ಒಟ್ಟು 698 ಕಡೆಗಳಲ್ಲಿ , 94 ದಾಸರು , 620 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷಮಾ ಪ್ರಾರ್ಥನೆ ಗುರುಹಿರಿಯರೆಡೆಯಲ್ಲಿ ಶಿರಬಾಗಿಸಿನಯದಲಿ ಎರೆವೆನೀಪರಿಯಲ್ಲಿ ಕರವಮುಗಿದು ಯತಿನಿಯಮ ಛಂದಸ್ಸು ಗತಿತಾಳಲಯಬಂಧ ನುತಶಬ್ದ ತತ್ವಾರ್ಥ ಸಂಗತಿಯನು ವರಕವಿಗಳೊರೆದಿರ್ಪ ತರತರದ ಪ್ರಾಸಗಳ ವರಲಕ್ಯಣಲಂಕಾರ ಮೆಂಬ ಪರಿಕರಂಗಳನರಿದು ಪರಿಪರೀಸಿಂಗರಿಸ ಲರಿಯೆ ಕವಿತಾಮಣಿಯ ಪರಿಯನರಿಯೆ ಸರಿಸದೋಳ್‍ನಿಂದೆ ನೆಂದರಿಯ ಬೇಡಿ ಅರಿಯದಾತರಳೆ ರಚಿಸಿದುದನುನೋಡಿ ಹಿರಿಯರೊಳುಗರುವತೋರಿದೆನೆನ್ನ ಬೇಡಿ ಸರಿದೋರಿದಂತೆಸಿಗೆ ಕೃಪೆಮಾಡಿ ಸಮರ್ಪಣೆ ತ್ವದ್ದತ್ತವಾಚಾ ತವಕಿಂಕರೇಣ ತ್ಪತ್ಪ್ರೀತಿ ಕಾಮೇನ ಮಯಾಕೃತೇನ | ಸ್ತೋತ್ರೇಣ ಲಕ್ಷ್ಮೀನೃಹರೇ ಸವಿಷ್ಣುಃ ಪ್ರೀತೋಭವತ್ಪಂ ಕರುಣಾದ್ರ್ರದೃಷ್ಟಿಃ ||
--------------
ನಂಜನಗೂಡು ತಿರುಮಲಾಂಬಾ
ಗಂಗಾ ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ ನೀ ಸರಸವಾಗಿ ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯನು ಕೂಡಿ ಉ- ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1 ಹಾಲಿನಂತೆ ಹರಿವೊ ಗಂಗೆ ನೀನು ನೀಲದಂತಿದ್ದ ಯಮುನೆಯನು ಕೂಡಿ ಲೀಲೆಯಿಂದಲಿ ಸರಸ್ವತಿಯನು ಕೂಡಿ ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ ಸಗರನ ಸುತರ ಉದ್ಧಾರ ಮಾಡಿ ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ ಮಗುವೆಂದು ಮುಂದಕೆ ಕರೆಯೆ ತಾಯಿ 3 ಬಿಂದುಮಾಧವ ವೇಣುಮಾಧವನ್ನ ಆ- ನಂದ ಭೈರವ ಕಾಳ ಭೈರವನ್ನ ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4 ಪೊಡವಿ ಮ್ಯಾಲಿಂಥ ಸಡಗರದಿ ಹರಿದು ಕಡಲಶಯನನ್ನ ಕಾಲುಂಗುಷ್ಠದ ಮಗಳು ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ ಪರಿಪರಿಯಿಂದ ಪೂಜೆಯಗೊಂಬುವಿ ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6 ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ ಶುದ್ಧವಾಗಿ ಪಂಚಗಂಗೆಯಲಿ ಭವ ಸ- ಮುದ್ರವನು ದಾಟಿಸೆ ಭಾಗೀರಥಿ 7 ಸುಕೃತ ಒದಗಿತೆಂದು ಗಂಗ ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು ಪಾದವನು ತೋರೆನ್ನ ಪೊರೆಯಬೇಕೆ 9
--------------
ಹರಪನಹಳ್ಳಿಭೀಮವ್ವ
ಗಜೇಂದ್ರ ಮೋಕ್ಷ ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ ಗರುಡಗಮನ ನಮ್ಮ ಕರಿವರದಹರಿಯನ್ನ ನಿರುತ ನೆನೆನೆನೆದು ಬದಿಕಿರಯ್ಯಾ ಪ ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ. ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ ಇರುವುದೂ ಋತುಮಂತ ವರುಣನ ವರವನವು ಅಲ್ಲಿ ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ ಮೆರೆವೋರು ಸುರಸಂಘ ನಾರಿಯರ ಸಹಿತಾ 1 ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2 ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ ನಿಂದು ಹೊರಾಡೆ ಸುರವೃಂದ ಬೆರಗಾಯಿತು ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3 ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4 ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ ಆರ್ತದಲಿ ಕರೆವೆನೋ 5 ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6 ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7 ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8 ವೇದಗಮ್ಯನುನೀನೆ ವೇದದಾಯಕ ನೀನೆ ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ ಖೇದವರ್ಜಿತನೀನೆ ಅಂದ ಸಾರವು ನೀನೆ ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9 ಜ್ಞಾನಿಗೋಚರನೀನೆ ಗುಣಾತೀತನು ನೀನೆ ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ ಜ್ಞಾನದಾಯಕನೀನೆ ಆನಂದಮಯನೀನೆ ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10 ಸಾಕಾರ ನಿರಾಕಾರ ಆಕಾರ ಅಹೇಯ ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ ವಿಕಾರ ವರ್ಜಿತನೆ ಲೋಕೈಕವೀರಾನೆ ನೀ ಕೆವಲನು ಮುಕ್ತೇಶ ಸಲಹೋ 11 ಏನು ಕೊಡಲೊ ದೇವ ದೀನನು ನಾನಯ್ಯ ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12 ಕರಿ ತಾನು ಮೊರೆಯಿಡುತ ಕೂಗಲು ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ ಹರುಷದಿಂದಲಿ ಹರಿಯು ಗುರುಡನೇರುತ ಬರಲು ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13 ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14 ದೇವಲನ ಶಾಪದಲಿ ಆ ವರ ನಕ್ರನಾಗಿದ್ದ ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ ದೇವೇಶ ಹುಸಿನಗುತ ಈವೆ ವರವನು ಕೇಳಿ ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ ನಾ ಒಲಿವೆ ತವಕದಲಿ ಎಂದನೂ 15 ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ ಸುರರು ಮೊರೆಯಿಟ್ಟರಾಗ ಹರಿವಾಯುಗುರುಗಳು ಕರುಣದಿಂದಲಿ ಇದನು ಮನ್ನಿಪುದು ಬುಧರೂ 16 ಮುದ್ದುಜಯತೀರ್ಥರ ಹೃದಯದಲಿನಲಿಯುವ ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ ಮಾಧವ ಶ್ರೀಕೃಷ್ಣವಿಠಲರಾಯನು ಬೇಗ ಮೋದ ಸುರಿಸುವ ಈ ಪದವ ಪಠಿಸಲೂ 17
--------------
ಕೃಷ್ಣವಿಠಲದಾಸರು
ಗಿರಿಜಾಕಾಂತನೆ ನಿನ್ನ ಶುಭ ಚರಣವ ನಂಬಿದೆ ಮುನ್ನ ಕರವಿಡಿದೀಗಲೆ ಕಾಯಬೇಕೆನ್ನ ಪರಿಪರಿ ವರಗಳ ಕೊಡುವ ಪ್ರಸನ್ನ ಪ ಗಜ ಚರ್ಮಾಂಬರನೆ ನಿತ್ಯ ಸುಜನರ ಪಾಲಿಸುತಿಹನೆ ಅಮಿತ ಮಹಿಮನೆ ತ್ರಿಜಗೋದ್ಧಾರನೆ ಭುಜಗಭೂಷಿತನೆ 1 ನಂದಿಯನೇರಿಯೆ ಬಂದು ಎನ್ನ ಮಂದಿರದೊಳ್ ನಿಂದು ಕುಂದದಿರುವ ಆನಂದವ ಕೊಡು ಎಂದು ವಂದಿಸುವೆನು ನಾ ನಿನಗೆ ಕೃಪಾಸಿಂಧು 2ವರ ಚಿಕ್ಕನಾಗರದಿ ನಿಂದು ಗರಪುರವಾಸನೆ ದಯದಿವರದ ಶ್ರೀ ವೆಂಕಟರಮಣನ ರೂಪದಿಪೊರೆವೆ ನಾರಾಯಣದಾಸನ ಮುದದಿ 3
--------------
ನಾರಾಯಣದಾಸರು
ಗುಂಜಾ ನರಸಿಂಹಾ-ಪಾಹಿ ಮಾಂ ಪಾಹಿ ಪ ಅಜಭವ ಫÀಣಿ ದ್ವಿಜರಾಜ ಸುಪೂಜಿತ ತ್ರಿಜಗದೊಡೆಯ ನರಹರಿಯೆ-ದುರಿತ ಹರಾ ಅ.ಪ ಪಟುತರ ಭಾಧೆ ಸಂಕಟಪಡುತಲಿ ಸುರ- ಕಟಕ ನುತಿಸಿ ಕೋಟಿತಟಿತ್ಕಾಯನೆ ಕೋಟಿ ಖಳರೆದೆ ಕುಟ್ಟಿ ಯಮಪುರ ಕಟ್ಟಿ ದಿಟ್ಟತನದಲಿ ನಿಶಾಚರನಳುಹಿದ 1 ಸಿಡಿಲೋಪಮ ಘುಡು ಘುಡಿಸುತ ಕಿಡಿಯ ಕಡೆಗಣ್ಣಿಂದಲಡಿಗಡಿಗುಗುಳುತ ಕೂಡಿನಖಗಳ ನೀಡಿಶಿರವನ- ಲ್ಲಾಡಿಸಿ ಜಡಜಂಗಮರ ನಡುಕ ಬಿಡಿಸಿದೆಯೊ2 ಅಡಿಗಡಿಗೆಡರನು ಪಡುತಿಹ ಹುಡುಗನ ದೃಢತರ ಭಕುತಿಯ ನುಡಿಯುನು ಕೆÉೀಳುತ ನೋಡಿ ಅಭಯವ ನೀಡಿ ನೀ ದಯ ಮಾಡಿ ಬಿಡುಗಣ್ಣರನು ಬಿಡದೆ ಸಲಹಿದೆಯೊ 3 ಕೇಳಿ-ಹರುಷವ ತಾಳಿ-ದನುಜರ ಧೂಳೀಪಟಮಾಡಿ ನಲಿದು ನಿಂದಾಡಿದೆ 4 ಸಿಂಧುಶಯನ ಭವಬಂಧವಿಮೋಚಕ ಇಂದಿರೆಯರಸ ಶ್ರೀ ವೇಂಕಟೇಶ ನೀ ಬಂದೂ ಸ್ತಂಭದಿ ನಿಂದೂ ಭಕುತರ ಬಂಧೂ ಸುರವೃಂದಕೆ ಆನಂದವ ನೀಡಿದ 5 ಕಡಲುಗಳೇಳಡಿಗಡಿಗುಕ್ಕುತ ಪಥ ತಪ್ಪಿ ಬೀಳುತಲಿರೆ ದಾಡಿ ಕುಣಿದಾಡೀ ಸ್ಮಶ್ರುಗಳ ತೀಡಿ ಬಡಬಾನಲಲ್ಲಾಡಿಸಿ ನಿಂದ 6 ಪರಿಪರಿ ಸುರರವಯವಗಳನು ಧರಿಸಿ ಉರುತರ ಕ್ರೀಡೆಯ ಮಾಡಿ ಪ್ರಳಯದಿ ತೋರಿ ಧಿಕ್ಕರಿಸಿ ತಾಳಿ ಹರುಷದಿ ಕೇಳಿಯೊಳು ಉರಗಾದ್ರಿವಾಸವಿಠಲ ನೀ ನಿಂದೆಯೊ 7
--------------
ಉರಗಾದ್ರಿವಾಸವಿಠಲದಾಸರು
ಗುರು ಅಂತರ್ಯಾಮಿ ಶ್ರೀನಿವಾಸ ಸಿರಿರಮಣ ಶ್ರೀ ಕೃಷ್ಣ ಶ್ರೀನಿಧಿಯೆ ಶ್ರೀಶ ಪ. ಸೃಷ್ಟಿಕರ್ತನೆ ನಿನ್ನ ಲಕ್ಷಿದೇವಿಯು ಸತತ ಶ್ರೇಷ್ಠತನದಲ್ಲಿ ಪೂಜೆ ಮಾಡುತಿಹಳೊ ಅಷ್ಟು ದೇವತೆಗಳು ಆಗಮವನನುಸರಿಸಿ ಶಿಷ್ಟೇಷ್ಟನೆಂತೆಂದು ಪೂಜೆ ಮಾಡುವರೋ 1 ಅಣು ನಾನು ನಿನ್ನ ಅರ್ಚಿಸ ಬಲ್ಲೆನೇ ದೇವ ಘನಮಹಿಮ ಸ್ವೀಕರಿಸೊ ಅಲ್ಪ ಸೇವೆ ಮನ ಮಂದಿರದಿ ನಿಂತು ಅನುಗಾಲ ನಿನ್ನ ದಿವ್ಯ ಘನ ಮೂರ್ತಿಯನೆ ತೋರೋ ಪೂಜೆ ಮಾಡುವೆನೊ 2 ಸರಸಿಜಾಕ್ಷನೆ ನಿನಗೆ ಸರಸದಿಂದ ಗುಲಾಬಿ ಸರದ ಪೂಮಾಲೆಯನು ಕೊರಳಿಗ್ಹಾಕುವೆನೊ ಸುರರ ಪಾಲಿಪ ಹರಿಯೆ ಸುರಹೊನ್ನೆ ಹಾರವನು ಕರ ಚಕ್ರಯುತ ನಿನ್ನ ಕಂಧರದಿ ಧರಿಸೋ 3 ಶ್ಯಾಮವರ್ಣನೆ ರತ್ನಹಾರಗಳು ಹೊಳೆಯುತಿರೆ ಶ್ರೀ ಮನೋಹರ ಮುತ್ತಿನ್ಹಾರ ಪದಕಗಳು ಈ ಮಧ್ಯೆ ದಿವ್ಯ ಶ್ಯಾವಂತಿಗೆ ಸುಮನದಿಂ ಕಾಮಜನಕನೆ ಮಾಲೆಕಟ್ಟಿ ಹಾಕುವೆನೊ 4 ಈ ಜಗವ ಉದರದಲಿ ಧರಿಸಿ ಮೆರೆಯುವ ದೇವ ಜಾಜಿ ಪೂಮಾಲೆಯನು ಕಂಧರದಿ ಧರಿಸೊ ಭೋಜಕುಲ ತಿಲಕನೆ ಕೆಂಡ ಸಂಪಿಗೆ ಸರವ ಮಾಜದೇ ಎನ್ನಿಂದ ಸ್ವೀಕರಿಸೊ ದೇವ 5 ಪಾತಕರಹಿತ ಹರಿ ಪಾವನರೂಪನೆ ಪ್ರೀತಿಯಿಂ ಸ್ವೀಕರಿಸೊ ಕೇತಿಕೆಯ ಸರವ ಶ್ರೀತರುಣಿ ಸತ್ಯಭಾಮೆಯರು ಕದನವಗೈದ ಪ್ರೀತಿ ಪಾರಿಜಾತ ಧರಿಸಯ್ಯ 6 ಮರುಗ ದವನಗಳಿಂದ ಸುರಹೊನ್ನೆಯನೆ ಕಟ್ಟಿ ಇರುವಂತಿಗೆಯ ಹಾರ ಹರಿಯೆ ಅರ್ಪಿಸುವೆ ಪರಿಮಳವ ಬೀರುತಿಹ ಪರಿಪರಿಯ ಮಲ್ಲಿಗೆಯ ಸರಗಳನೆ ಧರಿಸಿನ್ನು ಸಾಕಾರರೂಪ 7 ದುಂಡುಮಲ್ಲಿಗೆಯ ಮೊಗ್ಗು ಪಾಂಡವರ ಪಾಲಕಗೆ ದಂಡೆಯನೆ ಕಟ್ಟಿ ನಾ ಕೊರಳಿಗ್ಹಾಕುವೆನೊ ಚಂಡವಿಕ್ರಮ ಶಂಖ ಚಕ್ರಧಾರಿಯೆ ಪಾದ ಮಂಡೆ ಪರಿಯಂತರದಿ ನೊಡಿ ದಣಿಯುವೆನೊ8 ಸತಿ ನಿನಗಾಗಿ ಕಾಷ್ಟದಳ ಮೃತ್ತಿಕೆಯ ಸೇವಿಸುವ ಜನಕೆ ಇಷ್ಟ ಫಲವನೆ ಇತ್ತು ಕೃಷ್ಣನ್ನ ತೋರಿಸುವ ಶ್ರೇಷ್ಠ ತುಳಸಿಮಾಲೆ ಕಟ್ಟಿ ಹಾಕುವೆನೊ 9 ಕಮಲನಾಭನೆ ಕೃಷ್ಣ ಕಮಲಾಪತಿಯೆ ಸ್ವಾಮಿ ಕಮಲಪಾಣಿಯೆ ದೇವ ಕಮಲಾಕ್ಷನೆ ಕಮಲಮುಖ ನಿನ್ನ ಪದಕಮಲದಲಿ ನಲಿವಂತೆ ಕಮಲದ್ಹಾರವ ಕಟ್ಟಿ ಕೊರಳೀಗ್ಹಾಕುವೆನೋ10 ಈ ಪರಿಯ ಮಾಲೆಗಳ ನೀ ಪ್ರೀತಿಯಿಂ ಧರಿಸಿ ಪಾಪಗಳ ತರಿದೆನ್ನ ಪಾವನವಗೈಯ್ಯೊ ಆಪತ್ತು ಕಳೆವ ಶ್ರೀ ಗುರು ಕಟಾಕ್ಷದಿ ನುಡಿದೆ ಗೋಪಾಲಕೃಷ್ಣವಿಠ್ಠಲನೆ ಕೃಪೆಮಾಡೊ 11
--------------
ಅಂಬಾಬಾಯಿ
ಗುರು ಚರಣವನು ಸಂಸ್ಮರಿಸಿರೋ ಪಗುರು ಲಕ್ಷ್ಮಿ ವರಜಾತ | ಗುರು ಲಕ್ಷ್ಮಿಪ್ರಿಯ ತೀರ್ಥ ಚರಣ ಸರಸಿಜ ಭಜಿಸೆ | ಕರಣದಂತರ ಬಾಹ್ಯ ಪರಿಶುದ್ಧಿಯನೆ ಗೈದು | ಜ್ಞಾನ ಭಕ್ತಿಯನಿತ್ತು ಹರಿ ಪೊರೆವ ಸಂತತದಲಿ ಅ.ಪ. ಪೂರ್ವಾಶ್ರಮಾ ನಾಮ | ಭೂವಿಬುಧ ಕೃಷ್ಣಾಖ್ಯ ದೇವರಾಯನ ದುರ್ಗ | ದಾವ ನರಸೀಪುರದಿಆವಾಸಿಸುತ್ತಿರಲು | ಓರ್ವ ಸಖನಿವರ ಜ್ಞಾನಾನುಸಂಧಾನದಾ |ಭಾವ ತಿಳಿಯುತ ಮನದ | ಯಾವ ದೊಂದಭಿಲಾಷೆನೀವು ಸಲಿಸುವುದೆನ್ನೆ | ಆವುದೆನುತಲಿ ಕೇಳೆಯಾವ ಪನಸದ ಫಲವ | ಆಸ್ವಾದು ಮಧು ಒಡನೆಓವಿ ಕರಡಿಯು ಕಲಸಿದ 1 ಅದರ ಪ್ರಾಪುತಿಗಾಗಿ | ಬದಿವನನೊಂದಿನವುಬೆದರದಲೆ ಪೊಗುತಿರಲು | ಎದುರೊಂದು ಶಿಲೆ ಮೇಲೆವದಗಿ ಕಲಸಿದ ಕಂಡು | ಅದರೊಡನೆ ಮರನೇರೆ ಬಂದಿತದು ಮರಿಗಳೊಡನೆ |ಅದಕು ಇವರಿಂಗಾಯ್ತು | ಕದನವೂ ಕೆಲಕಾಲ ಒದಗೆ ಜಯ ವಿಬುಧರಿಗೆ | ಹದುಳದಲಿ ಗೃಹಸೇರಿಮುದದಿಂದ ಶ್ರೀಹರಿಯ | ಪದ ಸ್ಮರಣೆಯಲ್ಲವರು ದಿನಗಳನೆ ಕಳೆಯುತಿಹರು 2 ಯತಿ ಲಕ್ಷ್ಮಿ ವರರಿಂದ | ಯತಿಗಳಾಶ್ರಮ ಪೊಂದಿಹಿತದಿಂದಲಾ ಬೂದಿ | ನೆತ್ಯಾಖ್ಯ ಗ್ರಾಮದಲಿಸ್ಥಿತರಾಗಿ ಶಿಷ್ಯರಿಗೆ | ಹಿತದ ಉಪದೇಶವ ಪ್ರೀತಿಯಲಿ ಮಾಡುತಿರಲು |ಯತಿಗಳಾಶ್ರಮದಲ್ಲಿ | ಮತಿ ವಂತ ವಿಪ್ರೋರ್ವಕ್ಷಿತಿಯೊಳಾ ನಾಕನಿಭ | ಮಂತ್ರ ಮಂದಿರ ಸೇವೆ ಅತಿಹಿತದಲೆಸಗುತಿರೆ | ಯತಿಗಳಾಶೀರ್ವದಿಸೆ ಪಥವಾಯ್ತು ಪ್ರಿಯರಲ್ಲಿಗೇ 3 ಪತಿ ಸೇವೆ | ಯುಕುತನಾಗಿರಲ್ವೊರೆದು ನಾಲ್ವತ್ತು ದಿನ ಮಿತಿಯಲಿ |ಕಕುಲಾತಿ ತೊರೆದು ನಿಜ | ಭಕುತಿಯಿಂ ಗೈವುತಿರೆಲಕುಮಿ ಪ್ರಿಯರಾಚಾರ | ಉಕುತಿಯಲಿ ದುರ್ಭಾವಪ್ರಕಟವಾಗಲು ಮನದಿ | ಬಂಕಪುರ ಮಾರ್ಗವನೆ ತೆರಳಲನುವಾದನೂ 4 ಮತ್ತೆ ನರಹರಿ ತಾನು | ವ್ಯಕ್ತಯಿಂತೈಜಸನುಒತ್ತಿಪೇಳಲು ಬುಧನು | ಮತ್ತೆ ಗುರುಪದಕೆರಗಿಬಿತ್ತರಿಸೆ ತನ್ನಸ್ವಪ್ನ | ವಾರ್ತೆಗಳ ವಿಶ್ವಮಿತ್ರನ ಭಾವವನೆ ತೋರುತ |ಇತ್ತಲಿಂದೆರಡೊರ್ಷ | ಕಿತ್ತಪೆವು ಆಶ್ರಮವಆರ್ಥಿಯಿಂದಿರುತಿರ್ದು | ಹಸ್ತಿವರದನ ಸೇವೆಉತ್ಸಹದಲೆಸಗುವುದೆ | ನುತ್ತಲಾಶೀರ್ವದಿಸಿ ಚಿಂತಿಸುತ್ತಿರೆ ಹರಿಯನು 5 ಗ್ರಾಮದೊಳಗುಳ್ಳ ಖಲ | ಸ್ತೋಮ ಬಂದಡರುತ್ತಭೂಮಿ ಗೋಸುಗ ಕಲಹ | ಸೀಮೆ ಮೀರುತ ಗೈಯ್ಯೆಅ ಮಹಾಯತಿವರ್ಯ | ಭೂಮಿ ಕೃಷ್ಣಾಂಕಿತವುಕಾಮನೆಯ ಬಿಡಿರೆನುತಲಿ | ನೇಮದಲಿ ಘರ್ಜಿಸಲು |ಆ ಮಹಾ ದುಷ್ಟಜನ ಈ ಮರದ ಸಂಪದವ ಕಾಮಿಸುತ ಮನದಲ್ಲಿನೇಮದಿಂ ಪತ್ರೋರ್ವ | ಪಾಮರನ ಒಡನವರು ಯಾಮ ಸಂಜೆಲಿ ಕಳುಹಲು 6 ಪರಿವಾರ ಜನಕೆಲ್ಲ | ಇರುವ ನೆಲೆ ಬಿತ್ತರಿಸಿಸರಿಯುತಲಿ ಸುಕ್ಷೇಮ | ನೆರೆಯ ಸಾರುವುದೆನುತಒರೆಯಲೂ ಕೆಲವರು | ಮರೆಮಾಡಿ ತೃಣ ಬಣವಿ ನೆರೆ ಬಿಡದೆ ಸಾರುತಿರಲು |ವರನಿಶೀ ಸಮಯದಲಿ | ದುರುಳರೆಲ್ಲರು ಮಠಕೆಬರಬರುತ ಕವಣೆಕಲ್ | ನೆರೆಬೀರ್ವ ಜನಗಳೂಉರಿವ ತೃಣ ಬಣವಿಯಂ | ದುರೆ ಜ್ವಾಲೆ ಪರಿಕ್ರಮಣ ಭಯ ಭ್ರಾಂತಿಯಿಂದಿರುತಿರೆ 7 ಸಿರಿ ಹರಿಯ ನಮಿಸುತಿರಲು 8 ಪರಿ | ಚರರಿಘರಸುತ್ತ ಬಲುಪರಿಯ ಹರಿ ಮಹಿಮೆಗಳ | ಒರೆಯುತಾನಂದಾಶ್ರೂ ಸುರಿಸುತವ ಶೇಷನಿಶಿ | ಹರಿಕರುಣ ಸ್ಮರಣೆಯಲಿ ಸರಿಸಿದರು ಶಿಷ್ಯರೊಡನೇ 9 ಗರ ಮಿಶ್ರ | ಯತಿಗೆ ಬಡಿಸೇ ಜೀರ್ಣಿಸುತ ಪಾಪಿ ವಿಪ್ರರ್ಗೆ | ಗತಿಸಿದವು ಅಕ್ಷಿಗಳು ಮೃತ್ಯಂತಲಂದರಾಗಿ 10 ಗರ ಮಿಶ್ರ | ಸತ್ಯವಾದುದ ಕಂಡು ಪ್ರೋಕ್ಷಿಸಲು ಶಂಖದುದಕ |ವ್ಯಕ್ತವಾಯಿತು ಇವರ | ಉತ್ತುಂಗ ಮಹಿಮೆಗಳುಹಸ್ತಿವರದನು ಭೋಜ್ಯ | ವಸ್ತುಗಳ ಸ್ವೀಕರಿಸಿದತ್ತ ಮಾಡಲು ಪುನಃ | ಮತ್ತೆ ಜೀರ್ಣಿಸಿಕೊಂಡು ಹರಿಯನ್ನೆ ಚಿಂತಿಸುತಲಿ 11 ನೆಲೆಸಿರಲ್ಲಬ್ಬುರೊಳು | ಗಳ ಗ್ರಾಹಕರು ಮತ್ತೆಮಿಳಿತರಾಗುತ ರಾತ್ರಿ | ಛಲವ ಸಾಧಿಸೆ ನಿಶಿತಅಲಗು ಕತ್ತಿಯ ಪಿಡಿದು | ನೆಲಕೆ ಯತಿ ಶಿರವನ್ನು ಇಳಹುವ ಮತಿ ಮಾಡಲೂ |ಒಲವಿನಿಂ ಯತಿಯಕುಲ | ತಿಲಕ ವೃಂದಾವನವ ಬಳಸಿ ನಮಿಸಲು ಸಂಜೆ | ಯಲಿ ಪೇಳ್ದ ಬ್ರಹ್ಮಣ್ಯಒಳ ಪೊಗುತಲಾರಾಮ | ನೆಲೆಸೇರಿ ಮಠಸಾರಿ ಎಂದೆನುತ ಎಚ್ಚರಿಸಿದರ್12 ಮತ್ಸರಿಗಳಿನ್ನೊಮ್ಮೆ | ಕುತ್ಸಿತದ ಬುದ್ಧಿ ಮಹಉತ್ಸವದ ಸಮಯದಲಿ | ಹೆಚ್ಚು ಜನ ಸಂಧಿಸಿರೆನೆಚ್ಚಿದ್ದ ಪಾಚಕರು | ಉಚ್ಚಳಿಸಿ ಕೆಲಸಾರೆ ಕೆಚ್ಚಿದೆಯನೇ ತೋರುತ |ಮುಚ್ಚಿಮಠದ್ವಾರಗಳ | ಹೆಚ್ಚುತಲಿ ಪಲ್ಯಗಳ ಮತ್ಸಕೇತನ ಪಿತನು | ಮೆಚ್ಚುವಂದದಿ ಪಾಕಪೆಚ್ಚಿಸುತಲಿ ಹರಿಯ | ಅರ್ಚನೆಯ ಕೈಕೊಂಡು ಮೆಚ್ಚಸಿದರು ಸುಜನರ 13 ಜ್ವರತಾಪದಿಂದೊಮ್ಮೆ | ನೆರೆ ಬಳಲು ವಂತಿರ್ಪಗುರುವರರ ಕಂಡೋರ್ವ | ವರ ಶಿಷ್ಯ ಪ್ರಶ್ನಿಸಲುನೆರೆ ಬದುಕ ಬೇಕೆಂಬ | ಶರಿರವನೆ ತೊರೆವೆ ನೆಂಬೆರಡುಕ್ತಿ ಸಲ್ಲದಿದಕೊ |ನರರಾಡಿ ಕೊಳದಂತೆ | ವರ ಭಿಷಜ ತಾಕೊಟ್ಟವರಗುಳಿಗೆ ನುಂಗುವೆವು | ಹರಿ ಪೂಜೆ ವಿರುದ್ಧಜ್ವರ ಕುಂಟಿ ಧನ್ವಣತ್ರಿ | ವರಮಂತ್ರ ಕೈ ಸೇರಿ ಪರಿಪರಿ ಮೆರೆಯುತಿರಲು 14 ಯತಿವರರ ಮಹಿಮೆಗಳ | ತುತಿಸಲೆನ್ನಳವಲ್ಲಯುಕ್ತಿಯಲಿ ಅಪವಾದ | ಹೊತ್ತು ಕೊಳದಲೆ ಅವರು ಜಿತ ಇಂದ್ರಿಯತ್ವವನು | ಮತಿಮತಾಂ ಸುಜನಕ್ಕೆ ಪ್ರತಿರಹಿತದಿಂ ತೋರುತ |ಹಿತದಿಂದ ಲಾರಾಮ | ಸೇತು ಯಾತ್ರೆಯ ಗೈದುಕ್ಷಿತಿ ಚರಿಸಿ ಬರಬರುತ | ಹಿತಶಿಷ್ಯ ವ್ಯಾಜದಿಂಸತ್ಯ ಧೀರ್ರನು ಚರರ | ಕೃತ ಬಹಿಷ್ಕರ ಗೆಲ್ದು ಶಾಂತತೆಯನೇ ತೋರ್ದರು 15 ವರಲಕ್ಷ್ಮಿ ಪ್ರಿಯ ತೀರ್ಥ | ಕರಗಳಿಂದರ್ಚಿತವುಪರಿಸರಾರ್ಚಿತ ಯೋಗ | ನರಹರಿಯು ವ್ಯಾಸಮುನಿವರದ ಗೋಪತಿ ಕೃಷ್ಣ | ಸಿರಿವ್ಯಾಸಯತಿ ರಚಿತ ಎರಡೇಳು ರಜತ ಪ್ರತಿಮೆ |ಗುರುವರ ಬ್ರಹ್ಮಣ್ಯ | ವರದ ವಿಠ್ಠಲದೇವಸರ್ವಜ್ಞರರ್ಚಿಸಿದ | ವರ ಶರಣ್ಯ ವಿಠಲನುನಿರುತ ಪೂಜಿತವಾಗಿ | ಶರಿರ ಭೌತಿಕ ಬಿಡುವ ವರ ಸಮಯ ತಾನುಸುರಿರೆ16 ಸಂತೈಸಿ ಇತ್ತರಾಶಿಷವ 17 ನೀಲ ಕಾಲ | ವರುಷವನು ಪೈಂಗಳವು | ಎರಡೊಂದನೇ ಮಾಸವರಶುಕ್ಲ ಹರಿದಿನದಿ | ಸರಿತು ವರ ಕಣ್ವತಟಪರಮ ಸುಕ್ಷೇತ್ರದಲಿ | ವರಯೋಗ ಮಾರ್ಗದಲಿ ದೇಹ ಹರಿಗರ್ಪಿಸಿದರು 18 ಜಯ ಜಯತು ಶುಭಕಾಯ | ಜಯಜಯತು ತಪಶೀಲಜಯ ಶಮೋದಮವಂತ | ಜಯ ಶಾಪನುಗ್ರಹನೆಜಯಲಕ್ಷ್ಮಿ ವರಜಾತ ಜಯಲಕ್ಷ್ಮಿ ಪ್ರಿಯ ತೀರ್ಥ ಜಯ ಜಯತು ವಿಶ್ವಮಿತ್ರ |ಪ್ರಿಯ ಗುರುಗಳಾಂತರ್ಯ | ಜಯ ದೇವ ನೋಳ್ಪರಮಪ್ರಿಯನಾದ ತಂದೆ ಮುದ್ದು | ಮೋಹನ್ನ ವಿಠಲಾತ್ಮಜಯ ಗುರೂ ಗೋವಿಂದ | ವಿಠ್ಠಲನ ಭಜಿಸಿದರೆ ನಯಸುವನು ಪರಮಗತಿಗೆ 19
--------------
ಗುರುಗೋವಿಂದವಿಠಲರು
ಗುರು ಮೋಹನ ವಿಠಲ ಸಲಹಬೇಕಿವನಾಕರುಣಾ ಪಯೋನಿಧಿಯೆ ಮರುತಾಂತರಾತ್ಮ ಪ ನಿಗಮವೇದ್ಯನೆ ಹರಿಯೆ | ರಘುರಾಮ ದಾಸರೊಳುಮಿಗೆ ಸುಪ್ರೇರಕನಾಗಿ | ಮಗನ ಮದುವೆಯಲೀಅಘಹರವು ತವನಾಮ | ಸದ್ಗುರೂ ಕರುಣೆಯಲಿನಗುನಗುತ ಒದಗಿಸಿದೆ | ನಗಧರನೆ ದೇವಾ 1 ಮೋದ ಪಾದ ಕಾ ನಮಿಪೇ 2 ಹರಿಗುರೂ ಸದ್ಭಕ್ತಿ | ತರತಮದ ಸುಜ್ಞಾನಕರುಣಿಸೀ ಪೊರೆ ಇವನ | ಗುರುವಂತರಾತ್ಮ |ಪರಮ ಗುರು ಕಾರುಣ್ಯ | ದರುಶನವ ಪಡೆದಿಹನುಪರಿಪರಿಯ ಸೌಖ್ಯಗಳ | ಕರುಣಿಸೋ ಹರಿಯೇ 3 ಸೊಲ್ಲು ಲಾಲಿಸುತಾ 4 ದಾವಾಗ್ನಿಯನೆ ನುಂಗಿ | ಗೋವಳರ ಪಾಲಿಸಿದೆಪಾವಮಾನಿಯ ಪ್ರೀಯ | ನೀ ವೊಲಿದು ಇವಗೇಭಾವದಲಿ ತವರೂಪ | ತೋರೆಂದು ಭಿನ್ನವಿಸೆದೇವದೇವನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರು ವಿಜಯರಾಯರ ಪದಸರಸಿಜ ಸೇವಿಪ ನರನೇ ಜಗನ್ಮಾನ್ಯ ಧನ್ಯಾ ಪ ದುರಿತ ತರಿಯಲವತರಿಸಿ ನರಹರಿಯ ಪರಿಚರಿಸುವ ನಿಜ ಅ.ಪ ಭೂಕಾಂತನ ಬಹು ಬಾಧಿಗೆ ತಾಳದೆಈ ಕರುಣಿಕನ ತನವಾಬೇಕಿಲ್ಲೆಂದರು ತಾಕಿಕದ ಸ್ಥಿತಿಸಾಕುವ ಶ್ರೀ ದೇವಾಶ್ರೀ ಕಳತ್ರನ ಕೃಪಾ ಕಟಾಕ್ಷದಿಂ-ದೇಕ ಮನೋಭಾವಾಸ್ವೀಕರಿಸುತ ಪರಲೋಕ ಸಾಧನವನೀ ಕರಿಸಿದರಾನೇಕ ದುರ್ವಿಷಯವ 1 ಇಂತುಪಯ ನಿಶ್ಚಿಂತನಾಗಿ ಗುರು-ವಂತರಾತ್ಮ ಹರಿಯಾಸ್ವಾಂತತಿ ಭಜಿಸುತ ಚಿಂತವರೇವಲಿ ಹನು-ಮಂತನ ಪರಮದಯಾಎಂತು ಪೇಳಲಿ ಬಲು ಶಾಂತರಾಗಿ ಶ್ರೀ-ಕಾಂತನ ಪರಿಪರಿಯಾಅಂತರಂಗದೊಳನುಭವಿಸುತ ಗುಣ-ವಂತರಿವರಿಗೆ ದಿಗವಂತದಿ ಸರಿಯಾ 2 ಲೇಸು ಜ್ಞಾನವ ಬಯಸುವ ಜನರೋಲ್‍ಆ ಸೋಮಪುರದಲಿವಾಸವಾದ ರಾಮದಾಸರಿಂದುಪ-ದೇಶವ ಕೊಳ್ಳುತಲೀಹೇಸಿ ವಿಷಯದಿಂದೋಷಿಯಾದ ಶ್ರೀನಿ-ವಾಸರಾಯರಲ್ಲೀ ಯೇಸು ಜನ್ಮದ ಸುಕೃತವು ಇವರನು ನಿ-ರ್ದೊಷಿಗಳನು ಗೈದಿಸಿದರು ತ್ವರಿತದಲಿ 3 ವೇದ ವೇದ್ಯನ ಗುಣಂಗಳ ಪದ ಸು-ಳಾದಿ ಪ್ರಮೇಯವನೂ ಸಾದರದಿಂದಲಿ ಭೂದೇವರಿಗೆ ಬೋಧಿಸಿ ತತ್ವವನೂಸಾಧಿಸಿ ಭೇದವ ಜೀವೇಶ್ವರ ಮತಭೇದಿಸಿ ವಾದಿಯನೂಆದಿ ವ್ಯಾಧಿ ಅನಾದಿ ಭೂತಗಣ ಭೇದಿಸಿ ಮಾಡಿ ಪರೋದರ ಗತವನೂ 4 ಪತಿ ಅಚಲ ವ-ಸತಿಯನೆ ಮಾಡೀದಾಕೃತಿ ರಮಣನ ಒಲಿಸುತನಶನ ವ್ರತ ಪಥದಿಂದಾಗಾಧಾನುತಿಸುತ ಕಮಲಾಪತಿ ನರಸಾರಥಿ ಪ್ರತಿಮೆಯಪ್ರತಿಷ್ಠಿಯ ಹಿತದಿಂದಗೈದಾ 5
--------------
ಕಮಲಪತಿವಿಠ್ಠಲರು
ಗುರು ಸಾರ್ವ _ ಭೌಮಾ ದೊರಕಿಸುತ ಹರಿಕರುಣ ಪೊರೆ ರಾಘವೇಂದ್ರಾ ಪ ಅಂದು ಹರಿ ತವಶರದಿ ಕರ ಪೊರೆದಂತೆ ನಂದಿ ಸುತ ದುರಿತೌಘ ಇಂದೆನಗೆ _ ಮೈದೊರು ಗುರುವೇ ಕುಂದು ಮಯ ಕಲಿಯೊಳಗೆ ಕಂದುತಿಹ ಕಂದರನು ತಂದೆ ಗುರು ಕಾಯದಿರೆ ಮುಂದು ಬರೆ ಆಗುವದೆ ಸ್ವಾಮೀ 1 ಕತ್ತಲೆಯು ಸುತ್ತಿಹುದು ಮುತ್ತಿಹವು ಕುತ್ತುಗಳು ಬತ್ತಿಹವು ಶಕ್ತಿಗಳು ಹತ್ತವೈ ಚಿತ್ತದೊಳು ಏನೂ ಎತ್ತುಗಳ ತೆರದಂತೆ ಸುತ್ತುತಲಿ ಭವದಲ್ಲಿ ಭಕ್ತಿಯನು ಕಾಣದಲೆ ಮೃತ್ಯುವಿಗೆ ತುತ್ತಾಹೆ ನಲ್ಲೋ 2 ಪರಿಪರಿಯ ಹರಕೆಗಳ ಪೂರೈಸಿ ಭಕುತರಿಗೆ ನಿರುತದಲಿ ಪೊರೆವವಗೆ ಭಾರವೇ ನಾ ನೊಬ್ಬ ಧೊರೆಯೇ ಗುರು ಸೇವೆ ಮಾಡರಿಯೆ ಬರಿ ಮೂಢ ಕಡು ಪಾಪಿ ಶಿರವಿಡುವೆ ಚರಣದಲಿ ಕರುಣಾಳು ಭರವಸೆಯೆ ನನಗೇ 3 ಪ್ರಹ್ಲಾದ ಬಲಿತಾತ ಬಾಹ್ಲೀಕ ಕುರುಪೋಷ ಶ್ರೀ ಹರಿಯು ಗುರುಭಕ್ತಿ ವಾಹಿನಿಯ ಹರಿಸೈಯ ಸತ್ಯಸಂಧಾ ದೇಹದಲಿ ಬಲವಿಲ್ಲ ಈಹಗಳು ಬಿಡದಲ್ಲ ಬಾಹಿರನು ನಿನಗಲ್ಲ ತ್ರಾಹಿ ಗುರು ನೀ ಬಲ್ಲೆ ಎಲ್ಲಾ4 ಶ್ರೀ ಮಧ್ವ ಗುರು ಚೇಲ ತಾಮಸರ ನಿರ್ಮೂಲ ಶ್ರೀಮಂತ ಗುಣಮಾಲ ಶ್ರೀ ಮನೋಹರ ಕೃಷ್ಣವಿಠಲ ಯಜಕಾ ಕಾಮಿತಾ ಫಲದಾತ ನೇಮದಲಿ ಹರಿನಾಮ ನುಡಿಸೆಂಬೆ ಸತತಾ 5
--------------
ಕೃಷ್ಣವಿಠಲದಾಸರು
ಗುರುಚರಣ ಪೂಜೆಯನು 'ರಚಿಸುವೆನೀಗಪರಮಾತ್ಮನೆಂದೆಂಬ ಸ್ಥಿರಮನದಿ ಬೇಗ ಪವರಮಂತ್ರರೂಪದಲಿ ಗುರು ತಾನು ದಯದಿಂದಭರದಿಂದ ಹೃದಯಮಂದಿರಕೆ ಬರಲಾಗಿಗುರುತರದಹಂಕಾರಶಯನದಿಂ ಮುರಿದೆದ್ದುಬರುವೆನಿದಿರಾಗಿ ಕರೆತರುವೆನೊಡಗೂಡಿ 1ಬ್ರಹ್ಮಕಮಲದಲೊಡೆದು ಜ್ಞಾನನಾಳದಿ ಕೂಡಿರಮ್ಯದಳವೆಂಟುಳ್ಳ ಕಮಲ ಮಧ್ಯದಲಿನಮ್ಮ ಗುರುಮೂರ್ತಿಯನು ಸಂಭ್ರಮದಿ ಕುಳ್ಳಿರಿಸಿವೊಮ್ಮನದಲಘ್ರ್ಯಾದಿಗಳನು ಭಕುತಿಯಲಿತ್ತು 2ಕರಗಳೆರಡುಳ್ಳ ಹರಿ ನಯನವೆರಡರ ಹರನುವರಮುಖ'ದೊಂದರಲಿ ವಾಗೀಶನೆನಿಸಿಪರಿಹರಿಸಿ ಗುಣಗಳನು ಪರಬ್ರಹ್ಮವಾಗಿರುವಗುರುವರನ ಮೂರ್ತಿಯನು ನೆರೆ ನೋಡಿ ಮನದೊಳಗೆ 3ಅ'ವೇಕವಂ ಪರಿದ ಗುರುಪದಕೆ ಪಾದ್ಯವನುಸು'ವೇಕವೆಂಬಘ್ರ್ಯವನು ಸ'ತ ಕೊಟ್ಟುಅ'ವೇಕದಿಂ ಬಂದ ಜೀವಭಾವವ ಬಿಡಿಸಿಕ'ವರನು ನೀನೆಂಬ ಶುದ್ಧಾಚಮನದಿಂದ 4ಪರಮಪಾವನರೂಪ ಸ್ನಾನದುಪಚಾರದಲಿಎರಡಿಲ್ಲವೆಂದೆಂಬ ಶುಭ್ರ ವಸ್ತ್ರದಲಿಬರೆದು ತಾ ಜೀವರೊಳು ಸೂತ್ರಾತ್ಮನಾದಡೆಯು ಬೆರೆಯದಿಹನೆಂತೆಂಬ ಸೂತ್ರೋಪಚಾರದಲಿ 5ಶರಣಾಗತರ ಕಾಯ್ವ ಗುಣಗಣಗಳಾಭರಣಪರಿಪರಿಯ ಕಾಮಗಳ ಹೊದ್ದದನುಲೇಪನೆರೆ ನಿವಾರಿತವಾದ ವಾಸನಾಕ್ಷಯ ಪುಷ್ಪಸರಗಳೀ ಪರಿಭಾವನೆಗಳೆಂಬ ಭಕ್ತಿಯಲಿ 6ಜಡ ದುಃಖ ಪುಸಿಗಳಿಗೆ ಬೇರೆಂಬ ಧೂಪದಲಿಎಡೆಬಿಡದ ಜ್ಯೋತಿಃಸ್ವರೂಪ ದೀಪದಲಿಬಿಡದ ಸುಖದನುಭವದ ದಿವ್ಯ ನೈವೇದ್ಯದಲಿಜಡಕೆ ಮಂಗಳ'ತ್ತ ಬಗೆಯ ತಾಂಬೂಲದಲಿ 7ನಿತ್ಯ ಪ್ರಕಾಶದಲಿ ಪೊಳೆವ ಮಂಗಳ ದೀಪಸತ್ಯದಾಧಾರದಲಿ ಸುಳಿವ ಕರಣಗಳಮತ್ತೆ ಸತ್ಯದೊಳಿರಿಸುತಿಹ ಮಂತ್ರಪುಷ್ಪದಲಿಸುತ್ತುವರಿದಿಹ ವಸ್ತುವೆಂದು ಬಲವಂದು 8ಘನ ಮ'ಮನಂಘ್ರಿಯಲಿ ತನು ಮನಾದಿಗಳನ್ನುನಿನಗೆ ಸಂದುದೆನುತ್ತಲಿತ್ತು ನ'ುಸುತ್ತಾಕನಕಮಯವಾದ ಶ್ರೀ ತಿರುಪತಿಯ ವೆಂಕಟನತನುರೂಪ ನೀಲಕಂಠಾರ್ಯರನು ಬಿಡದೆ 9ಓಂ ಸನಾತನಾಯ ನಮಃ
--------------
ತಿಮ್ಮಪ್ಪದಾಸರು
ಗುರುಬೋಧ ಪರಮಸುಖಕಾರಿ ಬಾರಿ ಬಾರಿಗೂ ಕೇಳೈ ಭವರೋಗೀ ಪ ಬಿಡು ಬಾಳಿನ ಭ್ರಮೆಯ ಸಂಸಾರಿ ದುಃಖದ ಬಾಳಿದು ವಿನಾಶಕಾರಿ ಇದರೊಳು ಸಿಗುತಿಹ ಸುಖವು ವಿಕಾರಿ ತಿಳಿಯೈ ಮುಕ್ತನಾಗಲಿದು ದಾರಿ 1 ಆರಿ ನಿನ್ನಯ ನಿಜವಾ ಸುವಿಚಾರಿ ಅರಿವೇ ನಿನ್ನಯ ಈ ಭವತಾರಿ ಬೇರಾವುದು ನಿನಗಾಗದು ದಾರಿ ಈ ನುಡಿ ಪೇಳುತಿಹುದು ಶೃತಿಸಾರಿ 2 ಜಾಗರಾ ಕನಸು ನಿದ್ರೆಯ ಮೀರಿ ಅಮರವಾಗಿರುವ ಪದವನೆ ತೋರಿ ಅದೆ ನೀನೆನ್ನುತ ಪರಿಪರಿ ಸಾರಿ ಶಂಕರಭೋಧವಿದುವೆ ಭವಹಾರಿ3
--------------
ಶಂಕರಭಟ್ಟ ಅಗ್ನಿಹೋತ್ರಿ
ಗುರುರತ್ನ ಪರಮ ಪ್ರಿಯ ಕರುಣಾನಿಧೆ ನಿಮ್ಮ ಶರಣು ಹೊಕ್ಕೆನು ಪೊರೆಯಬೇಕೆನ್ನ ದೊರೆಯೆ ಪ. ವರ ತಂದೆ ಮುದ್ದುಮೋಹನ ದಾಸಾರ್ಯರೆ ಪರಿಪರಿಯಿಂದ ಭಕ್ತರನು ಪೊರೆಯುವರೆ ಪರಮಾರ್ಥ ಚಂದ್ರೋದಯದ ಪ್ರಕಾಶಕರೆ ಪರಿಮಳ ಸುನಾಮದಲಿ ಸರ್ವತ್ರವ್ಯಾಪಕರೆ 1 ತರತರದ ಸುಗುಣ ಮಣಿಮಾಲೆಯಿಂ ಶೋಭಿಪರೆ ವರಶಿಷ್ಯ ರತ್ನಪದಕಗಳಿಂದಲೊಪ್ಪಿಹರೆ ಸುರರಗಣ ಮಧ್ಯದಲಿ ಪರಿಶೋಭಿಸುತಲಿಹರೆ ಮೊರೆಹೊಕ್ಕವರ ಕಾಯ್ವ ಪರಮ ಕರುಣಾಕರರೆ 2 ಕನಸಿನಲಿ ಮನಸಿನಲಿ ಕಳವಳವ ಹರಿಸುವರೆ ಮನಸಿಜಪಿತನನ್ನು ಮನದಿ ನೆನೆಯುವರೆ ಇನಕೋಟಿತೇಜ ಶ್ರೀ ಶ್ರೀನಿವಾಸನ ಕೃಪೆಗೆ ಅನುಮಾನವಿಲ್ಲದೆಲೆ ಅರ್ಹತೆಯ ಕೊಡಿಸುವರೆ 3 ಭಕ್ತರನು ಪೊರೆಯುವ ಕಾರುಣ್ಯನಿಧಿ ಎಂದು ಪಾದ ನಂಬಿರುವೆ ಭಕ್ತವತ್ಸಲ ಶೇಷಶಯನನಾ ಸೇವೆಯನು ನಿತ್ಯ ಮಾಳ್ಪಂಥ ಸೌಭಾಗ್ಯ ನೀಡುವುದು 4 ಕವಿದಿರುವ ಅಜ್ಞಾನಪರೆಯನ್ನು ಛೇದಿಸುತ ಸವಿಯಾದ ಹರಿಯ ನಾಮಾಮೃತ ಉಣಿಸಿ ಪವನನಂತರ್ಯಮಿ ಗೋಪಾಲಕೃಷ್ಣವಿಠ್ಠಲ ತವಕದಿಂದಲಿ ಪೊಳೆವ ಸುಜ್ಞಾನ ನೀಡುವುದು 5
--------------
ಅಂಬಾಬಾಯಿ
ಗುರುರಾಜ ಗುರುಸಾರ್ವಭೌಮ ಪ ಗುರುರಾಜ ತವ ಪಾದ ಸರಸಿಜಯುಗಲಕ್ಕೆ ಮೊರೆಪೊಕ್ಕ ಜನರನ್ನ ಪೊರೆ ಎಂದೇ ಅ.ಪ ಶರಣ ಪಾಲಕನೆಂಬೊ - ಬಿರುದು ಬೀರುತಲಿದೆ ಶರಣರ ಮರೆವೊದು ಥರವೇನೋ 1 ಸಾರಿದಜನರ‌ಘ ದೂರಮಾಡುವೆನೆಂಬೊ ಧೀರರ ವಚನವು ಸಾರುತಿದೆ 2 ದೂರದೇಶದಿ ಜನ - ಸಾರಿ ಬಂದರೆ ವಿ - ಚಾರಿಸಿ ಹರಕೆ ಪೊರೈಸುವೀ 3 ಕುಷ್ಟಾದಿ ಮಹರೋಗ ನಷ್ಟಮಾಡುತಲ - ಭಿಷ್ಟೇಯ ಪೂರ್ತಿಪ ಮಹ ಶ್ರೇಷ್ಠನೆ 4 ಆದಿವ್ಯಾಧಿ ಉ-ಪಾಧಿ ಸಂಘಗಳನ್ನು ಮೋದ ಸಲಿಸುವಿ 5 ಸತಿಜನರಿಗೆ ಅತಿ ಹಿತದಿಂದ ಸುತರನ್ನ ಸತತ ನೀಡುವಿ ಯತಿ ಕುಲನಾಥ 6 ಮತಿ ಹೀನ ಅತಿ ಮೂರ್ಖ ತತಿನಿನ್ನ ಭಜಿಸಲು ವಿತತ ಭಕುತಿ ಜ್ಞಾನ ನೀಡುವೀ 7 ಮೂಕ - ಬಧಿರ - ಪಂಗು - ಏಕೋಭಾವದಿ ಸೇವೆ ಏಕಮನದಿ ಮಾಡೆ ರಕ್ಷೀಪಿ 8 ಅವರ ಮನೋ ಬಯಕೆ ಹವಣಿಸಿ - ನೀಡುತ ಅವನಿಯೊಳಗೆ ನೀ ಮೆರೆಯುವೀ 9 ಅಂಧಜನಕೆÀ ಚಕ್ಷು - ವಂಧ್ಯಜನಕೆ ಸುತರು ಬಂದ ಬಂದವರರ್ಥ ಪೂರೈಸುವೀ 10 ಪರಮಂತ್ರ ಪರಯಂತ್ರ ಪರಕೃತ್ಯಪರಮಾಹಿ ಪರಿಪರಿ ವ್ಯಥೆಗಳ ಹರಿಸುವೀ 11 ದುರುಳಜನರ ಬಾಧೆ ಮೊರಳುಮಾಯದ ಮೊದ್ದು ಕಿರಳುಪದ್ರಗಳೆಲ್ಲ ಕಳೆಯುವೀ 12 ಕಾಮಿತ ಫಲಗಳ - ಕಾಮಿಪ ಜನರಿಗೆ ಪ್ರೇಮದಿ ನೀಡುವೊ ಧ್ವರಿ ನೀನೇ 13 ಅನ್ನ ವಸನ ಧನ - ಧಾನ್ಯ ಹೀನರಗಿನ್ನು ಮನ್ನಿಸಿ ನೀನಿತ್ತು ಸಲಹುವೀ 14 ಅಧಿಕಾರ ಕಳಕೊಂಡು ಬದಕಲಾರದ ಜನ ವದÀಗಿ ನಿನ್ನನು ಭಜಿಸೆ ಕರುಣಿಪೀ 15 ಮಾನವ ನಿನ್ನ ಸೇವೆ ಮಾಡುವನವ ಕೋವಿದನಾಗುವ ನಿಶ್ಚಯಾ 16 ಇನಿತೆ ಮೊದಲಾದ ಘನತರ ಮಹಿಮವು ಜನರಿಗೆ ಶಕ್ಯವೆ ಗುರುರಾಯಾ 17 ಸುರತರು ಸುರಧೇನು ವರಚಿಂತಾಮಣಿ ನೀನೆ ಶರಣವತ್ಸಲ ಬಹು ಕರುಣೀಯೇ 18 ದಿನ ದಿನ ಮಹಿಮವು ಘನ ಘನ ತೋರೋದು ಬಿನಗು ಮಾನವರಿಗೆ ತಿಳಿಯಾದೋ 19 ಕರುಣಾನಿಧಿಯೆ ನೀನು ಶರಣ ಮಂದಾರನೆ ಶರಣ ವತ್ಸಲ ನಿನಗೆ ಶರಣೆಂಬೆ 20 ವಸುಧಿತಳದಿ ನೀನೆ ವಶನಾಗೆ ಜನರಿಗೆ ವ್ಯಸನಗಳುಂಟೇನೊ ಪೇಳಯ್ಯಾ 21 ದುರಿತ ದುಷ್ಕøತವೆಲ್ಲ ದೂರದಲೋಡೋವು ಕರಿಯು ಸಿಂಹನ ಕಂಡತೆರನಂತೆ 22 ನಿನ್ನ ನಾಮದ ಸ್ಮರಣೆ ಘನ್ನ ರೋಗಗಳನ್ನು ಚೆನ್ನಾಗಿ ನಾಶನ ಮಾಳ್ಪೋದೋ 23 ರಾಘವೇಂದ್ರ ಗುರು ಯೋಗಿಕುಲಾಗ್ರಣಿ ವೇಗಾದಿ ಪೊರೆದೆನ್ನ ಪಾಲಿಪೆ 24 ಜನನಿ ಜನಕರು ತಮ್ಮ ತನಯರ ಪೊರೆದಂತೆ ದಿನದಿನ ನೀನೇವೆ ಸಲಹೂವಿ 25 ಅನಿಮಿತ್ತ ಬಾಂಧವ ಅನುಗಾಲ ನೀನಿರೆ ಜನರು ಮಾಡುವ ಬಾಧೆÉ ಎನಗೇನೋ 26 ಮನಸಿನೊಳಗೆ ನಿತ್ಯ ನೆನೆಯುತ ತವ ಪಾದ ವನಜ ಯುಗಳ ಮೊರೆ ಪೊಂದಿದೆ 27 ನಿನ್ನ ಮಹಿಮ ಶ್ರವಣ ನಿನ್ನ ಗುಣಕೀರ್ತನ ನಿನ್ನ ಮೂರ್ತಿಧ್ಯಾನ ನೀಡೈಯ್ಯಾ 28 ನಿನ್ನ ಉಪಾಸನ ನಿನ್ನ ದಾಸತ್ವವ ಚನ್ನಾಗಿ ಎನಗಿತ್ತು ಸಲಹೈಯ್ಯಾ 29 ನಿನ್ನನುಳಿದು ಈಗ ಮನ್ನಿಸಿ ಪೊರೆವಂಥ ಘನ್ನ ಮಹಿಮರನ್ನ ಕಾಣೆನೋ 30 ದಾತ ಗುರು ಜಗ ನ್ನಾಥ ವಿಠಲಗತಿ ಪ್ರೀತಿ ಪಾತ್ರನು ನೀನೆ ನಿಜವಯ್ಯೊ 31
--------------
ಗುರುಜಗನ್ನಾಥದಾಸರು
ಗುರುರಾಯ ನೀನೆ ಧ್ವರೀ ! ಧ್ವರೀ ! ಪ ಪರಮ ಭಾಗವತರ ನೀ ಮರೆಯದೆ ಪೊರೆವಂಥ ಅ.ಪ ಪರಮ ಭಕ್ತರು ನಿನ್ನ ಕರೆಯಲಾಕ್ಷಣ ಬಂದು ಪರಿಪರಿ ಸುಖಗಳ ಮರೆಯದೆ ಕೊಡುವಂಥ 1 ಶರಣ ಜನರಪ - ಮರಣ ಕಳೆದು ಸ್ಥೂಲ ಹರಣರಕ್ಷಿಸಿ ಸುಖ - ಅರಣದಲ್ಲಿಡುವಂಥ 2 ಅನ್ಯರಿಗಳವಡದ - ಘನ್ನ ಮಹಿಮನೆ ನಿನ್ನ ಮನ್ನದಿ ಭಜಿಪ ಜನರ - ಚನ್ನವಾಗಿ ಪೊರೆವಂಥ 3 ರಾಜ ಚೋರ ವ್ಯಾಘ್ರ - ರಾಜ ವೃಶ್ಚಿಕ ಸರ್ಪ ರಾಜಿ ನಕÀ್ರದ ಭಯ - ಮಾಜಿಸಿ ಪೊರೆವೊನಿಂಥಾ 4 ಭೂತಳದೊಳಗತಿ - ಖ್ಯಾತನಾಗಿ ಸದಾ ದಾತ ಗುರು ಜಗನ್ನಾಥ ವಿಠಲ ನೊಲಿಸಿದಂಥ 5
--------------
ಗುರುಜಗನ್ನಾಥದಾಸರು