ಒಟ್ಟು 2087 ಕಡೆಗಳಲ್ಲಿ , 116 ದಾಸರು , 1568 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನೆ ಬಾಹೂದೆ ಮುಕುತಿ - ನಮ್ಮ |ಚೆನ್ನಾದಿ ಕೇಶವನ ದಯವಾಗದನಕ ಪ.ಮನದಲ್ಲಿ ದೃಢವಿರಬೇಕು - ದುರ್ |ಜನರ ಸಂಗತಿಯನು ನೀಗಲುಬೇಕು ||ಅನಮಾನಂಗಳ ಬಿಡಬೇಕು - ತನ್ನ |ತನು - ಮನ ಹರಿಗೆ ಒಪ್ಪಿಸಿ ಕೊಡಬೇಕು 1ಕಾಮ - ಕ್ರೋಧವ ಬಿಡಬೇಕು -ಹರಿ |ನಾಮಸಂಕೀರ್ತನೆ ಮಾಡಲುಬೇಕು ||ಹೇಮದಾಸೆಯ ಸುಡಬೇಕು - ತ |ನ್ನಾ ಮನ ಹರಿಯ ಪಾದದಲಿಡಬೇಕು 2ಪಾಪಗಳನೆ ಕಳೆಯಬೇಕು - ಜ್ಞಾನ |ದೀಪ ಬೆಳಕಿನಲಿ ಲೋಲಾಡ ಬೇಕು ||ತಾಪ ರಹಿತಗೈಯಬೇಕು - ನಮ್ಮಓಪ ಪುರಂದರವಿಠಲನೊಲೆಯ ಬೇಕು 300
--------------
ಪುರಂದರದಾಸರು
ಸುರತಸುಖಕೆ ಅಂಗನೆಯರ ಮೇಳದಲಿಇಹಗೆ ಆಧ್ಯಾತ್ಮದಗೊಡವೆಏತಕೆಪಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ1ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ2ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ3
--------------
ಚಿದಾನಂದ ಅವಧೂತರು
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ 1ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ 2ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ 3ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ 4ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ 5ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ 6ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ 7ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ 8ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ 9ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ 10ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ 11ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ 12ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ 13ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ 14ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ 15
--------------
ಪ್ರಾಣೇಶದಾಸರು
ಸುಳಾದಿಧ್ರುವತಾಳರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾತಿಹರ ಸಾಮಗಾನಾದರ ನಿಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ 1ಮಠ್ಯತಾಳಪಿಂತೆ ಸಮೀರಜನ ಸೇವೆಗೆ ಮೆಚ್ಚತ್ಯಂತ ಪ್ರಸನ್ನನಾಗ್ಯವನ ಶುಭಕರಸಂತತಿಗಭಯವನಿತ್ತಪೆನೆಂದೀಶನಿಂತಿಹೆ ಪ್ರಸನ್ನವೆಂಕಟಪತಿರಾಮಕಂತುಜನಕನಿತ್ಯಾನಂದನೆ ನಿನ್ನಂತವರಿಯೆ ನಿಗಮಾಗಮಕಳವೆ 2ತ್ರಿಪುಟತಾಳನಿರುತ ವೈಕುಂಠ ಮಂದಿರವಿದ್ದುಪರಣ ಕುಟೀರವನಾಶ್ರಯಿಸುವ ಘನತೆಯೆತ್ತವರಪೀತಾಂಬರ ದಾಮವನು ಬಿಟ್ಟುವಲ್ಕಲಧರಿಸಿ ಕಾನನದಿ ಸಂಚರಿಪೋದೆತ್ತನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ 3ಅಟ್ಟತಾಳಹರವರದಲಿ ಬಲು ಮತ್ತಾದ ರಜನೀಚರವರ ಲಂಕೆಯಲಿ ಬಲಿದು ಗರ್ವದಿಸುರವರರನುರೆ ಬಾಧಿಸಲವರನುಪೊರೆವರು ದಾರಯ್ಯ ನಿನ್ನಿಂದಸ್ಥಿರವರದಾಯಕ ಪ್ರಸನ್ವೆಂಕಟಗಿರಿವರನಿಲಯ ಕೌಸಲ್ಯೆಯ ಕಂದ 4ಆದಿತಾಳಅಕಳಂಕ ಅಕುತೋತಂಕ ಅಕಳಂಕಮಕುಟಕುಂಡಲಕೌಸ್ತುಭಕೇಯೂರ ವಲಯಾಂಕಿತಕೋದಂಡಕಾರ್ಮುಕಪಾಣಿಅಕಳಂಕ ಸುಖತೀರ್ಥವಂದಿತ ಪಾದಕಮಲ ವಿಧಿನುತ ಮಖಪಾಲಕ ಪ್ರಸನ್ನವೆಂಕಟಾಧಿಪ ಅಕಳಂಕ 5ಜತೆಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿಬಂದು ನೀನಿಂತೆ ನಿಜರಮಣಿಯೊಡನೆಎಂದೆಂದು ಸತ್ಯಾನಭಿವ ತೀರ್ಥಗುರುಹೃದಯಮಂದಿರನೆ ಪ್ರಸನ್ನವೆಂಕಟವರದ ರಾಮ
--------------
ಪ್ರಸನ್ನವೆಂಕಟದಾಸರು
ಸೈಸಲಾರೆನೆಗೋಪಿನಿನ್ನ ಮಗನ ಲೂಟಿ |ಏಸೆಂದು ಪೇಳಲಮ್ಮ ||ವಾಸುದೇವನು ಬಂದು ಮೋಸದಿಂದಲಿ ಎನ್ನ |ವಾಸವಸೆಳಕೊಂಡು ಓಡಿ ಪೋದನಮ್ಮಪದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |ಸಾವಿರ ನುಂಗುವನೆ ||ಭಾವಜನಯ್ಯಇದೇನೆಂದರೆ ನಿಮ್ಮ |ಕಾಮದೇವರು ನಾನು ಕೇಳಿಕೊ ಎಂಬನೆ 1ಅಗ್ರೋದಕತಂದು ಜಗುಲಿ ಮೇಲಿಟ್ಟರೆ |ವೆಗ್ಗಳದಲಿ ಕುಡಿವ ||ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |ಮಂಗಳಮಹಿಮನ ಅಪ್ಪನಾನೆಂಬುವ 2ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |ಅಷ್ಟು ತಾ ಬಳಿದುಂಬನೆ ||ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |ಇಷ್ಟದೇವರು ತೃಪ್ತನಾದನೆಂತೆಂಬುವ 3ಋತುವಾದ ಬಾಲೆಯರು ಪತಿಯೆಡೆ ಪೋಪಾಗ |ಕೃತಕದಿಂದಡಗಿಹನೆ ||ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |ಪ್ರತಿಯಾಗಿ ಮಾರನ ಸೂರೆಗೊಂಬುವನೆ 4ಅಚ್ಚಪಾಲು-ಮೊಸರುನವನೀತಮಜ್ಜಿಗೆ |ರಚ್ಚೆಮಾಡಿ ಕುಡಿವ ||ಅಚ್ಚ ಪುರಂದರವಿಠಲರಾಯನ |ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ 5
--------------
ಪುರಂದರದಾಸರು
ಸ್ಕಂದಗುರು ಸ್ಕಂದಗುರು ಸುರ-ವೃಂದ ಮುನಿಜನರು ವಂದಿಪರು ಪ.ಮಂದರಧರಗೋವಿಂದನ ಶರಣರಸಂದೋಹಕಾವ ವೃಂದಾರಕತರು ಅ.ಪ.ತಾಮಸರು ದ್ವೇಷ ಬೇಡುವರುಕಾಮಿತ ಕೇಳ್ವರು ರಾಜಸರುಸ್ವಾಮಿ ಶ್ರೀಹರಿಯ ಭಕ್ತಿಜ್ಞಾನವಪ್ರೇಮದಿ ಕೇಳ್ವರು ಸಾತ್ವಿಕರು 1ವಿಘ್ನಹರನು ನಿನ್ನಗ್ರಜನು ವಿಬು-ಧಾಗ್ರಣಿಯೆನಿಸುವೆಯೊ ನೀನುಉಗ್ರ ತ್ರಿಯಂಬಕತಾತನು ಖ್ಯಾತನುದುರ್ಗಾದೇವಿಯೆಜನನಿನಿರುಪಮಳು2ತಾರಕಾಂತಕ ನಿಶ್ಯೋಕ ಲಕ್ಷ್ಮೀ-ನಾರಾಯಣನಿಗೆಸಖಭೂರಿನಿಗಮಾರ್ಥಸಾರ ಕೋವಿದನೆಧೀರನೆ ವೀರ ಮಹಾರಣಶೂರನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸ್ವಾಮಿ ಶಂಕರನಿರಲಿಕ್ಕೆಕಾಮದಕಳವಳಿಕೇಕೆಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಗುರುನಾಮ ನಿಧಾನಿರಲಿಕ್ಕೆ | ಎನಗಿಲ್ಲೆಂಬುವದೇಕೆ ಅ.ಪ.ಅನಾಥ ಬಂಧುಅನುದಿನಎನಗಿರೆ |ಅನುಕೂಲದ ಚಿಂತ್ಯಾಕೆ |ತನುಮನಧನದೊಳು ತಾನೆ ತಾನಿರಲು |ಅನುಮಾನಿಸಲಿನ್ಯಾಕೆ ಸ್ವಾಮಿ1ದಾತನೊಬ್ಬ ಶ್ರೀನಾಥ ಎನಗಿರಲು |ಯಾತಕೆ ಪರರ ದುರಾಶೇ |ಮಾತು ಮಾತಿಗೆ ತೋರುವಸದ್ಗುರು ತೇಜಃ ಪುಂಜಗಳ್ಯಾಕೆ ಸ್ವಾಮಿ2ದೊಡ್ಡದು ಸಣ್ಣದು ಧಡ್ಡನು ಜಾಣನು |ಎಂದೆಣಿಸುವದಿನ್ಯಾಕೆ | ಗುಡ್ಡದ್ಹಾಂಗಶ್ರೀ ಶಂಕರನಿರಲು ದುಡ್ಡಿನ ಹಂಗುಗಳ್ಯಾಕೆ ಸ್ವಾಮಿ3
--------------
ಜಕ್ಕಪ್ಪಯ್ಯನವರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹಂಗಿಗನಾಗಬೇಡಾ | ಏ ಮನವೇ | ಹಂಗಿಗನಾಗಬೇಡಾ |ಆ ಯಮನಿಗೆ ಹಂಗಿಗನಾಗಬೇಡಾಪಕಾಮಕ್ರೋಧವು ಲೋಭಮದ ಮಾತ್ಸರ್ಯಗಳೆಂಬ |ವ್ಯಾಮೋಹಾದಿಗಳಿಗೆ ಸಿಲುಕಿ ಸುಮ್ಮನೆ ನೀನು1ಪರದಾರಾಂಶದಿ ಮನ | ವಿರಿಸಿ ಕಾಮಾದಿ ವ್ಯರ್ಥ |ಗುರುಹಿರಿಯರಜರೆ| ದಾಡಿ ಗರ್ವದಿ ನೀನು2ಸತಿಸುತರೆಂದೆಂಬ | ಮೋಹಪಾಶಕೆ ಸಿಕ್ಕಿ |ಅತಿಥಿ ಸತ್ಕಾರ ಮಾಡದೆ | ಲೋಭತ್ವದಿ ನೀನು3ಧರಣಿ ದಾನಾದಿಗಳ | ತನು ಶಕ್ತಿ ಮದದಿಂದ |ಪರರಿಗೆ ಕೇಡನ್ನೆ ಬಗೆವ ಮತ್ಸರದಿ ನೀ4ನೆಂಟರಿಷ್ಟರು ಸರ್ವ | ಮಂದಿ ಸೇವಕರೆಂದು |ತುಂಟತನದಿ ಗೋ|ವಿಂದನಾ ಪಾದಮರತು ನೀ5<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹನುಮ - ಭೀಮ - ಮಧ್ವ ಮುನಿಯನೆನೆದು ಬದುಕಿರೊಅನುಮಾನಂಗಳಿಲ್ಲದಲೆ ಮನದಭೀಷ್ಟಂಗಳನೀವ ಪಪ್ರಾಣಿಗಳ ಪ್ರಾಣೋದ್ದಾರ ಪ್ರಾಣರಲ್ಲುತ್ತಮ ಮತ್ತೆಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕøಷ್ಟ ||ಕಾಣಿರೇನೋ ಕಾಯಕರ್ಮ ಚಕ್ಷುರಿಂದ್ರಿಯಗಳಿಗೆತ್ರಾಣಕೊಟ್ಟು ಸಲಹುವ ಜಾಣಗುರುಮುಖ್ಯಪ್ರಾಣ1ಕಾಮಧೇನು ಚಿಂತಾಮಣಿ ಕಲ್ಪವೃಕ್ಷನಾದ ಸ್ವಾಮಿಪ್ರೇಮದಿಂದ ನೆನಯುವವರ ಭಾಗ್ಯಕ್ಕೆಣೆಯುಂಟೇ ? ||ಸಾಮಾನ್ಯವಲ್ಲವೊ ಈಗ ಮೋಕ್ಷಾದಿ ಸಂಪದದಾತಆ ಮಹಾ ಪರೋಕ್ಷಜ್ಞಾನ ದಾಢ್ರ್ಯ ಭಕುತಿ ಕೊಡುವ 2ಅವತಾರ ತ್ರಯಗಳಿಂದ ಶ್ರೀಹರಿಯ ಸೇವಿಸುವತವಕದಿ ಪೂಜಿಪ ಮಹಾಮಹಿಮೆಯುಳ್ಳವನು ||ಕವಿತೆವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿಭವಬಂಧನ ಕಳೆದುಕಾವಪುರಂದರವಿಠಲನ ದಾಸ3
--------------
ಪುರಂದರದಾಸರು
ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷಆನಂದತೀರ್ಥಗುರು ಚಿಂತಾಮಣಿ ಪ.ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾವೇತ್ತøಜನಕಾ ಸಂತತಕಿಂಪುರುಷವರುಷದಿ ಉಣಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು 1ರಾಜಸೂಯ ಮೂಲದಿಂದ ಶಾಖೋಪಶಾಖ ಸಧರ್ಮಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರಿಯನು 2ಹಂತ ಭಾಷ್ಯಧ್ವಾಂತದಿ ವೇದಾಂತವಡಗೆಪೋಕಮಣಿಮಂತನ ಮುರಿದನು ಮೂವತ್ತೆರಡು ಲಕ್ಷಣದಿಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದಚಿಂತಿತಾರ್ಥ ನಮಗೀವ ಶ್ರೀವ್ಯಾಸಪ್ರಿಯನು ವೇದವ್ಯಾಸಪ್ರಿಯನು 3
--------------
ಪ್ರಸನ್ನವೆಂಕಟದಾಸರು
ಹನುಮದ್ಭೀಮ ಮಧ್ವನಾಮ ಪ್ರಣತಕಲ್ಪದ್ರುಮಘನಕೃಪಾಳು ಭಕ್ತಚಿಂತಾಮಣಿ ಯೋಗೀಂದ್ರಲಲಾಮ ಪ.ಭಾರತಿಪತಿ ನಿಖಿಲವಿಶ್ವಾಧಾರ ಭಾವೀಬ್ರಹ್ಮಸಾರತತ್ತ್ವ ವೇದಾರ್ಥಕೋವಿದ ಧೀರಜೀವೋತ್ತಮ1ಭರ್ಗವಾಸವಾದಿ ದಿವಿಜವರ್ಗಸುಖಧಾಮನಿರ್ಗುಣೋಪಾಸಕ ಮೋಕ್ಷಮಾರ್ಗದರ್ಶಿನಿಷ್ಕಾಮ2ಸೂತ್ರನಾಮಕ ವಾಯುದೇವ ವಿಚಿತ್ರಕರ್ಮನಿಸ್ಸೀಮಕರ್ತಲಕ್ಷ್ಮೀನಾರಾಯಣನಭೃತ್ಯಸಾರ್ವಭೌಮ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹರಿತಾ ದೂರಿಲ್ಲ ದೂರಿಲ್ಲಒರಟು ಮಾತಿನ ಸರಕೆ ಸಲ್ಲ ಪ.ಹರಿದಾಸರ ಸಂಗಕೆ ಸರಿ ಇಲ್ಲ ಗುರುಕೃಪೆಯಿರಲಿ ನಿತ್ಯೆಲ್ಲತರತಮವಿರಹಿತಗೆಲ್ಲಿ ಕೈವಲ್ಯವು ಅ.ಪ.ಧರ್ಮಾಥರ್Àಕಾಮ ಮೋಕ್ಷವನಿಚ್ಛಿಸುವನಿರ್ಮಳ ಮತಿಗಳಿಗಾವಾಗಕರ್ಮದ ಮೋಡಿಗೆ ಸಿಲುಕದವನಗುಣಕರ್ಮನಾಮೋಚ್ಚರಣೆ ಸಾಧನ1ಜ್ಞಾನ ಭಕುತಿ ವೈರಾಗ್ಯ ಹೊಲಬಲಿನಾನಾ ವ್ರತವ ಮಾಡಲು ಬೇಕುಹೀನಕೇಳಿಕೆ ಕಾಳಿಕೆಯನುಳಿದುನಿತ್ಯಶ್ರೀನಿವಾಸನೆಗತಿಎನ್ನಲು2ಸಂತತ ಅಂಗದಿ ಬಲವಿರುವನಕಕಾಂತ ಪ್ರಸನ್ವೆಂಕಟಪತಿಯಅಂತರಂಗದಿ ಚಿಂತಿಸಿ ಕಳೇವರವನುಪ್ರಾಂತಯಾತ್ರೆಗೆ ತ್ಯಜಿಸುವಗೆ 3
--------------
ಪ್ರಸನ್ನವೆಂಕಟದಾಸರು
ಹರಿಯ ಚರಣವೆಂಬ ಸುರಧೇನವನುಗುರುಬೋಧೆಯೆಂಬ ಕಣ್ಣಿಯಲಿ ಕಟ್ಟಿರಯ್ಯಪ.ಭಕುತಿಯೆಂಬ ಕರುವನೆ ಬಿಟ್ಟು ನಿರುತ ವಿರಕುತಿಯೆಂಬ ಚೆನ್ನದಳಿಯ ಹಾಕಿ ||ಯುಕುತವಾದ ನಿತ್ಯಕಾಯ ಚರಿಗೆಯೊಳುಮುಕುತಿನಾಮಾಮೃತ ಕರೆದುಕೊಳ್ಳಿರಯ್ಯ 1ಕಾಮ ಕ್ರೋಧ ಲೋಭ, ಮೋಹ ಮದ ಮತ್ಸರಗಳೆಂಬಹಮ್ಮೆಂಬ ಕುರುಳನೆ ತಾಳಿ ಹಾಕಿ ||ತಾಮಸ ಜ್ಞಾನಾಗ್ನಿ ಪುಟಗೈದು ಇಂದ್ರಿಯನೇಮದ ನೀರ ಬೆರಸಿ ಕಾಯಲಿಡರೊ 2ಶಾಂತಗುಣವೆಂಬ ಹದನರಿತು ಆರಿಸಿ ಮತ್ತೆಭ್ರಾಂತಮನ ಮಜ್ಜಿಗೆಯ ಹೆಪ್ಪನಿಕ್ಕಿ ||ಕಾಂತವಿಷ್ಣು ಮಾಯಾಮಂಥದಿ ಶೋಧಿಸಿ ಸಿ -ದ್ಧಾಂತವೆಂಬ ಕಡೆಗೋಲ ನೇಣನೆ ಪಿಡಿದು 3ಪರಬೊಮ್ಮನೆನಿಪ ಬೆಣ್ಣೆಯ ಮುದ್ದಿಯನೆ ತೆಗೆದುಶರಣಮಣಿಯೆಂಬ ತುಪ್ಪವನೆ ಕಾಯಿಸಿ ||ಮರಣವೆಂಬ ನೊರೆ ತೆಗೆದೊಗೆದು ಅಮೃತವನಿರುತ ಹೃದಯವೆಂಬ ಕೊಡವನೆ ತುಂಬಿರೊ 4ಅನವರತ ಹರಿಸ್ಮರಣೆಯೆಂಬ ಬೀಸೂರಿಗೆಅನುವಾಗಿ ಕುಳಿತುಂಡು ಸುಖದಿ ತೇಗಿ ||ಚಿನುಮಯ ಚಿದಾನಂದ ಪುರಂದರವಿಠಲನಅನುದಿನ ನೆನೆ ನೆನೆದು ಸುಖಿಯಾಗಿರಯ್ಯ 5
--------------
ಪುರಂದರದಾಸರು
ಹರಿಯಧಿಕ ಹರನಧಿಕ ಎಂದು ಹೋರಾಡದಿರಿ |ಹರಿಹರರ ಭಕ್ತರೇ ಸಾಕ್ಷಿ ಲೋಕದೊಳು ಪ.ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ |ಹರನೆಂದು ಅವನ ಪಿತ ತಾನೆ ಅಳಿದ ||ಹರಿಯೆಂದ ವಿಭೀಷಣನು ಸ್ಥಿರಪಟ್ಟವೈದಿದ |ಹರನೆಂದ ರಾವಣನು ಹತನಾದನಯ್ಯ 1ಹರಿಯೆಂದು ಭೀಮ ಪರಿಪೂರ್ಣಕಾಮನು ಆದ |ಹರನೆಂದ ಆ ಜರಾಸಂಧ ಹತನಾದ ||ಹರಿಯು ಬಾಗಿಲ ಕಾಯ್ದ ಬಲ ಭಾಗ್ಯವಂತನಾದ |ಹರನು ಬಾಗಿಲ ಕಾಯ್ದ ಬಾಣನಳಿದ 2ಹರನ ವರವನು ಪಡೆದ ಭಸ್ಮಾಸುರನು ಅವನ |ಶಿರದಲ್ಲಿ ತನ್ನ ಕರವಿಡಲು ಬರಲು ||ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು |ವರದ ಪುರಂದರವಿಠಲ ಕಾಯ್ದುದರಿಯ ? 3
--------------
ಪುರಂದರದಾಸರು