ಒಟ್ಟು 2779 ಕಡೆಗಳಲ್ಲಿ , 119 ದಾಸರು , 1928 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಚರಣವ ನೋಡಬರಲಿ ಕೃಷ್ಣಶರಣಜನರು ಸುಕೃತವ ಸೊರೆಗೊಳಲಿ ಪ. ಬ್ರಹ್ಮರುದ್ರಾದಿಗಳೆಲ್ಲ ತಮ್ಮತಮ್ಮ ಮನದಿ ನೆನೆವುದು ಪುಸಿಯಲ್ಲನಮ್ಮ ದೃಷ್ಟಿಗೆ ತೋರಿತಲ್ಲ ಇನ್ನುಜನ್ಮ ಸಫಲವಪ್ಪುದಲಸಿಕೆ ಸಲ್ಲ 1 ಶ್ರುತಿಸ್ಮøತಿ ಕೊಂಡಾಡುತಿ[ದಿ]ಕೋ ನಾನಾಮತದಲ್ಲಿ ಮಾಡುವ ವಹಮಾನ ಸಾಕುಪತಿತಪಾವನೆಗಂಗೆ ಇದಕೋ ಇನ್ನುಮತಿಯುಳ್ಳ ನಿಪುಣರು ನಿಶ್ಚೈಸಬೇಕು 2 ವೇದೇ ರಾಮಾಯಣೇ ಎಂಬಆಧ್ಯೇಯಂ ಸದಾಯೆಂಬ ವಚನವನೆಂಬಮೋದಿ ಹಯವದನ ಡಂಬವಿಲ್ಲ-ದಾದರಮಾತ್ರ ಪೂಜೆಯನೆ ಕೈಕೊಂಬ3
--------------
ವಾದಿರಾಜ
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ ಅರಿವೆ ಅನ್ನಾಭರಣ ದ್ರವ್ಯ ಸರ್ವವು ಶ್ರೀ ವರನೆ ಎಂಬ ಪ ನಿತ್ಯಾನಂದ ನಿತ್ಯಜ್ಞಾನಾನಿಮಿತ್ತ ಬಂಧು ಭಕ್ತರಿಗೆ ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ 1 ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ 2 ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ 3 ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ4 ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ 5 ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ 6 ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ 7
--------------
ಜಗನ್ನಾಥದಾಸರು
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ ಪಂಕಜ ದಳ ಕೂಡಿತು ನೋಡು ಮುದರಿಕೊಂಡವು ಕುಮುದವೆಂಬೊ ಕಣ್ಣು ಪದುಮನಾಭನೆ ನಿನ್ನ ನಖವೆಂಬೊ ರವಿ ವದನವೆಂಬೊ ಚಂದ್ರÀಮಾ ಉದಿಸಲಿ 1 ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ ಕರ್ಣ ಮಂದಿರವೆ ತುಂಬಲಿ ಕಲಿ ಅಡಗಿ ಪೋಪಾ 2 ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು ಪೂಸಿದಾ ಗಂಧ ದಿವ್ಯವಾಸನೆ ಬರಲಿ ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು3 ನೀನಲ್ಲದೆ ತುಲಾ ಕಾವೇರಿಯೊಳಗೆ ಸ್ನಾನ ಜಪ ತಪಗಳು ಮಾಡುವದೇಕೆ ಸಿರಿ ಪ್ರಾಣರಿಗೆ ಪ್ರಾಣನಾದ ಬಲು ಮೋಹನಾ 4 ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ ಲೋಕ ಚರಿಸುವದೇನು ನಿನ್ನ ಪೋಗಾಡಿ 5 ಧವಳಗಂಗಿಯೊಳಂದು ಬಿದ್ದು ಬಂದಾಗ ಕವಿ ವಾದಿರಾಜಗೊಲಿದು ಬರಲಿಲ್ಲವೇ ಅವರ ದಾಸಾನುದಾಸನು ಸತತ ನಾನು ತವಕದಿಂದಲಿ ಬಾರೊ ಭಕ್ತವತ್ಸಲಾ6 ಅರ್ಚಿಸಬಲ್ಲನೆ ದೇವ ನಿನ್ನನುದಿನಾ ಗಚ್ಚರಿತವಂದಲ್ಲವೆ ಮತ್ತಾವದರಿಯೆ ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ 7
--------------
ವಿಜಯದಾಸ
ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ ಪ ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ ಅ ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ 1 ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ 2 ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತುಪತಿವ್ರತೆಯರ ಭಂಗಿಸಿಕ್ಷಿತಿಯೊಳು ರಾಹುತನಾದ ಬಾಡದಾದಿಕೇಶವನ ತಂದು ತೋರೆ3
--------------
ಕನಕದಾಸ
ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ. ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ1 ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು 2 ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ3
--------------
ವಾದಿರಾಜ
ಹರಿಯನರಿಯದ ಜನುಮ ಧೆರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ಧ್ರುವ ಹರಿಗೆ ನಮಿಸದ ಸಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣಿಯು ಹುಳಕ ಮಣಿಯು ಹರಿಗೆ ಮುಗಿಯದ ಕೈಯು ಮುರುಕ ಕೀಲಿಯ ಕೈಯು ಹರಿ(ಯ) ಕೊಂಡಾಡುವ ನಾಲಿಗೆ ಒಡಕ ಸೊಲಿಗೆಯ 1 ಹರಿಯ ಸ್ತುತಿಸದ ಮುಖ ಚೀರುವ ಚಿಮ್ಮಡಿಯ ಮುಖವು ಹರಿಕಥೆ ಕೇಳದ ಕಿವಿಯು ಹಾಳುಗವಿಯು ಹರಿಯ ನೋಡದ ಕಣ್ಣು ತೋರುವ ನವಲ್ಗರಿಗಣ್ಣು ಹರಿಯ ಆರಾಧಿಸದ ಮನವು ಹೀನತನವು 2 ಹರಿಯ ಸೇವೆಗೊದಗದ ಕಾಲು ಮುರುಕ ಹೊರಸಿನ ಕಾಲು ಹರಿಗೆ ಮಾಡದ ಭಕ್ತಿ ಮೂಢ ಯುಕ್ತಿ ಹರಿಯೆ ಶ್ರೀಗುರುವೆಂದು ಗುರುವೆ ಪರದೈವವೆಂದು ಸಲೆಮೊರೆಹೊಕ್ಕಿಹ ಮೂಢ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ
ಹರಿಯೇ ಶ್ರೀಗುರು ನಮ್ಮ ಹರಿಯೇ ಸದ್ಗುರು ನಮ್ಮ ಹರಿಯೇ ಮದ್ಗುರು ಪರಾತ್ಪರ ಪೂರ್ಣನು ಧ್ರುವ ಹರಿಯೇ ಗುರುವೆಂದೆನಿಸಿ ಗುರವೆ ಹರಿ ಎಂದೆನಿಸಿ ಕರಸಿಕೊಂಡವನೊಬ್ಬನೆ ಪರಬ್ರಹ್ಮನು ನರಮನುಜಾಗಾಗುವದು ದುರ್ಗತಿಯ 1 ಒಂದು ವಸ್ತುವೆ ತಾನನೇಕ ನಾಮವ ಧರಿಸಿ ಸಂದಿಸಿ ಹ್ಯಾ ನಂದ ರೂಪದೊಳಗೆ ಮಂದಮತಿಗಳ ವಿವರ ಮರ್ಮವನು ಅರಿಯದೆ ದ್ವಂದ್ವ ಭೇದದಿ ಗಾಢಸುತ್ತಿಹರು 2 ಹರಿಯೇ ಶ್ರೀಗುರುವಾಗಿ ಗುರುವೆ ಶ್ರೀಹರಿಯಾಗಿ ತೋರಿದನೇಕೋಮಯವಾಗಿ ಎನಗೆ ತರಳ ಮಹಿಪತಿ ಸಬಾಹ್ಯಾಂತ್ರ ಪರಿಪೂರ್ಣದಲಿ ಗುರುತವಾದನು ಹರಿಯೇ ಸಾಕ್ಷತನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರುಷದಿಂದಲಿ ಮನವೇ | ಪ ಭವ ಜಲದಿಂದಲಿ ದಾಟಿಸುವನು ಕಣ್ಣವರಿಸುತಲಿದ್ದು|ಅಚ್ಯುತಾನಂತ ಹರಿ| ಯನ್ನದೆವೆ ಕಂಡ ಚಿಂತೆಯನು ಮಾಡಿ| ಬನ್ನ ಬಡುತಲಿ ಉದರ|ಧಾವತಿಯವಳಗಾಗಿ| ದಣ್ಣನೇ ದಣಿದು ಬಂದು ಬಯಿಗೋರಗುವೇ 1 ಬಳ್ಳಿನೊರಳಗ ತೊಡರಿದ|ಕಾಲಿನಂತೆ ಭವಾ ತಳ್ಳಿಯೊಳುಸಿಲ್ಕಿ ಬಳಲುತಾ ಗುಂದುತಾ| ನಿಲ್ಲದೆವೆ ತಿರುಗುತಿಹೆ ಸಾಧು ಸಂಗಕಬರಲು ಯಳ್ಳಿಸಿತು ಅವಕಾಶ ಕಾಣೆ ನಾನು 2 ಕೆರೆಯ ನೀರನು ಕೆರೆಗೆ ಚೆಲ್ಲಿ|ವರವಪಡಿಯಲಿಕ್ಕೆ ಭರದಿಂದ ಬಂದ ಅಲತ್ಯ ನೋಡ್ಯಾ| ಹರಿನಾಮ ಹರಿಗರ್ಪಿಸಿ ಗತಿ ಪಡಿಯಲೊಲ್ಲಿ ಹರ ಹರಾ ನಿನಗೆಂತು ಮತಿ ವದಗಿತೋ 3 ಹಾಡಿ ಕೊಂಡಾಡಿದರ ಹರಿನಾಮ ನಾಲಿಗ್ಗೆ ಬಾಡಿಗೆಯು ಬೀಳುವದೋ ನಾನರಿಯೆ ನೋ ಮೂಢ ಪಾಮರನೆಮರ ಹುಟ್ಟಿ ಮರಬಿದ್ದಂತೆ ನೋಡು ನರ ದೇಹದಲಿ ಬಂದಾಯಿತು 4 ಹಿಂದಿನಪರಾಧಗಳಯೇನಾದರಾಗಲಿ ಮುಂದೆ ಇನ್ನಾರ ಸ್ವಹಿತ ವಿಚಾರಿಸೋ ತಂದೆ ಮಹಿಪತಿಸ್ವಾಮಿ ದ್ವಂದ್ವ ಚರಣಕ ಹೊಂದಿ ಇಂದಿರೇಶನ ವಲಮೆ ಪಡೆದು ಸುಖಿಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ ಶೌರಿ _ ಬಾ ಬಾ ಬಾ ಪ ಸಾಸಿರನಾಮದೊಡೆಯ ವಾಸವವಿನುತನೆ ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ ವೇದಾವಕದ್ದಂಥ ಉದ್ದಂಡ ದೈತ್ಯನ ಮರ್ಧಿಸಿ ವೇದವ ತಂದು ವೇಧನ ಸಲಹಿದ ಮತ್ಸ್ಯ ಬಾ ಬಾ ಬಾ 1 ಸಿಂಧು ವಿನೊಳಗಿದ್ದ ಮಂದರಗಿರಿಯನ್ನು ಬಂದು ಬೆನ್ನಿಲಿಪೊತ್ತು ತಂದು ಪೀಯೂಷವ ಚಂದದಿ ಸಲಹಿದ ಕೂರ್ಮಸ್ವರೂಪನೆ _ ಬಾ ಬಾ ಬಾ 2 ಕನಕನೇತ್ರನ ಕೊಂದು ಕಾಂತೆಯಹಿಡಿದೆತ್ತಿ ಕನಕಗರ್ಭನಿಗೊಲಿದ ಕಾರುಣ್ಯನಿಧಿಚಂದ್ರ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3 ತರುಳನಮೊರೆಕೇಳಿ ದುರುಳನ ಕರುಳನೆ ಬಗೆದು ಕೊರಳೊಳು ಕರುಳ ಧರಿಸಿ ಸುರರನ್ನು ಪೊರೆದಂಥ ಸರ್ವವ್ಯಾಪಿ ಕರುಣಿಯೆ ಮೂರ್ತಿ _ ಬಾ ಬಾ ಬಾ 4 ಅನುಜನ ಪೊರೆಯಲು ತನುವನು ಮರೆಸಿಕೊಂಡು ದಾನವನು ಬೇಡುತ ಬಲಿ ಯನು ತುಳಿದು ಪೊರೆದ ಘನ್ನ ಮಹಿಮ ವಟು ವಾ ಮನ ರೂಪಿಯೆ _ ಬಾ ಬಾ ಬಾ 5 ಕೊಡಲಿಯ ಪಿಡಿಯುತ ಒಡೆಯರ ತರಿದು ಕಡಿದು ಮಾತೆಯ ಪಿತ ನುಡಿಯನು ಸಲಿಸಿದ ಚಂಡವಿಕ್ರಮ ಮಹಿಮ ಭಾರ್ಗವ ಮೂರುತಿ _ ಬಾ ಬಾ ಬಾ 6 ಕಾಂತೆಯನೆಪದಿಂದ ಕದನವ ಹೂಡಿಕೊಂಡು ಅಂತಕಸದನಕೆ ಅರಿಗಳ ತಳ್ಳುತ ಶಾಂತತೆ ಬೀರಿಪೊರೆದ ದಶರಥ ರಾಮನೆ _ ಬಾ ಬಾ ಬಾ 7 ಚೋರತನದಿ ಬಲು ಬೆಣ್ಣೆಯ ಮೆಲ್ಲುತ ಜಾರತನದಿ ಋಷಿ ಸ್ತ್ರೀಯರಿಗೊಲಿದಂಥ ಮಾರಜನಕ ಶ್ರೀ ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8 ವೇದಗೋಚರ ವಿಶ್ವ ವೇದ ಬಾಹ್ಯರಿಗೆಲ್ಲ ವೇದ ವಿರುದ್ಧವಾದ ವಾದಗಳ ತೋರಿ ನಿಂದು ಬೆತ್ತಲೆ ಮೆರದ ಬೌದ್ಧ ಸ್ವರೂಪನೆ _ ಬಾ ಬಾ ಬಾ 9 ಕಲಿಬಾಧೆ ಹೆಚ್ಚಾಗೆ ಕಲಿಯುಗ ಕೊನೆಯಲ್ಲಿ ಮಲಿನಾರ ಮರ್ಧಿಸಿ ಉಳಿಸಲು ಧರ್ಮವ ಚಲುವ ರಾಹುತನಾದ ಕಲ್ಕಿ ಸ್ವರೂಪನೆ _ ಬಾ ಬಾ ಬಾ 10 ಸತ್ಯಸಂಕಲ್ಪನೆ ನಿತ್ಯಸ್ವರೂಪನೆ ಉತ್ತಮನೀನೆಂದು ಒತ್ತೊತ್ತಿ ಪೊಗಳುವೆ ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11 ಏಕರೂಪನೆ ನಿನ್ನನೇಕ ರೂಪಂಗಳ ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು ಕಾಕುಮತಿಯು ನಾನು ಎಂತು ವರ್ಣಿಸಲಯ್ಯ _ ಬಾ ಬಾ ಬಾ12 ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ ಪೂರ್ಣಬೋಧರ ಪೂರ್ಣ ಕರುಣಾವ ಬೀರಿಸು _ ಬಾ ಬಾ ಬಾ 13 ಮಾತುಮಾತಿಗೆ ನಿನ್ನ ನಾಮದಸ್ಮರಣೆಯ ನಿತ್ತು ಪಾಲಿಸು ಎನ್ನ ಮೃತ್ಯೋಪಮೃತ್ಯುವೆ ದೇವ ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14 ದೋಷದೂರನೆ ನಿನ್ನ ದಾಸನುನಾನಯ್ಯ ವಾಸವ ಜಯಮುನಿ ವಾತನೊಳ್ವಾಸಿಪ ಈಶ ಸಿರಿಕೃಷ್ಣ ವಿಠಲರಾಯನೆ ಬೇಗ ಬಾ ಬಾ ಬಾ 15
--------------
ಕೃಷ್ಣವಿಠಲದಾಸರು
ಹಸೆಗೆ ಬಾರೈರಾಮಾ ಪ ಬಿಸಜಾಪ್ತ ವಂಶಲಲಾಮ ಅ.ಪ ಮಾನಸ ಪೀಠಕೆ ಜಾನಕಿದೇವಿ ಸಹಿತಾ ಆನತರಿಗೆ ಸೌಖ್ಯವ ಬೀರುತಲಿ 1 ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು ಧರ್ಮಸ್ಥಾಪಿಸೆ ಧರಣಿ ಮಂಡಲದಿ 2 ಹನುಮಂತ ಜಾಂಬವ ಇನತನಯಾಂಗದಾದಿ ಘನಕಪಿವೀರರು ಕಾದುಕೊಂಡಿರುವರು 3 ನೀಮನವಲಿದನುಗ್ರಹಿಸಿ ಬೇಗದಿ4 ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು ಅಂತರಾತ್ಮಕ ಗುರುರಾಮ ವಿಠಲನೆ 5
--------------
ಗುರುರಾಮವಿಠಲ
ಹಸ್ತವ ಕರುಣಿಸು ವಿಸ್ತಾರ ಮಹಿಮದ ಪ ಹಸ್ತವ ಕರುಣಿಸೋ ರಂಗಯ್ಯ ಹಸ್ತ ಕರುಣಿಸೆನ್ನ ಮಸ್ತಕದ ಮೇಲೆ ಹಸ್ತವ ಕರುಣಿಸೊ ಅ.ಪ ಸೋಮಕಾಸುರನ ವಧಿಸಿ ವೇದತಂದ ಹಸ್ತವ ಕರುಣಿಸೋ ರಂಗಯ್ಯ ತಾಮಸ ದೈತ್ಯನ ಉದರವ ಬಗಿದ ಹಸ್ತವ ಕರುಣಿಸೊ ರಂಗಯ್ಯ ಭೂಮಿಭಾರ ಶಿವಧನುವನು ಮುರಿದ ಹಸ್ತವ ಕರುಣಿಸೊ 1 ಎಸೆದು ಬಾಣ ವಾಲಿಗಭಯ ಪಾಲಿಸಿದ ಹಸ್ತವ ಕರುಣಿಸೋ ರಂಗಯ್ಯ ಅಸಮಮೂರುತಿಗೆ ಒಸೆದು ಉಂಗುರವಿತ್ತ ಹಸ್ತವ ಕರುಣಿಸೊ ಅಸುರನಿಗೊಲಿದು ಸ್ಥಿರ ಮುಕುಟವನಿಟ್ಟ ಹಸ್ತವ ಕರುಣಿಸೋ ರಂಗಯ್ಯ ವಸುಧೆ ಭಾರಿಳುಹಲು ನಿರುತದಿಂದೆತ್ತಿದ ಹಸ್ತವ ಕರುಣಿಸೊ 2 ಸುರಗಣಕಮೃತ ಹರುಷದಿ ನೀಡಿದ ಹಸ್ತವ ಕರುಣಿಸೋ ರಂಗಯ್ಯ ಪರಮಗೋವರ್ಧನ ಗಿರಿಯೆನೆತ್ತಿದ ಹಸ್ತವ ಕರುಣಿಸೊ ಸಾರಸ ಗಂಧಿಯರುಟ್ಟಿರ್ದ ಸೀರೆಯ ಕದ್ದ ಹಸ್ತವ ಕರುಣಿಸೋ ರಂಗಯ್ಯ ಮೆರೆವ ರುಗ್ಮನ ಮಹಗರುವವ ಮುರಿದ ಹಸ್ತವ ಕರುಣಿಸೊ 3 ಜನನಿ ಜನಕರ ಸೆರೆಯನು ಬಿಡಿಸಿದ ಹಸ್ತವ ಕರುಣಿಸೋ ರಂಗಯ್ಯ ಜನನಿಮುಂದಾಡುತ ಕಡಗೋಲು ಪಿಡಿದ ಹಸ್ತವ ಕರುಣಿಸೊ ವರರುಗ್ಮಿಣಿಕೈಯ ಸರಸದಿ ಪಿಡಿದ ಹಸ್ತವ ಕರುಣಿಸೋ ರಂಗಯ್ಯ ನರಗೆ ಸಾರಥಿಯಾಗಿ ಕುದುರೆ ತಿರುವಿದ ಹಸ್ತವ ಕರುಣಿಸೊ 4 ವಿದುರನ ಮನೆಯಲಿ ಹಾಲೆತ್ತಿ ಕುಡಿದ ಹಸ್ತವ ಕರುಣಿಸೋ ರಂಗಯ್ಯ ಸುದತಿಗೆ ಮೆಚ್ಚಿ ಅಕ್ಷಯಾಂಬರವಿತ್ತ ಹಸ್ತವ ಕರುಣಿಸೊ ಮುದದಿ ಧ್ರುವಗೆ ಮೆಚ್ಚಿ ಸದಮಲ ಪದವಿತ್ತ ಹಸ್ತವ ಕರುಣಿಸೋ ರಂಗಯ್ಯ ಸುದಯದಿಂದ ಅಂಬರೀಷನುದ್ಧರಿಸಿದ ಹಸ್ತವ ಕರುಣಿಸೊ 5 ದಿನವಿರೆ ದಿನಮಣಿಯನು ಮಾಯಮಾಡಿದ ಹಸ್ತವ ಕರುಣಿಸೋ ರಂಗಯ್ಯ ರಣದಿ ಭಕ್ತರ ಶಿರ ಕನಿಕರದೆತ್ತಿದ ಹಸ್ತವ ಕರುಣಿಸೊ ಸೆಣದಾಡಿ ಭಕ್ತನಿಂ ದಣಿದು ಕಟ್ಟಿಸಿಕೊಂಡ ಹಸ್ತವ ಕರುಣಿಸೋ ರಂಗಯ್ಯ ಸನಕಾದಿಗಳು ಘನ ಅನಂದದ್ಹೊಗಳಿಸುವ ಹಸ್ತವ ಕರುಣಿಸೊ 6 ಫಡ ಫಡ ಎನ್ನುತ ತೊಡೆಯ ಚಪ್ಪರಿಸಿದ ಹಸ್ತವ ಕರುಣಿಸೋ ರಂಗಯ್ಯ ಬಿಡದೆ ಸೋಳಸಹಸ್ರ ಮಡದಿಯರ್ಹಿಡಿದ ಹಸ್ತವ ಕರುಣಿಸೊ ಅಡಿಯ ದಾಸರ ಪಿಡಿದಪ್ಪಿ ರಕ್ಷಿಸುವ ಹಸ್ತವ ಕರುಣಿಸೋ ರಂಗಯ್ಯ ಒಡೆಯ ಶ್ರೀರಾಮ ನಿನ್ನಡಿ ನಂಬಿ ಬೇಡುವೆ ಹಸ್ತವ ಕರುಣಿಸೊ 7
--------------
ರಾಮದಾಸರು
ಹಸ್ತಿ ಮಾದಲಾದಉತ್ತಮ ರಥವು ಸಂದಣಿಸಿತು ಕೋಲ ಪ. ಇಂದ್ರನು ತಾನೊಂದು ಗಜೇಂದ್ರನೇರಿಕೊಂಡುಮಂದಗಮನೆಯರ ಶಚಿ ಸಹಿತ ಕೋಲಮಂದಗಮನೆಯರ ಶಚಿ ಸಹಿತ ವಜ್ರಾಯುಧಉಪೇಂದ್ರನ ಮನೆಗೆ ಬರುತಾನೆ ಕೋಲ 1 ಹುತಭುಕ್ತನು ತಾನುಸತಿ ಸ್ವಾಹಾದೇವಿಯ ಕೂಡಿಅತಿಶಯವಾದ ಮೇಷವೇರಿಅತಿಶಯವಾದ ಮೇಷವೇರಿ ಶಕ್ತಿಯ ಧರಿಸಿಕ್ರತುಪತಿ ಮನೆಗೆ ಬರುತಾನೆ ಕೋಲ 2 ಜಾಣ ಯಮನು ತಾನು ಕೋಣ ವೇರಿಕೊಂಡುರಾಣಿ ಶಾಮಲೆಯ ಸಹಿತಾಗಿ ಕೋಲರಾಣಿ ಶಾಮಲೆಯ ಸಹಿತಾಗಿ ದಂಡವ ಧರಿಸಿಪ್ರಾಣೇಶನ ಮನೆಗೆ ಬರುತಾನೆ ಕೋಲ 3 ನಿರುತಿ ತಾನೊಂದು ನರನ ಪೆಗಲನೇರಿತರುಣಿಯ ಸಹಿತ ಆಯುಧ ಧರಿಸಿ ಕೋಲತರುಣಿಯ ಸಹಿತ ಆಯುಧ ಧರಿಸಿನರಹರಿ ಮನೆಗೆ ಬರುತಾನೆ ಕೋಲ4 ಮಕರ ಮೇಲೇರಿ ಶ್ರೀ ಭಾಗೀರಥಿಯ ಒಡಗೂಡಿ ಕೋಲಶ್ರೀ ಭಾಗೀರಥಿಯ ಒಡಗೂಡಿ ಪಾಶವ ಧರಿಸಿದರಾಧರನ ಮನೆಗೆ ಬರುತಾನ ಕೋಲ 5 ಮರುತನು ತಾನೊಂದು ಎರಳಿ ಮೇಲೇರಿತರುಣಿ ಪ್ರವಹಿ ಒಡಗೂಡಿ ಕೋಲತರುಣಿ ಪ್ರವಹಿ ಒಡಗೂಡಿ ಗದೆಯ ಧರಿಸಿಮುರಹರನ ಮನೆಗೆ ಬರುತಾನ ಕೋಲ 6 ವಿತ್ತಪನು ತಾನೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೊಡಿ ಕೋಲಚಿತ್ತದೊಲ್ಲಭೆಯ ಒಡಗೊಡಿ ಖಡ್ಗವ ಧರಿಸಿಪೃಥ್ವೀಶನ ಮನೆಗೆ ಬರುತಾನೆ ಕೋಲ7 ಈಶನು ತಾನೊಂದು ವೃಷಭನ ಮೇಲೇರಿಶ್ರೀ ಸತಿದೇವಿ ಒಡಗೂಡಿಕೋಲಶ್ರೀ ಸತಿದೇವಿ ಒಡಗೂಡಿ ತ್ರಿಶೂಲವ ಧರಿಸಿನರಸಿಂಹನ ಮನೆಗೆ ಬರುತಾನೆ ಕೋಲ8 ಧರ್ಮ ಭೀಮಾರ್ಜುನ ನಕುಲ ಸಹದೇವರುಪ್ರೇಮದಿಂದಲೆ ಪೊರ ಹೊರಟು ಕೋಲಪ್ರೇಮದಿಂದಲೆ ಪೊರ ಹೊರಟು ಬರುತಾರೆ ರಮಿಯರಸನ ಅರಮನೆಗೆ ಕೋಲ 9
--------------
ಗಲಗಲಿಅವ್ವನವರು
ಹಾರುವರಿಗೆ ಭೂಮಿಯಾ ನೀಡಿದೆನೆಂದು | ನೀರೋಳುಮನೆಯ ಮಾಡಿ ಕೊಂಡೆಯಾರಂಗಾ ಪ ಇಂದ್ರಾದಿಗಳು ಕ್ಷಣಕೊಮ್ಮೆ ಮೊರೆಯಿಡಲಾಗಿ ನಿದ್ರೆ ಕಾಣೆನೆಂದು ಸೇರಿದೆ ಗಡ್ಡೆಯಾರಂಗಾ 1 ವಿಷನುಂಡುದಾವಾಗ್ನಿ ನುಂಗಿ ತನು ಶೆಖೆದೋರೇ ಶೇಷನಂಗದ ಮೇಲೆ ಪವಡಿಸಿದೆಯಾ ರಂಗಾ 2 ಶರಣ ವಸರಕ ಎಡತಾಕಲಾರೆನೆಂದು ಗುರುಮಸಿಪತಿ ಸ್ವಾಮಿ ನಾಮ ವಿಟ್ಟೆಯಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು