ಒಟ್ಟು 2267 ಕಡೆಗಳಲ್ಲಿ , 110 ದಾಸರು , 1628 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತು ಸುಳ್ಳಾಗೊದೆ ದುರಿತಾರಿ | ಯನ್ನನಾಥನಿಂದಿಗೆ ರಕ್ಷಿಸೇ ಗೌರಿ ಪಮಾತೆ ನಿನ್ನಯಪಾದಪ್ರೀತಿಂದ ಭಜಿಸಿದ್ದ |ಕ್ಕೀತ ಸಿಕ್ಕಿದ್ದನು ಚಾತುರ್ಯ ಪುರುಷ 1ಧಾತಾಜನಾಡೀದ ಮಾತೀಗೆ ಕೋಪಾದಿ |ಈ ತೆರ ಮಾಡಿದ ತಾತನು ನೊಂದೂ 3ಪೋರಾನಲ್ಲಮ್ಮಿವಾ ಆರೆಂದು ಹೇಳಾಲಿ |ಶೌರಿಯ ಮೊಮ್ಮಗನೀರಜನೇತ್ರೆ 3ಭೃತ್ಯಾರ ಅಭಿಮಾನ ಮತ್ರ್ಯಾಪಗುಂಟಲ್ಲೆ |ಅತ್ತತ್ತವಾದೀನೆ ಹೆತ್ತವ್ವ ನಿನಗೇ 4ಪ್ರಾಣೇಶ ವಿಠಲನು ಬಾಣನ ಶಿಕ್ಷಿಸಿ |ತಾನೆ ಯೀವಂದಾಗಿ ನೀನೊಲಿಯವ್ವಾ 5
--------------
ಪ್ರಾಣೇಶದಾಸರು
ಮಾಯೆಎನ್ನ ಕಾಯವನ್ನುಪಾಯದಿಂದ ಮೋಹಿಸಿ |ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ 1ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||ನೆಲೆಯ ಮನೆಯ ಮಾಡಿ ಚರ್ಮಹೊಲಿzಯ ಹೊದಿಕೆ ಹೊದಿಸಿದಂಥ |ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ 2ಎನ್ನ ಸತಿಯು ಎನ್ನ ಸುತರು ಎನ್ನ ಬಂಧು - ಬಳಗವು |ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ 3ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |ಹರಿದು ಪಾಪಕರ್ಮದಿಂದೆ ತೊಪಳಲಿಬಳಲಿ ನೊಂದೆ ನಾ ||ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ 4ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |ಅಕ್ಷಯ- ಅನಂತ ನನ್ನನೇಕೆ ಹೊರಗೆ ಮಾಡಿದೆ ||ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |ರಕ್ಷಿಸಯ್ಯ ಲಕ್ಷೀಪತಿಪುರಂದರವಿಠಲನೆ5
--------------
ಪುರಂದರದಾಸರು
ಮಾವಗೆ ನೀ ಮತ್ತೆ ಮಾವನಾದೆಯೊ ರಂಗ |ಮಾವನ ಮಗಳ ನೀ ಮದುವೆಯಾದೆಯೊ ರಂಗ ||ಭಾವಗೆ ನೀ ಮತ್ತೆ ಭಾವನಾದೆಯೊ ರಂಗ |ಭಾವಜವೈರಿಗೆ ಸಖನಾದೆಯೊ ರಂಗ 2ಅತ್ತೆಯ ಅರ್ಥಿಯಿಂದಾಳಿದೆಯೋ ರಂಗ |ಅತ್ತೆಯ ಮಗಳ ನೀ ಮದುವೆಯಾದೆಯೊ ರಂಗ ||ಮತ್ತೊಬ್ಬರಿಗುಂಟೆ ಈಪರಿಮಹಿಮೆಯು |ಕರ್ತೃ ಶ್ರೀ ಪುರಂದರವಿಠಲನಿಗಲ್ಲದೆ3
--------------
ಪುರಂದರದಾಸರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮುಂಚೆ ಕೈವಿಡಿದಂತೆ ಮಿಂಚೆನ್ನ ಎದೆಗುಡಿಲಿಪಂಚಬಾಣನ ಜನಕನೆ ಪ.ಸಂಚಿತಾರಬ್ಧಾಗಾಮಿ ಸಂಚಂಚಲಿಪ ಮನದ ಪ್ರಪಂಚವನು ಬಿಡಿಸು ತಂದೆ ನೊಂದೆ ಅ.ಪ.ಭವಬವಣೆಗಳನು ಅನುಭವಿಸಿದನ ಸತ್ಕುಲೋದ್ಭವನ ಮಾಡಿದ ಕೃಪೆಗೆ ನವಭಕುತಿ ಕಲಿಸು ಎನ್ನವಗುಣವ ಬಿಡಿಸು ದಾನವವೈರಿನರಮುರಾರಿಶೌರಿ1ಲೇಸು ಹೊಲ್ಲೆಯನರಿಯೆ ಲೇಶ ನಿಷ್ಠೆಯನರಿಯೆ ನಾಲೇಶದೊಳು ನಿನ್ನ ಮರೆದೆ ದಾಸಾಭಿಮಾನಿಯೆ ಸದಾ ಸರ್ವಕಾಲದಿ ಉದಾಸೀನವ ಮಾಡಬೇಡೈ ನೋಡೈ 2ಸ್ಮøತಿಯೊಳಗೆ ಕೂಡಿ ವಿಸ್ಮøತಿಯ ಕೂಡೋಡಾಡಿಸ್ಮøತಿದಾರಿ ಕೊಳದು ಮನವು ಸ್ಮøತಿವಂದ್ಯ ಪ್ರಸನ್ವೆಂಕಟಸ್ಮಿತವದನದಾತಅಸ್ಮತ್ ಪಾಪ ಪಂಕಶೋಷ ನಿರ್ದೋಷ3
--------------
ಪ್ರಸನ್ನವೆಂಕಟದಾಸರು
ಮುತ್ತು ರತ್ನದಕೋಲಮತ್ತಮಲ್ಲಿಗಿಕೋಲತತ್ವ ಸೂಸ್ಸಾಡುವಕೋಲಮಿತ್ರೆಯರು ಹರುಷದಿ ಎತ್ತಿ ಕೋಲ್ಹಾಕುವಅತ್ಯಂತ ಸೊಬಗಿನಕೋಲಪ.ನಳಿನಾಕ್ಷಿಯರ ಮನ ಕೊಳಲೂದಿ ರಾತ್ರಿಲೆಸೆಳಿದೆಲ್ಲ್ಯೊಕಪಟಭಾವದಲೆ ಕೃಷ್ಣಸೆಳಿದೆಲ್ಲ್ಯೊಕಪಟಭಾವದಲೆಎಳೆಯ ಮಕ್ಕÀಳುಗಂಡಉಳಿದ ಭಾಗ್ಯವ ಬಿಟ್ಟುಅಳೆದೆಲ್ಲೊಅವರಒಗೆತನವ1ಕಂಜಾಕ್ಷ ಶ್ರೀಕೃಷ್ಣ ರಂಜಿಸಿ ಕೊಳಲೂದಿಮಂಜುಳ ಸ್ವರಕೆ ಮೋಹಿಸುತ ಬಾಲೆಮಂಜುಳ ಸ್ವರಕೆ ಮೋಹಿಸುತಕುಂಜರಗಮನೆಯರು ಸಂಜಿಲೆ ಬಂದರುಅಂಜದೆ ಅತ್ತೆಮಾವರಿಗೆ 2ಭಾವಮೈದುನರನ್ನ ಕೇವಲ ತುಚ್ಛಿಸಿಧಾವಿಸಿ ಬಂದ ಬಾಲೆಯರ ಕೃಷ್ಣಧಾವಿಸಿ ಬಂದ ಬಾಲೆಯರಪಾವನ ಮಾಡದೆ ದೇವ ರಾತ್ರಿಯೊಳುಯಾವ ಪಾಶವ ಬಿಡಿಸಿದಯೊ 3ತಂದೆತಾಯಿ ಬಳಗ ಬಂಧು ಜನರ ಬಿಟ್ಟುಹೊಂದಲು ನಿನ್ನಂಘ್ರಿಗಾಗಿ ಕೃಷ್ಣಹೊಂದಲು ನಿನ್ನಂಘ್ರಿಗಾಗಿಬಂದ ಕಾರಣವ ಒಂದೂ ಮಾತಾಡದೆಕಂದಿಕುಂದಿಸಿದೆಲ್ಲಾ ಅವರ 4ಚಿತ್ತ ಚಂಚಲವಾಗಿ ಎತ್ತಿಗೆ ಮುರವಿಟ್ಟುಮತ್ತೊಂದು ಹೋರಿಯ ತರಿಸೆ ಬಾಲೆಮತ್ತೊಂದು ಹೋರಿಯ ತರಿಸೆಹತ್ತಿರಿದ್ದವರೆಲ್ಲ ಅತ್ಯಂತ ನಗುವರುಒಂದು ಅರ್ಥಿಯು ಮಾಡಿಸಿದೆಲ್ಲೊ 5ಮಂಗನ ಮರಿಯೆತ್ತಿ ಅಂಗಿಯ ತೊಡಿಸುತರಂಗನ ಬಳಿಗೆ ಬಾರೆಂದು ಕಂದರಂಗನ ಬಳಿಗೆ ಬಾರೆಂದುಅಕ್ಕ ತಂಗಿಯರು ಕಂಡು ಹಂಗಿಸಿ ನಗುವರುಶ್ರೀರಂಗ ಮಾಡಿದ ಕೌತುಕವ 6ಬೆಕ್ಕಿನ ಬಾಯೊಳಗೆ ಇಕ್ಕುತ ತುತ್ತನೆಚಿಕ್ಕ ಕಂದಯ್ಯ ಉಣ್ಣೆನುತ ಬಾಲೆಚಿಕ್ಕಕಂದ ಉಣ್ಣೆನುತ ನಕ್ಕರುಗೆಳತಿಯರು ಚಕ್ಕನೆ ಜರಿದರುಚಕ್ಕಂದವೇನು ಮಾಡಿದೆಯೊ 7ಪಟ್ಟಿ ಮಂಚದ ಮೇಲೆ ಬಿಟ್ಟು ಕಂದನ ಬಾಲೆತೊಟ್ಟಿಲ ತೂಗಲು ಭರದಿ ಬಾಲೆತೊಟ್ಟಿಲ ತೂಗಲು ಭರದಿಬಟ್ಟಿ ಬಂದವರು ಅಷ್ಟೂರು ನಗುವಂತೆಎಷ್ಟು ಸೋಜಿಗವ ಮಾಡಿದೆಯೊ 8ಉಟ್ಟ ಪೀತಾಂಬರ ಬಿಟ್ಟು ಹಾಕಿಸಿ ಮ್ಯಾಲೆಕೃಷ್ಣನ ಕೊಳಲು ಲಾಲಿಸುತ ಬಾಲೆಕೃಷ್ಣನ ಕೊಳಲು ಲಾಲಿಸುತ ಧಿಟ್ಟನಕೊಳಲೊಳು ಧಿಟ್ಟೆ ಲಾಲಿಸಿದಳುಶ್ರೀಕೃಷ್ಣ ಮಾಡಿದ ಕೌತುಕವ 9ಕಾಲಿನ ಗೆಜ್ಜೆಯು ಮ್ಯಾಲೆ ಕೊರಳಿಗೆಕಟ್ಟಿಮೇಲಾದ ಸರ ಕಾಲಿಗ್ಹಾಕಿ ಬಾಲೆಮೇಲಾದ ಸರ ಕಾಲಿಗ್ಹಾಕಿಶಾಲೆ ಹಂಬಲ ಬಿಟ್ಟು ಲೋಲಾಕ್ಷಿ ನಡೆದಳುಕೋಲಾಹಲವ ಮಾಡಿಸಿದಿಯೊ 10ಹಣೆಗೆ ಕುಂಕುಮ ಗಲ್ಲಕ್ಕೆ ಕಾಡಿಗೆಚಲ್ವ ಫಣಿಗೆ ಅರಿಷಿಣವು ಬಾಲೆಚಲ್ವ ಫಣಿಗೆ ಅರಿಷಿಣವುನಲ್ಲೆಯರೆಲ್ಲರು ತಮ್ಮ ವಲ್ಲಭರನ ಬಿಟ್ಟುಅಲ್ಲೆ ರಾತ್ರಿಲೆ ಒರಗಿದರು 11ಕಜ್ಜಲ ನೇತ್ರಿಯರ ಲಜ್ಜವಗೈಸಿದೆಸಜ್ಜಾಗಿ ಕೊಳಲೂದಿದೊಮ್ಮೆಸಜ್ಜಾಗಿ ಕೊಳಲೂದಿಗುಜ್ಜಿರಮಾದೇವಿಹೆಜ್ಜೆ ಹೆಜ್ಜೆಗೆ ಹಂಗಿಸುವಳುಅರ್ಜುನ ಆಡಿದ ನಗುತ ರಾಮೇಶ ಇದಕೆ ಮೆಚ್ಚಿದ12
--------------
ಗಲಗಲಿಅವ್ವನವರು
ಮೂರುತಿಯನೆ ನಿಲ್ಲಿಸೋಮಾಧವನಿನ್ನಪಎಳತುಳಸಿಯ ವನಮಾಲೆಯು ಕೊರಳೊಳುಹೊಳೆವ ಪೀತಾಂಬರದುಡೆಯಲೊಪ್ಪುವ ನಿನ್ನ 1ಮುತ್ತಿನ ಹಾರ ನವರತ್ನದುಂಗುರ ಬೆರಳಮತ್ತೆ ಶ್ರೀಲಕುಮಿಯ ಉರದೊಲೊಪ್ಪುವ ನಿನ್ನ 2ಭಕ್ತರ ಕಾಮಧೇನು ಕಲ್ಪತರುವೆಂಬಭಕ್ತ ವತ್ಸಲ ಪುರಂದರವಿಠಲನೆ ನಿನ್ನ 3
--------------
ಪುರಂದರದಾಸರು
ಯತಿರತನತಿಮತಿಯುತನೆರÀತಿಪತಿಪಿತ ಸೇವಾರತನೆ ಮರುತಮತ ಭಕುತಿಪೂರಿತನೆನಾಥ ಸತ್ಯಾಭಿನುತ ನವ? ತೀರಥÀನೆ ಪ.ಶ್ರುತಿಸ್ಮøತಿಇತಿಹಾಸಾರ್ಥ ನೀಜ್ಞಾತತೆಗತಿ ಸಮರ್ಥಕ್ಷಿತಿಸತಿವಿತ್ತ ವಿರಹಿತನೆ ಮನ್ಮಥ ಜಿತಕಾಂತಿ ಶೋಭಿತನೆನೀತಿ ಚತುರತೆ ಸುವಿರತಿ ನಿಸ್ಸೀಮ ವಿಖ್ಯಾತ ರಘುಪತಿ ಅರ್ಚಿತ ಪಥಗಮ್ಯಸತತ ವಿದ್ವತ್ತ ಪ್ರತತಿಗೆ ವಿತ್ತರಣ ಶೂರೋನ್ಮತ್ತ ದುರ್ಮತ್ತಕಾಂತಾರಕುಠಾರ1ಧ್ಯಾನ ಮೌನ ಪೂರ್ಣ ಗಂಭೀರ ಗೀರ್ವಾಣ ವಾಣಿನಿರುತ ಉಚ್ಚಾರಜ್ಞಾನಿಜನರಿಗೆ ಘನ್ನಗುರುವೆ ನಿದಾನಗುಣಕಲ್ಪತರುವೆಮಾನಾಥನ ಪೂಜೆ ಮನ ಮನೆಯೊಳು ಮಾಡಿನೀಣ್ಯವಿನಾನೆಸದು ? ನಲಿನಲಿದಾಡಿದೀನಜನರಿಗೆ ತತ್ವಜ್ಞಾನಸುಧೆಯನುದಿನದೊಳೆರೆದೆ ಕಾಮಧೇನುವಿನಂತಯ್ಯ 2ತ್ರ್ರೇತಾ ಕ್ಷಿತಿಪರ್ಗೆ ಮಿಗಿಲೆನಿಸಿ ಶ್ರೀಸೀತಾಪತಿ ಅತಿಮುದಬಡಿಸಿಮತ್ತಮಾಯಿಮೊತ್ತಗಜಸಿಂಗ ನಿನ್ನಪ್ರತಿಎಂತೊ ಗುರುಕುಲೋತ್ತುಂಗಚಿತ್ತಜನಯ್ಯ ಪ್ರಸನ್ವೆಂಕಟೇಶ ಭಜನಶೀಲಸತ್ಯನಾಥಸುತ ಸತ್ಯಾಭಿನುತ ನವ? ತೀರಥನೆಸುತ್ತ ವಿಸ್ತರಿಸಿ ನಿನ್ನ ಕೀರ್ತಿ ದ್ಯುತಿಮಣಿಯಂತನ್ಯಥಾಗತಿಕಾಣೆನೆನ್ನ ರಕ್ಷಿಸಯ್ಯ ಪಿತನೆ3
--------------
ಪ್ರಸನ್ನವೆಂಕಟದಾಸರು
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.ಯಾಕೆ ಪಂಥ ಲೋಕೈಕನಾಥ ದಿ-ವಾಕರಕೋಟಿಪ್ರಭಾಕರ ತೇಜನೇ ಅ.ಪ.ಪೂರ್ವಾರ್ಜಿತ ಕರ್ಮದಿಂದಲಿಇರ್ವೆನು ನರಜನ್ಮ ಧರಿಸುತಗರ್ವದಿಂದ ಗಜರಾಜನಂತೆ ಮತಿಮರ್ವೆಯಾಯ್ತು ನಿನ್ನೋರ್ವನ ನಂಬದೆಗರ್ವಮದೋನ್ಮತ್ತದಿ ನಡೆದೆನುಉರ್ವಿಯೊಳೀ ತೆರದಿ ಇದ್ದೆನಾದರೂಸರ್ವಥಾ ಈಗ ನಿಗರ್ವಿಯಾದೆಯಹಪರ್ವತವಾಸ ಸುಪರ್ವಾಣ ವಂದಿತ 1ಯಾರಿಗಳವಲ್ಲಮಾಯಾಕಾರ ಮಮತೆ ಸಲ್ಲ ಸಂತತಸಾರಸಾಕ್ಷ ಸಂಸಾರಾರ್ಣವದಿಂದಪಾರಗೈದು ಕರುಣಾರಸ ಸುರಿವುದುಭಾರವಾಯ್ತೆ ನಿನಗೆನತಮಮಕಾರ ಹೋಯ್ತೆ ಕಡೆಗೆ ಏನಿದುಭಾರಿ ಭಾರಿಶ್ರುತಿಸಾರುವುದೈ ದಯವಾರಿಧಿನೀನಿರಲ್ಯಾರಿಗುಸುರುವುದು2ಬಾಲತ್ವದ ಬಲೆಗೆ ದ್ರವ್ಯದಶೀಲವಿತ್ತೆ ಎನಗೆ ಆದರೂಪಾಲಿಸುವರೆ ನಿನಗಾಲಸ್ಯವೆ ಕರು-ಣಾಳು ಶ್ರೀಲಕ್ಷ್ಮೀಲೋಲ ಮಮ ಮನಕೆಸಾಲದೆರಡು ಮೂರು ನಿನ್ನಯಮೂಲ ಸಹಿತ ತೋರು ಮುನಿಕುಲಪಾಲ ಶ್ರೀಲಕ್ಷ್ಮೀನಾರಾಯಣಗುಣಶೀಲ ಕಾರ್ಕಳ ನಗರಾಲಯವಾಸನೇ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯಾತರ ಗರವು ಹೇಳೆ ಮಾತಿನ ಜಾಣಿಪ್ರೀತಿಲೆ ಕರೆಯದೆ ನೀತಿ ಬಿಟ್ಟೆನೀನು ಪ.ಬಾಲೆ ನಿಮ್ಮರಸರು ಭಾಳಗುಣವಂತರುಕಾಲವಿಹಿತವನು ತಿಳಿದು ಇಂದಿವÀ ರಾಕ್ಷಿಕಾಲವಿಹಿತವ ತಿಳಿದು ರಮಿಸುವಾಗಸಾಲದೆಮಾನವಕಳಕೊಂಡೆ ಇಂದಿವರಾಕ್ಷಿ1ಮಿತ್ರೆ ನಿನ್ನವಗುಣ ಮತ್ತೆ ಐವರು ನೋಡಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಇಂದಿವರಾಕ್ಷಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಮದುವ್ಯಾಗಿಅರ್ಥಿಲೆ ರಮಿಸಿ ಇರುತಾರೆ ಇಂದಿವರಾಕ್ಷಿ 2ಐವರನ ಠಕ್ಕಿಸಿ ದೈವನÀಂಥವನ ಕೂಡಮೈಮರೆದು ಓಡುವ ಸಮಯದಿ ಇಂದಿವರಾಕ್ಷಿಮೈಮರೆದು ಓಡುವ ಸಮಯದಿ ಭೀಮಸೇನಕೈ ಹಿಡಿದು ಕೆಳಗೆ ಎಳೆದಾನ ಇಂದಿವರಾಕ್ಷಿ 3ಸೂತ್ರನಾಮಕನ ಮಡದಿ ಸ್ತೋತ್ರಕೆ ಹಿಗ್ಗುವಿವ್ರಾತ್ಯನ ಕೂಡ ರಥೆವೇರಿ ಇಂದಿವರಾಕ್ಷಿವ್ರಾತ್ಯನ ಕೂಡ ರಥವೇರಿ ಹೋಗುವಾಗಯಾತರಮಾನತಿಳಕೊ ಇಂದಿವರಾಕ್ಷಿ4ಧಡ ಧಡ ರಥವನು ಹೊಡೆದು ಓಡಿಸುವಾಗಸಿಡಿಲೆರಗಿದಂತೆ ಐವರು ಇಂದಿವರಾಕ್ಷಿಸಿಡಿಲೆರಗಿದಂತೆ ಐವರು ನಿನ್ನಕೈಹಿಡಿದೆಳೆದದ್ದು ಮರೆತೆಯೇನ ಇಂದಿವರಾಕ್ಷಿ 5ವಾಚಾಭಿಮಾನಿಯೆ ಯೋಚಿಸೆ ಮನದೊಳುಆಚೆಲಿದ್ದವರಿಗೆ ಅನುಮಾನ ಇಂದಿವರಾಕ್ಷಿಆಚೆಲಿದ್ದವರಿಗೆ ಅನುಮಾನ ದ್ರೌಪತಿನಾಚಿಕೆ ಎಂದು ಬರಬೇಕ ಇಂದಿವರಾವಕ್ಷಿ 6ಪಾಂಚಾಲಿ ನಿನ್ನವಗುಣಮಿಂಚಿತ ಜಗದೊಳುಹಂಚಿಕೆÉಹಾಕಿದರೆÉ ಹರವಿಲ್ಲಹಂಚಿಕೆ ಹಾಕಿದರೆ ಹರವಿಲ್ಲ ರಮಿಅರಸುಕಿಂಚಿತ್ತುಮಾನಉಳಿಸಿದ ಇಂದಿವರಾಕ್ಷಿ7
--------------
ಗಲಗಲಿಅವ್ವನವರು
ಯಾತರ ಬಲ್ಲತನವೊ ಕೃಷ್ಣಯ್ಯ ನಿನಗ್ಯಾತರ ಬಲ್ಲತನವೊ ಪ.ಯಾತರ ಬಲ್ಲತನನಾಥರ ನಮ್ಮ ಸನಾಥರ ಮಾಡಿ ಸಂಪ್ರೀತಿಯ ಬಡಿಸದಿನ್ಯಾತರ 1ಬಿರುದಂತೆ ಭಕುತರ ಪೊರೆವುದು ಗಡ ನಿನ್ನಸ್ಮರಣೆಗೆ ಮರೆವಿತ್ತು ದುರಿತಕೊಪ್ಪಿಸುವುದಿನ್ಯಾತರ 2ಬಲ್ಲತನದ ಗುರುತೆಲ್ಲ ದೇಶದೊಳು ನನ್ನಲ್ಲಿ ಅಜ್ಞಾನದ ಬಳ್ಳಿಯ ತೊಡಕಿಸೂದ್ಯಾತರ 3ನಿಜರವಮಾನದ ಕುಜಕೆ ಪರಶುರಾಮತ್ರಿಜಗವಂದಿತ ನಿನ್ನ ಭಜಕರೊಳಿಡಲೊಲ್ಲದ್ಯಾತರ 4ದುರಿತಗಿರಿತ ಅರಿಗಿರಿಗಂಜೆ ನಾಮವಜ್ಜರವಿರೆ ಪ್ರಸನ್ವೆಂಕಟರಸ ಮನ್ನಿಸಲೊಲ್ಲದ್ಯಾತರ 5
--------------
ಪ್ರಸನ್ನವೆಂಕಟದಾಸರು
ಯಾದವರನ್ನ ಪಾಲಿಸುವ ಮುನ್ನಕರುಣ ಕಟಾಕ್ಷದಿನೀ ದಯ ಮಾಡೊ ಪ.ಮತ್ತೆ ಭಾಗೀರಥಿ ಜಲವಮಿತ್ರೆ ದ್ರೌಪತಿ ಎರಿಯೆಅರ್ಥಿಲೆಪಾದತೊಳೆದರುಅರ್ಥಿಲೆಪಾದತೊಳೆದು ಪ್ರಾರ್ಥಿಸಿದರುಚಿತ್ತಕ್ಕೆ ತಂದು ಕೈಕೊಳ್ಳೊ 1ಹರದಿರುಕ್ಮಿಣಿಗೆರಗಿದ್ರೌಪತಿ ಭದ್ರಾಆದರದಿಂದಪಾದತೊಳೆದರುಆದರದಿಂದಪಾದತೊಳೆದು ಪ್ರಾರ್ಥಿಸಿದರುಶ್ರೀದೇವಿ ಪೂಜೆ ಕೈಕೊಳ್ಳೆ 2ಪಂಚ ಭಕ್ಷ್ಯಪರಮಾನ್ನಪಾಂಚಾಲಿ ಬಡಿಸಿದಳುಪಂಚಪಾಂಡವರ ಸಹಿತಾಗಿಪಂಚಪಾಂಡವರ ಸಹಿತಾಗಿ ಶ್ರೀಕೃಷ್ಣಚಂಚಲಾಗದಲೆ ಸವಿದುಂಡ 3ಅಕ್ಕ ರುಕ್ಮಿಣಿ ಭಾಮೆಮಿಕ್ಕ ತಂಗಿಯರ ಸಹಿತಸಖ್ಯ ಭಾವದಲಿ ಉಣುತಿರೆಸಖ್ಯ ಭಾವದಲಿ ಉಣುತಿರೆ ಹರುಷದಿದೇವಕ್ಕÀಳು ನೋಡಿ ಬೆರಗಾಗಿ 4ಇಂದುರಾಮೇಶ ತಾನುಮಿಂದು ಮಡಿಯನುಟ್ಟುಬಂಧು ಜನಸಹಿತ ಸವಿದುಂಡಬಂಧು ಜನಸಹಿತ ಸವಿದುಂಡ ಐವರಿಗೆಆನಂದ ಬಡಿಸಿದನು ಅತಿ ಬ್ಯಾಗ 5
--------------
ಗಲಗಲಿಅವ್ವನವರು
ಯಾರೂ ಸಂಗಡ ಬಾಹೋರಿಲ್ಲನಾರಾಯಣ ನಿಮ್ಮ ನಾಮವೊಂದಲ್ಲದೆ ಪ.ಹೊತ್ತು ನವಮಾಸ ಪರಿಯಂತರವು ಗರ್ಭದಲಿಹೆತ್ತು ಬಲು ನೋವು ಬೇನೆಗಳಿಂದಲಿತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿಅತ್ತು ಕಳುಹುವಳಲ್ಲದೆ ನೆರೆಬಾಹಳೆ 1ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನಭಾವಶುದ್ಧಿಯಲಿ ಧಾರೆಯೆರಿಸಿಕೊಂಡದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇನ್ನಾವ ಗತಿಯೆಂದೆನುತ ಗೋಳಿಡುವಳಲ್ಲದೆ 2ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗಎತ್ತಿವನ ಹೊರಗೊಯ್ಧ ಹಾಕೆಂಬರುಎತ್ತಿದ ಕಸಕಿಂತ ಕಡೆಯಾಯಿತೀ ದೇಹವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ 3ಪುತ್ರಮಿತ್ರರು ಸಕಲ ಬಂಧು ಬಳಗಗಳೆಲ್ಲಹತ್ತಿರ ನಿಂತು ನೋಡುವರಲ್ಲದೆಮೃತ್ಯುದೇವಿಯ ಬಂದು ಅಸುಗಳನು ಸೆಳೆವಾಗಮತ್ತೆ ತನ್ನವರಿದ್ದು ಏನು ಮಾಡುವರು 4ಯಮನ ದೂತರು ಬಂದು ಪಾಶಂಗಳನೆ ಎಸೆದುಮಮತೆಯಿಲ್ಲದೆ ಪ್ರಾಣ ಎಳೆಯುತಿರಲುವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗಕಮಲಾಕ್ಷ ಪುರಂದರವಿಠಲ ನೀನಲ್ಲದೆ * 5
--------------
ಪುರಂದರದಾಸರು
ಯೋಗಿಯ ನಡತೆ ಲೋಕಕ್ಕೆ ವಿರುದ್ಧಆಗಲೆಂದೇ ಮೂಡುತಿರಲವನೇ ಗೆದ್ದಪಸ್ನಾನವೆಂಬುದು ಇಲ್ಲ ಸಂಧ್ಯಾದಿ ಮೊದಲಿಲ್ಲಹೀನ ಶೀಲತ್ವವದು ಇರುತಿಹುದುಏನೇನು ಶುಚಿಯಿಲ್ಲ ಜಾತಿ ಸಂಕರವೆಲ್ಲತಾನು ಪಿಶಾಚಿಯಂತಿಹನುಯೋಗಿ1ಕಂಡಲ್ಲಿಯೆ ಉಂಬ ಕಂಡ ಕಡೆಯೆತ್ತಿಂಬಹೆಂಟೆ ಹುಡಿಯನ್ನದಲೆ ಮಲಗಿಕೊಂಬಭಂಡ ನಡತೆಯ ನಡೆದು ಭ್ರಷ್ಟನಾಗಿ ಕಾಣಿಸುತಉಂಡ ಬಾಯಿಯ ತಾನು ತೊಳೆಯದಿಹಯೋಗಿ2ದೇಹಸ್ಥಿತಿಯನು ನೋಡೆ ಮಣ್ಣಿಹುದು ಗೇಣುದ್ದಊಹಿಸಲು ತಲೆಯಲ್ಲ ಜಡೆಗಟ್ಟಿ ಬಿದ್ದಿಹುದುದೇಹಪರವಶನಾಗಿಉನ್ಮತ್ತಸ್ಥಿತಿಯಾಗಿದೇಹಿ ಚಿದಾನಂದಗುರುತಾನಾದಯೋಗಿ3
--------------
ಚಿದಾನಂದ ಅವಧೂತರು
ಯೋಗಿಯ ನೋಡಿರೋ ಸದ್ಗುರು ಯೋಗಿಯ ನೋಡಿರೋಯೋಗಿಚಿದಾನಂದಾವಧೂತ ಗುರುದೊರೆಯ ಸದ್ಗುಣ ಚರಿತನಪಆಶಾಪಾಶಗಳೆಂಬುವನೆಲ್ಲವಜರಿದುವಾಸನೆತರಿದುದೋಷದುರ್ಗ ಜನನಾದಿಗಳನು ಬಳಿದು ಸಂಶಯ ತುಳಿದುಕ್ಲೇಶಪಂಚಕ ಕಾಮಕ್ರೋಧವ ಕಡಿದು ಮುಂದಕೆ ನಡೆದುಭಾಸುರತೇಜದಿ ತೋರುವ ಪ್ರಭೆಯನುಕೂಡುವ ತಲೆಯೊಲಿದಾಡುವ1ಬಲಿದಾಧಾರವ ಕುಂಭಕದಿಂದಲಿ ಬಲಿಸಿ ವಾಯುವ ನಿಲಿಸಿನೆಲೆಯನೆ ಹತ್ತಿ ಆ ನೆಲೆಯನೆ ನಿಲುಕುತ ಮತ್ತಾನೆಲೆಯ ಹೊಲಬಲಿ ತೋರುವಭಾಸ್ಕರಕೋಟಿಯ ಮೀರಿಕಳೆಗಳ ತೋರಿ ಥಳಥಳ ಥಳಿಸಿಯೆ ಮೆರೆವಾ ಆತ್ಮನ ನೋಡುವ ಸಂತಸಪಡುವ2ಆರು ಚಕ್ರಗಳಲಿ ತೋರುವ ದಳಗಳನರಿದು ಅದರೊಳು ಬೆರೆತುಭೋರಿಡುತಿಹ ದಶನಾದದ ಬೊಬ್ಬೆಯಕೇಳಿಹರುಷವ ತಾಳಿ ಚಾತುರದಿ ಮೆರೆಯುತಲಿಹ ಜ್ಯೋತಿಯಸಾರಸೇವಿಪ ಶೂರಧಿರ ಚಿದಾನಂದಾವಧೂತಾತ್ಮ ಗುರುವಾ ಎನ್ನನು ಪೊರೆವಾ3
--------------
ಚಿದಾನಂದ ಅವಧೂತರು