ಒಟ್ಟು 2437 ಕಡೆಗಳಲ್ಲಿ , 116 ದಾಸರು , 1864 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪ್ಪವಡಿಸಯ್ಯ ಕೃಷ್ಣ ಪ.ಉಪ್ಪವಡಿಸೈ ಬೊಮ್ಮನಪ್ಪ ಭುವನಾವಳಿಯಸ್ವಪ್ಪನಾದಿ ತ್ರಯವನಪ್ಪಿ ಪಾಲ್ಗಡಲ ಮಗಳಪ್ಪಿ ಅಹಿವರನ ಸುಪ್ಪತ್ತಿಗೆಲಿ ಒರಗಿಪ್ಪತಿಮ್ಮಪ್ಪವ್ರಜದಿ ದಯದಿಅ.ಪ.ಅರುಣಮೂಡಣವೇರೆ ತ್ವರಿತ ತಮಕುಲ ಜಾರೆಹರಿದವಭ್ರದ ತಾರೆ ತರಣಿಕರ ಬಳಿ ಸಾರೆಸರಸಿಜವಿಕಸತೋರೆ ಮರುತ ಪರಿಮಳ ಬೀರೆ ನೆರೆದುಹರುಷ ದಿವಿಗಣ ಬೀರೆ ಮೊರೆಯುತಿವೆ ಸುರಭೇರೆಪರಮಹಂಸರು ಮೇರೆ ಮರೆದು ಸ್ಮರಿಸುತಲೈದಾರೆಸರ್ವವೇದ ಘೋಷ ಹರಿಪರವೆನುತಲೈದಾರೆ ಕರುಣದಲಿವಸುಧ್ಯೆರೆದಕಾಷ್ಠಗಂಧಕುಸುಮಸರ ತಂದಿಹಳುಬಿಸಜಲೋಚನ ನಿಮ್ಮ ಸೊಸೆ ವಾಣಿ ಭಾರತಿಯುಲ್ಲಸದಿ ಪೊಂಭಾಂಡದಲಿ ಬಿಸಿನೀರು ತುಂಬಿಹರುಪಶುಪಸುಸುಪರ್ಣವಸನಉರಗೇಶ ರತುನನಾಸನಮಾಲ್ಯಸುರಪತಿಕಲಶ ವಹಿಸಿ ವರುಣಸ್ಮರತಿಲಕಹಸನ ಮಾಡುವ ಪಾವುಗೆಶಶಿಧರಿಸಿ ನಿಂದ ಸಂತಸದಿಸ್ವರ್ಧುನಿಯು ಗೋದೆ ಗೋವರ್ಧಿನಿಯು ಗಾತ್ರೆಅಜನರ್ಧಾಂಗಿ ಸರಸ್ವತಿ ಶ್ರೀವರ್ಧಿನಿಯು ಕಾವೇರಿನಿರ್ದೋಷಿ ಸರಯು ತುಂಗಭದ್ರೆ ಕಾಳಿಂದಿ ನರ್ಮದ್ಯೆಮರ್ದಿತಘೌಘೆಯು ಕುಮುದ್ವತಿ ವಂಜರೆ ಭೀಮೆನಿರ್ಧೂತಕಲಿಮಲಕಪರ್ದಿನಿಯು ತಾಮ್ರಪರ್ಣಿಊಧ್ರ್ವಗತಿಪ್ರದ ನದಿ ಬಂದಿರ್ದವಿದೆ ತೀರ್ಥ ಕ್ರಮಕಿನ್ನರರು ಸುರನಾಯಕ ಮನ್ನೆಯರು ಸಲೆ ದೇವಗನ್ನೆಯರುಕಿಂಪುರುಷಪನ್ನಗರು ವಿದ್ಯಾಧರನಿಕರ ತುಂಬುರರು ನಿನ್ನಗುಣಕೀರ್ತನೆಯ ಮಾರ್ಗೋನ್ನತದಚೆನ್ನ ಭೂಪಾಳಿ ದೇವ ಧನಶ್ರೀ ದೇಶಾಕ್ಷಿಸನ್ನುತವಸಂತ ಮಲಹ ನವೀನ ಮಾಳ್ಪ ಶ್ರೀಘನ್ನ ಸ್ವನಾಮಂಗಳನು ಪಾಡುವರಿದಕೋ ಧನ್ಯ ಸಂಗೀತಲೋಲ4ಸುರಮುನಿ ಭೃಗು ವಸಿಷ್ಠ ನರಪಋಷಿ ಸನಕಾದ್ಯಮರೀಚ್ಯತ್ರಿ ಪುಲಸ್ತ್ಯ ಆಂಗಿರ ಚ್ಯವನ ಸೌಭರಿಯು ಭಾರಧ್ವಾಜಗಸ್ತ್ಯ ಪರಾಶರ ಕಶ್ಯಪ ಜಮದಗ್ನಿ ಗಾಗ್ರ್ಯಮಾರ್ಕಂಡೇಯ ಬಕದಾಲ್ಭ್ಯ ಕರಂಧಮೋದ್ಧಾಲಕನುವರದಾಂಕ ಜಹ್ನುಮುನಿ ವರ್ಣಿಕುಲದಗಣಿತರುನೆರೆನೆರೆದುತುತಿಸಿಸುಖಭರಿತರಾಗುತ ನಿಮ್ಮ ಚರಣದೂಳಿಗಕ್ಷಿತಿಪರೊಳು ಮರುತ ಪ್ರಿಯವ್ರತ ಪ್ರಾಚೀನ ಬರ್ಹಿಪ್ರಥು ಗಯ ಧ್ರುವಿಕ್ಷ್ವಾಕು ದಿತಿಜಸುತ ಮಾಂಧಾತಪ್ರತಿಸಗರ ನಹುಷಬಲಿಶತಧನ್ವಿದೇಹಿ ದಶರಥಶ್ರುತಕೀರ್ತಿ ಶಿಬಿ ದೇವವ್ರತ ಅಂಬರೀಷನು ಭರತದ್ವಯ ಪುರೂರವ ಯಯಾತಿ ರಂತಿದೇವ ಪರೀಕ್ಷಿತನು ಮುಚುಕುಂದ ನಳ ಶತಪುಣ್ಯಶ್ಲೋಕ ನೃಪರತಿನಂದಗೋಕುಲದ ಗೋವಿಂದಗಾರ್ತರು ನಿದ್ರೆಹೊಂದೆದ್ದಾನಂದದಿಂ ದೀಪಗಳ ಪ್ರಜ್ವಲಿಸಿಮಿಂದು ಬ್ರಾಹ್ಮಿಯಲುಟ್ಟು ಪೊಂದೊಡಿಗೆ ಮಣಿದೊಡಿಗೆವಂದಿಸುತ ಗೃಹದೇವರ ದಧಿಮಥಿಸಿ ಬೆಣ್ಣೆಯಇಂದಿರೆರಮಣ ಮೆಲ್ಲಲೆಂದು ತೆಗೆದಿಡಲರುಹಬಂದಿಹರು ಗೋವಳರು ಮುಂದೆದ್ದು ತಮ್ಮ ಏಳೆಂದುಶ್ರೀಪತಿಯೆ ಬ್ರಹ್ಮಾದಿ ತಾಪಸರ ಪ್ರಭು ಏಳುದ್ವೀಪ ದ್ವೀಪಾಂತರದ ಭೂಪರರಸನೆ ಏಳುಕಾಪುರುಷ ಕಾಳ ಕುಮುದಾಪಹರಹರಿಏಳು ಕೋಪಹೇಪಾರ್ಥಸಖಸುಪ್ರತಾಪ ಜಗ ಎರಡೇಳುವ್ಯಾಪಕನೆ ವಿಬುಧಕುಲಸ್ಥಾಪಕನೆ ಮೂರೇಳುಕೂಪಕುಲನಾಶಕ ಚಮೂಪ ಸಂಹರ ಏಳು ದ್ರೌಪದೀ ಬಂಧು ಏಳು 8ಶ್ರುತಿಯ ತರಲೇಳು ಭೂಭೃತವ ಹೊರಲೇಳುಶುಭಧೃತಿಯನಾಳೇಳು ದುರ್ಮತಿಯ ಸೀಳೇಳಮರತತಿಯ ಸಲಹೇಳು ನಿಜಪಿತನ ಕಾಯೇಳು ಮಹಿಸುತೆಗೆಸತಿಯರಾಳೇಳು ಪತಿವ್ರತೆರ ಗೆಲಲೇಳುಕಲಿಖತಿಯ ಕಳಿಯೇಳು ಪಂಡಿತರುಳುಹಲೇಳು ನಮಗತಿಶಯ ಪ್ರಸನ್ನವೆಂಕಟಪತಿ ಕೃಷ್ಣ ಸದ್ಗತಿದಾತ ತಾತಯೇಳೈ 9
--------------
ಪ್ರಸನ್ನವೆಂಕಟದಾಸರು
ಉಪ್ಪವಡಿಸಯ್ಯ ಹರಿಯೇಏಳೈ ಹೃಷಿಕೇಶ ಏಳುರವಿ-ಶಶಿನಯನಪ.ಏಳು ಪಶುಗಳ ಕಾಯ್ದು ಪಾಲಿಸಿದೆ ಗೋಕುಲವಏಳು ಸುರವಂದಿತನೆ ಏಳು ಭೂಸತಿರಮಣಉಪ್ಪವಡಿಸಯ್ಯ ಹರಿಯೇ ಅಪಪಚ್ಚೆ ಮುಡಿವಾಳಗಳು ಅಚ್ಚ ಸೇವಂತಿಗೆಯುಬಿಚ್ಚು ಮಲ್ಲಿಗೆ ಜಾಜಿ ಸಂಪಿಗೆಯುಪುನ್ನಾಗಅಚ್ಚರಿಯ ಬಕುಲ ಕೆಂಜಾಜಿ ಕೇತಕಿಕುಸುಮಗುಚ್ಛಗಳಅಚ್ಚ ಜಾಣೆಯರು ಶ್ರೀಗಂಧ ಕಸ್ತೂರಿ ಪುನುಗುಬಿಚ್ಚು ಬಿಳಿಯೆಲೆಯಡಿಕೆ ಪಿಡಿದು ನಿಂತಿಹರಯ್ಯಮುಚ್ಚುತಿವೆ ತಾರೆಗಳು ಹೆಚ್ಚುತಿವೆ ರವಿಕಿರಣ ಅಚ್ಯುತನೆಉಪ್ಪವಡಿಸೊ 1ಚೆನ್ನೆಯರು ಚದುರೆಯರು ಸುಗುಣಸಂಪನ್ನೆಯರುಪನ್ನೀರು ತುಂಬಿರ್ದ ಪೊನ್ನ ತಂಬಿಗೆಗಳನುರನ್ನಗನ್ನಡಿಯನ್ನು ಪಿಡಿದು ನಿಂತಿರುವರೈ ಪನ್ನಂಗಶಯನ ಏಳೈ ||ಮನ್ನಣೆಯ ನಾರದರು ಮೊದಲಾದ ಮುನಿನಿಕರನಿನ್ನ ಮಹಿಮೆಗಳನ್ನು ಪಾಡಿ ನಲಿಯುವರಯ್ಯಇನ್ನು ಏಳೇಳು ಉದಯದ ಸಮಯ ಸಿರಿಯರಸಚೆನ್ನಿಗನೆ ಉಪ್ಪವಡಿಸೊ 2ದೇವದುಂದುಭಿ ಮೊಳಗೆ ದೇವಕನ್ನೆಯರೆಲ್ಲದೇವಾಂಗ ವಸ್ತ್ರವನು ಪಿಡಿದು ನಿಂತಿಹರಯ್ಯದೇವ ದೇವೇಶ ನಿಮ್ಮೋಲಗದ ಸಂಭ್ರಮಕೆ ದೇವತೆಗಳೆಲ್ಲ ಕರೆದು ||ದೇವ ಪ್ರಹ್ಲಾದಬಲಿ ಮುಖ್ಯರನು ಕಾಯ್ದವನೆದೇವ ಬ್ರಹ್ಮನ ಪಡೆದ ದೇವಗಂಗೆಯ ಪಿತನೆದೇವ ದೇವೋತ್ತಮನೆ ದೇವಾಧಿದೇವ ಪುರಂದರವಿಠಲಉಪ್ಪವಡಿಸೊ 3
--------------
ಪುರಂದರದಾಸರು
ಉಪ್ಪವಡಿಸೆಲೆಲೆ ತಂದೆಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.ಕಮಲಸಖಸೂರ್ಯಮೂಡದ ಮುನ್ನೆ ಮುನಿಜನರುತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರುರಮೆಯರಸ ಯೋಗನಿದ್ರನೆ 1ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲಸುಲಲಿತ ಸ್ವನದಿ ಪಾಡುತಿರೆಸಾರಸಮಯೂರಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತಬಳಗ ಬಲು ತುತಿಸುತಿವೆ ಕೋ 2ಪವಿತ್ರೆಯೆನಿಸುವ ದೇವನದಿ ಯಮುನೆ ಗೋದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿಕಾವೇರಿ ತುಂಗಭದ್ರೆ ಭೀಮಾದ್ಯರೈತರಲುಪಾವನಿಸುತೀರ್ಥಪದನೆ3ಹನುಮಸುರಋಷಿದೇವ ಗಂಧರ್ವ ಕಿಂಪುರಷರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯಸನಕಾದಿ ವಂದ್ಯ ಕೃಷ್ಣ 4ತಮಜಾರಿ ಕೇಳುಮಂದರಪೊರೆಯಲೇಳೈ ವಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳುಕುಮತಿಜನರಿಪುಭವಾಬ್ಧಿತ್ರಾತ ಸುಖಿಯೋಗಿಅಮಲಪ್ರಸನ್ನ ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಊಟಕ್ಕೆ ಬಂದೆವು ನಾವು ನಿನ್ನ -ಕೋಟಲೆಗಳ ಬಿಟ್ಟು ಅಡಿಗೆ ಮಾಡಮ್ಮ ಪ.ಕತ್ತಲಕ್ಕುತಲಿವೆ ಕಣ್ಣು - ಬಲು -ಬತ್ತಿ ಬರುತಲಿವೆ ಕೈಕಾಲ ಜುಮ್ಮ ||ಹೊತ್ತು ಹೋಗಿಸಬೇಡವಮ್ಮ - ಒಂದು -ತುತ್ತನಾದರು ಮಾಡಿ ಇಕ್ಕುವುದು ಧರ್ಮ 1ಒಡಲೊಳಗುಸಿರಿಲ್ಲವಮ್ಮ - ಗಳಿಗೆ -ತಡವಾದರೀ ಪ್ರಾಣ ಉಳಿವುದಿಲ್ಲಮ್ಮ ||ನುಡಿಯು ಚಿತ್ತಕೆ ಬರಲಮ್ಮ - ಒಂದು -ಪಿಡಿ ಅಕ್ಕಿ ಅನ್ನದಿ ಕೀರ್ತಿ ಪಡೆಯಮ್ಮ........... 2ಹೊನ್ನರಾಶಿಗಳನು ಸುರಿಯೆ - ಕೋಟಿ -ಕನ್ನೆ ಧರಿತಿಯ ಧಾರೆಯನೆರೆಯೆ ||ಅನ್ನದಾನಕೆ ಇನ್ನು ಸರಿಯೆ - ನಮ್ಮ -ಚೆನ್ನ ಪುರಂದರವಿಠಲನೊಳ್ ಬೆರೆಯೆ........... 3
--------------
ಪುರಂದರದಾಸರು
ಊರ್ವಶಿ :ಸಿಂಧುಶಯನ ವನದಿಂದಇಂದಿರೇಶ ಮುದದಿಂದ ಮೌನಿಮುನಿ-ವೃಂದದಿಂದ ಸ್ತುತಿವಂದನೆಗೊಳ್ಳುತ 1ಏಸುಲೋಭಿಯೊ ತಿಮ್ಮಶೆಟ್ಟಿ ಒಂದುಕಾಸಿಗೆ ಮಾರುವ ರೊಟ್ಟಿದಾಸರ ಕೂಡಿ ಜಗಜಟ್ಟಿ ಬಹುದೇಶವ ತಿರುಗುವ ಶೆಟ್ಟಿದೂಷಣಾರಿ ಪಾದಾಶ್ರಿತಜನರಭಿ-ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ 2ದೊಡ್ಡವನೈ ಮಹಾರಾಯ ಹಳೆದುಡ್ಡಿಗೆ ನೀಡುವ ಕೈಯಅಡ್ಡಿಗೈದರೆ ಬಿಡನಯ್ಯ ಇವಬಡ್ಡಿಕೇಳುವ ತಿಮ್ಮಯ್ಯದಡ್ಡುಕೇಸಕ್ಕಿಯ ಮಡ್ಡಿಪ್ರಸಾದವಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ 3ತಿರುಪತಿಗೆ ಪ್ರತಿಯಾಗಿ ಪಡುತಿರುಪತಿಯೆಂದಿಹಯೋಗಿಮೆರಸುವನೈ ಸ್ಥಿರವಾಗಿ ಶ್ರೀವರವೆಂಕಟ ಲೇಸಾಗಿಶರಣರು ಏನೆಂದು ಸಂತೋಷಿಪಕರುಣಾಕರ ಚಪ್ಪರ ಶ್ರೀನಿವಾಸನು 4ಈ ಪರಿಯಲಿ ಒಲಿದಿಪ್ಪಾ ಬಹುವ್ಯಾಪಾರಿ ತಿಮ್ಮಪ್ಪಾಕಾಪಟ್ಯರಿಗೆ ತಾನೊಪ್ಪನಮ್ಮಗೋಪಾಲಕಜಗದಪ್ಪಶ್ರೀಪರಮಾತ್ಮ ನಾನಾಪರಿ ವಿಭವದಿಗೋಪುರದಲಿ ತಾ ವ್ಯಾಪಿಸಿ ನಿಂದನು 5ರಂಭೆ : ನಾರೀವರ್ಯಾರಮ್ಮ ನೋಡಲುಸಾರಹೃದಯರಮ್ಮತೋರಣಛತ್ರಚಾಮರ ಬಿರುದುಗಳಿಂದಭೂರಿವಿಭವದಿಂದ ಸಾರಿಬರುವರಮ್ಮ1ಕರದಿ ಕಲಶವಿಹುದು ಶಾಲಿನನಿರಿ ಮುಂದಿರುತಿಹುದುಬೆರಳಿನೊಳುಂಗುರುವರದ್ವಾದಶನಾಮಧರಿಸಿ ಸಮಂತ್ರೋಚ್ಚರಿಸುತ ಬರುವರು 2ಮಂದಿಗಳೊಡ್ಡಿನಲಿ ಬರುವರುಮಂದಸ್ಮಿತದಲಿಚಂದದಿ ಜನಗಳಸಂದಣಿಮಧ್ಯದಿಇಂದಿರೆಯರಸನ ಧ್ಯಾನದಿ ಬರುವರು 3ಹಿಂಗದೆ ಬರುತಿಲ್ಲಿ ಮನಸಿನಇಂಗಿತವರಿತಿಲ್ಲಿಬಂಗಾರದ ಭೂಷಣಸಮುದಾಯದಿಅಂಗಜಪಿತನಿಗೆ ಶೃಂಗಾರಗೈವರು 4ವಿಪ್ರೋತ್ತಮರ ಗುಣ-ಕೆಂತು ಸೈರಣೆಯಾಂತು ನಾನಿರಲಿಚಿಂತಿತಾರ್ಥವನೀವ ಲಕ್ಷ್ಮೀ-ಕಾಂತ ಶ್ರೀನಿವಾಸನಂಘ್ರಿಯಸಂತಸದಿ ಪೂಜಾದಿ ಸತತಿ-ಯಾಂತಕೊಂಡಿಹೇಕಾಂತಭಕ್ತರು 1ಒಂದು ಭಾಗ ಪುರಾಣಿಕರು ತಾವೆಂದುಕೀರ್ತಿಯನು ಧರಿಸಿ ಮ-ತ್ತೊಂದು ಭಾಗದಿ ಜೋಯಿಸರುತಾವೆಂದು ಧರ್ಮವನು ಪಾಲಿಸಿಸಿಂಧುಶಯನನ ಚಾರುಚರಣ-ದ್ವಂದ್ವಕಾನತರಾಗಿ ಲೋಕದಿವಂದ್ಯರೆನಿಸಿಯಾನಂದ ಪರರಿವ-ರೆಂದು ಶ್ರೀಗೋವಿಂದ ನಡೆಸುವ 2ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿವಾದಗೈವ ಕುವಾದಿಗಳ ಮನ-ಭೇದಿಸುತ ನಿಜವಾದ ಮಾರ್ಗವಶೋಧನೆಗೆ ತಾವೈದಿಸುವ ಮಹಾಸಾಧುಗಳಿಂದ ದೃಢವಾದ ಮಾತಿದು 3ಅಂಬುಜಾಕ್ಷಿಯೇನೆಂಬೆಮೇಗರೆಡಂಭಮಾತಲ್ಲ ಧನಿಯ ಕು-ಟುಂಬವೆನುತಲಿ ತುಂಬ ಕೀರ್ತಿಯಗೊಂಬರೆ ಎಲ್ಲ ಸಂತಸಸಂಭ್ರಮದಿ ವೇದ್ಯಾಂಬುನಿಧಿಯಲಿತುಂಬಿರುವರೀ ಕುಂಭಿನಿಯೊಳು ಜ-ಸಂಬಡುವುದು ವಾಸಿಷ್ಠಗೋತ್ರಜ-ರೆಂಬ ವಿಪ್ರಕದಂಬಪೂಜ್ಯರು 4ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆಆಲೋಚಿಸಲರಿದಾ ಕಮಲಾಲೋಲನಮಹಾಲೀಲೆ 2ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇಮೂರ್ಲೋಕದೊಳಗೆ ಇಂಥಲೀಲೆಯ ನಾನರಿಯೆ 3ಫಾಲೇಂದು ಕುಂದದ ವರ್ಣಕೋಲು ಚಾಮರಗಳನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು 4ಚಂಡವೈಶ್ವಾನರನ ತೇಜಾಖಂಡದಿಂದೋರಂತೆಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ 5ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿಆದಿನಾರಾಯಣ ಮದುಸೂದನನೆ ಮುದದಿ 6ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರುನಾದಿನಿ ಕೇಳಿದರ ಪರಿಯನೀ ದಯದಿಂದುಸುರು 7ದೇವನಾಗಮನವೆಲ್ಲನೂದೀವಟಿಗೆ ಸೇವೆಯೆಂದು ಪೇಳುವರುಭಾವುಕರು ಮನದೊಳಂದು 1ಕೇಳಿದರೆ ಆಲಸಾಯನವನು ಸುರಿದುಆಯತವನು ವರ್ಣಿಸುವಡೆ ಬಾಯಿಯುಸಾವಿರ ಸಾಲದುಶ್ರೀಯರಸನ ಮಹಿಮೆಯರಿವದಾರಿಗಳವಲ್ಲ 3ಜಯಜಯ ಭಕ್ತಸುಪೋಷಣ ಜಯಜಯದೈತ್ಯವಿನಾಶನಜಯಜಯ ಜಾಹ್ನವಿತಾತ ಜಯಜಯ ಜಗದಾತಜಯಜಯ ರವಿಶತತೇಜ ಜಯಜಯಆಶ್ರಿತ ಸುರಭೂಜಜಯಜಯ ನಾದದಿಯೇರ್ದ ನಿರ್ಭಯತೋರುತ ಒಲಿದು 4* * *ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ-ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ 1ಸೇವೆಯ ಕೈಕೊಳ್ಳು ಎನುತಡ್ಡಬಿದ್ದರು ನೋಡೆ ತಂಗಿ ಭಕ್ತಿಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ-ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ 3ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ-ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ 4ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥಮೌರಿಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ-ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ 6ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ-ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ 7ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ-ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ 8ಚಿತ್ತೈಸಿದನಿಲ್ಲಿನಿತ್ಯಉತ್ಸಹಲೋಲ ನೋಡೆ ತಂಗಿ ಭಕ್ತ-ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ 9ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ 10ಯಾವಾಗಲು ಬರುವವನಲ್ಲ ಧನಿಯೆಂದುನೋಡೆ ತಂಗಿ ನಮ್ಮದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ 11ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ-ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12ಭೂರಿಕದಳಿಚೂತಪನಸ ಫಲಗಳನ್ನುನೋಡೆ ತಂಗಿ ಮಹಾ-ಮೇರುವಿಗೆಣೆಯಾದ ಮೇರ್ವೆಶೃಂಗಾರವ ನೋಡೆ ತಂಗಿ 13ಸುತ್ತುಮುತ್ತಲು ಝಲ್ಲಿಗಳಾನಂದವ ನೋಡೆ ತಂಗಿ ಅದ-ರೊತ್ತಿಲಿರುವ ಪಲ್ಲವ ಪೂಗಳ ಮಾಲೆ ನೋಡೆ ತಂಗಿ 14ಮೇಲೆ ಕಟ್ಟಿರುವ ಪತಾಕೆನಿಶಾನಿಯ ನೋಡೆ ತಂಗಿ ಸಾಲು-ಸಾಲಿನ ಅಂಕಣದೊಳಗಿಹ ಬೊಂಬೆಯ ನೋಡೆ ತಂಗಿ 15ಬಾಣಬಿರುಸು ಜೇನುಂಡೆಯ ಶಬ್ದವ ನೋಡೆ ತಂಗಿ ವೀಣಾ-ವೇಣುಸುಗಾನ ಸಂಗೀತ ಮನೋಹರ ನೋಡೆ ತಂಗಿ16ತಾಳಮೃದಂಗ ಸುಸ್ವರ ರಂಜಿತದಿಂದ ನೋಡೆ ತಂಗಿ ಗಣಿ-ಕಾಲತಾಂಗಿಯರ ಗಾಯನದಭಿನಯನ್ನು ನೋಡೆ ತಂಗಿ 17ಕಾಲುಂಗುರ ಗೆಜ್ಜೆಗಳಕಟ್ಟಿಕುಣಿವರು ನೋಡೆ ತಂಗಿ ತಮ್ಮಮೇಲುದನೋಸರಿಸುತ್ತ ಮೋಹಿಸುವರು ನೋಡೆ ತಂಗಿ 18ಕಂತುಪಿತನು ಇಲ್ಲಿ ನಿಂತನು ವಿಭವದಿ ನೋಡೆ ತಂಗಿ ತದ-ನಂತರದಲಿ ಆರತಿಯನುಗೊಂಡನು ನೋಡೆ ತಂಗಿ 19ಭೂತಪದೊಳಗೀ ನೂತನವೆಲ್ಲುಂಟು ನೋಡೆ ತಂಗಿ ಹರಿ-ಪ್ರೀತರಾಗಿರುವನಾಥರ ಸೇವೆಯ ನೋಡೆ ತಂಗಿ 20ವೇದೋದ್ಧಾರಕ ನಿನ್ನ ಪಾದವೇ ಗತಿಯೆಂದುನೋಡೆ ತಂಗಿ ಮಹಾ-ಸಾಧುಗಳತ್ತಲು ಕಾದುಕೊಂಡಿರುವರು ನೋಡೆ ತಂಗಿ 21ಚರಣನಂಬಿದ ತನ್ನ ಶರಣರ ಪೊರೆಯೆಂದುನೋಡೆ ತಂಗಿ ತಾನುತ್ವರಿತದಿ ಬಂದನು ಉರುತರ ತೋಷದಿ ನೋಡೆ ತಂಗಿ 22ಮನೆಮನೆಗಳ ಸಮ್ಮುಖದಲ್ಲಿ ದೀಪವ ನೋಡೆ ತಂಗಿ ಎಲ್ಲಾಜನಗಳು ಕೈಗಳ ಮುಗಿದು ನಿಂದಿರುವರು ನೋಡೆ ತಂಗಿ 23ರಾಜ ಬೀದಿಯೊಳು ವಿರಾಜಿಪ ತೋರಣನೋಡೆ ತಂಗಿ ಸುರ-ಭೂಜದಂತಿಹ ಮಹಾಸೋಜಿಗಕುರುಜವ ನೋಡೆ ತಂಗಿ24ಕಂತುಜನಕನಿಲ್ಲಿ ನಿಂತು ಪೂಜೆಯಗೊಂಡನೋಡೆ ತಂಗಿ ತದ-ನಂತರದಲಿ ಮನಸಂತೋಷಪಡಿಸಿದ ನೋಡೆ ತಂಗಿ 25ಮುಂದೆ ಬರುವ ಜನಸಂದಣಿಗಳ ಮಧ್ಯ ನೋಡೆ ತಂಗಿ ಇ-ನ್ನೊಂದು ಗೂಡಿನ ಪರಿಯಂದವ ನೀನಿತ್ತ ನೋಡೆ ತಂಗಿ 26ಮಾಣಿಕ್ಯರಾಸಿಯಮಾಣದೆಇಟ್ಟರೊ ನೋಡೆ ತಂಗಿ ಸರಿ-ಗಾಣೆ ಈ ಗುಡಿಗೆ ಜಾಣೆ ನೀ ಮನವಿಟ್ಟು ನೋಡೆ ತಂಗಿ 27ಮೂಡಿತೊ ಸೂರ್ಯನ ಕಿರಣಗಳೆಂಬಂತೆನೋಡೆ ತಂಗಿ ಇಂಥಗೂಡಿನೊಳಗೆ ದಯಮಾಡಿ ಸೇವೆಯಗೊಂಡ ನೋಡೆ ತಂಗಿ28ತರುಣಿಯರನ್ನಳೆಯಿತ್ತ ಶರಧಿಯಂತುಕ್ಕುತನೋಡೆ ತಂಗಿ ಭೂರಿ-ಹರುಷದಿಂ ಬರುವ ಭಕ್ತರನೇಕರು ನೋಡೆ ತಂಗಿ 29ಹರಿಯೇ ನೀ ಎಮ್ಮಯ ಪೊರೆಯೆಂದು ಭಕ್ತಿಯೊಳ್ನೋಡೆ ತಂಗಿ ಬಂದುಚರಣಕಾನತರಾಗಿ ಅರಿಕೆಯ ಗೈವರು ನೋಡೆ ತಂಗಿ 30ಮಕ್ಕಳನರಸಿ ಮಾತೆಯು ಪೋಗುವಂದದಿನೋಡೆ ತಂಗಿ ಮಹಾ-ರಕ್ಕಸವೈರಿಯು ದಯಮಾಡಿ ಪೊರಟನು ನೋಡೆ ತಂಗಿ 31ಪರಮಪುರುಷ ಭೂರಿವಿಭವದಿ ಬರುವುದನೋಡೆ ತಂಗಿ ಬಾಣಬಿರುಸುಗಳೆಲ್ಲವು ಸುರುಸುರುಯೆಂಬುದು ನೋಡೆ ತಂಗಿ 32ಫಲ್ಲನೆ ಹೊಳೆಯುವ ಹಿಮಕರಜ್ಯೋತಿಯನೋಡೆ ತಂಗಿ ಮನಘಲ್ಲೆನಿಸುತ್ತಿಹ ಬೆಡಿಖಂಬಧ್ವನಿಯನು ನೋಡೆ ತಂಗಿ 33ಭುಗಿಲು ಭುಗಿಲು ಧಗಧಗಲೆನ್ನುತಲಿದೆ ನೋಡೆ ತಂಗಿ ಕಿ-ಡಿಗಳನುಗುಳುವ ವಸನಪ್ರಕಾಶವ ನೋಡೆ ತಂಗಿ 34ಈ ರೀತಿಯ ವಿಭವದಿ ಏರಿದ ಮೇರ್ವೆಯ ನೋಡೆ ತಂಗಿ ರತ್ನ-ದಾರತಿಯಗೊಂಡನು ಶ್ರೀನಿವಾಸನು ನೋಡೆ ತಂಗಿ 35ಲೋಕದೊಳಗೆ ನೂತನವಿದೊಂದನು ನೋಡೆ ತಂಗಿ ಅ-ನೇಕ ಮಕ್ಕಳುಗಳ ನೇತಾಡಿಸುವದ ನೋಡೆ ತಂಗಿ 36ಪುತ್ರೋತ್ಸವ ಫಲಗಳು ದೊರಕಿದ ಕಾರಣ ನೋಡೆ ತಂಗಿ ಇದು-ಪುತ್ರ ಫಲಾವಳಿ ಹರಕೆಯಂಬರು ಕಾಣೆ ನೋಡೆ ತಂಗಿ 37ಇಳಿದನು ಇಂದಿರೆಯರಸನು ಮೇರ್ವೆಯ ನೋಡೆ ತಂಗಿ ರಥ-ದೊಳಗಿದ್ದ ಪರತತ್ವರೂಪನು ಸಹಿತಲಿ ನೋಡೆ ತಂಗಿ 38ಮಾಣದೆಭಕ್ತರ ಮಮತೆಯ ಕಾರಣ ನೋಡೆ ತಂಗಿ ಮುಖ್ಯ-ಪ್ರಾಣರಲ್ಲಿಗೆ ಪೋದರಿಬ್ಬರು ಒಂದಾಗಿ ನೋಡೆ ತಂಗಿ 39ಅವರಿವರಂತಲ್ಲ ದೊರೆ ಹನುಮಂತನು ನೋಡೆ ತಂಗಿ ಪಟ್ಟ-ದರಸನ ಸಹಿತಿಲ್ಲಿ ಇಳಿಸಿದನಲ್ಲವೆ ನೋಡೆ ತಂಗಿ 40ಹನುಮನ ಸೇವೆಯ ಕೈಕೊಂಡು ಕರುಣದಿನೋಡೆ ತಂಗಿ ಮತಘನವಾದ ಶೇಷತೀರ್ಥವ ನೋಡಿ ಬಂದನು ನೋಡೆ ತಂಗಿ41* * *ಬಂದನು ತ್ರೈಜಗದೀಶ ನಡೆ-ತಂದನು ರವಿಕೋಟಿಭಾಸ ಸರ್ವೇಶ ಪ.ಪಲ್ಲಂಕಿಯಲಿ ತಾನೇರಿ ಭಕ್ತ-ಸುಲ್ಲಭ ಸುತ್ತುಬರುವನೆಲೆ ನಾರಿಸಲ್ಲಲಿತಾರ್ಥ ಋಗ್ವೇದ್ಯಜುರ್ವೇದವ-ನೆಲ್ಲವ ಲಾಲಿಸಿ ಉಲ್ಲಾಸದೊಳಗೆ 1ಸಂಗೀತನರ್ತನಗಳನು ಪೂರ್ಣ-ಮಂಗಲಕರ ವೀಣಾವೇಣುಗಾನವನುಶೃಂಗಾರ ಪದ್ಮಮೃದಂಗ ಸರ್ವಾದ್ಯಪ್ರ-ಸಂಗದಿ ಒಲಿಯುತಗಜನಕನು 2ಕಪಟನಾಟಕಸೂತ್ರಧಾರಿ ಸರೀ-ಸೃಪಗಿರಿರಾಜ ದಾನವಕುಲವೈರಿಅಪರೂಪವಾದ ಮಂಟಪದಲಿ ಮಂಡಿಸಿಕೃಪೆಯ ಬೀರಿದನು ಸೇವಿಪ ಭಕ್ತರಿಂಗೆ 3ಭಕುತರಾಯಾಸವನೆಲ್ಲ ತನಶಕುತಿಯಿಂದಲಿ ಬಿಡಿಸಿದನದನ್ನೆಲ್ಲಅಖಿಳಭಯಗಳ ನಿವಾರಿಸಿ ತೆಗೆಯುತ್ತಮುಕುತಿದಾಯಕನು ಗೃಹಾಂತರಕ್ಕೈದಿದನು 4ಇಂದ್ರಾದಿ ದೇವತೆಯರನು ಅರ್ಧ-ಚಂದ್ರಶೇಖರಪ್ರಮಥಾದಿ ಗಣವನುಇಂದುಗೋವಿಂದನು ಚಂದದಿ ಸಂತುಷ್ಟಿ-ಹೊಂದಿಸಿ ಸರ್ವಾನಂದವ ತೋರ್ದನು 5ಆದ್ಯಂತ ಭಕ್ತರ ನೋಡಿ ಶ್ರೀಪ್ರ-ಸಾದವ ನೀಡಿ ಭಕ್ತರ ಒಡನಾಡಿಮುದ್ದುಮೋಹದ ಮಡದಿಯರ ಸಮೇತದಿಗದ್ದುಗೆಯಲಿ ಸಾನ್ನಿಧ್ಯ ತೋರಿದ ಕಾಣೆ 6ಈ ರೀತಿಯಲಿ ಶ್ರೀಹರಿಯು ನಾನಾಭೂರಿವಿಭವದ ಶೃಂಗಾರ ಶೋಭಿತವುನೀರೆ ಪಂಚಮಿ ಶುಭವಾರದ ದಿವಸದಸಾರಉತ್ಸಹ ಪೂರ್ಣ ತೋರಿಸಿ ಪೊರೆದನು7ಆರತಿಯನು ಎತ್ತಿದಳು ಜಯ-ಭೇರಿರವದಿ ಆಕಾಶನ ಮಗಳುವಾರಿಧಿಶಯನ ಮುರಾರಿ ಶ್ರೀಲಕ್ಷ್ಮೀ-ನಾರಾಯಣನ ಸಾಕಾರವನ್ನು ನೋಡಿ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಚ್ಚರಿಕೆ ಎಚ್ಚರಿಕೆ ಮನವೆ - ನಮ್ಮಅಚ್ಯುತನ ಪಾದಾರವಿಂದ ಧ್ಯಾನದಲಿ ಪ.ಆಶಾಪಾಶದೊಳಗೆ ಸಿಲುಕಿ - ಬಹುಕ್ಲೇಶಪಟ್ಟು ತುಟ್ಟ ಸುಖದ ಮರುಳಿಕ್ಕಿಹೇಸಿ ಸಂಸಾರದಲಿ ಸಿಲ್ಕಿ -ಮಾಯಾಕ್ಲೇಶಅಂಬರಕೇಳಾಗೆ ಮೈಮರೆತು ಸೊಕ್ಕಿ1ಹಣ - ಹೆಣ್ಣು - ಮಣ್ಣಾಸೆ ವ್ಯರ್ಥ - ಈತನುವಿಗೆ ಯಮಪುರ ಪಯಣವೇನಿತ್ಯಮೂರು ಶೃಂಗಾರಗಳುಮಿಥ್ಯ - ಅಂತಕನ ಯಾತನೆಗಳಿಗೆ ಹರಿನಾಮ ಪತ್ಯ 2ತೊಗಲ ಚೀಲ ಒಂಬತ್ತು ಹರುಕು -ನರಬಿಗಿದುಕಟ್ಟಿ ಒಳಗೆ ಎಲುವುಗಳ ಸಿಲುಕುಬಗೆರಕ್ತ - ಮಾಂಸದ ಹುಳುಕು - ಒಳಗೆ ಮಲ - ಕಫ -ವಾತ- ಪಿತ್ತದಸರಕು3ದುಷ್ಟರ ಸಹವಾಸ ಹೀನ - ಬಲುಇಷ್ಟ ಜನಸಂಗವು ಹರಕೆ ಬಹುಮಾನಎಷ್ಟು ಓದಿದರಷ್ಟು ಜ್ಞಾನ - ಆದರಲ್ಲಿಟ್ಟು ಭಕುತಿಯ ತಿಳಿಯಲೊ ಸಾವಧಾನ 4ನಾಲಿಗೆಯ ಹರಿಯ ಬೀಡಬೇಡ - ತಿಂಡಿವಾಳರ ರುಚಿವಾತಗಳನೊರಿಸಬೇಡಹಾಳು ಮಾತು ಗೊಡಬೇಡ -ಶ್ರೀಲೋಲ ಪುರಂದರವಿಠಲನ ಬಿಡಬೇಡ 5
--------------
ಪುರಂದರದಾಸರು
ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |ಹೊಂತಕಾರಿಬಲವಂತರಿಗಧಿಕನುಪತರಳನಂತಿಪ್ಪನು ತರಳೆಯರೊಡನಾಡುವ |ಕಿರುಬೆರಳುಗುರಲಿ ಗಿರಿಯನೆತ್ತಿದವ 1ಕಾಳಿಯ ಸರ್ಪನ ಕಾಲಲ್ಲಿ ತುಳಿದವ |ಪಲಾಯನ ಮಾಡಿ ಕಾಲಯವನನ ಸುಟ್ಟ 2ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |ರಚ್ಚೆಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ3ಬಾಯಿ ತೆರೆದನಲ್ಲೆ ನೀನಂಜುವಂದದಿ |ಆಯಮಳಾರ್ಜುನರಾಯಾಸ ಬಿಡಿಸಿದ 4ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |ಪುಟ್ಟ ಪುರಂದರವಿಠಲರಾಯನು 5
--------------
ಪುರಂದರದಾಸರು
ಎಂತು ಶೋಭಿಸುತಿಹಳು ಈ ಕನ್ನಿಕೆಸಂತೋಷದಿಂದಲಿಸುರರುಸ್ತುತಿಸುತಿರಲುಪಮಂಧರಗಿರಿ ತಂದು ಸಿಂಧುವಿನೊಳಗಿಟ್ಟುಚಂದದಿಂ ಮಥಿಸಲಮೃತ ಪುಟ್ಟಲುಬಂದು ದಾನವರ ಪಹರಿಸಬೇಕೆನುತಿರಲುನಿಂದರುಸುರರುಮುಂದೋರದೆ ಚಿಂತಿಸೆಇಂದಿರಾಪತಿ ಇವರ ಭಾವವಕಂಡುಮನದಲಿ ಹರುಷಪಡುತಲಿಬಂದು ಅಸುರರ ಸುರರ ಮನ್ನಿಸಿನಿಂದ ಶ್ರೀ ಗೋವಿಂದ ಮುದದಲಿ 1ಸಾಲಾಗಿ ಕುಳಿತಿರಿ ಮೇಲಾದಮೃತವನ್ನುಲೀಲೆಯಿಂದಲಿ ಬಡಿಸುವೆನೆನ್ನಲುಕೇಳಿಅಸುರರು ಹರುಷತಾಳಿ ಸಂಭ್ರಮದಿಂದಸಾಲಾಗಿ ಕುಳಿತು ಆ ವೇಳೆ ನೋಡುತಲಿರಲುಶ್ರೀ ರಮಣ ಕರದಲ್ಲಿ ಕಲಶವÀಲೀಲೆಯಿಂದಲಿ ಪಿಡಿದು ನಿಲ್ಲಲುತಾಳಿ ಹರುಷವ ದಾನವರು ಸÀು-ಮ್ಮಾನದಿಂದಲಿ ನೋಡÀುತಿಹರು 2ಗಂಗೆಯ ಪಡೆದ ಪಾದಗಳ ಶೃಂಗಾರಅಂದಿಗೆ ಕಿರುಗೆಜ್ಹೆ ಸರಪಣಿಯುಚಂದುಳ್ಳ ಬೆರಳುಗಳಿಗೆ ಪಿಲ್ಲಿ ಕಿರುಪಿಲ್ಲಿ ಕಾ-ಲುಂಗರಗಳನಿಟ್ಟು ರಂಭೆಯಂತ್ಹೊಳೆಯಲುಬಂದಿ ಬಾಪುರಿ ಥಳಥಳಿಸುತಲಿಚಂದದನಾಗಮುರಿಗಿ ತಾಯಿತಸುಂದರಹಸ್ತಕಡಗ ಹಾಸರಇಂದಿರಾಕ್ಷಿ ಕೈ ಬಳೆಗಳ್ಹೊಳೆಯುತ 3ಹಲವು ಸೂರ್ಯರ ಕಾಂತಿ ಹೊಳೆವೊ ಪೀತಾಂಬರಸರಿಗೆ ಅಂಚಿನ ಕುಪ್ಪುಸವನೇ ತೊಟ್ಟುನಡುವಿಗೆ ನವರತ್ನ ಬಿಗಿದ ಪಟ್ಟೆಯನಿಟ್ಟುಸಡಗರದಲಿ ಆಣೆಮುತ್ತಿನ ಸರಗಳುಸರಗಿ ಏಕಾವಳಿಯು ವಜ್ರದಪದಕಗಳು ಥಳಕೆಂಬ ಸರಗಳುಕೊರಳ ಗೆಜ್ಜೆಟ್ಟಿಕೆಯು ಕಂಠಿಯುಮುರಳಿಸರ ಕಠ್ಠಾಣಿವಲಿಯುತ 4ಹೊಳೆವೊಗಲ್ಲಕೆ ಥಳಥಳಿಪ ಅರಿಶಿನಹಚ್ಚಿಹೊಳೆವೊ ಮೀನ್ ಬಾವುಲಿ ಕರ್ಣದಲಿಗಿಳಿಗೆಜ್ಜೆ ಚಳತುಂಬು ಬುಗುಡಿ ಬಾವುಲಿ ಚಂದ್ರಮುರುವುಸರಪಳಿಗಳು ಥಳಥಳ ಹೊಳೆಯಲುಆಣಿಮುತ್ತಿನ ಮುಖುರ ಬೇಸರಿಜಾಣೆ ನಾಶಿಕದಲ್ಲಿ ಹೊಳೆವ ಬು-ಲಾಕುನಿಟ್ಟಿ ಬೆಳಕು ಗಲ್ಲದಮೇಲೆ ಥಳಥಳ ಹೊಳೆವ ಕಾಂಚಿಯು 5ಸಣ್ಣ ಬೈತಲೆ ಬಟ್ಟು ಚಂದ್ರ ಸೂರ್ಯರ ನಿಟ್ಟುಹಿಂದೆ ಜಡೆಬಿಲ್ಲೆ ಗೊಂಡ್ಯಗಳನಿಟ್ಟುಚಂದ್ರ ಸೂರ್ಯರ ಪೋಲ್ವ ಚೌರಿ ರಾಗಟಿ ಜಡೆಬಂಗಾರ ಹೊಳೆಯುತ್ತ ಬಡನಡು ಬಳಕುತ್ತಕಂಗಳ ಕಡೆನೋಟದಿಂದಲಿಭಂಗಪಡಿಸುತ ಅಸುರ ಕೋಟಿಯಮಂದಗಮನದಿ ಅಡಿಯನಿಡುತಲಿಬಂದಳಮೃತದ ಕಲಶ ಪಿಡಿಯುತ 6ಕಂಗಳುಮುಚ್ಚಿ ಕುಳಿತಿರಲು ದಾನವ ಪಂಕ್ತಿಮುಂದೆ ಕಾಲ್ಗೆಜ್ಜೆ ಧ್ವನಿಯ ಮಾಡುತಅಂದಿಗೆ ಸರಪಣಿನಾದ ತುಂಬಲು ಭರದಿಸುಂದರಿ ಬಂದಿಹಳೆÀಂದು ದಾನವರೆಲ್ಲಮಂದಹಾಸದಿ ಮೈಮರೆತು ಮತ್ತೊಂದು ತೋರದೆ ಕಳವಳಿಸುತಲಿರೆಇಂದಿರೇಶನು ದೇವೆತೆಗಳಿಗೆಪೊಂದಿಸಿದ ಅಮೃತವನು ಹರುಷದಿ 7ಕಲಕಲಕೂಗುತ ಕಲಹಕೆನ್ನುತ ಬರೆಬಲವು ಸಾಲದೆ ಹಿಂದಿರುಗಲವರುಸುರರುಪುಷ್ಪದ ಮಳೆಕರೆದರು ದೇವನವರಋಷಿಗಳು ನೆರೆದು ಸ್ತುತಿಸಿ ಕೊಂಡಾಡಲುಪರಮಪುರುಷನೆ ಪುಣ್ಯಚರಿತನೆಗರುಡ ಗಮನನೆ ಉರಗಶಯನನೆಸರಸಿಜಾಕ್ಷನೆ ನಮಿಪೆವೆನ್ನುತಸನಕಾದಿಗಳು ಸಂಸ್ತುತಿಸೆ ದೇವನ 8ಪರಶಿವನಿದ ನೋಡಿ ಪರಿಪರಿ ಪ್ರಾರ್ಥಿಸಿತರುಣಿಯ ರೂಪವ ನೋಡಲನುವಾಗಲುಸರಸಿಜಾಕ್ಷನ ಸ್ತ್ರೀರೂಪ ನೋಡುತಲಿ ಮೈಮರೆದು ಕೈಮುಗಿದು ಕೊಂಡಾಡಿ ಸುತ್ತಿಸಿದನುಮರಳಿ ಭಸ್ಮಾಸುರನ ಭಾಧೆಗೆತರಹರಿಸಿ ಮುಂದೋರದಿರುವಸಮಯದಲಿ ಸ್ತ್ರೀರೂಪ ತಾಳುವತ್ವರದಿ ರಕ್ಷಿಸಿ ಪೊರೆದ ದೇವನು 9ಕಮಲಸಂಭವನಯ್ಯಕಮಲಜಾತೆಯ ಪ್ರಿಯಕಮಲಾಕ್ಷಕಂಸಾರಿಕರುಣಾನಿಧೆಶರಣು ಶರಣೆನ್ನುತ ನಭವ ತುಂಬಲು ಸ್ವರಸುರಗಂಧರ್ವರು ಪಾಡಿಪೊಗಳುತಿಹರೊ ದೇವಕನಕಗರ್ಭನ ಪಿತನೆ ರಕ್ಷಿಸುಕಮಲನಾಭ ವಿಠ್ಠಲನೆ ನಮಿಸುವೆಸವಿನಯದಿ ನಿನ್ನ ಸ್ತುತಿಪ ಭಾಗ್ಯವಕರುಣಿಸೆನಗೆ ಶ್ರೀ ಕರುಣಾನಿಧಿಯೆ 10
--------------
ನಿಡಗುರುಕಿ ಜೀವೂಬಾಯಿ
ಎತ್ತೋದೆಯಮ್ಮ ನಂಗನ್ನೆತ್ತಿಕೊ ಅಮ್ಮ ಬಲುಹೊತ್ತು ಹತ್ತು ಬಂದೇನೆ ಇತ್ತೆಅಮ್ಮಿತಿಂದೇನೆಪ.ತುತಿಬಾಯಿ ವಂಗ್ಯಾವೆ ಬಿತಿ ಆವು ವಾಕಿಕ್ಕಿ ಬತ್ತಾವೆಅತಿ ಆವು ಉಪ್ಪುಕಾಯಿ ಅಮ್ಮ ಮಮ್ಮೊಲ್ಲೆಉತ್ತತ್ತಿ ಹನ್ನು ಬೆನ್ನೆ ತಿಂದೇನೆ 1ಕಲ್ಲ ಕಿತ್ನ ಎಂತಾಡೆ ಬಂಗಾಡ ಬುಲ್ಲಿ ಬೆಲ್ಲ ತಿಂತಾಡೆಗಲ್ಲ ಕತ್ತಿಉಮ್ಮುಕೊತ್ತು ಹಲ್ಲು ನತ್ತುತಾಡೆಕೊಲ್ಲಬಾಲದೆ ದೂತ್ತ ಗೊಲ್ಲತೇಲನ 2ಎಕ್ಕೋ ಬಾ ಎಂಬ್ಯಾಡೆ ಬಿಸಿ ನೀಲು ಬುಕಶ್ಶಿ ಮಾಬ್ಯಾಡೆಸಕ್ಕರಿ ಚಿನ್ನಿಪಾಲು ಬತ್ತಲ ತುಂಬ ಕೊಡುಬಕ್ಕು ಮರಿಗಳ ಕೂಡ ಉಂಡೇನೆ 3ನತ್ತೆತ್ರ ತಂದುಕೊಡೆ ಚಂದಮಾಮನಿತ್ತಿತ್ತ ಕಡತಾಡೆಪುತ್ತಮಿಲ್ಲಿ ತುಂಬ ವಲ್ಲೆ ಮುತ್ತು ಕೊತ್ತರೆ ಶನ್ನಬುತ್ತಿ ತುಂಬ ಹನ್ನು ತಂದು ತಿಂದೇನೆ 4ಲಾಲಿಮಾಡಿಸಬ್ಯಾಡೆ ಕಿತ್ತನ್ನ ಮ್ಯಾಲೆ ದೋಗುಲ ಪಾಡೆಬಾಲ ಬವು ಕಂಡ್ಯನಗಂಜಿಕಿ ಬತ್ತದೆದೂಲ ಎನ್ನ ಬಿತ್ತು ನೀ ವೋಗಬ್ಯಾಡೆ 5ಉಗ್ಗು ಕೂಸು ಬಾಯಂಗೆ ಬಚ್ಚನಿಗೆ ಮಗ್ಗಮ್ಮಿ ಕೂಯಂಗೆಕೊಗ್ಗ ಮೀಸಿ ಜೋಗಿಗೆ ಕೋಬ್ಯಾಡೆ ಬಾಗಿಲಹೊಗ್ಗೆ ಹೋಗದಿಲ್ಲ ಜತ್ತಿಗನಾಣೆ 6ಕೂಚಿಗಮ್ಮಿ ಕೋಬ್ಯಾಡೆ ನಂಗಂಗಚ್ಚತಾನೆ ಅಮ್ಮ ನೋಡೆಪೆಚನ್ನ ವೆಂಕತ ಕಿತ್ತಪ್ಪ ಕನ್ನಡೀಲಿನಚುನಗಿ ನಗುತಾನೆ ಕಡತಾಡೆ 7
--------------
ಪ್ರಸನ್ನವೆಂಕಟದಾಸರು
ಎಂಥ ಉಪಕಾರಿಗಳು ಸುಜನರು ಶ್ರೀಕಾಂತ ನಿನ್ನೊಲುಮೆಯ ಉಪಾಯದೋರುವರು ಪ.ಅಜ್ಞಾನ ಕತ್ತಲೆಯೊಳು ಎಡಹಿ ನಡೆಗೆಟ್ಟಡಿ ಯವÀ? ರಿಗೆಸುಜ್ಞಾನವೆಂಬ ಅಂಜನವನಿಟ್ಟುಪ್ರಜ್ಞಾಪೂರ್ಣರ ಶಾಸ್ತ್ರಪ್ರಭೆಯಲ್ಲಿ ಪಥವಿಡಿಸಿಯಜೆÕೀಶ ನಿನ್ನ ಬಳಗವ ಕೂಡಿಸುವರೊ 1ಭವತಾಪದಲಿ ಬಳಲಿ ಎದೆಯಾರಿದರಿಗೆ ಸನ್ನವಭಕ್ತಿಯಮೃತ ರಸವಾರಿನಿಧಿಯಸವಿದೋರಿ ಸ್ನಾನಪಾನವ ಕಲಿಸಿ ಸುಖವಿತ್ತುಸವಿಯದಾನಂದ ಉರದಲಿ ಪೊಯ್ದಿಡುವರು 2ವಿಷಮ ವಿಷಯ ಧ್ಯಾನ ದಾರಿದ್ರ್ಯ ಪೀಡಿತಮಾನುಷರ ಜಂಗುಳಿಗೆ ವೈರಾಗ್ಯವೆಂಬಅಸಮಭಾಗ್ಯವನಿತ್ತುಭವಬಿಡಿಸಿ ಸಲಹಿ ಅಕಲ್ಮಷ ಪ್ರಸನ್ನವೆಂಕಟಪತಿಯ ನಂಬಿಸಿದರು 3
--------------
ಪ್ರಸನ್ನವೆಂಕಟದಾಸರು
ಎಂಥ ದಯಾವಂತನೊ ಲಕ್ಷುಮಿಕಾಂತಎಂಥ ದಯಾವಂತನೊ ಪ.ಕರಿಜನ್ಮ ತಾಳ್ದರಸ ನೀರೊಳಗೆ ನಕ್ಕರಿಯೊಳು ಕಾದಿ ಮುಳುಗಿ ಹರಿಹರಿಹೊರಿಯೆಂದು ಹರಣವ ತೊರೆವಾಗಬರಿಮಂಡೆಯಲಿ ಬಿಟ್ಟರಸಿಯ ಭರದ್ಯುದ್ಧರಿಸಿದೆ ಭಳಿ ಕಿಂಕರರಭಿಮಾನಿ 1ಶೂಲಿಯ ಮತಿಕದ್ದುವರಕೊಂಡು ಮಹಾಸುರಮೇಲೆ ಬೆಂಬತ್ತಿ ಓಡಲುಶ್ರೀಲೋಲಾಕಾಲಕೆ ಆಲೋಚಿಸಿಬಾಲೆಯ ಲೀಲೆಲಿ ಖಳನ ಜ್ವಲಿಸಿ ಕಪಾಲಿಯ ಪಾಲಿಸಿದೆ ಸುರ ಶಾರ್ದೂಲ 2ನಿನ್ನನುಜೆಯಮಾನವಕೊಂಡೇನೆಂದುಕುನ್ನಿ ಕೌರವನೆಳೆಯೆ ಕೃಷ್ಣಣ್ಣ ಪ್ರಸನ್ವೆಂಕಟ ರನ್ನ ಬಾರೆನ್ನಲುಪುಣ್ಯ ಪುರುಷವರೇಣ್ಯ ನೀ ಬಂದೆಮನ್ನಿಸಿ ಬಣ್ಣ ಬಣ್ಣದ ವಸ್ತ್ರವÀನುಡಿಸಿದೆ 3
--------------
ಪ್ರಸನ್ನವೆಂಕಟದಾಸರು
ಎಂದಿಗೆ ಬಿಡಿಸುವೆದಂದುಗಗೋವಿಂದ ದಣಿಸುತಿದೆದಂದುಗಪ.ಸುಳ್ಳನಾಡಿಸುತಿದೆದಂದುಗನೇಮಗಳ್ಳನ ಮಾಡಿತುದಂದುಗಎಲ್ಲೆಂಜಲುಣಿಸಿತುದಂದುಗಕೈವಲ್ಯವ ಮರೆಸಿತುದಂದುಗ1ಹರಿಸೇವೆ ಬಿಡಿಸಿತುದಂದುಗಗುರುಹಿರಿಯರನ್ವಂಚಿಪದಂದುಗಸರಕುಮಾಡಿತು ಎನ್ನದಂದುಗಯಮಪುರದಾರಿವಿಡಿಸ್ಯದೆದಂದುಗ2ನೀಚಗಂಚಿಸುತಿದೆದಂದುಗಕ್ಷುದ್ರಯಾಚನೆವಿಡಿಸ್ಯ್ಕದೆದಂದುಗಆಚಾರ ಚರಿಸಿತುದಂದುಗದುಷ್ಟ್ಯೋಚನೆ ತ್ಯಜಿಸದುದಂದುಗ3ಕಾಂಚನದಾಸೇಲಿದಂದುಗಕೆಟ್ಟಹಂಚಿಗ್ಹಲ್ದೆರೆಸಿತುದಂದುಗಪಂಚಗಂಗೆಯ ಬಿಟ್ಟುದಂದುಗಜೊಂಡುಬೆಂಬಿಲಿ ಮೀಯಿಸಿತುದಂದುಗ4ನಿನ್ನೊಲುಮ್ಯೊದರಿದಂದುಗಕಾಡಿಎನ್ನಾಳೋದುಂಟೇನೊದಂದುಗಪ್ರಸನ್ವೆಂಕಟೇಶ ನಾಮಜಿಹ್ವೆಪೂರ್ಣಗಲ್ಲಾದ್ಯಂತದಂದುಗ5
--------------
ಪ್ರಸನ್ನವೆಂಕಟದಾಸರು
ಎಂದು ಕಾಂಬುವೆ ಎನ್ನ ಸಲಹುವತಂದೆ ಉಡುಪಿಯ ಜಾಣನಮಂದಹಾಸ ಪ್ರವೀಣನಇಂದಿರಾ ಭೂರಮಣನ ಪ.ಕಡಲ ತಡಿಯೊಳು ಎಸೆವ ರಂಗನಕಡೆಗೋಲ ನೇಣ ಪಿಡಿದನಮೃಡಪುರಂದರಅಜರೊಡೆಯನ ಈರಡಿಗಳಲಿ ಶಿರ ಇಡುವೆ ನಾ 1ದೇವಕಿಯ ಜಠರದಲ್ಲಿ ಬಂದನಆವಪಳ್ಳಿಯಲ್ಲಿ ನಿಂದನಮಾವ ಕಂಸನ ಕೊಂದನಕಾವನಯ್ಯಮುಕುಂದನ2ಪೂರ್ಣಪ್ರಜÕರಿಗೊಲಿದು ದ್ವಾರಕೆಯಮಣ್ಣಿನೊಳು ಪ್ರಕಟಿಸಿದನ ಭವಾರ್ಣವಕೆ ಪ್ಲವನಾದನ ಪ್ರಸನ್ನವೆಂಕಟ ಕೃಷ್ಣನ 3
--------------
ಪ್ರಸನ್ನವೆಂಕಟದಾಸರು
ಎಂದು ಹರಿಭಟರು ಕೆಡರು ಇವರಿಗೆ ಮತ್ತೆಂದಿಗಿಲ್ಲೆಡರುತೊಡರುಪ.ಘಟಜನುಕ್ತಿಯಲಿಕರಿಗಟ್ಟಿಯಾಗಿ ಪ್ರಾಣ ಸಂಕಟಬಡಲು ನಕ್ರನ ತುಟಿ ಹರಿದುಹರಿಪೊರೆದ1ಎಣಿಕೆಯಿಲ್ಲದ ಪಾಪ ಎಣಿಸಿ ಬಂದ್ಯಮನವರಹಣಿದು ವಿಪ್ರಜಾಮಿಳನ ವನಜಾಕ್ಷ ಪುರಕೊಯ್ದ 2ಮುನಿ ಕನಲಿ ಅಂಬರೀಷನ ದಣಿಸುತಿರೆ ಚಕ್ರವನು ಕಳುಹಿ ವೈಷ್ಣವಾಗ್ರಣಿಯ ಛಲ ಗೆಲಿಸಿದನು 3ಕಪಟಿ ಕೌರವ ಪಾಂಡುನೃಪಜರನು ಬೆಂಕೊಳಲುಕುಪಿತನಾಗಲೆ ಬಂದು ಕೃಪೆಯಿಂದ ಕಾಯ್ದ ಗಡ 4ಶ್ರೀಪ್ರಸನ್ವೆಂಕಟನ ಶ್ರೀಪದವ ನಂಬಿದರೆಶಾಪ ಪಾಪೋಗ್ರಸಂತಾಪವೇನು ಮಾಡುವುವು 5
--------------
ಪ್ರಸನ್ನವೆಂಕಟದಾಸರು
ಎನ್ನಬಿನ್ನಪಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರುವಿಧ ವಸ್ತುಗಳುವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದುಅರಿದು
--------------
ಗೋಪಾಲದಾಸರು