ಒಟ್ಟು 238 ಕಡೆಗಳಲ್ಲಿ , 49 ದಾಸರು , 190 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀತಾಪತಿ ಹರಿ ವಿಠಲಾ | ಪ್ರೀತ ನಾಗೊ ಇವಗೇ ಪ ಮಾತಿಗೆ ಗತಿ ಪ್ರದ | ಖ್ಯಾತಿ ಉಳ್ಳವನೇ ಅ.ಪ. ಉಚ್ಛ ಸಂಸ್ಕøತಿ ಪೊತ್ತು | ಮೆಚ್ಚಿ ಹರಿಪಾದ ದಾಸ್ಯದೀಕ್ಷೆ ಕಾಂಕ್ಷಿಸುತಿಹನು | ಅಚ್ಯುತಾನಂತಾಕುಚ್ಛಿತನು ಇವನಲ್ಲ | ಅಚ್ಚ ಭಕುತನು ಇವಗೆಮೆಚ್ಚಿ ತವದಾಸ್ಯ ಕೊಡು | ಸಚ್ಚಿದಾನಂದಾ 1 ಸಿರಿ | ತೈಜಸಾಭಿಧನಿಂದಬೋದಿಸಿಹೆ ಅಂಕಿತವ | ಶ್ರೀದ ಶ್ರೀ ರಾಮ 2 ಮಧ್ವಮತ ಪದ್ದತಿಯ | ವೃದ್ಧಿಗೈಸಿವನಲ್ಲಿಬುದ್ಧಿ ಚತುರತೆ ಇತ್ತು | ಉದ್ದರಿಸೊ ಇವನಾಕೃದ್ಧ ಖಳ ಜನರಿವನ | ಸ್ಪರ್ಧಿಸದ ತೆರಮಾಡೊಮಧ್ವಾಂತರಾತ್ಮಕನೆ | ಅದ್ವಯನೆ ದೇವಾ 3 ಬಿಂಬೈಕ್ಯ ಚಿಂತನೆಯ | ಹಂಬಲವನೇ ಹಚ್ಚಿತುಂಬಿಸೋ ಸಾಧನವ | ಅಂಬುಜಾಂಬುಕನೇಉಂಬುಡುವ ಕ್ರಿಯೆಗಳನು | ಬಿಂಬ ಮಾಡಿಸೆ ಪ್ರತಿಬಿಂಬ ಮಾಳ್ಪನು ಎಂಬ | ನಂಬುಗೆಯ ನೀಯೋ 4 ಶ್ರೀವರನೆ ತವನಾಮ | ಸರ್ವದಾಸ್ಮರಿಪಂಥಭಾವವೀಯುತ ಹೃದಯ | ಗಹ್ವರದಿ ತೋರೀತಾವಕಗೆ ಭವವನಧಿ | ದಾಂಟಿಸಲು ಪ್ರಾರ್ಥಿಸುವೆಪಾವು ಮದ ಹರ್ತ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸೀತಾಪತಿವಿಠಲ ದಾಸಳ ನಿರ್ಯಾಣ ಪದ ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36 ತೊರೆದೈದು ದಿನ ಅನ್ನ ಹರಿಧ್ಯಾನಂಗತಳಾಗಿ ವರ ಗಂಗೆ ವದನದಿ ಪ್ರಾಶನಗೈದು ಅಭಿಮಾನ ತೊರೆದು ಭ್ರಾಂತಿಯ ಮೆರೆದು 37 ವರಹಜೆ ತುಂಗ ತೀರದಿ ಪ್ರಾಣನಾಥನ ಚರಣಮೂಲದಿ ಶಿವಮೊಗ್ಗ ಕ್ಷೇತ್ರದಲಿ ಹರಿಸ್ಮರಣೆಯಲಿ ಪ್ರಾಣ ಸಲಿಸುತಲಿ 38 ಸ್ವಭಾನುವತ್ಸರ ಭಾದ್ರಪದ ಬಹುಳ ಇದ್ದ ದಶಮಿ ದಿನ ಗುರುವಾರದಲ್ಲಿ ಮಧ್ಯರಾತ್ರಿಯಲಿ ತನು ತೊರೆದಿಲ್ಲಿ 39 ಕೇಶವದೂತರು ಮೀಸಲಿಂದಲಿ ನಿನ್ನ ಘಾಸಿಗೊಳಿಸದೆ ಕರೆದೊಯ್ದರೇನಮ್ಮ ಪೇಳೆ ಎನ್ನಮ್ಮ ಎಲ್ಲಿ ಪೋದ್ಯಮ್ಮ 40 ಹೆತ್ತಮ್ಮಗಿಂತಲೂ ಹೆಚ್ಚಾಗಿ ನಮ್ಮನ್ನು ಅರ್ಥಿಯಿಂ ಬೆಳೆಸಿದೆ ಅಭಿಮಾನದಿಂದ ಅನುರಾಗದಿಂದ ಬಹುಮಾನದಿಂದ 41 ಮೊಮಕ್ಕಳೆಂದರೆ ಬಹು ಪ್ರೀತಿ ನಿನಗಲ್ಲೆ ಒಮ್ಮೆ ನಾಲ್ವರು ಬಂದು ಇರುವೆವು ನಾವು ಆಲ್ಪರಿಯುವೆವು ಅಗಲಿ ಸೈರಿಸೆವು 42 ಅರ್ಥಿಲಿ ರಮಾಕಾಂತ ವಿಠಲಾಂಕಿತ ಕೃಷ್ಣ ಮೂರ್ತಿಯು ಪುತ್ರಗಿಂತಧಿಕದಿ ನಿನ್ನ ಅಂತ್ಯಕ್ರಿಯವನ್ನ ಮಾಡಿದ ಧನ್ಯ 43 ಶ್ರದ್ಧೆಯಿಂದಗ್ರಜನಿಂದ ಕೂಡುತ ನಿನ್ನ ಶುದ್ಧಭಾವದಿಗೈದ ಅಂತ್ಯಸೇವೆಯನು ಸ್ವೀಕರಿಸಿ ನೀನು ಹರಸಿ ಹಿತವನ್ನು 44 ತಿಳಿದು ತಿಳಿಯದೆ ನಾನು ಗೈದಪರಾಧವ ನಲವಿಂದ ಕ್ಷಮಿಸಿ ನಮ್ಮನು ಮನ್ನಿಸಿದೆ ಸಹನವ ತಳದೆ ಬಹು ಪ್ರೀತಿಗೈದೆ 45 ಎಲ್ಲ ಪರಿಯಲಿ ನಮ್ಮ ಕ್ಷಮಿಸಿ ಕಾಪಾಡಮ್ಮ ಬಲ್ಲಿದಳು ನೀನು ಆಶೀರ್ವದಿಸುವುದು ಸುಖವ ತೋರುವುದು ಕೃಪೆಯ ಮಾಡುವುದು 46 ಅಂಜನೆಕಂದ ನಿನ್ನವನೆಂಬ ಅಭಿಮಾನ ರಂಜಿಸೆ ಸಹಜದಿ ನಿನ್ನೊಳು ಮಾತೆ ಜಗದಿ ವಿಖ್ಯಾತೆ ಹರಿಗತಿಪ್ರೀತೆ 47 ಪತಿಗುರು ಪವನ ಹೃದ್ಗತಮೂರ್ತಿ ಚಿಂತನ ರತಳೆ ನಿನ್ನಯ ಚರಿತೆ ಪೇಳ್ದೆ ತಿಳಿದನಿತು ತಪ್ಪನು ಮರೆತು ಲಾಲಿಸು ಮಾತು 48 ಗೋಪಾಲಕೃಷ್ಣವಿಠಲನ ಸದ್ಭಕ್ತಳೆ ಶ್ರೀ ಪಾದಕ್ಕೆರಗಿ ನಾ ಜಯವ ಪಾಡುವೆನು ಧನ್ಯಳೇ ನೀನು ಮಾನ್ಯಳೆ ನೀನು 49
--------------
ಅಂಬಾಬಾಯಿ
ಸುಂದರ ಮೂರುತಿ ಹರಿಯೆ ಬಾ- ರೆಂದು ಕಶ್ಯಪ ಋಷಿ ಅದಿತಿಯರು ಮಂದಹಾಸದಿ ನಮ್ಮ ಮಂದಿರಕೀಗ ಗೋ- ವಿಂದ ಬಾ ಶ್ರೀಮುಕುಂದ ಬಾ ಯಾದವ ವೃಂದ ಬಾ ಬಲುಮುದದಿಂದ ಬಾ ಬಾ- ರೆಂದು ಕರದಾರು ಶೋಭಾನೆ 1 ಅಚ್ಚುತಾನಂತ ಶ್ರೀಹರಿ ನೀನು ಸಚ್ಚಿದಾನಂತಾತ್ಮನೆ ನೀನು ಮಿತ್ರೆ ಲಕುಮಿ ಒಡಗೂಡುತ ಬಾರೆಂದು ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು ಕೀರ್ತಿಪರು ಅನಸೂಯಾತ್ರಿಯರು ಬಾರೆಂದು ಕರೆದಾರು ಶೋಭಾನೆ 2 ಭಾಗವತರ ಪ್ರಿಯ ಬಾರೆಂದು ಭಾರದ್ವಾಜರು ಭಕ್ತಿಯಲಿ ಸತಿ ಸುಶೀಲೆ- ಯರು ಸುಂದರ ನಾರಿಯರು ಕರೆವರು ಕಂಸಾರಿ ಬಾರೆಂದು ಕರದಾರು ಶೋಭಾನೆ 3 ಹಸ್ತಿವರದ ಹರಿ ಬಾರೆಂದು ವಿಶ್ವಾಮಿತ್ರರು ಹರುಷದಲಿ ಸತಿ ಸಹಿತದಿ ಕರೆವರು ಭಕ್ತಿಯಲಿ ಪರಮಾಸಕ್ತಿಯಲಿ ಹರಿಯನು ಸ್ತೋತ್ರದಲಿ ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4 ಕೌಶಿಕ ಯಜ್ಞಪಾಲನೆ ಬಾ ಕಂಸನ ಸಭೆಯಲಿ ಸೆಳೆದನೆ ಬಾ ಹಂಸವಾಹನಪಿತ ಬಾರೆಂದು ಕರೆವರು ಗೌತಮರು ಪತ್ನಿ ಅಹಲ್ಯೆಯರು ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ ಬಾರೆಂದು ಕರದಾರು ಶೋಭಾನೆ 5 ಜಗದುದರನೆ ಶ್ರೀ ಹರಿಯೆ ಬಾ ನಿಗಮತಂದು ಸುತಗಿತ್ತನೆ ಬಾ ಝಗಿಝಗಿಸುವ ಆಭರಣಗಳ್ಹೊಳೆಯುತ ಬಾರೆಂದು ಜಯ ಜಯವೆನ್ನುವರು ಋಷಿ ಜಗದಗ್ನಿಯರು ರೇಣುಕ ಸಹಿತ ಶ್ರೀಶನ ಕರದಾರು ಶೋಭಾನೆ 6 ಮದನ ಗೋಪಾಲನಿಗೆ ಮಂಗಳ ಯದುಕುಲ ತಿಲಕನಿಗೆ ಮಂಗಳ ಕಮಲಾನಾಭ ವಿಠ್ಠಲನಿಗೆ ಸತಿ ಅ- ರುಂಧತಿಯರು ಜಯ ಜಯ ಮಂಗಳವೆಂದು ಕರದಾರು ಶೋಭಾನೆ7 ಶೋಭನವೆನ್ನಿರೆ ಶ್ರೀಹರಿಗೆ ಶೋಭನವೆನ್ನಿರೆ ಮಾಧವಗೆ ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ ಸಿರಿಯರಸಗೆ ದಿವ್ಯ ಶೋಭಾನೆ ಪರಮಪುರುಷನಿಗೆ ಶೋಭಾನೆ ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
--------------
ನಿಡಗುರುಕಿ ಜೀವೂಬಾಯಿ
ಸುಳಾದಿ ಧ್ರುವತಾಳ ಹರಿಪದವ ನೆನೆವಂಗೆ ನರಕದ ಭಯವಿಲ್ಲ ಹರಿಪದವ ನೆನೆವಂಗೆ ಮಾಯೆಯ ಭಯವಿಲ್ಲ ಹರಿಪದವ ನೆನೆವಂಗೆ ವಿಷದ ಭಯವಿಲ್ಲ ಹರಿಪದವ ನೆನೆವಂಗೆ ಭವದ ಭಯವಿಲ್ಲ ಹರಿಪದವ ನೆನೆವಂಗೆ ಜನನದ ಭಯವಿಲ್ಲ ಹರಿಪದವ ನೆನೆವಂಗೆ ಮರಣದ ಭಯವಿಲ್ಲ ಬರಿಯ ಮಾತೇ ಅಲ್ಲ ಅಕುತೋಭಯನೆಂದು ವರದ ಹಯವದನನ ಪದಪದುಮವ ನಂಬು 1 ಮಠ್ಯÀತಾಳ ಧ್ರುವನ ನೋಡು ಸುರಲೋಕದಿ ಭುವಿ ವಿಭೀಷಣನ್ನ ನೋಡಿರೊ ಅವನಿಯ ಕೆಳಗೆ ಬಲಿಯ ಉತ್ಸಹವ ನೋಡಿ ಮನುಜರೆಲ್ಲರು ಭುವನ ತೃತೀಯದವರೆ ಸಾಕ್ಷಿ ಹಯವದನನ ಭಜಕರಿಗೆ 2 ತ್ರಿಪುಟತಾಳ ಹತ್ತಾವತಾರದಿ ಭಕ್ತರ ಭಯಗಳ ಕಿತ್ತು ಭೃತ್ಯರ ಕಾಯ್ವ ಕಥೆÉಯ ಕೇಳ್ವರು ಮತ್ತೆ ಮೃತ್ಯುಗಳ ಭೀತÀನೆಂಬುವುದ್ಯಾಕೆ ಹೆತ್ತ ತಾಯಿಯಿಂದ ತತ್ವವ ಕೇಳಯ್ಯ ಕರ್ತೃ ಹಯವದನನೆ ಭಕ್ತರ ಭಯಕ್ಕೆ ಕತ್ತಲೆಗಿನನಂತೆ ಹತ್ತು ಎಂಬುದು ನಂಬು3 ಝಂಪೆತಾಳ ಕರಿಯ ಕಾಯ್ದವನ ಪಾದವ ನಂಬು ಉರಿಯ ನುಂಗಿದವನ ಪಾದವ ನಂಬು ಸಿರಿ ಹಯವದನನೆ ಭಕ್ತರ ಭಯ ಸಂ- ಹರಣನೆಂಬುದಕ್ಕಿನ್ನು ಸಂಶಯವಿಲ್ಲ 4 ರೂಪಕÀತಾಳ ದ್ರೌಪದಿಯ ಭಯ ಪರಿಹರಿಸಿದವನಾರೈ ಆ ಪರೀಕ್ಷಿತನ ಭವಭಂಜನನಾರೈ ತಾಪಸರಿಗಸುರರಿಂದ ಬಂದ ಪರಿಪರಿಯ ಆಪತ್ತುಗಳನೆಲ್ಲ ಖಂಡಿಸಿದನಾರೈ ಶ್ರೀಪತಿ ಹಯವದನನೊಬ್ಬನೆ ತನ್ನವರ ತಾಪತ್ರಯವ ಬಿಡಿಸಿ ತಕ್ಕೈಸಿಕೊಂಬ 5 ಅಟ್ಟತಾಳ ವಿಷನಿಧಿಯನೊಂದು ದಾಟಿ ವ್ಯಸನಗಳನೆಲ್ಲ ಖಂಡಿಸಿ ಬಿಸಜವನಿತೆಯ ಕಂಡು ಬಂದ ಅಸಮ ಹನುಮನ ನೋಡಯ್ಯ ಕುಸುಮವನು ತರಪೋಗಿ ಅಸುರರ ಕುಸುರಿದರಿದುದ ನೋಡಯ್ಯ ಬಿಸಜಾಕ್ಷ ಹಯವದನ ತನ್ನ ಹೆಸರುಗೊಂಡರೆ ಭಕ್ತರ ವಶÀಕ್ಕಿಪ್ಪುದು ಪಾರ್ಥನ ಯಶವ ಪಸರಿಸಿದ ಅಚ್ಚುತ 6 ಪೂರ್ವಕಾಲದಿ ತೀರದ ಕಥೆಗಳ ನಿ- ವಾರಿಸಿ ಜರಿದುದ ನರರೆಲ್ಲ ಕಾಣರೆ ಶರೀರವೆರಸಿದವರಿಗೆ ಸ್ವರ್ಗಗತಿಯುಂಟೆ ಕರುಣಾಕರ ಕೃಷ್ಣನ ಕಂಡವರಿಗೆ ಭಯವುಂಟೆ ಈರೇಳು ಲೋಕದೊಳಗೆ ಈ ಹಯವದನನಂತೆ ಶರಣಾಗತಜನರ ಸಲಹುವರುಳ್ಳರೆ 7 ಜತೆ ಸುರಾಸುರಚಕ್ರವರ್ತಿ ಅಸುರಮದಭೇದನ್ನ ಸಿರಿ ಹಯವದನನ್ನ ಚರಣವೆ ಗತಿಯೆನ್ನು
--------------
ವಾದಿರಾಜ
ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ. ಥೋರ ಮುತ್ತಿನ ಝಲ್ಲೆ ಬಿಗಿದ ತೇರುವಾಜಿ ಶೃಂಗರಿಸಿದ ದಾರಿ ಮ್ಯಾಲ ನಿಂತಾವ ನಮ್ಮ ವೀರ ರಂಗನ ಕರೆಯ ಬರಲು 1 ಅಚ್ಚ ಮುತ್ತಿನ ಝಲ್ಲೆ ಬಿಗಿದಹೆಚ್ಚಿನ ರಥಗಳುವಾಜಿಜತ್ತಾಗಿ ನಿಂತಾವಮ್ಮಅಚ್ಯುತನ ಕರೆಯ ಬರಲು2 ಬರಿಯ ಮಾಣಿಕ ರತ್ನ ಬಿಗಿದ ದೊರೆಗಳೇರೊ ರಥ ವಾಜಿಸರಿಯಾಗಿ ನಿಂತಾವಮ್ಮ ನಮ್ಮಹರಿಯ ಕರೆಯ ಬರಲು 3 ನಾನಾ ಮುತ್ತು ರತ್ನ ಬಿಗಿದ ಆನೆ ಅಂಬಾರಿಗಳು ಕೋಟಿಮಾನವಂತರು ಏರಬೇಕುಶ್ರೀನಿವಾಸನ ಕರೆಯ ಬರಲು 4 ಮುತ್ತು ಮಾಣಿಕ ರತ್ನ ಬಿಗಿದಹೆಚ್ಚಿನ ರಥಗಳು ವಾಜಿಮಿತ್ರೆಯರಿಂದ ಬರತಾರಮ್ಮನಮ್ಮ ಅಚ್ಯುತನ ಕರೆಯ ಬರಲು 5 ಏಳು ಕೋಟಿ ಕಾಲಾಳುಗಳುಭಾಳ ಮುತ್ತಿನ ರತ್ನವಿಟ್ಟುತಾಳ ಮೇಳದಿ ನಿಂತಾರಮ್ಮವ್ಯಾಳಾ ಶಯನನ ಕರೆಯ ಬರಲು6 ಸಾವಿರ ಬಂಡಿಯ ಮ್ಯಾಲೆ ಹೇರಿ ಬುಕ್ಕಿಟ್ಟು ಗುಲಾಲು ಸೂರ್ಯಾಡಿ ರಂಗನ ಕರೆಯಲು ವೀರರೈವರು ಬರುತಾರಮ್ಮ 7 ಕೊಲ್ಹಾರಿ ಬಂಡಿಯ ಮ್ಯಾಲೆ ಮಲ್ಲಿಗೆ ಸಂಪಿಗೆ ಹೇರಿಚೆಲ್ಲಾಡಿ ರಂಗನ ಕರೆಯ ಬಲ್ಲಿದ ಐವರು ಬರುತಾರಮ್ಮ 8 ಮದ್ದು ಬಾಣ ಬಿರುಸು ಕೋಟಿ ಶೀಘ್ರವಾಗಿ ನಿಂತಾವಮ್ಮಮುದ್ದು ರಂಗನ ಕರೆಯ ಬರಲು ಮಧ್ವ ಮತದ ಬಿರುದು ಹಿಡಿಸಿ 9 ಬಿಡವೋ ಬಾಣ ಬಿರುಸು ಕೋಟಿ ಕಡು ಭಾಗÀವತರು ಕೋಟಿಷಟಶಾಸ್ತ್ರ ಬಲ್ಲವರು ಕೋಟಿಒಡೆಯ ರಂಗನ ಕರೆಯ ಬರಲು 10 ತಂದೆ ರಾಮೇಶನ ಗುಣವ ಬಂಧುಗಳು ಹೊಗಳೋರು ಕೋಟಿಅಂದು ಆರಣ ಬ್ರಾಹ್ಮಣ ಕ್ರಮ ಜಟಿ ಬಂದು ಕರೆವೊ ದ್ವಿಜರು ಕೋಟಿ 11
--------------
ಗಲಗಲಿಅವ್ವನವರು
ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ ಸ್ವಾಗತವು ನವಸಚಿವರಿಗೆ | ಸ್ವಾಗತ ಸ್ವಾರ್ಥ ವಿದೂರರಾದ ಜಗನ್ನಾಯಕ ನಾಮ ರಾಯರಿಗೆ || ತರಳತನದಿ ಇವರು ಸರಳ ಮನಸ್ಸಿನಲ್ಲಿ ಸರಸ್ವತಿದೇವಿಯನೊಲಿಸಿದರು | ಪರಮಪೂಜ್ಯ ಮಹತ್ವರ ತತ್ವ ತಿರುಳು ತಿಳಿದು ಆಚರಿಸಿದರು 1 ಪ್ರಾಂತದ ಬಡವರ ಚಿಂತೆಕಡಿಯಲು ಸ್ವಾಂತದಿ ಪಂಥವ ಗೈದವರೋ || ಕ್ರಾಂತಿಯ ಹೂಡುತ ಶಾಂತಿ ಸಂಗರದಿ ನಿಂತು ಹೋರಾಡಿದ ಯೋಧರು 2 ದುರುಳರಾಳಿಕೆಯಲಿ ಜರಿದು ಧಿಃಕರಿಸಿ ಸೆರೆಮನೆ ಕಷ್ಟವ ಸಹಿಸಿದರು | ದೊರೆಯ ಸ್ವತಂತ್ರವು ಬಹುಮತದಲಿ ಸ್ವೀಕರಿಸಿದರು ಮಂತ್ರಿಪದವಿಯನು 3 ಉಚ್ಚನೀಚವೆಂಬ ಕುತ್ಸಿತ ಭಾವವ | ಕೊಚ್ಚಿ ಬೀಸಾಡಿದ ಜಾಣರು | ಅಚ್ಚಗನ್ನಡದ ವೀರ ಜನನಿಗೆ ಅಚ್ಭದ ಪ್ರೀಯ ಸುಕುಮಾರರು 4 ಈ ಮಹಾಚತುರನ ಪಡೆದ ಚಂಡ್ರಿಕಿ ಗ್ರಾಮದೇವಿ ಬಹುಪುಣ್ಯವತಿ | ಪ್ರೇಮ ದಿಂದಿವರ ನೇಮವ ನಡೆಸುವ ಶಾಮಸುಂದರನು ದಿನಂಪ್ರತಿ5
--------------
ಶಾಮಸುಂದರ ವಿಠಲ
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ
ಹಣ್ಣು ಕೊಂಬುವ ಬನ್ನಿರಿ - ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆ ಬಾಳೆಹಣ್ಣುಅ ಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು 1 ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣುಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು 2 ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣುಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು 3
--------------
ಕನಕದಾಸ
ಹನುಮ-ಭೀಮ-ಮಧ್ವರು ಅಸುರರನು ಅಳಿಯ ಬಂದೆನು ನಾನು ನಿನ್ನ ವೈರಿದಶರಥರಾಮನಾಳೆಂದ ಪ. ಹೊಸಕಪಿಯೆ ನೀನು ಬಂದುದೇನುಕಾರಣವೆನಲುದಿ[ಶೆÀ]ಗೆ ಬಲ್ಲಿದ ಹನುಮ ನಾ ಕೇಳೊ ನಿ-ನ್ನಸುರ ಪಡೆಯ ಮಡುಹಬಂದೆ ನಿನ್ನಎಸೆವ ಪಾದದಲೊದೆಯ ಬಂದೆ ವನದಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನದಶಶಿರವ ಕತ್ತರಿಸಿ ಎಸೆವ ರಾಮರ ಮಡದಿಹಸುಳೆ ಸೀತೆಯ ಅರಸಲು ಬಂದೆ 1 ಎನ್ನ ವೈರಿಗಳು ಇನ್ಯಾರೆಂದು ರಾವಣನುಹೊನ್ನಕುಂಡಲದ ಹನುಮನೆ ಕೇಳೊಮುನ್ನವರ ಸಾಹಸವಯೇನೆಂಬೆ ಅವರಪರ್ಣಶಾಲೆಯ ಹೊಕ್ಕು ಬಂದೆ ರಾಮ-ಕನ್ಯೆ ಸೀತಾಂಗನೆಯ ತಂದೆತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ 2 ಇನ್ನು ಹೆಮ್ಮೆಮಾತ್ಯಾತಕೊ ಕಪಿಯೆಕಚ್ಚಿ ಕೀಳಲೋ ಕಣ್ಣು ಹತ್ತುತಲೆಯನೆ ಹಿಡಿದುನುಚ್ಚುನುರಿ ಮಾಡಿ ಕೊ[ಲ್ಲಲೊ]ನಿನ್ನ ಇಷ್ಟುಹೆಚ್ಚಿನ ಮಾತ್ಯಾಕೊ ನಿನಗೆ ಬಹಳಕಿಚ್ಚು ತುಂಬಿತು ಕೇಳೋ ಎನಗೆ ಒಂದುಮೆಚ್ಚು ಹೇಳುವೆನೊ ರಾಮರಿಗೆಅಚ್ಚುತನ ಬಣಕೆ ಮೀಸಲಾಗಿರು ನೀನು 3 ವಿಧಿ ಕಾಲಮ[ಣೆ]ಯಾಗಿಬೆನ್ನಬಿಡದಿಹ ಪರಿಯ ನೋಡೊ 4 ಎನ್ನ ಸೋದರಮಾವ ವಾಲಿಯನು ಕೊಂದೀಗತಮ್ಮ ಸುಗ್ರೀವಗೊಲಿದು ವರವಿತ್ತುನಿನ್ನ ಕೊಂಡೊ[ಯ್ದ]ನೆಂಬುವರೊ ನಿನ್ನಚಿನ್ನನ ತೊಟ್ಟಿಲಿಗೆ ಕಟ್ಟುವರೊ ನಿನ್ನಹೊನ್ನತುಂಬೆಂದು ಆಡ್ಸುವರೊನಿನ್ನ ಶಿರವರಿದು ವಿಭೀಷಣಗೆÀ ಪುರವ ಕೊಡಬೇಕೆನುತಎನ್ನೊಡೆಯ ಬರುತಾನೆ ತಾಳೊ ಎಂದ 5 ಎತ್ತಿಹಿಡಿವ ಕೈಪಂಜು ಲೆಕ್ಕವಿಲ್ಲ ನಾ ಹಿಡಿದವಕತ್ತಿ ಇಪ್ಪÀತ್ತು ಕಾಣೋ ಕಪಿಯೆಎತ್ತಿ ಕಡಿವೆನು ಬಾಹುದಂಡ ಬೆ-ನ್ನ್ಹ್ಹತ್ತಿ ಬಡಿಯದೆ ಬಿಡೆನು ಕಂಡ್ಯಾ ನಿನ್ನಚಿತ್ತದಲಿ ತಿಳಿದುಕೊಳ್ಳೆಂದಮತ್ತೆ ನಾ ತಾಳಿ ಕೈಗಾಯಿದೆನಲ್ಲದೆ ಬಾಯಬತ್ತಿಸದೆ ಬಿಡುವೆನೇನೋ ಕಪಿಯೆ 6 ಮತ್ತ ರಾವಣ ನೀನು ಹೊತ್ತಿದ ಭೂಮಿ ಹಣತಿಸುತ್ತಣ ಸಮುದ್ರವೆ ತೈಲಎತ್ತಿ ಹಿಡಿವಳು ಸೀತೆ ದೀಪ ನಮ್ಮಚಿತ್ತದೊಲ್ಲಭನ ಪ್ರತಾಪ ನಿನ್ನಲಂಕಪಟ್ಟಣವು ಸುಡುವಂತೆ ಶಾಪಹತ್ತು ತಲೆ ಹುಳ ಹಾರಿಬಂದು ಬ್ಯಾಗಸುತ್ತಿ ಬೀಳುವುದು ದೀಪದೊಳಗೆ7 ಹೆಚ್ಚಿನ ಮಾತಿಷ್ಟು ಇವಗ್ಯಾಕೆ ಹಿಡಿತಂದುಕಿಚ್ಚು ಹಚ್ಚಿರೊ ಬಾಲಕೆ ಎಂದ ಆಗಪೊಚ್ಚಸೀರೆಗಳ ಸುತ್ತಿದರು ತ್ವರಿತಅಚ್ಚ ಎಣ್ಣೆಯಲಿ ತೋಯಿಸಿದರು ಬಾಲಹೆಚ್ಚಿಸಲು ಕಂಡು ಬೆದರಿದರುಕಿಚ್ಚು ಹಚ್ಚಲು ರಕ್ಕಸರ ಗಡ್ಡಮೀಸೆ ಸಹಎಚ್ಚರಿಸಿ ಸುಟ್ಟ ಲಂಕಾಪುರವ8 ಮುಖ್ಯಪ್ರಾಣ ವರದ ಮೆರದ 9
--------------
ವಾದಿರಾಜ
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು
ಹರಿನಾಮದರಗಿಳಿಯು ದೊರಕಿತಿಂದು ವರ ಹಿರಿಯರಾ ಕರುಣದಿಂದೆನಗೆ ಪ. ಸಾರ ಹಾದಿಯಲಿ ವರದ ಮಾಧವನೆಂಬ ಸಾಧಿಸಿ ಕಂಸನ ಗೆದ್ದ ಗೋವಿಂದ 1 ದುಷ್ಟರನು ಶಿಕ್ಷಿಪ ವಿಷ್ಣುವಿನ ನಾಮವು ಕಷ್ಟವನು ಪರಿಹರಿಪ ಮಧುಸೂಧನ ಇಷ್ಟ ಮೂರುತಿ ತ್ರಿವಿಕ್ರಮನ ನಾಮವು ಉತ್ಕøಷ್ಟ ವಾಮನನೆಂಬ ಕಠ್ಠಾಣಿ ಮುತ್ತಿನ 2 ಭವ ಚಂದಿರಾನನನಾದ ದಾಮೋದರನಾ 3 ವಾಸುದೇವ ಎಂಬ ಸಂಕಟವ ಪರಿಹರಿಪ ಪ್ರದ್ಯುಮ್ನನೆಂಬುವನ ಎನ್ನ ಸಂಕುಚಿತ ಮಂಕನಳಿವ ಅನಿರುದ್ಧನ 4 ಪರಮ ಪದವಿಯನಿತ್ತು ಪೊರೆವ ಪುರುಷೋತ್ತಮನ ಪರರ ಬೇಡಿ ಸದ್ವಸ್ತು ಅಧೋಕ್ಷಜನಾ ವರ ಜ್ಞಾನಿಗಳ ಮಾನಸ ನಾರಸಿಂಹನ ಪರಮಪುರುಷನೆಂಬ ಅಚ್ಚುತನ್ನಾ 5 ಮುದ್ದು ಮುಖದೊಳು ತಿಲಕ ತಿದ್ದಿದ ಜನಾರ್ಧನನ ಹದ್ದುವಾಹನನಾದ ಉಪೇಂದ್ರನ ಮುದ್ದು ರಮೆಯರಸ ಶ್ರೀ ಶ್ರೀನಿವಾಸನೆಂಬುವನ 6
--------------
ಸರಸ್ವತಿ ಬಾಯಿ
ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು
ಹುಚ್ಚನಾಗಬೇಕೋ ಜಗದಿ ಹುಚ್ಚನಾಗಬೇಕೋ ಪ ಅಚ್ಚುತಾನಂತನ ನಿಶ್ಚಲ ಧ್ಯಾನದಿ ಇಚ್ಛೆಯಿಟ್ಟು ಜಗದೆಚ್ಚರ ನೀಗಿ ಅ.ಪ ಮರವೆ ಹರಿಯಬೇಕೋ ಪರಲೋಕ ದರಿವಿನೊಳಿರಬೇಕೊ ಪರಿಪರಿಯಿಂದಲಿ ಸಿರಿಯರಸನ ಪಾದ ಸ್ಮರಿಸಿ ಇಹ್ಯದರಿವು ತೊರೆದಾನಂದದಿ 1 ಪರನೆಲೆ ತಿಳಬೇಕೋ ಕಾಯದ ನರನೊದೆಯ ಬೇಕೊ ದುರಿತಾಕಾರಿಗಳ ಕಿರಿಕಿರಿಯಿಲ್ಲದೆ ಹರಿಹರಿಯೆನ್ನುತ ಪರಮಾನಂದದಿ 2 ಕಾಮ ಕಳೆಯಬೇಕೋ ಕಾಯದ ಪ್ರೇಮ ತೊರೆಯಬೇಕೊ ನೇಮದಿಂದ ಮಮಸ್ವಾಮಿ ಶ್ರೀರಾಮನ ನಾಮ ಭಜಿಸಿ ನಿಸ್ಸೀಮನಾಗಾನಂದದಿ 3
--------------
ರಾಮದಾಸರು
ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ಪ ತುಚ್ಛ ವಿಷಯವೆಂಬುವಂಥ ಅಚ್ಚಮದ್ದು ನೆತ್ತಿಗೇರಿಅ.ಪ ಹಿರಿಯರರಿಯೆ ಕಿರಿಯರರಿಯೆ ಹರಿಯ ಸ್ಮರಣೆ ಮಾಡಲರಿಯೆ ನಾರಿಯರ ಪರಿಚಯದಿ ಆರು ಪುರುಷರೊಡನೆ ಇರುವೆ 1 ಇದ್ದರಿದ್ದೆ ಎದ್ದರೆದ್ದೆ ಇದ್ದ ಸುದ್ದಿ ಪೇಳಲರಿಯೆ ಕದ್ದ ಕಳ್ಳನಂತೆ ಇದ್ದು ಬುದ್ಧಿ ಹೊದ್ದಿಕಿ ಬಿಟ್ಟಿರುವೆ 2 ಹೀನಗುಣಗಳೇನು ಪೇಳಲಿ ಶ್ರೀ ನರಹರಿಯೆ ನೀನೆ ಬಲ್ಲಿ ಮಾನವಂತರು ಜ್ಞಾನವಿತ್ತು ಅಜ್ಞಾನ ವಿಷಯ ಹಾನಿ ಮಾಡಿರಿ3
--------------
ಪ್ರದ್ಯುಮ್ನತೀರ್ಥರು
ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎನ್ನ ಅಚ್ಚಳಿಯದೆ ದಡಕೆ ತಂದಿತಚ್ಚುತನ ದಯ 1 ಬಿಚ್ಚಿ ತೋರಲಾಗದೆನ್ನ ಅಚ್ಚರಿಯನು ದೇವ ನಿನ್ನ ಮೆಚ್ಚುಗೆಯನು ಪಡೆವೆನೆಂದು ಸತ್ಯ ಮಾಡುವೆ 2 ಅಷ್ಟದಾರಿದ್ರ್ಯ ಬರಲಿ ಕಷ್ಟ ರಾಶಿ ರಾಶಿ ಬರಲಿ ಶ್ರೇಷ್ಟದ ಮಾನಸದ ಭಾಗ್ಯವಿತ್ತು ಪೊರೆಯಲೊ 3 ವಿಷವ ಬಡಿಸುವರಿಗೆ ದಿವ್ಯ ರಸ ಕುಡಿಸುವಂತೆ ದೇವ ಹಸನ ಬುದ್ಧಿಯಿತ್ತು ಪೊರೆಯೊ ಹೃಷಿಕೇಶನೆ 4 ತ್ರಾಣವ ಕೊಡೊ ಮನಕೆ ದೇವ ಪ್ರಾಣಗಳನ್ನು ಚರಣದಲ್ಲಿ ಕಾಣಿಕೆಯರ್ಪಿಸುವೆ ರಮಾಪ್ರಾಣನಾಥನೆ5 ಮದಕೆ ಕಿಚ್ಚನೊಟ್ಟಿ ಕ್ಷಣದಿ ಎದೆಗೆ ಕೆಚ್ಚನಿತ್ತು ಮುದದಿ ಬದುಕಿನಲೇ ಮುಕುತಿ ಸೌಖ್ಯವಿತ್ತು ಪೊರೆಯೆಲೊ6 ವಿಭವ ತೋರುತಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು