು ಸಂತರ ವಂದನಾ ಇಂಗಿಥೇಳಿದ ಮಹಿಪತಿ ನಂದನಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂಜೀವವರಾಯ ಪೊರೆವುದು | ಆಂಜನೇಯ ಭವ ಭಂಜನ ಭಯಹರ ಪ ಶ್ರೀರಘುವರನಾಜ್ಞೆಯಿಂ | ವಾರಧಿಯನು ಲಂಘಿಸಿ ಸಾರಿ ಕುಶಲ ವೈದೇಹಿ ಹರುವಿ | ಕ್ರೂರರಾವಣನ ಪುರವನುರವಿದ 1 ಗೋಪತಿ ಕುಲದೀಪಿಕಾ | ದ್ರೌಪದಿ ಮನೋನಾಯಕ ಪಾಪಾತ್ಮಕ ಭೂಪಾಲರಳಿದಗುರು 2 ಶ್ರೀ ಮಹಾಕಲಿಕಾಲದಿ | ನೀ ಮುದಮುನಿ ನಾಮದಿ ಭೂಮಿಯಲ್ಲಿ ಡಂಗುರವಸಾರಿದ 3
--------------
ಶಾಮಸುಂದರ ವಿಠಲ
ಸಣ್ಣವನೆ ಘನಲೀಲಾ|ಗೋಪಿ|ಸಣ್ಣವನೆ ಘನಲೀಲಾ ಪ ಶಿಶುವೆಂದು ಪೂತನಿ ಮೊಲೆಯನು ಕೊಟ್ಟರೆ| ಕಾಲ ಗೋಪಿ 1 ಚರಣವ ಕಟ್ಟಲು ಒರಳೆಳೆದೊಯ್ದಾ| ಮರಗಳ ಕೆಡಹಿದ ಬಾಲ2 ತಂದೆ ಮಹಿಪತಿ ಪ್ರಭು ನರನೆಂಬರೆ| ಪತಿ ಗೋಪಾಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತತ ನಿನ್ನ ಭಜನೆಯಲ್ಲಿ ಹಿತವ ಪೊಂದಿಸೊ ದೇವ ಪ ಅತುಲ ಮಹಿಮೆಗಳಲ್ಲಿ ಎನ್ನ ಮತಿಯ ಸೇರಿಸೊ ಶ್ರೀಪತೆ ಅ.ಪ ಕಾಲ ಕಳೆಯಿತೊ ದೇವ ನಾಳೆ ನಾಳೆಯೆಂದು ನಿನ್ನ ಪೊಗಳಲಿಲ್ಲವೊ ದೇವ 1 ಯೋಚಿಸದೆಲೆ ನಿನ್ನ ದೈನ್ಯದಿ ನೀಚ ಜನರಲಿ ನಾನು ಕರವ ಯಾಚಿಸುತ್ತ ಶೋಚನೀಯನಾದೆನೊ 2 ಸ್ಥೈರ್ಯದಿಂದ ಮನವು ನಿನ್ನೊಳು ಸೇರದಿರುವುದೋ ದೇವ ಮಾರ ಜನಕನೆ 3 ಕಾಮಕ್ರೋಧದಿಂದ ವಿಷಯ ಪ್ರೇಮಗಳಲಿ ನಾ ನಿನ್ನ ನಾಮ ಮರೆತು ಬಳಲಿದೆನೊ ಕಾಮಿತಪ್ರದ 4 ಸಣ್ಣ ಜನರ ನಡೆನುಡಿಗಳಿಂ ಖಿನ್ನನಾದೆನೊ ದೇವ ಎನ್ನಮೇಲೆ ಕರುಣದಿಂದ ಪ್ರಸನ್ನನಾಗೆಲೊ ದೇವ 5
--------------
ವಿದ್ಯಾಪ್ರಸನ್ನತೀರ್ಥರು
ಸಂತರ ಸಹವಾಸ ಮಾಡು ಮನುಜ ನೀ | ಭ್ರಾಂತ ಜನರ ಸಂಗ ವೀಡ್ಯಾಡು | ಅಂತರಂಗದಲಿ ಸುಖವ ಸೂರ್ಯಾಡು | ಅ | ನಂತನ ನಾಮವ ಕೊಂಡಾಡು ಪ ದಾವ ಗ್ರಾಮದಲ್ಲಿ ಧನ ಧಾನ್ಯ ಬನವು | ತೀವಿಕೊಂಡಿಹ ಸಂದಣಿ ಜನವು | ಆವೂರೊಳಿಲ್ಲದಿರೆ ಸಂತರನವು | ನೀ ವಾಸ ಮಾಡಬ್ಯಾಡ ಅರಕ್ಷಣವು 1 ಎಲ್ಲಿ ನೋಡಲು ದಿವ್ಯ ಪಟ್ಟಣಲ್ಲಾ | ಚಲ್ಪಗೋಪುರ ಮನುಧೊರೆರಿಲ್ಲಾ | ಅಲ್ಲಿ ಸಾಧುರ ನರಹಳಿದಲ್ಲಾ | ನಿಲ್ಲು ಕಾಲೂರಿ ಸುಖವಿಹುದೆಲ್ಲಾ 2 ಅವರಿದ್ದುದೆ ಸ್ಥಳ ವಾರಣಾಸೀ | ಅಚರ ದರುಶನ ಪುಣ್ಯದ ರಾಶೀ | ಅವರ ನೆರೆಯಲ್ಲಿ ಸ್ವರ್ಗ ಸುಖದಾಶಿ | ಈ ವಾಕ್ಯ ಮಹಿಪತಿ ಜ ನಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ಪ ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ವ್ಯಾಸ ವಿದ್ಯಾಧೀಶರೂ 1 ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ ನೋದ ಸತ್ಯಪ್ರಿಯರೂ ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ ಲ್ಲಾದ ರಾಘವೇಂದ್ರರು 2 ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ ಯೋಗಿ ಶ್ರೀಪಾದರಾಯರ ಪೀ ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ ಸಾಗಿ ಎಣಿಸಿ ಕೊಂಡಾಡಿ ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ ವೇಗದಿಂದಲಿ ಮಹಸಂತರಿಗೆ ಶಿರ ನಿತ್ಯ 3 ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ ರತ್ರಯವನೇ ಬಯಸುವ ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ ರಿತ್ರಾರಾ ಮಹಿಮೆ ಕೊಂಡಾಡಿದವರ ವಿ ಚಿತ್ರವನು ಪೊಗಳುವ ದಾಸದಾಸಿಯರ ಪದ ಸ್ತೋತ್ರ ಮಾಡಿರೋ ಆವಾಗ 4 ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು ಮೃದು ಪಂಚರತ್ನದಲಿ ನಿರ್ಮಿತವಾಗಿದೆ ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ ಪದರೂಪದಲ್ಲಿ ಧರಿಸಿ ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ ಹೃದಯರ ಬಳಿ ಸೇರಿ ಜ್ಞಾನ ಸಂಪಾದಿಸಿ ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ ವದನದಿಂದಲಿ ಸವಿದುಂಬ 5
--------------
ವಿಜಯದಾಸ
ಸತಿ | ಹರಿ ಸ್ತುತಿಯ ಮತಿಈಯೆ ಪಾರ್ವತಿಯೇ || (ಮನ ಕಲ್ಮಷವ ಕಳೆಯೆ) ಪ ಮೃಡ ಪ್ರಿಯೆಳೆ ಪಾಹಿ 1 ಸತಿ | ಅಂಬೆ ಶಚಿಪತಿಬಿಂಬೆ ಹರಿಯನು | ಕಾಂಬ ಸುಜ್ಞಾನ ||ಉಂಬ ಉಡುವದ | ಕೊಂಬ ಕೊಡುವದ ಬಿಂಬ ಕ್ರಿಯೆಗಳ | ಹಂಬಲವ ಕೊಡು 2 ಸರ್ವ ಮಂಗಳೆ | ದರ್ವಿ ಜೀವಗೆನಿರ್ವಿಕಾರನ | ದುರ್ವಿಭಾವ್ಯನನ ||ಸರ್ವೇಶ ಗುರು | ಗೋವಿಂದ ವಿಠಲನಸರ್ವಕಾಲದಿ | ಸ್ಮರಣೆ ಸುಖ ಕೊಡು 3
--------------
ಗುರುಗೋವಿಂದವಿಠಲರು
ಸತ್ತು ಚಿತ್ತಾನಂದ ಭಕ್ತಜನಬೆಂಬಲನೆ ಸತ್ಯಾತ್ಮ ಸರ್ವೋತ್ತಮ ಪ ಮೃತ್ಯುಸಂಹರ ಸರ್ಗಮತ್ರ್ಯಪಾತಾಳತ್ರಯ ಶೌರಿ ಅ.ಪ ಬದ್ಧಕುಲಹರಣ ಗೋವರ್ಧನೋದ್ಧಾರ ಕ್ಷೀ ರಾಬ್ಧಿ ಕನ್ನಿಕಾರಮಣ ಬದ್ಧಸಂಸಾರದೊಳಗೆ ಬಿದ್ದು ಬಳಲುವ ಎನ್ನ ನುದ್ಧರಿಸು ದಯಭೂಷಣ ಬಿದ್ದೆ ನಿಮ್ಮಯಪದಕೆ ಮಧ್ವಮುನಿಪ್ರಿಯನೆ ಪರಿ ಶುದ್ಧನೆಂದೆನಿಸೆನ್ನ ಶುದ್ಧಪದ್ಧತಿಗಳನು ತಿದ್ದು ಎನ್ನೊಳಗಿದ್ದು ಶುದ್ಧಚೈತನ್ಯರೂಪ ಭೂಪ 1 ಕಪಟಬುದ್ಧಿಯ ಕಳೆದು ಅಪರೂಪ ನಿಜಜ್ಞಾನ ಕೃಪೆಮಾಡು ಭಕ್ತಲೋಲ ಅಪರೋಕ್ಷಮತಿ ನೀಡಿ ಅಪಮೃತ್ಯು ಪರಿಹರಿಸು ಅಪರಿಮಿತ ಮಹಿಮ ಜಾಲ ಸುಫಲದಾಯಕ ನಿಮ್ಮ ಜಪವೆನ್ನ ಜಿಹ್ವೆಯೊಳು ಸ್ಥಾಪಿಸೈ ಭಜಕಜನಪಾಲ ಕಪಿವರದ ವನಮಾಲ ಕಪಟಗಳಕುಲಕಾಲ ಕೃಪಾದೃಷ್ಟಿನೀಡೆನ್ನೊಳು ಕೇಳು 2 ಭ್ರಷ್ಟನು ಇವನೆಂದು ಬಿಟ್ಟಿ ಬೇಸರ ಬೇಡ ಮುಟ್ಟಿಭಜಿಪೆ ತವಪಾದವ ಎಷ್ಟು ತಪ್ಪಿರ್ದರು ಸುಟ್ಟು ಸಫಲೆನಿಸೆನ್ನ ಕೆಟ್ಟ ಬವಣೆ ಕಳಿಯಭವ ಹುಟ್ಟಿ ಸಾಯುವ ಮಹಕೆಟ್ಟ ಕಷ್ಟದ ಹಾದಿ ಕಟ್ಟುಮಾಡು ಹೇ ಮಾಧವ ದಿಟ್ಟ ಶ್ರೀರಾಮ ಎನ್ನ ಇಷ್ಟದೇವರು ನೀನೆ ಶಿಷ್ಟ ಸಜ್ಜನರ ಪ್ರೇಮಿ ಸ್ವಾಮಿ 3
--------------
ರಾಮದಾಸರು
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ. ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ 1 ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ 2 ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ಮøತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ 3
--------------
ವ್ಯಾಸವಿಠ್ಠಲರು
ಸತ್ಯಂಬೋಧರ ಸ್ಮರಣೆ ನಿತ್ಯಮಾಡುಅತ್ಯಂತ ಕರುಣಾಳು ಅ'ುತ ಮ'ಮಾವಂತ ಪಸತ್ಯಬೋಧರ ಸ್ಮರಣೆ ನಿತ್ಯದಲಿ ಮಾಡಿದರೆ'ಷ್ಣು ಸರ್ವೋತ್ತಮದ ಜ್ಞಾನ ಪ್ರಾಪ್ತಿಕಷ್ಟಗಳ ಪರಿಹರಿಸಿ ಇಷ್ಟಾರ್ಥಗಳ ಕೊಟ್ಟುಭಕ್ತಿ ವೈರಾಗ್ಯ ಭಾಗ್ಯವನು ಕೊಡುವಾ 1ಸತ್ಯಪ್ರಿಯತೀರ್ಥರ ಕರಕಮಲದಿಂ ಜನಿಸಿಉತ್ತರಾದಿಮಠದ ವೈಭವವ ಬೆಳಿಸಿ'ಷ್ಣು ಸರ್ವೋತ್ತಮತ್ವದ ತತ್ವಜಯಭೇರಿಎತ್ತ ನೋಡಿದರತ್ತ ಸತ್ಯಬೋಧರಕೀರ್ತಿ 2ಪಾಪಿಷ್ಠರಿಂದ ಆಪತ್ತು ಜೀವಕೆಬಂತುಸಂಚಾರ ಕೆಲಕಾಲ ಸಂಕಟಮಯವಾಯ್ತುಶಾಪಾನುಗ್ರಹಶಕ್ತರಾದ ಶ್ರೀಪಾದರುಭೂಪತಿ'ಠ್ಠಲನ ಅಪರೋಕ್ಷ ಪಡೆದವರು 3
--------------
ಭೂಪತಿ ವಿಠಲರು
ಸತ್ಯಭೋಧ ಯತಿಕುಲವರನೆ ನಿತ್ಯ ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ ಅರ್ಥಿಜನ ಚಿಂತಾಮಣಿ ಸತ್ಕರುಣಿ ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ ಖ್ಯಾನ ಪೇಳುವ ಕಾಲದಿ ಶ್ವಾನರೂಪದಿ ಪವಮಾನ ಜನರು ನೋಡೆ ಕಾಣಿಸಿಕೊಂಡನಂದೊ ತಾ ಬಂದು 1 ಬವರಗೋಸುಗ ಬಂದ ಯವನಾಧಿಪತಿ ನಿಮ್ಮ ಸುವಿಚಿತ್ರ ಮಹಿಮೆ ಕಂಡು ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ ಕವಿ ಆವಾ ವಿಭವಾ ವರ್ಣಿಸುವಾ 2 ಇವರು ದೇವಾಂಶರೆಂದರುಪುವಗೋಸುಗ ಬಂದು ದಿವಿಜತರಂಗಿಣಿಯು ಶಿವನಂಗಭೂರುಹ ಮೂಲ ಭಾಗದಲಿ ಉ ದ್ಭವಿಸಿ ಕಂಗೊಳಿಸಿದಳು ಕೃಪಾಳು 3 ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ ವಂತನಂಘ್ರಿ ಕಮಲ ಸಂತತ ಸರ್ವತ್ರ ಚಿಂತಿಸುತಿಪ್ಪ ಮ ಹಾಂತರಿಗೇನಚ್ಚರೀ ವಿಚಾರ 4 ಚಾರು ಚರಿತ ಭೂ ಸುರವರ ಸನ್ನುತನೇ ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
--------------
ಜಗನ್ನಾಥದಾಸರು
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ ಪ ಕಾಲ ಬದುಕಲ್ಯಾತಕೆಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ 1 ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆನೀತಿಯರಿತು ನಡೆಯದಿರುವ ಬಂಟನ್ಯಾತಕೆಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ 2 ಸನ್ನೆಯರಿತು ನಡೆಯದಿರುವ ಸತಿಯು ಯಾತಕೆಮನ್ನಣಿಂದ ನಡೆಸದಿರುವ ದೊರೆಯು ಯಾತಕೆಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ 3
--------------
ಕನಕದಾಸ
ಸತ್ಯವರ ಮುನಿಪ ದಿಕ್ಷತಿಗಳಂತೆ ನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ ಪ ಸಿಂಧೂರವೇರಿ ದೇವೇಂದ್ರನಂತೊಪ್ಪುವನು ವಂದಿಪ ಜನರಘಾಳಿವನ ಕೃಶಾನು ಮಂದ ಜನರಿಗೆ ದಂಡ ಧರನಂತೆ ತೋರ್ಪಕ ರ್ಮಂದಿಪನು ನರವಾಹನವೇರಿ ನಿಋಋತಿಯೆನಿಪ 1 ಜ್ಞಾನಾದಿ ಗುಣದಿ ರತ್ನಾಕರನೆನಿಪ ಶೈವ ಜೈನಾದಿಮತ ಘನಾಳಿಗೆ ಮಾರುತಾ ದೀನ ಜನರಿಗೆ ಧನದನಾಗಿ ಸಂತೈಪ ವ್ಯಾ ಖ್ಯಾನ ಕಾಲದಿ ಜಗತ್ತೀಶನೆಂದೊರೆವಾ 2 ಶ್ರೀಮದ್ರಮಾಪತಿ ಜಗನ್ನಾಥ ವಿಠಲ ಸ್ವಾಮಿ ಪಾದಾಬ್ಜ ಭಜನಾಸಕ್ತನಿವ ಧೀಮಂತ ಗುರು ಸಾರ್ವಭೌಮ ಭೂ ಸುರನುತ ಮಹಾ ಮಹಿಮ ಪೊಗಳಲೆನ್ನೊಶವೇ ಕರುಣಾ ಸಿಂಧು3
--------------
ಜಗನ್ನಾಥದಾಸರು