ಒಟ್ಟು 226 ಕಡೆಗಳಲ್ಲಿ , 55 ದಾಸರು , 196 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀರಮಣನೆ ರಕ್ಷಿಸೆನ್ನನು ಅಧೋಕ್ಷಜ ಹರಿ ಪ ಮಂದ ಬಿಡಿಸಿ ಸಲಹೋ ದೇವ ಇಂದು ಮುಂದು ಎನಗೆ ನೀ ಗತಿ ಎಂದು ನಂಬಿದೆ ಮಂದರಧರ ಗೋವಿಂದ ಮುಕುಂದ1 ಗರುಡಗಮನ ವಾಸುದೇವ ನಿರುತ ನಿನ್ನ ಭಜಿಪ ಭಕ್ತರ ಸ್ಮರಣೆ ಪಾಲಿಸೊ ಪರಮಪುರುಷ ಹರಿ ಶರಧಿಶಯನ2 ದೇಶದೇಶ ತಿರುಗಿ ಬಹಳ ಬೇಸರದಲೆ ಬಳಲಿದವರ ಕ್ಲೇಶಗಳನೆ ಕಳೆದು ಪರಮೋಲ್ಲಾಸ ನೀಡಿದ ಸಾಸಿರನಾಮದ ಒಡೆಯನೆ ವೆಂಕಟ 3 ಕ್ಷೀರವಾರಿಧಿ ಶಯನದೇವ ಮಾರಪಿತ ಮಹಾನುಭಾವ ಶರಧಿ ಪಾರುಗಾಣಿಸೋ ಪರಿಸರ ನೊಡೆಯನÉ ಉರಗಶಯನ 4 ಶಂಖು ಚಕ್ರಧಾರಿ ಶ್ರೀಹರಿ ಪಂಕಜಾಕ್ಷರೊಳು ವಿಹಾರಿ ಶೌರಿ ಶಂಕರಾನುತ ಪಂಕಜಲೋಚನ ವೆಂಕಟರಮಣ 5 ಕಪಟ ಸೂತ್ರಧಾರಿ ಚಪಲ ಬುದ್ಧಿಯ ಬಿಡಿಸೊ ಶೌರೀ ಅಪರಿಮಿತ ಮಹಿಮೆಗಳ ತೋರಿ ನಟಿಸಿ ಮೆರೆವ ಸಟೆಯಲ್ಲವೊ ನಾರದ ಮುನಿ ಸೇವಿತ 6 ಕಮಲಾಪತೆ ಪ್ರಿಯ ಜೀಯ ಕಮಲಸಂಭವ ಜನಕದೇವ ಕಮಲನಾಭ ವಿಠ್ಠಲ ಕಾಯೋ ಶ್ರಮವ ಹರಿಸೊಸುಮನಸರೊಡೆಯನೆ ಸುರಮುನಿ ಸೇವಿತ 7
--------------
ನಿಡಗುರುಕಿ ಜೀವೂಬಾಯಿ
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ
ಲೀಲಾ ಮನೋಹರ ವಿಠಲ | ಪಾಲಿಸೊ ಇವಳಾ ಪ ನೀಲ ಮೇಘ ಶ್ಯಾಮ | ಕಾಳಿಂದಿ ರಮಣಾಅ.ಪ. ಆಪನ್ನ ಪಾಲಾ |ನಿನ್ನವಾಳೆಂದೆನುತ | ಮನ್ನಿಸೀ ತಪ್ಪುಗಳಘನ್ನ ಮಹಿಮನೆ ಕಾಯೊ | ಕಾರುಣ್ಯ ಮೂರ್ತೇ1 ಸತ್ಸಂಗದಲಿ ಇಟ್ಟು | ಸತ್ಸಾಧನೆಯಗೈಸಿಮತ್ಸರಾದ್ಸರಿಗಳನ | ಕತ್ತರಿಸಿ ಹಾಕೀಉತ್ಸಹದಿ ಸಂಸಾರ | ಯಾತ್ರೆಗಳ ಚರಿಸಯ್ಯಮತ್ಸ್ಯ ಮೂರುತಿ ಹರಿ | ಸತ್ಯವ್ರತ ಪಾಲಾ 2 ತರತಮಾತ್ಮಕ ಜ್ಞಾನ | ಸದನದಲಿ ತಿಳಿ ಪಡಿಸಿಹರಿ ಭಕ್ತಿ ವೈರಾಗ್ಯ | ಎರಡು ಅನುಸರಿಸೀ |ಬರುವಂತೆ ಗೈದು ಉ | ದ್ಧರಿಸೊ ಹರಿ ಇವಳನ್ನನರಹರೀ ಮಾಧವನೆ | ಪರಿಪೂರ್ಣ ಕಾಮಾ 3 ಕಾಮ ಜನಕನೆ ದೇವ | ಕಾಮಿನಿಯ ಮನ ಬಯಕೆಪ್ರೇಮದಲಿ ನೀನಿತ್ತು | ಭೂಮ ಗುಣಧಾಮಾ |ಈ ಮಹಾ ಕಲಿಯುಗದಿ | ನಾಮ ಸ್ಮರಣೆಯ ಸುಖವಾನೇಮದಲಿ ನೀನಿತ್ತು | ಪಾಮರಳ ಉದ್ಧರಿಸೋ 4 ಕೈವಲ್ಯ ಪದದಾತಭಾವುಕಳ ಪೊರೆಯೆಂದು | ಭಾವದಲಿ ಬೇಡ್ವೇ |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನೆಭಾವದಲಿ ನೀ ತೋರಿ | ಹರುಷವನೆ ಪಡಿಸೋ 5
--------------
ಗುರುಗೋವಿಂದವಿಠಲರು
ವಾಯುದೇವರು ನಮೋ ನಮೋ ಹನುಮಾ ಪ್ಲವಗೋ ತ್ತುಮಾಂಜನೇಯ ನಾಮಾ ಪ ಶಮಾದಿಗುಣಗಣ ಸಮೀರ ನುತಜನ ಪ್ರಮಾದ ಹರಿಸೆಲೊ ಉಮೇಶ ವಂದ್ಯನೆ ಅ.ಪ ದಶಾಪುರುಷ ನೀನೇ ತ್ರೀ - ದಶಾಸ್ಯಮುಖ ಮಹ ನಿಶಾಚರೇಶರ ದಶಾಕಳೆದು ಈ ವಸೂಧಿಯೋಳು ಮೆರೆದೆ 1 ಬಕಾಸುರಗೆ ವೈರೀ ನಿನ್ನ ಭಕೂತ ಜನಕೀಪರಿ ಅಖೀಳ ಸೌಖ್ಯದ ಲಕೂಮಿರಮಣನ ಭಕೂತಿ ಪೂರ್ವಕ ಮೂಕೂತಿ ದಾಯಕ 2 ಯತೀಶಕುಲನಾಥಾ ದಶ - ಮತೀನಾಮ ಖ್ಯಾತಾ ಕ್ಷಿತೀಶ ಗುರುಜಗನ್ನಾಥಾವಿಠಲ ದೂತ ಪಾಥೋಜಜಾಂಡಕೆ ನಾಥಾನೆ ಪಾಲಿಸೊ 3
--------------
ಗುರುಜಗನ್ನಾಥದಾಸರು
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1 ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ ಬಂಧ ತಪ್ಪಿಸಿ ಕಾಯೊ ಇಂದಿರೇಶ ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2 ಸುಂದರಾಂಗನೆ ದೇವ ವಂದಿಸುವೆ ತವಪಾದ ಧ್ವಂದ್ವ ಭಜಕರ ಸಂಗ ಬಂದುನೀಡೈ ಇಂದಿರಾರಮಣನೆ ನಂದಗೋಪನ ಕುವರ ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3 ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ ಗಿರಿಯ ಮಧ್ಯದಿನಿಂದೆ ಮಧುಸೂದನ ಶರಣುಶರಣೆಂದು ನಿನ್ನಡಿಗೆರಗುವ ಜನರ ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4 ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು ದೃಢವಾದ ಅಭಯವನು ದಯಪಾಲಿಸೊ ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
--------------
ನಿಡಗುರುಕಿ ಜೀವೂಬಾಯಿ
ವಿಘ್ನೇಶಾ - ಪಾಲಿಸೊ - ಎನ್ನ - ವಿಘ್ನೇಶಾ ಪ ವಿಘ್ನೇಶ ಪಾಲಿಸೊ ಯೆನ್ನಾ | ದೋಷಭಗ್ನವ ಗೈಸಯ್ಯ ಮುನ್ನಾ | ಆಹಲಗ್ನವಾಗಲಿ ಯೆನ್ನ ಮನ ಆದೀಂದ್ರಿಯಗಳುಯಜ್ಞೇಶ ಶ್ರೀಹರಿ ಪದದ್ವಯ ವನಜದಿ ಅ.ಪ. ಶಿರಿವ್ಯಾಸ ಹೃದ್ಗತ ಅರ್ಥಾ | ನೆರೆಅರಿತು ಲಿಖೀಸಿದೆ ಗ್ರಂಥಾ | ನೋಡುಕರುಣಾಳು ಹರಿಕೃಪಾ ಪಾತ್ರಾ | ಬಾಗಿಶರಣೆಂಬೆ ತಿಳಿಸ್ಯದರರ್ಥಾ | ಅಹತಾರಕಾಂತಕನನುಜ | ವೀರ ವೈಷ್ಣವ ನಿನ್ನಪರಮಾನುಗ್ರಹವನ್ನ | ಕರುಣಿಸಿ ಕಾಯೆನ್ನ 1 ಚಾರುದೇಷ್ಣನ ನಾಮದಲ್ಲೀ | ಅವತಾರ ಮಾಡಿದೆ ರುಕ್ಮಿಣೀಲಿ | ಸಿರಿಅರಸನಾಜ್ಞೆಯ ಪೊತ್ತು ಅಲ್ಲೀ | ದೈತ್ಯದುರುಳರ ತರಿದ್ಯೋಧುರದಲ್ಲೀ | ಅಹಧರೆಯ ಭಾರವ ನಿಳುಹಿ | ಮೆರೆದಂಥ ಗುರುವರಪರಮ ಕಾರುಣ್ಯದಿ | ಹರಿಸೆನ್ನ ಭವತಾಪ 2 ಶೇಷಶತ ದೇವೋತ್ತಮಾ | ಬಾಪುಶ್ರೀಶನ ನಾಭಿಯೆ ಧಾಮಾ | ವಿಶ್ವೋಪಾಸಕ ಖೇಶ ನಿಸ್ಸೀಮಾ | ಪ್ರಾಣಾವೇಶಯುತನೆ ಗುಣಧಾಮಾ | ಅಹಮೂಷಕ ವರವಾಹ ಭೇಶ ಗರ್ವಹರಶ್ರೀಶನ್ನ ಹೃದಯಾವ | ಕಾಶದಲಿ ತೋರೊ 3 ಪರಿ | ಶುದ್ಧ ಭಕ್ತಿಯನಿತ್ತು 8 ಸಿರಿ ರಮಣನಾ | ಗುರು ಗೋವಿಂದ ವಿಠಲಾಭಿಧನ್ನಾ | ನಿಲ್ಲಿಸಿಅವಿರತವನ ಧ್ಯಾನವನ್ನಾ | ಆಹಗೈವಂಥ ಸೌಭಾಗ್ಯ | ಪಾಲಿಸೊ ವಿಘ್ನೇಶಶ್ರೀವರನಂಘ್ರಿ ಸರೋಜ | ಭೃಂಗನೆ ಕರುಣೀ 5
--------------
ಗುರುಗೋವಿಂದವಿಠಲರು
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಅ.ಪ. ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ 1 ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ ಶತಪತ್ರವು ಹೃದ್ಗತವಾಗಲಿ ಉ- ನ್ನತ ಮಹಿಮನೆ ಕೀರುತಿವಂತನೆ ಅ- ಪ್ರತಿಭಾರತಮಲ್ಲ ಮೂರವತಾರಗೆ ಅತಿಪ್ರಿಯನೆನಿಪ ಮೂರತಿ ಚತುರದೇವ 2 ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ ಚ್ಯುತಿ ದೂರ ಶೌರೀ ಕಾಳಿಂಗ- ದುರಿತ ಮಾತಂಗ-ಮರಿಗೆ ಸಿಂಗ ತುತಿಪೆ ಕರುಣಾಂತರಂಗ ಕ್ಷಿತಿಯೊಳಗಹಿ ಪರ್ವತನಿವಾಸನೆ ಖರೆಗೊಳಿಸುವ ದುರ್ಮತಿಯನು ತೊಲಗಿಸಿ ತ್ವತು ಪಾದದಲಿಡು ಮತಿಯಲ್ಲದೆ ತಿರು - ಪತಿ ವಿಜಯವಿಠ್ಠಲ ಇತರವನರಿಯೆ 3
--------------
ವಿಜಯದಾಸ
ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ ಲಿಂಗ ಪ ರಂಭ ಜನಕ ಕರುಣಾಂಬುಧಿ ಗುರುವರ ಅ.ಪ. ಮುರಾರಿ ಮಹದೇವ ನಿನ್ನಯ ಪಾದ ವಾರಿಜದಳಯುಗವ ಸಾರಿದೆ ಸತತ ಸರೋರುಹೇಕ್ಷಣ ಹೃ ದ್ವಾರಿಜದೊಳು ತೋರು ಗಾರುಮಾಡದಲೆನ್ನ ಅಮಿತ ಗುಣಗುಣ ವಾರಿನಿಧಿ ವಿಗತಾಘ ವ್ಯಾಳಾ ಗಾರ ವಿತ್ತಪ ಮಿತ್ರ ಸುಭಗ ಶ ಪಾವಕ 1 ಇಂದು ಮೌಳೀ ಈಪ್ಸಿತಫಲ ಸಲಿಸುವ ಘನತ್ರಿಶೂಲೀ ಸಲೆ ನಂಬಿದೆನೊ ಹಾಲಾ ಹಲಕಂಠ ಎನ್ನ ನೀ ಸಲಹೋ ಸಂತತ ರೌಪ್ಯಾಚಲವಾಸ ವರಪಂಪಾ ನಿರ್ಜರ ಸೇವಿತಾನಲ ನಳಿನಸಖ ಸೋಮೇಕ್ಷಣನೆ ಬಾಂ ದಳಪುರಾಂತಕ ನಿಜಶರಣವ ತ್ಸಲ ವೃಷಾರೋಹಣ ವಿಬುಧವರ 2 ದೃತಡಮರುಗ ಸಾರಂಗ ನಿನ್ನಯಪಾದ ಶತಪತ್ರಾರ್ಚಿಪರ ಸಂಗ ಸತತ ಪಾಲಿಸೊ ಜಗನ್ನಾಥ ವಿಠ್ಠಲನ ಸ ನ್ನುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ ಶತಮಖನ ಜೈಸಿದನ ಪುತ್ರನ ಪಿತನ ಜನಕನ ಕೈಲಿ ಕೊಲಿಸಿದೆ ಅತುಳ ಭುಜಜಲ ಭೂತಪಡೆ ಪಾ ವನತಿ ಮುಖಾಂಭೋರುಹ ದಿವಾಕರ 3
--------------
ಜಗನ್ನಾಥದಾಸರು
ಶರಣು ನಿನಗೆ ಶರಣೆಂದೆನೊ ಹರಿಯೇ ಕರುಣಿಸಿ ಕಾಯೋ ಎನ್ನಧೊರಿಯೆ ಪ ಪರಮಕೃಪಾಕರ ಪಾವನ ನರಹರಿ ಪಾಲಿಸೊ ಎನ್ನನಿ--- ಶರಣೆಂದ ವಿಭೀಷಣನ ಆದಿಭಕ್ತರ ಶ್ರಮ ಪರಿಹರಿಸಿದಂಥ ಶ್ರೀಧರಾ 1 ಭಕ್ತಾ ಪಾಂಡವ ಪಕ್ಷಾ ಬಲಿಯ ಭೂಮಿಯ ಭಿಕ್ಷಾ ಯುಕ್ತಿಲಿ ನೀ ಸಾಧಿಸಿದ ಯೋಧನೆ ಮುಕ್ತಿದಾಯಕ ದೇವ ಮುರಹರ ಮಾಧವನೆ ಮೌಕ್ತಿಕ ಮುಕುಟ ಧರಿಸಿದನೆ 2 ಸುಂದರ ಮೂರುತಿ-----ಜಗತ್ಪತಿ ಇಂದಿರಾ ಹೃದಯಾನಂದನೆ ಬಂದ ಭಕ್ತರ ಬಿಡದೆ ಅಂದಿಗೆ ನೀನೆ ಪೊರೆದೆ----ಹೆನ್ನ ವಿಠ್ಠಲಾ ಸಲಹೋ ಎನ್ನ 3
--------------
ಹೆನ್ನೆರಂಗದಾಸರು
ಶರಣು ಶರಣುಪ. ಶರಣು ಸಕಲೋದ್ಧಾರ ಅಸುರಕುಲ ಸಂಹಾರಅರಸು ದಶರಥಬಾಲ ಜಾನಕಿಯ ಲೋಲವಾಲಿಸಂಹಾರ ವಾರಿಧಿಗೆ ನಟುಗಾರಏಕಪತ್ನಿಯಶೀಲ ತುಲಸಿವನಮಾಲ ಅ.ಪ. ಬಂಟ ಈ ಭಾಗ್ಯಇನ್ಯಾವದೇವರಿಗುಂಟು ಮೂರ್ಲೋಕದೊಳಗೆ1 ಉಟ್ಟಪೀತಾಂಬರವು ಉಡಿಗಂಟೆವೊಡ್ಯಾಣತೊಟ್ಟ ನವರತ್ನದಾಭರಣ ರಸಕರುಣಕೊಟ್ಟ ನಂಬಿಕೆ ತಪ್ಪ ಕರುಣದಲಿ ರಕ್ಷಿಸುವಸೃಷ್ಟಿಯೊಳಗೆಣೆಗಾಣೆ ಕೌಸಲ್ಯರಾಮ 2 ಭಾವಿಸಲು ಅಯೋಧ್ಯಪಟ್ಟಣದ ಪುರವಾಸಬೇಡಿದವರಿಗೆ ವರವÀ ನೀಡುವೆನೆಂದುರೂಢಿಯೊಳಧಿಕ ಚುಂಚನಕಟ್ಟೆಯಲಿ ನೆಲೆಸಿದಸ್ವಾಮಿ ಶ್ರೀ ಹಯವದನ ಪಾಲಿಸೊ ನಿಸ್ಸೀಮ 3
--------------
ವಾದಿರಾಜ
ಶರಣು ಶ್ರೀ ನಂದನೇಶ್ವರ | ಪಾಲಿಸು ಜಗದೀಶ್ವರ | ಶರಣು ಶ್ರೀ ನಂದನೇಶ್ವರ ಪ ಶರಣು ಶ್ರೀ ಗುರುವರ ಗಂಗಾಧರ | ಕರ ಕಪಾಲಧರ ಹರ ಮೃತ್ಯುಂಜಯ ಅ.ಪ. ತಂದೆ ನಿನ್ನಯ ಪಾದವ | ಮರೆತಿಹುದರಿಂದ | ನಿಂದ ಹಲವಂಗದಲಿ ಭವಭವದಿ || ನೊಂದು ಬಂದೆ ನಾನಿಂದೀ ಭವದೊಳು | ಹೊಂದಿ ತವಾಂಘ್ರಿಯನಂದದಿ ಭಜಿಸುವೆ 1 ಭೇದ ಬುದ್ಧಿಯ ಮಾನವರು | ವೇದ ಶಾಸ್ತ್ರದ| ಹಾದಿಯರಿಯದ ಮತ್ಸರರು || ಸಾಧುಗಳೊಡನೆ ವಿರೋಧವನೆಣಿಸುವ | ಬಾಧಕರಾದರು ಹೇ ದಯಾನಿಧಿಯೇ 2 ತೊಡಕುಗಳನ್ನೆ ಬಿಡಿಸಿ | ಬಾಧೆಗಳ ವಾರಿಸಿ | ಕಡು ದುಷ್ಟಾತ್ಮರ ಶಿಕ್ಷಿಸಿ | ಎಡೆಬಿಡದೆನ್ನ ಮನೋರಥ ಸಲಿಸುತ | ದೃಢತರ ಭಕುತಿಯ ಕೊಡು ಕೃಪೆಯಿಂದಲಿ 3 ಪಾದ | ಮುಕುತಿ ಸಂಪದ ಪಾಲಿಸೊ || ಶಕುತಿಯೊಳಗೆ ನೀ ಯುಕುತಿಯಿಂದ ನಿಜ | ಸುಖದ ಪದವಿಯೊಳು ಪ್ರಕಟದಿ ಪೊರೆಯೈ4 ಯೋಗಿಗಳರಸ ನೀನೆಂಬ | ಬಿರುದುಗಳ ತೋರಿಸು- | ತೀಗೆನ್ನಪರಾಧವ ಕ್ಷಮಿಸೆಂಬ || ರಾಗದ ನುಡಿಯೊಳೆನ್ನಾಗಮನವೊಪ್ಪಿಸು- | ತೀಗ ಸದಾನಂದ ಯೋಗಾಂತರ್ಗತ 5
--------------
ಸದಾನಂದರು
ಶಾರದಾವರ ಪ ಸಾರಿ ಸಂನ್ನುತಿಪ್ಪಾ | ವರವ ನೀಯೆನ್ನಪ್ಪಾ ಅ.ಪ ಪರ ಕಷ್ಟ ಪರಿಸೊ | ಇಷ್ಟಾರ್ಥ ಪಾಲಿಸೊ 1 ಭಾರವೊಪ್ಪಿಸಿದೆನು | ಪಾರಗಾಣಿಸಿದನು 2 ಮರೆಯ ಹೊಕ್ಕೆನೂ | ವರಕವಿತ್ವವನ್ನೂ | ಮೆರೆಯಿಸಿ ಇರಿಸೆನ್ನಾ ಸತ್ಕೀರ್ತಿ | ಸ್ಥಿರ ಸದಾನಂದಾರ್ತಿ 3
--------------
ಸದಾನಂದರು
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ಪ ಕರವ ಜೋಡಿಸಿ ಬಿನ್ನೈಪಾ || ದುರಿತ ರಾಶಿ | ಪರಿಹಾರ ಮಾಡಿಸಯ್ಯಾ 1 ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರಿಗಳಿಗೆ ನಿರುತ ಮಾರಕ ನೀನಹುದೋ2 ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ ಯುಗದೊಳು ಬಲವಾಗೋ 3 ಕಾಯ ನಿನ್ನದು ಗುಣನಿ | ಕಾಯ ನಿರ್ದೋಷ ಕಾಯಾ || ಕಾಯಾ ಐದಳಮಾನ | ಕಾಯ್ದ ಕಲಿವೈರಿ | ಕಾಯಜಪಿತನ ದೂತಾ 4 ಪಂಕಜನಾಭನ ಅಂಕದಲ್ಲಿಪ್ಪ ಬಿಂಕವ ತಾಳದಿರೊ | ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ ತ್ಪಂಕದೊಳು ತೋರಿಸೊ 5
--------------
ವಿಜಯದಾಸ
ಶ್ರೀ ಗುರುವರನೆ ನಮಃ ಪ ಸಾಗರ ಮಹಿಮ ಸದಾನಂದ ಮೂರುತಿ ಅ.ಪ ವಿಘ್ನನಿವಾರಣ ಕಾರಣ | ನಿಗ- ಸಗುಣ ನಿರ್ಗುಣ ತ್ರೈಜಗದುದ್ಧರಣ1 ನಂದದಿಂದ ದಯದೋರಿಂದೆನಗೆ 2 ಬೇಸರಿಸದೆ ಶ್ರೀನಿವಾಸನೆ ಪಾಲಿಸೊ 3
--------------
ಸದಾನಂದರು
ಶ್ರೀ ಧೀರೇಂದ್ರರು ಚಾರು ನಿಮ್ಮಯ ಚರಣತೋರಿಸುದ್ಧರಿಸಬೇಕೊ ಪ. ಆರು ಇವನೆಂದು ನೀವ್ ಗಾರುಮಾಡದಲೆನ್ನ ಸಾನುರಾಗದಿ ಪೊರೆಯಬೇಕೊ ಸ್ವಾಮಿ ಅ.ಪ. ವರದಾ ತೀರದಿ ನಿಂದು ವರ ಕೊಡಿವೀಯೆಂದು ಘನಗರ್ವ ನಿನಗ್ಯಾತಕೊಸುರಪತಿಯ ಬಲದಲ್ಲಿ ಇಹೆನೆಂದು ನೀ ಬಲು ಜರಿದು ನೋಡಲಿ ಬ್ಯಾಡವೊಆರುಗತಿಯಿಲ್ಲವೆಂದೀರ ನಿನ್ನೆಡೆ ಬರಲು ಏರಿ ಕೂಡ್ರುವುದುಚಿತವೇಸಾರಿ ಹೇಳುವೆ ನಿನಗೆ ಚೋರದಾಸನು ನಾನು ಘೋರರೂಪದಿ ಬಂದು ತೋರೋ ಸ್ವಾಮಿ 1 ರಘುಕುಲತಿಲಕನ ಭಕ್ತಿಪಾಶದಿ ಕಟ್ಟಿಚಕ್ರವರ್ತಿಯೆನಿಸಿ ಗೋಕುಲದ ಗೊಲ್ಲನ ಯುಕುತಿಯಲಿ ನೀನೊಲಿಸಿದ್ಯೊಶಕ್ತಿಯಿಂ ಕಲಿಯುಗದಿ ಧೀರೇಂದ್ರ ಪೆಸರಿನಿಂ ದುರಿತಗಳ ಕಳೆಯುವಿಯೊಧಿಃಕರಿಸಿ ವಾದಿಗಳ ದೇಶದೊಳ್ ಚರಿಸಿದ ವಸುಧೀಂದ್ರ ಸಂಜಾತ ಪೊರೆಯೆ ಸ್ವಾಮೀ 2 ಹೆಣ್ಣಿನಾಶೆಗೆ ಬಿದ್ದು ಹೊನ್ನು ಸ್ಥಿರವೆಂದು ನಾ ಮಣ್ಣುಪಾಲಾದೆನೊತನುವು ತನ್ನದು ಎಂಬ ಭಿನ್ನ ಜ್ಞಾನವನೇ ಹೊಡೆದೋಡಿಸೆಮಾನ್ಯವಂತರ ಸಂಗ ಇನ್ನು ಮೇಲಾದರೂ ದಯಪಾಲಿಸೊಘನ್ನ ಮಹಿಮಾ ತಂದೆವರದವಿಠಲನಲ್ಲಿ ಜ್ಞಾನದಿಂ ಭಕ್ತಿ ವ್ಯೆರಾಗ್ಯವನೆ ಈಯೋಸ್ವಾಮಿ 3
--------------
ಸಿರಿಗುರುತಂದೆವರದವಿಠಲರು