ಒಟ್ಟು 581 ಕಡೆಗಳಲ್ಲಿ , 86 ದಾಸರು , 506 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಬೂರಿ ಹಿಡಿಸಿದನು ಪ ಅಂಬುಜಾಕ್ಷನು ದಯದಿ ಅ.ಪ ನಂಬೀದ ಜನರಿಗೆ ಬೆಂಬಲ ತಾನೆಂಬ ನಂಬಿಕೆ ಹೃದಯದಿ ತುಂಬುತ ತಾನೀಗ 1 ಆಶಾ ಪಾಶಕೆ ಸಿಲುಕಿ ಬೇಸತ್ತು ಬೆಂಡಾಗಿ ಮೋಸ ಹೋಗುತ್ತಲಿದ್ದೆ ಶ್ರೀಶ ದಯಾಂಬುಧಿ 2 ಹುಟ್ಟಿದ ದಿನದಿಂದ ಕಷ್ಟದಲ್ಲೇ ಬಂದೆ ಮುಟ್ಟಲಿದನು ಈಗ ಸಂತುಷ್ಟಿಯ ಕಂಡೆನು 3 ಕಾಡಿ ಬೇಡುವರಿಲ್ಲ ನಾಡೆಲ್ಲ ನಮ್ಮದೇನೆ ನೀಡುವ ದೊರೆ ಒಬ್ಬ ಈಡಿಲ್ಲದವನಾತ 4 ವಿಧಿ ವಿಸ್ಮರಣೆ ನಿಷೇಧ ಹರಿನಾಮ ಸುಧೆಯನ್ನು ಕರೆದು ಕರೆದು ಕುಡಿವೆ5 ತಂಬೂರಿ ಸಿಗುವುದು ತುಂಬ ಭಾಗ್ಯವು ಸತ್ಯ ಹಂಬಲಂಗಳ ಬಿಡಿಸಿ ತುಂಬುವ ಹರಿ ಮನದಿ6 ಪುಣ್ಯ ರಾಶಿಗಳೆಲ್ಲ ವದಗಿ ಬಂದವೊ ಏನೋ ಚಿನ್ಮಯ “ಶ್ರೀ ಕೃಷ್ಣವಿಠಲ”ನ ದಾಸನಾದೆ7
--------------
ಕೃಷ್ಣವಿಠಲದಾಸರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ತಾನಾ ತಂದನಾನಾ ತಾನೆಂಬುವದರ ಖೂನ ಏನೆಂದರಿಯ ಹೀನ ಮನುಜ ಪಾಮರ ಪೂರ್ಣ 1 ತಾನೆಂಬುದೆ ತಾ ದೈವ ನಾನೆಂಬುದೆ ತಾ ಜೀವ ಜ್ಞಾನದಿಂದ ತಿಳಿವ ಅನುಭವ ಆಶ್ರೈಸುವ2 ತಾನೆ ತಂದರ ನಾನಾ ತನ್ನಿಂದವೇ ಜೀವನ ನಾನೆಂಬುದವಗುಣ ಜನ್ಮಕಿದೆ ಸಾಧನ 3 ತಾನೆ ತಂದರ ತಾರಕ ನಾನೆಂದರೆ ನರಕ ಜ್ಞಾನ ಗುರುಮುಖ ಖೂನ ತಿಳಿವುದು ಸುಖ 4 ತಾನೆಂದವ ತಾ ಬ್ರಹ್ಮ ನಾನೆಂದರ ಅಹಮ್ಮ ಅನುಭವದಿಂದ ವರ್ಮ ಖೂನಾದರ ಸಂಭ್ರಮ 5 ಅರ್ಕ ನಾನೆಂದರೆ ತಾ ತರ್ಕ ಹೀನಗುಣ ಸಂಪರ್ಕ ಏನೆಂದರಿಯ ಮೂರ್ಖ 6 ತಾನೆಂದರೆ ತಾಂ ಮಾನ್ಯ ನಾನೆಂದರಮಾನ್ಯ ಖೂನಮಾಡಿ ತಾರ್ಕಣ್ಯ ಅನುಭವಿಸಲು ಧನ್ಯ 7 ತಾನೆಂದರೆ ತಾ ಬಂದೆ ನಾನೆಂದು ಬಲು ನೊಂದೆ ಅನೇಕ ಜನ್ಮದಿಂದ ದಣಿದು ನಾ ಸಾಕೆಂದೆ 8 ತಾನೆಂಬುದು ಸುಜ್ಞಾನ ನಾನೆಂಬುದು ಅಜ್ಞಾನ ತಾನೆಂದರೆ ಅಣುರೇಣು ನಾನೆಂದರನುಮಾನ 9 ತಾನೆಂಬುದ ತೋರಿಸಿ ನಾನೆಂಬುದ ಮರಸಿ ತಾನೆತಾನಾದ ಋಷಿ ಆನಂದೋಬ್ರಹ್ಮ ಸೂಸಿ 10 ತಾನೆ ತಾನಾಗಿ ಒಂದೆ ಖೂನ ದೋರಿದ ತಂದೆ ಭಾನುಕೋಟಿ ತೇಜೊಂದೆ ಪೂರ್ಣ ಮಹಿಪತಿಗೊಂದೆ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾಮರಸ ನೆರೆ ನಂಬಿದೆ ಪ ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ. ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ ಉಪೇಕ್ಷೆ ಮಾಡಿ ಕಳೆದೆ ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ ಅಪಕಾರ ಕಾಣುತಿದೆಕೋ ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆ ತಪ ವೃದ್ಧರನ್ನು ಹಳಿವೆ ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ 1 ಮಾರನ ಉಪಟಳಾಕಾರದಲಿ ನಾ ಬಲು ಪೋರ ಬುದ್ಧಿಯನು ಮಾಡಿ ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ ಕೋರಿದ್ದು ಇತ್ತು ನೀಡಿ ಕ್ರೂರಮಾನವರೊಳಗೆ ಆಡಿ ವಾರಿಜನಾಭ ನಿನ್ನ ಆರಾಧನೆಯ ಮರೆದು ಧಾರಿಣೀ ಭಾರದೆ ಪರಲೋಕ ಮರೆದೆ 2 ಭೂಸುರರು ಚಂಡಾಲ ಜಾತಿಯೆನ್ನದೆ ಬಲು ಹೇಸಿಕಿಲ್ಲದೆ ತಿರುಗುವೆ ಪರಿ ವೇಷವನು ಧರಿಸಿ ಮೆರೆದೇ ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ ದಾಸ ಸಹವಾಸ ಜರೆದೆ ವಾಸುಕೀಶಯನ ವಸುದೇವತನಯನೆ ನಿನ್ನ ದಾಸನೆನ್ನಿಸದೆ ಅಪಹಾಸ ಮಾನವನಾದೆ 3 ಹರಿದಾಸರ ಬಳಿ ಅರಘಳಿಗೆ ಕೂತರೆ ಶಿರವ್ಯಾಧಿಯೆಂದೇಳುವೇ ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ ಮರೆದು ಲಾಲಿಸಿ ಕೇಳುವೆ ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ ಪರಮ ಹರುಷವ ತಾಳುವೆ ಗುರುಹಿರಿಯರೊಂದುತ್ತರವನಾಡಲು ಕೇಳಿ ಧರಿಸಲಾರದೆ ನಾನು ಮತ್ಸರಿಪೆನವರೊಡನೇ 4 ನಾ ಮಾಡಿದಪರಾಧ ಎಣಿಸಿ ಬರೆದರೆ ಈ ಭೂಮಂಡಲವು ಸಾಲದಿಹುದೊ ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು ಈ ಮತಿಯ ಅದು ಪೋಲದು ಹೋಮ ಜಪತಪಗಳನು ಎಷ್ಟು ಮಾಡಲು ಪಾಪ ಸ್ತೋಮ ಎಂದಿಗು ಪೋಗದೊ ಸಾಮಜವರದ ಜಗನ್ನಾಥ ವಿಠಲ ನಿನ್ನ ಕಾಣಿ 5
--------------
ಜಗನ್ನಾಥದಾಸರು
ತಾಸು ಬಾರಿಸುತಿದೆ ಕೇಳೋ ಮನುಜತಾಸು ಬಾರಿಸುತಿದೆ ಕೇಳೋ ಪ ಮೋಸ ಹೋಗಲು ಬೇಡ | ಆಶಪಾಶಕೆ ಶಿಲ್ಕಿವಾಸುದೇವನ ಮನ | ಒಲಿಸುವುದೆಂದೂ ಅ.ಪ. ಶ್ರೀ ತರುಣೇಶನ ಜಗಕೇಕನೆನಿಪನಮಾತು ಮಾತಿಗೆ ನೆನೆ ಮನುಜಾ |ಗಾತುರಗೋಸುಗ ಆತುರ ಪಡದಲೆಪ್ರೀತಿ ಬಿಡಿಸೊ ಸಂಕೀರ್ತಿಸಿ ಎಂದು 1 ಕಾಲ ಕಳೆಯ ಬೇಡ ||ವ್ಯಾಳ ಶಯ್ಯ ಶ್ರೀ ವೆಂಕಟ ನಿಲಯನ |ವ್ಯಾಳೆ ವ್ಯಾಳೆಕೆ ನೆನೆ ಅಲಸದಲೆಂದು 2 ಹೆಣ್ಣು ಹೊನ್ನು ಮಣ್ಣುಗಳ ನೆಚ್ಚಿಬನ್ನ ಬಹಳವ ಪಡವಿಯೊ ಮನುಜಮುನ್ನವೆ ಯೋಚಿಸಿ ಎಚ್ಚರದಲ್ಲಿ |ಪನ್ನಗಶಯ್ಯನ ನೆನೆವುದೆಂದೂ 3 ಭವ ಸಿಂಧುವ ಕಳೆಯೋನಂದವನೀಯುವ ಇಂದಿರೆಯರಸನಚಂದದ ಚರಣಾರವಿಂದತುತಿಪುದೆಂದು 4 ತನುವು ಅಸ್ಥಿರ ಮನವು ಚಂಚಲವೊಧನವೂ ಸಾಧನಗಳು ಬಲು ದುಷ್ಟಾ |ಘನ ಮಹಿಮನು ಗುರು ಗೋವಿಂದ ವಿಠಲನದಿನ ದಿನ ನೆನೆದು ಸುಖಿಸುವುದೆಂದೂ5
--------------
ಗುರುಗೋವಿಂದವಿಠಲರು
ತಾಳು - ತಾಳು - ತಾಳಬೇಕೆನ್ನುವಿರೋ ಗುರುವೇ ಪ ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ. ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ | ಪಾದ ಶ್ರೀ ರಾಘವೇಂದ್ರ ಪ್ರಭವೇ 1 ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ2 ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ 3 ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ 4 ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ 5
--------------
ರಾಧಾಬಾಯಿ
ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ಪ ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ಅ ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ1 ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ2 ಪಟ್ಟಾವಳಿ ದುಕೂಲವನು ನಾನೊಲ್ಲೆಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ 3 ಮುತ್ತಿನಾಭರಣ ತಾಳಿ ಪದಕವ ನಾನೊಲ್ಲೆಸತ್ತಿಗೆಯ ನೆರಳಿನಲಿ ಸಾಗುವುದ ನಾನೊಲ್ಲೆನಿತ್ಯ ನಿನ್ನ ನೆನೆವರ ಮನೆಯ ಬಾಗಿಲ ಕಾಯ್ವತೊತ್ತುಗೌಡಿಯ ಮಗನ ಮಗನ ಮಗನೆನಿಸೆನ್ನ 4 ಆಶೆ ಪಾಶಗಳೆಂಬ ಜಂಜಾಟ ನಾನೊಲ್ಲೆದೇಶಾನುದೇಶಗಳ ತಿರುಗಾಟ ನಾನೊಲ್ಲೆಶ್ರೀಶಾದಿಕೇಶವನ ಭಜಿಪರ ಮನೆಯ ಕಾಯ್ವಕಸಗೌಡಿಯ ಮಗನ ಮಗನ ಮಗನೆನಿಸೆನ್ನ 5
--------------
ಕನಕದಾಸ
ತಿಳಿವರು ಮನುಜರು ತಿಳಿದೊಮ್ಮೆ ತಿಳಿಯರು ನಳಿನಾಕ್ಷ ನಾಶರಹಿತನಲ್ಲದಿಲ್ಲವೆಂದು ಪ ಅರ್ಕಜಂಬುಜ ಬಲ್ಲ .................. ಮಾರ್ಕಂಡೆಯ ಮುನಿ ಬಲ್ಲ ಮಹಿ ಬಲ್ಲಳು ಅರ್ಕ ತನುಜ ಬಲ್ಲ ಅಂಬರೀಷ ಬಲ್ಲ ದೇ ವರ್ಕಳವೊಡಿಯ ಮಾಧವನಲ್ಲದಿಲ್ಲವೆಂದು 1 ವಾಯುನಂದನ ಬಲ್ಲವಾ............. ಯತಿ ಬಲ್ಲ ಕರಿ ಬಲ್ಲನೊ ರಾಯ ಧರ್ಮಜ ಬಲ್ಲ ರಾಜ ರಾಜನು ಬಲ್ಲ ಮಾಯಾರೂಪತಾಳಿ ಹರಿಯಲ್ಲದಿಲ್ಲವೆಂದು2 ಗರುಡದೇವನು ಬಲ್ಲ ಗಂಗಾತನಯ ಬಲ್ಲ ಉರಗಾಧಿಪತಿ ಬಲ್ಲ ಉಮೆ ಬಲ್ಲಳು ................ಶರಣರಣ್ಣಪ್ಪ ಪರಮಾತ್ಮ -ಇಂ ದಿರಾಪತಿಯಲ್ಲದಿಲ್ಲವೆಂದು3 ಪಾರಾಶರನು ಬಲ್ಲ ಪ್ರಹ್ಲಾದ ಭಕ್ತ ಬಲ್ಲ ನಾರದಮುನಿ ಬಲ್ಲ ನರಬಲ್ಲನು ವಾರಿಜಸಖ ಬಲ್ಲ ವಶಿಷ್ಠ ತಪಸಿ ಬಲ್ಲ ಧಾರುಣಿಕರ್ತೃ ಶ್ರೀಧರನಲ್ಲದಿಲ್ಲವೆಂದು 4 ಬಲಿಚಕ್ರವರ್ತಿ ಬಲ್ಲ ಭೃಗುಋಷೇಶ್ವರ ಬಲ್ಲ ಕಳಸಸಂಭವ ಬಲ್ಲ.................. ಬಲ್ಲನು ಗಿಳಿಮುಖದವ ಬಲ್ಲ ಗೌತಮ ಮುನಿ ಬಲ್ಲ ಇಳಿಗೆ ಆಧಾರ ಶ್ರೀಕೃಷ್ಣನಲ್ಲದಿಲ್ಲರೆಂದು 5 ಉದಧಿರಾಯನು ಬಲ್ಲ ಉಧ್ಧವ ಯದು ಬಲ್ಲ ವಿಧುಶೇಖರ ಬಲ್ಲ ವಿದುರ ಬಲ್ಲ ಪದುಮನಾಭನೆ ಪರಗತಿಯಲ್ಲದಿಲ್ಲವೆಂದು 6 ಜನಕರಾಜನು ಬಲ್ಲ ಜಾಹ್ನವಿನದಿ ಬಲ್ಲಳು ದನುಜೋತ್ತಮ ಬಲ್ಲ ವಾಲ್ಖ್ಯ ಬಲ್ಲ ಅನುಸಾಲ್ವಪತಿ ಬಲ್ಲ ಅಜಮಿಳನು ಬಲ್ಲ ಜನಸ್ಥಿತಿಲಯ ಜನಾದರ್Àನ ಅಲ್ಲದಿಲ್ಲವೆಂದು7 ಜಮದಗ್ನಿ ಬಲ್ಲ ಜಾತವೇದಸ ಬಲ್ಲ ಸಾಮಾವರ್ತಿ ಬಲ್ಲ ಶಶಿ ಬಲ್ಲನು ಆ ಮಹಾಕಪಿ ಬಲ್ಲ ಅಕ್ರೂರನು ಬಲ್ಲ ರೋಮ ರೋಮ ಬ್ರಹ್ಮಾಂಡ ರಾಮನಲ್ಲದಿಲ್ಲವೆಂದು 8 ಪುಂಡರೀಕ ಬಲ್ಲ ದಾ................... ವಂದಾರವ ಬಲ್ಲ ಸಿರಿ ಬಲ್ಲಳು .............. ಆಶಾ ಶ್ರೀಶ ವಿಜಯವಿಠ್ಠಲೇಶನಲ್ಲದಿಲ್ಲವೆಂದು
--------------
ವಿಜಯದಾಸ
ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ
ತುರು ಮನವಾರ್ತೆಯಹರಿಬಲೆಯೊಳುಬಿದ್ದು ಹಲುಗಿರಿವುದ ನೋಡಿಪರಮವೈರಾಗ್ಯ ಖಡ್ಗದಿ ಮೋಹ ಪಾಶವಪರಿದು ಜ್ಞಾನಾಮೃತ ಪಾನಗೈಯೆಂದೆನು 1ಪರಧನವನು ಕಳಬೇಡ ಕೊಲ್ಲುವರೆಂದುವರದರು 'ುೀರಿಕದ್ದೊಡನೆ ಕೊಳದಿ ಸಿಕ್ಕಿಕೊರಗುತೆಲ್ಲರಿಗೆ ಪಲ್ಗಿರಿವಂತೆ ಬಯಲಿಗೆಬೆರತು ನೀ ಮುಂಗೆಡಬೇಡೆಂದು ಪೇಳಿದೆ 2ತಿರಿದುಂಬ ಪಾಪಿಗೆ ತುಪ್ಪ ಸಕ್ಕರೆ ಪಾಲುಬೆರೆದ ಮೃಷ್ಟಾನ್ನ ತಾ ಬರೆ ಸುಖದಿಂದುಂಡುುರದನ್ಯರೆಂಜಲಿಗೆರಗುವಂದದಿ ಪೂರ್ವದಿರವ ಬಯಸಿ ನೀನೀತೆರದಲಿ ಕೆ[ಡದೆ] 3ಹರಿಸ್ಮರಣೆಯ ಮಾಡು ಹರಿಕಥೆಗಳ ಕೇಳುಹರಿಯನರ್ಚಿಸಿ ನೋಡಿ ಹರುಷದಿಂ ಕುಣಿದಾಡುಹರಿ ಸರ್ವೋತ್ತಮನೆಂದು ಹಸನಾಗಿ ಬಾಳುವೆ'ರಿಯರೊಪ್ಪುವ ಮಾರ್ಗ 'ೀಗಿರು ನೀನೆಂದೆ 4ದೂಸುವವನಿಂದ ದೋಷ ಪೋಪುದು ನಿನ್ನಪೋಸುವವನಿಗೆ ಪುಣ್ಯ ಕೈಸಾರ್ವುದುರೋಷ ಹರ್ಷಗಳ ದೂರದಿ ಬಿಟ್ಟುಶ್ರೀಹರಿದಾಸರ ದಾಸರದಾಸ ನೀನಾಗೆಂದೆ 5ಶ್ರವಣಸುಧಾಪಾನ ರುಚಿಯ ಕಂಡರೆ ನೀನುಭವದುಃಖವೆಂಬ ಬಾಡಿದಗಂಜಿಗುಡಿವೆಯಾಸು'ವೇಕತನ ತಾನು ಸುಮ್ಮನೆ ದೊರೆವದೆಅ'ವೇಕತನವ ಬಿಟ್ಟಾನಂದಬಡುಯೆಂದೆ 6ಸಾರಿಗೆ ಸಾರಿಗೆ ಸಾರಿದರೆಯು ನಿನ್ನದಾರಿಯ ಬಿಡೆಯಲ್ಲ ದುಕ್ಕ ತೊಲಗದಲ್ಲಹೊರಲಾರೆನು ನಿನ್ನ ಹತ್ತಿರೆ 'ಧಿ ನನ್ನಸೇರಿಸಿ ಪೇಳಿದೆ ಸುಖಿಯಾಗಿ ಬಾಳೆಂದು 7ಸಾರಿದೆ ಸಾರಿದೆ ಕೆಡಬೇಡ ಭವಸುಖಹಾರುವದಿದು ನಿಜವಲ್ಲ ಸನ್ಮುಕ್ತಿಗೆದಾರಿಗೊಡದು ಸತ್ಸಂಗವ ಮಾಡಿ 'ಚಾರಿಸಿ ನಿನ್ನ ನೀ ಸುಖಮಯನಾಗೆಂದೆ8ಆಶೆಯ ಬಿಡಲೊಲ್ಲೆ ಆನಂದಬಡಲೊಲ್ಲೆಪೊಸದೆ 'ಷಯದ ಪೇರಡ'ಯೊಳಗೆಮೋಸಗೈವಳು ಮೃತ್ಯುವದರಿಂದ ಶ್ರೀಹರಿದಾಸರ ಜೊತೆಯ ಬಿಟ್ಟೊರ್ವ ಪೋಗದಿರೆಂದೆ 9ಬಲ್ಲೆಯ ಬಲ್ಲೆಯ ಗುರುಪದ ಸೇವೆಗೆಬಲ್ಲೆಯ ಬಲ್ಲೆಯ ಹರಿಕಥೆಗೇಳ್ಪರೆಬಲ್ಲೆಯ ಬಲ್ಲೆಯ ಹರಿನಾಮ ಸ್ಮರಣೆಯಕೊಲ್ಲುವೆ ಸಟೆಯಲ್ಲಿ ಕೇಳು ನೀ ನೀ ಮೇಲು 10ಗುರುಕರುಣವದೆಂಬ ಘಾಳಿ ಬೀಸಲಿ ತಾಳುತರಗೆಲೆಯಂತ್ತೆತ್ತಿ ತಂದು ಜ್ಞಾನಾಗ್ನಿಯೊಳ್‍ಉರು' ನಿನ್ನಯರೂಪನಡಗಿಸದಿಪ್ಪೆನೆವರಟು ಮಂಡೆಯದೆ ನಿನ್ನೊಡನೇಕೆ ಹಾರಲಿ 11ಬರಡು ಮನದೊಳೆ ಬರಿಜಗಳ'ದೆಂದುಗುರುವಾಸುದೇವಾರ್ಯ ಗುಪಿತದಿಂ ಚಿಕನಾಗಪುರದಿ ಜ್ಞಾನಾಮೃತಪಾನ ಗೈಸಿದುದರಿಂಬೆರೆದೆನಾತನೊಳು ನೀನಿರು ಪೋಗು ಬಯಲಾಗು 12
--------------
ವೆಂಕಟದಾಸರು
ತೆಗೆ ತೆಗೆ ಬಾಗಿಲನ್ನು ಲಕ್ಷ್ಮೀಪತಿ ತೆಗೆ ತೆಗೆ ಬಾಗಿಲನ್ನು ಪ ತೆಗೆ ತೆಗೆ ಬಾಗಿಲ ಜೋಗಿ ಕೇಶವದಾಸ ನಗುತ ಬಂದಿರುವನು ಸ್ವೀಕರಿಸಿನ್ನು ಅ.ಪ. ಹÉೀಸಿ ಸಂಸಾರವನ್ನು ತ್ಯಜಿಸಿ ಬಿಟ್ಟು ಆಶೆಪಾಶೆಗಳನ್ನು ಸಾಸಿಮೆ ಕಾಳಿಗೆ ಸರಿಮಾಡಿ ಭವವನ್ನು ವಾಸುಕಿ ಶಯನ ಶ್ರೀ ಲೋಲನ ನಂಬೀ 1 ನಿನ್ನಯ ಭಜನೆಯನು ಮಾಡುತ ಬಂದೆ ನಿನ್ನಯ ಸ್ಮರಣೆಯನು ಪನ್ನಗ ಶಯನ ಶ್ರೀ ದಾಸದಾಸರ ಪೋಷ ಮನ್ನಿಸಿ ನೋಡಲು ಚರಣವ ನಂಬೀ 2 ನಿನ್ನಯ ಲೀಲೆಯಲ್ಲೀ ವೇಷವ ಹಾಕಿ ನಿನ್ನ ನಾಟಕದಲ್ಲಿ ಚನ್ನಾಗಿ ಕುಣಿದು ಲೋಕದೊಳಹÀುತಿಯನಾಗಿ ಚನ್ನಕೇಶವ ಸೂತ್ರಧಾರನ ನಂಬೀ 3
--------------
ಕರ್ಕಿ ಕೇಶವದಾಸ
ತೆರಳಿ ಪೋದರಿಂದು ಪರಮ ಪದವನರಸುತ ಪ ಸಿರಿ ಶೇಷದಾಸಾರ್ಯರು ಅ.ಪ. ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ ವರಪೌರ್ಣಿಮಾ ಸಹಿತವಾದ ಕವಿವಾರದಿ ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ ನರಹರಿಯ ಚರಣಕಾಂಬ ಕಡು ತವಕದಿಂದ 1 ತಂದೆ ಮುದ್ದುಮೋಹನ ದಾಸವರ್ಯರಿಂದ ಕುಂದುರಹಿತನಾದ ಪ್ರಾಣನಾಥವಿಠಲ- ನೆಂದು ಅಂಕಿತೋಪದೇಶವನು ಕೈಕೊಂಡು ಬಂಧುರವಾದನೇಕ ಪದಗಳನು ರಚಿಸಿ 2 ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ ಕರವ ನೀಡದೆ ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ- ದೇಶವನು ಪರಮ ಸಂತೋಷದಿಂದಗೈದು 3 ಆಶಪಾಶವ ತೊರೆದು ಮೀಸಲು ಮನರಾಗಿ ವಾಸುದೇವನ ನಾಮ ಸೋಸಿನಿಂದ ಭಜಿಸಿ ಸಾಸುವೆಯಷ್ಟಾದರಾಯಾಸವನುಪಡದೆ ಈ ಶರೀರ ವಿಶ್ವೇಶನಾಧೀನವೆಂದು 4 ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ ಹಿಂಗದೆ ಕೊಡುವಂಥ ಮಂಗಳನ ಶ್ರೀ ರಂಗೇಶವಿಠಲನಂತರಂಗದಿ ನೋಡುತ5
--------------
ರಂಗೇಶವಿಠಲದಾಸರು
ತೊಂಡ ನೆನಿಸ ಬೇಡ ಹರಿಯೇ ಪ ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ. ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ 1 ಆಶೆಯ ತೊರೆದು ನಿಜ ದಾಸನಾಗಲಿಬಹುದು ದೇಶ ದೇಶವ ತಿರುಗಿ ಕಾಸುಗಳಿಸಲಬಹುದು ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ 2 ಹೀನ ಜನರಾ ಸಂಗ ಮಾನವಂತರಿಗಲ್ಲ ದೀನಜನಮಂದಾರ ಕೊಡಬೇಡ ಇದು ಎನಗೇ ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ 3
--------------
ಕೃಷ್ಣವಿಠಲದಾಸರು
ದತ್ತ ದಿಗಂಬರನೇ ವಂದಿಪೆ ನಾ ಕಾಯೈ ನೀ ಕರುಣಾ ಸಾಗರ ವಲ್ಲಭರಾಮಾ ಪಾಡುವೆನಾ ಹೇ ಜಗದೀಶಾ ನೀಗುಸು ಆಶಾ ಬೇಡುವೆ ಶ್ರೀಶಾ ವಿಷಯದೊಳಿರುವಾ ಈ ಘನಪ್ರೇಮಾ ನಿನ್ನೊಳಗಿರಲೈ ನಿರ್ಗುಣಧಾಮಾ ಸದ್ಗುರುನಾಥಾ ಹೇ ಅವದೂತಾ ಸತ್ಯ ಸ್ವರೂಪಾ ನಿತ್ಯಾನಂದಾ
--------------
ಶಂಕರಭಟ್ಟ ಅಗ್ನಿಹೋತ್ರಿ
ದಂಭಕ-ಭಕುತಿಯ-ಮಾಡಬೇಡ ಬರಿ ಡಿಂಭವ ಪೋಷಿಸೆ-ಪಾಡಬೇಡ ಪ ಅಂಬುಜನಾಭವ ಬಿಡಬೇಡ ಒಣ ಜಂಭವ-ಮಾಡುತ-ಕೆಡಬೇಡ ಅ.ಪ. ಕಾಸಿಗೆ ದಾಸನು ಆಗಬೇಡ-ಹರಿದಾಸನು ಆದರೆ ಆಶೆಬೇಡ ದೊರಕದು ತಿಳಿಗಾಢ 1 ಕಂಡಕಂಡೆಡೆ ತಿರಿಬೇಡ-ಯಮದಂಡಕೆ ಬೆದರದೆ ನಡಿಬೇಡ ಕೆಣಕುತ ಕೆಡಬೇಡ 2 ಮುಂಬರೆ ತಿಳಿಮೂಢ ಪರ ಹೆಂಡಿರು ವಿತ್ತವ ನೋಡಬೇಡ 3 ತುಚ್ಛರ ಸೇವೆಯ ಮಾಡಬೇಡ ಮನಸ್ವಚ್ಛತೆ ಪೊಂದದೆ ಇರಬೇಡ ಕೆಚ್ಚೆದೆ ಕಷ್ಟದಿ ಬಿಡಬೇಡದೈವೇಚ್ಛೆಯೆ ಸಕಲಕು ಮರಿಬೇq4 ಆತ್ಮಸ್ತುತಿಯನು ಮಾಡಬೇಡ ಪರಮಾತ್ಮನ ಗುಣಗಳ ಕದಿಬೇಡ ಗಾತ್ರವು ಅಸ್ಥಿರ-ತಿಳಿ-ಬೇಗ-ಜೀವೋತ್ತಮ ನಂಘ್ರಿಯ ಬಿಡಬೇಡ 5 ತಿಳಿಯದೆ ಇರಬೇಡ ಮನವನು ಸೋಲಬೇಡ 6 ಸ್ನೇಹವ ಮಾಡಬೇಡ ಭವ ಕಾಡಿಗೆ ಕಿಚ್ಚಿದು ಸರಿ ಪ್ರೌಢ 7 ನೆಂಟಗೆ ಸಾಲವ ಕೊಡಬೇಡ ಅದು ಗಂಟಿಗೆ ಮೊಸವೆ ತಿಳಿಬೇಗ ಒಂಟಿಲಿ ಊಟವ ಮಾಡಬೇಡ ವೈಕುಂಠಕೆ ಸಾಧನೆ ಬಿಡಬೇಡ 8 ದಾರಿಯು ಮರಿಬೇಡ ಒಲಿಸದೆ ಬಿಡಬೇಡ 9 ಚಿಂತನೆ ತಿಳಿಬೇಗ ಕಡು ಆಲಸ್ಯವ ಮಾಡಬೇಡ ಸಿರಿಬಿಡುವಳು ಆತನ ತಿಳಿಬೇಗ10 ಮಾಧವ ನೊಲಿಮೆಗೆ ಹೆದ್ದಾರಿ ಶೀಘ್ರದಿಪೊಗಾಡು 11 ಸತ್ಯವ ಧರ್ಮವ ಬಿಡಬೇಡ ಈ ಉಕ್ತಿಗಳಾಚೆಗೆ ಹಾಕಬೇಡ ಸತ್ಯವ ಪಠಿಸದೆ ಬಿಡಬೇಡ-ಶ್ರೀ ಸತ್ಯನ ಮತವನು ಪಿಡಿಬೇಗ12 ನಿಜಸುಖ ತಿಳಿಬೇಗ ನಿಷ್ಠಿಯ ಗುರುವಡಿ ಬಿಡಬೇಡ “ಶ್ರೀ ಕೃಷ್ಣವಿಠಲ”ನ ತೊರಿಬೇಡ13
--------------
ಕೃಷ್ಣವಿಠಲದಾಸರು
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು