ಒಟ್ಟು 269 ಕಡೆಗಳಲ್ಲಿ , 62 ದಾಸರು , 261 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಂಡನಾದೆನು ನಾನು ಭಂಡ ಮನುಜಾ ಕಂಡವರಲ್ಲಿಯುಂಡು ಎಂಜಲವನು ಪ ಪುಂಡರೀಕಾಕ್ಷ ಶ್ರೀ ಕೃಷ್ಣಗರ್ಪಿಸದೆಡೆ- ಯುಂಡರದು ಬುಧರರಿವರೆಂಜಲಂದು ತುಂಡ ಜನರಿಂಧನ್ನ ಮುದ್ದು ಮೆರೆದರು ಕೊಬ್ಬಿ ಕಂಡಿವರೊಳಾದರದಿ ಸವಿಯಗೊಂಡನು ದೇವಾ 1 ಲಿಂಗಭವನೈಯ್ಯ ನಿನ್ನೊಲಿಮೆ ಮರೆಯನು ನಾನು ಮಂಗಳಾಂಗಿಯ ಮೊರೆ ಕೇಳ್ದು ಭರದಿ ಭಂಗ ಬಹುದೆಂದು ಕಾನನದಿ ಎಂಜಲನುಂಡು ಅಂಗರಕ್ಷಕನಾಗಿ ಪಾಂಡವರ ಪೊರೆದಿ ಧೊರಿಯೆ 2 ಸರಸಿಜಾಕ್ಷನೆ ನಿನ್ನ ಕರುಣಪಾತ್ರನು ನಾನು ಅರಿಯದುಡಿದನು ತೀಕ್ಷಮಿಪುದೀಗ (?) ಸುರನಿರಲಿ ನರನಿರಲಿ ಪತಿತನಾದವನಿರಲಿ ಸರಿಯಾಗಿ ಕರುಣಿಸುವಿ ನರಸಿಂಹವಿಠಲ 3
--------------
ನರಸಿಂಹವಿಠಲರು
ಪುರಂದರ ಗುರುರಾಯಾ ಸತ್ಪ್ಪುಣ್ಯ ಕಾಯಾ ಪ ನಿರುತ ನಿನ್ನ ಚರಣ ಸೇವೆ ಕರುಣ ಮಾಳ್ಪದೋ ಜೀಯಾಅ.ಪ. ಬಹು ಜನ್ಮಗಳಲ್ಲಿ ನಾನು ಮಹ ಪುಣ್ಯ ಮಾಡಿದವರ ಸಹವಾಸದಲಿದ್ದು ಗ್ರಹದ ಮುಂದೆ ಗ್ರಹದಿಂದೆನಗೆ ಮಹಿಸುರ ಜನ್ನವಿತ್ತೆ 1 ಶ್ವಾನ ಸೂಕರನೊ ನಾನದನು ಕಾಣೆನೊ ಮತ್ತಾವನೊ ನಾನಾ ಜೀವನೊ ಆನು ಒಂದು ತಿಳಿಯೆ ಗುರುವೆ ನೀನೆ ಬಲ್ಲಿ ಎನಗೆ ಬಂದ ಅನಾದಿ ಶರೀರವ ಅಜ್ಞಾನವನ್ನೇ ತೆಜಿಸುವುದು2 ಯಾಚನೆ ದೇಹದಲ್ಲಿ ಊಚು ಭಾಗ್ಯವ ಜಯಸದಿಪ್ಪ ಯೋಚನೆಯಿಂದಲಿ ಕಮಲಲೋಚನ ನಿನ್ನಂಘ್ರಿಯಾ ಕರವ ಬಾಚೆನೊ ಹೀನರಿಗೆ ನಿನ್ನ ಪಾಚಕರ ಮನೆಯ ಪರಿಚಾರ ಸಿದ್ಧÀ್ದವಾಗಲಿ 3 ಹಿಂದೆ ಏನು ಪ್ರೇರಿಸಿದಿಯೊ ನಂದವ ನಾನರಿಯೆನೊ ತಂದೆ ತಾಯಿ ನೀನೆ ಎಂದು ಪೊರದಿ ಸಂದೇಹವಿಲ್ಲ ಯೆಂದು ಪೊರೆದದ್ದು ನಿನ ಕರುಣವಲ್ಲವೆ ಮತ್ತೆ ಭಾರವು ನಿನದೆಂದು ನಾ ಪ್ರಾರ್ಥಿಸುವೆ 4 ತಿರುಗುವುದು ಕುಳ್ಳಿರುವುದು ಬರುವುದು ಮತ್ತೇಳುವದು ಮರಳೆ ಮಾತನಾಡುವುದು ವಾಸರದಲ್ಲಿ ಬಿಡದೆ ಸಿರಿ ವಿಜಯವಿಠ್ಠಲನ್ನ ಕರದೊಳಿಪ್ಪಂತೆ ಮಾಳ್ಪದೊ ಜೀಯಾ 5
--------------
ವಿಜಯದಾಸ
ಪ್ರಾಣ ಬಿಟ್ಟು ನಾನಿರಲಾರೆ ಪ ನಿನ್ನ ಪಿಡಿದು ರಘು ರನ್ನದಶಾಸ್ಯ- ನನ್ನೆ ಸವಿದು ದಾನವ ಕುಲಬೇರಾ- ವನ್ನೆ ಕಿತ್ತಿ ಜಾನಕಿಯನೆ ತಂದಾ ನಿನ್ನುಳಿದಿನ್ನುಂಟೆ ಮನ್ನಿಸಿ ಕೇಳ್ವರು ಕುನ್ನಿಯ ಮಾನವರೇನು ಬಲ್ಲರು 1 ವಿಕ್ರಮ ಭೀಮನೆನಿಸಿ ದ್ವಾಪರದಿ ದುರುಳ ಮಲ್ಲರ ಭೂ- ಚಕ್ರಕಪ್ಪಳಿಸಿ ಬಕನನ್ನೇಕ- ಚಕ್ರಾಖ್ಯನಗರದಿ ಹಿಂಡಿ ಬಿಸÀುಟೆ ಕುರು- ಚಕ್ರವರ್ತಿಯ ಕುಲವಳಿದೀ 2 ಶ್ರೀಶಾನುಜ್ಞದಿ ಧರೆಯೋಳವತರಿಸಿ ಈಶಮಧ್ವನೆಂಬಭಿದಾನವ ವಹಿಸಿ ದೋಷೆನಿತಿಲ್ಲದ ಮತವನೆ ಸೃಜಿಸಿ ಈಶ ನಿನ್ನಾಣೆ ಜಗದುದ್ಧಾರ ಮಾಡಿದಿ ದಾಸನಹುದೋ ನೀ ನರಸಿಂಹವಿಠಲನ 3
--------------
ನರಸಿಂಹವಿಠಲರು
ಪ್ರೀತಿಯ ಮಾಡನೀತಿಯ ಶುಕವಾಣಿ ಪ್ರೀತಿಯ ಮಾಡ ಚಾತುರ್ಯದಲಿಮುದ್ದು ಮಾತಿನ ಮಾಧುರಿ ಪ್ರೀತಿಯ ಮಾಡು ಪ. ದೇವಿ ರುಕ್ಮಿಣಿ ನಮ್ಮಮ್ಮ ದೇವಕಿ ಸರಿಯಮ್ಮನಾಕುಂದು ನಿನ್ನ ನುಡಿದೆನನಾಕುಂದು ನಿನ್ನ ನುಡಿದ ಅಪರಾಧವ ಭಾವದೊಳಿಡದೆ ಕರುಣಿಸು ಪ್ರೀತಿಯಮಾಡು1 ಅತ್ತಿಗೆ ನೀನಮ್ಮ ಹೆತ್ತತಾಯಿ ಸರಿಯಮ್ಮಅತ್ಯಂತ ನಿನಗೆ ನುಡಿದೆವ ಅತ್ಯಂತ ನಿನಗೆ ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು ಪ್ರೀತಿಯಮಾಡು2 ವಿಗಡ ಬುದ್ಧಿಯಿಂದ ನುಡಿದೆವವಿಗಡ ಬುದ್ಧಿಯಿಂದ ನುಡಿದೆವ ಅತ್ತಿಗೆ ನಿನ್ನಮಗಳು ಜಾನ್ಹವಿಯ ಸರಿಯಮ್ಮ ಪ್ರೀತಿಯ ಮಾಡು3 ಸತ್ಯಭಾವೆ ನಮ್ಮ ಅತಿ ವಿನೋದವಮತ್ತೊಂದು ನೀನು ತಿಳಿಯದೆ ಮತ್ತೊಂದು ನೀನು ತಿಳಿಯದೆ ಅತ್ಯಂತ ಎನಮ್ಯಾಲೆ ಕರುಣವ ಇರಲೆಮ್ಮ ಪ್ರೀತಿಯ ಮಾಡು4 ಸರಸಿಜಮುಖಿ ನಮ್ಮ ಹರುಷ ವಿನೋದವ ವಿರಸ ಮಾಡದಲೆಮನದೊಳು ವಿರಸ ಮಾಡದಲೆ ಮನದೊಳು ರಾಮೇಶನ ಅರಸಿ ನೀನಮಗೆ ದಯಮಾಡು ಪ್ರೀತಿಯ ಮಾಡು5
--------------
ಗಲಗಲಿಅವ್ವನವರು
ಬಂದಿಹೆ ನಂತರಂಗದಿ ನಡಿರಕ್ಷಿಸೊ ನಡಿ ರಕ್ಷಿಸೊ ಪ ಕಚ್ಛಪ ಚಿನ್ನಲಿ ಉಚ್ಛಸೂಕರನಿಂದಾಶ್ರಿತವಾಗಿಹೆ 1 ಶಿರದೊಳು ನರಹರಿ ಧರಿಸಿ ವಾಮನ ಮುಖದಿ ಕರದಿ ಪರಶುರಾಮನ್ನಿರಿಸಿಹೇನೋ ಸ್ವಾಮಿ 2 ಬುದ್ಧ ಕಲ್ಕಿ ಸದಾ ನರಸಿಂಹವಿಠ್ಠಲ ಧ್ಯಾನದೋಳಿಹೆ3
--------------
ನರಸಿಂಹವಿಠಲರು
ಬಂದ್ಯಾ ಬಾ ಮಂದಗಾಮಿನಿ ಚಂದಿರವದನೆ ಸುಂದರವದನೆ ಬಂದ್ಯಾ ಪ ಬಂದ ಭಕ್ತವೃಂದಭೀಷ್ಟ ನೀಡ್ವೆನೆಂದು ಚಂದ ಕರಗಳಿಂದ ಶೋಭಿಸುತಾ ಬಂದ್ಯಾ 1 ಪದುಮನಿಲಯ ಪದುಮಾನನೆ ಪದುಮಾಯತಾಕ್ಷಿ ಪದುಮನಾಭನ ರಾಣಿ 2 ನರಸಿಂಹವಿಠ್ಠಲನರಸಿ ಪ್ರಸನ್ನಮುಖಿ ಇರಿಸು ಶರಣರಲ್ಲಿ ಕರುಣಾಕಟಾಕ್ಷ 3
--------------
ನರಸಿಂಹವಿಠಲರು
ಬಹಳ ದೇಹವ ದಂಡನೆ ಮಾಡಿ ದೇಹ ಘನ ಬಳಲಿಸಿ ಅಹಿಶಯನನು ನಿನ್ನ ಬೆಂಬಲನಾಗಿಹ ಚಿಂತೆ ಮಾಡಲಿ ಬ್ಯಾಡಾ ಪ ಅರಿವರ್ಗಗಳು ಕ್ರೀಡಿಸುತಿಹ ಮನದಿ ಧರ್ಮವ ಮಾಡಲಾದೀತೆ ಪಾಪಿಗೆ ಹಿತವಾದೀತೆ 1 ದುರ್ವಿಕ್ಷಯ ಭುಂಜಿಪ ದುರುಳಗೆ ಅಸಮ ಫಲಪ್ರದ ಹರಿದಿನ ಮಾಡ್ದರೆ ನರಕ ಬಾಧೆ ಬಿಟ್ಟೀತೆ 2 ಪರವಿತ್ತವಪಹರಿಸಿ ಧರೆಯ ಪ್ರದಕ್ಷಿಣೆ ಮಾಡ್ದರೆ ಗತಿಯಾದೀತೆ ನರಸಿಂಹವಿಠ್ಠಲನ ಸ್ಮರಿಪ ಸುಜ್ಞಾನಿಗಿ ಬಹುಭಾಗ್ಯ ತಪ್ಪೀತೆ 3
--------------
ನರಸಿಂಹವಿಠಲರು
ಬಾರೋ ನಲಿದಾಡೋ ಜಿಹ್ವೆಯಲಿ ಮೂರಧಿಕಾರೊಡೆಯನೆ ಬಾರೋ ನಲಿದಾಡೋ ಜಿಹ್ವೆಯಲಿ ಪ ದಾಸಾ ಬಹು ಮೋಸಕ್ಕೊಳಗಾಗಿಹೆನು ಶ್ರೀಶಾ ಕರಪಿಡಿಯೆನ್ನ ದೋಷ ಮಹದಾಶಾ ವಹಿಸಿರುವೇನು ಘಾಸಿಯಾದೇನು ಮಾಡೋ ಕರುಣಾರ್ಣವದಿ ಈಶಾ ಘನವೇಷಾ ಬಹುತೋಷ ದಾಸನ ಮಾಡಿಕೊ ಎನ್ನ 1 ಕಂದೀ ನಾ ಕುಂದೀ ಗೃಹದೊಳಗೆ ಮಂದಿಯಾ ಶೇರಿದೆ ನೊಂದೇ ಬಹು ಬೆಂದೇ ಮನದೊಳಗೆ ಬಂಧನದೊಳು ಶಿಲ್ಕಿ ಸುಂದರ ಮೂರುತಿ ಸಂದಣಿಯದೆ ನಾ ಹೊಂದಿದೆನಿನಭವ ಭವ ನಾಯಿಂದೂ ದ್ವಂದ್ವಾಪದವಿಡಿದಿದೆ 2 ಘೋರಾ ನಿಸ್ಸಾರ ಭವದೊಳಗೆ ದಾರಿಗಾಣೆನು ಮಾರಾ ಬಹುದೀ ರಾಮನದೊಳಗೆ ಶೇರಿ ಕುಣಿವಾನು ಮಾರಜನಕ ನಿನ್ ಹಾರೈಶನುದಿನ ಶೇರಿ ಭಜಿಸಿ ನಿನ್ನ ನರಸಿಂಹವಿಠ್ಠಲ ಸಾರಿ ನಿನ ಕೋರಿ ಪದಶೇರಿ ಆರಾಧಿಸುವೀಗಳೆ 3
--------------
ನರಸಿಂಹವಿಠಲರು
ಬಾರೋ ಹೃದಯ ಸದನಾ ಮುಖ್ಯ ಪ್ರಾಣ ಪ ಬಾರೋ ಹೃದಯದೊಳು ವಾರಿಜಾಸನ ಪದಏರುವಾತನೆ ದಿವ್ಯ ಕಾರುಣ್ಯ ಸಾಗರ ಅ.ಪ. ಹರಿಭಕ್ತರೊಳು ನೀನು ಹಿರಿಯನೆಂಬುವ ವಾರ್ತೆಪರಿಪರಿ ಕೇಳುತ ಶರಣು ಬಂದೆನೊ ನಿನ್ನ1 ಮಂದಗಮನೆ ಕೊಟ್ಟ ಇಂದ್ರಮಾಣಿಕ ಮಾಲೆಕಂಧರದೊಳಗಿಟ್ಟ ಇಂದ್ರಶಯನ ಪ್ರೀಯಾ 2 ಕಾಳಿ ರಮಣ ಧರ್ಮನಾಳೆ ಎನಲು ಧನ-ನೀಲ ಮಾಣಿಕ್ಯ ಭೂಷಲೋಲ ಭೂಸುರಗಿತ್ತೆ 3 ಮಾಧವನಾಜ್ಞದಿ ಮೇದಿನಿಯೊಳು ಬಂದುಬಾದರಾಯಣ ಮತ ಸಾಧನೆ ಮಾಡಿದ 4 ಪಾದ ಮುಂದೆ ಸೇವಿಸಿ ನಿತ್ಯಾನಂದತೀರ್ಥರೇ ನೀವು ಸಂದೇಹವಿಲ್ಲದೆ 5
--------------
ಇಂದಿರೇಶರು
ಬಿಡೋ ಭ್ರಾಂತಿ ಜೀವಾ ಬಿಡೋ ಕಾಮ್ಯಸೇವಾ ಅಹಂತಾ ಮಮತ್ವ ಮಹಾಮೂಢಭಾವಾ ಪ ಜಗವನೆಲ್ಲ ಈಶ್ವರನೆ ಸೃಷ್ಟಿಸಿದ ಕೇಳೋ ಇದೋ ನಿನ್ನದೆಂಬುವದು ಏನಿಲ್ಲ ತಾಳೋ ಜಗವ ಸೃಷ್ಟಿಸಿದನಾತ ಪಾಲಿಸುವನಾತ ಇಗೋ ನಾನೆ ಪಾಲಿಸುವೆನೆನ್ನುವದು ವ್ಯರ್ಥ ಭಾರ 1 ನೀ ಧರಿಸಿರ್ದ ದೇಹವಿದ ನೀ ಸೃಷ್ಟಿಸಿದೆಯಾ ಇದೇ ರೀತಿ ಹೆರವರದು ಬಿಡು ನಿನ್ನ ಮಾಯಾ ಇದನು ಪಾಲಿಸುವನಾತನೀಶ್ವರನು ನೋಡಾ ಇದೇ ರೀತಿ ಪಾಲಿಸುವನೆಲ್ಲವನು ನೋಡಾ ಮಹಾ ವಿಶ್ವವೆಲ್ಲ ತಿಳೀ ಈಶಲೀಲಾ 2 ಜಗವ ನಾಶಗೊಳಿಸುವನು ಪ್ರಳಯದಲಿ ಈಶಾ ಮಗುಳೆ ಜಗ ಜೀವರನು ಸೃಷ್ಟಿಸುವ ತಾನೆ ಜಗದಿ ವರ್ಣವಾಶ್ರಮದ ಬಲುಕಾರ್ಯ ಪಾಶಾ ಬಗೆಯಲೀಗ ಪಶುವಿನೊಳು ತಿರುಗಿಸುವನೀಶ ಮಹಾಯೋಗಿ ಶಂಕರನ ಶರಣಾಗೋ ಜೀವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ ನಾಗಶಯನನವ ಕೂಗದೆ ಬಾರನೆ ಅ.ಪ ಪೂತನಿ ಶಿಶುಗಳ ಫಾತಿಸುತಿಹಳೆಂಬ ಮಾತನವಗೆ ಪೇಳೆ ಭೀತಿಯತೋರಿ ಆತುರದಿಂದವ ಐತರುವನೆ ಸಖಿ ಪ್ರೀತಿಯೊಳೀವೆನೀ ರತುನದ ಹಾರವ 1 ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಮೊರೆಯಿಡುವುದ ಹೇಳೆ ಭರದಲಿ ಬರುವ ಉರಗನ ಗರಳದಿ ಕರುತುರು ನೋಯುವ ಪರಿಯ ಬಿತ್ತರಿಸಿ | ಮುರಳೀಧರಗೆ 2 ಸಂಗಡ ಬರದಿರೆ ಭಂಗಿಸುವರು ಗೋ ಪಾಂಗನೆಯರು ಎಂದು ರಂಗಗೆ ಹೇಳೇ ಇಂಗಿತಜ್ಞನು ನಮ್ಮ ಮಾಂಗಿರಿಯರಸನು ಸಂಗಡ ಬರುವನು ಸಂದೇಹವಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಧ್ಯಾನಿಸಿ ನೋಡು ಪ ಭವ ಮುಳುಗಿ ನೀನಾರು ಅಲ್ಲಿ ತಂದೆ ತಾಯಿಗಳು ಮತ್ತವರಾರು ಅಂದಿನವನಿತೆಯಾಗಿಗಳಾರು ನಿನ್ನ ನಂದನರೆನಿಸಿ ಬಂದವ ರಾರೋ 1 ಮುನ್ನ ಮಾಡಿದ ಹೊಲಮನೆಯೆಲ್ಲ ನಿನ್ನ ಬೆನ್ನು ಬಂದಗ್ರಜಾನುಜರೆಲ್ಲ ಚೊಕ್ಕ ಚಿನ್ನ ಚಿಗುರು ಬೆಳ್ಳಿ ನಗವೆಲ್ಲಿ ಪಶು ಹೊನ್ನು ಕನಕ ಮಿತ್ರ ಜನರೆಲ್ಲ 2 ಇಂದಿನ ಭವದೊಳು ನಿನಗೆಲ್ಲಿ ಈಗ ಬಂದು ಕೊಡಿದ ಸಂಸಾರವೆಲ್ಲಿ ಮುಂದೆ ಹೊಂದಿ ಹುಟ್ಟುವ ಠಾವುಗಳೆಲ್ಲ ಅಲ್ಲಿ ಬಂಧು ಬಳಗ ನೆರೆದಿಹುದೆಲ್ಲ 3 ಹಲಬರ ನೆರವಿಯ ದೇಹವಿದು ಹೊಳೆ ಚಳಿಕ ತನ್ನಯ ಈ ಋಣ ತೀರುವುದು ಎಲ್ಲ ಬಯಲಿಗೆ ಬಯಲಾಗಿ ಹೋಗುವುದು 4 ಸಾರವಿಲ್ಲದ ಸಂಸಾರವಿದು ನಿ ಪರ ಕೆಡುತಿಹುದು ಈ ಘೋರವನುಳಿದು ನಿರ್ಮಲನಹುದು ಲಕ್ಷ್ಮೀ ಪಾದ ಕೊಡುವುದು5
--------------
ಕವಿ ಪರಮದೇವದಾಸರು
ಬೇಡಿ ಕಡದೀತು ಎನ್ನ ಬೇಡಿ ಕಡದೀತು ಪ ಮೂಢ ಜನರ ಸಂಗ ತ್ಯಜಿಸಿ ಗೂಢವಾದ ಸಾಧುವೆನಿಸಿ ಅ.ಪ. ಘೋರ ಸಂಸಾರ ಬೇಡಿ ಆರು ಅಹಿತರೆನ್ನ ಕಾಡಿ ಗಾರು ಮಾಡಿ ಜಡಿಯ ಕೂಡಿ ಪಾರ ಮಾಡಿದೆನ್ನ ನೋಡಿ1 ಮೋಹಪಾಶದೊಂದು ಕಟ್ಟು ದೇಹವೆಲ್ಲ ತೊಡರಿ ಬಿಟ್ಟು ಗೇಹ ತೊಲಗದಂದ ಬಿಟ್ಟ ನೇಹ ತವಿಸೆ ಕರುಣವಿಟ್ಟು 2 ಭವ ಮೋಹ ಸುಡಲಿ ಉರಿವ ಕ್ಲೇಶಗಳು ಸಿಡೀಲಿ ಕೊರೆವ ಸಂಸ್ಕøತಿ ಜಾಲಕ ತೇಲಿ ನರಸಿಂಹವಿಠಲಾ ಕೊಡಲಿ 3
--------------
ನರಸಿಂಹವಿಠಲರು
ಭಕ್ತವತ್ಸಲ ಹರಿ ಎಂಬ ಬಿರುದು ನಿನ ಗಿತ್ತವರ್ಯಾರಯ್ಯಾ ಹೇ ಜೀಯಾ ಪ ತತ್ತರಿಸುತಲಿಹರು ಈ ಜಗದೊಳು ಅ.ಪ ಪರಿಪರಿಯಲಿ ನಿನ್ನ ಮೊರೆಯ ಹೊಕ್ಕಿರುವ ಪರಮ ಸುಜನರುಗಳು ಈ ಧರೆಯೊಳು ಒರಳಿಗೊಡ್ಡಿರುವ ಶಿರಗಳುಳ್ಳವರಂತೆ ದುರುಳರ ಭಯದಿಂದ ನರಳುತಿರೆ 1 ವಾಸಕೆ ಗೃಹವಿಲ್ಲ ಲೇಶ ಸುಖಕೆ ಅವ ಕಾಶ ಇವರಿಗಿಲ್ಲ ಈ ಭುವಿಯೊಳು ಶ್ರೀಶನಾಗಿರೆ ನಿನ್ನ ದಾಸರೊಳಗೆ ಪರಿ ಹಾಸ ಮಾಡುತಲಿಹೆಯೋ ಜಗದೀಶ 2 ಪರಿ ಘನ್ನಬಿರುದುಗಳು ಇನ್ನು ಉಳಿವುದೆಂತೋ ನಾ ಕಾಣೆ ಸನ್ನುತಿಸುವವರಿಗೆ ಇನ್ನಾದರು ಸುಖ ವನ್ನು ನೀ ದಯಮಾಡೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಭವ ಬಂಧನೇಯನು ನಾ ಪೇಳ್ದೆ ಇಂದೀವರಾಕ್ಷಗೆ ನಿನ್ನ ನಂಬಿದೆ ಕರದ್ವಂದ್ವ ಜೋಡಿಪೆ ಸಲಹೀಗ ಪ ತಂದೆ ಪ್ರಪಲ್ಹಾದಗೊಲೀದೀ ಸಲೆ ಬಂದ ವಿಪತ್ತನ್ನ ಕೇಳ್ದಿ ಅಂದು ಭೂಭಾರವನಿಳುಹಬೇಕೆಂದು ಬಂದು ಕಂಭದಿ ನಡೆತಂದೆ 1 ಅರುಹೆಲೊ ಹರಿ ಇನ್ನೆಲ್ಲಿ ಪಂಧಿರಣ್ಯಕಶ್ಯಪ ನುಡಿಯಲ್ಲೆ ದುರುಳ ಹೃತ್ಪಟಲವ ಶೀಳಿದಿ ವೈರಿ ನೀನೇ ದೊರಿ ಎಂಬೋರುದ್ಧಾರಿ ಧೂಮನರಸಿಂಹವಿಠಲ ಪಾಲಿಪುದೆನ್ನ 3
--------------
ನರಸಿಂಹವಿಠಲರು