ಒಟ್ಟು 216 ಕಡೆಗಳಲ್ಲಿ , 41 ದಾಸರು , 156 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಕ್ಕದೆ ಪೋಪೆಯೇತಕೆ ಮಾಂಗಿರಿರಂಗ ಪ ಸಿಕ್ಕದೆ ಪೋಪೆಯೇಕೆ ಠಕ್ಕುಮಾಡುವೆಯೇಕೆ ಅಕ್ಕರೆಯಿಂದ ನಾ ಸಕ್ಕರೆ ಕೊಡುವೆನೆ ಅ.ಪ ಚಿಣ್ಣರ ಕೂಡಾಡಿ ಕಣ್ಣುಸನ್ನೆಯ ಮಾಡಿ ಸಣ್ಣಕೊಳಲಪಾಡಿ ಬೆಣ್ಣೆಗಳ್ಳ ರಂಗಾ1 ಪಿಡಿದು ಬರುವೆನೆಂದು ಕಡಲಿನೊಳಗೆ ಮಿಂದು ಪೊಡವಿದೇವಿಯ ತಂದು ಕಡುನೊಂದುದಾಯ್ತಿನ್ನು 2 ತರಳ ಪ್ರಹ್ಲಾದನು ಕರೆಯುತಲಿಹನೇ ನಿನ್ನ ಕರದೆ ಬೆಣ್ಣೆಯನಿಟ್ಟು ಕರುಣಾಳು ಬಾರೆನಲ 3 ಕಡುನುಡಿಗಳ ಕೇಳಿ ಪಿಡಿಯಲಾರೆನೇ ನನ್ನ ಕಡೆಗಣಿಸಲಿ ಬೇಡ ಅಡಿಗೆರಗುವೆ ರಂಗಾ 4 ಮಾಂಗಿರಿಮೇಗಿಹ ಶೃಂಗಾರ ದೇವಯ್ಯ ರಂಗ ನೀನೆನ್ನಂತರಂಗ ದೇವದೇವಾ 5 ತಾಮರಸಾಕ್ಷನೆ ಕಾಮಿತ ದಾತನೆ ರಾಮದಾಸಾರ್ಚಿತ ಭೀಮವಿಕ್ರಮ ರಂಗಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಿತಗಿರೀಶ ಶ್ರೀಪತಿಯೆ ಕಾಯೋ ಯನ್ನಾ | ಕರುಣಾರಸ ಪೂರ್ಣ ಪ ಭವ ಭಂಗಾ ಅ.ಪ. ವರುಷಾ | ಕಾಣಲಿಲ್ಲ ಹರುಷಾ ||ಇಂದಿರೇಶ ತವ ಚರಣ ಸನ್ನಿಕರ್ಷಾ | ಎಂದಾಗುದೊ ಶ್ರೀಶಾ ||ವಂದಿಸೂವೆನೊ ನಾನು ನಿನ್ನ ಅನಿಶಾ | ಶ್ವೇತಾದ್ರಿ ವಾಸಾ 1 ಕಮಲ ಕಾಂಬುವಂಥ ಹದನಾ | ತೋರಿಸೊ ಜಿತ ಮದನಾ 2 ಸುರುಚಿರಾಂಗ ಶ್ರೀ ಬಿಳಿಗಿರಿಯ ರಂಗಾ | ಎನ್ನಂತರಂಗಾ ||ಮುರ ವಿರೋಧಿ ಸುರ ಸಾರ್ವಭೌಮ ಹರಿಯೇ | ಕರಿರಾಜನು ಕರಿಯೇ ||ತ್ವರದೊಳುದಿಸ್ಯವನ ಕಾಯ್ದ ದೊರೆಯೇ | ಹೀಗೆನ್ನ ಪೊರೆಯೆ ||ಗುರು ಗೋವಿಂದ ವಿಠಲ ಶ್ರೀಹರಿಯೇ | ನಿನ್ನುಪಕೃತಿ ತಾ ಮರೆಯೆ 3
--------------
ಗುರುಗೋವಿಂದವಿಠಲರು
ಸಿರಿ ನರಸಿಂಗನ ಪಾಡಿರೊ | ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ ಪ ಮೊರೆಯಿಡಾ ಬಂದ | ಕಂಭದೊಳಿಂದ | ಲೋಕಸ್ವಾಮಿ | ಅಂತರ್ಯಾಮಿ || ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ | ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ 1 ಕೊಡುವನು ಚಲುವಾ | ಭಕುತರಿಗೊಲಿವ | ಹರಿ ನಮಗೆಲ್ಲಾ | ಭಕ್ತವತ್ಸಲಾ || ಗುಣಾಂಬುಧಿ ತೇಜ | ರಾಜಾಧಿ ರಾಜ | ಕರ್ತನು ಸಖ್ಯ 2 ಕನಕಮುನೀಶ್ವರ ತಪವನು ಮಾಡಲು ಮೆಚ್ಚಿ | ಬಂದನು ಮೆಚ್ಚಿ | ಕನಕ ವರುಷವನು ಗರೆವದು ಅಂದಿನ ದಿನದಿ | ಆನಂದವನಧಿ | ಕನಕ ನೃಕೇಸರಿ ಎನಿಸಿದಾ ಅಂದಿನಾರಭ್ಯಾ | ಈತನೆ ಸಭ್ಯಾ | ನುತಿಸಲು ಸುಳಿವಾ 3 ಇದು ಪುಸಿಯಲ್ಲಾ | ವೇದಾ | ಪೇಳ್ವದು ಮೋದಾ || ಅವನೇ ದನುಜಾ | ನಮಗೀತ ತಂದೆ 4 ನಿಧಿಯೊಳು ಧನದಾ | ದಿಕ್ಕಿಲಗಾಧಾ | ಮುನಿಜನ ಸಮ್ಮತ ಶ್ರುತಿ ಉಕ್ತಿಗಳಲ್ಲಿ ಅಕ್ಕು | ಕೇಳೀವಾಕು | ಮಾಡಲು ಭಕುತಿ | ಉಂಟು ವಿರಕುತಿ | ವಿಠ್ಠಲ ನರಸಿಂಗಾ | ರಿಪುಗಜ ಸಿಂಗಾ 5
--------------
ವಿಜಯದಾಸ
ಸೀತಾಪತೇ ರಘುನಾಥ ದಯಾಳೋ ಪ ಆ ತೆರ ಚರನೂಕೈ ಪ್ರೀತಿಯೊಳಿರಿಸೈ ಮಾತಾಪಿತ ಸರ್ವ ಭೂತಾನಿ ಅರಸೈ 1 ಮಾಯಾ ನೀ ನೋಡೈ ಕಾಮಜನಕ ರಂಗಾ ಬೇಗೆನ್ನ ಕೂಡೈ 2 ನೇಷಾ ಪ್ರಸಾದೇ ತದ್ವಾಶೀಯಾಹಮ ಜೀ 3
--------------
ಚನ್ನಪಟ್ಟಣದ ಅಹೋಬಲದಾಸರು
ಹನುಮಾ ಹನುಮಾಯನ್ನೆ ಉದ್ಧರಿಸುವೆ ನೀ ಜನುಮಾ ಪ ಭಂಜನ ನಿರಂಜನ ಎನ್ನ ಗುರುವೇ 1 ಸರ್ವಾಂತರಂಗಾ | ಕಿನ್ನರ ಫಣವರ ಯಕ್ಷ ವಿಧ್ಯಾಧರ ವಂದಿತನೇ 2 ವೃಂದವನಾಳಿ ಕುಠಾರಿ | ಛಂದದಿಂದಲಿ ಮಹಿಪತಿ ನಂದನ ಸಲಹುವಾನಂದದ ಮಾರುತಿ ಮೂರುತಿಯೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೇ ನಿನ್ನಯ ಭಕ್ತಿಯದರವೊಂದುಳಿದು ನಾ ಸಿರಿಯರಸನೆ ನಿನ್ನೊಳನ್ಯ ಕೇಳೆನು ರಂಗಾ ಪ ಪತಿ ಬೇಡ ಸುತೆ ಬೇಡ ಸತತ ಶ್ರೀ ಹರಿ ನಿನ್ನ ದ್ಯಾನವ ಕೊಡಲೋ 1 ಭವ ಬೇಡ ಪತಿತ ಪಾವನ ನಿನ್ನ ಸ್ತೋತ್ರವ ಕಲಿಸೋ 2 ಕರಿ ಬೇಡ ಹಣ ಬೇಡ ಮನೆ ಬೇಡ ಸಿರಿ ಚೆನ್ನಕೇಶವನ ಮಹಿಮೆಯ ತಿಳಿಸೋ 3
--------------
ಕರ್ಕಿ ಕೇಶವದಾಸ
ಹಾರುವರಿಗೆ ಭೂಮಿಯಾ ನೀಡಿದೆನೆಂದು | ನೀರೋಳುಮನೆಯ ಮಾಡಿ ಕೊಂಡೆಯಾರಂಗಾ ಪ ಇಂದ್ರಾದಿಗಳು ಕ್ಷಣಕೊಮ್ಮೆ ಮೊರೆಯಿಡಲಾಗಿ ನಿದ್ರೆ ಕಾಣೆನೆಂದು ಸೇರಿದೆ ಗಡ್ಡೆಯಾರಂಗಾ 1 ವಿಷನುಂಡುದಾವಾಗ್ನಿ ನುಂಗಿ ತನು ಶೆಖೆದೋರೇ ಶೇಷನಂಗದ ಮೇಲೆ ಪವಡಿಸಿದೆಯಾ ರಂಗಾ 2 ಶರಣ ವಸರಕ ಎಡತಾಕಲಾರೆನೆಂದು ಗುರುಮಸಿಪತಿ ಸ್ವಾಮಿ ನಾಮ ವಿಟ್ಟೆಯಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತ ನೋಡಿ ಸಂತರ ಕೂಡೀ ಪ ಹಿತ ನೋಡಿ ಸಂತರ ಕೂಡೀ | ಮತಿ ನಿಜ ಮಾಡಿ | ಶ್ರೀ ಪತಿಯ ಕೊಂಡಾಡಿ 1 ದುರಿತ ವಿಭಂಗಾ | ನೆರೆ ಕರುಣಾಂಗದಿ | ಹೊರೆವನು ರಂಗಾ 2 ಪರಿ | ರಂಜಿಸುತಿಹ ತೇಜಃ | ಪುಂಜನ ನೋಡಿ 3 ಕಂಡಪದಕ ಹರಿದಂಡಲಿಯದೆ ನೆಲೆ | ಗೊಂಡ ವಿವೇಕದ | ಪಂಡಿತರಾಗಿ 4 ತಂದೆ ಮಹಿಪತಿನಂದನು ಸಾರಿದಾ | ಬಂದ ಜನುಮಕಿದು | ಛಂದದು ನೋಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಿಸೋ ರಂಗಾ ಕರುಣಿಸೋ ಪಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪರುಕುಮಾಂಗದನಂತೆ ವ್ರತವನಾನರಿಯೆನುಶುಕಮುನಿಯಂತೆ ಸ್ತುತಿಸಲರಿಯೆ ||ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನು ರಂಗಾ 1ಗರುಡನಂತೆ ಪೊತ್ತು ತಿರುಗಲರಿಯೆ ನಾನುಕರಿರಾಜನಂತೆ ಕರೆಯಲರಿಯೆ ||ಮರಕಪಿಯಂತೆ ಸೇವೆಯ ಮಾಡಲರಿಯೆನುಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ 2ಬಲಿಯಂತೆ ದಾನವ ಕೊಡಲರಿಯೆನು ಭಕ್ತಿಛಲವನರಿಯೆ ಪ್ರಹ್ಲಾದನಂತೆ ||ಒಲಿಸಲರಿಯೆ ಅರ್ಜುನನಂತೆ ಸಖನಾಗಿಸಲಹೋ ದೇವರದೇವಪುರಂದರವಿಠಲ3
--------------
ಪುರಂದರದಾಸರು
ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ ಪ.ಸಂತೆಯ ಬಳಗದ ಸಂಗತಿನೀಗಿಸಂತರ ಪದಪಲ್ಲವ ನೆಳಲಾಗಿಚಿಂತನೆ ಮೂರುತಿ ಚಿಂತನೆಗೊದಗಿಪ್ರಾಂತದ ಪಯಣ ಮನೋರಮವಾಗಿ 1ಚೆನ್ನಿಗ ಮೈಸುಟ್ಟರಿವ್ಯೆಂತಾಗಿಛಿನ್ನಾಗುವ ಮೈಯಂಜಿಕೆನೀಗಿನನ್ನ ರೂಹು ನನಗಿದ್ದಂತಾಗಿಚಿನ್ಮಯ ಬಿಂಬದ ಒಲುಮ್ಯೆನಗಾಗಿ 2ಬಯಲಿಗೆ ಬಿನ್ನಹವ ಮಾಡ್ಯೇನುಬಯಸುವಪರಿನೀಡುವ ದೊರೆ ನೀನುಭಯವಿಲ್ಲದೆ ಮೊರೆ ಹೊಕ್ಕೆನು ನೀಡಾಭಯವರದ ಪ್ರಸನ್ವೆಂಕಟ ಪ್ರೌಢಾ 3
--------------
ಪ್ರಸನ್ನವೆಂಕಟದಾಸರು
ಜಗಲಿಯ ಹಾಕಿದಳೆ ಬಗಳೆ ಜಗಲಿಯ ಹಾಕಿದಳೆಸೊಗಸೇನ ಹೇಳಲಿ ಶತ್ರುಗಳನೆ ತಂದುಝಗಿ ಝಗಿಸುತ ಎನ್ನಯ ಎದುರಿಗೆ ಕುಳಿತು ಕೊಳ್ಳಲುಪತಲೆಗಳು ಥರದ ಕಲ್ಲು ಒಳ್ಳೊಳ್ಳೆಯ ಎಲುವುಗಳು ಹಾಸುಗಲ್ಲುಬಲಿದ ಮಾಂಸದ ಕೆಸರನೆ ಹಾಕಿ ಮೆತ್ತಿಎಳೆದು ಹೆಣಗಳನು ತಂದು ಭರ್ತಿಯ ತುಂಬುತ1ಮೆದುಳನೆ ಮಲ್ಲವ ಮಾಡಿ ಮೇಲೆಯೆಪದರಂಗಾರವ ಮಾಡಿ ವಿಧವಿಧ ಚಿತ್ರವ ರಕ್ತದಿ ಬರೆದುತಿದಿಯ ಸುಲಿದು ಚರ್ಮವ ಹಾಸಿಗೆ ಹಾಕುತ2ಕತ್ತಿಯ ಹೆಗಲಲಿಟ್ಟು ಎನ್ನಯ ಸುತ್ತಮುತ್ತ ತಿರುಗಾಡುತ ಸತ್ಯ ಚಿದಾನಂದನ ರಾಣಿ ಬಗಳಾಮುಖಿಮತ್ತೆ ದುಷ್ಟರ ಕೊಂದು ವಿಶ್ರಾಂತಿ ಪಡೆಯಲು3
--------------
ಚಿದಾನಂದ ಅವಧೂತರು
ದುರಿತಪರಿಹರಿಸು ರಂಗಾಪರಮಪಾತಕರು ಬಂದರು ನೆರೆದು ರಂಗಾಪ.ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರುಮುತ್ತಿ ಕೊಲುವಂತೆ ಕಾಣಿಸುತದೆ ದಯಾಳುಕರ್ತನೀನಲ್ಲದಿನ್ನೊಬ್ಬ್ಬೊಡೆಯಕಾಲಮೃತ್ಯು ವಿನಯದೆಶೂಲನರಪಂಚವದನ1ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆದೀನನಾಗುವುದುಚಿತೆ ಕರುಣಗುಣ ಖಣಿಯೆಮಾನನಿನ್ನದು ಅವಮಾನ ನಿನ್ನದು ಪಾಂಡವಮಾನಿನಿಯ ಸಮಯಕೊದಗಿದ ಭಕ್ತ ಬಂಧು 2ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇಳಿರುವೆ ತಪ್ಪಿಸಿಕೊಳಲುಬೇಡ ಭುವನೇಶಉರಗಗಿರಿವಾಸ ಪ್ರಸನ್ವೆಂಕಟೇಶ ಸಂಹರಿಸು ಅಪಕಾರಿಗಳ ಸಲಹು ಸಜ್ಜನರ 3
--------------
ಪ್ರಸನ್ನವೆಂಕಟದಾಸರು
ಬಲಿಯ ದಾನವಬೇಡಿ | ಚೆಲುವಕಾರವಾಗಿದೆ |ನೆಲನಾ ನಿರಡಿಯಾ ಮಾಡಿದಾಡೆ ನಾನಾ|ಲಲಾನೆ ಮಾಡಿಯಾಲಿಟ್ಟುಶಿರಾ ವಾನೊರಾಸೂಕ್ತ | ಮೊಲೆಯಾನೂಡುವಾ ಪುಣ್ಯ ಹೀಗೆಪಡೆದಾಳೋ | ಮಗಾನೆಂದೂ ಪಮಗಾನೆಂದಾಡಿಸುವಾಳು | ಮೊಗಾನೊಡಿನಗೂವಾಳು |ಮಿಗೆ ಹರೂಪದಾಲಿ ಲೊಲಾಡುವಾಳೂ |ಜಗಾದೂರಂಗಾಗಿ | ಮೊಗ ಬಂದು ರಕ್ಷಕ |ಬಿಗಿದಪ್ಪೊ ಪುಂಣ್ಯ ಹೇಗೆ ಪಾಡದಾಳೊ 1ಪಶೂಪಾಲೆಯರೂ | ಬ್ರಂಹ್ಮವನೂ ನೂರಮುನಿಗಳು |ವಸುಧಯ ಮಲುಳಿದಾವರೆಲ್ಲಾರು | ಶಶಿಮೌಖಿಸಾವಿರಾ |ವರಹಾವಿತ್ತವಾನೆಂದೂ | ಕೊಸಾರಾನಿಡುವಾ ಪುಣ್ಯಹೇಗೆ ಪಡದಾಳೊ 2ಸಾಗಾರಾ ಸುತಿಯಾರು |ಭೋಗಿ ಯನಾನಾ |ಯೋಗಾನಿದ್ರೆಯೊಳದ್ಯ ದೇವನಾ |ಆಗಾಮಾ ಶೃತಿಗಾಳು | ಆರಾರೆ ಕಾಣದ ವಾಸ್ತುವ |ಕೂಗಿದಾಳೆ ಪುಂಣ್ಯ ಹೇಗೆ ಪಾಡದಳೋ 3ಕಾಲಲಂದ್ಹುಗೆಕಿಂಕಿಣಿ ಹೊಂನ್ನು ಕಿರೂಗೆಜ್ಜೆ |ಹಾರಾಸಾರದಾ ಕೊರಾಳಾ ಪಾದಾಕಾ | ಬಾಲದೊಡಿಗೆಸಮ್ಮಬಾಲಾನಾಯತ್ತಿಕೊಂಡು | ಹಾಲಾಕೂಡಿಸುವಾ ಪುಂಣ್ಯಹೇಗೆ ಪಾಡಾದಾಳೊ 4ತೋಳಂನಾಡೆಲೊ ಕೃಷ್ಣ ಕೊಳಂನಾಡಿಸುಕಾಲಿ |ಭಾಮೆರೂಕಮಿಣಿ ಬಿಗಿದಪ್ಪುವಾ |ಭಾಮರೂಕೂಮಿಣಿ ಬಿಗಿದಾಪ್ಪುವಾ ನೆಲನಾ ತೊಳಂನಾಡಿಸುವಪುಣ್ಯ ಹೇಗೆ ಪಾಡದಾಳೊ 5ಆನೆಯೊಡೆಲೊ ಕೃಷ್ಣ | ಆನೆಯೊಡೆನೂಲಾಲಿರಾಯರಾಯರೂಗಾಗೆಲಿದಂತ | ರಾಯಾ ರಾಯಾಕೂ ಗಾಲಾ ಪಟ್ಟದಾನೆಯಾಡಿಸುವ ಪುಂಣ್ಯಹೇಗೆ ಪಡದಾಳೋ 6
--------------
ಪುರಂದರದಾಸರು
ಮಂಗಲ ಮೂರುತಿಗೇ ನಮೋ ನಮೋ ಹರೀಮಂಗಲ ಚರಿತಗೆ ನಮೋ ನಮೋಪರಂಗಾ ಕೃಪಾಂಗಾ ಶ್ರೀರಂಗಾ ನರಸಿಂಹಗೆಅಂಗಾ ಶೃಂಗಾರನಿಗೆ ನಮೋ ನಮೋಅ.ಪಶೇಷಶಯನ ವಿಧೀಶ ಸುರಾರ್ಚಿತಕೇಶವ ತ್ರೈಜಗದೀಶ ಜಲಜನಾಭದಾಸರ ಸಾಸಿರ ದೋಷ ವಿನಾಶನಶ್ರೀಶ ಸಂದೇಶಗೆ ನಮೋ ನಮೋ1ಮಾರಜನಕದೈತ್ಯಾರಿ ಚಕ್ರಾಂಕಿತಸಾರಸಾಕ್ಷ ಯತಿ ವಾರವಂದಿತಚರಣಹಾರಾ ಹೀರಾವಳಿ ಕೇಯೂರವ ಧರಿಸಿದಧೀರ ಉದಾರಿಗೆ ನಮೋ ನಮೋ2ಮಂದರೋದ್ಧರ ಭವಬಂಧ ವಿಮೋಚನಇಂದಿರೆಪತಿ ಮಂದಾಕಿನಿಪಿತ ದೇವಾಸಿಂಧುಮಂದಿರದಲಿ ನಿಂದ ಗೋವಿಂದಗೆನಂದನ PÀಂದಗೆ ನಮೋ ನಮೋ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಮತ್ತವನಲ್ಲೊ ಮುರಾರಿ ನಿನಗೆ ನಾಮತ್ತವನಲ್ಲೊ ಮುರಾರಿ ನಿನ್ನಭೃತ್ಯರ ಭೃತ್ಯರ ಭೃತ್ಯರ ಭೃತ್ಯನಿಗೆತ್ತಣ ಸ್ವಾತಂತ್ರ್ಯ ಸಲಹಯ್ಯಶೌರಿಪ.ರಂಗಾ ನೀ ಕೊಳ್ಳದ ಬಂಗಾರ ತಳಿಗ್ಯೂಟನುಂಗುವ ಮತ್ತವನಲ್ಲೊರಂಗಾ ನಿನ್ನ ಮರೆದಂಗನೆಯರನಾಲಂಗಿಸಿ ಮತ್ತವನಲ್ಲೊರಂಗಾ ನಿನ್ನೊಲುಮೆಯ ಡಿಂಗರರಂಘ್ರಿಗೆರಂಗದೆ ಮತ್ತವನಲ್ಲೊರಂಗಾ ನಿನ್ನೆಂಜಲೆನ್ನಂಗೈಯೊಳುಂಡು ರಾಜಂಗಳನುಡುಗುವ ಬಡವ ನಾನಲ್ಲದೆ 1ನಾಥನೆ ನಾನೆಂದು ಮಾತು ಕಲಿತುಖಳವ್ರಾತಸಂಗದಿ ಮತ್ತವನಲ್ಲೊನಾಥ ನಿನ್ನ ಮೀರಿದಾತನುಂಟೆಂದು ನಿರ್ಭೀತಿಲಿ ಮತ್ತವನಲ್ಲೊನಾಥ ನಿನ್ನ ಗುಣಖ್ಯಾತಿ ಹೊಗಳದನ್ಯಸ್ತೌತ್ಯದಿ ಮತ್ತವನಲ್ಲೊನಾಥ ನಿನ್ನಡಿಯ ತೀರಥವೆ ಗತಿಯೆಂದುಯಾತನೆಗಂಜುವ ಬೆದರುಗುಳಿಯಲ್ಲದೆ 2ತಂದೆ ನೀ ಮಾರಿದರೊಂದೊಪ್ಪು ಕೊಂದರೊಪ್ಪೆಂದಿಗೆ ಮತ್ತವನಲ್ಲೊತಂದೆ ನಿನ್ನ ಮನೆ ಹೊಂದಿದಟ್ಟಣೆಗೈದಿಬಂಧಿಸು ಮತ್ತವನಲ್ಲೊತಂದೆ ನಿನ್ನಾಯುಧ ಸಂದು ಸಂದಿಗೆ ಕಾಸಿತಂದಿಡು ಮತ್ತವನಲ್ಲೊತಂದೆ ಪ್ರಸನ್ನವೆಂಕಟಿಂದಿರೇಶನೊಬ್ಬ ಅಹುದೆಂದ ಸೊಕ್ಕೊಂದುಳ್ಳವನಲ್ಲದೆ 3
--------------
ಪ್ರಸನ್ನವೆಂಕಟದಾಸರು