ಒಟ್ಟು 1059 ಕಡೆಗಳಲ್ಲಿ , 98 ದಾಸರು , 892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ ಸಾನು ರಾಗದಿ ಹರಿಯ ಸೇವಿಸುತಲಿರುವಿ ಪ. ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ ನೀನಾಗಿ ಶಂಕುಚಕ್ರ ಗದಾ ಪದ್ಮ ನೀನಾಗಿ ಶಂಕೆ ಇಲ್ಲದೆ ಕಿಂಕರಳು ನೀನಾಗಿ ಹರಿಸೇವೆಗೆ ಪಂಕಜಾನಾಭನ್ನ ಸೇವಿಸುತಲಿರುವಿ 1 ಅಕ್ಷರಳು ನೀನಾಗಿ ಹರಿಯ ವಕ್ಷಸ್ಥಳವನೇ ಸೇರಿ ಈ ಜುತ ಹರಿಯ ಪರಮ ಸಂತೋಷದಿಂದ ಲಕ್ಷ ಕೋಟಿ ಕೋಟಿ ಬ್ರಹ್ಮಾಂಡರೂಪದಲ್ಲಿರುವ ಪಕ್ಷಿವಾಹನನ ನೋಡಿ ವೆರಗಾಗುತಲಿರುವಿ 2 ರಾಮನಾ ಸತಿಯಾಗಿ ಪ್ರೇಮದಿಂದಲಿ ಈಗ ಕಾಮನಯ್ಯನ ಕಾರುಣ್ಯದಿಂದ ರಮಾವಲ್ಲಭವಿಠಲನ ತೊಡೆಯ ಮೇಲೆ ಕುಳಿತು ಸ್ವಾಮಿಗೆ ಸತಿಯಾಗಿ ಸೇವಿಸುತಲಿರುವಿ 3
--------------
ಸರಸಾಬಾಯಿ
ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1 ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2 ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು ದಡದಡನೆ ಬಂದೆಯೊ ಮಡದಿಗ್ಹೇಳದಲೆ 3 ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4 ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ ಅಂದು ಇಹಸುಖದಿ ಆನಂದ ಪಡುತಿರಲು ಬಂದರಾಗ ಯಮಭಟರು ನಿಂದು ಬಾಧಿಸುತಿರಲು ಕಂದನಾರಗನೆನಲು ಅಂದು ಸಲಹಿದೆಯೊ 5 ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು ತಕ್ಕವರಗಳನಿತ್ತು ತಕ್ಕೈಸಿ ಅಣುಗನನು ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6 ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ ಶ್ರೀಪತಿಯ ರಕ್ಷಿಸಿದಿ ಆಪನ್ನಜನರ ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7 ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ ಕಾಳದೇವಿಯರಮಣ ಕಾಲಿಗೆರುಗುವೆನು ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ ಭಾಳ ಸುಖಹರುಷಗಳ ಲೀಲೆ ತೋರಿಸುವ 8 ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ ಕಮಲಸಂಭವಜನಕ ಕಮಲನಾಭ ವಿಠ್ಠಲ ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
--------------
ನಿಡಗುರುಕಿ ಜೀವೂಬಾಯಿ
ಏನು ಸುಖವಯ್ಯ ಪ ಇನ್ನೇನು ಪರಗತಿಯಹುದು ಮುಂದೆಅ.ಪ ನಾನಾವಿಧ ದುಃಖಗಳಲಿ ಜ್ಞಾನಶೂನ್ಯನಾಗುತ ವಿಷ- ಯಾನುಭವದಿ ವ್ಯಥೆ ಪಡುವವಗೆ 1 ಮಾಳಿಗೆ ಮೇಲೋಡಾಟವು ನಾಳೆಬಹುದು ಕಷ್ಟವು ಎಂ- ಕೇಳದೆ ಗರ್ವಿಸಿ ಮೆರೆವವಗೆ 2 ಭದ್ರವು ತನಗೆಂದು ತಿಳಿದು ಕ್ಷುದ್ರ ಮಾರ್ಗದಲಿ ತಿರುಗಿದ ದ- ರಿದ್ರದಿ ಹಂಬಲಿಸುವವಗೆ 3 ಮಡದಿ ಮಕ್ಕಳೆಂತೆಂಬುವ ತೊಡರೊಳು ಬಾಯ್ಬಿಡುತಿರುವವಗೆ 4 ಹರಿಕೊಟ್ಟ ಮಹಾಭಾಗ್ಯದಿ ಪರಮತೃಪ್ತನಾಗಿರದಲೆ ಗುರುರಾಮವಿಠಲನ ಮರೆದು ಇರುಳು ಹಗಲು ಚಪಲ ಪಡುವಗೆ 5
--------------
ಗುರುರಾಮವಿಠಲ
ಏನೆಂದು ಪೇಳಲಿ ಹರಿಶರಣರ ನಿಜ ಆನಂದ ಸೌಭಾಗ್ಯದಲಂಕಾರ ಪ ಆನಂದ ಪರಮ ಆನಂದ ಹರಿಧ್ಯಾ ನಾನಂದ ಸಂಪದ ಶೃಂಗಾರ ಅ.ಪ ಮಾಧವನ ನಾಮಮಕುಟಿಟ್ಟಹ್ಯರು ಮಧು ಸೂದನನ ಭಕ್ತಿ ಕವಚ ತೊಟ್ಟಿಹ್ಯರು ಯಾದವನ ಜಪಮಾಲ್ಯ್ಹಾಕಿಹ್ಯರು ಯ ಶೋದ ಬಾಲನ ದಯ ಪಡೆದಿಹ್ಯರು 1 ಶ್ರೀಶನ ಧ್ಯಾಸಶಸ್ತ್ರ ಧರಿಸಿಹ್ಯರು ದೋಷ ರಾಶಿಪರ್ವತ ತರಿದೊಟ್ಟಿಹ್ಯರು ಪಾಶ ಜೈಸಿ ನಿರ್ಭೀತಾಗಿಹ್ಯರು 2 ಸರಕು ತುಂಬಿಹ್ಯರು ನರ ಹರಿ ಪ್ರೇಮ ನೌಕೆ ಏರಿಹ್ಯರು ವರದ ಶ್ರೀರಾಮಮಂತ್ರ ಪಠಿಸುವರು ಭವ ಶರಧಿ ಸುಲಭದಿಂದ ದಾಂಟುವರು 3
--------------
ರಾಮದಾಸರು
ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ ಸಾಧಿಸು ಮುಕ್ತೀಕರ ಪ ನೊಂದನು ಮಾಡದಿರೆ ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು ಪಾಲಿಸೋ ಹರಿಯೇ 1 ಕುಟ್ಟಿ ಕೊಂದರೆ ಪಣೆಯ ನಿನ್ನಿಷ್ಟವಮನ ದಣಿಯ ಪಡೆದಷ್ಟು ಉಣ್ಣಬೇಕಲ್ಲದೆ ಪೂಜಿಸೋ ಹರಿಯೆ 2 ಮಾತ್ರವು ಸುಖವಿಲ್ಲ ಜಗದೇಕ ವಂದ್ಯನ ನೆನೆಸು ಶ್ರೀ ಲಕ್ಷ್ಮೀಶನ ಭಜಿಸಿದರೆ ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು 3
--------------
ಕವಿ ಪರಮದೇವದಾಸರು
ಏಳು ಲೋಕದಲಿ ಹೇಳುವರು ಅವರಕೀರ್ತಿಕೇಳಿ ಕೇಳಿ ಬಲ್ಲೆವಮ್ಮ ದೂತೆ ಬಹಳ ಬಹಳ ಭಾಗ್ಯವೇನೆ ದೂತೆ ಹೇಳಲ್ವಶವಲ್ಲವೇನೆ ದೂತೆ ಪ. ಕೃಷ್ಣನಂಘ್ರಿ ಕಮಲದಲೆ ನಿಷ್ಠನಾಗಿ ಧರ್ಮರಾಯ ಅಷ್ಟು ರಾಜ್ಯನಾಳುವನೇನ ದೂತೆ 1 ದಿಟ್ಟ ಧರ್ಮರಾಯ ದ್ರವ್ಯ ಶ್ರೇಷ್ಟ ದ್ವಿಜರಿಗೆ ಕೋಟಿಕೊಟ್ಟು ಕೊಟ್ಟು ಕಳಿಸೋನೇನೆ ದೂತೆ 2 ಮಾಧವನ ಭಕ್ತರಿಗೆ ಆದರದಿ ದ್ರವ್ಯ ಸಹಿತಗೋದಾನಗಳು ಕೊಡುವೊನೇನೆ ದೂತೆ 3 ನೀಲವರ್ಣನ ಭಕ್ತರಿಗೆ ಸಾಲಿಗ್ರಾಮ ಕೋಟಿ ಲಕ್ಷಮ್ಯಾಲೆ ದ್ರವ್ಯ ಕೊಡುವೋನೇನೆ ದೂತೆ 4 ಶ್ಯಾಮವರ್ಣನ ಭಕ್ತರಿಗೆ ಪ್ರೇಮದಿಂದ ದ್ರವ್ಯ ಸಹಿತ ಭೂಮಿದಾನ ಕೊಡುವೊನೇನೆ ದೂತೆ5 ಪನ್ನಂಗಶಯನನ ಭಕ್ತರ ಮನ್ನಿಸಿ ದ್ರವ್ಯಗಳಿಂದ ಕನ್ಯಾದಾನ ಮಾಡೋನೇನೆ ದೂತೆ 6 ಉತ್ತಮ ದ್ವಿಜರಿಗೆ ರಾಯ ಮುತ್ತು ಮಾಣಿಕರತ್ನ ಸಹಿತಛತ್ರ ಚಾಮರ ಕೊಡುವೋನೇನೆ ದೂತೆ 7 ಆನೆ ಕುದುರೆ ಅಂದಣವು ನಾನಾ ಭೂಷಣಗಳು ವಸ್ತ್ರಜ್ಞಾನಿಗಳಿಗೆ ಕೊಡುವೊನೇನೆ ದೂತೆ 8 ಸಂಪತ್ತು ದ್ವಿಜರಿಗೆ ಕೊಟ್ಟು ದಂಪತ್ತು ಪೂಜೆಗಳ ಮಾಡಿಗುಂಪು ಗುಂಪು ಕಳುಹೋನೇನೆ ದೂತೆ 9 ಮಿತಿ ಇಲ್ಲದೆ ಅನ್ನ ಮಧ್ವಮತದ ಜನಕೆ ಕೊಟ್ಟುಲಕ್ಷ್ಮೀಪತಿಗೆ ಅರ್ಪಿಸುವನೇನೆ ದೂತೆ 10 ಯದುಪತಿಯ ಭಕ್ತರಿಗೆ ಉದಕ ಪಾತ್ರೆ ಕೊಟ್ಟುರಾಯ ಅಧಿಕ ಕೀರ್ತಿ ಪಡೆಯುವನೇನೆ ದೂತೆ11 ತುಷ್ಟರಾಗಿ ಆಶೀರ್ವಾದ ಕೊಟ್ಟುರಾಯಗೆ ದ್ವಿಜರು ಕೃಷ್ಣಗರ್ಪಿಸೆಂಬೋರೇನೆ ದೂತೆ 12 ರತಿ ಇಟ್ಟು ರಾಮೇಶನಲ್ಲೆ ವ್ರತವ ಕೋಟಿ ಮಾಡಿರಾಯಕೃತ ಕೃತ್ಯನಾಗುವನೇನ ದೂತೆ13
--------------
ಗಲಗಲಿಅವ್ವನವರು
ಒಡಲೆರಡಂತೆ ಅಸುವೊಂದಂತೆ ನುಡಿಯಿದು ನಿಜವೇ ಪೇಳೇ ಗೋಪಮ್ಮ ಪ ನಡೆ ನುಡಿ ಭಾವಗಳೊಂದೇಯಂತೆ ಹುಡುಗನೇನೇ ಕೃಷ್ಣ ಪೇಳೇ ಗೋಪಮ್ಮ ಅ.ಪ ಸೋದರಿಯರು ಇದ ಹೇಳುವರಮ್ಮ ನಾದ ನರ್ತನ ದೇಹಕಾಂತಿಗಳಲ್ಲಿ ಭೇದವಿಲ್ಲೆಂಬರು ನಿಜವೇನಮ್ಮಾ 1 ಬಾಲೆಯು ತಾನೆ ಗೋಪಾಲನೆನುವಳಂತೆ ಬಾಲಕೃಷ್ಣನು ರಾಧೆ ತಾನೆಂಬನಂತೆ ಬಾಲನಾರಿದರಲ್ಲಿ ಬಾಲೆಯಾರಿವರಲ್ಲಿ ಮೂಲತತ್ವವ ನೀನೆ ಹೇಳೇ ಗೋಪಮ್ಮ 2 ಯುಗ ಯುಗದಲ್ಲಿ ತಾನವತರಿಸುವ ಕೃಷ್ಣ ಜಗದೀಶ್ವರನೆ ತಾದಿಟವಮ್ಮ [ಮಿಗೆ] ಭಾಗ್ಯವೆ ನಿನ್ನದಾಗಿಹುದಮ್ಮ 3 ನಿರುಪಮ ಭಕ್ತಿಯಮೂರ್ತಿಯು ರಾಧೆ ಮುರಳೀಧರನಲಿ ಒಂದಾಗಿಹಳು ಅರಿತುದ ಪೇಳ್ವೆನು ಮಾಂಗಿರಿರಂಗನ ಶರಣರಿಗೀತತ್ವ ಕರಗತವಮ್ಮಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ ಕೊಡು ಎನಗೆ ದೃಢ ಪದವಿ ಕಡಲಶಯನಾ ಪ ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ ಅತಿ ರೋಷದಿಂದವನ ಹೊಯಿದೆಬ್ಬಿಸೆ ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ 1 ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ ವಿಂದ ನಾರಾಯಣ ಕೃಷ್ಣ ವಿಷ್ಣು ಇಂದಿರಾರಮಣ ಇನಕುಲತಿಲಕ ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ2 ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ ಜಾತಿ ವಧುವಿಗೆ ಸೋತು ಕೆಟ್ಟು ಯಮನ ದೂತರನ ನೋಡಿ ಕಂಗೆಟ್ಟು ಮಗನನು ಕರಿಯೆ ಪ್ರೀತಿಯಲಿ ವೈಕುಂಠ ಪದವಿ ಕೊಡಲಿಲ್ಲವೇ 3 ವನಿತೆ ಪತಿವ್ರತವಾನಂತನನುಚರಿಸಿ ಬಂದಿರಲು ಮನದ ಖೇದವ ತಾಳಿ ಹರಿದು ಬಿಸುಟೆ ಮುನಿಪುಂಗ ಅಡವಿಯನು ತೊಳಲಿ ನೆಂದು ಬಿದ್ದಿರಲು ಪುನರ್ವಸು ಸ್ಥಾನವು ಕೊಡಲಿಲ್ಲವೆ4 ಶೌರ್ಯದಲಿ ಅಬ್ಧಿಯನು ಹಾರಿ ಲಂಕೆಯ ಸುಟ್ಟು ಧೂರ್ಯದಲಿ ರಕ್ಕಸರನೊರಿಸಿ ಬಿಸುಟೂ ಕಾರ್ಯದಲಿ ಹನುಮಂತ ನಿನ್ನ ಮೆಟ್ಟಿಸೆ ಒಲಿದು ಸೂರ್ಯಭಾಂದವಗೆ ಜನಪದವಿ ಕೊಡಲಿಲ್ಲವೆ 5 ಸೋದರಗೆ ಬುದ್ದಿಯನು ಪೇಳೆ ಕೇಳದೆಯಿರಲು ಪಾಧಾರಿ ದಾಟಿ ನಿಮ್ಮ ಸೇವಿಸಿ ಕಾದಿ ರಾವಣನ ಛೇದಿಸಿ ಲಂಕಾಪುರ ಪದವಿ ಪರಿಯಂತ ಕೊಡಲಿಲ್ಲವೆ 6 ಚಿತ್ತದೊಳು ಆವಾಗ ನಿನ್ನ ಧ್ಯಾನವ ಮಾಡಿ ವಿತ್ತಾದಿ ದಾನಗಳು ಮಿತಿಯಿಲ್ಲದೇ ಅತ್ಯಂತ ಕೊಡುವವನ ಮೂರು ಪಾದವ ಬೇಡಿ ಭಕ್ತಗೆ ನಲಿದು ಸುರಪದವಿ ಕೊಡಲಿಲ್ಲವೆ 7 ಮಾನಿನಿಯ ಸೀರಿಯನು ಸಭೆಯೊಳಗೆ ದುರುಳರು ಅಭಿ ಮಾನ ಭಂಗವ ಮಾಡಿ ಸುಲಿವುತಿರಲು ಶ್ರೀನಾಥ ಕೇಶವ ಮುಕುಂದನೆಂದು ಮೊರೆ ಇಡೆ ನೀನರಿತು ಅಕ್ಷಯಾಂಬರ ಕೊಡಲಿಲ್ಲವೆ8 ಬಡತನ ಉಳ್ಳವನಾಗಿ ಕ್ಲೇಶದಲಿ ಸುಧಾಮ ನಡುಗುತಲಿ ನಿನ್ನ ಪಟ್ಟಣಕೆ ಬರಲು ಹಿಡಿತುಂಬಿ ಅವಲಕ್ಕಿಗೆ ಸಂತೃಪ್ತನಾಗಿ ಕಡೆಯಿಲ್ಲದೈಶ್ವರ್ಯ ಪದವಿ ಕೊಡಲಿಲ್ಲವೆ 9 ಸರಸಿಯೊಳು ಬಾಲಕನ ನೆಗಳಿ ಪಿಡಿದು ನುಂಗೆ ಗುರುದಕ್ಷಿಣವ ಬೇಡೆ ಸಾಂದೀಪನು ಭರದಿಂದ ಪೋಗಿ ಕೃತಾಂತನೊಳು ಭೂ ಸುರಗೆ ಸುಪುತ್ರ ಪದವಿ ಕೊಡಲಿಲ್ಲವೆ 10 ಭುಜಕರೆಲ್ಲರು ನಿನಗೆ ಭಾಗ್ಯವನು ಕೊಡಲಿಲ್ಲ ಭಜಿಸಿದರವರು ತಮ್ಮ ತಕ್ಕ ತೆರದಿ ಭಜಿಸುವೆನು ನಿನ್ನ ತಕ್ಕಂತೆ ದೃಢ ಪದವಿಕೊಡು ಸಿರಿ ವಿಜಯವಿಠ್ಠಲನೆ11
--------------
ವಿಜಯದಾಸ
ಒದಗಿ ಬಂದಿತು ಯೋಗ ಒದಗಿ ಬಂದಿತು ಯೋಗ ಪ ಪದುಮೆಯರಸನು ರಥದೊಳಿರುವ ದರುಶನ ಭಾಗ್ಯ ಅ.ಪ ಭುಜಗಶಯನನು ದಿವ್ಯ ರಜತ ರಥದಲಿ ಬರಲು ಸುಜನರೆಲ್ಲರು ಸೇರಿ ಭಜನೆ ಮಾಡುವ ಭಾಗ್ಯ 1 ಅಂಗನಾಮಣಿಯರೆ ರಂಗವಲ್ಲಿಯೆ ಎತ್ತಿ ಮಂಗಳಾಂಗನು ದೀರ್ಘ ಮಾಂಗಲ್ಯವನೆ ಕೊಡುವ 2 ಬಾಲಕರ ಸಡಗರ ಬಾಲೆಯರ ವೈಯ್ಯಾರ ಬಾಲ ವೃದ್ಧರು ಸ್ವಾಮಿಯೋಲಗದಿ ಸಹಕಾರ 3 ಜಯಘೋಷಗಳ ಮಾಡೆ ಭಯಗಳನು ಬಿಡಿರಿ ಮನ ಬಯಕೆಗಳ ಆನಂದಮಯನು ನೀಡುವ ನಗುತ 4 ತನ್ನಿ ಫಲಕುಸುಮಗಳ ಧನ್ಯರಾಗಿರಿ ಕಣ್ಣಾರ ನೋಡಿ ಪ್ರಸನ್ನ ಶ್ರೀ ನಿಲಯನನು 5
--------------
ವಿದ್ಯಾಪ್ರಸನ್ನತೀರ್ಥರು
ಒಬ್ಬರ ಮಾತ್ಯಾಕೆ ನಾಲಗೆ ನೀನು ಉಬ್ಬದೆ ಸುಮ್ಮನಿರು ನಾಲಗೆ ಪ ಮಬ್ಬಿನಿಂದ ನೀ ಒಬ್ಬರ ಮಾತಾಡಿ ಕೊಬ್ಬನಿಂ ಕೆಡಬೇಡ ನಾಲಗೆ ಅ.ಪ ಮಂದಿ ಮಾತಾಡಲು ನಾಲಗೆ ನಿನಗೆ ಬಂದ ಭಾಗ್ಯವೇನು ನಾಲಗೆ ಒಂದು ಅರಿಯದೆ ಮನಬಂದಂತೆ ಮಾತಾಡಿ ಅಂದಗೆಡಲಿ ಬ್ಯಾಡ ನಾಲಗೆ 1 ನಿಂದೆಯಾಡಬೇಡ ನಾಲಗೆ ನೀನು ಕುಂದುವಡೆಯ ಬೇಡ ನಾಲಗೆ ಒಂದಿನ್ಹೋಗ್ವುದು ನಿನಗೆಂದಿಗೆ ತಪ್ಪದು ಮುಂದಿನ ಸುಖ ನೋಡು ನಾಲಗೆ 2 ಸತ್ಯ ತಪ್ಪಬೇಡ ನಾಲಗೆ ನೀನ ಸತ್ಯ ನುಡಿಯ ಬೇಡ ನಾಲಗೆ ಮೃತ್ಯುಗೀಡಾಗ ಬ್ಯಾಡ ನಾಲಗೆ 3 ಸುಳ್ಳನಾಡಬೇಡ ನಾಲಗೆ ಸದಾ ಒಳ್ಳೆ ಮಾತಾಡು ಕಂಡ್ಯ ನಾಲಗೆ ಸುಳ್ಳು ಈ ಜಗಕೆ ಮಳ್ಳನಾಗಿ ಯಮ ಕೊಳ್ಳಕೆ ಬೀಳ ಬ್ಯಾಡ ನಾಲಗೆ 4 ಹಾಳುಗೋಜ್ಯಾಕೆ ಕಂಡ್ಯ ನಾಲಗೆ ಕಾಲ ಹೇಳಿ ಬರದು ನಿನಗೆ ನಾಲಗೆ ಶೀಲಮನಸಿನಿಂದ ಪಾಲ ಶ್ರೀರಾಮಪಾದ ಕಾಲತ್ರಂiÀiದಿ ನೆನೆ ನಾಲಗೆ 5
--------------
ರಾಮದಾಸರು
ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ಪ ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ ವರ್ತಿಯೆಂಬಾ ಬಿರುದನು ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು ಗುತ್ತಿರ್ದಡೇನು ಭಾಗ್ಯಾ ಮತ್ತದೆನಗಾರ್ಜಿತವೆ ಸತ್ತವರ ಸಂಪದವ- ನತ್ತಲೇ ಕಳುಹಿಕೊಡದೆ ಇತ್ತಪರೆ ನಿನ್ನ ದಾಸನುದಾಸರಿಗೆ ಸೇ ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1 ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ ಕಿರುನುಡಿಯ ಮೀರದಿರಲು ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು ಬಿರುದುಗಳು ಮೆರೆಯುತಿರಲೂ ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು ಪಿರಿಯರೆಲ್ಲರು ಪೊಗಳಲೂ ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2 ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ ಸಕರೆಯನು ನಾನೊಲ್ಲೆನೂ ಭಕತವತ್ಸಲನೆ ಭಾಗವತಲೋಲುಪನೆ ದುಃ ಖಕೆ ಕಾರಣವಿಲ್ಲವೆ ಅಕಳಂಕ ಚರಿತನೆ ಆದಿನಾರಾಯಣನೆ ಮಕರಧ್ವಜನ ತಾತನೆ ಸುಖವೀಯೊ ವೈಕುಂಠ ವೇಲಾಪುರಾಧೀಶ ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಕಂಜನಯನನ ಕಂಡೆ ಕಾಮನಯ್ಯನ ಪ. ಮಂಜುಗುಣಿಯೊಳಿಪ್ಪನ ತಿಮ್ಮಪ್ಪನಅ.ಪ ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟಂಬುಚಕ್ರವಕಟ್ಟಿದ ಕಠಾರಿಯಿಂದ ದುಷ್ಟರ ಹುಡಿಗುಟ್ಟುವ 1 ಚಕ್ರ ಶಂಖಧರನಾಗಿ ಕಕ್ಕಸರ ರಕ್ಕಸರಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ 2 ಆಗಮವೈರಿಯನು ಕೊಂದಾಗ ಹಯವದನನ್ನಈಗ ಮಾನಿಸರಿಗೆ ಸೌಭಾಗ್ಯವೀವ ದೇವನ3
--------------
ವಾದಿರಾಜ
ಕಂಡು ಎಂದಿಗೆ ಧನ್ಯಳಾಗುವೆ ನಾನು ಪಾದ ಪುಂಡರೀಕವನೂ ಪ. ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ ಪಾಂಡವರ ಪ್ರಿಯ ಬಂಧು ನೆಲಸಿದಂಥಾ ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ 1 ಕೋಮಲದ ಚರಣಕಭಿನಮಿಸಿ ಕರಯುಗದಿಂದ ಶ್ಯಾಮವರ್ಣನ ಪಾದಕಮಲ ಮುಟ್ಟೆ ಆ ಮಹಾ ಆನಂದ ಅನುಭವಿಪ ಭಾಗ್ಯವನು ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ 2 ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ ಆಪಾದ ಮೌಳಿ ಈಕ್ಷಿಸುತ ಹೃದಯದಲಿ ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ ಗೋಪಾಲಕೃಷ್ಣವಿಠಲನ ಎಂದು ಕಾಂಬೆ 3
--------------
ಅಂಬಾಬಾಯಿ
ಕಂಡು ಧನ್ಯನಾದೆ ಭೂಮಂಡಲದೋಳ್ ಪ ಶ್ರೀ ಗುರುಸಾರ್ವಭೌಮ ರಾಘವೇಂದ್ರರಾ 1 ಕಲಿಯುಗದೋಳ್ ಭಕ್ತಜನರಾ ಉದ್ಧರಿಸಬೇಕು ಎಂಬ ಮನದಿ ವರಮಂತ್ರಾಲಯದೊಳ್ ಬಂದು ನಿಂದಿಹ ಯತಿವರರಾ 2 ಮಂಗಳಮೂರುತಿ ರಾಘವೇಂದ್ರರ ಬೃಂದಾವನ ಮನದಣೆಯೆ 3 ವಿಶಿಷ್ಟ ಜನರ ಕಷ್ಟಗಳನು ನಿಮಿಷಮಾತ್ರದಿ ಕಳೆದು ಸಲಹುವ ಶ್ರೇಷ್ಟ ಗುರುಗಳ ದಿವ್ಯವಾದ ದರ್ಶನ ಭಾಗ್ಯಾ ದೊರೆಕಿತಿಂದು 4 ಆದಿವ್ಯಾಧಿಗಳೆಲ್ಲ ಹರಿಸಿ ಅಂಧ ಬಧಿರ ಮೂಕತ್ವ ತೊಲಗಿಸಿ ಬಂದ ದುರಿತಗಳೆಲ್ಲ ಓಡಿಸಿ ಕಂದನಂದದಿ ಸಲಹುವ ಗುರುಗಳಾ5 ದಿನದಿನದೊಳ್ ಇವರ ಮಹಿಮೆ ಅಧಿಕವಾಗುತಿರಲು ಕಂಡು ಹಿಂಡು ಹಿಂಡಾಗಿ ಬರುತಲಿಹರೂ 6 ಹೆಜ್ಜೆ ಹೆಜ್ಜೆಗೆ ವಂದಿಸುತಲೀ ದಂಡೆ ಮುಡಿ ಉರುಳುತಲೀ ಮಂಡೆಬಾಗಿ ನಮಿಸತಲಿ ಬಿಡದೆ ರಾಯರ ಕೊಂಡಾಡುತಲೀ 7 ಜನರೆನರವ ಕೊಡುತಾ ಕೊಡುವ ದಾತಾ 8 ನಿತ್ಯ ನಿತ್ಯದಿ ಬ್ರಾಹ್ಮಣರ ವೇದ ಪುರಾಣ ನಡೆಯುತಿರುವುದು ಕೇಳಿ ಭಕ್ತಿಯಿಂದ ಜನರಾನಂದ ಭರಿತರಾಗುತಿಹರು 9 ಕೇಳುತಿಹುದು ಮಂತ್ರಘೋಷ ಪೇಳುತಿಹ ಪುರಾಣ ರಹಸ್ಯ ನೀಡುತಿಹರು ಗುರೂಪದೇಶ ಎಮಗಾಯಿತಿಂದು ಬಹುಸಂತೋಷ10 ಗುರುಗಳ ಮನಸಾರಾ11 ಬಂದ ಭಕ್ತಬೃಂದಕೆಲ್ಲ ಬೇಡಿ ದೊರಗಳ ನೀಡುತ ಸಲಹಿ ಉಣಿಸಿದಣಿಸಿ ಹರಸಿ ಅವರ ಆನಂದದಿಂದ ಕಳುಹುತಿಹರು 12 ಭಕ್ತರಸವ ಪಾನಮಾಡಿಸಿ ಮುಕ್ತಿ ಮಾರ್ಗಕೆ ದಾರಿ ತೋರಿಸಿ ಕರ್ತೃ ಶ್ರೀಹರಿ ಹೊರತುಯಿಲ್ಲೆಂದು ಸತ್ಯವಾಕ್ಯ ವ್ಯಾಕ್ತಪಡಿಸುತಿಹರು13 ಭಕ್ತಜನರ ಪೊರೆಯಲಿವರ ಸರಿಗಾಣೆನೀಧರೆಯೊಳಗೆ ತಂದೆಯಂದದಿ ಬಿಡದೆ ಕಾಯ್ವರು ಸಾರ್ವಭೌಮ ಶ್ರೀ ರಾಘವೇಂದ್ರರು 14 ಎಷ್ಟು ಜನ್ಮದ ಸುಕೃತದ ಫಲವೋ ಶ್ರೇಷ್ಟಗುರುಗಳ ದರ್ಶನವಾಯಿತು ಕಂಗಳಿಂದಲಿ ಕಂಡು ಮನದ ಕ್ಲೇಶವೆಲ್ಲ ಪರಿಹಾರವಾಯಿತು 15 ಹಿಂದೆ ಪ್ರಹ್ಲಾದರಾಜರೆನಿಸಿ ಬಂದು ಮಂಚಾಲೆಯಾಂಬಿಕೆ ದರ್ಶನ ಕೊಂಡು ಗುರುಗಳ ದರ್ಶನ ಮಾಡಿಸೆಂದು ಭಕ್ತಿಲಿಜನ ಬೇಡುತಿಹರು 16 ದೇಶ ದೇಶದ ಜನರಿಗೆಲ್ಲ ವಿಸ್ತಾರದಿಂದ ಎಲೆಗಳ್ಹಾಕಿ ಭಕ್ಷ್ಯ ಪಾಯಸಾನ್ನಗಳನು ತೃಪ್ತಿಯಿಂದ ಉಣಿಸುತಿಹರು 17 ಶ್ರೀ ರಾಘವೇಂದ್ರಾಯ ನಮಃ ಎಂದರೆ ದುರಿತಗಳೆಲ್ಲವದೂರಮಾಳ್ವರು ಸ್ಮರಣ ಮಾತ್ರದಿ ಸಕಲಪಾಪಗಳೆಲ್ಲ ನಾಶಗೊಳಿಸೋರು18 ಗುರುವಾರ ಪೂಜಾ ಸಂಭ್ರಮದಿಂದ ನಮಗಾಯಿತು ಇಂದು ಮುಂದೆ ನಮಿಸಲು ಭಕ್ತವೃಂದಾ 19 ಜಯ ಜಯತು ಗುರುರಾಜ ಜಯ ಜಯತು ಸುರಭೂಜ ಜಯತು ಶ್ರೀ ರಾಘವೇಂದ್ರಾ ಜಯ ಜಯತು ಜಯ ಜಯತು ಜಯ ಜಯಾ 20
--------------
ರಾಧಾಬಾಯಿ
ಕಡೆಗೋಲ ತಾರೆನ್ನ ಚಿನ್ನವೆ- ಮೊಸರೊಡೆದರೆ ಬೆಣ್ಣೆಬಾರದು, ಮುದ್ದುರಂಗ (ಮಗುವೆ ಪಾ) ಅಣ್ಣನ ಒಡಗೊಂಡು ಬಾರೈಯ-ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣದ ಸರವನ್ನು ಕೊರಳಲ್ಲಿ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ 1 ಪುಟ್ಟ ಬಚ್ಚಿಯ ತಂದು ನಿನ್ನಯ ಚಿನ್ನದತೊಟ್ಟಿಲ ಕಾಲಿಗೆ ಕಟ್ಟಿಸುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ ಮುತ್ತಿನ ಸರವನೀವೆ 2 ಬಡವರ ಭಾಗ್ಯದ ನಿಧಿಯೆ ಗೋಕುಲ-ದೊಡೆಯನೆ ಮಾಣಿಕ್ಯದ ಹರಳೆಕಡುಮುದ್ದು ಉಡುಪಿನ ಬಾಲಕೃಷ್ಣಯ್ಯದÀುಡುಕು ಮಾಡುವರೇನೊ ಪೆಂಗಳೊಳುರಂಗ3
--------------
ವ್ಯಾಸರಾಯರು