ಒಟ್ಟು 1875 ಕಡೆಗಳಲ್ಲಿ , 111 ದಾಸರು , 1413 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾರಿಗುಸುರುವೆನುಎನ್ನ ಸುಖದುಃಖವನುಪನ್ನಗಾಭರಣ ಶ್ರೀರಾಮೇಶಲಿಂಗ ಪ ಸುರಪತಿಗೆ ಅಂಡವರತವು ಅಗುನಿ ಆಶ್ರಯಿಸಿದರನೆ ಭಕ್ಷಿಪನು ಯಮ ನಿಷ್ಕರುಣಿಯುನಿರುತಿ ರಾಕ್ಷಸ ವರಣ ನೀರೊಳಿಹ ವಾಯು ಸಂ-ಚರಿಪ ಭಾಗ್ಯೋನ್ಮತ್ತನಾತ್ಮಘಾತಕನು 1 ನಾರಾಯಣಗೆ ನಿದ್ರೆ ನಾಗೇಂದ್ರಶಯನಗೇವಾರಿಜಭವಗೆ ಪ್ರಣವ ಜಪಕಾಲವುವೀರಭದ್ರನೆ ಕೋಪಿ ಪಾರ್ವತಿಯೆ ಚಂಡಿ ಮದವೇರಿ ಮುಕುಟವನು ತೂಗುವನು ಗಣವರನು 2 ಸರಸಿಜಾಪ್ತಗೆ ಸಮಯವಿಲ್ಲ ಶಶಿ ತನ್ನೊಳಂಕುರಿಸಿದ ಕಲಂಕ ಕಳಕೊಳಲಾರನುವರ ಕೆಳದಿ ರಾಮೇಶ ನೀನೇ ಚಿತ್ತಕೆ ತಂದುಮರೆಯೊಕ್ಕವನ ನೋಡಿ ಪೊರೆಯದಿದ್ದ ಮೇಲೆ 3
--------------
ಕೆಳದಿ ವೆಂಕಣ್ಣ ಕವಿ
ಇನ್ನೊಬ್ಬರಿಗೆ ಇದು ಏನು ತಿಳಿದೀತು ಧ್ರುವ ವೇದಾಂತಕಿದು ಸನ್ಮತಗೂಡುವ ಮಾತು ಸಾಧುಜನರಿಗೆ ಸಾಕ್ಷಿಯಾಗಿ ದೋರುವ ಮಾತು ಸಾಧನಕೆ ಸಾಧಿಸುವ ಮಾತು ಬೋಧಿಸಿದವಗೆ ಬಲವಾಗುವ ಮಾತು 1 ಕೋಟಿ ಜನ್ಮದಾ ಪುಣ್ಯವಂತಗಿದಿರಿಡುವ ಮಾತು ನೋಟ ನಿಜವಾದವಗೆ ನೀಟವಾಗಿಹ ಮಾತು ಸೂಟಿಗಿದೆ ಘನಕೂಟ ಮಾತು ನಾಟಿಮನದೊಳು ಮಥಿüಸುವ ಮಾತು 2 ದ್ವೈತ ಅದ್ವೈತಕ ಆಧಾರವಾಗುವ ಮಾತು ತ್ರಯಗುಣಕ ಮೀರಿ ಮಿಗಿಲಾಗಿ ದೋರುವ ಮಾತು ಮಹಿಪತಿಯ ಗುರುಗೂಢ ಮಾತು ತ್ರಯಲೋಕಕಿದೆ ತಾರಿಸುವ ಮಾತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇರಬೇಕು ನಿಂದಕರು ಸಜ್ಜನರಿಗೆ ಪ ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ. ಕಲುಷ ಕರ್ಮವ ಮಾಡೆ ಕಳೆವರಿನ್ನಾರೆಂದು ಕಮಲಭವನು ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ ಕಲುಷರನ ಮಾಡಿ ತನ್ನವರ ಸಲಹುವ 1 ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ ಭವಗೆ ಮೊರೆಯಿಡಲು ವರವಿತ್ತನಂದು ಕರ್ಮ ಮಾಡಿದರು ಸರಿಯೆತ ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು 2 ಮಾನವಾಧಮ ಜನರು ನೋಡಿ ಸಹಿಸದಲೆ ಹೀನ ಮತಿಯಿಂದ ಮಾತುಗಳಾಡಲು ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ 3 ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ ತೊಳೆವ ನಿಂದಕ ತನ್ನ ನಾಲಗಿಂದ ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು ಹಲವು ಮಹ ಪಾಪಗಳ ಕಳೆದು ಪುಣ್ಯವನೀವ 4 ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ ನ್ನಣುಗರಿಗೆ ಅಪವಾದ ರೂಪದಿಂದ ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ 5 ಮನುಜಾಧಮರಿಗೆ ಹರಿದಾಸರಲಿ ದ್ವೇಷ ವೆನಿಪ ಸಾಧನವೆ ನಿಸ್ಸಂದೇಹವು ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ 6 ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು ಭೂ ಕೋವಿದರ ಮಲವು ಪೋಗಲೆಂದು ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ ಸೂಕರರು ನಿಂದಕರು ಕರುಣಾಳು ಇಳೆಯೊಳಗೆ 7
--------------
ಜಗನ್ನಾಥದಾಸರು
ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು ಶಿಷ್ಟರ ನಡತೆಲ್ಲೆಲ್ಲೂ ಗುರುವೇ ಬಲು ಕಷ್ಟದೊಳಗೆ ನಾ ಮುಳುಗಿರುವೆ ನೀ ಕೊಟ್ಟ ಅಭಯದಿಂ ಬದುಕಿರುವೆ ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣುಸಾರಥಿಯ ಪ್ರೀಯ ಮಗುವೆ ಬಾ ಬಾ ಗುರುವೆ ಪ ಇತ್ತರು ಸರಿಯಿಲ್ಲ ಈ ಮಾತು ಹೊರಗೆ ಪೇಳುವವಲ್ಲಾ ನಾ ನಿದ್ದೆ ಪೂರ್ವದಲಿ ಅತಿ ಖುಲ್ಲಾ ಶಿಲೆಯನು ಸುಂದರ ಮೂರ್ತಿಗೈದತೆರ ಬಲು ವಿಧದಲಿ ಸಲಹಿದಿಯಲ್ಲ ಹರಿಬಲ್ಲಾ ಜ್ಞಾನವಿತ್ತಿ ಹರಿಪಾದದಲ್ಲಿ ಅಭಿಮಾನವಿತ್ತಿ ಸುಖವೆಲ್ಲಾ ಬಲುಹೇಯವೆಂದು ತಿಳಿಸಿದಿಯಲ್ಲಾ ಮೇಲ್ವರದಿ ರಂಗನೊಲಿಯುವ ಸೊಲ್ಲಾ ಅಸನ ವಸನಗಳು ಕೊಟ್ಟು ಕೊನೆಗೆ ತುಚ್ಛಿಸುವ ನಿನ್ನ ಗುಣ ತಿಳಿಯಲಿಲ್ಲಾ ಇದು ಥsÀರವಲ್ಲಾ ನಿನ್ನ ಪಾದವೇ ಸಡಗರ ಸಿರಿ ಮೇಲೆ ಸುರಪುರಿ ಜ್ಞಾನನಿಧಿ ಥsÉರಿ ಕಾಶಿ ಗಯಾ ಮಧುರಿ ಹರಿ ಓಂ ಓಂ ಓಂ ನಿನ್ನ ನಾಮ ದುರಿತವೆಂಬೊ ಕರಿ ಕುಲಕೆ ಘನ ಹರಿ ಪರಿ ತಿಳಿದೆನೆಲೊಧೊರಿ ಹರಿ ಓಂ ಓಂ ಓಂ ಇನ್ನಾದರು ಕೋಪವತ್ವರಿ ಕರುಣಿ ಕಣ್ತೆರಿ ಸುತಗೆ ಸುಖಗರಿ ತೋರೋ ನಿನ್ನ ಮಾರಿ ಹರಿ ಓಂ ಓಂ ಓಂ ಎನ್ನಯ ಬಿsÀಷ್ಟಗಳನ್ನು ನೀಡದಿರೆ ನಿನ್ನ ವಿಮಲ ಕೀರ್ತಿಗೆ ಗುರುವೆ ಕುಂದನ್ನು ಬಿಡದೆ ತಿಳಿ ನಾ ತರುವೆ ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣು ಸಾರಥಿಯ ಪ್ರಿಯ ಮಗುವೆ ಬಾ ಬಾ ಗುರುವೆ 1 ಪಂಥವೇ ಹೇ ಮಹಾಕಾಂತ ಪ್ರಿಯ ನಿನ್ನ ಸಂತತಿಯೊಳು ಸೂರಿಗಳೊಡೆಯ ನೀನೆಂತು ಪೊಂದಿದೈ ನಿರ್ಭಿಡಿಯಾ ಇದು ಸಂತರು ಕೇಳಿದರಾಶ್ಚರ್ಯ ವಂತರು ಆಗರೆ ಸಾಕು ಮುಂದೆಯನ್ನಂತರಂಗವೇ ತವನಿಲಯ ಆಗಲಿ ಜೀಯಾ ಕಂದನ ಕಾಯುವದಂತು ಸಹಜ ಸಿರಿ ಹಿಂದಕೆ ಪಾಂಡವನೆಂಭಿರಿಯಾ ಆ ಗಂಧರ್ವನ ಮಗನಾದ ಗಯಾ ತಾ ಬಂದು ಹೋಗಲವನನು ಮೊರೆಯ ಸಿಂಧು ಜಪನ ಸಹ ಲಕ್ಷಿಸದಲೆ ತ್ವರ ತಂದು ಕೊಟ್ಟನವನಿಗೆ ವಿಜಯಾ ಮೇಲ್ಹರಿಯದಯಾ ಇದು ಅಲ್ಲದೆ ಬಹು ಭಕ್ತರು ಜ್ಞಾನಯುಕ್ತರು ಸುಧಿಯ ಭೋಕ್ತರು ನೆನೆದವರ ದು:ಖ ಬಿಡಿಸಿದರು ಸುಧೆಯ ಬಡಿಸಿದರು ಹರಿ ಓಂ ಓಂ ಓಂ ಬಲು ಹಿತದಿ ಶುಭವ ಕೋರಿದರು ತಾಪ ಹೀರಿದರು ವಾಕ್ಯ ಸಾರಿದರು ಹರಿಯ ತೋರಿದರು ಹರಿ ಓಂ ಓಂ ಓಂ ನೀನಾದರೂ ಬಹಳರ ಪೊರದಿ ಈ ಹೀನ ಓರ್ವ ನಿನ್ನಗೆಯರವೆ ಮರಿಯಬ್ಯಾಡ ಕರುಣೆ ಕರವ ಮುಗಿವೆ ಸಿಟ್ಟು ಮಾತ್ರ ನೀನಾಗ ಬೇಡ2 ಪರ ಖರೆ ಗುರುವಿಲ್ಲದ ಗತಿಯನ್ನು ಧರೆತ್ರಯದಿ ತೋರು ತುಸು ನೋಡೋಣ ಗಿರಿಧರಿಯ ಬಿಟ್ಟು ನಿಲ್ಲುವುದೇನು ಗುರುವೆ ತ್ರಿಟಿಯ ಬಿಟ್ಟೊರುಷವಾಗುತದೆ ಹಿರಿಯರಿ ಪೇಳ ವದಿನ್ನೇನು ಹೇ | ಸುರಧೇನು ಗುರುವೆ ಸುಖದ ಖಣಿ ಗುರುತನುಮಣಿ ಮಣಿ ತಿಳಿದೆ ನಾ ಮನದಾಗೆ ಪರಕಿಸಿದೆನ್ನನು ಪೊರೆಯೆ ಯನುತ ಬಾ ಯ್ತೆರೆಯುತ ಮಣಿಸುವೆ ಶಿರನಿನಗೆ ಮೂಜಗದಾಗೆ | ನಿನ್ನಿಂದ ಎನಗೆ ಸದ್ಬುದ್ಧಿ ಯೋಗದಾಸಿದ್ಧಿ ಕಾರ್ಯದಾಸಿದ್ಧಿ ಸ್ವರ್ಗದಾಸಿದ್ಧಿ ಹರಿ ಓಂ ಓಂ ಓಂ ನಿನ್ನಿಂದ ಪಡೆದ ವಿಜ್ಞಾನ ಹರಿಯರಾ ಖೂನಾ ಲೋಕದೊಳು ಮಾನ ಮುಕ್ತಿ ಸೋಪಾನ ಹರಿ ಓಂ ಓಂ ಓಂ ನೀನೇವೆ ಯನಗೆ ಆಭರಣ ಝಗಝಗಿಪ ವಸನ ಶ್ರೀಹರಿಯ ಚರಣ ವಿರಜಾನದಿ ಸ್ನಾನ ಹರಿ ಓಂ ಓಂ ಓಂ ನಿನ್ನೊಮ್ಮೆ ನೆನಸೆ ಪವಮಾನ ಕಾಯ್ವ ಪ್ರತಿದಿನ ಇದಕೆ ಅನುಮಾನ ಇಲ್ಲ ಏನೇನ ಹರಿ ಓಂ ಓಂ ಓಂ ಗಡ ಕೇಳ್ವಡೆಯನೆ ಕಡೆ ನುಡಿಯನ್ನದು ಭಿಡೆಯ ಇಡದೆ ನಾನುಡಿವೆ ಎನ್ನ ಮರೆತರೆ ಮಂಗನು ನೀ ನಿಜವೆ 3
--------------
ಅಸ್ಕಿಹಾಳ ಗೋವಿಂದ
ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ ಪ. ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಬೇರಿಗೆ ಹೇಳಿ ಹೋಯಿತೆ ಒಂದು ಮಾತ 1 ಏರಿಯು ನೀರನು ತೆಗೆದುಕೊಂಡಿದ್ದೇನೊ ಭೋರೆಂಬೋ ಮಳೆ ಹೊಯ್ದು ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿಹೋಯಿತೆ ಒಂದು ಮಾತ 2 ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು ಇಟ್ಟಿತ್ತು ಜೇನು ತನ್ನ ಸುಖಕಾಗಿ [ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ 3 ಹೆಸರು ಹೇಳುವೆ ನಾನನುದಿನವು ರಸಭೋಜನವವುಂಡು ಜೋತಿತಾಹೋಗುವಾಗ ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ 4 ಸಪರ್Àಶಯನ ಹಯವದನನಾಡಿದ ಮಾತು ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆÀ ಹೇಳಿ ಹೋಯಿತೆ ಒಂದು ಮಾತ 5
--------------
ವಾದಿರಾಜ
ಈತ ಶ್ರೀಗುರು ಪರಬ್ರಹ್ಮನೆನ್ನಿ ಅತೀತವಾದ ಗುಣತ್ರಯ ಪರಮಾತ್ಮನೆನ್ನಿ ಧ್ರುವ ನಿರ್ಗುಣಾಂದನೆನ್ನಿ ನಿಗಮಗೋಚರನೆನ್ನಿ ಅಗಣಿತಗುಣ ಪರಿಪೂರ್ಣನೆನ್ನಿ 1 ಯೋಗಾನಂದಾತ್ಮನೆನ್ನಿ ಯೋಗಿವಂದಿತನೆನ್ನಿ ಯೋಗಿಹೃದಯವಾಸ ಯೋಗನಿಧಾನನೆನ್ನಿ 2 ಸಾಧುಸಹಕಾರನೆನ್ನಿ ಸದಾನಂದಾತ್ಮನೆನ್ನಿ ಸದ್ಬ್ರಹ್ಮಾನಂದ ಸದೋದಿತನೆನ್ನಿ 3 ಙÁ್ಞನಸಾಗರನೆನ್ನಿ ಙÁ್ಞನಾನಂದಾತ್ಮನೆನ್ನಿ ಙÁ್ಞನಿಗಳೊಂದಿಹ ಸುಙÁ್ಞನಸ್ವರೂಪನೆನ್ನಿ 4 ಪರಮಪುರಷನೆನ್ನಿ ಪರಮಪ್ರಕಾಶನೆನ್ನಿ ಪರಮಾನಂದಸ್ವರೂಪ ಪರಾತ್ಪರ ಪೂರ್ಣನೆನ್ನಿ 5 ಇಹಪರನೀತನೆನ್ನಿ ಗುಹ್ಯಗುಪಿತನೆನ್ನಿ ಬಾಹ್ಯಾಂತ್ರಪರಿಪೂರ್ಣ ತ್ರೈಲೋಕ್ಯನಾಥನೆನ್ನಿ 6 ಕಾವಕರುಣನೆನ್ನಿ ಭವಭಂಜನನೆನ್ನಿ ಜೀವಸಂಜೀವ ಮಹಿಪತಿ ಗುರುಮೂರ್ತಿಯೆನ್ನಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ | ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ಪ ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ || ಶಿವ ಓಂ ನಮಃ ಶಿವ | ಸÀವಚರಣ ನೋಡುವ | ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ 1 ವ್ರಾತ | ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ || ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು | ತುತಿಪ ಗತಿಗೆ ರಘು | ಪತಿನಾಮ ಎನಗೀಯೋ 2 ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ | ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ || ಸಿರಿ | ವಿಜಯವಿಠ್ಠಲನ | ಭಕುತಿಯ ಕೊಡು ಅತಿ | ಶಯದಿ ಪಿನಾಕೀಶಾ 3
--------------
ವಿಜಯದಾಸ
ಉತ್ತೀರ್ಣವಾಗಲರಿಯರು | ತಮ್ಮ | ನಿತ್ಯನಿಂದಕ ದುರ್ಜನರಿಗೆ ಸುಜನರು ಪ ಕೂಲಿಯ ಕೊಂಡು ವಸ್ತ್ರಂಗಳ ರಜಕನು | ಇಳಯೊಳು ವಗೆವನು ಕೈಗಳಿಂದಲ್ಲದೇ | ಮಲಿನವಗುಣ ಮೈಲಿಗೆ ಕಾಸು ಕೊಳದೇ | ಚಲಿಸದೆ ನಾಲಿಗೆಯಿಂದ ತೊಳೆವರಾಗಿ 1 ತ್ರಯದ ಬಾಡಿಗಿಕೊಂಡು ಹೆಚ್ಚುಗಂಟವ ಕೊಳ್ಳ | ವೈವನು ಹೆಜ್ಜೆಯ ಪಯಣದ ಮುಂದಕ | ನಯದಿಂದಿವರ ನಿಂದೆ ದೋಷ ಭಾರವ ಹೊತ್ತು | ಭಯವಹಾನಂತ ಜನ್ಮವ ಸೋಸುವರಾಗಿ 2 ಧರೆಯೊಳು ತಮ್ಮನ್ನ ತಾ ಉಂಡು ಬುಧರಿಗೆ | ಪರಮಸುಖವ ಕೊಟ್ಟು ದುಃಖವ ಕೊಂಬರು | ಗುರು ಮಹಿಪತಿಸುತ ಪ್ರಭು ಸ್ಮರಣೆಯನು ಬಿಟ್ಟು | ಇರಳ್ಹಗಲುದ್ಯೋಗ ಇದೇ ಮಾಡುವರಾಗಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉತ್ಸವದಲಾಹ್ನಿಕವ ಕಡು ಜನರು ಕೇಳಿರಯ್ಯ ಪ. ಅರುಣ ಉದಯದೊಳೆದ್ದು ಆ ದ್ವಾರಪಾಲಕರುಭರದೆ ಘಂಟೆ ಸುವಿಘ್ನ ಮಾಡೆತರತರದ ಹರಿದಾಸರು ತಾಳ ಮೇಳಗಳಿಂದಪರಿಪರಿಯ ಗಾನ ಪಾಡೆ ತ್ವರಿತ ವಾದ್ಯಗಳಿಂದ ತರುವಾಯ ಭೋರಿಡೆ ಮುರಹರನುಪ್ಪವಡಿಸೆತರುಣ ಯತಿಗಳು ಎದ್ದು ಸ್ನಾನ ಜಪಗಳ ಮಾಡಿನಿರುತ ಶಂಖ ಭ್ರಮಣೆ ಮಾಡೆ ನೀಟಾಗಿಒಪ್ಪುತಿಹ ಉಡುಪಿಯ ಶ್ರೀಕೃಷ್ಣನ 1 ಘೃತ ನೆನೆಕಡಲೆಯುಶುದ್ಧಾದ ಪಾಲ್ಮೊಸರು ಶುಂಠಿ ಸಕ್ಕರೆಲಡ್ಡಿಗೆತಂದ ನೈವೇದ್ಯವ ಸವಿದು ತಾ ಪೂಜೆ ಮಾಡಿಸಿಕೊಂಬ 2 ಪದ್ಮನಾಭಗೆ ಬೇಗ ಪುರುಷಸೂಕ್ತದಭಿಷೇಕಮುದದಿಂದ ಮಾಡಿದ ಬಳಿಕವಿಧಿಯ ಪೂರ್ವಕವಾಗಿ ಅಗಿಲು ಗಂಧ ತುಲಸಿಮಾಲೆಅಧಿಕವಾಗಿ ಸಮರ್ಪಿಸಿ ಒದಗಿದ್ದ ಶುಂಠಿ ಬೆಲ್ಲ ಒಳಿತಾದ ಅನ್ನ ಸೂಪದಧಿ ಕ್ಷೀರ ಕದಳಿಫಲವು ಮುರಮರ್ದನನುಚೆಲುವ ತಾ ಹಂಸಪೂಜೆಯ ಕೊಂಬ ತದನಂತರದಲಿ ಮೃತ್ತಿಕೆಯ ತಾ ಗಣಿಯಕಟ್ಟಿಸಿಕೊಂಬ 3 ದಧಿ ದಿವ್ಯ ಮಧು ಸಕ್ಕರೆ ಸೀಯಾಳವು ಇಂ-ದಿರೇಶಗೆ ಬೇಗ ಶಿರದ ಮೇಲ-ಭಿಷೇಕ ಮುದದಿಂದ ಮಾಡಿದ ಬಳಿಕತಿರುಗಿ ನೈವೇದ್ಯವನು ತೀವ್ರದಿಂದಲೆ ಸ-ಮರ್ಪಿಸಿ ಚೆಲುವ ಮಂಗಳಾರತಿಯಿಂದಪಂಚಾಮೃತದ ಪೂಜೆಗೊಂಬ 4 ಜಲಜನಾಭಗೆ ಉಷ್ಣಜಲವ ತಂದ್ಹದ ಮಾಡಿಲಲಿತವಾಗಿ ಎರೆಯುತಒಳಿತಾದ ಹೆಸರ್ಹಿಟ್ಟಿನಲಿ ಒರೆಸಿ ಮೈಯನೆತೊಳೆದು ಸುಲಭಗೆ ಪಾಲನುಣಿಸಿ ಬಳಿಕಬಾಲಉಡಿಗೆಯಿಟ್ಟು ಬಹುನೈವೇದ್ಯವನರ್ಪಿಸಿಚೆಲುವ ಉದ್ವಾರ್ಚನೆ ಪೂಜೆಚೆಂದಾಗಿ ಮಾಡಿಸಿಕೊಂಬ 5 ಮಧ್ವ ಸರೋವರಜಲವು ಹೊಳೆವÀ ಚಿನ್ನ ಕಲಶÀದಲಿಶುದ್ಧದಲಿ ಶೋಧಿಸಿ ತುಂಬಿಸಿಬದ್ಧ ಘಂಟೆನಾದದಲಿ ಬಹುಬೇಗದಲಿಬಂದು ಸನ್ನಿಧಿಯಲಿ ಪೂಜಿಸಿವಿಧುರಥನೆ ಶಂಕರಥನೆ ಪುರುಷಸೂಕ್ತÀದಭಿಷೇಕಮುದದಿಂದ ಮಾಡಿದ ಬಳಿಕ ಸಜ್ಜಿ ಘೃತದೋಸೆ ಬೆಣ್ಣೆ ಸಾರು ನೈವೇದ್ಯವ ಸವಿದು ಚೆಲುವಮಂಗಳಾರತಿಯಿಂದ ಮುದದಿ ತೀರ್ಥಪೂಜೆಗೊಂಬ 6 ಉರು ಪದಕಾಭರಂಣಗಳು ಉನ್ನಂತತೋಳ್ಬಂದಿಕರಮುದ್ರೆ ಕಂಕಣಗಳು ಚರಣಾರವಿಂದಗಳಿಗೆ ಚಾರುಚಿನ್ನದ್ಹಾವಿಗೆಕಿರುಗೆಜ್ಜೆ ಕಾಲಲಂದುಗೆವರ ಪೀತಾಂಬರ ಕಟಿಗೆ ವಡ್ಯಾಣ ನೇವಳ ಇಟ್ಟುನಿರುತ ಸುವರ್ಣದ ಕವಚವುಕೊರಳ ಕೌಸ್ತುಭಹಾರ ಕೋಮಲ ಸುವರ್ಣಕುಂಡಲಸಿರಿಮೂರುತಿ ಸಣ್ಣ ನಾಮ ಶಿರದ ಜಾವಳ ಜಡೆ ಕಡಗೋಲು ನೇಣುಸಹಿತ7 ದಧಿ ಶುಂಠಿ ನಿಂಬೆರಸ ತಕ್ರಜಗದೇಕ ಸವಿದ ಪರಿಯ 8 ಬಗೆಬಗೆಯ ಮಂಗಳಾರತಿ ಬಾರಿಬಾರಿಗೆ ಮಾಡಿ ಚಾ-ಮರ ದರ್ಪಣಗಳೆಸೆಯೆ ನಗೆಮುಖದ ಕೃಷ್ಣ-ನಂಘ್ರಿಗೆ ಷೋಡಶ ಪೂಜೆಯ ಮಾಡಿಮುಗಿಸಿ ಗುರುರಾಯ ಬರಲುಹನುಮಂತದೇವರಿಗೆ ಹಸನಾದ ಭಕ್ಷ್ಯಭೋಜ್ಯಅನುದಿನದಲರ್ಪಿಸಿ ಪೂಜಿಸಿಮುನಿ ಮಧ್ವರಾಯರಿಗೆ ಮುದದಿಂದಲರ್ಪಿಸಿ9 ಅರಳು ಆರಚ್ಚು ಬೆಲ್ಲವುಆ ಕಾಲದಲರ್ಪಿಸಿ ಪೂಜಿಸಿ ಕರಣದಲಿ ನೋಡಿ ನಗುವ 10 ಪುಟ್ಟ ಕೃಷ್ಣರಾಯರಿಗೆ ಹೊನ್ನ ಕವಚವ ತೊಡಿಸಿಇಟ್ಟ ರನ್ನದ ಕಿರೀಟವುದಿಟ್ಟಾದ ಪದಕಂಗಳು ದಿವ್ಯಮುತ್ತಿನ ಸರಕಟ್ಟಿದ್ದ ಪೂಮಾಲೆ ಎಸೆಯೆಶ್ರೇಷ್ಠವಾದ ಧೂಪದೀಪ ಶ್ರೀಪತಿಗೆ ದೋಸೆ ಬೆಣ್ಣೆಗಟ್ಟುರುಳಿ ನೈವೇದ್ಯವು ಕಟಕಟನೆಶುಂಠೀಕಷಾಯುಂಡು ಬಾಯಿ ತೊಳೆದುತಟ್ಟನೆ ರಾತ್ರಿ ಪೂಜೆಯಗೊಂಡು ತಾ ಪಲ್ಲಕ್ಕಿಯೇರಿ ಬರುವ11 ಅರಳು ಬಹುಕೊಬರಿ ಚೂರುಗಳು ಆ ಕಾಲದಲಿ ಸೂಸಿ ಪೂಜಿಸೆ ಕರುಣದಲಿ ನೋಡಿ ನಗುವ 12 ಧೀರನಿಗೆ ಚತುರ್ವೇದ ದಿವ್ಯಶಾಸ್ತ್ರಪುರಾಣ ಚೆಲುವಗಷ್ಟಕ ಗೀತವುಭೇರಿಮೌಳಿ ಮೌಳಿವಾದ್ಯಮೌಳಿಮೌಳಿ ಚಕ್ರವಾದ್ಯತಾರತಮ್ಯದ ಸರ್ವವಾದ್ಯಗಳೆಸೆಯೆತಾರಿ ಸೇವೆಯ ಮಾಡಿ ಸ್ವಾಮಿ ವೀಳ್ಯ ಮಂತ್ರಾಕ್ಷತೆ ಕಾರುಣ್ಯದಲಿಬೆರೆಸಿ ಮಾರಜನಕಗೆ ಏಕಾಂತ ಸೇವೆಯ ಮಾಡಿ ನವಮಾರಜನಕನ ಹಂಪೂಜೆಯ ಜಾಗ್ರತೆಯಲಿ ನೋಡಿ ನಗುವ 13 ಹಡಗಿನಿಂದಲಿ ಬಂದು ಕಡಲ ತಡಿಯಲಿ ನಿಂದುಬಿಡದೆ ಯತಿಗಳ ಕೈಯ ಬಿಂಕದಿ ಪೂಜೆಗೊಂಬಆದಿ ಕೃಷ್ಣನ ಆಹ್ನಿಕವನು ಆಧಾರದಲಿಓದಿವಿನೋದದಲಿ ಪಠಿಪ ಜನರಿಗೆಆಧಿವ್ಯಾಧಿಗಳಟ್ಟಿ ಬಹು ಭಾಗ್ಯಗಳ ಕೊಡುವಮಾಧವನ ಕೃಪೆಯಿಂದಲಿವಾದಿರಾಜರಿಗೊಲಿದು ವಚನ ಶುದ್ಧೋಕ್ತದಲಿ ಹೇಳುವ ಜನರಿಗೆಬರುವ ದುರಿತವ ಕಳೆದು ಮೇಲಾಗಿ ರಕ್ಷಿಸಿಕೊಂಬ ಹಯವದನ 14
--------------
ವಾದಿರಾಜ
ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಉದಿಸೀದಾ ರವಿಯು ತಾನುದಿಸಿದ ಪ ಉದಿಸಿದ ರವಿಯು ತಾನೆನಿಸೀ | ಗುರುಮುದಮುನಿ ಮತವ ವಿಸ್ತರಿಸೀ | ಆಹಬುಧಜನರಂತಸ್ಥ ಬಹು ವಿಧ ತಿಮಿರವಒದೆದು ಛೇದಿಸುವಂಥ ವಿಜಯಾರ್ಯ ತರಣಿಯು ಅ.ಪ. ಸುರಮುನಿ ಪಾದವ ಭಜಿಸೀ | ಯುಗವೆರಡರೊಳ್ ಸುರಲೀಲ ನೆನಿಸೀ | ಯುಗಮೂರರೊಳ್ ನಿಕಂಪನೆನಿಸೀ | ಯುಗಮೂರೊಂದರಲಿ ಕರುವೆನಿಸೀ | ಆಹಪುರಂದರ ದಾಸರ ಗೃಹದೊಳಗುದಿಸುತ 1 ಕರಣೀಕ ಶೀನಪ್ಪ ತನು | ತನ್ನವರಪ್ರಿಯ ಸತಿಕೂಸಮ್ಮನು | ಬಲುಪರಿಪರಿ ಸೇವಿಸಿ ವರವನು | ಪೊಂದಿಎರಡೊಂದು ತನಯರುಗಳು | ಆಹಪರಿ ಪಾಲಿಸುತ್ತಲಿ ಪರಿಪರಿ ಭವಣೇಲಿಪೊರೆಯವು ಉದರವ ಸರಿಯಿತು ಕಾಲವು 2 ಬಡತನ ಭವಣೇಲಿ ಬಂದೂ | ಒಂದುಕುಡಿತೆ ಗಂಜಿಗಾಗಿ ನೊಂದೂ | ಛಾಗಿಒಡೆಯನ ಮನೆಯೊಳಗಂದೂ | ಮೆದ್ದುಒಡಲ ತುಂಬಿಕೊಂಡು ಬಂದೂ | ಆಹಬಡಗ ದಿಕ್ಕಿನ ಗಂಗೆ ಮಡುವ ಕಾಣುವೆನೆಂದುಸಡಗರದಲಿ ಪೋದ ಬಡ ಕೂಸೀಮಗದಾಸ 3 ವತ್ಸರ ತರಳ | ತನ್ನಹಿರಯರಿಗ್ಹೇಳದೆ ಪೊಳಲ | ಬಿಟ್ಟುತಿರುಗುತ ತೀರ್ಥ ಕ್ಷೇತ್ರಗಳ | ಮಿಂದುಮರಳಿ ತಾ ಮಾತಾ ಪಿತೃಗಳ | ಆಹಬೆರೆದು ಮಾನವರಂತೆ ಸಂಸಾರ ವೃತ್ತಿಲಿಚರಿಸಿದವೆರಡುಂಟು ವರುಷವ ಕಳೆಯುತ 4 ಮತ್ತೆ ತಾ ವೈರಾಗ್ಯದಲ್ಲಿ | ಹರಿಪೆತ್ತ ಗಂಗೆಯ ಸ್ನಾನದಲ್ಲಿ | ಮನತೆತ್ತು ಗಯಾದೇಶದಲ್ಲಿ | ಪಿಂಡವಿತ್ತು ವಾರಣಾಸಿಯಲ್ಲಿ | ಆಹಉತ್ತಮರ ಸಂಗ ನಿತ್ಯಸ್ನಾನ ಸಂಧ್ಯಕೃತ್ಯವನೆಸಗಿ ಸುಚಿತ್ತದಿ ಮಲಗಿರೆ 5 ಸತ್ಯ ಸ್ವಪ್ನದಿ ನರಹರಿಯು | ತನ್ನಪುತ್ರನೆಬ್ಬಿಸಿದಂತೆ ಪರಿಯು | ದಾಸರಂತೆ ರೂಪವ ತಾಳಿ ಹರಿಯು | ತನ್ನಹತ್ತಿರ ಕರೆಯುತ ಧೊರೆಯು | ಆಹಚಿತ್ತಜ ಪಿತ ಪೆತ್ತ ಸರಿತವ ದಾಂಟಿಸಿಉತ್ತಮ ಕಾಶಿಯ ವ್ಯಾಸರ ಕಂಡವ 6 ಪರಿ ಪರಿಯ | ಆಹಅಚ್ಚ ಕವನ ಪೇಳಿ ನೆಚ್ಚಿನ ಮನದವರಸ್ವಚ್ಛತನಕೆ ತಿದ್ದಿ ಅಚ್ಚ್ಯುತಗಿಂತವ 7 ಎರಡೊಂದನೇ ಬಾರಿ ಪೋಗಿ | ಕಾಶಿಪುರದಿ ಗಂಗಾಸ್ನಾನಕಾಗಿ | ಕೂಡೆಸುರನದಿ ಪೆಚ್ಚಿ ಮೇಲಾಗಿ | ಸಿರಿವರದ್ವಿಜಗಭಿಷೇಕವಾಗಿ | ಆಹಸರಿತವು ಮುಂಚಿನ ಪರಿಯಂತೆ ಪ್ರವಹಿಸೆಸುರನರೋರುಗರೆಲ್ಲ ಪರಿಪರಿ ಕೊಂಡಾಡೆ 8 ತುತಿಸುತಲಲ್ಲಿಂದ ಸೇತು | ಸ್ನಾನರತಿಯಿಂದ ಗೈಯ್ಯುತ ಹೊತ್ತು | ಹರಿಕಥೆಗಳ ಪೇಳಿ ಯಾವತ್ತು | ಜನತತಿಗೆ ಸನ್ಮಾರ್ಗವನಿತ್ತು | ಆಹತೀರ್ಥ ಕ್ಷೇತ್ರಂಗಳ ನತಿಸುತ ದಶಮತಿಮತವ ಬೀರಿದನೀತ ಸುಜನರ ಪೊರೆಯಲು 9 ಸಾರ | ಸೊಳ್ಹಾದಿಗಳ್ ಮೊದಲಾದ ಹಾರ | ದಿಂದಭೇದ ವಾದಿಯ ಮತೋದ್ಧಾರ | ಗೈದುಶ್ರೀಶ ಗೊಪ್ಪಿಸೀದ ಧೀರ | ಆಹನಾದ ಮೂರುತಿ ಗುರು ಗೋವಿಂದ ವಿಠಲನಪಾದವ ಸ್ಮರಿಸುತ್ತ ಮೋದವ ಪಡುತ್ತಿದ್ದ 10
--------------
ಗುರುಗೋವಿಂದವಿಠಲರು
ಉಪಾಧಿ ರಹಿತ ಧ್ರುವ ಆಶ್ರೈಸಿಹ್ಯ ದಾವನು ಶ್ರಯಧೇನು ನಾಸ್ತಿಕ್ಯವಗೆಲ್ಲಿಹುದು ತಾನು 1 ಇವ್ಹದಾವನು ಸುರತರುವಿನ ಬಲಿ(ಳಿ?) ಯು ಅವಗೆಲ್ಲಿಹುದುದರದ ಕಳವಳಿಯು 2 ಸುರನದಿಯಲ್ಲಿ ದಾವನ ಸಹವಾಸ ಧರೆಯೊಳಗವಗೆಲ್ಲಿಹ ಮಹಾ ದೋಷ 3 ರವಿ ಪ್ರಭೆಯೊಳು ದಾವನಿಹನು ಕೂಡಿ ಅವಗೆಗೆಲ್ಲಿಯ ಕಗ್ಗತ್ತಲೆ ನೋಡಿ 4 ದಾವ ಮಹಿಪತಿ ಗುರು ಪಾದ್ಹೊಂದಿಹ್ಯ ಅವಗೆಲ್ಲಿಹದು ತಾ ಭವಬಂಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಪ್ಪವಡಿಸಯ್ಯ ಉಡುಪಿನ ಕೃಷ್ಣ ಚೆಲ್ವಕಂ-ದÀರ್ಪನಪ್ಪನೆ ಕಣ್ದೆರೆ ಪ. ಸರ್ಪನಂಗದಲಿ ರುಕ್ಮಿಣಿ ಸತ್ಯಭಾಮೆಯರಅಪ್ಪಿಕೊಂಡಿಪ್ಪ ಬಲು ಸುಪ್ರಸಿದ್ಧಅಪ್ರತಿಮ ಗುಣಗಣಾಂಬುಧಿ ಕರುಣಾನಿಧಿಯೆಸುಪ್ರೇಮದಿಂದ ನೋಡಾ ದೇವ 1 ದೇಹಿಗಳ ನಿದ್ರೆಯನು ತಿಳುಹಿಸುವರಾರು ನಿ-ರ್ವಾಹಕನು ನೀನು ನಿದ್ರೆಯ ಕೈಕೊಳೆಆಹುತಿಗಳನುವಾದ ಅನಲಮುಖದಲಿ ನಿನಗೆಶ್ರೀಹರಿಯೆ ದುರಿತಾರಿಯೆ ದೇವ 2 ನಿದ್ರೆಯಂ ತೊರೆದು ಸಿದ್ಧಾಸನದಿ ಕುಳ್ಳಿರ್ದುಸಿದ್ಧರೆಲ್ಲರು ತಮ್ಮ ಹೃದಯಕಮಲಸದ್ಮವನು ಬೆಳಗಿ ನಿನ್ನನೆ ಅರಸುತೈದಾರೆಮುದ್ದುಮೊಗವನು ತೋರಿಸಾ ದೇವ 3 ತುಂಬಿ ಕರೆಯಕಳುಹಿದ ನಿನ್ನಮನೆಯ ಬಾಗಿಲೊಳರಸುತ್ತ ದೇವ 4 ಕಮಲಕೊಬ್ಬಿತು ಸೂರ್ಯನತಿ ಪೆರ್ಮೆಯಂ ಪೊತ್ತಕ್ರಮದಿಂದ ನಿನ್ನ ಪೂರ್ವಜಸೋಮನೊಭ್ರಮೆಗೊಂಡವನ ಪರಿವಾರಕಾಯಿತು ಸೋಲುಸುಮುಖಚಂದ್ರನೆ ಬೆಳಗಿಸಾ ದೇವ 5 ಅಮಲಜಲದಲ್ಲಿ ಮಜ್ಜನವ ಮಾಡುವೆನೆಂದುಕ್ರಮದಿಂದ ತೀರ್ಥಗಳು ಕರೆದು ನಿನ್ನ ರಮಣೀಯ ಮೂರುತಿಯ ಮನದಲ್ಲಿ ನಿಲಿಸುವಶ್ರಮವ ಸಾರ್ಥಕ ಮಾಡೊ ದೇವ 6 ಅತಿಶೀತ ಹರುಷದಿಂ ಪುಳಕ ಶೋಭಿತರಾಗಿಪ್ರತಿಕ್ಷಣದಿ ನಿನ್ನನೇ ನೆನೆದು ನೆನೆದುವ್ರತದಿಂದ ಪೇಳುವ ಶ್ರುತಿ ಪುರಾಣದೊಳಿಪ್ಪಸ್ತುತಿಯನಾಲೈಸಿ ಕೇಳಾ ದೇವ 7 ತನುವ ರಂಜಿಸಿ ಶಂಖ ಚಕ್ರೋಧ್ರ್ವಪುಂಡÀ್ರದಿಂಪ್ರಣಮಮಂ ಪೇಳಿ ಮಂತ್ರಿತ ವಾರಿಯಘನ ಮಹಿಮ ನಿನ್ನ ಹಸ್ತದಲಿ ತರ್ಪಣ ಮಾಡಲನುವಾದರಯ್ಯ ಬುಧರು 8 ಎನಲುಪ್ಪವಡಿಸಿ ಶ್ರೀಕೃಷ್ಣ ಹಯವದನ ತಂ-ಪಿನ ನಾಗಭೋಗ ವಿಸ್ತರದಿ ಕುಳಿತುವನಜಸಂಭವಸಹಿತ ವಿಬುಧರೊಡ್ಡೋಲಗದಿಮುನಿಗಳರ್ಚಿಸಿ ಮೆಚ್ಚಿಸೆ ದೇವ9
--------------
ವಾದಿರಾಜ
ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆಸಚ್ಚಿದಾನಂದನೆ ನೀನೆಂದು ತಿಳಿ ನಿನ್ನ ಎಚ್ಚರಿಕೆಚ್ಚರಿಕೆ ಪ ಈಷಣವೆಂದೆಂಬ ಕಾಡಿನೊಳಗೆ ಹೊಕ್ಕಿ ಎಚ್ಚರಿಕೆಚ್ಚರಿಕೆದೋಷಕಾರಿಗಳು ಇಂದ್ರಿಯನಾಯ್ಗಳು ಎಳೆದಾವು ಎಚ್ಚರಿಕೆಚ್ಚರಿಕೆ 1 ಅಷ್ಟಮದವೆಂಬ ಆನೆ ಕೈಗೆ ಸಿಕ್ಕಿ ಎಚ್ಚರಿಕೆಚ್ಚರಿಕೆದುಷ್ಟ ಪಂಚಕ್ಲೇಶದ ಪೊದೆಗೆ ಸಿಲುಕೀಯೆ ಎಚ್ಚರಿಕೆಚ್ಚರಿಕೆ2 ವ್ಯಸನಗಳೆಂಬ ಕುದುರೆಯ ಕಾಲೊಳಾದೀಯೆ ಎಚ್ಚರಿಕೆಚ್ಚರಿಕೆದುಶ್ಮನರಾರ್ವರ ಕಣ್ಣಿಗೆ ಬಿದ್ದೀಯೆ ಎಚ್ಚರಿಕೆಚ್ಚರಿಕೆ 3 ತಾಪತ್ರಯದ ಹಳ್ಳದಿ ಹರಿದುಹೋದೀಯೆ ಎಚ್ಚರಿಕೆಚ್ಚರಿಕೆಪಾಪವೆಂಟು ಪಾಶವೆಂಬ ಉರುಲಿಗೆ ತಗುಲೀಯೆ ಎಚ್ಚರಿಕೆಚ್ಚರಿಕೆ 4 ಸಂಸಾರ ನಂಬಲು ಕೆಟ್ಟುಹೋಗುವೆ ಎಚ್ಚರಿಕೆಚ್ಚರಿಕೆಹಂಸ ಚಿದಾನಂದ ಗುರುಹೊಂದೆ ಕಡೆಹಾಯುವೆ ಎಚ್ಚರಿಕೆಚ್ಚರಿಕೆ5
--------------
ಚಿದಾನಂದ ಅವಧೂತರು
ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ 1 ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು ಕಪಟ ಕಲುಷ ಚಿತ್ತನು ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು 2 ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ 3 ಪತಿತಪಾವನ ದೀನೋದ್ಧರಣನೆಂಬ ಬಿರುದವಾ ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ 4 ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು ಮುನ್ನಿನವರು ಉಂಡ ವೆಂಜಲ ಶೇಷವನ್ನನು ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು