ಒಟ್ಟು 399 ಕಡೆಗಳಲ್ಲಿ , 61 ದಾಸರು , 330 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣನಮ್ಮ ಈತ ನಾರಿ ಒಳ್ಳೊಳ್ಳೆ[ಯ]ವರಿಗೆ ಮಾಡಿದ ಖ್ಯಾತ ಪ. ನಾನಾ ಬಗೆಯಿಂದ ಪೊಗಳುವೆನೀತ- ನ್ನಾನೆಂಬುವುದನ್ನು ಮುರಿದ ಪ್ರಖ್ಯಾತ ಅ.ಪ. ಕೈಕಾಲಿಲ್ಲದೆ ಆಟ ಆಡಿದ ಮೈಮ್ಯಾಲೆ ಹೊರೆಯ ಹೊತ್ತು ನೋಡಿದ ಕೋರೆಯ ಮಸೆದು ಹದ ಮಾಡಿದ ಕೋಯೆಂದು ಕೂಗಿ ಒದರುತೋಡಿದ ಇವ ಭಕ್ತರನ್ನ ಪಾತಾಳಕ್ಕೆ ದೂಡಿದ ಶಕ್ತಿ ಮಗನಾದ ಕ್ಷತ್ರಿಯರ ಕಾಡಿದ ಅಂಬು ತೆಗೆದು ಹೂಡಿದ ರಾಧಾನ್ಮನೆ ಪೊಕ್ಕು ಮೋಜು ಮಾಡಿದ ಇವ ದಿಗಂಬರನಾಗಿ ಅಶ್ವವೇರಿ ಓಡಿದ 1 ಕಲ್ಲು ಮಾಡಿಕೊಂಡು ಇರುವನು ನೆಳ್ಳ ಭೂಮಿ ನೆಗವಿ ಸುತ್ತಿ ಬಲ್ಲ ಬುದ್ಧಿವಂತ ಪ್ರಹ್ಲಾದಗೊಲಿದನಲ್ಲ ಇವ ಎರುಡುಪಾದ ಭೂಮಿ ದಾನ ಒಲ್ಲ ಇವನ ಕೊಡಲಿಬಾಯಿಗ್ಯಾರು ಇದಿರಿಲ್ಲ ಲಂಕೆಗೆ ಬೆಂಕಿಯನಲ್ಲ ಕೊಂಕಿ ಕೊಳಲನೂದುವನು ಗೊಲ್ಲ ಮೈಮೇಲೆ ಗೇಣು ಅರಿವ್ಯಿಲ್ಲ ಇವ ಮಾಮೇರೆಂಬೊ (?) ತೇಜಿ ಏರ್ಯಾನಲ್ಲ 2 ವೈರಿ ಕೊಂದ ಕಾಮಾತ್ಮರಿ[ಗಾ]ಗೋದೇನು ಛಂದ ದಾಡೆಯಿಂದ ದೂಡಿ ಭೂಮಿ ತಂದ ದಾಡೆಯಿಂದ ಕಂಬ ಒಡೆದು ಬಂದ ಇವ ಶುಕ್ರನ್ನ ಕಣ್ಣ ಮುರಿದೊಂದ ತಂದೆ ಮಾತಿಗೆ ತಾಯಿ ಮರಣಂದ ವನದ್ಹಿಂಡು ಕೂಡಿ ವನಕೆ ಕೇಡು ತಂದ ಒಮ್ಮೆ ಮೀಸಲ್ಬೆಣ್ಣೆ ಮೆದ್ದೇನಂದ ಇವ ಬತ್ತಲಾಗಿ ಹತ್ತು ಕುದುರಿದಂದ ತಂದೆ ಹೆಳವನಕಟ್ಟೆರಂಗ ಬಂದ 3
--------------
ಹೆಳವನಕಟ್ಟೆ ಗಿರಿಯಮ್ಮ
ನಾರಾಯಣನು ನಾರಿಯಾದನು ನಾರಾಯಣನು ನಾರಿಯಾಗಲು ಉಗರು ಕಾಂತಿ ಪೋಗಿ ಸಾರಸುಂದರವ ತಿರಸ್ಕರಿಸೆ ಶೃಂಗಾರಸ ನಿಧೆ ಪ ಸುರರಸುರ ಕರೆಸಿ ವೈರೆವ ಮರೆಸಿ ಸ್ನೇಹದಿಂದಿರಿಸಿ ಈ ಕುಲ ವರಿಸಿ ನಿಮ್ಮೊಳು ಬೆರಸಿ ಸುಖವಂಕುರಿಸುವಂತೆ ಸಂಚರಿಸೆಂದು ಸರಸದಿಂದಲಾದರಿಸೆ ಸುರರ ಧರಿಸಿ ಬಿಡದುದ್ಧರಿಸುವೆ ನಿದ್ರಿ ತರಿಸಿ ದೈತ್ಯರ ವರಿಸೆಂದು ಸಿರಿ 1 ದಿತಿಜಾದಿತಿ ಜ್ಯಾತ ತತಿಗಳನು ಸ ಅಮೃತ ಬಪ್ಪದಕ್ಕೆ ಹಿತವ ಪೇಳುವೆನೆಂದತಿಶಯದಿಂದ ಚತುರಾತುಮ ಮಾರುತ ಪಿತಾ ಕ್ಷಿತಿಯೊಳು ನೂರು ಶತ ಯೋಜನ ಪರ್ವತ ಮಂದಾರುಂಟು ಜತೆಯಲಿ ಏಕಮತರಾಗಿ ಪೊಲ್ ಜಾತವ ಕಿತ್ತೆತ್ತಿಸಿತಾಬ್ಧಿಯೊಳು ಮಥಿüಸೆಂದು 2 ಹರಿ ನಿರೂಪವÀ ಧರಿಸಿ ಎಲ್ಲರು ಗಿರಿಯ ಬಳಿಗೆ ಹರಿದರಾಗಲೆ ಕಿರಿ ಬೆರಳ ಅಬ್ಬರದಾಟವು ಬೊಬ್ಬಿರುವ ಧ್ವನಿ ಭೀಕರ ಕರಿ ಶರಧಿ ಮಿಕ್ಕ ಗೋತುರ ಸಪ್ತದ್ವೀಪ ತರು ಮೃಗಾದಿ ಜೀವರು ತಲ್ಲಣಿಸೆ ಗಿರಿ ವೆಗ್ಗಳಿಪ ಭರಕಂದು3 ಸುತ್ತ ಈ ಪರಿಯಾಗುತ್ತಿರೆ ಇತ್ತ ಪ ರ್ವತವಲ್ಲಾಡಿಸಿ ಕಿತ್ತಿ ತೆಗೆದೆತ್ತಿ ಹೊತ್ತರಿತ್ತಂಡದಿ ಚಿತ್ತ ಮಾರ್ಗವನು ಹತ್ತಿ ಬರಲು ದೇವತೆಗಳು ಹೊತ್ತರದ್ರಿಮೂಲ ಎತ್ತಲಾರದಲೆ ತತ್ತಳಗೊಂಡು ಮಾರುತ್ತ ಅಡಿಗಡಿ ಎತ್ತಿಡಲರಿದು ದೈತ್ಯರ ವಂಚಿಸಿ ಆ ದಿತ್ಯರಿಗಿರಿಸಿದುತ್ತಮನೊ4 ವನಧಿsಯೊಳದ್ರಿ ದನುಜ ಮರರ ಗುಣವಿಳಹಿ ಸ ರ್ಪನ ತಂದೀಗ ನೇಣನೆ ಮಾಡಿದರು ಸುರರು ಬಾಲನು ದೈತ್ಯಯರು ಹೂಣಿಕೆಲಿ ವಿನಯದಿಂದ ಮಥಿüಸುವಾಗ ವದನದನಿಲಕೆ ಅನಿಮಿಷರು ತಲ್ಲಣಿಸೆ ಹರಿ ತನ್ನನು ನಂಬಿದವರ ಕಾಯಿದ ವಂಚನೆಯಿಂದ5 ಉಭಯ ಜನರು ಗಂಭೀರವಾದ ಕ್ಷೀರಾಂಬುಧಿ ಕಟವ ರಭಸಗೈದು ಕಕುಭದಲಿ ಪ್ರತಿ ಶಬ್ದಪುಟ್ಟಿ ಉ ದುಭವಿಸಿದವು ಶುಭಾ ಶುಭ ಪ್ರಭು ಧನ್ವಂತ್ರಿ ಸುಲುಭ ರಸ ತಾರೆ ವಿಭುದರೊಳಗೆ ಗಲಭೆಯ ಬೀಸಿ ಅ ನಿಬರು ಒಯ್ಯಲು ಋಭುಜಾದ್ಯರು ಅಬುಜಾಪ್ತ ಪೋದನಭವಾಗೆ6 ಹರಿ ತಿಳಿದ ಭಕ್ತರ ಮನೋಕ್ಲೇಶ ಸಿರಿ ಸ್ತುತಿಗಗೋಚರನೆನ್ನಲು ಧರಿಸಿ ಬಂದನು ಮಿರುಗುತಿಪ್ಪ ಸುಂ ದರ ನಾರೀ ರೂಪ ಪರದೈವ ಕುಸುಮ ಪೊಂಗೆಜ್ಜೆಯ ಸರಪಳಿಯ ಮೇಲೊಲಿವ ಕಾಂಚಿದಾಮ ಶರತ್ಕಾಲದ ಚಂದಿರನಂತೆ7 ಸಣ್ಣವನಾರಾ ಮೋಹನ್ನಕರವು ಪಾ ಕೌಸ್ತುಭ ರನ್ನ ವನಮಾಲೆ ಚಿನ್ನದ ಸರ ಶೋಭನ ಕರಡಿಗೆ ಚನ್ನಗೋಡಿ ಸರ ಬಣ್ಣ ಸರ ರನ್ನದಪದಕ ಕನ್ನಡಿ ಮಲಕು ಚನ್ನಪ ನ್ಯಾವಳ ಮುನ್ನೆ ಸರ್ವಹಾರ ಮೂರ್ತಿ 8 ಮುತ್ತಿನ ಚಿಂತಾಕ ಮುತ್ತಿನೋಲೆ ಜಾತ ಮುತ್ತಿನ ಮೂಗುತಿ ಮುತ್ತಿನಕ್ಷತಿಯು ಮುತ್ತಿನ ಸೂಸುಕಾ ಮುತ್ತಿನ ಜಡೆಯು ಮುತ್ತಿನ ಗೊಂಚಲು ಮತ್ತೆ ತೋಳು ಮುತ್ತು ಮೇಲಗೊಪ್ಪು ಕತ್ತಲೆ ಸೋಲಿಪ ಕಸ್ತೂರಿ ತಿಲಕಾ ನೆತ್ತಿಯ ಬೈತಲು ಸುತ್ತ ತಳಪು ಸುರೋತ್ತಮ ಚಂದ್ರಮಾ ನಿತ್ಯಾನಂದ ಪರುಷೋತ್ತಮನು 9 ನೀಲಗೂದಲು ಸುಫಲಾದಿ ಶ್ರವಣ ಭ್ರೂಲಾದಿಕÀವು ಚಂ ಕಪೋಲ ನಾಸಿಕ ತಾಂಬುಲದ ವದನ ನಾಲಿಗೆತಳ ವಿಶಾಲ ಭುಜ ಕಂದರ ಸುಂಡಾಲಾಕಾರವಾದ ತೋಳು ಕರತಳ ಪಾಲು ಬಪ್ಪ ಸ್ತನ ಸ್ಥೂಲೋದರ ನಾಭಿ ಲೀಲಾ ನಡವು ಪಂ ಚಳ ಊರು ಜಾನು ಲೋಲಾಡುತಾ 10 ಹರಡಿ ಕೈಕಟ್ಟು ಬೆರಳುಂಗುರವ ವರ ಕಂಕಣಾದಿ ಸರಿಗೆ ತಾಯಿತ ಸರ ಹುಲೆಯುಗರು ಎಣ್ಣೆ ನೂಲು ತರುಳಹಾರ ಚೌರಿಯಿಂದ ಪರಿಪರಿ ಚಿತ್ರ ಬರೆದ ಕಂಚುಕಾ ಸರಿಸರಿ ಬಂದಾಭರಣ ಧರಿಸಿ ಅರೆ ಶರಗು ಗಹ್ವರದಿ ಮಾಡುತ್ತ ಮರಿಯಾನೆ ಬಪ್ಪ ತೆರದಂತೆ 11 ಗಂಧ ಪಚ್ಚಿಕೊಂಡು ಒಂದು ಕರದೊಳು ಗಂಧ ವಿಳ್ಯವು ಮತ್ತೊಂದು ಕರದೊಳು ಕಂದುಕ ಪುಟಿಸುತ್ತೊಂದೊಂದು ಹೆಜ್ಚೆಯನು ನಿಂದಲ್ಲಿ ನಿಲ್ಲದೆ ಚಂದದಿಂದ ಬಂದಬಂದಂತೆ ಪೂ ಮಂದರಾದಿ ಮುಡಿಯಿಂದ ಉದರಲು ಮಂದಹಾಸದಿಂದ ವೇಗ ನಡೆ ತಂದು ಸಮೀಪದಿ ನಿಂದನು ಖಳರಿಗೊಂಡಿ ಮಾರಿ12 ದುರುಳ ಸಮೂಹ ಪರವಶನಾಗಿ ಬೆರಗಾಗಿ ನಿಲ್ಲೆ ಪರಿ ಏನೆನಲು ಇರದೆ ಪೇಳಲು ಶಿರವದೂಗುತ್ತಾತಾರವೆಂದ ಭರ ಯೌವ್ವನ ಸ್ತ್ರೀ ಪರಪುರಷರ ಸರಿತದಲ್ಲಿಗೆ ಚರಿಸಬಾರದು ಎರಡು ಬಲದವರು ಕರದಿ ಲೋಚನವ ಮುಚ್ಚಿ ಸಾಗಿರೆ ಪಂಙÂ್ತ 13 ಬಡಿಸೂವೆನೆ ಒಡನೆ ತಮ್ಮಯ ಪಡೆ ಸಮ್ಮತ ಸಾಲ್ಹಿಡಿದು ಕುಳ್ಳಿರೆ ನಡುವೆ ಪಿಯೂಷ ಪಿಡಿದು ದುಷ್ಟರ ಕಡಿಗೊಂದು ಬಿಂದು ಬಡಿಸದೆ ದೃಢ ಭಕ್ತರಿಗೆ ಕುಡಿಸುತ್ತಿರಲು ಬಡ ರಾಹು ತಾನು ದುಡುಗಿ ಸುರರಾ ಎಡೆಯೊಳಿರಲು ಕುಡಿತಿಯೊಳು ತಾ ಬಡಿಸಿ ಚಕ್ರವಾ ತುಡುಕಿದ14 ಓರ್ವನ ತರಿದು ಈರ್ವಗೆ ಮಾಡಿದ ಊರ್ವಿಗೆ ಕೆಡಹಿ ಗರ್ವ ಮುರಿದು ಸರ್ವಬಗೆಯಿಂದ ನಿರ್ವಾಹ ಕರ್ತನು ಓರ್ವನಲ್ಲದೆ ಮತ್ತೋರ್ವನಾರೊ ಗೀರ್ವಾಣ ಜನರ ನಿರ್ವಾಧಿಕವೊಹಿಸಿ ಪರ್ವತೆಡೆಯಿದ್ದ ದು ರ್ವಿಷಯಾಬ್ಧಿಗೆ ಚೀರ್ವನಾಗಿದ್ದ ವಿಜಯವಿಠ್ಠಲ ನಿರ್ವಾಣೇಶ15
--------------
ವಿಜಯದಾಸ
ನಾಲ್ಕನೆಯ ಸಂಧಿ ಶಶಿಹಾಸ ಕಾಳಿಯನೊಲಿಸಿ ಪೊಸತಾಗಿ ತೋರಿತಾಶ್ಚರ್ಯ ಮಿಥ್ಯದ ವಿಷವನು ಉಣಿಸಿ ಕೃತ್ಯವೆ ಪಥ್ಯವಾದುದನು 1 ಕರುಣದ ಬಗೆಯ ತನುಜೆಯು ವಿಷಯು 2 ವಿಷಯೆ ಇದ್ದೆಡೆಗೆ ತಲೆಯ ತಗ್ಗುವಳು 3 ಪನ್ನಗಧರನ ಕೃಪೆಯಿಂದ ಸನ್ಮಾನವನೆ ಮಾಡಿದರು 4 ಜಾರಿದ ಕುರುಳನೋಸರಸಿ ಚಾರುಮಾಣಿಕಖಚಿತ ಪೀಠಕ್ಕೆ 5 ಹರಸಿ ಅಕ್ಷತೆಗಳನಿಟ್ಟು ಅರಸಿನಗಳ ತಿವರಿದರು 6 ಮಜ್ಜನ ತಂಬಿಗೆಯ ಲೋಕುಳಿಯ ಬೆನ್ನಲೋಕುಳಿಯನೆರೆದರು 7 ಮುಡಿಮೈಗಳನೋಸರಿಸಿ ದುಕೂಲವ ಬಡನಡುವಿಗೆ ಅಳವಡಿಸಿ ಜಡಿತದಾಭರಣಕರಡಿಗೆಯನು ತಂದಿಡುವರು ಇಕ್ಕೆಲದಲ್ಲಿ8 ಪಾಟಿಸಿ ತುರುಬನೋಸರಿಸಿ ಮಧ್ಯದಲಿ ಇಡುವರು 9 ಬೆಳಗುವ ಮೂಗುತಿಯ ಮಂದ ಗಮನೆಯರು ಹರುಷದಲಿ 10 ಮೂಗುತಿಯನಿಕ್ಕುವರು ಕೋಕಿಲಗಾನೆ ಕುಟಿಲಕುಂತಳದಾನೆ ಬಾಗಿದ ಬಾವುಲಿಗಳಲಿ11 ಇಟ್ಟರು ತೋಳ ಚಳರಕ್ಷೆ ಮಣಿಗಳ ಗಟ್ಟಿಕಂಕಣ ಚಳಕಗಳ ಬೆರಳ ಮುದ್ರಿಕೆಯು 12 ಕಡಗ ಮುತ್ತಿನ ಹತ್ತೆ ಕಡಗ ಎಡೆಪಣಿಚಿಂತಾಕದ ಸರಿಗೆಯ ತಂದಿಡುವರಂಗನಗೆ ನಾರಿಯರು 13 ಕಂಠೀಸರ ಬಿಲ್ಲಸರವು ಸರಸಿಜ ಗಂಧಿಯರೊಲಿದು 14 ಕಣಕಾಲುಗಳೆಸೆವ ಭಾವಕಿಯ ಸಾಲುಗಂಟೆ ಗೆಜ್ಜೆ ಸರಪಳಿ ಘಲಿರೆಂಬ ಕಾಲಂದಿಗೆಯನಿಡುವರು15 ಉಂಗುರ ಮುದ್ರಿಕೆಯಿಟ್ಟು ಮಂದಗಮನೆಗೆ ಒಪ್ಪಿದವು 16 ಸಾರಿಸಿ ಅಂಗಕ್ಕೆ ತಿಗುರಿ ಹಾವುಗೆಯನೆ ಮೆಟ್ಟಿಸಿದರು 17 ನಾರಿಯರೆಡಬಲದಲಿ ಕರವಿಡಿಯಲು ಚಾರುವದನೆ ಚಂಚಲಾಕ್ಷಿ ಬಂದೇರಿದಳೊಜ್ರದಂದಣವ 18 ಹೊತ್ತರು ಕಳಸ ಕನ್ನಡಿಯ ಹೊತ್ತಿದ ಕಾಳಂಜಿಯವರು 19 ಜಗಜಗ ಬೆಳಕುಗಳು ತುಂಬಿ ಜಗಜಗಿಸುವ ಜೊ‑ಂಪಿನ ಸುರೆಪಾನವು ನೆಗಪಿದವಗಣಿತವಾಗ20 ಉದುರು ಬಾಣ ಪುಷ್ಪಬಾಣ ಸದನದಿ ನಡೆತಂದಳಬಲೆ 21 ಹೊನ್ನಂದಣವನೆ ಇಳಿಸುವರು ಬಂದಳು ವಿವಾಹ ಮಂಟಪಕೆ 22 ಪಿಡಿದಳು ಮದನನರ್ಧಾಂಗಿ23 ಮುಕುಂದಗರ್ಪಿತವಾಗಲೆಂದು ಮಂದಾರಮಾಲೆ ಹಾಕಿದರು 24 ಪೊರೆಯಲಿ ತಂದು ನಿಲ್ಲಿಸಿದರು ಅರುಹಬೇಕೆಂದು ಕೇಳಿದರು 25 ಎನ್ನ ಪರಮ ಗುರುವೆಂದ 26 ಸಮಯವು ಲಗ್ನವೆಂದೆನುತ ಬ್ರಾಹ್ಮಣೋತ್ತಮರು ಹೇಳಿದರು 27 ಸಮಯವು ಲಗ್ನವೆಂದೆನುತ ಮೇಲೆ ಸೂಸಿದನು 28 ಶತಪತ್ರನಯನೆ ಸಮಗಾತ್ರೆ ಚಮತ್ಕಾರದಿಂದ ಸೂಸಿದಳು 29 ಸೊಡರುಗಳನೆ ಹಚ್ಚುವರು ಪಿಡಿದರು ಇತ್ತಂಡದಲ್ಲಿ 30 ಮುತ್ತೈದೆಯರೆಲ್ಲ ಅಲಂಕರದಿ ವಿಷಯೆ ಸಂಭ್ರಮದಿ 31 ಕೈಯಿಂದ ತೋರುವರು ಸುತ್ತ ನಕ್ಷತ್ರದ ಮಧ್ಯದಿ ಕಂಡಳು ಪ್ರತ್ಯಕ್ಷದಿಂದರುಂಧತಿಯ 32 ದಿನಕರ ಪ್ರತಿಬಿಂಬದಂತೆ ಅನುಕೂಲಗಳನೆ ಮಾಡಿದರು 33 ಮಾಡಿದನು ಶ್ರೀಪತಿಯ ಆಜ್ಯತಂಡುಲ ಆಪೋಶನೆ ಮಾಡಿದ ನಿರ್ಜರಪತಿ ಮೆಚ್ಚುವಂತೆ34 ಎಡೆಮಾಡಿ ಚಪ್ಪರದೊಳಗೆ ಭೋಜನಕೆ ಕುಳ್ಳಿರಿಸಿ 35 ಉಪ್ಪಿನೆÀಸರುಕಾಯಿ ಪರಿಪರಿ ಶಾಕವು ಹಪ್ಪಳ ಬಾಳಕಗಳನು ಅಪ್ಪಲು ಅತಿರಸ ಸೂಪಾಕ್ಷತಶಾಲ್ಯನ್ನ ಚಪ್ಪರದಲಿ ಬಡಿಸುವರು 36 ಕಾಮಿನಿಯರು ಕನಕದ ಹರಿವಾಣದಿ ಶಾವಿಗೆ ಪರಮಾನ್ನಘೃತವ ಭೂಮಕ್ಕೆ ಬಡಿಸಿದರಾಗ 37 ರಾಜೀವ ಮುಖಿ ತನ್ನ ಪತಿಗೆ ಮ- ಹಾಜನರೆಲ್ಲ ಉಂಡು ಕೈತೊಳೆದರು ಹೂಜಿಯಲ್ಲುದಕವ ಪಿಡಿದು38 ಸಂಭ್ರಮದಿಂದ ಸೂಸಿದರು39 ವಾಸುದೇವ ಕೃಷ್ಣ ಎನುತ ಮದನ ವಿಲಾಸದಿಂದಲಿ ನಿದ್ರೆಗೈದ 40
--------------
ಹೆಳವನಕಟ್ಟೆ ಗಿರಿಯಮ್ಮ
ನಿನ್ನ ಮರೆದಿಹ ಜನಕೆ ಮಂಗಳವು ಎಂತೋ ಪ ಶರಧಿ ಗೋಪಾಲ ಚಿನ್ಮಯನೆ ಅ.ಪ ಎದೆ ಭುಗಿಲು ಎನ್ನುವುದು ಮದದ ಮನುಜರ ನೋಡಿ ವಿಧಿ ಬರಹ ತಿಳಿಯದೆ ಸರ್ವಜ್ಞರಂತೆ ಮದ ಮತ್ಸರದಿಂದ ಆಯುವ ಕಳೆಯುತ ಮೋದ ಪದವಿ ಬಯಸುವ ಮನುಜ ಪಶುರಾಸಿ ನೋಡಯ್ಯ 1 ತನ್ನಾದಿ ಕೊನೆಗಾಣ ಘನ್ನ ಮೋಹದಿ ಮೆರೆವ ಭಿನ್ನ ಸುಖಮೂಲನ್ನ ಸ್ವಪ್ನದಲಿ ಅರಿಯ ತನ್ನ ವಶಮೀರಿ ಬಹು ಸುಪ್ತಿಯಲಿ ಪೊಂದುವ ಇನ್ನು ಮರಿಯನು ಮನುಜ ತನ್ನ ಸ್ವಾತಂತ್ರ್ಯವ 2 ನಿರುತ ಮೃತ್ಯೋವದನ ಸ್ಥಿತನಾಗಿ ಭೋಗಗಳ ಪರಿಪರಿ ಹಾರೈಪÀ ಸತತ ಬಿಡದೆ ಬರದು ಬಯಸಿದ ಸುಖವು ಒತ್ತಿ ಬರುವುದು ದುಃಖ ಮರತು ಈ ಪರಿಸ್ಥಿತಿಯ ಕರ್ತ ನಾನೆಂಬುವನು 3 ಅಜ್ಞಾನ ತಿಮಿರದಲಿ ಪ್ರಾಜ್ಞ ತಾನೆಂಬುವನು ಪಥ ಸುದ್ದಿ ಸ್ವಪ್ನದಲಿ ಅರಿಯ ಜಿಜ್ಞಾಸೆಗ್ಹೊತ್ತಿಲ್ಲ ಭವಪ್ರವಹ ಪೊಂದಿಹನು ಪ್ರಜ್ಞೆ ಇಲ್ಲದ ಪ್ರಾಜ್ಞಗೆಂತಹುದೊ ಶುಭಪ್ರಾಪ್ತಿ 4 ರೋಗರುಜಿನದಿ ಜೀವವಾಗರವೆ ವಿರೂಪಹುದು ಬಾಗನೊ ಭಗವಂತಗಂಜಿ ಮೂಢ ಯೋಗೀಶರೊಂದ್ಯ ಶ್ರೀ ಜಯೇಶವಿಠಲ ಹ್ಯಾಗಪ್ಪ ಈ ಜನಕೆ ಕಲ್ಯಾಣಸಂಪದವು 5
--------------
ಜಯೇಶವಿಠಲ
ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಪ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಭಂಗ ಕೇಳಿ ಎಚ್ಚರಿಯದಲೆ1 ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ2 ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು3 ಅನ್ನವಿತ್ತವನ ಪಾಪಗಳು ನಿರಂತರದಿ ಅನ್ನದಾಶ್ರಯ ಮಾಡಿಕೊಂಡಿಪ್ಪವು ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ ಧನ್ಯನಾದೆನು ನಾನು ಪರರ ಪಾಪವ ಭುಜಿಸಿ 4 ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ ಉಬ್ಬುವೆನು ಊರು ಕೇರಿ ಹಿಡಿಸದಂತೆ ಸುಬ್ಬನ ಸೂರೆಯಂತೆ ಪರರ ಅನ್ನವನುಂಡು ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ 5 ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ ಕಡೆಗೆ ಪೋಗುವುದೊಂದು ನಿಲುವುದೊಂದು ತಡೆಯದಲೆ ಸಂತಾನ ಪಡೆವುದೊಂದೀತೆರ ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ6 ಆವಾವ ಬಗೆರುಚಿ ಜಿಹ್ವಗೆ ತೋರುತಿದೆ ಆವಾವ ಬಗೆ ನರಕ ಬೇರೆಯುಂಟು ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ ಈ ಜೀವ ಹಿತವಾಗುವಂತೆ ಮಾರ್ಗವ ತೋರು 7
--------------
ವಿಜಯದಾಸ
ನಿನ್ನವಳ ಬಗೆಯ ಪೇಳುವೆನು ಕೇಳೋಮನ್ನಿಸೋ ಮಾನಿನೀಮಣಿಯನು ಕೃಪಾಳೋ ಪ ಕನ್ನಡಿಯ ನೋಡಿದಳೋ ಕರುಳ ನೇವರಿಸಿದಳೋಚಿನ್ನದುಂಗುರವ ಬೆರಳೊಳಗಿಟ್ಟಳೋಕಣ್ಣಕಪ್ಪಿಟ್ಟು ತಿಲಕವ ತಿದ್ದಿಕೊಂಡಳೋರನ್ನದೊಡವುಗಳ ಸಖಿಯರಿಗೆ ಕರದಿತ್ತಳೋ 1 ಜಾತಿಮುತ್ತಿನ ಸರವ ಹಾಕಿಕೊಂಡಳೋ ಕೊರಳ್ಗೆಜಾತಿಮಲ್ಲಿಗೆಯ ಮಾಲೆಯ ಮುಡಿದಳೋಪ್ರೀತಿಯಿಂ ಸಾಕಿದ ಗಿಣಿಯ ತರಿಸಿ ನೋಡಿದಳೋನೂತನದ ಚಂಗಾವಿ ಸೀರೆಯನೆ ನೆರಿದುಟ್ಟಳೋ 2 ಚಿತ್ತಾರದ ಪಟದಲ್ಲಿ ನಿನ್ನ ರೂಪನೆ ಬರೆದುಅರ್ತಿಯಿಂ ಕೈಮುಗಿದು ನೋಡುತಿಹಳೋಹೊತ್ತುಗಳೆವುದಕೆ ಹರಣಲ್ಲಿ ಬಂದುನೆರದುಳುಹೊಚಿತ್ತಜನಮದಭಂಗ ಕೆಳದಿ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ನಿಮ್ಮ ನುಡಿಗಳ ಕೇಳಲೆನಗೆ ಹೊತ್ತೆಲ್ಲಿಯದುನಮ್ಮ ಗೃಹಕೃತ್ಯಗಳು ಬಹಳವಾಗಿಹವೊ ಪನಮ್ಮಯ್ಯನೊಂದು ಗ್ರಾಮವನೇಕಸ್ವಾಮ್ಯದಲಿತಮ್ಮ ದಂಪತಿಗಳುಪಭೋಗಕೆಂದುತಮ್ಮಲ್ಲಿ ತಾವೆ ಸಂವಾದಿಸಿದರವರಲ್ಲಿಹಮ್ಮು ಕಡೆಯಾದ ಹದಿಮೂವರುದಿಸಿದರೂ 1 ಕ್ಲೇಶ ಬಡಿಸುವರು 2ಸ್ತ್ರೀ ಕಾಮನೆ ರಾಗ ಪ್ರತಿಕೂಲದಿಂ ದ್ವೇಷ ಬೇಕೆಂಬದನೆಕಾದುನುಳಿಯೆ ಕ್ರೋಧಾಆಕ್ರಮಿಸಿ ಸಕಲವನು ಬಚ್ಚಿಡುವನವ ಲೋಭಸಾಕು ಗುರುಹಿರಿಯರೆಂಬವರರಿಯೆ ಮೋಹಾ 3ನಿತ್ಯವಲ್ಲದ ಸಿರಿಯ ನಂಬಿ ಬೆರೆತಿಹಮದನುಉತ್ತಮರ ಕೂಡೆ ಸೆಣೆಸುವನು ಮತ್ಸರನುಮತ್ತೆ ಈಷ್ರ್ಯನು ದುಃಖನನ್ಯರಿಗೆ ಬಗೆಯುತಿಹವ್ಯರ್ಥದಿಂ ಬಸವಳಿಯುತಿಹನಸೂಯಕನು 4ದಂಭವನೆಂಬವನಲ್ಲಿ ಪುರುಷಾರ್ಥವಿಸಿಕಿಲ್ಲಹಂಬಲಿಸುತಿಹ ದರ್ಪಕೊಬ್ಬಿ ಬರಿದೆಉಂಬರೊಬ್ಬರಿಗಿಲ್ಲ ಸಕಲವೂ ನನಗೆಂದುದೊಂಬಿಯಲಿ ನಾ ಸಿಕ್ಕಿ ಬಳಲುತಿಹೆನಾಗಿ 5ವೃತ್ತಿಯೆರಡದರಲ್ಲಿ ಫಲವೆರಡು ಜನ್ಮಕ್ಕೆಬಿತ್ತಿ ಬೆಳೆವರೆ ಚೌಳು ಜಲವ ಕಾಣೆಒತ್ತರಿಸಿ ಬರುತಿರುವ ಜ್ಞಾತಿಗಳ ಬೆಂಕಿಯಲಿಹೊತ್ತು ಹೊತ್ತಿಗೆ ಬರಿದೆ ದಹಿಸುತಿಹೆನಾಗೀ 6ಬರಿಯ ಭ್ರಾಂತಿನ ಬಲೆಯ ಬೀಸಿ ನೋಡುತ್ತಿರುವತಿರುಪತಿಯ ವೆಂಕಟನ ಚರಣಗಳನುಕರಗಳಲಿ ಬಿಗಿಯಪ್ಪಿ ಶಿರವೆರಗಿ ಗುರುಮುಖದಿಅರುಪಿದುದ ನಿಲಿಸೆಂದು ಬೇಡಿಕೊಳುತಿಹೆನು 7ಕಂ||ತನುವಿನೊಳಭಿಮಾನವಿರಲೀಘನತರ ಸಂಸಾರ ದುಃಖ ತೊಲಗದು ಸತ್ಯತನು ನಿತ್ಯತೆದೋರ್ದಕಾರಣಮನದೊಡನಿಂತೆಂದು ಜೀವನನು ವಾದಿಸಿದಂ
--------------
ತಿಮ್ಮಪ್ಪದಾಸರು
ನೀ ಪಾಲಿಸದಿರಲು ನಾ ಪೋಗುವುದು ಎತ್ತ ನೀ ಪೇಳೊ ಪರಮ ಪುರುಷಾ ಅಗಣಿತ ನಾಮ ಸುರ ಪ್ರೇಮ ಸ್ವರ್ಣ ಗಿರಿವಾಸ ನರಕೇಶ ಭೂಷಾ ಪ ಉದರ ಚಿಂತಿಯಲಿ ಉದಯದಲಿ ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ ಮೃದು ವಾಕ್ಯವಾಡದಲೆ ಮದ ಗರ್ವ ಬಲದಿಂದ ಎದುರಾದವರ ಜರಿದೆ ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ ವಿದಿತ ಕರ್ಮಗಳ ತೊರೆದೆ ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ ಬಿದ್ದು ಸಂಪದವಿಗೆ ದೂರದವನಾ1 ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ ಹೆತ್ತವರನ್ನ ಜರಿದೆ ಹತ್ತೆಗರೆದು ಪರಿಪಾಲಿಸಿದ ದಾತರನು ಹೊತ್ತಾಕೆ ಪ್ರೀತಿ ಪೇಳುವೆ ಮತ್ತೆ ಧರ್ಮವೆಯಿಲ್ಲಾ ಮಹಾಕೃಪಣನಾಗಿ ಪರ ವಿತ್ತಾಶೆ ಪೋಗಿ ಮುಳವೆ ಚಿತ್ತಪಲ್ಲಟವಾಗಿ ವಿಷವೆಂಬ ಹಾವಿನ ಹುತ್ತಿನೊಳು ಬಿದ್ದು ಪುನಿತನಾಗದವನಾ 2 ಗುರು ನಿಂದಕರ ನೋಡಿ ಸರವಾಗಿ ಪೋಗಳುವೆನೊ ವೇದ ಸಮ್ಮತವೆ ಬಿಟ್ಟು ಮರೆವೆ ನಿನ್ನಯ ಸ್ಮರಣೆ ಗತಿಗೆ ಸಾಧನವೆಂದು ಅರಿದರಿದು ಬುದ್ಧಿಗೆಟ್ಟು ಹರಿವಾಸರದುಪವಾಸ ಮಾಡುವ ಜನರಿಗೆ ಮುರಳಾಡಿ ಮುಟ್ಟಿಯಲಿಟ್ಟು ಜಾಗರ ತೊರೆದು ಹಿರಿ ಪಾಮರನಾಗಿ ಹರಣ ಸ್ಥಿರವೆಂದು ಮದುಕರಿಯಂತೆ ತಿರುಗುವೆ ನಾ3 ಕಾಸಿಗೆ ಕಾಸು ಘರ್ತಿಸಿ ಗಳಿಸಿ ಬಿಡದೆ ಮೀಸಲಾ ಪದಾರ್ಥವೆಂಬೆ ದೋಷಕ್ಕೆ ಗುರಿಯಾಗಿ ದುರ್ಜನರ ಒಡಗೂಡಿ ರಾಸಿ ದುರನ್ನ ಉಂಬೆ ಆಶೆಯನು ತೊರಿಯದಲೆ ಉಪರಾಗ ಪರ್ವದಲಿ ಕಾಸು ದಾನವನು ಕೊಂಬೆ ಲೇಸಾದರೆ ಹಿಗ್ಗಿ ಹಾರೈಸುವೆನು ಇಷ್ಟು ಕ್ಲೇಶ ಬಂದರೆ ದೈವವೆಂದು ದೂಷಿಸುವೆನಾ4 ಒಂದೇ ಎರಡೇ ಎನ್ನ ಅಪರಾಧ ಪೇಳಿದರೆ ಎಂದೆಗೆಂದಿಗೆ ಸವಿಯದು ನೊಂದು ದುಶ್ಚಿತ್ತದಲಿ ನೀನೆ ಗತಿ ಎಂದು ಬಾಗಿಲ ಕಾಯಿದುದು ಬಂದು ಮಾತುರದಲ್ಲಿ ಬಲು ದಯಾಳು ಎನ್ನ ಸಂದೇಹವನು ತೊಡೆದು ಮುಂದಾದರೂ ಭವದ ಅಂಧ ಕೂಪದೊಳಿಡದೆ ಪೊಂದಿಸುವ ನಿನ್ನವರೊಳಗೆ ವಿಜಯವಿಠ್ಠಲ ಎನಗೆ 5
--------------
ವಿಜಯದಾಸ
ನೀ ಮುನಿದು ಇಳೆಯೊಳಗೇ| ಸುರಮುನಿ ಜನಪಾಲನ ಮನದಲಿ ಬಂದದಿ ನೆರೆಯದೇ ಸಾರುವದೀಗ ಪ ನಿನ್ನಯ ಒಪ್ಪುವ ಮಾರ್ಗವ ನೋಡುತ| ಮುಚ್ಚನು ಕುಡಿಗಂಗಳ ಯವಿಯಾ| ಪನ್ನಗವೇಣೀ ನಿನ್ನವಿಯೋಗ ದುಗುಡದೀ| ಕುಳಿತನುಡಗಿ ಅವಯವ ಸೋಹ್ಯಾ 1 ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ ಹಿಂದಕ ಕಾಲೆಳೆದಾ| ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ ಜ್ವಾಲಾಂಗನು ಆದಾ 2 ಕಪಟದಿ ಬಂದು ನೋಡುವೆ ನಿನ್ನೆನುತಲಿ ಯಾಚಕ ರೂಪತಾಳಿದನು| ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ ತೊರೆಂದೆ ಚಂದನು ಶರಧಿಯನು3 ದಿನದೊಳಗರಗಳಗಿ ಗಮಿಸದು ಯನುತಲಿ ವನದೋಳು ಪೋಗಿ ಹೊತ್ತುಗಳೆವಾ|ಮನಿ ಮನಿ ಪೊಕ್ಕು ಗೋಕುಲದಲಿ ನಿನ್ನನು ಅರಸುತಿಹನು ಪಾವನ ದೇವಾ4 ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ ಕೋಪದಿ ಕಂಡ ವೃತವಳದಾ| ಅತಿತವನೋಡದೇ ತಾನಾಗಿ ಬಂದನು ಹಯವೇ ನೋಡೆ ಜೀವನ ಜಗದಾ 5 ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ ಹಾಸ್ಯದ ಮುಖವನು| ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು ಮಹಿಪತಿ ಸುತ ಪ್ರಭುವಿನ ದಯದೀ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನಿಲ್ಲದ ಜಗವಿನಿತಿಲ್ಲ ನೀನಲ್ಲದೆ ಎನಗಾರಿಲ್ಲ ಪ ನೀನೆ ನೀನೆಯಾಗಿ ಕಾಣಿಸಿ ಜಗ ಮಾಯಮಾಣಿಸುವಿ ನಿಜ ಸುಳ್ಳಲ್ಲ ಅ.ಪ ಹೊತ್ತುಗೊತ್ತು ಎಲ್ಲ ನಿನ್ನಿಂದೇ ನಿತ್ಯ ಅನಿತ್ಯವೆಲ್ಲ ನಿನ್ನಿಂದೇ ಸತುಚಿತುಚಿದ್ವಸ್ತು ತತ್ವಸರ್ವತ್ರಸೂತ್ರವೆಲ್ಲ ನಿನ್ನಿಂದೇ 1 ಸೃಷ್ಟಿ ಕ್ಷೇತ್ರ ತೀರ್ಥ ನಿನ್ನಿಂದೇ ಅಷ್ಟಸ ಭುವಗಳ್ನಿನ್ನಿಂದೇ ಹುಟ್ಟುಸಾವು ಎಲ್ಲ ಸ್ಪಷ್ಟದಿ ನೋಡಲು ಸೃಷ್ಟಿ ಪ್ರಳಯವಷ್ಟು ನಿನ್ನಿಂದೇ 2 ನಿಖಿಲ ವೇದ ನಿನ್ನಿಂದೇ ಅಖಿಲದೇವರೆಲ್ಲ ನಿನ್ನಿಂದೇ ಸಕಲಮಂತ್ರಮೂಲ ಭಕುತಾಭಿ ಶ್ರೀರಾಮ ಮುಕುತಿಸಂಪದ ಸಿದ್ಧಿ ನಿನ್ನಿಂದೇ 3
--------------
ರಾಮದಾಸರು
ನೀನೆ ಗತಿಯು ಎನಗೆ ಎನ್ನಯ್ಯ ಶ್ರೀ ಪನ್ನಂಗಶಯನ ಕಾಯೋ ಪ ಹೀನ ಸಂಸಾರದೊಳು ಇನ್ನೆಲ್ಲಿತನಕ ನಾ ಬನ್ನಬಡಬೇಕಯ್ಯ ಜಾಹ್ನವೀಜನಕ ಅ.ಪ ಸನುಮತಿವಿನಿತಿಲ್ಲದೆ ಮನಸಿನೊಳು ಘನತರ ಭ್ರಮಿಪೆ ಬರಿದೇ ಶುನಕನ ಕನಸಿದು ಅನಿತ್ಯ ಜಗತ್ಸುಖ ಎನಗ್ಯಾಕೆ ಒಣಭ್ರಾಂತಿಯನು ತೋರ್ವೆ ಶ್ರೀಕಾಂತ 1 ಘಳಿಗೆಸಂತಸವಿಲ್ಲದೆ ಬಳಲುವೆ ಬಲು ಇಳೆ ಸುಖದಿ ಮನ ನಿಲ್ಲಿಸಿ ಘಳಿಗೆ ಮೊಕ್ಕಾಮಿಗಾಗಿ ಕಳವಳಸೀಪರಿ ಬಳಲುವೆನ್ಯಾಕೊ ತಿಳಿಯದಿದು ನಳಿನಾಕ್ಷ 2 ಎತ್ತ ನೋಡಲು ನೀನಿರ್ದು ಮಿಥ್ಯಜಗತ್ತಿನೋಳ್ ವ್ಯರ್ಥ ಬಳಲಿಪರೆ ಎನ್ನ ಭಕ್ತವತ್ಸಲನೆಂಬ ಹೊತ್ತಿರುವಿ ಬಿರುದುಗಳ್ ಚಿತ್ತಕ್ಕೆ ಸತ್ಸುಖವಿತ್ತು ಪೊರೆ ಶ್ರೀರಾಮ 3
--------------
ರಾಮದಾಸರು
ನೆನೆಯೋ ನೆನೆಯೋ ನೆನೆಯೋ ಮನವೆ ಘನಕರ್ಮಗಳನು ಕಳೆದು ಕಾಯುವ ಪ ನೆನೆವ ಜನರ ಕನಕಾಭರಣನ ಅ.ಪ ಹೊತ್ತು ಯಾಕೋ ಗೊತ್ತು ಯಾಕೋ ನಿತ್ಯ ನೇಮವೆಂದು ಹೊತ್ತು ಗಳೆಯದೆ ನಿತ್ಯ ನಿರ್ಮಲಚಿತ್ತದ ಹರಿಪಾದ1 ಧೂಪವ್ಯಾಕೋ ದೀಪವ್ಯಾಕೋ ಪಾಪಿನಾನೆಂದಾಲಿಸದೆ ತ್ವರ ಪಾದ 2 ಯಾಗ ಯಾಕೋ ಯಜ್ಞ ಯಾಕೋ ನೀಗಿ ಮನದಲಿ ಭೋಗದಾಸೆಯ ಭೋಗಿಶಾಯಿ ಶ್ರೀರಾಮ ಪಾದವ 3
--------------
ರಾಮದಾಸರು
ನೆರೆದು ಗೋಪಿಯರೆಲ್ಲರು - ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಪ ಬಲು ಕಳ್ಳ ನಿನ್ನ ಮಗ - ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ 1 ಅಮ್ಮಯ್ಯ ಇಲ್ಲ ಕಾಣೆ - ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ2 ಮತ್ತೆ ಮುತ್ತಿನಂಥ - ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ 3 ಗಡಿಗೆ ಬೆಣ್ಣೆ ಮೆಲ್ಲಲು - ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು 4 ಮರೆತು ಮಂಚದ ಮೇಲೆ - ನಾ ಮಲಗಿರಲುಹರಿವ ಹಾವನೆ ತಂದುಅರಿಯದಂತೆ ಬಂದು ಮುಸುಕಿನೊಳಗಿಟ್ಟುಸರಸರ ಪೋದನಮ್ಮ 5 ಹರಿದಾಡುವ ಹಾವನು - ನಾ ಹಿಡಿಯಲುತರಳ ನಾ ತಡೆಗಾರನೆಹರಕೆಯ ಹೊತ್ತುದನೊಪ್ಪಿಸದಿರಲುಗುರುತು ತೋರಲು ಬಂತೇನೊ6 ಕಕ್ಕಸ ಕುಚಗಳಮುಸುಕಿನೊಳಗೆ ಹಿಡಿದ 7 ಕೇಳು ಕೇಳೆಲೆ ಅವ್ವ - ಇವಳು ಬೇ-ತಾಳನಂತಿರುವಳುಬಾಲಕ ನಾನವಳುದ್ದಕೆ ನೆಗೆವೆನೆಜೋಲುವ ತೊಗಲಿಗಾಗಿ 8 ಮಕ್ಕಳು ಪಡೆದವರು - ಇಲ್ಲದ ಕಳವಿಕ್ಕಬಹುದೆ ಕೃಷ್ಣಗೆಸಿಕ್ಕ ತಪ್ಪು ಸಮೇತ ಎಳೆತಂದರೆತಕ್ಕ ಬುದ್ಧಿಯ ಹೇಳುವೆ 9 ಅಣುಘನರೂಪ ಕಾಣೆ - ನಿನ್ನೀ ಮಗಚಿನುಮಯ ರೂಪ ಕಾಣೆಘನ ಮಹಿಮನು - ಇಂಗಳಗೊಂದಿಯಚೆನ್ನಕೇಶವರಾಯ ಕಾಣೆ 10
--------------
ಕನಕದಾಸ
ನೋಡಿದ್ಯಾ ಶ್ರೀದೇವಿಯರ ನೋಡಿದ್ಯಾನೋಡಿದ್ಯಾ ರುಕ್ಮಿಣಿ ಮಾಡಿದಾಟ್ಟವಳಿಯಗಾಡಿಗಾರಳೆಂದು ಆಡೋರು ಭಾವೆಯ ಪ. ಇಂತು ರುಕ್ಮಿಣಿ ಮ್ಯಾಲೆ ಪಂಥವೆ ಬಗೆದಿರಲಿನಿಂತು ಸುಭದ್ರಾ ಶಪಥದನಿಂತು ಸುಭದ್ರಾ ಶಪಥದ ವಾಗ್ಬಾಣಕಾಂತೆಯ ಎದೆಗೆ ಒಗೆದಾಳು 1 ತಾಯಿ ಮನೆಗೆ ಬಂದು ಬಹಳ ಹೊತ್ತಾಯಿತುತಾಯಿಯ ಸೊಸೆಯರು ಬರಲಿಲ್ಲತಾಯಿಯ ಸೊಸೆಯರು ಬರಲಿಲ್ಲ ನಮಗಂಜಿಬಾಯಿ ಬಿಡುತಾರೆ ಒಳಗಿನ್ನು2 ಅಣ್ಣನ ಮನೆಗೆ ಬಂದು ಸಣ್ಣ ಹೊತ್ತಾಯಿತುಅಣ್ಣನ ಮಡದಿ ಬರಲಿಲ್ಲ ಅಣ್ಣನ ಮಡದಿ ಬರಲಿಲ್ಲ ರುಕ್ಮಿಣಿಇನ್ನು ಬಾ ಅಭಯ ಕೊಡತೇವ3 ಅತ್ತಿಗೆ ಮನೆಗೆ ಬಂದು ಹತ್ತು ಫಳಿಗ್ಯಾದೀತುಎತ್ತ ಓಡಿದಳೆ ನಮಗಂಜಿಎತ್ತ ಓಡಿದಳೆ ನಮಗಂಜಿ ಸತ್ಯಭಾಮೆಇತ್ತ ಬಾ ಅಭಯ ಕೊಡತೇವ4 ನಳಿನ ಮುಖಿಯರ ವಾರ್ತೆ ತಿಳಿದು ರುಕ್ಮಿಣಿದೇವಿಇಳಿದಾಳು ಬ್ಯಾಗ ಸೇಳೆ ಮಂಚ ಇಳಿದಾಳು ಬ್ಯಾಗ ಸೇಳೆ ಮಂಚ ರಮಿಯರಸುಎಳೆದ ಮುಂಜೆರಗು ವಿನಯದ 5
--------------
ಗಲಗಲಿಅವ್ವನವರು
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು