ಒಟ್ಟು 26 ಕಡೆಗಳಲ್ಲಿ , 17 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಥ ಹನುಮದ್ವ್ರತ ಕಥಾ ಸುಳಾದಿ ಧ್ರುವ ತಾಳ ವೃತವೆ ಉತ್ತಮ ವೃತವೆಂದು ಪೇಳಿಹರು ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು | ಸತತ ಅಧ್ಯಾತುಮ ಅನಂತ ವೃತವೆಂದು | ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ | ಪತಿತ ಮಾನವರ ಉದ್ಧಾರಗೋಸುಗವಾಗಿ ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ | ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ | ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯವೃತವೊ | ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು | ಮತಿವಂತರು ಮನಕೆ ತಂದು ತಿಳಿದು | ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ | ಪತಿಭಕುತಿಯುಕುತಳಾದ ದ್ರೌಪದಿಯು | ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ | ಮಿತ ಜ್ಯಾನದಿಂದ ಚರಿತ ವ್ರತವೊ | ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ | ಚ್ಯುತನಾದ ರಾಮನುಮತಿವಾನ್ ಹನು | ಮಂತನ ಭಕುತಿಗೊಲಿದು ಮಾಡ್ಡ ವೃತವೊ | ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ | ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ | ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ | ಕುತಿ ಜ್ಞಾನವೀವ ಮಹಾ ಶ್ರೇಷ್ಠ ವೃತವೊ 1 ಮಟ್ಟತಾಳ ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು | ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ | ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ | ನಿತ್ಯ | ಧೇನಿಸುವೆವು ಹರಿಯಾ ಪುನೀತರ ಮಾಡುವಾ | ಕಾಣೋವನ್ಯ ವೃತವು ಆವುದುಪೇಳೆನಲು | ನಿತ್ಯ ಶೂದ್ರಾದಿ ನಾಲ್ಕು | ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ | ಏನು ಬೇಡಿದರೆ ತಡಿಯದೆ ಕೊಡುವುದೊ | ಜ್ಞಾನಿ ಜನಗಳಿಗೆಲ್ಲ ಮಂಗಳತಮ ವೃತವು | ಪುತ್ರಾದಿಗಳೀವುದು ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ | ಮಾನನಿಧಿ ಸುತ ಸುಂದರ ವಿಠಲನ | ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1 ರೂಪಕ ತಾಳ ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ | ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು | ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ | ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ | ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ | ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು | ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ | ಮುಂದೆ ಅಧ್ಯಯನ ಶ್ರುತಸಂಪನ್ನರಾದವರು | ಒಂದೊಂದು ವೇದ ಋಗು ಯಜು:ಸಾಮಾಥರ್ವಣ ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು | ಮಿಂದು ಹರಿಪದಜಲದಿ ಚತುರ ವೇದ ಘೋಷದಿ | ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ | ಎಂದೆಂಬುವ ಹರಿಕಥಾಮೃತ ಪಾನ ಮಾಡುವ | ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ | ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು | ಸುಂದರ ವಿಠಲಾತ್ಮಕ ವ್ಯಾಸದೇವನು | ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3 ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ | ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ | ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ | ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ | ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು | ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ | ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ ಮೇಷ್ಠಿ ಜನಕನು ತಾನು ತುಷ್ಟ ನಾಹೆ | ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ | ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ | ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ? ಧಿಟ್ಟತನದಲೆ ತಪವನೆಸಗಿ ಕಿರಿಟಯು | ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು | ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ | ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ | ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ | ಇಷ್ಟವೀವುದಕಾಗಿ ಬಂದಿಹನು ರಾಜಾಯು | ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ | ನಿಷ್ಠಿಯಿಂದಲಿ ಧರ್ಮತನಯ ನುಡಿದನು 4 ತ್ರಿವಿಡಿ ತಾಳ ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ | ನಮೊ ನಮೊ ನಮೊ ಎಂದು ಬಿನ್ನೈಸುವೆ | ಶ್ರಮ ಪರಿಹರವೃತವಾವುದದÀರ ಮಹಿಮೆ | ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ | ಕುಮತಿ ಪರಿಹರಿಸುವ ದೇವತೆ ಆರು ಉ | ತ್ತಮ ನಿಯಮ ಆವುದು ಪೂಜಾ ಕ್ರಮವು | ಶಮೆ ದಮೆವೀವ ನಿಯಮ ತಿಥಿ ಆವುದು | ರಮೆ ರಮಣನೆÉ ಆವ ಮಾಸದಲಿ ಮಾಡೋದು | ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ | ಗಮನವು ಎಮ್ಮಯ ಕಷ್ಟ ದೊರೋಡಿಸಲು | ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ | ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು | ಭ್ರಮಣ ಮತಿಯ ಕಳೆವ ಹನುಮಾನ್ ಹ ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು | ಆಮಮ ಪೇಳಲೇನೊ ಹನುಮದ್ವ್ರತವೋ | ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ | ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ | ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ | ತಾಮಸ ರೋಗ ನಿವರಣವಾಗುವದು | ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ? ಸೀಮೆಗಾಣದ ಅಭೀಷ್ಟಪ್ರದಾಯಕವೊ ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ ನುಮದ್ವ್ರತವನ್ನು ಉಪದೇಶಿಸಿ | ನೇಮದಿಂದಲೀ ವ್ರತವು ಮಾಡಿರೆನಲು ಕಾಮಿತಫಲವೀವಾ ವ್ರತದ ಮಹಿಮೆ ಆ | ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ | ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ ಹೇ ಮಹಿಷಿಯೆ ಇದೆನೆನ್ನಲಾಗಿ | ತಾಮರಸನಯನೆ ಶ್ರೀ ಹನುಮದ್ದೋರವನ್ನೆ | ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ | ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ | ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು ಕಾಮಿ ಜನರ ತೆರದಿಂದಲಿ ಅರ್ಜುನನು ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ ಆ ಮುದದ ದೋರವನು ಹರಿದು ಬಿಸಾಟಲು ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ | ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು | ಪರಿಯಂತ | ರಾಮ ಮನೊರಮನು ಇನಿತು ನುಡಿಯೆ | ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು | ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5 ಧ್ರುವ ತಾಳ ಕೇಳಯ್ಯಾ ಧರ್ಮರಾಜ ಆಲಸ ಮಾಡದೆ | ಪೇಳುವೆ ನಿನಗೊಂದು ಪುರಾತನ ಕಥೆಯು | ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು | ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ ನಿತ್ಯ ಲಕ್ಷ್ಮಣನೊಡಗೂಡಿ | ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ ಹಾಳ ಮತಿಯುಳ್ಳ ವಾಯುಜ ಮಾಡಿಸೆ | ಮಾಸ ಮಳೆಗಾಲವು ವಾಸ ಮಾಡ್ಡ | ಕಾಲದಲಿ ಹನುಮನು ರಾಮದೇವಗೆ ನಮಿಸಿ | ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ | ಬಾಲನ ಬಿನ್ನಪ ಮನಕೆ ತರಲು | ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ | ಕಾಲ ಜನನದಲಿ ಇಂದ್ರನಿಂದಲಿ ಎನ್ನ ಮೇಲಾದ ವಜ್ರಾಯುಧದಿಂದ ಹನುಘಾತಿಸಲು ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ | ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ | ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು | ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ | ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ | ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ | ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ | ಲೋಲನ ಸಖನಾದ ವಾಯುದೇವನು ಎನ್ನ | ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ | ಕಾಲನಾಮಕ ಭಗವಾನಿಚ್ಛೆಯಂತ ತೃಟಿ | ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ | ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ | ಕಾಲಲವದಲ್ಲಿ ಕೆಡಹೆನೆನಲು ಆ | ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ | ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ | ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ | ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ | ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು | ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ | ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ | ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು | ತಾಳ ಮ್ಯಾಳರೊಡನೆ ವರವ ನೀಡಿ ಪೋದರು | ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ | ಪೇಳೆ ಸುಂದರ ವಿಠಲ ರಘುರಾಮನು ನಸುನಗೆ | ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6 ಮಟ್ಟತಾಳ ಭಕುತ ವತ್ಸಲ ನೀನು ಭಕುತರಿಚ್ಛವ ನೀನು | ಭಕುತ ಭಾಂಧವ ನೀನು ಭಕುತರೊಡಿಯ ನೀನು | ಭಕುತ ಪಾಲಕನೆಂಬ ಬಿರುದುಳ್ಳವ ನೀನು | ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು | ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ | ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು | ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು | ಭಕುತರ ಮನದಿಂಗಿತ ತಿಳಿಯದವನೆ ನೀನು | ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ | ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು | ಭಕುತರು ನಿನ್ನಿಂದಲೆ ಕೀರ್ತಿವಂತರÀಹರು | ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ | ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ | ಮಾಳ್ಪದು ನಿಜವಾಗೆ | ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ | ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ | ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು | ಪ್ರಕಟಿತ ಅಶರೀರ ವಾಕ್ಯವು ಬಿಡದಲೆ | ಸಕಲ ನುಡಿ ಹನುಮಾ ಸತ್ಯನಾಡಿದನೆನಲು | ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7 ಝಂಪಿತಾಳ ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ | ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ | ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ | ದಶ ಗ್ರಂಥಿüಯುತ ಹರಿದ್ರಾದೋರಗಳಲಿ | ಭಾಸುರಾಮತಿವೀವ ಹನುಮನಾವ್ಹಾನಿಸಿ | ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ | ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ | ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ | ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” | ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ | ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು | ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ | ಮೀಸಲಾ ಮನದಿ ಈ ಸತ್ಕಥೆಯನು ಕೇಳಿ | ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ | ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ | ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ | ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು | ದೇಶಲಂಕೆಯ ರಾಜ್ಯವನು ಪಡೆದನು | ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ | ಲೇಸುವಿಶ್ರುತವಾದಿತೈ ಹನುಮದ್ವ್ರತವೂ | ಪರಿಯಂತ ಮಾಡ್ಡುದ ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ | “ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ | ಸ್ತ್ರೀಸಹಿತ ಅನುಜರೊಡನೇ ಈ ವ್ರತವನು | ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ | ಕೋಶ ಭಾಂಡಾರಪ್ರಾಪ್ತಿಯಾಗುವದು | ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ | ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8 ರೂಪತಾಳ ರವಿಯು ವೃಶ್ಚಿಕ ರಾಶಿಗೆ ಬರಲಾಗಿ | ಸವೆಯಾದ ಪದವೀವ ವ್ರತವಮಾಡುವದಕ್ಕೆ | ಕವಳಾ ಅಜ್ಞಾನಾಖ್ಯ ರಾತ್ರಿಕಳೆದು | ಸುವಿಮಲಾಜ್ಞಾನಾಖ್ಯ ಪ್ರಾತಃ ಕಾಲದಲೆದ್ದು | ಕವಿವ್ಯಾಸರ ಮುಂದೆ ಮಾಡಿ ಧರ್ಮಜನು | ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ | ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ | ಧವÀನಾಜ್ಞೆಯಂತೆ ಉದ್ಯಾಪನವಂಗೈದು | ಕವ್ಯವಾಹನನಲ್ಲಿ ಮೂಲಮಂತ್ರದಿಂದ | ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ | ನವಭಕುತಿಯಲಿ ಹನುಮಂತನ ವ್ರತಾಚರಿಸಲು | ಹವಣಿಸಿ ಸಂವತ್ಸರವು ಪೋಗಲು ಪಾಂಡವರು | ಬವರದಲ್ಲಿ ಕೌರವರಗೆ
--------------
ಸುಂದರವಿಠಲ
ಒಂದೇ ಬೇಡುವೆ ನಿನ್ನನು ನಿನ್ನಡಿಗಳನೆಂದಿಗು ನೆನೆವುದನು ಪ. ಒಂದೇ ಬೇಡುವೆನು ಮುಕುಂದ ಇದರ ಬಲ ದಿಂದ ಸರ್ವಾರ್ಥವ ಹೊಂದುವ ಮನದಿಂದ ಅ.ಪ. ಪಾತಕಗಳನೆಲ್ಲ ಪರಿಹರಿಸುವ ದುರ್ವಿ- ಘಾತಕವೈರ ಕತ್ತರಿಸುವುದು ಶ್ರೀಕರುಣಿಯ ಸನ್ನಿಧಾನವನಿರಿಸುವ ಆತತಾಯಿಗಳ ಭಂಗಿಸಿ ಬಾಧೆ ಪಡಿಸುವ 1 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ತುಂಬಿದ ಜನರೊಡನಾಡುವಾಗ ನಂಬಿದ ಸತಿಯೊಳು ನಯನುಡಿ ನುಡಿವಾಗ ಅಂಬುದನಿಭ ನಿನ್ನ ಹಂಬಲಗೊಳುವುದ 2 ನಡೆವಾಗ ನುಡಿವಾಗ ಮಡಿಯನುಟ್ಟಿರುವಾಗ ಪೊಡವಿ ಪಾಲಕರೊಡನಾಡುವಾಗ ಕಡಲಶಯನ ನಿನ್ನ ನೆನೆವರೆ ನಾಚಿಕೆ ಕಾಲ ದೃಢದಿಂದ ಸ್ಮರಿಸುವ 3 ಖೇದ ಮೋದಗಳೆಂಬ ಭೇದವಿಡದೆ ಯಾವಾ- ಗಾದರು ಸರಿಯಾಗಿ ಸ್ಮರಿಸುವರ ಕಾದುಕೊಂಡಿರುವಂಥ ಕರುಣಿಯೆಂಬುದರಿಂದ- ಗಾಧ ಮಹಿಮೆ ನಿನ್ನ ಹಾದಿ ತೋರಿಸುವುದ 4 ಶ್ರಮವಿಲ್ಲದೆ ಸ್ಮøತಿ ಭ್ರಮಣೆ ಬಿಡಿಸುವ ಶ್ರೀ- ರಮಣ ವೆಂಕಟಗಿರಿ ನಾಯಕನೆ ನಮಿಸಿ ಬೇಡವೆನೆಂಬ ಮಮತೆಯಿರಿಸಿ ನಿನ್ನ ಕಮನೀಯಪದಕಲ್ಪದ್ರುಮ ನೆರಳಿರಿಸೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಓಂ ನಮೋ ರಾ‌ಘವೇಂದ್ರಾಪ ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ ವಾರಿಧಿ ಪೂರ್ಣಚಂದ್ರಾ1 ಶ್ರೀರಾಮ ಜಯರಾಮ ಸ್ವಾಮಿ ಜಯಜಯ ರಾಮಾ ಈರೀತಿ ಸ್ಮøತಿಸಲಿಕೆ ಕೊಡುವಿ ವೈಕುಂಠ ಧಾಮಾ2 ಉಗ್ರ ವೃತ ತಪದಿಂದಾ ಜಪ ಅನುಷ್ಠಾನದಿಂದಾ ಶ್ರೀಘ್ರದಿಂದ ಪಡಕೊಂಬಾ ಫಲಕಾಮ ಸನ್ನಿಧಾ3 ಹನುಮಬಲ್ಲಾ ಹರಬಲ್ಲಾ ಋಷಿನಾರದ ಬಲ್ಲಾ ನೆನವನಾಮ ಸವಿಯಲೋ ಹೇಳಲಿಕೆ ಅಳವಲ್ಲಾ 4 ಮರಳು ಮಾನವರಂತಾ ಎನ್ನ ನೋಡಬ್ಯಾಡ ಡೊಂಕಾ ಗುರುಮಹಿಪತಿ ಸ್ವಾಮಿ ನಾಮ ವೆನೆವ ನಿ:ಶಂಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಣೇಶ ಹಿತಮತಿಯ ಪಾಲಿಸೊ ಪ ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ ಭಜನೆ ಮಾಡುವಂಥ ನಿಜವ ಪಾಲಿಸಿ 1 ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು 2 ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ 3
--------------
ಬಾಗೇಪಲ್ಲಿ ಶೇಷದಾಸರು
ತಾರಕವಿದು ಹರಿಕಥಾಮೃತಸಾರ ಜನಕೆ ಪ ಘೋರತರ ಅಸಾರ ಸಂಸಾರವೆಂಬ ವನಧಿಗೆ ನವ ಅ.ಪ. ಶ್ವಾನಸೂಕರಾದಿ ನೀಚಯೋನಿಗಳಲಿ ಬಂದು ನೊಂದು ವೈನತೇಯ ವಾಹನನ ಸನ್ನಿಧಾನ ಬೇಕು ಎಂಬುವರಿಗೆ 1 ಪ್ರಿಯವಸ್ತುಗಳೊಳಗೆ ಪಾಂಡುವೇಯ ಸಖನೆ ಎಮಗೆ ಬ್ರಹ್ಮ ಸುರರು ತಂದೆ ತಾಯಿ ಎಂದರಿತವರಿಗೆ 2 ಜ್ಞೇಯ ಜ್ಞಾನ ಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕರ್ಮ ಶ್ರೀ ಯರಸ ನೀವನರಗೆ 3 ಶ್ರೀ ಮುಕುಂದ ಸರ್ವ ಮಮಸ್ವಾಮಿ ಅಂತರಾತ್ಮ ಪರಂ ಧಾಮ ದೀನಬಂಧು ಪುಣ್ಯ ನಾಮವೆಂದರಿತವರಿಗೆ 4 ಭೂತಭವ್ಯ ಭವತ್ಪ್ರಭು ಅನಾಥಜನರಬಂಧು ಜಗ ನ್ನಾಥ ವಿಠ್ಠಲ ಪಾಹಿಯೆಂದು ಮಾತುಮಾತಿಗೆಂಬುವರಿಗೆ 5
--------------
ಜಗನ್ನಾಥದಾಸರು
ನಾರಿ ನಾನರಿಯೆನೆ ನಿನ್ನಯ ಮಹಿಮ ಕರುಣದಿ ಇಡು ಪ್ರೇಮ ಪ ಬಾರಿ ಬಾರಿಗೆ ನಿನ್ನ ಭಜಿಸುವ ಭಕ್ತರ ಪಾರುಗಾಣಿಸಿ ಪೊರೆ ನಾರಿ ಶಿರೋಮಣಿ ಅ.ಪ ಕನಸು ಮನಸಿನೊಳ್ ನಿನ್ನಯ ಧ್ಯಾನ ಬಿಡದಲೆ ನಾ ಇನ್ನ ನೆನಸಿ ನೆನಸಿ ಸುಖಿಸುವೆ ಮುನ್ನ ವನಜಾಕ್ಷಿಯೆ ನಿನ್ನ ಅನುದಿನ ನಿನ್ನನು ಸ್ಮರಿಸುವ ಸುಜನರ ಘನವನುಳುಹಿ ಕಾಯೆ ಮನಸಿಜನ ತಾಯೆ 1 ಸೃಷ್ಟಿಯೊಳಗೆ ಶೆಟ್ಟಿ ಕೆರೆಯ ತಟದಲಿ ನೀ ನಿಂತು ಶ್ರೇಷ್ಠಳೆನಿಸಿ ಭಕ್ತರ ಮೊರೆಯ ನಿತ್ಯದಿ ನೀನರಿತು ಇಷ್ಟದಿ ಕೇಳುತ ಶಿಷ್ಟಜನರ ಅಘ ಹಿಟ್ಟುಮಾಡಿ ಕಾಯೆ ಶ್ರೀ ಕೃಷ್ಣನ ಜಾಯೆ 2 ಮದನನಯ್ಯನ ಮೋಹದ ರಾಣಿ ಮದಮುಖದ ಶ್ರೇಣಿ ವಧಿಸಿದ್ಯೆಲೆ ಪರಮ ಕಲ್ಯಾಣಿ ಜಗದೊಳಗತಿ ಜಾಣೆ ಸದನ ಮಾಡಿಕೊಂ ಡೊದಗಿ ಭಕ್ತರ ಮುದವಪಡಿಸಿದ್ಯೆಲೆ 3 ಜಗದೊಳು ನಿನಗೆ ಸರಿಯಾರೆ ಪರಿಪರಿ ವಯ್ಯಾರೆ ಅಗಣಿತ ಗುಣಗಂಭೀರೆ ಸುಂದರ ಸುಕುಮಾರೆ ಬಗೆಯಲಿ ಎನ್ನವಗುಣಗಣ ವೆಣಿಸದೆ ಸೊಗದಿಂದಲಿ ಕಾಯೆ ನಗಧರನ ಪ್ರಿಯೆ 4 ಅನುವನರಿತು ಪಾಲಿಸು ಮುನ್ನನಂಬಿದ ಮನುಜರನ ಅನುದಿನ ನಿನ್ನ ಪಾದಧ್ಯಾನ ಮನಸಿಗೆ ಕೊಟ್ಟೆನ್ನ ವನಜಾಕ್ಷಶ್ರೀ ಪ್ರಾಣನಾಥ ವಿಠಲನ ಸನ್ನಿಧಾನವಿತ್ತು ಮನ್ನಿಸು ತಾಯೆ 5
--------------
ಬಾಗೇಪಲ್ಲಿ ಶೇಷದಾಸರು
ನಿನ್ನ ನಂಬಿದೆನೊ ಬ್ರಹ್ಮಣ್ಯತೀರ್ಥಾರ್ಯಾ ಸನ್ನುತಚರಣಪಾವನ ಸುಚರ್ಯಾ ಪ ಘನ್ನ ಭವದ ಭಯವನ್ನು ಕಳೆದು ಯತಿ ರನ್ನ ಎನ್ನನು ಧನ್ಯನ ಮಾಡೋ ಅ.ಪ. ಪುರುಷೋತ್ತಮ ಸುತೀರ್ಥರ ಪ್ರಿಯ ಸುಕುಮಾರ ದುರಿತೌಘಜೀಮೂತ ಚಂಡ ಸಮೀರ ಸುರುಚಿರ ತುಳಸಿ ಪಂಕಜಮಣಿಹಾರ ಧರಿಸಿ ಮೆರೆವೊ ದಿನಕರನವತಾರ ಕರುಣದಿ ತವ ಶ್ರೀಕರಚರಣಾಂಬುಜ ದರುಶನವನು ಕೊಡು ಗುಣಗಣನಿಧಿಯೇ 1 ಸೇವಕಜನರಿಗೆ ದೇವತರುವೆನಿಪ ಶ್ರೀವಿಠಲನಪಾದತಾವರೆ ಮಧುಪ ಕೋವಿದ ಜನರು ಸಂಭಾವಿಸಿ ಸ್ತುತಿಪ ಪಾವನ್ನ ಪಾದಾರ್ಚಿತ ಭಾವಜ ಮುನಿಪ ಪಾವನ ಸುಮತರ ಜೀವರ ಚಂದ್ರನೆ ಪಾವನ ಮತಿ ಕೊಡು ನೀ ಒಲಿದೆನಗೆ 2 ಪರ ತತ್ವಜ್ಞಾನ ವರವ ಪಾಲಿಸು ಸರ್ವವಿದ್ಯಾಪ್ರವೀಣ ನರಸಿಂಹವಿಠಲ ಶ್ರೀಹರಿ ಸನ್ನಿಧಾನ ಕರುಣಾಪಾತ್ರನೆ ದಿವ್ಯವರಪೂರ್ಣಜ್ಞಾನ ಹರಿಗುರುಭಜನ ತ್ವತ್ಪದ ವ್ಯಾಸಾರ್ಯರ ಗುರುವೆಂದೆನಿಸಿದೆ ಧರೆಯೊಳು ಮೆರೆದೆ 3
--------------
ನರಸಿಂಹವಿಠಲರು
ನಿನ್ನ ಬಿಟ್ಟಿರಲಾರೆ ನೀರಜಾಕ ್ಷ ಪ ಘನ್ನ ಮಹಿಮನೆ ನಿನ್ನ ಸನ್ನಿಧಾನವನೀಯೊ ಅ.ಪ. ಸರ್ವಧರ್ಮಗಳಿಗೆ ನೀನಿಲ್ಲದಿನ್ನಿಲ್ಲ ಉರ್ವಿಕರಿಗೆ ನೀನೆ ಉರ್ವೀಶನೆ ನಿರ್ವಿಕಾರ ಮಹಾತ್ಮ ನಿಖಿಲಾಂತರಾತ್ಮಕನೆ ಪಾದ ಸೇವೆಯೆನಗೀಯೊ 1 ತಡವ್ಯಾಕೆ ಬರಲಿನ್ನು ಪೊಡವೀಶ ಯನ್ನೊಡನೆ ತಡೆಯಲಾರೆನು ನಿನ್ನ ವಿರಹವನ್ನು ನುಡಿಯಬೇಡವೋ ಎನ್ನ ನೀ ಪೋಗು ಎಂದೆನುತ ಕಡು ದಯಾನಿಧಿ ನಿನ್ನ ನಾ ಬಿಡೆನೊ 2 ಆನಂದ ಪರಿಪೂರ್ಣ ಶ್ರೀನಾಥ ನಿನಗೇಕೆ ಕಾನನಾ ವಾಸವು ಕಮಲನಯನ ಜ್ಞಾನದಾಯಕ ನಿನ್ನ ಚರಣ ಶರಣನೊ ನಾನು ದೀನರಕ್ಷಕ ಸ್ವಾಮಿ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ ಅ ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕøಪೆ 1 ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವÀ ಗಳಿಸಿದೆ ಕರವ ನೀಡಿ ಯಾಚಿಸೆ 2 ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ ತರುಣಿ ಸಹಿತಾ ಹೊರಟನೆ 3 ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ 4 ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ ಭಜಿಪೆನೋ ಕೇಳ್ ಗುರುವರ 5
--------------
ವಿಜಯದಾಸ
ಬಂದೆ ಭಗವತ್ಪಾದಯುಗಾರ ವಿಂದಕೆ ಮಿಳಿಂದನಾಗಿ ವಂದನೀಯರೆ ಯತಿಕುಲಾಬ್ಧಿ ಚಂದ್ರರ ಭುವನೇಂದ್ರತೀರ್ಥರೆ1 ಪರಮ ಪಾವನ ಭುವನೇಂದ್ರರ ಕರಸಂಜಾತ ವರದೇಂದ್ರರ ಕರಸರೋರುಹಭವರೆ ಮಹಾ ಕರುಣಾಂತಃಕರಣ ಧೀರರೆ2 ಸುಮತೀಂದ್ರಾದಿ ಯತೀಂದ್ರರ ವಿಮಲ ಹೃದಯಕಮಲಭಾಸ್ಕರ ಅಮಮ ನಿಮ್ಮ ಕಾಂಬ ಯೋಗ ಸುಕೃತ ಭೋಗಪೂಗ3 ಪೂರ್ಣಪ್ರಜ್ಞಾಚಾರ್ಯವರ್ಯ ಸನ್ನುತ ಮತಧೈರ್ಯ ಧುರ್ಯ ಧನ್ಯನಾದೆನು ನಾನಿಂದು ಸನ್ನಿಧಾನವನು ಕಂಡೆನು4 ಶ್ರೀಶ ಲಕ್ಷ್ಮೀನಾರಾಯಣ ವ್ಯಾಸ ರಘುಪತಿಯ ಚರಣೋ- ಪಾಸಕರೆ ಪಾವನರೆ ಕಾಶೀವiಠಾಧೀಶ್ವರರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆ ಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರ ಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ 2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ 3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ 4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ 5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ 6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು7
--------------
ತುಪಾಕಿ ವೆಂಕಟರಮಣಾಚಾರ್ಯ
ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ಪ. ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು 1 ಪರಿಮಳಿಸುವ ಮಾಲೆಯ ನೆವದಿ ಹರಿಯುದರದಲ್ಲಿಸಿರಿಯೊಲಿಹಳುತÀರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು2 ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿಆ ಜನಾರ್ದನನಾಕ್ಷಣ ತಹಳು 3 ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ 4 ತುಲಸಿಯ ನೆಟ್ಟವನು ಮತ್ತೆ ತನಗೆ ಇಳೆಯೊಳು ಪುಟ್ಟುವ ವಾರ್ತೆಯ ಕಳೆವಜಲವೆÀರೆದು ಬೆಳೆಸಿದ ಮನುಜರಕುಲದವರ ಬೆಳೆಸು ವೈಕುಂಠದಲ್ಲಿ 5 ತುಲಸಿಯೆ ನಿನ್ನ ಪೋಲುವರಾರುಮೂಲದಲ್ಲಿ ಸರ್ವತೀರ್ಥಂಗಳಿಹವುದಳದಲ್ಲಿ ದೇವರ್ಕಳ ಸನ್ನಿಧಾನಚೆಲುವಾಗ್ರದಿ ಸಕಲ ವೇದಗಳು 6 ತುಲಸಿ ಮಂಜರಿಯೆ ಬೇಕಚ್ಚುತಂಗೆದಳಮಾತ್ರ ದೊರಕಲು ಸಾಕವಗೆಸಲುವುದು ಕಾಷ್ಠಮೂಲ ಮೃತ್ತಿಕೆಯುಫಲವೀವನಿವಳ ಪೆಸರ್ಗೊಳಲು 7 ಕೊರಳಲ್ಲಿ ಸರ ಜಪಸರಗಳನ್ನುವರ ತುಲಸಿಯ ಮಣಿಯಿಂದ ಮಾಡಿಗುರುಮಂತ್ರವ ಜಪಿಸುವ ನರರುಹರಿಶರಣರ ನೆಲೆಗೆ ಸಾರುವರು8 ಎಲ್ಲಿ ತುಲಸಿಯ ಬನದಲ್ಲಿ ಲಕ್ಷುಮೀ-ವಲ್ಲಭನು ಸರ್ವಸನ್ನಿಹಿತನಾಗಿನೆಲಸಿಹನಿವಳೆಸಳೊಂದಿಲ್ಲದಿರೆಸಲ್ಲದವಂಗನ್ಯಕುಸುಮದ ಪೂಜೆ 9 ಎಲ್ಲ ಪಾಪಂಗಳೊಮ್ಮೊಮ್ಮೆ ಕೈಮುಗಿಯೆಎಲ್ಲಿ ಪೋಪುದು ದೇಶದೇಶಂಗಳಿಗೆನೆಲ್ಲಿ ಮಲ್ಲಿಗೆ ಮೊದಲಾದ ಸೈನ್ಯಅಲ್ಲೀಗಲು ನಮ್ಮ ಬನದಲೊಪ್ಪಿಹಳು 10 ಹರಿಪಾದಕೆ ಶ್ರೀತುಲಸಿಯೇರಿಸಿದನರರನು ಪರಮ ಪದಕೇರಿಸುವುದುನಿರುತದಿ ತುಲಸಿಯ ಕಂಡರವಗೆನರಕಗಳ ದರುಶನ ಮತ್ತಿಲ್ಲ 11 ಪಡಿ ಆಯಿತು ಗಡನ್ನಿವಳ ವೃಂದಾವನದಲ್ಲಿ ನೆಟ್ಟುಮನೆಮನೆ ಮನ್ನಿಸದವನ್ಯಾವ12 ಕನಸಿನಲಿ ಕಂಡಂತೆ ಇನ್ನೊಂದುಕೊನೆವೆರಸಿದ ಪುಷ್ಪದಿ ಜಪಿಸಿಅನುದಿನ ಹಯವದನನ್ನ ತೀರ್ಥವನು ಕೊಂಡು ನಾ ಧನ್ಯನಾದೆನು 13
--------------
ವಾದಿರಾಜ
ರಾಮಾನಾಮಾಮೃತಪಾನಸುಖಧಾಮನು ಮುಖ್ಯಪ್ರಾಣ ಸೋಮಶೇಖರಮುಖ್ಯಾಮರಸಂಕುಲಸ್ವಾಮಿ ಮಹಾಸುತ್ರಾಣ 1 ಯಾವತ್ಕಾಲ ಕಳೇವರದೊಳನಿಲ ತಾವದ್ಧರಿಸನ್ನಿಧಾನ ದೇವಬ್ರಹ್ಮ ಸುಜನಾವಳಿಸುಖದ ಮಹಾಪ್ರಭು ಪವಮಾನ 2 ಲಕ್ಷ್ಮಣಪ್ರಾಣದಾತಾರ ನಿಭೃತಮೋಕ್ಷಹೃದಯ ಪರಿಪೂರ್ಣ ಲಕ್ಷ್ಮೀನಾರಾಯಣಾಂಘ್ರಿಭಕ್ತಿದಕ್ಷ ಲೋಕೈಕಧುರೀಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಿಶೇಷ ಸಂದರ್ಭ ವಾದಿರಾಜ ಗುರುಗಳನಾ ಪ ಪ್ರೀತಿ ತೋರುವವನಾ ದೂತ ವಾದಿರಾಜನಾ 1 ಸಾಲು ಬೃಂದಾವನಾ ಅನಂತೇಶ್ವರನ ಸನ್ನಿಧಾನಾ 2 ಲೋಕಜನರಿಗೆ ಪ್ರೀತ ಗುರುವರನಾ3 ಸಂಚಿತಾಗಮ ಈ ಡ್ಯಾಡಿ ಅಧಿಕ ವಾದಿರಾಜರ ನೋಡಿ4 ಜನಕೆ ಉಲ್ಲಾಸ ಮಾಡುವ ವಾದಿರಾಜರ 5 ಚಕ್ರ ಶಂಖª Àಧರಿಸಿದಾ | ನಮ್ಮರುಕ್ಮಿಣಿ ಸಹಿತ ಬಂದು ನಿಂತಿಹ ಅಮಿತ ತ್ರಿವಿಕ್ರಮದೇವನಾ6 ಬೇಡುವವರನು | ಬೆನ್ಹತ್ತಿ ಬೀಜಗಳನು ಬಿತ್ತುವರು 7 ಚವಕಿ ಮಠದಿ ದಿವ್ಯಪ್ರಸ್ತ | ಓಡಾಡಿ ಬಡಿಸುವ ಜನಗಳ ಸಿಸ್ತಾ ಯತಿಗಳ ಸಿಸ್ತಾ 8 ಜನರ ಅಲಂಕಾರ ಯತಿಗಳ ಗಂಭೀರಾ 9 ಭೂತಬಲಿಗಳ ನೋಡಿ | ನಮ್ಮ ಭೀತಿ-ಭಯಗಳನ್ನು ಬೀಸಾಡಿ ಭೂತರಾಜನ ನೋಡಿ 10 ಪೀಳಿಗೆ ಪೂಜೆ ಚಂದ ನೋಡಲು ನಂದ 11 ಮುತ ಕೆತ್ತಿಹ ಕಿರೀಟ | ಬಹು ಚಿತ್ರವಾಗಿಹಗದ್ದುಗೆ ಮಾಟ ವಾದಿರಾಜರ ದೊಡ್ಡ ಆಟಾ 12 ಈಕ್ಷಿಸಲಳವೆ ಮಠವಾ ಎನ್ನಕ್ಷಿಗಳಿಂದ ನೋಡಲು ನರಸಿಂಹ ವಿಠಲನ್ನಾ 13
--------------
ಓರಬಾಯಿ ಲಕ್ಷ್ಮೀದೇವಮ್ಮ