ಒಟ್ಟು 5292 ಕಡೆಗಳಲ್ಲಿ , 123 ದಾಸರು , 3484 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾವನೀ ಆವಹಿ ಮಾಂ ಪ ಪಾವನಿ ಪಾತಕಾರಣ್ಯ ಮಹಾ ಪಾವಕÀ ನೀನಾದ್ಯೊ ಘನ್ನ ಆಹಾ ಆವಕಾಲದಲ್ಲಿ ಭಾವಜಜನಕನ ಸೇವೆಯೊಳಿರುವಂಥ ಭಾವ ಪಾಲಿಸೊ ದೇವ ಅ.ಪ ಪ್ರಾಣಾದಿ ಪಂಚರೂಪಕನೆ ಸುರ ಗಣ ಕರಾರ್ಚಿತ ಪಾದಯುಗನೆ ಗುಣ ಗಣನಿಧಿ ಬಾರತೀಧವನೇ ಜಗ ತ್ರಾಣ ಕಾರಣನೆ ಮಾರುತನೇ ಆಹಾ ಚಾರು ಚ ರಣ ವಂದಿಪೆ ಜಗತ್ಕಾರಣಕರ್ತನೇ 1 ಖದ್ಯೋತ ಶತ ನಿಭ ಚರಣಾ ಅನಾದ್ಯ ಹರಣ ಸದ್ಯ ವಿದ್ಯೋತ ವೇದಾಂತಾಭರಣಾ ಅನ ವಧ್ಯ ಸ್ವಭಕ್ತಾಂತಃ ಕರಣಾ ಆಹಾ ವಿದ್ಯಾರಮಣ ನೀನೆ ಸದ್ಯೋಜಾತಗೆ ಸು ವಿದ್ಯಾ ಪೇಳಿದ್ಯೋ ಪ್ರದ್ಯುಮ್ನನ ತೋರಿಸೋ 2 ಶ್ರೀನಾಥನಿಗೆ ಪ್ರತೀಕಾ ಬಾಲ ಭಾನುಕೋಟಿ ಪ್ರಕಾಶಾ ಏನು ಕರುಣಾಳೊ ಭಕ್ತಾಭಿsಲಾಷಾ ಅನು ಸಾರದಿ ಪೂರ್ತಿಪ ಈಶಾ ಆಹಾ ಹನುಮದಾದಿರೂಪ ಘನವಾಗಿ ಧರಿಸಿ ನೀ ವನಧಿ ಲಂಘಿಸಿ ಹರಿ ವನಿತೆಯ ತಂದಿತೆÀ್ತ 3 ಸೂತ್ರನಾಮಕ ಶುಭಗಾತ್ರಾ ಚಿತ್ರ ಚಂiÀರ್i ಪಿತಾಮಹಪುತ್ರಾ ಗೋತ್ರ ಧರಮುಖ ದ್ಯು ಸ್ವಕÀಲತ್ರಾ ಮಿತ್ರ ತಾಡನ ಹರ್ತ ಅರ್ಥಗಾತ್ರಾ ಆಹಾ ಸುತ್ರಾಮ ಮುಖ ತ್ರಿನೇತ್ರಾಂತ ಸುರಕೃತ ಸ್ತೋತ್ರ ಪದಾಂಬುಜ ಮದಂತ್ರದಿ ನಿಲಿಸಯ್ಯಾ 4 ಘೋಟ ಖೇಟ ಕಂಠೀರವ ವದನಾ ಭವ ಕಾಟ ತಪ್ಪಿಸಿ ಪೊರಿ ಎನ್ನಾ ಕಿಟ ಮ ರ್ಕಟ ರೂಪನೆ ನಿನ್ನಾ ಭಕ್ತ ಕೋಟಿಯೊಳಗೆ ಸೇರಿಸೆನ್ನಾ ಆಹಾ ದಿಟ್ಟ ಮಹಿಮ ಗುರು ಜಗನ್ನಾಥ ವಿಠಲನ್ನ ಮುಟ್ಟ ಭಜಿಪ ದಿವ್ಯ ದÀೃಷ್ಟಿಯ ಪಾಲಿಸೋ 5
--------------
ಗುರುಜಗನ್ನಾಥದಾಸರು
ಪಾವಮಾನಿಯೆ ತವ | ಯಾವ ಮಹಿಮೆಯೊಳೇಕಭಾವ ಪೊಗಳಲು ಆವ | ದೇವತೆಗಳಿಗಳವೇ ಪ ಶ್ರೀವರನಂಘ್ರಿಯ | ಸೇವೆಗೈವಲಿ ಬಹು | ಧಾವಿಸೀ |ಬಹು ಎಚ್ಚರದಿ ಸೇವಿಸೀ ||ನಿರುತ ಭಕ್ತಿಯ | ಭಾವದಲಿ ದುರಿ | ತಾವಳಿ ವಿಭಾವಸುನೀ ವೊಲಿದು ಭೃ | ತ್ಯಾವಳಿಯ ಪಾಲಿಪೆ | ಸಾರ್ವಕಾಲ ಮ-ತ್ತೋರ್ವರಿಲ್ಲವೊ | ದೇವರೊತ್ತಮ | ದೇವ ನೀನೇ ಅ.ಪ. ಸೂರ್ಯ ಮೋಚನ |ಆಶಿಸುತಲಿ ಹಾರಿ | ದೋಷವ ಕಳೆಯಲು | ಯತ್ನೀಸೆ ಆ ಸುಮಹದಾಕಾರ ಶೃಣಗೈದೀವಾಸವನು ನಿನ ಘಾತಿಸಲು ಕುಲಿಶದೀ ಅದಕಂಡು ತವ ಪಿತಶ್ವಾಸಗಳ ಬಲು ಪರಿಯ ರುದ್ಧಿಸಲು | ಮೂರ್ಲೋಕ ತಪಿಸೇಅಸುರರು ವಿಧಿವಿಧದಿ ಮೊರೆ ಇಡಲೂ | ಆಲೈಸ ನಾಲ್ಮೊಗಶ್ವಾಸ ಸತಿಯನು ಸೂಸಿ ಸೂಚಿಸಲೂ | ಅದಕೇಳಿ ಮತ್ತೆಲೇಸುಗೈಯ್ಯಲು ಮನವ ಮಾಡಲೂ ವಾಸವಾದ್ಯರಶ್ವಾಸ ಮಾಡುವ ತೆರನ ಮಾಡೆಯ್ದೊಕ್ಲೇಶನಾಶನ ಶ್ವಾಸಮಾನಿ ಮಹಾ ಕೃಪಾಳೊ 1 ವ್ರಾತ ಮಣಿ ರಘು | ಜಾತಗಿತ್ತೆಯೊ | ಮಾತರಿಶ್ವಾ 2 ಪುಂಡರೀಕಾಕ್ಷ ಉರ ಬಗೆದು ಕರುಳಕೊಂಡು ಕೊರಳಲಿ ಧರಿಸೀ | ನರ ಮೃಗನ ಲೀಲೆಕಂಡು ದ್ವಯೆ ಬಲ ತಪಿಸೀ | ಅರಕ್ಷೌಹಿಣಿ ಮುಂ-ಕೊಂಡು ನೀನೆ ಸಂಹರಿಸೀ | ಕೌರವನ ತೊಡೆಖಂಡಿಸುತವನ ಛೇದಿಸೀ |ಅಂಡಜಾಧಿಪವಹಗೆ ಅರ್ಪಿಸಿ | ನಿಂದೆ ಭೀಮಾ 3 ಅದ್ವೈತ ಸಿದ್ಧಿಲಿಹೇಯ ಬಹಳವ ನೀನೆ ತೋರಿಸೀ | ಬದರಿಯಲಿ ಬಾದರಾಯಣರಿಂದ ಉಪದೇಶೀಸಿ | ಮತ್ತಿಲ್ಲಿ ಬರುತಲಿಧೇಯ ಸಾಧಿಸೆ ಗ್ರಂಥ ಬಹು ರಚಿಸೀ | ಕುಭಾಷ್ಯಗಳ ಬಹುಹೇಯತ್ವವನೆ ಸಾಧಿಸೀ | ವಾದ ಕಥೆಯಲಿಮಾಯಿಗಳ ಬಲುಪರಿಯ ಸೋಲಿಸೀ |ಕಾರ್ಯ ಸರ್ವವ | ರಾಯ ಕೃಷ್ಣಗೆ ಅರ್ಪಿಸಿದೆ ಮಧ್ವಾ 4 ಪರಿ ವ್ಯಾಪ್ತನೆ | ಅಧ್ಯರ್ಥ ರೂಪಿಅಪ್ರಾಪ್ಯ ಅಶಕ್ತಿ ರಹಿತಾನೇ |ವ್ಯಾಪಿಸುತ ಜಗ | ವೀಪರೀಯಲಿ | ಮಾಳ್ಪೆ ಪ್ರಾಣಾ 5 ಮೋಕ್ಷಾಧೀಚ್ಛೆಯ ವರ್ಜ | ಅಚ್ಛಿನ್ನ ಭಕುತಾನೇದಕ್ಷಿಣಾಕ್ಷಿ ಗೋ | ವತ್ಸ ರೂಪಾನೇ ||ಅಕ್ಷಿಯೋಳಿಹ ತ್ರಿದಶಾ | ದ್ಯಕ್ಷರಿಂದಲಿ ಸಂ | ಸೇವ್ಯಾನೇ |ಕಂಠದಲಿ ನೀ ಹಂಸೋಪಾಸಕನೇ |ಶಬ್ದಗಳ ನುಡಿದು ನುಡಿಸುತಿರುವಾನೆ | ಕೂರ್ಮರೂಪಿ ಸಲಕ್ಷಣದಿ ಬ್ರಹ್ಮಾಂಡ ಧಾರಕನೆ | ಸಪುತ ಸ್ಕಂದಗತಇಚ್ಛೆಯಲಿ ಲೋಕಧಾರಕನೆ | ಬೃಹತಿ ಸಾಸಿರವಾಚ್ಯನೆಂದೆನಿಸುತ್ತ ಸ್ತುತ್ಯಾನೆ | ಪತ್ಯಬಿಂಬ ಮುಖ್ಯನೆಈಕ್ಷಿಸುವೆ ಸರ್ವತ್ರ ಹರಿಯನ್ನೆ | ಮುಂದಿನಜ ಅಪರೋಕ್ಷವನು ಪಾಲಿಸೆಂಬೇನೆ ||ಮೋಕ್ಷದನೆ ಕರುಣಾ ಕಟಾಕ್ಷದಿ | ಈಕ್ಷಿಪುದು ಪವನ 6 ಜೇಷ್ಠ ಶ್ರೇಷ್ಠನೆ ಸ | ಮಷ್ಟಿ ರೂಪನೆ ಪವನ |ವ್ಯಷ್ಟಿರೂಪದಿ ಜಗದಿ | ವರೀಷ್ಟನೇ ||ನಿಷ್ಠೇಲಿ ಭಜಿಪರಿ | ಗಿಷ್ಟಾರ್ಥವನೆ | ಸಲಿಸೂವೇ |ಅತಿರೋಹಿತ ವಿಜ್ಞಾನಿ ಎನಿಸಿರುವೆ ||ಸಕಲ ಗುಣಗಣ ಭೋಕ್ತøವೆನಿಸಿರುವೆ | ಸಕಲ ಜ್ಞಾನೋಪದೇಷ್ಟನೆಂದೆನಿಸಿ ಕರೆಸೂವೆ | ಶಿವ ಶೇಷ ಖಗಪರಿನಿಷ್ಟ ಗುರು ನೀನೆ ಎನಿಸಿರುವೆ ಸಜಾತಿ ಗುಣ ಅಯುತವರಿಷ್ಟನು ನೀನು ಆಗಿರುವೆ | ವಿಜಾತ್ಯನಂತ ಗುಣಗರಿಷ್ಟ ರೂಪಿ ಎನಿಸಿರುವೇ | ವೇದಾನುಕ್ತ ಗುಣವಿಶಿಷ್ಟ ರೂಪದಲಿಂದ ಮೆರೆಯುವೇ ||ಇಷ್ಟ ಗುರು ಗೋವಿಂದ ವಿಠ್ಠಲ | ಪ್ರೀತಿ ಪಾತ್ರನು ಆದ ಪ್ರಾಣ 7
--------------
ಗುರುಗೋವಿಂದವಿಠಲರು
ಪಾಷಾಣವಲ್ಲವದು ಭೂಷಣವು ಕರಕೆ ದೋಷವಾ ದೂರಿಪುದು ತೋಷ ಜನಿಪುದು ಮನಕೆ ಪ ದಾಸಳುದಕದಿ ಜನಿಸಿ ಶ್ರೀಶನಂಕಿತ ವಹಿಸಿ ವಾಸುದೇವನ ಭಜಕರೆದೆ ಪಿರಿದು ಎನಿಸಿ ದಾಸಜನರಿದನು ನಿತ್ಯದಿ ಪಾಡಿ ಪೂಜಿಸಲು ಘಾಸಿಯಕ್ಷಯ ಲೋಕಪಥವ ಸಲೆ ಕರುಣಿಪುದು 1 ಶ್ರೀದೇವಿ ವಲ್ಲಭನು ಭೂದೇವಿ ರಮಣನು ಸಾಧುಗಳ ಪ್ರಿಯ ಶ್ರೀಗಿರಿನಿಲಯನು ಮೋದದಲಿ ಶಕ್ತ ಮೌಕ್ತಿಕ ಸ್ವರ್ಣಸರಿಯಲ್ಲ ಭೇದ ತೋರಲು ದೃಶನ್ಮಾಯಯಂತಿಹ ಸ್ವಾಮಿ 2 ಭಕ್ತರೊಳು ನಿಜದಾಸ ಯುಕ್ತ ಚಂದ್ರಹಾಸ ವಕ್ತøದೊಳ್ಗೊಳಸಿಹನು ನರಸಿಂಹದಾಸ ಮುಕ್ತಿಪಂಥ ಕಂಡನವ ಸಂದೇಹ ಬೇಡಿದಕೆ ಶಕ್ತ ನರಸಿಂಹವಿಠ್ಠಲ ಸಾಲಿಗ್ರಾಮವು 3
--------------
ನರಸಿಂಹವಿಠಲರು
ಪಾಹಿ ಕಾಳಿಕೆ ಪಾಹಿ ದಿವ್ಯ ಚೂಳಿಕೆ ಪ ಪುರಂದರ ವಂದಿತೆ ಅ.ಪ. ರಕ್ತಬೀಜ ಶಿಕ್ಷಿಣಿ ಭಕ್ತವೃಂದ ರಕ್ಷಿಣಿ ಶಕ್ತಿವಿಜಿತ ರಾಕ್ಷಸೆ ನಿತ್ಯಮಂಗಲ ಸಾಹಸೆ 1 ಕ್ರೂರ ಭಂಡ ಭಂಜಿನಿ ಶೂರ ಪದ್ಮಮರ್ಧಿನಿ ನರಸಿಂಹ ಸೋದರಿ ಪಾಲಯಮಾಂ ವನ ಶಂಕರಿ 2 ಮೌನಿಹೃದಯ ರಂಜಿನಿ ಮಾನವೇಂದ್ರ ಪೋಷಿಣಿ ಮಾನಿನಿ ಶ್ರೀ ಶಿವ ಭಾಮಿನಿ 3
--------------
ಬೇಟೆರಾಯ ದೀಕ್ಷಿತರು
ಪಾಹಿ ಪದ್ಮದಳಾಯತಾಂಬಕ ಪಾಹಿ ಪದ್ಮಾರಮಣ ಪರಾತ್ಪರ ಪಾಹಿ ಪದ್ಮಾಸನ ಜನಕ ಮಾಂ ಪಾಹಿ ಪ್ರಪನ್ನ ಪಾಲಕ ಪ ವಾಸುದೇವ ಕೃತೀಶ ಶಾಂತಿಪ ಕೇಶವಾಚ್ಯುತ ವಾಮನ ಹೃಷೀಕೇಶ ಪ್ರಶ್ನಿಗರ್ಭ ಋಷಭ ನೃಕೇಸರಿ ಹಯಗ್ರೀವ ವೇದ ವ್ಯಾಸ ದತ್ತಾತ್ರಯ ಉರುಕ್ರಮಾ ವಾಸವಾನುಜ ಕಪಿಲ ಯಜ್ಞ ಮ ಹೇಶ ಧನ್ವಂತ್ರಿ ಹಂಸ ಮಹಿ ದಾಸ ನಾರಾಯಣ ಕೃಷ್ಣಹರೆ 1 ಮಾಧವ ಪ್ರದ್ಯುಮ್ನ ಶ್ರೀ ದಾಮೋದ ರಾಧೋಕ್ಷಜ ಜನಾರ್ದನ ಶ್ರೀಧರ ಶ್ರೀ ಪದ್ಮನಾಭ ವೃಕೋದರ ಪ್ರಿಯತಮ ತ್ರಿವಿಕ್ರ ವಿರಿಂಚಿ ವಿನುತ ಗದಾಧರ ಗಯಾಸುರ ವಿಮರ್ದನ ಸಾಧಿತ ಜಗತ್ರಯ ಪುರಾತನ ಪಾದ ಪರಮ ಕೃಪಾಂಬುಧೇ ಮಾಂ 2 ನಂದಗೋಪನ ಕುಮಾರ ಗೋಪಿ ವೃಂದ ಪೋಷಿತನಮಿತ ಸಂಕ್ರಂಡನ ಕೃಪಾ ಸಾಂದ್ರ ವರ ಕಾಳಿಂದಿ ತಟನಿ ವಿಹಾರ ಪಾಂಡವ ಬಂಧು ದ್ರೌಪದಿವರದ ನೃಪ ಮುಚು ಕುಂದಸ್ತುತಿ ಸಂಪ್ರೀತ ಲಕ್ಷ್ಮೀ ನಂದಮಯ ನಿಜ ಭಕ್ತವತ್ಸಲ 3 ಮೀನಕೂರ್ಮವರಾಹ ಪಂ ದಿತಿಸುತ ವಾಮನ ಕ್ಷೋಣಿಪಾರ್ವನ ಬ್ರಾಹ್ಮಣ ಪ್ರಿಯ ವನೌಕಸನಾಥ ಮುಖ್ಯ ಪ್ರಾಣಸಖ ವಸುದೇವ ದೇವಕಿ ಸೂನು ಸುಂದರಕಾಯ ಪುರಹರ ಬುದ್ಧ ಕಲ್ಕಿ ಪ್ರ ಧಾನ ಪುರುಷೇಶ್ವರ ದಯಾಕರ 4 ನಿಂತ ನಿಜಬಲ ಮಾತುಳಾಂತಕ ಶ್ವೇತವಾಹನ ಸೂತ ತ್ರಿಗುಣಾ ತೀತ ಭವನಿಧಿ ಪೋತ ಮೋಕ್ಷನಿ ಕೇತನಪ್ರದ ಭೂತಭಾವ ಧೌತ ಪಾಪ ವ್ರಾತ ತ್ರಿಜಗತಾತ ನಿರ್ಗತ ಭೀತ ಶ್ರುತಿ ವಿಖ್ಯಾತ ಭಕ್ತಿಸುವೇತನ ಪ್ರಿಯ ಭೂತಿದ ಜಗನ್ನಾಥ ವಿಠ್ಠಲ 5
--------------
ಜಗನ್ನಾಥದಾಸರು
ಪಾಹಿ ಪಾಂಡವ ಪರಿಪಾಲ ನೀನೇ ನಿತ್ಯ ಮಹದಾದಿವಂದ್ಯಾ ಸುಶೀಲಾ ಪ ದೈಹಿಕ ಮೊದಲಾದ ಕರ್ಮವ ಮಾಡಿಸಿ ಮೋಹಕ ಪಾಶವ ಓಡಿಸು ಕೇಶವಾಅ.ಪ ಇಂದ್ರತನಯಾ ಮಾನಭಂಗ ಮಾಡಿದೆ ನೀನು ಇಂದು ಉಂಡೆನೋ ಸಿರಿರಂಗಾ ಮಂದರೋದ್ಧರ ಕೋಮಲಾಂಗಾ ಕೇಳೊ ಪೊಂದಿಸು ಸುಜನರ ಸಂಗಾ ಕಂದರ್ಪಜನಕ ಆನಂದ ವಿಗ್ರಹ ಪೂರ್ಣ ಮಾತನು ಸುಂದರ ನಿಜ ಭಕ್ತ ವೃಂದ ಮಹೋದಧೇ 1 ಕಾಲಕರ್ಮ ಗುಣದಿಂದಾ ವೃಥಾಯು ವೇಳೆಯ ಕಳದೆ ಮುಕುಂದಾ ಪೇಳಾ ಲೇಸೊ ಪ್ರತಿ ಬಂಧಾ ಇನ್ನು ನಾನು ತಾಳಲಾರೆ ದು:ಖದಿಂದಾ ಆಲಸ ತಾಳದೆ ಆಲಿಸು ಮಾತನು ಆಳುಗಳೊಳಗಿಹ ಆಳಾನೆಂದು 2 ಅನಾದಿಯಿಂದಲಿ ನಿನ್ನ ಪದಗಳ ಧ್ಯಾನವ ಮಾಡುವೆ ಚನ್ನಾ ನಾನಾ ಬಗೆಯಿಂದ ಯೆನ್ನಾ ಸಾಕುತಲಿಪ್ಪ ನೀನೆ ಮುಖ್ಯನೊ ಪ್ರಸನ್ನ ಅನಂತಶಯನ ಭೋ ವಿಜಯವಿಠ್ಠಲರೇಯ ಮಾನದಲಿ ನಿಂದು ಪ್ರಾಣಪ್ರೇರಕನಾಗೊ 3
--------------
ವಿಜಯದಾಸ
ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ ಪ ನಿತ್ಯ ಶ್ರವಣ ಮಾಡಿಸೆ 1 ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆಹರಿಯ ಬೋಧವ ಕೇಳಿ ಹಟವಗೆಲಿದೆಯೆ2 ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನುಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ 3 ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸುಮರವು ಕೊಡದೆಲೆ ಹರಿಚರಣ ತೋರಿಸು 4 ಬಂದ ಭಕ್ತರ ಬಿಡುವುದಿಂದುಚಿತವೆಇಂದಿರೇಶನ ಮನದಿ ತಂದು ತೋರಿಸೆ 5
--------------
ಇಂದಿರೇಶರು
ಪಾಹಿ ಪಾಹಿ ಮುಕುಂದ ಕೇಶವ ಪಾಹಿ ಮುರಹರ ಮಾಧವಾಪಾಹಿ ಗೋಕುಲವಾಸ ಪಾವನ ಪಾಹಿ ಕೃಷ್ಣ ಜನಾರ್ದನಾಪಾಹಿ ಭಕ್ತಮನೋಹರಾಕೃತೆ ಪಾಹಿ ಶ್ರೀಧರ ವಾಮನಾಪಾಹಿ ಪಂಕಜನೇತ್ರ ಜಯಜಯ ಪಾಹಿ ವೆಂಕಟನಾಯಕಾ1ಪಾರರಹಿತ ಭವಾಬ್ಭಿ ಮಧ್ಯ ವಿಹಾರವೇಷ ವಿನೋದಿನಂದಾರ ಪುತ್ರ ಧನಾಲಯಾದಿಷು ಸಾರಮತಿಮತಿದುಃಖಿನಂಕ್ರೂರ ಕ್ರೋಧಕಷಾಯ ಕಲುತ ಕರಣ ಮತ್ಯಭಿಮಾನಿನಂಶ್ರೀ ರಮಣ ವೈಕುಂಠವಲ್ಲಭ ಪಾಹಿ ವೆಂಕಟನಾಯಕಾ 2ರಕ್ಷ ರಕ್ಷ ಮಹೇಶ ಸುರಮುನಿಪಕ್ಷ ಮನ್ಮಥಶಿಕ್ಷಕಾರಕ್ಷ ರವಿಚಂದ್ರಾನಲಾಂಬಕ ರಕ್ಷ ರಜತಗಿರೀಶ್ವರಾರಕ್ಷ ರಾಕ್ಷಸಭಯನಿವಾರಕ ರಕ್ಷ ಕಾಮಿತದಾಯಕಾರಕ್ಷ ಗಜವ್ಯಾಘ್ರಾಜಿನಾಂಬರ ರಕ್ಷ ಶಿವ ಗಂಗಾಧರ 3ಕಾಮಕರಿಪದ ಮರ್ದಿತಂ ತನು ದಾಮ ಬಂಧನ ಪೀಡಿತಂತಾಮಸಂ ತ್ವತ್ಪಾದ ಸೇವಾ ನಾಮಮಾತ್ರ ವಿವರ್ಜಿತಂಭೀಮ ರವಿಜಭಯಾತುರಂ ಕುರು ಕಾಮಹರ ತವ ಸೇವಕಂವ್ಯೋಮಕೇಶ ವಿರಿಂಚಿ ವಿಬುಧಸ್ತೋಮ ಶಿವಗಂಗಾಧರ 4ವಾಸುದೇವ ವರೇಣ್ಯ ಪದ್ಮನಾಭ ಸುರೇಶ ಕ್ಲೇಶವಿಭಂಜನಭಾಸಮಾನ ಭವಾಬ್ಧಿತಾರಕ ದಾಸಪದ್ಮದಿವಾಕರದೇಶಕಾಲಾತೀತ ನಿರುಪಮ ಪಾಹಿ ವೆಂಕಟನಾಯಕಾ 5ಶರಣಜನ ಸುರಕುಜ ತವಾಮಲ ಚರಣಪಂಕಜ ಪಂಜರೇವಿರಜೆವಿಶತು ಮನಃಸ್ಥಿರಂ ಮಮ ಕುರು ತಥೈವ ಕೃಪಾಕರಪರಮಕಾರಣ ಪರತರಾತ್ಪರ ಪುರುಷ ಪ್ರಕೃತಿಪ್ರವರ್ತಕಾಸರಸಿಜೋದ್ಭವಸ್ತಂಭ ವ್ಯಾಪಕ ಪಾಹಿ ವೆಂಕಟನಾಯಕ 6ನೀಲಕಂಠ ನಿಧೀಶಮಿತ್ರ ಸುಶೀಲ ಸಾಂಬ ಮೃಗ ಫಣಿ ವರ ಕುಂಡಲಶೂಲಪಾಣಿ ಸುರಾದ್ರಿಚಾಪ ಜಟಾಲತಾಪರಿಶೋಭಿತಕೀಲಿತಾಮರವೈರಿಪುರ ನಿರ್ಮೂಲ ಶಿವಗಂಗಾಧರ 7ದೇಹಿ ದಾಸ್ಯಮನಾಮಯಂ ಹರ ದೇಹಿ ಸಾಧುಸಮಾಗಮಂದೇಹಿ ತವಚರಿತಾಮೃತಂ ಭವ ನಿತ್ಯ ನಿರೋಗತಾಂದೇಹಿ ಶಿವಗಂಗೇಶ ತಿರುಪತಿಧಾಮ ವೆಂಕಟನಾಯಕ 8ಓಂ ಯಮಳಾರ್ಜುನಭಂಜನಾಯ ನಮಃ
--------------
ತಿಮ್ಮಪ್ಪದಾಸರು
ಪಾಹಿ ಪಾಹಿ ಮೋಹನ್ನರೆ | ಲೋಹಲೊಷ್ಟ ಸಮೇಕ್ಷಣ ಪ ಪಾದ ಸೇವೆ | ವಿಹಿತದಿ ನೀಡೆನಗೆ ಅ.ಪ. ಪಾದ | ಬಂಡುಣಿಯಂದದಲೀಮಾಂಡವ್ಯರಾಗಿರುವಾಗ | ಚಂಡತಪ ಮಾಡಿದಿರಿ 1 ಗಾಣಿಗನುದರದೀ | ಜನಿಸುತ ಪೂರ್ವದೀಧನ ಬಹುಗಳಿಸುತ | ಜನುಮವ ನೂಕಿದಿರಿ2 ಗಳಿಸಿದ ಧನವನೂ | ಲಲನೆಗೂ ಪೇಳದೇಮಲಿನ ದೇಹವನೀಗಿ | ಕಳೆದಿರಿ ಪ್ರಾರಬ್ಧವ 3 ಸತಿಸುತ ಬಂಧು ಜನ | ಗತಿತಪ್ಪಿ ಭ್ರಾಂತರಾಗೀಅತಿ ಅತಿ ವ್ಯಥೆಯಿಂದ | ಪಾಥೇಯವ ಕಾಣಲಿಲ್ಲ 4 ಚಿನಿವಾರ ನೂದರದೀ | ಪುನರಪಿ ಜನಿಸಲೂಜನನಿಯು ಅನುವನು | ಕಾಣದಲೆ ಚಿಂತಿಸಿದಳ್ 5 ಆರ್ತಳಾಗುತ ಚಕ್ರ | ತೀರ್ಥವ ಪೊಗಲೂ ಬರೇಪಾರ್ಥ ಸಖನ ಭಕ್ತ | ಆರ್ತೆಯನು ತಡೆದರು 6 ಆಕೆಯ ಶಿಶು ಸಹಾ | ಸಾಕುವೆನೆನುತಲೀಶ್ರೀಕರ ವಾಕ್ಯವಿತ್ತು | ಭೀಕರವ ತಪ್ಪಿಸಿದ 7 ವಿಜಯರಾಯರು ಬಂದೂ | ನಿಜಸತಿ ಮಡುವಿನೊಳ್‍ತೇಜಸ್ಸಿನಿಂ ಮೆರೆವಂಥ | ದ್ವಿಜಸುತನರ್ಪಿಸಿದರ್ 8 ಮೋಹನ ಬಾಲನಿಗೆ | ಮೋಹನ ವಿಠಲನಾಮೋಹದಂಕಿತವಿತ್ತು | ಮಾಹಿತಾಂಘ್ರಿ ನೆನೆಸಿದರ್ 9 ಮುಂಜಿ ಮದುವೆ ಮಾಡೀ | ಹಂಜರದಿ ನಿಲಿಸುತಾಕಂಜಾಕ್ಷನಂಘ್ರಿಯನು | ಅಂಜಾದಲೆ ಭಜಿಸೆಂದರ್10 ಚಿನಿವಾರತನದಿಂದ | ಧನವನು ಗಳಿಸಿದಾಜನುಮ ಪೂರ್ವದಸ್ಮøತಿ | ಮನದೊಳು ನೆನೆದೆಯೋ11 ಗಾನವ ಮಾಡುತಲೀ | ಗಾಣಿಗತನಯರನೂಕಾಣುತಲೀ ಪೇಳಿದೆಯೊ | ಧನವಿಟ್ಟ ಸ್ಥಳವನು 12 ಗುರುಗಳ ಕರುಣಿಯಿಂ | ಹರಿದೆಯೊ ಅಪಮೃತೀನೆರೆದಿದ್ದ ಜನರುಗಳ್ | ಅರೀಯರು ಸೋಜಿಗವ 13 ಮೋದ ತೀರ್ಥರ ಮತ | ಸಾಧಿಸಿದೆ ಜಗದೊಳು14 ಪವನಾಂತರಾತ್ಮ ಗುರು | ಗೊವಿಂದ ವಿಠಲನಾಪಾವನಾ ಸ್ಮರಣೆಯಿಂ | ಭವವನು ಕಳೆದೆಯೋ 15
--------------
ಗುರುಗೋವಿಂದವಿಠಲರು
ಪಾಹಿ ಮಾಂ ದೇವ ಶ್ರೀಕೃಷ್ಣ ಪಾಹಿ ಮಾಂ ಭಕ್ತವತ್ಸಲ ಪ ದೇಹಿ ಮೇ ಭಕ್ತಿಮಚಲಂ ತ್ರಾಹಿ ಮಾಂ ತ್ವಂ ಕೃಪಾದೃಷ್ಟ್ಯಾ ಪಾಹಿ ಮಾಂ ಅ.ಪ ಬಂಧಿತಂ ಕರ್ಮಭಿರ್ಬಹುನಿಂದಿತಂ ವೃತ್ತಿತೋ ನಿತ್ಯಾಕ್ರಂದಿತಂ ಕ್ಲೇಶಬಾಹುಳ್ಯೈಃಸಂಧಿತಂ ಮಾಂ ಕೃಪಾದೃಷ್ಟ್ಯಾ 1 ಸಂಚಿತಾಗಾಮಿಪ್ರಾರಬ್ಧ ವಂಚಿತಂ ವಿಷಯ ಭೋಗ ಸಿಂಚಿತಂ ನಿತ್ಯಸದ್ಗುಣ ಮುಂಚಿತಂ ಮಾಂ ಕೃಪಾದೃಷ್ಟ್ಯಾ 2 ಬುದ್ಧ ಮುಕ್ತ ಪ್ರತ್ಯಗಾತ್ಮನ್ ತಿರುಪತಿ ಸತ್ಯ ಶ್ರೀವೆಂಕಟ ತವ ಭೃತ್ಯಭೃತ್ಯಂ ಕೃಪಾದೃಷ್ಟ್ಯಾ 3
--------------
ತಿಮ್ಮಪ್ಪದಾಸರು
ಪಾಹಿ ಶ್ರೀ ಉರಗಾದ್ರಿವಾಸವಿಠಲನೇ ಮದ್ಹøಯರಾಂತರಾತ್ಮ ವಿಠಲನೇ ಸಲಹೊ 1 ದೇಹದಲಿ ನಲಿವ ತಾಂಡವ ಕೃಷ್ಣವಿಠಲನೆ ನಿನ್ನಿಷ್ಟ ಭಕುತರ ಮನೋಭೀಘ್ಟವನೆ ಸಲಿಸಯ್ಯ 2 ವಂದಿಪೆ ತಂದೆ ವೇಂಕಟೇಶ ವಿಠಲ ಬಂದು ದಯವೀಯೋ ಜಯಾಪತಿವಿಠಲ ಬಂಧ ಮೋಚಕ ಶಾಂತೀಶ ವಿಠಲನೆ ನಿನ್ನ ಸಂದ ಭಕುತರ ಕಾಯ್ವ ಗಜವರದವಿಠಲ3 ಶೇಷ ಶಯನ ವಿಠಲ ದೋಷರಾಶಿಯ ಕಳೆದು ಮನದಾಶಯ ಸಲಿಸಯ್ಯ ಹರಿವಿಠಲ ಶೈಶವದಿ ಕಾಯ್ದಂತೆ ಧೃವತವರದವಿಠಲನೆ ಈಸಮಯದಲ್ಲೆ ಗುರುವಾಸುದೇವ ವಿಠಲ 4 ವರದ ಲಕ್ಷ್ಮೀ ರಮಣವಿಠಲನೆ ಎನ್ನ ಅವಿದ್ಯೆಯನೆ ಹರಿಸೊ ಪ್ರದ್ಯುಮ್ನವಿಠಲ ಪರಮಪುರುಷಾ ವರದ ವೇಂಕಟೇಶ ವಿಠಲನೆ ಪರಮ ಸಾಧನ ನೀಡೋ ಸುಜ್ಞಾನವಿಠಲ 5 ಶ್ರೀನಾಥವಿಠಲನು ತೈಜಸನು ನೀನೆ ದೀನರಕ್ಷಕ ಭಾರತೀಶಪ್ರಿಯ ವಿಠಲ ಪರಮಪಾವನ ಕಾಯೊ ವರಹವಿಠಲ ಮೂರ್ತೆ ವರಮತಿಯ ನೀಡೊ ಆನಂದಮಯವಿಠಲ 6 ವಿಜ್ಞಾನಮಯ ಮನದ ಅಜ್ಞಾನವನು ಹರಿಸೊ ಸ- ರ್ವಜ್ಞ ನೀನೇ ಶ್ರೀ ಪ್ರಾಜ್ಞವಿಠಲನೆ ಯಜ್ಞ ಭುಗ್ಯಜ್ಞ ಸಾಧಕನು ನೀ ಜಗದ್ಭರಿತ ವಿಠಲ ನೀನೆನ್ನ ಸಲಹೊ 7 ಶುಧ್ದ ಮೂರುತಿ ಶ್ರೀ ವಿಜ್ಞಾನಮಯ ವಿಠಲ ಸರ್ವಕಾರ್ಯದಿ ಮನಶುದ್ಧಿಯ ನೀಡೋ ಮಧ್ವಗುರು ಶ್ರೀಕೃಷ್ಣ ದ್ವೈಪಾಯನ ವಿಠಲ ಮದ್ಭಾರ ನಿಳುಹಿ ನೀ ಉದ್ಧ್ದಾರ ಮಾಡೊ8 ರಕ್ಷಿಸೊ ಲಕ್ಷ್ಮೀಶ ವಿಠಲನೆ ಎನ್ನ ಮನ ದಕ್ಷಿಯೊಳು ನೆಲೆಸೊ ಶ್ರೀ ವೇಂಕಟೇಶವಿಠಲ ಕುಕ್ಷಿಯೊಳು ಬ್ರಹ್ಮಾಂಡ ರಕ್ಷಿಪ ಶ್ರೀರಮಣ ವಿಠಲ ನಿನ್ನದಾಸದಾಸ್ಯವÀ ದೇಹಿ 9 ಶರಣ ಜನ ಪ್ರೀಯ ಶ್ರೀವರದ ವಿಠಲ ದೇವಾ ದುರಿತಾರಿ ಪನ್ನಂಗಶಯನ ವಿಠಲ ಗುರೋರ್ಗುರುಗೋವಿಂದವಿಠಲ ಪಾಹಿ 10 ವರ ತಂದೆ ಮುದ್ದು ಮೋಹನ ವಿಠಲಾತ್ಮಕ ಶ್ರೀ ಉರಗಾದ್ರಿ ವಾಸವಿಠಲ ಸ್ವಾಮಿ ಶರಣರಿಗೆ ಆಯುe್ಞರ್Áನ ಸಂಪತ್ ಭಕ್ತಿಸಾಧನೆಗಳಿತ್ತು ಸಲಹೊ11
--------------
ಉರಗಾದ್ರಿವಾಸವಿಠಲದಾಸರು
ಪಾಹಿಮಾಂ ಜಗದೀಶ ಭಕ್ತವಿಲಾಸ ಶ್ರೀ ಶ್ರೀನಿವಾಸನೆ ಹೇಳಲೊಶವಲ್ಲ ದೇವನೆ ಪ ಚಂಡಶಾಸಕ ಬಿರುದುವುಳ್ಳ ಪ್ರಚಂಡ ದೇವೋತ್ತುಂಗನೆ ಮದನ ಜನಕ ಕೋದಂಡಧರ ಶ್ರೀರಾಮನೆ 1 ವಿಕಟದಾನವ ಮೂಲ ಚ್ಛೇದನ ವಿಶ್ವರೂಪ ವಿನೋದನೆ 2 ಅಮಿತ ಮಹಿಮಾನಂದ ಹರನುತ ಕಮಲಸಂಭವ ನಯ್ಯನೆ ಸುಮನರಾದ ಸುಜನರಾ ಹೃದಯ ಕಮಲದಲಿ ನೀ ವಾಸನೆ 3 ಮಂಗಳಾಂಗ ವಿಹಂಗವಾಹನ ಮಾರಕೋಟಿ ಲಾವಣ್ಯನೆ ಅಂಗನಾಮಣಿ ಲಕುಮಿಪುರದಲಿ ಅಡಗಿಸಿಪ್ಪ ಶ್ರೀ ಲೋಲನೆ 4 ಶೌರಿ ಮಹಾಗುಣ ಶಾಂತನೆ ಕರುಣೆಸೆನ್ನನು ಕಾಯೊ ಬೇಗನೆ ವರದ `ಹೆನ್ನ ವಿಠ್ಠಲನೆ' 5
--------------
ಹೆನ್ನೆರಂಗದಾಸರು
ಪಾಹಿಮಾಂ ರಾಮಚಂದ್ರ ಅಚಲಾಂ ಭಕ್ತಿಂ ದೇಹಿ ಕಲ್ಯಾಣಸಾಂದ್ರ ಪ. ಶ್ರೀಹರಿ ನಾಗಾರಿವಾಹನ ಶ್ಯಾಮಲ- ದೇಹ ರಾಕ್ಷಸ ಸಮೂಹ ವಿದಾರಕ ಅ.ಪ. ಸಜ್ಜನ ಕಲ್ಪವೃಕ್ಷ ಪಾಪಾಂಕುರ- ಭರ್ಜನ ವಿಬುಧಪಕ್ಷ ಧೂರ್ಜಟಿಸಖ ದೂಷಣಾರಿ ದ್ಯುಮಣಿಕೋಟಿ- ಪ್ರಜ್ವಲಿಪ ಪರಮ ಜಗಜ್ಜೀವನಧಾಮ ಪೂರ್ಣಬ್ರಹ್ಮ ರಘುವಂ- ಜಯಾಕಾಂತ ಪ್ರಭುವೆ 1 ವರಾಹ ಪ್ರ- ಹ್ಲಾದವರದ ಗುಣಧಾಮ ಸಾಧುವಟುವೇಷವಿನೋದ ಭಾರ್ಗವ ಬಹು ಕ್ರೋಧಿ ಕ್ಷತ್ರಿಯಕುಲ ಭೇದಿ ರಾವಣಾಂತಕ ಕುವಾದಿಜನದುರ್ಬೋಧಬದ್ಧವಿ- ಶ್ರೀಧರ ರಮಾಮೋದಮಾನಸ 2 ಕಾಶಿಮಠಸ್ಥ ಯತಿ ಪರಂಪರ್ಯ- ಭೂಷಣ ಶುದ್ಧಮತಿ ಶ್ರೀ ಸುಕೃತೇಂದ್ರ ಸನ್ಯಾಸಿ ಪೂಜಿತಪಾದ ವಾಸುದೇವ ತವ ದಾಸ್ಯವ ಪಾಲಿಸು ಸುಭದ್ರ ಶ್ರವಣ ಪ- ಭವ ರುಗ್ಭೇಷಜನೆ ನರಕೇಸರಿಯೆ ಶ್ರೀ ವ್ಯಾಸ ರಘುಪತಿ 3 ಪಾರಗಾಣರು ನಿನ್ನಯ ಬ್ರಹ್ಮಾದ್ಯರು ಭೂರಿಗುಣದ ಮಹಿಮೆಯ ಸೂರಿಜನಪ್ರೀತ ಸೀತಾನಯನ ಚ- ಕೋರಚಂದ್ರನು ಮಹೋದಾರ ಶಾಙ್ರ್ಗಧರ ಮೀರಣಾತ್ಮಜವರದ ನತಮಂದಾರ ಕೈರವಶ್ಯಾಮ ರಾಮನ 4 ಪ್ರಣವರೂಪ ನಿರ್ಲೇಪ ನಿತ್ಯಾತ್ಮದು- ರ್ಜನವನೋದ್ದಹನೋದ್ದೀಪ ಮನುಕುಲಮಣಿ ಮುನಿಗಣ ಸಮಾಹಿತ ಜನಾ- ರ್ದನ ಬ್ರಹ್ಮಾದ್ಯಖಿಳ ಚೇತನರು ನಿನ್ನಾಧೀನ ಚಿದಾನಂದೈಕ ದೇಹನೆ ಭಕುತಿ ಭಾಗ್ಯವನು ಪಾಲಿಸು 5
--------------
ತುಪಾಕಿ ವೆಂಕಟರಮಣಾಚಾರ್ಯ
ಪಿಡಿದೆಲೆ ಬಿಡಬೇಡ್ಹುಡುಗಹುದು ಇದು ಕೆಡದ ವಸ್ತು ನಿಜ ಪಿಡಿ ಬಿಗಿದು ಪ ಎಡರುತೊಡರಿಗೆದೆಒಡೆಯದೆ ದೃಢವಿಡಿ ಜಡಭವ ತೊಡರನು ಕಡಿಯುವುದು ಅ.ಪ ಭಕ್ತಿಯಿಂದೆಂಬುವ ಗೂಟ ಜಡಿದು ಮಹ ಸತ್ಯವೆಂದೆಂಬ ಹಗ್ಗ ಸುತ್ತ ಬಿಗಿದು ಚಿತ್ತೆಂಬ ಗಂಟ್ಹಾಕು ಎತ್ತವದಲದಂತೆ ನಿತ್ಯ ಮುಕ್ತಿಸುಖ ಕೊಡುತಿಹ್ಯನು 1 ಸುಜನ ಸಂಗವೆಂಬ ಮಂದಿರದಿ ಮಹ ಭಜನವೆಂದೆಂಬುವ ಗೋದಿಲದಿ ನಿಜಧ್ಯಾನ ಮೇವು ಹಾಕಿ ಭುಜಶಾಯಿಪಾದ ನಿಜಧೇನುವನು ಕಟ್ಟಿ ಮಜದಲಿ ನಲಿಯೊ 2 ಆರಿಗೆ ಸಿಗದಂಥ ಒಡವೆಯಿದು ಸರ ದಾರನೆ ನಿನಗೆ ಸಿಕ್ಕಿಹ್ಯದು ಸಾರಸೌಖ್ಯಕ್ಕೆ ಮೂಲಧಾರನಾಗಿಹ್ಯ ಧೀರಶ್ರೀರಾಮಪಾದ ಶೂರನೆ ಬಿಡದಿರು 3
--------------
ರಾಮದಾಸರು
ಪಿಡಿಯೆನ್ನ ಕೈಯ ಬಿಡಬೇಡೆನ್ನಯ್ಯ ಮೃಡನ ಭಕ್ತರ ಒಡೆಯ ಪಂಢರಿರಾಯ ಪ ಘೋರ ಬಡುವೆ ಸಂಸಾರಶರಧಿಯೊಳು ಮೀರಿತು ಈ ಬಾಧೆ ಸೈರಿಸೆ ಮಹರಾಯ 1 ಹಲವು ವಿಧದಿ ಕಷ್ಟಕ್ಕೊಳಗಾಗಿ ಅತಿಶಯ ಬಳಲುವ ಬಾಲನ ಉಳಿಸಿಕೊ ಮಹರಾಯ 2 ಬರುವ ಸಂಕಟದೆನ್ನ ಪಾರುಮಾಡುವಂಥ ಭಾರನಿನ್ನದು ಸರ್ವಧೀರ ಶ್ರೀರಾಮಯ್ಯ 3
--------------
ರಾಮದಾಸರು