ಒಟ್ಟು 16 ಕಡೆಗಳಲ್ಲಿ , 12 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಏಕಾದಶಿಯ ಮಹಿಮೆ) ಸಾರುತ ಬಂದಿತೇಕಾದಶಿ ನಮ್ಮ ನಾರಾಯಣನಾರಾಧಿಸಿ ಸುಖಗೊಳಿರೆಂದು ಪ. ಕರ್ಮ ಕಲುಷವೆಲ್ಲ ಕಳಕೊಂಡು ಕುಲವನ್ನೆ ನಿರ್ಮಲ ಮಾಡುವ ಮರ್ಮವಿದು ಸ್ವರ್ಮಹೀಶ ದೇವ ಶರ್ಮವರದನ ಚಾ- ತುರ್ಮಾಸೆಯಲಿ ಪೂಜಿಸಿರಿಯೆಂದು ಡಂಗುರ 1 ಕಮಲ ಮುಖ್ಯ ಹಲವು ಪುಷ್ಪವನೇರಿ ಸಲು ಕೋಟಿಮಡಿಯಾದ ಫಲವೀವುದು ನಿತ್ಯ ಮೋದದಿ ಸಿರಿಯಪ್ಪಿ ಮಲಗಿರುವನು ವೃಂದಾವನ ಮೂಲದಲಿಯೆಂದು2 ಸುಂದರತರ ಪೂರ್ಣಾನಂದ ವೆಂಕಟರಾಜಾ- ಜಾಗರ ಸಹಿತ ಒಂದುಪವಾಸವಾÀದರು ಮಾಡಲಘವೆಲ್ಲ ಇಂದು ನಿಶ್ಚಯವಾಗಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಏನೆಂದು ಬಣ್ಣಿಸುವೆನೊ ನಾನು | ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ಪ ಅಮೃತ ಕಲಶ ಬರೆಕಂಡು ಅತಿ | ಜಲಜಾಂಬಕನ ಪ್ರೇಮಾಂಜಲ ಉದರಲು | ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ | ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು 1 ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ | ಶಿರದಲಾಂತರು ಪರಮ ಹರುಷದಿಂದ | ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ | ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು 2 ದುರಿತ ಕುಲ ಓಡುವವು ತನುವ ನೀ ಡಾಡಿ ಜಲನೀಡಿ ಕೊಂಡಾಡಿ ನಿಂದು | ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ | ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ 3 ತುಲಸಿ ಭಕುತಿಲ್ಲದವ ಕಲಿವಂಶದನುಜನವ | ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು | ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು | ತುಲಸಿ ಇಲ್ಲದ ಗೇಹ ಕಲುಷಾಲಯ 4 ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ | ಮೇಲುತುದಿಯಲಿ ವಿಷ್ಣು ಲೋಲಾಡುವಾ | ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು | ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಂದ್ರಹಾಸನ ಕಥೆ ಸುಜನ ತ್ರೈಭುವನೋದ್ಧಾರ ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1 ಭಕ್ತರ ಭಾಗ್ಯನಿಧಿಯೆ ನುಡಿಸಯ್ಯ ಎನ್ನ ಜಿಹ್ವೆಯಲಿ 2 ಅಜಹರಿಸುರ ವಂದಿತನೆ ನಿಜವಾಗೊ ಮತಿಗೆ ಮಂಗಳವ 3 ಸಂಗೀತಲೋಲೆ ಸುಶೀಲೆ ಹಿಂಗದೆ ನೆಲಸೆನ್ನ ತಾಯೆ 4 ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ ಮುಗಿದು ವಂದಿಸುವೆ 5 ಸೂರ್ಯ ಪತಿಯ ಚರಣವನ್ನು ನೆನೆವೆ ಮಂಗಳವಾಗಲೆಂದು 6 ಒರೆದಂಥ ಜೈಮಿನಿಯೊಳಗೆ ಮಾಡಿ ವರ್ಣಿಸುವೆ 7 ಸಂದೇಹ ಮಾಡುತ್ತಿರಲು ಪೇಳಿದ ಫಲುಗುಣಗೆ 8 ಮುಂದೊತ್ತಿ ರಥವ ಬೆಂಬತ್ತಿ ನಿಂದಿರಿಸಿದ ಚಂದ್ರಹಾಸ 9 ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10 ನ್ನೊಡೆಯಗೆ ಪೇಳಿದರಾಗ ಕಡುಚಿಂತೆಯಲಿ ಪಾರ್ಥನಿದ್ದ 11 ದಿನಕರ ಪ್ರತಿಬಿಂಬದಂತೆ ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12 ಉಟ್ಟಿಹ ಕರದಿ ವೇಣುವನು ಶ್ರೇಷ್ಠÀ ಬಂದನು ಇವರೆಡೆಗೆ 13 ಆನಂದದಿಂದ ಕೇಳಿದರು 14 ಎಲ್ಲ ವೃತ್ತಾಂತವನರುಹಿ ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15 ಪ್ರಮುಖರಿಲ್ಲ್ಯಾರು ಪೇಳೆನುಲು ಸಮಯವಲ್ಲವು ಪೇಳೆನಲು 16 ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17 ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು ಪ್ರಧಾನಿಯನು 18 ಭೂತಮೂಲದಲಿ ಪುಟ್ಟಿದನು ತಾತ ಕಾಲವಾಗಿ ಪೋದ 19 ಸಾಯಲಾದಳು ರಾಜಪತ್ನಿ ಸಿರಿ ಪರರಾಯರು ಬಂದು ಕಟ್ಟಿದರು20 ಬಾಲನಿರಲು ಆ ಶಿಶುವೆತ್ತಿ ನಡೆದಳು 21 ಕುಂತಳಪುರಕಾಗಿ ಬಂದು ಆ ಗ್ರಾಮದಲ್ಲಿ 22 ಎರೆದು ಪೋಷಣೆಯ ಮಾಡುವಳು ಮರುಗುತಿರ್ದಳು ಮನದೊಳಗೆ 23 ಹಾಸುವ ವಸ್ತ್ರಗಳಿಲ್ಲ ಬೇಸತ್ತು ಅಳಲುವಳೊಮ್ಮೆ 24 ನೋಡಿ ಹಿಗ್ಗುವಳು ಆಲಂಬದಲ್ಲಿರುತಿಹಳು 25 ಕಂಗಳ ಕುಡಿನೋಟವೆಸೆಯೆ ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ- ದೊಳಗಾಡುತಿಹನು 26 ಪರಪುಟ್ಟನಾದುದ ಕಂಡು ಮಡಿಯ ಪೊದಿಸುವರು 27 ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ- ರೋಗರವನ್ನು ಉಣಿಸುವರು ರಾಗಗಾನದಲಿ ಪಾಡುವರು 28 ಎಣ್ಣೂರಿಗೆಯನು ಕೊಡಿಸುವರು ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29 ತಮ್ಮಾಲಯದೊಳು ಕರೆದೊಯ್ದು ಮಾಲೆಯನವಗೆ ಹಾಕುವರು 30 ಮಾವಿನ ಫಲಗಳನು ಮದನನಯ್ಯನ ಕಿಂಕರಗೆ 31 ಸಾಲಿಗ್ರಾಮ ಶಿಲೆಯ ಅಷ್ಟು ಜನರಿಗೆ ತೋರಿಸಿದ 32 ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು ಲಕ್ಷ್ಮಿನಾರಾಯಣ ಮೂರುತಿಯ 33 ಕೂಡಿದ ಗೆಳೆಯರ ಕೂಡೆ ದೌಡೆಯೊಳಿಟ್ಟು ಕೊಂಡಿಹನು 34 ಮಂಡೆಗಳನು ತಗ್ಗಿಸುವನು 35 ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು ಬಾಯೊಳಗಿಡುವ 36 ಮಂದಿರದಲಿ ವಿಪ್ರರಿಗೆ ಆ- ಬಂದರು ಬುಧಜನರೆಲ್ಲ 37 ಶ್ರೇಷ್ಠರೆಲ್ಲರ ಕುಳ್ಳಿರಿಸಿ 38 ಮಂತ್ರಾಕ್ಷತೆಯನು ಮಂತ್ರಿಗಿತ್ತು ಲಕ್ಷಣವನ್ನೆ ನೋಡಿದರು 39
--------------
ಹೆಳವನಕಟ್ಟೆ ಗಿರಿಯಮ್ಮ
ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ನೆರೆನಂಬಿದವನೆ ಧನ್ಯಾ ಈ ಗುರುಪದ ಪ ನೆರೆನಂಬಿದವ ರಘತರಿವ ವೇದವ್ಯಾಸ ಕರ ಪಾದ ಅ.ಪ ವರಮಣಿಯೊಳು ಶಿರಿತನದಿಂದಲ್ಲಿ ಮೆರೆವ ನಾಯ ಕರ ಮಂದಿರದಿ ಜಾತರಾಗಿ ಪರಮ ಮಹಿಮರಾದ ಗುರು ರಘೋತ್ತಮರಿಂದ ಪರವಿದ್ಯೆಯನು ಪೊಂದಿ ಚರಿಸಿ ದಿಗಂತದಿ ವರವೇದ ವ್ಯಾಸರಿಂದ ತುರಿಯಾಶ್ರಮ ಪಡೆದು ಸಚ್ಚಿಷ್ಯರಿಂದÀ ಸಂತತ ಪ್ರವಚನ ಮಾಡುತಲಿ ಆನಂದ ತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆನಿ ಪರ ಪದ 1 ಯಾದವಾರ್ಯರಿಗೆ ಅಗಾಧ ಮಹಿಮರು ಈ ಪೂರ್ಣಬೋಧ ಗ್ರಂಥಾರ್ಥ ಗ್ರಂಥಗಳನ್ನು ಟೀಕಾ ಕೃ ಕೌವÀುುದಿಗಳನು ರಚಿಸಿದಂಥಾ ವಾದಿ ಮಾತಂಗ ಮೃಗಾಧಿಪರನ್ನು 2 ಕರೆದು ಶಿಷ್ಯರಿಗೆ ಹರಿ ಪಾದಂಗುಟದಿಂದ ಸುರನದಿಯನು ಸಾಕ್ಷಾ- ತ್ಕರಿಸಿ ತೋರಿಸಿದಂಥ ಗುರು ಕೃಷ್ಣದ್ವೈಪಾಯನ ತೀರ್ಥರಿಗೆ ಘನವಾದ ಮಹಿಮೆಯನಾ ಸುರತರು ಸಮ ಚರಣ 3 ವೃಂದಾವನದೆಡೆ ಒಂದು ಪ್ರದಕ್ಷಿಣಿ ವಂದನೆ ಮಾಡಲು ಮಂದನಾದರು ಪ್ರಾಜ್ಞನೆಂದು ಕರೆಸುವನು ವಂಧ್ಯೆಯಾದರು ಬಹುಕಂದರ ಪಡೆವಳುಸಂದೇಹವ್ಯಾಕಿಲ್ಲಿ ದೂರಮಾಡುತಲಿ ಆ ನಂದವ ಗರಿಯುವರ ಭಕ್ತರ ದುರಿತಾಂಧಕಾರಕ್ಕೆ ರವಿ ಯಂದದಲಿಪ್ಪರ 4 ವರಭೀಮಾತೀರದಿ ಪರಿಶೋಭಿಸುವ ಮಣಿ ಪುರದಿ ಪಂಡಿತ ಭೂಮಿ ಚರಣಾರಾಧಕರನು ಸುಮಂದಿರದಿ ಕುಳಿತು ನಿತ್ಯ ಮೂಲದಲಿ ಮೆರೆವ ಧೇನಿಸುತಿಪ್ಪ ಗುರುವೇದೇಶರ ಶುಭ ಚರಣ ಯುಗಲವ 5
--------------
ಕಾರ್ಪರ ನರಹರಿದಾಸರು
ಪಾವನ್ನೆ ಪಾವನ್ನೆ ಪ ನಗ | ಗೋವರ್ಧನಧರಶ್ರೀ ವರನಿಗೆ ಪ್ರಿಯೆ | ಪಾವನೆ ತುಳಸೀ ಅ.ಪ. ದಳ ದಳ ರೂಪಂ | ಗಳ ಬಹು ಧರಿಸುತನೆಲಿಸಿಹ ನಿನ್ನಲಿ | ಆಲವ ಪೂರ್ಣ ಹರಿ 1 ತೀರ್ಥಮಾನಿ ಸುರ | ಜಾತರೆಲ್ಲ ಸಂ-ಪ್ರೀತಿಯಿಂದ ಇಹ | ರಾತು ಮೂಲದಲಿ 2 ಕಂಡವರಘಗಗಳ | ಖಂಡಿಸಿ ಬಹು ತನುದಿಂಡುಗೆಡೆಹೆ ಹರಿ | ತೊಂಡರ ಗೈಯ್ಯುವ 3 ನೀರನೆರೆಯೆ ತರು | ಬೇರಿಗೆ ಸಂಸ್ಕøತಿಪಾರು ಮಾಳ್ಪ ಹೆ | ದ್ದಾರಿಯ ತೋರುವೆ 4 ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ವಲಿಸಿಹೆ | ದೇವಿ ಜಾಂಬುವತಿ 5
--------------
ಗುರುಗೋವಿಂದವಿಠಲರು
ಪ್ರಸನ್ನ ರಾಮಾಯಣ ಸುಂದರಕಾಂಡ ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ ಜಯ ಜಯ ಜಯ ರಾಮ ಸ್ವರತ ಆಹ ಜಯ ಸೀತಾರಮಣ ನೀ ಭಯಬಂಧ ಮೋಚಕ ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ ಶಾಶ್ವತ ಸುಗುಣಾಬ್ಧಿ ರಾಮ ಸವೇಶ್ವರನೆ ಬಲವೀರ್ಯ ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ ಸಾಗರ ಸರ್ವವು ಕಲಕಿ ಓಡಿತು ಕೂಡ 1 ಹಿಂದೆ ಪರ್ವತಗಳ ಪಕ್ಷ ಹನನ ಕಾಲದಿ ವಾಯು ತನ್ನ ಹಿತದಿ ರಕ್ಷಿಸಿದನು ಎಂದು ಆಹ ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ2 ಶ್ರಮರಹಿತನು ಎಂದೂ ಹನುಮ ಶ್ರಮ ನಿವಾರಣ ಅನಪೇಕ್ಷ ಆಶ್ಲೇಷಿಸಿ ನಗವರನ ಆಹ ನಿಸ್ಸೀಮ ಪೌರುಷ ಬಲಯುತ ಹನುಮನು ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ 3 ಪರೀಕ್ಷಿಸೆ ಸುರಸೆಯ ಸುರರು ಪ್ರೇರಿಸಿ ವರವನ್ನು ಕೊಡಲು ಆಹ ಫಣಿಗಳ ತಾಯಿ ಅವಳು ಬಾಯಿ ತೆರೆಯಲು ಪೊಕ್ಕು ಲೀಲೆಯಿಂ ಹನುಮ ಹೊರಹೊರಟ4 ಸುರರು ಆನಂದದಿ ಆಗ ಸ್ತುತಿಸಿ ಹನುಮನ ಕೊಂಡಾಡಿ ಸುರಿಯಲು ಪುಷ್ಪದ ಮಳೆಯ ಆಹ ಶೀಘ್ರ ಪವನಜನು ಮುಂದೆ ತಾ ಹೋಗುತ್ತ ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ 5 ಸರಸಿಜಾಸನ ವರಬಲದಿ ಸಿಂಹಿಕಾ ಲಂಕಾ ಪೋಗುವರ ಸೆಳೆದು ತಾ ನಿಗ್ರಹಿಸುವಳು ಆಹ ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ ಸೀಳಿದ ಹನುಮ ಅವಳ ಶರೀರದಿ ಪೊಕ್ಕು 6 ತನ್ನ ನಿಸ್ಸೀಮ ಬಲವನು ತೋರಿಸಿ ಈ ರೀತಿ ಹನುಮ ಧುಮುಕಿದ ಲಂಬ ಪರ್ವತದಿ ಆಹ ತೋರ್ಪುದು ಲಂಕಾ ಪ್ರಕಾರದೊಲï ಈ ಗಿರಿ ತನ್ನ ರೂಪವ ಸಣ್ಣ ಹನುಮ ಮಾಡಿದನಾಗ 7 ಆಗಿ ಬಿಡಾಲದೊಲ್ ಸಣ್ಣ ಅಸಿತ ಕಾಲದಿ ಪೋಗೆ ಪುರಿಗೆ ಅಲ್ಲಿದ್ದ ಲಂಕಿಣಿ ತಡೆಯೆ ಆಹ ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ 8 ಶ್ರೀಘ್ರ ಅಶೋಕ ವನದಲಿ ಶಿಂಶುಪಾವೃಕ್ಷ ಮೂಲದಲಿ ಸೀತಾ ಅಕೃತಿಯನು ಕಂಡ ಆಹ ಸೀತೆಗೆ ಏನೇನು ಭೂಷಣ ಉಂಟೋ ಸೀತಾ ಆಕೃತಿಗೂ ಸಹ ಅದರವೊಲಿತ್ತು 9 ಅವನಿಯೋಳು ನಿನ್ನ ವಿಡಂಬ ಅರಿತು ಅನುಸರಿಸಿ ಹನುಮ ಅದರಂತೆ ಪರಿಪಂಥಾವಳಿಗೆ ಆಹ ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ ಚೂಡಾಮಣಿ ನಿನಗೆಂದು ಕೊಟ್ಟಳು 10 ಅರಿಯರು ರಾಕ್ಷಸರಿದನು ಅಮರರು ಕಲಿಮುಖರೆಲ್ಲ ಅವಲೋಕಿಸಿದರು ಈ ಕಾರ್ಯ ಆಹ ಅಮರರು ಲೋಕವಿಡಂಬವಿದೆಂದರಿಯೆ ಅಧಮ ಕಲ್ಯಾದಿಗಳ್ ಮೋಹಿತರಾದರು 11 ಕೃತಕೃತ್ಯವಾಗಿ ತಾ ಹನುಮ ಕೋವಿದೋತ್ತಮ ಬಲವಂತ ಕಾಣಿಸಿಕೊಳ್ಳುವ ಮನದಿ ಕಿಂಚಿತ್ತೂ ಭಯವೇನೂ ಇಲ್ಲದೆ ವನವನು ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು 12 ಕುಜನ ರಾಕ್ಷಸರನು ಕೊಲ್ಲೆ ಕೂಗಿ ಆರ್ಭಟಮಾಡೆ ಹನುಮ ಕೇಳಿ ಚೇಷ್ಟೆಗಳ ರಾವಣನು ಆಹ ಕಪ್ಪು ಕಂಠನ ವರ ಆಯುಧಯುತರು ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ 13 ಆರ್ಭಟದಿಂದ ಘೋಷಿಸುತ ಅವರು ಆವರಿಸಿ ಹನುಮನ ಆಯುಧಗಳ ಪ್ರಯೋಗಿಸಲು ಆಹ ಪವನಜ ಮುಷ್ಟಿಪ್ರಹರದಿ ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ 14 ಕಡುಕೋಪದಿಂದ ರಾವಣನು ಕಳುಹಿದನು ಏಳು ಮಂತ್ರಿ ಕುವರರ ವರ ಬಲಯುತರ ಆಹ ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು 15 ಅನುಪಮ ಬಲಕಾರ್ಯಕೇಳಿ ಅಧಮ ರಾವಣ ತನ್ನ ಸುತನ ಅಕ್ಷನ ಕಳುಹಲು ಹನುಮ ಆಹ ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ 16 ಅತಿ ದುಃಖದಿಂದ ರಾವಣನು ಅಕ್ಷನಗ್ರಜ ಇಂದ್ರಜಿತನ ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ 17 ರಾವಣನಲಿ ಕೊಂಡು ಪೋಗೆ ರಾವಣ ಪ್ರಶ್ನೆಯ ಮಾಡೆ ರಾಮಗೆ ನಮಿಸಿ ಹನುಮನು ಆಹ ರಘುವರ ರಾಮ ದುರಂತ ವಿಕ್ರಮ ಹರಿ ರಾಕ್ಷಸಾಂತಕ ದೂತ ಮಾರುತಿ ತಾನೆಂದ 18 ರಘುವರ ಪ್ರಿಯೆಯನು ಬೇಗ ರಾಮಗರ್ಪಿಸಲೊಲ್ಲೆ ಎನ್ನೆ ಹನುಮ ಪ್ರಕೋಪದಿ ಅವನ ಆಹ ರಾಜ್ಯ ಮಿತ್ರ ಬಂಧು ಸರ್ವನಾಶ ರಾಘವ ಮಾಡುವನೆಂದು ಪೇಳಿದನು 19 ಅಜ ಶಿವ ಮೊದಲಾದ ಸರ್ವ ಅಮರೇಶ್ವರರು ತಾವು ತಡೆಯ ಆಶಕ್ತರು ರಾಮಬಾಣವನು ಆಹ ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ ಅಸಮರ್ಥನೆಂದ ಪ್ರಭಂಜನ ಸುತನು 20 ಪ್ರಭಂಜನ 1 ಸುತ ಮಾತು ಕೇಳಿ ಪ್ರಕುಪಿತನಾಗಿ ರಾವಣನು ಪ್ರಯತ್ನಿಸೆ ಹನುಮನ ಕೊಲ್ಲೆ ಆಹ ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ21 ಆತಿಭಾರ ವಸ್ತ್ರ ಕಟ್ಟುಗಳಿಂ ಅಧಮರು ಸುತ್ತಿ ಬಾಲವನು ಅಗ್ನಿಯ ತೀವ್ರದಿ ಹಚ್ಚೆ ಆಹ ಅಗ್ನಿಯ ಪರಸಖ ವಾಯು ಆದುದರಿಂದ ಅಂಜನಾಸುತ ನಿರಾಮಯನ ಸುಡಲೇ ಇಲ್ಲ 22 ಅಧಮ ರಾಕ್ಷಸರ ಚೇಷ್ಟೆಗಳ ಅಸಮ ಬಲಾಢ್ಯನು ಹನುಮ ಅನುಭವಿಸಿ ಕುತೂಹಲದಿ ಆಹ ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು ಅತಿ ಮುದದಲಿ ಗರ್ಜಿಸಿದ ರಾಮದೂತ 23 ಅಧಮ ಸಪುತ್ರ ರಾವಣನ ಅಲ್ಪ ತೃಣೋಪಮ ಮಾಡಿ ಅವರೆದುರಿಗೆ ಪುರಿ ಸುಟ್ಟು ಆಹ ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ 24 ಸಮಸ್ತ ವಾನರ ವರರೊಡನೆ ಸಮರ್ಥ ಹನುಮ ಧೀರ ಬಂದು ಶುಭಸೂಚಕ ಚೂಡಾಮಣಿಯ ಆಹ ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ 25 ಭಕ್ತಿ ಸವೈರಾಗ್ಯ ಜ್ಞಾನ ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು ಪ್ರಾಣ ಯೋಗ ಬಲ ಇಂಥಾ ಆಹ ತುಂಬಿ ಇರುವುವು ಈ ಪ್ರಭಂಜನ ವಾಯು ಹನುಮನಲಿ ಸರ್ವದಾ 26 ಸರ್ವೇಶ ರಾಮ ಅಗಾಧ ಸದ್ಗುಣಾರ್ಣವ ನೀ ಹನುಮನ ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ ಸುಪ್ರಮೋದದಿ ಹನುಮನ ಆಲಿಂಗನ ಮಾಡಿ27 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ನಮ್ಯ ಮಾರುತಿ ಮನೋಗತನೆ ಆಹ ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 28
--------------
ಪ್ರಸನ್ನ ಶ್ರೀನಿವಾಸದಾಸರು
ಭವ ನಿಂದುದಗಣಿತ ಕರ್ಮವೆಂದು ನಿನ್ನವನೆನಿಪುದೊ ಹರಿಯೇ ಅ.ಪಸೂಸುತಿದೆಯಜ್ಞಾನ ಮಾಸುತಿದೆ ಸುಜ್ಞಾನದೋಷಗಳು ಬಹುವಾಗಿವೆ ಹರಿಯೇಆಶೆಯೆಂಬುದಕಂತವಿಲ್ಲ ಬಹುಬಗೆ ತರದಪಾಶದಲಿ ಬಿಗಿವಡೆದೆನೋ ಹರಿಯೇಈಶ ನಿನ್ನಯ ಮಾಯೆಯೆಂಬ ಬಲು ಹುರಿ ಬಲೆಯುಬೀಸಿ ಸೋವುತ್ತಲಿದೆಕೋ ಹರಿಯೇಕ್ಲೇಶಸಾಗರದಲ್ಲಿ ಮುಳುಗಿ ತಡಿಯನು ಕಾಣೆವಾಸುದೇವ ಕಡೆಹಾುಸೋ ಹರಿಯೇ 1ಆವರಣ ವಿಕ್ಷೇಪವೆಂದೊಂದು ಶಕ್ತಿ ತಾನಾವರಿಸಿ ಬ್ರಹ್ಮಾಂಡವ ಹರಿಯೇತೀವಿಕೊಂಡೊಳಹೊರಗೆ ವಿಕ್ಷೇಪ ಶಕ್ತಿ ತಾಜೀವಕೋಟಿಗಳ ಸೃಜಿಸಿ ಹರಿಯೇಠಾವುಗಾಣದ ತೆರದಿ ಬಹುವಿಧದ ಕರ್ಮದಲಿಜೀವರನು ಬಂಧಿಸಿಹುದು ಹರಿಯೇಈ ವಿಧದ ಮಾಯೆ ತಾ ಯೋಗಿಗಳಿಗಸದಳವುದೇವ ಕೃಪೆಮಾಡಿ ಸಲಹೋ ಹರಿಯೇ 2ಮೂರು ಗುಣ ಮೂಲದಲಿ ಮೂರು ಕರ್ಮಗಳುದಿಸಿಮೂರಾರು ಕವಲಾದುದೋ ಹರಿಯೇಸಾರಿ ವೃಕ್ಷವ ಬಳ್ಳಿ ಮೀರಿ ಮುಸುಕಿದ ತೆರದಿತೋರದಿದೆ ನಿನ್ನ ನಿಜವ ಹರಿಯೇಬೇರುವರಿದಿಹ ಕರ್ಮಲತೆಯ ಜಾರಿಸಿ ಗುಣವಮೀರುವ ಉಪಾಯವೆಂತೋ ಹರಿಯೇಸೇರಿದೆನು ನಿನ್ನ ಚರಣವನು ವೆಂಕಟರಮಣದಾರಿಯನು ತೋರಿ ಸಲಹೋ ಹರಿಯೇ 3ಕಂ||ಗುರುವಾರದರ್ಚನೆಯನಿದಗುರುವಾಗಿಯೆ ಪೇಳ್ದೆ ನೀನೆ ಮೂಢನ ಸಲಹಲ್‍ಗುರುಸೇವೆಯೆಂತೊ ತಿಳಿಯದುಗುರುವರ ಸಂಗತಿಯನರಿಯೆ ನೀನೇ ಗತಿಯೈಓಂ ದಾಮೋದರಾಯ ನಮಃ
--------------
ತಿಮ್ಮಪ್ಪದಾಸರು
ಮಂಗಳ ಇಂದಿರಾವರನಿಗೆ ಜಯ ಮಂಗಳ ವೃಂದಾವನಶಾಯಿಗೆ ಪ. ಆಷಾಢ ಶುಕ್ಲೈಕಾದಶಿಯಾರಂಭಿಸಿ ನಾಲ್ಕು ಮಾಸವು ನೆಲೆಗೊಂಡ ನಳಿನಾಕ್ಷಗೆ ದಾಸ ಮನೋರಥದಾಯಿ ವೃಂದಾವನ ವಾಸಿ ದಾಮೋದರ ಶ್ರೀಶನಿಗೆ 1 ಹಲವು ವಿಧದ ಪುಷ್ಪಗಳಿಕಿಂತ ಅಧಿಕ ಶ್ರೀ ತುಳಸಿ ಎಂದು ಎಲ್ಲ ತಿಳಿಯಿರೆಂದು ನೆಲೆಯದೋರಿ ಮೂಲದಲಿ ಪವಡಿಸಿದಂಥ ನಳಿನಾಕ್ಷ ಗೋಪಾಲ ಕೃಷ್ಣನಿಗೆ 2 ವಿಧಿಭವ ಶಕ್ರಾದಿ ಬುಧರು ಪರಾಕೆಂದು ವಿವಿಧ ವಿಧ ಸ್ತುತಿಸುತ ಕಾದಿರಲು ಮುದದಿಂದಲೆದ್ದು ಮುಖಾಬ್ಜ ತೋರುವ ನಮ್ಮ ಪದುಮನಾಭ ವೆಂಕಟರಾಯನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ ಧ್ರುವ ಮನದಾವದು ಎಂದರಿಯದೆ ಖೂನ ಘನದಾವವೆಂದರಿಯದು ಧ್ಯಾನ ಧ್ಯಾನ ಮೋನ ಯಾತಕದೇನ ಅನುಭವರಿಯದೆ ಮರುಳಜನ 1 ಮೂಲದಲಿಡದೆ ಠಾವಿಲಿ ಮನ ಜ್ಯಾಲವ್ಯಾತಕೆ ಬರೇ ಮಾತಿನ ಕೀಲ ತಿಳಿಯದೆ ಸದ್ಗುರು ಜ್ಞಾನ ನೆಲಿಯುಗೊಂಬುದೆ ನಿಜಸಾಧನ 2 ಮನದಲಿ ಮನಸಿನ ತಿಳಿವದು ಬಿಟ್ಟು ಜನವನ ತಿರುಗುದೆ ಕೆಟ್ಟು ಮನೋನ್ಮನದೊಳಗಿದೆ ಘನಗುಟ್ಟುದೀನ ಮಹಿಪತಿ ಗುರು ದಯಲುಂಟು3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಗೋಪಾಲ ದಾಸಾರ್ಯವಿಜಯಶ್ರೀ ಲಕ್ಷ್ಮೀ137ಭಾಗಣ್ಣ ಗೋಪಾಲ ದಾಸಾರ್ಯರ್ ಪಾದಕ್ಕೆಬಾಗಿ ಶರಣಾದೆನು ಸತತ ನಿಶ್ಚಯದಿಜಗದಾದಿಕರ್ತಅಜಅಘದೂರ ಸುಗುಣಾಬ್ಧಿತುರಗಾಸ್ಯವಿಜಯಶ್ರೀನಿವಾಸ ಪ್ರಿಯತಮರು || ಭಾಗಣ್ಣಪನಾರಸುಗುಣಾರ್ಣವನು ಶ್ರೀರಮಾಪತಿ ಹಂಸಸರಿಸಿಜಾಸನಸನಕದೂರ್ವಾಸಇಂಥಾಪರಮೋತ್ಕøಷ್ಟಗುರುಪರಂಪರೆಗೆ ಶರಣೆಂಬೆಪುರುಷೋತ್ತಮಾಚ್ಯುತ ಪ್ರೇಕ್ಷರಿಗೆ ಶರಣು 1ಸದಾಗಮಾಮಾಯಗಳು ಬ್ರಹ್ಮ ಧಾಮವೆÉಂದುಉದ್ಘೋಷಿಸುತಿವೆ ಮುಖ್ಯವಾಯುದೇವಮಾತರಿಶ್ವಸೂತ್ರಪವಮಾನಮುಖ್ಯಪ್ರಾಣಪ್ರತಿರಹಿತ ಬಲಜ್ಞಾನರೂಪಹನುಮ ಭೀಮ ಮಧ್ವನ್ನ2ಪ್ರೋಚ್ಚಸುರವರ ವಾಯುವಿನ ತೃತೀಯಾವತಾರ ಮಧ್ವಅಚ್ಯುತಪ್ರೇಕ್ಷರಲಿ ಸಂನ್ಯಾಸಕೊಂಡುಪ್ರಚ್ಛನ್ನ ಬೌದ್ಧಾದಿ ಮತ ಪಂಕದಿ ಬಿದ್ದಿದ್ದಸಜ್ಜನರನ್ನುದ್ಧರಿಸಿ ಸತ್‍ಜ್ಞಾನವಿತ್ತ 3ಶ್ರೀ ಮಧ್ವಗುರು ವಂಶಸ್ಥಪದ್ಮನಾಭನರಹರಿಮಾಧವಾಕ್ಷೋಭ್ಯಜಯ ವಿದ್ಯಾಧಿರಾಜವಿದ್ಯಾಧಿರಾಜರ ಶಿಷ್ಯರು ಈರ್ವರುಸಾಧು ಉತ್ಕøಷ್ಟರೀ ತೀರ್ಥರ್‍ಗಳಿಗೆ ಶರಣು 4ಶ್ರೀ ವಿದ್ಯಾಧಿರಾಜರ ಪ್ರಥಮ ಶಿಷ್ಯ ರಾಜೇಂದ್ರಹಸ್ತಪದ್ಮ ಜಾತರು ಜಯಧ್ವಜಾರ್ಯಮಾಧವನ ಏಕಾಂತ ಭಕ್ತ ಪುರುಷೋತ್ತಮರುತತ್ಸುತ ಬ್ರಹ್ಮಣ್ಯರೀ ಸರ್ವರಿಗೂ ಶರಣು 5ಪದ್ಮನಾಭತೀರ್ಥಜ ಲಕ್ಷ್ಮೀಧರರ ವಂಶಜಾತ ಸುವರ್ಣವರ್ಣ ತೀರ್ಥಾಭಿದರಸುತಲಕ್ಷ್ಮೀ ನಾರಾಯಣ ಯತಿವರ್ಯ ಶ್ರೀಪಾದರಾಜರು ಈ ಸರ್ವರಿಗೂ ಶರಣು 6ಶಿಂಶುಮಾರಪುಚ್ಛಶ್ರಿತರ ಅವತಾರರೇವಸುಮತೀಖ್ಯಾತ ಶ್ರೀಪಾದರಾಜರಲಿಭಾಷ್ಯಾಧಿಗಳ ಕಲಿಯೇ ಬ್ರಹ್ಮಣ್ಯ ತೀರ್ಥರಶಿಷ್ಯವರ್ಯ ವ್ಯಾಸರಾಜರು ಸೇರಿದರು 7ವಾದಿಗಜಕೇಸರಿಮಧ್ವಮತೋದ್ಧಾರರುಮೇದಿನೀ ಪ್ರಖ್ಯಾತ ಮಹಾಭಾಗವತರುಸಾಧುಜನ ಆಹ್ಲಾದ ಶ್ರೀ ವ್ಯಾಸರಾಜರಲಿಸದಾ ಶರಣು ಪಾಲಿಪರುಪ್ರತಿಕ್ಷಣ ದಯದಿ8ಆನಂದ ಮುನಿಕರ ಅರವಿಂದ ಸಂಜಾತವಿಷ್ಣುತೀರ್ಥ ವಂಶಜ ವಾಗೀಶರಹಸ್ತವನರುಹೋತ್ಪನ್ನರು ಸುಮಹಾಮಹಿಮರುಘನದಯಾನಿಧಿ ವಾದಿರಾಜ ಸ್ವಾಮಿಗಳು9ಯುಕ್ತಿಮಲ್ಲಿಕಾ ಮೊದಲಾದ ತತ್ವಬೋಧಕವಾದಗ್ರಂಥ ಪದ್ಯ ಕೀರ್ತನೆಗಳ್ ಸಜ್ಜನರಿಗಿತ್ತುಸೋದೆಯಲ್ಲಿ ತ್ರಿವಿಕ್ರಮಮೂರ್ತಿ ನಿಲ್ಲಿಸಿಹರುಭೂಧರಹಯಾಸ್ಯಪ್ರಿಯತಮ ಶ್ರೀ ವಾದಿರಾಜಾರ್ಯ10ತೀರ್ಥಪಾದ ಶ್ರೀಪತಿಯು ಬ್ರಹ್ಮ ಶಿವಾದ್ಯಮರ ಸಹಸದಾ ಸನ್ನಿಹಿತವಾಗಿರುವ ಮತ್ತುತೀರ್ಥವನ ಕ್ಷೇತ್ರಗಳೊಳುತ್ತಮ ವೃಂದಾವನದಿಅತ್ಯಕ್ತ ದೇಹದಿ ಕುಳಿತಿಹರು ಗುರುರಾಟ್ 11ಬುಧರು ತಿಳಿದಂತೆಯೇ ಬ್ರಹ್ಮಾಂಡ ಪುರಾಣದಲ್ಲಿವಾದಿರಾಜರು ಭಾವೀಕಲ್ಪ ಮುಖ್ಯವಾಯುಎಂದು ಪ್ರಸಿದ್ಧರೀ ಸುದುಪಾಸ್ಯ ಮದ್ಗುರುವರ್ಯರಲ್ಲಿ ಶರಣಾದೆಸದಾನಮೋ ಲಾತವ್ಯಾಚಾರ್ಯ ಕರುಣಾಬ್ಧೆ 12ವಿದ್ಯಾಧಿರಾಜರ ಎರಡನೇ ಶಿಷ್ಯರುಕವೀಂದ್ರ ಪೀಳಿಗೆಯ ಶ್ರೀರಾಮಚಂದ್ರದ್ವಿತೀಯಶಿಷ್ಯ ವಿದ್ಯಾನಿಧಿ ವಂಶಜಾತರುಆದ್ಭುತಮಹಿಮರು ಕರುಣಿ ರಘೋತ್ತಮರು 13ಕಾಮಿತಪ್ರದ ಟೀಕಾಭಾವ ಬೋಧಾರ್ಯರುಎಮ್ಮಪಾಲಿಪ ರಘೋತ್ತಮರಿಗೆ ಶರಣುರಾಮಚಂದ್ರರ ಮೊದಲನೆ ಶಿಷ್ಯ ವಿಬುಧೇಂದ್ರಈ ಮಹಾತ್ಮರ ವಂಶಜರು ಸರ್ವರಿಗೂ ನಮಿಪೆ 14ದುರ್ಜನರ ಕುಮತಗಿರಿವಜ್ರ ವಿಜಯೀಂದ್ರರುಸಜ್ಜನರುದ್ಧಾಕರು ಸುಧೀಂದ್ರಸೂರಿನಿಜವಿರಾಗಿ ಯಾದವೇಂದ್ರ ವಿಜ್ಞಾನಿಯುಭಜಕಜನಸುರಧೇನುರಾಘವೇಂದ್ರಾರ್ಯ15ಯಾರುಹಿಂದೆ ಏಡಮೂಕ ಬ್ರಾಹ್ಮಣನಾಗಿದ್ದಾಗಯಾರದ್ವಾರಾ ಶ್ರೀ ವಾದಿರಾಜರು ಸ್ವಪ್ನದಲ್ಲಿಉತ್ಕøಷ್ಟ ಶುಭತಮ ವೃಂದಾವನಾಖ್ಯಾನ ತಾವೇ ಹೇಳಿದರುಆಸೂರಿ ವಿಶ್ವಪ್ರಿಯಾರ್ಯರಿಗೆ ಶರಣು 16ಸೂರಿಕುಲತಿಲಕರು ವಾದಿಕರಿಹರಿ ಖ್ಯಾತಸಿರಿವ್ಯಾಸರಾಯರಲಿ ಮುದ್ರಿಕೆಯಕೊಂಡನಾರದರ ಅವತಾರರೆಂದು ಪ್ರಸಿದ್ಧರುಪುರಂದರದಾಸಾರ್ಯ ಕರುಣಾಂಬುಧಿಗೆ ಆನಮಿಪೆ17ನಿರ್ಝರ ವೃಂದ ಋಷಿ ಭೃಗುಮುನಿಯೇ ಧರೆಯಲ್ಲಿವಿಜಯದಾಸಾರ್ಯರಾಗಿ ಮೆರೆದವರ್ಗೆ ಶರಣುವಿಜಯವಿಟ್ಠಲನೊಲಿಯೆ ಜ್ಞಾನ ಭಕ್ತಿಸತ್ತತ್ವಸಜ್ಜನರಿಗೆ ಬೋಧಿಸಿದ ನಿವ್ರ್ಯಾಜ ಕರುಣಿ 18ಆಲಸ್ಯದಿನಾ ಮೈಥಿಲೀಪತಿ ಪಲ್ಲಿಯಲ್ಲಿಮಲಗಿರಲು ಶ್ರೀ ಗೋಪಾಲದಾಸಾರ್ಯರುಬಲುಕರುಣದಲ್ಲಿ ಮುಂದೆ ನಿಂತು ಯತಿಕೃತಮಾಲೋಲ ಪೂಜೆನೋಡಿ ಒದಗಿದ ಗುರುವರ್ಯ 19ಉಮಾಸೂನು ವಿಘ್ನಹರ ಕ್ಷಿಪ್ರಪ್ರಸಾದನುಈ ಮಹೀಯಲ್ಲಿ ಗೋಪಾಲದಾಸರಾಗಿರಮಾಪತಿಯ ಸೇವಿಸಿ ಸಜ್ಜರನ್ನುದ್ಧರಿಸಿಹರುನಮಿಸಿ ಶರಣಾದೆ ಈ ಉದಾರ ಕರುಣಿಗೆ 20ಸುಪವಿತ್ರೆ ಸೌಭಾಗ್ಯಪ್ರದ ಮಂತ್ರಗಳನೆಗೆಉಪದೇಶಮಾಡಿದ ಕಪಿಗೋತ್ರದವರುಸುಪುಣ್ಯ ಶೇಶ್ಲೀಕರು ಉದಾರ ಸಾತ್ವಿಕರುಶ್ರೀಪತಿ ಕೃಷ್ಣಪ್ರಿಯ ಶ್ರೀರಾಮಾಚಾರ್ಯರಿಗೆ ಶರಣು 21ತರುಣತನಾರಭ್ಯ ಹರಿದಾಸತ್ವ ಒದಗಿಸಿಪರಿಪರಿ ವಿಧದಲ್ಲಿ ಔದಾರ್ಯದಿಂದಕಾರುಣ್ಯಬೀರಿ ಕಾಪಾಡುತಿರುವಂಥಾ ಈಹರಿಪ್ರತಿಮಾರೂಪ ಗುರುಸರ್ವರಿಗೂತಂದೆ ತಾಯಿಗೂ ಶರಣು 22ದಧಿಶಿಲಾ ಎಂಬುವರು ಆಡಂಬರ ಪ್ರಿಯರುಮಂದಿಗಳು ಮೊಸರು ಕಲ್ಲೆಂದು ಕರೆಯುವರುಸಾಧುವೈಷ್ಣವವಿಪ್ರಮುರಾರಿರಾಯರುಸಾಧ್ವಿ ವೆಂಕಮ್ಮ ದಂಪತಿ ಇದ್ದ ಕ್ಷೇತ್ರ 23ಪುತ್ರ ರತ್ನಗಳು ನಾಲ್ಕು ಈ ದಂಪತಿಗೆಅಗ್ರಜಭಾಗಣ್ಣ, ಸೀನಪ್ಪ, ದಾಸಪ್ಪತರುವಾಯ ರಂಗಪ್ಪ ನಾಲ್ಕನೆಯವನಾಗಿಗೌರವದಿ ಚರಿಸಿತು ಮುರಾರಿರಾಯರ ಕುಟುಂಬ 24ಸಂಸಾರಾವಸ್ಥೆಯಲ್ಲಿ ನಶ್ವರ ಸುಖ ದುಃಖಮಿಶ್ರವಾಗಿಯೆ ಉಂಟು ಆ ನಿಯತಿಯಲ್ಲಿಭೂಸುರವರ್ಯರು ಮುರಾರಿರಾಯರು ಸ್ವರ್ಗತಾ ಸೇರಿದರುಸತಿಸುತರನ್ನು ಬಿಟ್ಟು25ಬಾಲಕರನ್ನು ಪ್ರಿತ್ರವ್ಯರು ಲೆಕ್ಕಿಸದಿರಲುಮಾಲೋಲ ಪಾಲಿಸುವ ಕರ್ತನ್ನೇ ನಂಬಿಶೀಲೆ ವೆಂಕಮ್ಮ ಮಕ್ಕಳನ್ನ ಕರಕೊಂಡುಒಳ್ಳೆಯ ಜನಪದ ಶಂಖಪುರವೈದಿದಳು 26ಶಂಖಪುರ ಹತ್ತಿರವೇ ಹನೂಮಂತನ ಗುಡಿಮಕ್ಕಳ ಸಹ ಅಲ್ಲಿ ವಾಸಮಾಡಿಮುಖ್ಯ ಪ್ರಾಣದೇವರ ಸೇವಿಸಿದ ಫಲವಾಗಿಚಿಕ್ಕ ಜಮೀನು ಕೊಂಡಳು ದಾನವಾಗಿ 27ದಾನ ಕೊಟ್ಟವನಿಗೆ ಬಲು ಪುಣ್ಯ ದೊರೆಯಿತುದಾನಿಗಳುಭಾಗವತಶ್ರೇಷ್ಠರಾದ್ದರಿಂದಹನುಮ ಗೋಪಾಲಾನುಗ್ರಹದಿಂದ ಐವರೂಧಾನ್ಯಸಮೃದ್ದಿ ತೊರೆದರು ಆತಂಕ 28ಕುಲ್ಕರ್ಣಿ ಎಂಬಂಥ ಸರ್ಕಾರ ಅಧಿಕಾರಿವೆಂಕಮ್ಮನಲ್ಲಿ ಮಾತ್ಸರ್ಯ ದ್ವೇಷ ಬೆಳೆಸಿಸರ್ಕಾರ ಕೆರೆ ನೀರು ಕದ್ದು ಹೊಯಿಸಿದಳೆಂದು ಆಚಿಕ್ಕ ಜಮೀನ ಒಡಮೆ ಕಿತ್ತಿಕೊಂಡ 29ಸಾಧ್ವೀ ವೆಂಕಮ್ಮನಿಗೂ ಮಹಾತ್ಮ ತತ್ಪುತ್ರರಿಗೂಅಧಮ ಅಧಿಕಾರಿ ಮಾಡಿದ ದ್ರೋಹದಿಂದಪುತ್ರ ಸಂತಾನ ವಂಶಕ್ಷೀಣವಾಯಿತು ಅವಗೆಅಂದಿನಿಂದ ಕೆರೆ ಅದ್ಯಾಪಿ ನೀರಿಲ್ಲ ಆ ಕೆರೆಯಲ್ಲಿ 30ದೀನರಿಗೂ ಸಾಧು ಮಹಾತ್ಮರಿಗೂ ಮಾಳ್ಪಸಣ್ಣದೋ ದೊಡ್ಡದೋ ದ್ರೋಹಕ್ಕೆ ದಂಡನಾಅನುಭವ ಕ್ಷಿಪ್ರದಲ್ಲೋ ಮೆಲ್ಲಗೋ ಅಪರಾಧಿ ಮೂರ್ಖಗೆದೀನ ರಕ್ಷಕ ಸತ್ಪತಿ ಶ್ರೀಹರಿಈವ31ಭಾಗಣ್ಣ ಸೀನಪ್ಪ ದಾಸಪ್ಪ ರಂಗಪ್ಪಲೌಕಿಕ ವಿದ್ಯಾ ಕಲಿತು ಉಪಾಧ್ಯಾಯರಲ್ಲಿಭಾಗಣ್ಣನಿಗೆ ಶಾನುಭೋಗ ಮುಂಜಿಮಾಡಿಭಗವದ್ವಿಷಯ ಕಲಿತರೂ ಭಾಗಣ್ಣ 32ತತ್ಕಾಲ ಲೌಕಿಕ ಶ್ರೀತನ ಕೊರತೆ ನೋಡಿಬಂಧುಗಳಿವರನ್ನುದಾಸೀನಮಾಡಿದರುಇಂದಿರಾಪತಿವೆಂಕಟಕೃಷ್ಣಗೋಪಾಲಬಂದು ಶ್ರೀ ಒದಗಿಸಿದ ಕ್ಷಿಪ್ರದಲೆ ಇವರ್ಗೆ 33ಬ್ರಹ್ಮಚಾರಿ ಭಾಗಣ್ಣ ಗಾಯತ್ರೀ ಮಂತ್ರವಅಹರಹ ಸೂಕ್ಷ್ಮಾರ್ಥಅನುಸಂಧಾನವಿಹಿತ ಶ್ರದ್ಧಾ ಉದ್ಭಕ್ತಿಪೂರ್ವಕ ಜಪಿಸೆಶ್ರೀ ಹಯಾಸ್ಸ ನಾರಾಯಣನು ಒಲಿದ ಕ್ಷಿಪ್ರದಲೆ 34ವೇದೋಚ್ಚಾರಣವೇ ಗಾನವು ಜಗದ್ರಕ್ಷಣೆಯೇ ತ್ರಾಣವುಮಾಧವನೇ ಗಾಯತ್ರಿನಾಮ ಹಯಗ್ರೀವಭೂತಪೂರ್ಣವಾಗ್ವಶ್ರೀ ಪೃಥ್ವೀ ಆಶ್ರಯ ಶರೀರವ್ಯಾಪ್ತನುಹೃದಯ ಪ್ರಾಣಾಧಾರದಿವ ಪರಸ್ವರೂಪಪಾದತ್ರಯವು ಜಗತ್ಪಾದಸದೃಶ35ಜ್ಞಾನಸುಖ ಬಲಪೂರ್ಣ ಸರ್ವ ಜಗದಾದಿಕರ್ತದಿನಪತೇಜ ಸ್ಫೂರ್ತಿದ ಚೇಷ್ಟಕಾಧಾರಶ್ರೀ ನಾರಾಯಣದೇವ ನಿನ್ನ ಚಿಂತಿಪೆ ಭಜಿಪೆಅನುಪಮ ಸರ್ವೋತ್ತಮ ನಮೋ ಕೇಶವಾದಿ ನಾಮ 36ಲೌಕಿಕ ವಿಷಯಗಳೊಳ್ ಮನವಾಕ್ಕು ಚಲಿಸದೆಏಕಚಿತ್ತದಿ ಗಾಯತ್ರೀ ಪ್ರತಿಪಾದÀ್ಯಶ್ರೀ ಗಾಯತ್ರೀನಾಮ ನಾರಾಯಣನನ್ನಭಾಗಣ್ಣ ಜಪಿಸಿದರು ಕಂಡರು ಶ್ರೀಕರನ್ನ 37ಏಕಾಂತದಲ್ಲಿ ವೃಕ್ಷಮೂಲದಲ್ಲಿ ಕುಳಿತಿದ್ದಭಾಗಣ್ಣನ ಜಪಕೆಡಿಸಿ ಓರ್ವ ದುಷ್ಟಹಾಕಿದನು ಕುದಿನೀರು ಬೊಬ್ಬೆಗಳ್ ಅವನ ಮೇಲೆದ್ದವುಚಿಕಿತರಾಗಿ ಜನರು ಹೊಗಳಿದರು ಭಾಗಣ್ಣನ 38ಮತ್ತೊಂದುದಿನ ಇದಕೆÀ ಮುಂದೆಯೋ ಹಿಂದೆಯೋಸುತ್ತಿ ಭಾಗಣ್ಣ ವೃಕ್ಷಮೂಲದಲಿ ಸರ್ಪಹಿತದಿ ಆಶೀರ್ವದಿಸಿ ಪೋದಂತೆ ಪೋಯಿತುಇದು ನೋಡಿ ಜನರು ಕೊಂಡರು ಭೀತಿ, ಆಶ್ಚರ್ಯ ಮರ್ಯಾದೆ 39ಅಂದು ಮೃತಸರ್ಪ ಅರಿಯರಿಯರು ಶಮೀಕರು ಸಮಾಧಿಯಲಿಇಂದುತನ್ನ ಸರ್ಪ ಸುತ್ತಿರುವುದು ಭಾಗಣ್ಣ ಅರಿಯರುಇಂದಿರೇಶ ಒಲಿದವನಿವನೆಂದು ಶೇಷನೇ ಆಲಿಂಗಿಸಿದನೋಸ್ಕಂಧ ತನ್ನಯ ಸಹೋದರನೆಂದಪ್ಪಿ ಕೋಂಡನೋ 40ತತ್ವಮಾತೃಕಾನ್ಯಾಸಗಳ ಚರಿಸಿಮಂತ್ರ ಮೂಲಪ್ರಣವಅಷ್ಟಾಕ್ಷರೀ ಗಾಯತ್ರೀಭಕ್ತಿ ಪೂರ್ವಕ ಜಪಿಸಿ ಹೊರ ಒಳಗೆ ಶ್ರೀಹರಿಯವ್ಯಾಪ್ತಿವಿಜ್ಞಾನಪುಟ್ಟಿತು ಈ ಚೌತಾಪರೋಕ್ಷಿಗೆ41ವ್ಯಾಪ್ತಿ ದರ್ಶಿಯು ಇವರು ಶ್ರೀ ವಿಷ್ಣು ಅನುಗ್ರಹದಿಇಂದಿನ ಹಿಂದಿನ ಮುಂದಿನ ವಿಷಯ ಜ್ಞಾನವೇದ್ಯವಾಯಿತು ಹರಿಸ್ಮರಣಾ ಪೂರ್ವ ಆಲೋಚನದಿಬಂದು ಕೇಳುವವರಿಗೆ ಯೋಗ ಪೇಳಿದರು 42ಯೋಗಕ್ಷೇಮ ಸರ್ವಕೂ ನಿಯಾಮಕನು ಹರಿಯೇವೆಭಾಗಣ್ಣ ಈತತ್ವಜ್ಞಾನ ಪೂರ್ವಕದಿಲೌಕಿಕ ಧನ ಅಪೇಕ್ಷಿಸದಿದ್ದರೂ ಜನರುಬಾಗಿ ದ್ರವ್ಯಗಳಿತ್ತು ಬೇಡಿದರು ಸ್ವೀಕರಿಸೆ 43ಭವಿಷ್ಯ ಪೇಳುವುದರಲ್ಲಿ ಖ್ಯಾತಿ ಹರಡಿದ್ದಲ್ಲದೆಸರ್ವೇಶನ ಸ್ತೋತ್ರಕವನ ಪಟು ಎಂದುಸರ್ವರೂ ಕೊಂಡಾಡಿ ಆ ಊರಿಗೆ ಬಂದ ಪ್ರಖ್ಯಾತಕವಿಯನ್ನ ನಿಗ್ರಹಸಿ ಓಡಿಸಿದರು ಧೀರ 44ದಿಗ್ವಜಯ ಜಯಶೀಲನೆಂದು ಖ್ಯಾತ ಆಕವಿಭಾಗಣ್ಣ ಸೋಲಿಸಿ ಓಡಿಸಿದ್ದುಭಾಗಣ್ಣನ ಪ್ರಭಾವವ ಹರಡಿಸಿತು ನಾಡಲ್ಲಿಭಾಗಣ್ಣಗೆ ಸನ್ಮಾನ ಮಾಡಿದರು 45ಗದ್ವಾಲರಾಜನು ಇನ್ನೂ ಬಹು ಪ್ರಮುಖರುಬಂದು ನೇರವಾಗಿ ಭಾಗಣ್ಣನಲ್ಲಿವಂದಿಸಿ ಸನ್ಮಾನ ಪ್ರಶಸ್ತಿಗಳ ಅರ್ಪಿಸಿಪೋದರು ಶ್ಲಾಫಿಸುತ ತಮ್ಮ ತಮ್ಮ ಸ್ಥಳಕೆ 46ಹಿಂದೆ ದ್ರವ್ಯ ಹೀನನಾಗಿದ್ದ ಭಾಗಣ್ಣನಿಗೆಇಂದುಶ್ರೀಕೃಷ್ಣನ ಒಲುಮೆಯಿಂದಬಂದು ಸೌಭಾಗ್ಯ ಶ್ರೀ ದ್ರವ್ಯಗಳುಔದಾರ್ಯದಿ ದಾನಾದಿಗಳ್ ಮಾಡಿದರು 47ಇಷ್ಟರಲ್ಲೇ ಸೀನಪ್ಪ ದಾಸಪ್ಪ ರಂಗಪ್ಪಪ್ರೌಢವಯಸ್‍ಐದಿ ಗದ್ವಾಲು ಹೋಗೆ ಅಲ್ಲಿಮೌಢ್ಯ ಮಾತ್ಸರ್ಯದಿ ರಾಜ್ಯಾಧಿಕಾರಿಗಳುಕಡು ನಿರೋಧ ಮಾಡಿದರು ಮೂವರನ್ನು 48ವೆಂಕಟೇಶನ ಇಚ್ಛಾ ಈಮೂವರು ಅಣ್ಣಭಾಗಣ್ಣ ನಾಶ್ರಯದಲ್ಲೇವೆ ಇದ್ದುಅಗಲದೆ ಶ್ರೀಹರಿಗುಣಾನುವರ್ಣನಾಗಳಸುಗಾನ ಮಾಡುತ್ತಾ ಇರಬೇಕು ಎಂದು 49ಭಾಗಣ್ಣ ಅರ್ಯರು ಗದ್ವಾಲಿಗೆ ಪೋಗಿಸುಗುಣವಂತ ತಮ್ಮಂದಿರನ್ನ ಕರೆತಂದುಅಗಣಿತಗುಣಾರ್ಣವ ಶ್ರೀಯಃ ಪತಿಯ ಸೇವೆಗೆಯೋಗ್ಯೋಪದೇಶ ಪೂರ್ವಕ ತಯಾರು ಮಾಡಿದರು 50ದಾಸಪ್ಪ ಸೀನಪ್ಪ ರಂಗಪ್ಪ ತಮ್ಮ ಜ್ಞಾನಭಕ್ತಿಕಾಶಿಸಿ ವರ್ಧಿಪುದು ದಿನೇ ದಿನೇ ಹೆಚ್ಚಿಶ್ರೀ ಶ್ರೀನಿವಾಸನ ಪ್ರೀತಿಗೆ ಭಾಗಣ್ಣಚರಿಸುವ ಅನ್ನದಾನಾದಿಗಳಲ್ಲಿ ಸೇವಿಸಿದರು 51ದ್ರವ್ಯ ಧಾನ್ಯರಾಶಿಗಳು ತುಂಬಿದ್ದು ಕಂಡುದೇವ ಬ್ರಾಹ್ಮಣ ಸೇವೆಗೆ ಅಕ್ಕಿ ಹೆಚ್ಚು ಬೇಡೆಂದುಯಾವರೂ ಕಾಣದೆ ವೆಂಕಮ್ಮ ಮುಚ್ಚಿಡಲುಯಾವತ್ತೂ ಅಕ್ಕಿಯು ಹುಳುವಾಯ್ತು ಮರುದಿನ 52ಹರಿಬಲುಮೆಯಿಂದ ಭಾಗಣ್ಣ ಈ ರೀತಿ ತೋರಿಸಲುಹರಿಭಕ್ತಿ ವೈರಾಗ್ಯ ಹೆಚ್ಚಿತು ಮಾತೆಗೆಭಾರಿತರ ಕೀರ್ತನಾ ಸೇವೆ ಅತಿಶಯ ಚರ್ಯಅರಿತು ನಾಡೆಲ್ಲವೊ ಕೊಂಡಾಡಿತು ಭಾಗಣ್ಣನ 53ಉತ್ತನೂರು ಸಮೀಪವು ಐಜೀ ಎಂಬುವ ಗ್ರಾಮಉತ್ತಮ ಬ್ರಾಹ್ಮಣ ವೇಂಕಟನರಸಿಂಹಾಚಾರ್ಯದಂಪತಿಗೆ ಪುತ್ರರತ್ನ ವೇಂಕಟರಾಮಾಚಾರ್ಯಮಂದತನ ತೋರಿಸಿದ ಪುಸ್ತಕ ವಿದ್ಯೆಯಲ್ಲಿ 54ಭಾಗಣ್ಣ ಆರ್ಯರ ಪ್ರಭಾವದಲಿ ಆದರವೇಂಕಟನೃಸಿಂಹಾರ್ಯರ ಭಾರ್ಯೆಗೆ ಉಂಟುಭಾಗಣ್ಣನಲಿ ಪೋಗಿ ಮಗನ ತಿದ್ದುವ ಬಗೆಹೇಗೆಂದು ಅರಿಯಿರಿ ಎಂದಳು ಸಾಧ್ವೀ 55ಸಾಧ್ವೀ ಆಸ್ತ್ರೀರತ್ನಳಿಗೆ ಭಾಗಣ್ಣನುಔದಾರ್ಯದಿ ಒದಗುವ ಜ್ಞಾನಿವರ್ಯನೆಂದುಸುದೃಢದಿ ನಂಬಿದರೂ ಆಚಾರ್ಯ ಅರ್ಧಮನಸಿಂಪೋದರು ಕಂಡರು ಭಾಗಣ್ಣನ ಗುಡಿಯಲ್ಲಿ 56ವೇಂಕಟನೃಸಿಂಹಾರ್ಯ ತನ್ನ ಪಾಂಡಿತ್ಯ ಗುರುತನ ನೆನದುಆಕಸ್ಮಿಕ ಬೇಟಿಯಂತೆ ತೋರ್ಪಡಿಸಿವೇಂಕಟೇಶ ತುಳಸೀ ಸನ್ನಿಧಾನದಿ ಸಂಭಾಷಿಸಲುಶೀಘ್ರ ಕಂಡರು ಭಾಗಣ್ಣನ ಜ್ಞಾನಪ್ರಭಾವ 57ಭಾಗಣ್ಣ ಅಭಯವನಿತ್ತು ಆಚಾರ್ಯರನ್ನಹೋಗಿ ಬನ್ನಿ ಆತಂಕಬೇಡ ಮಹಾತ್ಮಮಗ ಸೂರಿಕುಲ ರತ್ನನು ವೇಂಕಟರಾಮಪ್ರಕಾಶಿಪುದು ಆತನ ಜ್ಞಾನಕ್ಷಿಪ್ರದಲೇ ಎಂದರು 58ಭಾಗಣ್ಣ ಆರ್ಯರು ಹೇಳಿದ ರೀತಿಯಲ್ಲೇವೇಂಕಟರಾಮಾರ್ಯ ಏಕವಾರ ಶ್ರವಣದಲ್ಲೇವೇಂಕಟನರಸಿಂಹಾಚಾರ್ಯ ಚಕಿತರಾಗುವಂತೆಅಕಳಂಕ ಪಾಂಡಿತ್ಯಪ್ರೌಢಿಮೆ ತೋರಿಸಿದ 59ಪ್ರತಿದಿನ ಐಜಿಯವರು ಭಾಗಣ್ಣ ದಾಸರೂ ಈರ್ವರುತತ್ವ ವಿಚಾರ ಹರಿಭಜನೆ ಮಾಡಿಒಂದು ದಿನ ಬ್ರಹ್ಮ ಜಿಜ್ಞಾಸ ಸ್ವಾರಸ್ಯದಲಿ ಸಾಯಂಸುಧ್ಯಾಕಾಲ ಅತಿಕ್ರಮವು ಆಯಿತು 60ಸೂರ್ಯಾಸ್ತ ಮನಃಪೂರ್ವಕರ್ತವ್ಯಕರ್ಮಬಿಟ್ಟದೋಷಪ್ರಾಯಶ್ಚಿತ್ತಾಘ್ರ್ಯ ಕೊಡಲಿಕ್ಕೆ ಇರಲುಭಯಬೇಡ ದೋಷವಿಲ್ಲ ಎಂದು ಭಾಗಣ್ಣಾರ್ಯಸೂರ್ಯನ್ನ ತಾನು ನೋಡಿ ತೋರಿಸಿದರು ಐಜೀಗೆ 61ಇಂದ್ರಜಾಲವಲ್ಲವು ಕ್ಷುದ್ರೋಪಾಸನಾದಿಗಳಿಂದಲ್ಲಅರ್ಧರಾತ್ರಿಯಲಿ ಸೂರ್ಯನ್ನ ನೋಡಿ ನೋಡಿಸಿದ್ದುಮಾಧವಶ್ರೀ ಮುಖ್ಯ ವಾಯುದೇವರು ರುದ್ರಸದಾ ಒಲಿದಿರುವ ಭಾಗಣ್ಣಗೆ ಇದು ಆಶ್ಚರ್ಯವಲ್ಲ 62ತೇಜೋಜಲ ಪೃಥ್ವೀಮುನಿಗಳು ಶ್ರೀ ಪ್ರಾಣರುದ್ರರುವಜ್ರ, ಅಗ್ನಿ, ವರುಣ ಪೃಥಿವ್ಯಾದಿ ಸರ್ವರೊಳಗೊರಾಜನೆ ನಿಯಮಿಸುವ ಅನಿರುದ್ಧ ಜಗದೀಶಜಗಜ್ಜನ್ಮಾದಿಕರ್ತ ಗಾಯತ್ರೀ ಭರ್ಗಸರ್ವಗನು 63ತೀರ್ಥಯಾತ್ರೆಯ ತೀರ್ಥರೂಪ ಭಾಗಣ್ಣ ತನ್ನಭ್ರಾತರೊಡಗೂಡಿ ಹೊರಟಿಹರುಮಂತ್ರಾಲಯ ವೇಂಕಟಗಿರಿ ಘಟಿಕಾದ್ರಿಹಸ್ತಿವರದಕಂಚಿ ಮೊದಲಾದ ಕ್ಷೇತ್ರ64ವೇಂಕಟ ಕೃಷ್ಣನ ಮುದ್ರೆಯಿಂ ಕವನಗಳಉತ್ಕøಷ್ಟ ರೀತಿಯಲ್ಲಿ ರಚಿಸಿ ಭಜಿಸುತ್ತಾಭಾಗಣ್ಣ ಆದವಾನೀಯಲ್ಲಿ ತಿಮ್ಮಣ್ಣಾರ್ಯರಲ್ಲಿಮುಕ್ಕಾಮು ಹಾಕಿದರು ಸ್ವಲ್ಪಕಾಲ 65ದಿವಾನು ತಿಮ್ಮಣ್ಣ ರಾಯರ ಉಪಚಾರಸರ್ವ ಅನುಕೂಲ ಆತಿಥ್ಯಕೊಳ್ಳುತ್ತಾದಿವ್ಯಮಾರುತೀ ಗುಡಿಗೆ ಪ್ರತಿದಿನ ಪೋಗಿಸೇವೆಸಲ್ಲಿಸಿದರು ಭಾಗಣ್ಣ ಶ್ರೀಹನುಮನಿಗೆ 66ಶ್ರೀ ವಿಜಯದಾಸಾರ್ಯರು ಶ್ರೀ ವ್ಯಾಸದೇವರ ಕಂಡುಶ್ರೀವರ ಒಲಿದು ಪುರಂದರಾರ್ಯರ ಕೈಯಿಂದದಿವ್ಯನಾಮಾಂಕಿತ ಬೀಜಾಕ್ಷರಗಳ ಹೊಂದಿಭುವಿಯಲಿ ಪ್ರಖ್ಯಾತರಾಗಿ ಬಂದಿದ್ದರಾಗ 67ವಿಜಯವಿಟ್ಠಲದಾಸರಾಯರು ತಮ್ಮನಿಜ ಶಿಷ್ಯವೃಂದದಲಿ ವ್ಯಾಸವಿಜಯಸಾರಥಿಗೋಪಾಲಹಯವದನಭಜನೀಯ ಈ ಮೂರು ಅಂಕಿತಕೊಡಬೇಕಾಗಿತ್ತು 68ಗೋಪಾಲವಿಠ್ಠಲಸುನಾಮಭಾಗಣ್ಣಗೆಸುಪ್ರಿಯ ಮನದಿಂದ ಇತ್ತು ಹಯವದನಸುಪವಿತ್ರ ಅಂಕಿತ ಚೀಕಲಪರವಿ ಆನಂದನಿಗೆಕೃಪಾಂಬುಧಿ ವಿಜಯದಾಸಾರ್ಯ ಇತ್ತರು 69ಶ್ರೀಪುರಂದರದಾಸಾರ್ಯರನುಗ್ರಹದಲಿಸುಪುಣ್ಯವಂತನು ಸಹನ ಶಾಲಿಯಾದಶ್ರೀಪಪ್ರಿಯ ತಿಮ್ಮಣ್ಣ ವೇಣುಗೋಪಾಲನಾಮತಾಪೊಂದಿದ ವಿಜಯದಾಸರು ಕೃಪದಿ ಕೊಡಲು 70ಶೋಭನ ಜ್ಞಾನಪ್ರದ ವ್ಯಾಸ ನಾಮಾಂಕಿತವಸುಬ್ಬಣ್ಣ ಕಲ್ಲೂರು ಪಂಡಿತೋತ್ತಮಗೆಲಭಿಸುವಂತೆ ವಿಜಯದಾಸ ಮಹಂತರುಕೃಪೆಯಿಂದ ಒದಗಿಸಿದರು ಔದಾರ್ಯನಿಧಿಯು 71ಗೋಪಾಲ ವಿಟ್ಠಲಾಂಕಿತದಲಿ ಭಾಗಣ್ಣಶ್ರೀಪಪ್ರಿಯತಮ ಪದ್ಯ ಸುಳಾದಿಗಳ ರಚಿಸಿಸುಪುಣ್ಯವಂತ ಸೀನಪ್ಪ ದಾಸಪ್ಪ ಈರ್ವರಿಗೂಉಪದೇಶ ಮಾಡಿದರು ಮಂತ್ರೋಪೇತ ನಾಮಾಂಕಿತಗಳನ್ನು 72ಕರಿರಾಜವರದನು ಗರುಡವಾಹನಸಿರಿವರವಾಸು ದೇವನೇ ವರದರಾಜನೆಂದೂಧರೆಯಲುತ್ತಮ ಕಂಚೀಪುರದಿ ಇರುವವನು ನಾಮವರದಗೋಪಾಲ ವಿಟ್ಠಲನಾಮ ಶ್ರೀನಿವಾಸನಿಗೆ 73ಇತರಾದೇವಿಯ ಸುತನೆನಿಸಿ ಮಹಿದಾಸನಾಮದಲಿಪ್ರಾದುರ್ಭವಿಸಿದ ಶ್ರೀಯಃಪತಿಗೆ ಪ್ರಿಯತಮವುಬೃಹತೀ ಸಹಸ್ರದಲಿ ವಿಷ್ಣು ನಾಮ ವಿಶ್ವಶಬ್ದಕ್ಕೆವಾಯುದೇವಾಂತರ್ಗತನು ಎಂದು ಜೆÕೀಯ 74ಮಧ್ವಾ ್ಯಖ್ಯ ವಾಯುದೇವರಗುರುಮಹಿದಾಸವೇದವ್ಯಾಸ ಹಂಸಾಖ್ಯ ಕಪಿಲ ಶ್ರೀಪತಿಯಉತ್ತಮನಾಮ ಗುರುಗೋಪಾಲ ವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 75ಭಂಗಾರದಂಥ ವೈಷ್ಣವ ಸಂತತಿಯ ಪಡೆದುರಂಗನಾಥನನುಗ್ರಹದಿ ಪಾಲಿಸುವಂಥಾರಂಗಪ್ಪರಾಯರಿಗೆ ತಂದೆ ಗೋಪಾಲವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 76ವಿಜಯರಾಯರ ಪರಮಭಕ್ತಾನುಗ್ರಹಿವಿಜಯಸಾರಥಿಪ್ರಿಯ ಗೋಪಾಲರಾಯರುವಿಜಯಾರ್ಯರ ಸುಪ್ರಸಾದದ ಬಲದಿಂದಅನುಜರಿಗೆ ಒದಗಿಸಿದರುಅಪರೋಕ್ಷ77ಗೋಪಾಲ ವರದಗುರು ಗೋಪಾಲದಾಸರ್ಗಳಅಪರೋಕ್ಷಮಹಿಮೆಗಳ ಸಾಧು ಸಜ್ಜನಗಳತೋರ್ಪಡಿಸಿ ಬೇರೆ ಬೇರೆಯಾಗಿಟ್ಟು ಮೂವರನ್ನುಶ್ರೀಪಪ್ರಿಯ ಕವನವ ರಚಿಸಿಗುರುಹೇಳಿದರು78ಗುರುಅಂತರ್ಗತನಾದ ಗೋಪಾಲನೃಹರಿಯಸ್ಮರಿಸಿ ಮೂವರೂ ಗುರುನಾಮವೂ ತದಂತಸ್ಥಹರಿಗೆ ಸುಪ್ರೀತಿಕರಯೆಂದು ರಚಿಸಿದರುಗುರುಸತ್ಯಬೋಧರ ಪ್ರಭಾವತೋರ್ಪಡಿಸಿ79ಸೂರಿಗಳುಗೋಪಾಲದಾಸಾದಿ ಮೂವರೂಬರೆದ ಕೀರ್ತನೆಯಲ್ಲಿ ಸತ್ಯಬೋಧಾರ್ಯರಸ್ವರೂಪವ ಸೂಕ್ಷ್ಮದಲಿ ಸೂಚಿಸಿಹರು ಎಂದುಅರಿವರು ಜ್ಞಾನಿಗಳು ಬಲ್ಲೇನೇ ನಾನು? 80ನೆರೆÀದಿದ್ದ ಜನರೆಲ್ಲ ಆಶ್ಚರ್ಯ ಚಕಿತರುಪರಿಪರಿ ವಿಧದಲ್ಲಿ ಮೂವರನ್ನು ಕೊಂಡಾಡೆಗುರುಸತ್ಯಬೋಧರು ಯುಕ್ತ ರೀತಿಯಲ್ಲಿಭಾರಿತರ ಭೂಷಣಾನುಗ್ರಹ ಮಾಡಿದರು 81ತಂದೆ ಗೋಪಾಲದಾಸಾರ್ಯರು ಮನೆಯಲ್ಲೇನಿಂದುಸತಿಸುತರಿಗೆ ಹರಿಸೇವೆಯನ್ನಒದಗಿಸುತ ಮಾತ್ರಂತರ್ಯಾಮಿ ಹರಿಯನ್ನ ತಾನುಭಕ್ತಿಪೂರ್ವಕ ಮಾಡುತ್ತಿದ್ದರು ಸೇವಾ ಸುಧ್ಯಾನ ಪರರು 82ಹರಿಕ್ಷೇತ್ರ ಹರಿತೀರ್ಥಯಾತ್ರೆಯಗೈಯ್ಯಲುಸಿರಿವಿಜಯರಾಯರ ಅನುಗ್ರಹ ಕೊಂಡುಹೊರಟರು ಗೋಪಾಲದಾಸಾರ್ಯರುವರದಗುರುಗೋಪಾಲದಾಸರ ಸಮೇತ83ಉಡುಪಿಕ್ಷೇತ್ರಸ್ಥ ಹರಿಮೂರ್ತಿಸ್ಥ ತೀರ್ಥಸ್ಥಕಡಲಶಯನನ್ನ ನೋಡಿ ಸೇವಿಸಲಿಕ್ಕೆಒಡಹುಟ್ಟಿದವರ ಸಹ ನಡೆಯುತ್ತಿರುವಾಗಅಡ್ಡಗಟ್ಟಿದ ಕ್ರೂರನು ಭೀಮಾಭಿದನು 84ಶ್ರೀ ವಿಜಯದಾಸರಿಂ ಮೊದಲೇ ಅನುಗ್ರಹೀತಭಾವುಕಾಗ್ರಣೀ ಗೋಪಾಲಾರ್ಯರು ಹರಿಗುರುಗಳಿತ್ತದಿವ್ಯ ಸಾಮಥ್ರ್ಯದಿಂ ಸಸೈನ್ಯ ಭೀಮನ್ನತೀವ್ರ ನಿಶ್ಚೇಷ್ಟಗೈಸಿ ಶರಣರ ಮಾಡಿದರು 85ಉಡುಪಿಸುಕ್ಷೇತ್ರದಲ್ಲಿ ಗೋಪಾಲಾರ್ಯರುಮಾಡಿದ್ದು ವರ್ಣಿಸಲು ಬಲ್ಲೆನೇ ನಾನು ?ಆಟದಲಿ ಜಗಪಡೆವ ಕೃಷ್ಣ ತಾಸುತನಂತೆಆಟವಾಡಿದ ಬಾಲರೂಪದಿ ಕೃಪಾಳು 86ಪೂರ್ವ ದಕ್ಷಿಣ ವರುಣ ದಿಶೆಯಾತ್ರೆಮಾಡಿಶ್ರೀ ವೇಣೀಸೋಮಪುರಕೆ ಮರಳಿ ಬಂದುಕೋವಿದಕುಲರತ್ನ ವಾಸುದೇವವಿಟ್ಠಲ ರಾಮಶ್ರೀವೇಂಕಟರಾಮಾರ್ಯರನ್ನು ಕಂಡರು 87ಉತ್ತನೂರು ಪೋಗಿ ವೇಂಕಟಕೃಷ್ಣನ್ನವಂದಿಸಿ ಬಂಧುಗಳ ಕೂಡ ತಾ ಇದ್ದುಒಂದುದಿನ ನಿಶ್ಚೈಸಿದರು ಪಂಡರೀಪುರಕ್ಕೆ ಪೋಗಿಇಂದಿರಾಪತಿಯನ್ನ ನೋಡಿ ಸೇವಿಸಲು 88ಪತ್ರಪೂ ಪಲ್ಲವ ಫಲವೃಕ್ಷ ದೇಶವುಸುಪವಿತ್ರ ಶ್ರೀ ತುಳಸೀ ಉತ್ಕøಷ್ಟವನದಿಸುಪುಣ್ಯ ಶ್ಲೋಕ ಶ್ರೀದಾಸಾರ್ಯರನ್ನ ಸುತ್ತಿ ಅಟ್ಟಿಶ್ರೀಪತಿ ಕೇಳ್ದ ಅಲೇನಾಹಿ ಎಂದು 89ಶ್ರೀಹರಿ ಸ್ವೇಚ್ಛೆಯಿಂ ಪ್ರಕೃತಿ ಕ್ಷೋಭಿಸಿ ತ್ರಿಗುಣ ಬೆರೆಸಿಮಹದಹಂಕಾರಾದಿ ತತ್ವ ಸೃಷ್ಟಿಗೈದುಬ್ರಹ್ಮಾಂಡ ನಿರ್ಮಿಸಿ ತದಾಶ್ರಯನಾಗಿ ಇಪ್ಪವನು ತಾನೇಮಹಾದ್ಭುತ ಕುದುರೆ ಸವಾರನಾಗಿ ತೋರಿ ಮರೆಯಾದ 90ಆಲೋಚಿಸಿ ತಿಳಿದು ವಿಟ್ಠಲನೇ ಬಂದವನೆಂದುನೀಲಕುದುರೆ ಎಂಬ ಸ್ತೋತ್ರ ಮಾಡಿದರುಪೇಳ್ವರು ವ್ಯಾಪ್ತೋಪಾಸಕ ಜ್ಞಾನಿಗಳು ಇದರ ರ್ಥಮೊದಲನೇ ನುಡಿಯು ಮೇಲೆ ಹೇಳಿದಹರಿಮಹಿಮೆಯೆಂದು ಬಲ್ಲೆನೇ ನಾನು 91ಭೀಮರಥಿ ಸ್ನಾನವು ಪುರಂದರಾರ್ಯರ ನಮಿಸಿಭೂಯಾದಿ ಗುಣಗಣಾರ್ಣವ ವಿಟ್ಠಲನ್ನಪ್ರೇಮೋತ್ಸಾಹದಲಿ ಸನ್ನಮಿಸಿಸ್ತುತಿಸಿರಮ ರುಕ್ಮಿಣಿಯ ನಮಿಸಿದರು ದಾಸಾರ್ಯ 92ಕೋಲ್ಹಾಪುರ ಪೋಗಿ ಮಹಾಲಕ್ಷ್ಮಿ ಮಂದಿರದಿಶೀಲ ಪರಮಾದರದಿ ಲಕ್ಷ್ಮೀನಾರಾಯಣರನ್ನಕೀಲಾಲಜಾದಿ ಪುಷ್ಪಾರ್ಚನೆಗೈದು ಕಾಪಾಡೆಂದು ಕೀರ್ತನೆಗಳಿಂದ ಸ್ತುತಿಸಿದರು 93ಇನ್ನು ಬಹು ಬಹು ಕ್ಷೇತ್ರಯಾತ್ರೆ ಸೋದರರ ಕೂಡಿಅನವರತಸುವ್ರತ ಧ್ಯಾನಪರರಾಗಿಘನಮಹಿಮ ಗೋಪಾಲ ವಿಟ್ಠಲನ ಸ್ತುತಿಸುತ್ತವೇಣೀ ಸೋಮಪುರಕ್ಕೆ ಬಂದರು ತಿರುಗಿ 94ಗುರುಗಳು ವಿಜಯದಾಸಾರ್ಯರ ದ್ವಾರಾಯಾತ್ರಫಲ ಕೃಷ್ಣನಿಗೆ ಸಮರ್ಪಿಸಿಉದ್ದಾಮಪಂಡಿತವೇಂಕಟರಾಮಾರ್ಯರಲಿಇದ್ದು ಪೋದರು ಉತ್ತನೂರ ಸ್ವಕ್ಷೇತ್ರ 95ಉತ್ತನೂರು ವೇಂಕಟಕೃಷ್ಣನಾಲಯ ಮುಂದೆನಿಂತು ತುಳಸೀ ವನದಿಂದ ಸುಳ್ಳಿ ತೆಗೆವಾಗಬಂದರು ಭ್ಯಾಗವಟ್ಟಿ ಶ್ರೀನಿವಾಸಾಚಾರ್ಯವಂದಿಸಿ ನಿಂತರು ಕೈಮುಗಿದು ವಿನಯದಿ 96ಜ್ಞಾನದಲಿ ಋಜುಮಾರ್ಗ ಗರ್ವದಲ್ಲಿನಿತ್ಯಸಂಸಾರಿಮಾರ್ಗಜ್ಞಾನ ಬೋಧಿಸುವುದರಲ್ಲಿ ಪಂಡಿತರಮಾರ್ಗಮಾನುಷಾನ್ನವನುಂಡು ಮಂದಧೀಯಲ್ಲಿ ಗುರುನಿಂದಾಈ ಶ್ರೀನಿವಾಸಾಭಿದನು ಮಾಡಿ ನರಳುತಿದ್ದ 97ಭಾಗಣ್ಣ ಆರ್ಯರು ಶ್ರೀನಿವಾಸಾಚಾರ್ಯಗೆಅಘನಾಶವಿಜ್ಞಾನಲಭಿಸುವ ಸಾಧನವುನಿಗಮಾರ್ಥ ಬೋಧಕ ಉಪದೇಶ ಮಾಡಿ ಪಂಡರಿಪುರ ಪೋಗಿರಿಜಗನ್ನಾಥ ವಿಟ್ಠಲ ಒಲಿದು ಕಾಂಬ ಎಂದರು 98ಶ್ರೀನಿವಾಸಾಚಾರ್ಯರು ದಾಸಾರ್ಯಾರ್ ಹೇಳಿದಂತೆಸುನಿರ್ಮಲ ಭೀಮ ರಥಿಯಲ್ಲಿ ಸ್ನಾನಗೈದುಇನನಲಿ ಅನಿಲಾಂತರ್ಗತ ನಾರಾಯಣನ್ನಧ್ಯಾನಿಸಿ ಭಕ್ತಿಜ್ಞಾನದಿಂದ ಕೊಟ್ಟರು ಅಘ್ರ್ಯ 99ಐದೆರಡು ಸಾಧು ಭಕ್ತಿ ಪ್ರತಿಪಾದ್ಯ ಶ್ರೀ ನಾರಾಯಣನುವಾಗ್ದೇವಿವರವಾಯುಗಳಿಂದ ಋಕ್‍ಸಾಮದಿಂಸ್ತುತಇಪತ್ತೆರಡಕ್ಷರದಲ್ಲಿ ಎರಡನೇ ಮೂರಕ್ಷರ ಬೋಧಿತಆದಿತ್ಯಸ್ಥ ವಾಯುಸ್ಥನ್ನ ಸ್ಮರಿಸಿಕೊಟ್ಟರು ಅಘ್ರ್ಯ 100ಜಗನ್ನಾಥದಾಸರ್ಗೆ ಗೋಪಾಲದಾಸಾರ್ಯಗುರುಜಗತ್ತಲ್ಲಿ ಕಂಡಿಲ್ಲದ ಉದಾರದಲಿತೆಗೆದು ತನ್ನಾಯುಷ್ಯದಿಂ ಚತ್ವಾರಿವರ್ಷಕೊಟ್ಟರುಗುರುಗ ಶ್ರೀವಿಜಯಗೋಪಾಲ ಶ್ರೀನಿವಾಸನ ಪ್ರೀತಿಗೆ101ಭಕ್ತಿಯಲ್ಲಿ ಭಾಗಣ್ಣನೆಂದು ಸುಪ್ರಖ್ಯಾತಭಕ್ತ ಶಿರೋಮಣಿಯು ಗೋಪಾಲ ದಾಸಾರ್ಯಬೀದಿಯಲಿ ಜರುಗದ ರಥಕೂಢನ್ನ ಬಾರೈಯ್ಯಎಂದು ಸ್ತುತಿಸೆ ರಥ ಓಡೋಡಿ ಬಂತು 102ತಿರುಪತಿ ಶ್ರೀ ಶ್ರೀನಿವಾಸನ ರಥವುಸರಸರ ಬಂದದ್ದು ಜನರು ನೋಡಿಹರಿಭಕ್ತಾಗ್ರೇಸ ಗೋಪಾಲ ದಾಸರನ್ನಪರಿಪರಿ ವಿಧದಿ ಕೊಂಡಾಡಿದರು ಮುದದಿ 103ಕಂಚೀ ವರದರಾಜನ ದೇವಾಲಯದಲ್ಲಿಕಿಚ್ಚು ಸೋಕಿ ಚೀಲ ಉರಿಯಲು ಅದನ್ನದಾಸವರ್ಯ ದೂರದೇಶದಲಿದ್ದರೂ | ತನ್ನ ಚೀಲ |ಕಸಕಿ ಶಾಂತ ಮಾಡಿದರು ಕಂಚಿಯ ಉರಿಯ 104ದಾರಿದ್ರ್ಯ ಋಣರೋಗ ಅಪಮೃತ್ಯು ಅಪಿಚಾರಪರಿಪರಿ ಕಷ್ಟೋಪಟಳ ವಿಘ್ನಗಳಗುರುವಿಜಯರಾಯಾಂತರ್ಗತ ಗೋಪಾಲನ ಒಲುಮೆಯಿಂದಎರಗುವರ್ಗೆ ಕಳೆದಿಹರು ಅದ್ಯಾಪಿ ಒದಗುತಿಹರು 105ಗೋಪಾಲದಾಸರಿಗೆವಿಜಯದಾಸರಲ್ಲಿಇಪ್ಪ ಭಕ್ತಿಯ ವರ್ಣಿಸಲಶಕ್ಯಗೋಪಾಲ ದಾಸರನ್ನು ನಂಬಿದವರನ್ನ ವಿಜಯಾರ್ಯ ಕೈ ಬಿಡರುಗೋಪಾಲವಿಜಯವಿಟ್ಠಲ ಬಂದು ತಾನೇ ಒಲಿವ106ಗೋಪಾಲ ದಾಸಾರ್ಯರೇ ನೀವು ವಿಜಯಾರ್ಯರಲ್ಲಿತಪ್ಪದೇ ಮಾಡಿದ ಭಕ್ತಿಯಿಂದದಿ ಎನಗೆಸ್ವಲ್ಪವಾದರೂ ನಿಮ್ಮಲ್ಲಿ ಪುಟ್ಟುವಂತೆ ಮಾಡಿರಿಗೋಪಾಲ ಪ್ರಿಯತಮರೇ ಪಾಹಿಮಾಂ ಶರಣು 107ಹೆಳವನಕಟ್ಟೆ ಗಿರಿಯಮ್ಮ ಮೊದಲಾದಶೀಲ ಶಿಷ್ಯರು ಬಹುಮಂದಿಗಳುಬಲು ಭಕ್ತಿಶ್ರದ್ಧೆಯಿಂ ಉಪದೇಶಗೊಂಡುಜಲಜನಾಭನ ಒಲುಮೆ ಪಾತ್ರರಾಗಿಹರು 108ಜ್ಞಾನ ಭಕ್ತಿ ವೈರಾಗ್ಯವಂತಳು ಗಿರಿಯಮ್ಮಕ, ೃಷ್ಣ ಮಂತ್ರ ಉಪದೇಶ ದಾಸಾರ್ಯರಿಂದಕೊಂಡು ಶ್ರೀ ರಂಗವಿಟ್ಠಲ ಕೃಷ್ಣನ್ನ ಪ್ರತ್ಯಕ್ಷಕಾಣುವಂಥ ಸೌಭಾಗ್ಯ ಶಾಲಿಯಾಗಿಹಳು 109ಅದ್ವಿಜನು ಶೈವನು ಪತ್ನಿ ಸಹಸೇವಿಸಿಮಂತ್ರಾಲಯ ಗುರುಗಳಿಂ ಅನುಕೂಲ ಹೊಂದಿಕೃತಜÕಭಾವದಿ ಲಕ್ಷ ಬ್ರಾಹ್ಮಣ ಭೋಜನ ಮಾಡಿಸುವೆನುಎಂದು ಹರಕೆ ಮಾಡಿಸಲಿಕ್ಕಾಗಲಿಲ್ಲ 110ಸ್ವಪ್ನದಲಿ ಹೇಳಿದರು ಕರುಣಿ ಶ್ರೀ ರಾಘವೇಂದ್ರಗುರುತಪ್ಪದೇ ಹರಕೆ ಸಲ್ಲುವುದು ಮೂವರು ಬ್ರಾಹ್ಮಣರುಸುಪುಣ್ಯವಂತರು ಮಹಾತ್ಮರು ಮರುದಿನ ಬೆಳಿಗ್ಗೆಈ ಪಥದಿ ಬರುವರ್ಗೆ ಭೋಜನ ಮಾಡಿಸೆಂದು 111ವರದಗುರುಗೋಪಾಲದಾಸರು ದಾಸಾರ್ಯರುಅರಿತುಅಪರೋಕ್ಷಸಾಮಥ್ರ್ಯದಿ ಈ ಸ್ವಪ್ನನೇರಾಗಿ ಬರಲಾಗ ಆಶೈವಗುರುಭಕ್ತನುನಾರೀ ಸಹನಮಸ್ಕರಿಸಿ ಸ್ವಾಗತವನಿತ್ತ 112ಮೂವರಿಗೂ ಅಧಿಕವಾದ ಪದಾರ್ಥಗಳನರ್ಪಿಸಿದೇವರ ನೈವೇದ್ಯ ಮೂವರಿಗೂ ಭೋಜನದೇವಗುರುಬ್ರಾಹ್ಮಣ ಪ್ರೀತಿಯಾಗಲಿ ಎಂದು ನಮಿಸಿದರುಶೈವ ಕುಲೀನ ದಂಪತಿ ಭಕ್ತಿ ಪೂರ್ವಕದಿ 113ಅಂದು ರಾತ್ರಿ ಆ ಭಕ್ತ ದಂಪತಿಗೆ ಸ್ವಪ್ನದಲಿಪ್ರೀತಿ ಆಯಿತು ಕೃಷ್ಣನಿಗೆ ಹರಕೆ ಪೂರ್ಣ ಆಯ್ತುಎಂದು ರಾಘವೇಂದ್ರ ತೀರ್ಥ ಸ್ವಾಮಿಗಳು ಹೇಳಿಮುದದಿ ದಂಪತಿಯ ಕೃತ ಕೃತ್ಯ ಮಾಡಿದರು 114ಮೊದಲು ಆದರ ರಹಿತ ವೆಂಕಟನೃಸಿಂಹಾರ್ಯನಿಂದುಗೋಪಾಲ ದಾಸಾರ್ಯರಹರಿಪೂಜಾಪದ್ಧತಿಯ ನೋಡುತಿರೆ ಹನುಮಂತ ದೇವರುಮೂರ್ತಿಮತ್ ಕುಳಿತಿದ್ದುದು ಕಂಡರು 115ಬಂದು ವೆಂಕಟ ನೃಸಿಂಹಾಚಾರ್ಯರು ಮತ್ತುನಿಂದಿಸಿದ ವೈದಿಕರು ತತ್ವ ಕೀರ್ತನೆಗಳಅದ್ಭುತ ಸುಳಾದಿಕೇಳಿನಿರ್ಮತ್ಸರರಾಗಿಬಂದು ಶಿಷ್ಯತ್ವ ಬೇಡಿದರು ಆರ್ಯರಲಿ 116ವೈರಾಗ್ಯನಿಧಿ ಗಂಗಾಧರನ ಅನುಗ್ರಹದಿವೈರಾಗ್ಯ ಯುಕ್‍ಜ್ಞಾನಹರಿಭಕ್ತಿ ಲಭಿಸಿದ್ದಸೂರಿವರ ಗೋಪಾಲ ದಾಸಾರ್ಯ ಜರಿಗೆ ಶಾಲು ರೇಷ್ಮೆಭಾರಿ ಪಲ್ಲಕ್ಕಿ ವೈಭವದಿ ಮೆರೆದರುಹರಿಪ್ರೀತಿಗಾಗಿ117ಪನ್ನಗಾಚಲಶ್ರೀ ಶ್ರೀನಿವಾಸನ ಭಕ್ತಅನಿಮಿಷಾಂಶರು ಗೋಪಾಲ ದಾಸಾರ್ಯಶ್ರೀನಿವಾಸನಪ್ಪಣೆಕೊಂಡು ಊರಿಗೆ ಬಂದುಅವನೀಸುರರಿಗೆ ಔತಣವಿತ್ತು ಧ್ಯಾನದಿ ಕುಳಿತರು 118ಮುಖ್ಯಕಾರಣ ವಿಷ್ಣು ಸ್ವತಂತ್ರ ಎಂದುತಾ ಭಜಿಸಿಶಿಷ್ಯರಿಗೆ ಬೋಧಿಸಿ ಸಜ್ಜನರ ಪೊರೆದುಪುಷ್ಯ ಬಹುಲಾಷ್ಟಮೀಯಲ್ಲಿ ಪೂಷಯದುಪತಿಧಾಮಕೃಷ್ಣ ಭಕ್ತಿರಿಗೌತಣವಿತ್ತು ಐದಿದರು 119ಗದ್ವಾಲ ರಾಜ ಮೊದಲಾದ ರಾಜ ಪ್ರಮುಖರಿಂದಮೇದಿನೀ ಪ್ರಖ್ಯಾತ ಯತಿಗಳು ಪಂಡಿತರಿಂಎದುರಿಲ್ಲದಸೂರಿಐಜೀಯವರಿಂದಲುಸದಾ ಮರ್ಯಾದೆ ಕೊಂಡವರು ದಾಸಾರ್ಯ 120ವಿಜಯದಾಸಾರ್ಯ ಪೂಜಿಸಿದಹರಿಮೂರ್ತಿವಿಜಯವಿಟ್ಠಲ ಪ್ರತಿಮೆ ಅಂತರ್ಗತನ್ನವಿಜಯಸಾರಥಿಪ್ರಿಯ ಗೋಪಾಲ ದಾಸರು ಪೂಜಿಸಿರಾಜಿಸುತಿಹ ಮೂರ್ತಿಇಹುದುಅವರಮನೆಯಲ್ಲಿ121ಜ್ಞಾನ ಸುಖ ಬಲ ಪೂರ್ಣ ಜನ್ಮಾದಿಕರ್ತಅಜವನರುಹಜ ಪಿತ ಶ್ರೀಶಪ್ರಸನ್ನ ಶ್ರೀನಿವಾಸಅನಘಹಯಮುಖವಿಜಯಗೋಪಾಲ ಸರ್ವಗಗೆಘನ್ನ ಪ್ರಿಯ ಗೋಪಾಲ ದಾಸಾರ್ಯ ಶರಣು 122|| ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವರದೇಂದ್ರವಿಜಯ121ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |ಸರಸೀರುಹದಲ್ಲಿ ಸತತ ನಾ ಶರಣಾದೆನು |ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1ರಜತ ಜಾಂಬೂನವ ತಾಮ್ರವÀನು ಮರಗದವ |ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2ರಾಘವ ಯಾದವ ವೇಂಕಟಧಾಮ ಹನುಮ ಭೀಮ |ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |ಅಘದೂರ ಗುಣನಿಧಿ ಸಮೀರಗ ಮಹಿದಾಸ - |ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿಸುರವೃಂದದವರು ಮರುದ್ಗಣದವರು ತೋರಿ |ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |ಬಂದು ನೆರೆದ ಜನರಲಿಗಮನಬೀರಿದರು8ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀತುಳಸಿ162ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರಭಾಗ್ಯವೆಂತೊ ಪ .ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ 1ಈ ಮನುಜ ದೇಹದಲಿದಾವಪ್ರಾಣಿಯು ಪಿತೃಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣತಾಮರಸಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವಸೋಂಕಿಬಂದಾ ಮರುತದಿಂದ ದೇಶ ಗ್ರಾಮಗಳು ಪಾವನವುಧೀಮಂತ ಮಾನ್ಯಳಾದ 2ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃಗಳಿಗನ್ನವಿತ್ತರಕ್ಷಯಫಲವು ಊಧ್ರ್ವಪುಂಡ್ರತಳದ ಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದಫಲ ಸಿದ್ಧವುನಿಲಯದಲಿ ಪತ್ರಮೃತ್ತಿಕೆಕಾಷ್ಠವಿರಲಲ್ಲಿಕಲಿಮುಟ್ಟಲಂಜಿ ತೊಲಗುವನು ಮಣಿಸರಗಳನುಗಳದೊಳಾಂತರಾಕಲುಷಸಂಹರವು ಸಹ ಸಲೆವಿಷ್ಣುಪದವಿಯನೀವ 3ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿಪಿತ ಕಾಯದನಿಗೆ ಬಹುಜನ ನೋಡೆ ವಿಘ್ನಗಳಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವುಪ್ರತಿದಿನದಿ ನಾಭಿಕಕರ್ಣದಲಿ ಶಿರದಲ್ಲಿ ಶ್ರೀಪತಿಯ ನಿರ್ಮಾಲ್ಯದಳ ಧರಿಸಿ ಹರಿಪಾದ ತೀರಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವು ಪತಿತಪಾವನಿಎನಿಸುವಾ 4ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನೆಯುನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನುಮಾಡಲುಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾಸಿರಕಾಲತಿರುಗಿ ಬಂದರೆ ಸತತ ಮಾಂಗಲ್ಯಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿವರದಂತೆ ಪದವ 5ಒಂದೊಂದುದಳಕೋಟಿ ಸ್ವರ್ಣಭಾರಕೆ ಮಿಗಿಲುಎಂದು ವಿಶ್ವಾಸದಲಿ ತಂದು ಸಾಸಿರನಾಮದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದಂದುಗವು ಮಾನಿಸರ್ಗೆಸುಂದರ ತುಲಸಿ ಮೂಲವನ್ನು ತೊಡಕಿರ್ದಕಳೆಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾನಂದವಿತ್ತರಾ ನೂರೊಂದು ಕುಲ ನರಕವನು ಹೊಂದಲೀಸರುಪುಣ್ಯದಾ 6ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳುಬಾವನ್ನಗಂಧಿಯಳ ಮಧ್ಯದಲಿ ಸುರನಿಕರಪಾವನಿಯಳಾ ಹರಿಯ ಕೊನೆಯಲಿಶ್ರುತಿಸಮೂಹಲಾವಣ್ಯ ಗುಣರಾಸಿಯುಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿತ್ತಾವ ಕಾಲಕ್ಕೆಹೊರೆವಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ7
--------------
ಪ್ರಸನ್ನವೆಂಕಟದಾಸರು
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
--------------
ಪ್ರಾಣೇಶದಾಸರು
ಸತ್ಯಭಾಮಾವಿಲಾಸಶ್ಲೋಕಶ್ರೀ ಬ್ರಹ್ಮೇಶ ಸುರೇಂದ್ರ ಪೋಷಕಹರಿದ್ವಾರಾವತೀಲ್ಬಾಳ್ದನುಶ್ರೀ ಭೈಷ್ಮೀವರ ಸತ್ಯಭಾಮೆಯ ಬಹು ಸಾಸ್ರಾಂಗನೇರಾಳ್ದನುಈ ಭೂಭಾರಹರಾವತಾರ ಯದುಪಂ ನರ್ಲೀಲೆಯಂ ತಾಳ್ದನುಸೌಭಾಗ್ಯಾಂಬುಧಿ ಕೃಷ್ಣನಯ್ಯ ಜನಕಾನಂದಾಬ್ಧಿಲಿಟ್ಟಾಳ್ದನು 1ಸೌಪರ್ಣಾಂಸದಲಿಟ್ಟು ದೇವ ತರುವ ಸತ್ಯ ಸಹಾ ಒಪ್ಪುವಆಪನ್ನಾನ್ವಯ ಕಾಮಧೇನೆನಿಸುವ ಅಧ್ಯಾತ್ಮ ಶ್ರೀಮಾಧವಈ ಪದ್ಯಂಗಳ ಪೇಳಿಸಿದನು ದಯಾಬ್ಧಿ ಪಾರಿಜಾತಾಖ್ಯವಗೋಪಾಲೇಶನ ಪಾದಪದ್ಮ ನೆನೆವೆ ಆನಂದವಂ ಬೇಡುವೆ 2ಪದಶ್ರೀಕೃಷ್ಣ ದ್ವಾರಕಾನಗರದಿ ಪ್ರೇಮದಾನೀಕದಿ ರಾಜಿಸಲಾಗನಾಕದಲರು ಒಂದು ನಾರದ ತಂದಿರೆಶ್ರೀಕಾಂತನಿತ್ತ ರುಕ್ಮಿಣಿಗೆ 3ಒಂದು ಹೂವಿನ ಪರಿಮಳವುನಗರತುಂಬಿಇಂದುವದನೆಸತ್ಯಭಾಮೆಇಂದುಗೋವಿಂದ ರುಕ್ಮಿಣಿಗೆ ಕುಸುಮವಿತ್ತನೆಂದು ಕೇಳ್ದಳು ಸುಸ್ವಭಾವೆ 4ಶ್ಲೋಕಅರ್ಧಾಂಗಿಯಲಿ ಸ್ನೇಹವೆಗ್ಗಳಕಣಾ ಮುದ್ದಿಸಿ ಹೂವಿತ್ತನುಇದ್ದೇನಿನ್ನು ವೃಥಾ ಭುವಿಯಲಿ ಸಖಿ ನಿರ್ದೇಹವಂ ಸಾರ್ವೆನುಕದ್ದು ಬೆಣ್ಣೆಯ ಮೆದ್ದು ಪುಂಶ್ಚಲಿಯರೊಳಿದ್ದಾತನ ಬುದ್ಧಿಯತಿದ್ದಿ ನೋಡಿದೆ ಸೋತೆ ಎನ್ನ ನಳಿತೋಳ್ಹೊದಿಸಿ ನಾ ಶೌರಿಯ 5ಸಾಕಿನ್ನಾತನ ಚಿತ್ತಪಲ್ಲಟಸಟೆಆ ಕಾಮಿನಿಪ್ರಿಯನನೂಕದಿನ್ನಿರೆ ಎನ್ನ ಮಂಚಕೆ ಬರಲ್ಪೋಕ ಸ್ಮರನಯ್ಯನಯಾಕಿನ್ನಾಭರಣಾಂಬರೋತ್ತರಿ ಸಖೀ ಏಕಾಗ್ರನೇಕಾಂಗನನೀಕಂಡ್ಹೇಳವಮಾನ ತಾಳಳು ಸಖಿ ಜೋಕಿನ್ನು ನಿನ್ಬಹುಮಾನ6ಪದಕ್ರೋಧ ಕಳವಳಿಕೆ ಮುನಿಸಿನಿಂದಲಿ ಸತ್ಯವಾದಿ ಸತ್ರಾಜಿತ ಕನ್ಯೆಮೇದಿನಿಮೇಲೆ ಮಲಗಿದಳು ಧೊಪ್ಪನೆ ಮಂಚಕೈದದೆ ನಿತ್ಯಸುಖಿ ಧನ್ಯೆ 7ಬಿಸಿ ಬಿಸಿ ನಿಟ್ಟುಸಿರ್ಗರೆದು ಕೋಮಲ ಮುಖಶಶಿಯ ಕಸ್ತೂರಿ ಅಂಗಯ್ಯಲೊರೆಸಿಬಿಸಜಾಕ್ಷಿ ಕಂಬನಿದುಂಬೆ ಒರತೆಯಿಟ್ಟುಎಸೆವಕಜ್ಜಲಜಲ ಸೂಸಿ 8ಶ್ಲೋಕವಕ್ಷೋಜಾತದ ಹೊನ್ನ ಕುಪ್ಪಸವನು ಅಕ್ಷೋದದಿಂ ತೋಯಿಸಲ್ಸಾಕ್ಷಾನ್ಮಂಗಳ ಮುತ್ತಿನ್ಹಾರ ಕಡಿದಳ್ ಲಕ್ಷಾಭರಣ್ಬಿಟ್ಟಳುತಾ ಕ್ಷೋಣಿಯನು ಹೊಂದಿ ಬಿದ್ದು ಬೆಮರ್ದಳ್ಅಕ್ಷಯಸೌಗಂಧಿಯಳ್ಪಕ್ಷಿವಾಹನ ಮಾಡಿದ ಉಪಕಾರ ಲಕ್ಷಿಸಿ ಹಾಯೆಂದಳು 9ಹಾ ಹಾ ಕೈತವ ಮೀನ ಜೃಂಭಕಮಠಹಾ ಹೈಮದೃಘ್ಘಾತಕಹಾ ಹಾ ನಿಷ್ಕರುಣಾಂಗ ಶಿಕ್ಷಕ ಹರೆ ಹಾ ಹಾ ಬಲಿರ್ವಂಚಕಹಾ ಮಾತೃ ಮೃಗಾರ್ದ ಜಾರವ್ರತ ಹಾ ಹಾ ಹಾ ಕಲಿರ್ಮಾರಕಹಾ ಹಾ ಮದ್ಗøಹ ದೂರಕ ಪರಸಖ ಆಶಾಬ್ಧಿ ಸಂಶೋಷಕ10ಪದತಾಳಿನ್ನು ತಾಳೆಂದು ತವಕದಿ ಸವತಿಯಮೇಲೆ ಕೋಪಿಸಿ ಸತ್ಯಭಾಮೆಜಾಲಕ ಮಾಲೆಯ ಹರಿದು ಚಿಮ್ಮಿದಳತ್ತಮೇಲೆಣ್ಣೆಗಂಟ ಹರಹಿದಳು 11ಮೂರ್ಛೆಯೊಳ್ಮೈಮರೆದಂತೆ ತೇಲ್ಗಣ್ಣ ಹಾಕಿದುಶ್ಚಿಹ್ನ ಲೀಲೆಯ ತೋರೆನಿಶ್ಚಲ ಭಾವೆಯನರಿತೆತ್ತಿ ಒಯ್ದರುಒಚ್ಚೇರೆಗಂಗಳೆಯರು ಬೆದರಿ12ಶ್ಲೋಕಧೈರ್ಯಂಗೆಟ್ಟ ಮೃಗೇಂದ್ರ ನಾರಿಯಿವಳೊ ನ್ಯೆರಾಶ್ಯ ಬಳ್ಳ್ಯಿಹಳೊವೈಮಾನಿಕರ ದೇವತ್ಯಾಕೆ ಮುನಿದಳಯ್ಯಯ್ಯೊ ಸೌಜನ್ಯಳೊಮಯೂರಭ್ರಮುಡೇಳ್ ಮಹಾಪತಿವ್ರತೇಳ್ಮತ್ತೇಭ ಗಾಮಿನಿಯಳ್ಕೈವಲ್ಯಜÕರು ಬಲ್ಲರೀಕೆಯ ಬಗೆ ಕಾಯಯ್ಯ ಕೃಷ್ಣಯ್ಯನೆ 13ಎತ್ತೊಯ್ದು ಮೃದುತಲ್ಪಮಂಚಕವಳ ಮತ್ತಾಲವಟ್ಬೀಸಲುಫೂತ್ಕಾರಂ ಕಿವಿಯೊಳ್ಪೂರೈಸಿ ನುಡಿಸಲ್ಸತ್ಯಂಗನೆ ಸುಮ್ಮನೆಪ್ರತ್ಯುತ್ತರಗೊಡದಿರಲು ಬೆದರಿವರ್ಚಿತ್ತಜನೈಗ್ಹೇಳಿದರುಮುಕ್ತಕೇಶಿಯ ವಾರ್ತೆ ಕೇಳಿದು ಬಹು ಚಿತ್ರವಿಚಿತ್ರೆಂದನು 14ಪದದೂತೇರ ನುಡಿಗ್ಯದುನಾಥನು ಮನ್ನಿಸಿಆತುರದಲಿ ನಡೆತಂದುಪ್ರೀತಿಗಗ್ಗಳೆ ಸತ್ರಾಜಿತ ಸಂಜಾತಳೆನೀತವೆ ನೀ ಮುನಿದಿಹುದು 15ಎಂದು ಮಂಚದಲಿ ಕುಳಿತು ಪ್ರಾಣನಾಥೆ ಬಾಇಂದುವದನೆಮಾತನಾಡೆಕಂದ ಕಂದರ್ಪನಾಣೆ ಕಪಟವಿಲ್ಲೆನ್ನಲ್ಲಿಕಣ್ಣೆರೆದಿತ್ತಲೊಮ್ಮೆ ನೋಡೆ 16ಶ್ಲೋಕಕಸ್ತೂರಿ ತಿಲಕಿಲ್ಲ ನಿನ್ನ ಪಣೆಯೊಳ್ಮುತ್ತಿನ ಬೊಟ್ಟಿಲ್ಲವೆಮತ್ತೇನ್ಭೂಷಣವೇಣಿ ನಿನ್ನ ನೊಸಲೊಳ್ಮುತ್ತಿನಮಣಿಇಲ್ಲವೆರತ್ನಾಂಕಾಭರಣಿಲ್ಲ ನಿನ್ನ ಶ್ರುತಿಯೊಳ್ಮತ್ವಜ್ರದೋಲಿಲ್ಲವೆಹತ್ತೆಗಟ್ಟಿದ ನಿಷ್ಕಕಂಠ ಪದಕಿಲ್ಲ ಒತ್ತಾದ ಹಾರಿಲ್ಲವೆ 17ವ್ಯತ್ಯಸ್ತ ಸ್ತನಪಟ್ಟಿಕೆ ರುಚಿರ ಶ್ರೀ ಗಂಧಾನುಲೇಪಿಲ್ಲವೆಸ್ವಸ್ತಂಬ್ರ ಸ್ಮರಣಿಲ್ಲವೆ ಮಮಸಖಿ ಸ್ವಸ್ಥಾಗುಸುರ್ಭಾವೆ ನಂಬು ಸ್ತ್ರೈಣರ್ಬಗೆ ತೋರಿದೆ ಸ್ವಸುಖದಿ ತಾ ಸ್ತ್ರೈಣನಲ್ನಿಶ್ಚಯಹೇ ಸ್ತ್ರೀರತ್ನಶಿಖಾಮಣಿರಮಣಿ ಕೇಳ್ದುಶ್ಚಿತ್ತ ಮಾಣೆಂದನು 18ಪದಈಪರಿಭಾವೆಯ ಚರಣದೆಡೆ ಕುಳಿತುಶ್ರೀಪತಿ ಪ್ರಾರ್ಥನೆ ಮಾಡೆತಾ ಪತಿಯೊಡನೊಂದು ಮಾತನಾಡಳುಸತಿತಾಪದ್ವಿಗುಣಿಸಿತು ಕೇಳಿ 19ಮಾನಭಂಗವ ಮಾಡಿದ ಮೇಲೆಂತು ಬಹುಮಾನವನೊಲ್ಲದಿಹ ಸತಿಯತಾನೆತ್ತಿ ತೊಡೆ ಮೇಲೆ ಮಲಗಿಸಿಕೊಂಡು ದುಮ್ಮಾನವ ಬಿಡಿಸುವ ಹರಿಯು 20ಶ್ಲೋಕಮಾನವಮನ್ನಿಸಿದಾಕೆಯ ಸ್ಥಿತಿಯನು ಶ್ರೀನಾಥ ಕಂಡೆಂದನುಏನೆಮಾನಿನಿನಿನ್ನ ಕೋಪ ಬಿಡದೆ ನಾ ನೋಡಿದೆ ಕಲ್ಲೆದೆಮನುಷ್ಯರೊಳುದಾವಸ್ತ್ರೀಗೆ ಸಲಿಗೆ ತಾನಿತ್ತವಂಗೀ ಬಗೆತಾನೆ ತೋರಿದೆವಿಶ್ವಶಿಕ್ಷಿಕ ಗಡಾ ಏನಾಶ್ಚರ್ಯ ಗಡಾ 21ಎಚ್ಚೆತ್ತೆನ್ನೊಳು ಮಾತನಾಡೆ ಪ್ರವುಢೆ ಹುಚ್ಚಾಗದಿರೆಂದನುಸಚ್ಚಿನ್ಮೂರ್ತಿಯ ಮಾತಕೇಳಿ ಕುಳಿತಳ್ವಚ್ಚೆರೆಗಣ್ಮುರಿಯಲುಉಚ್ಚಾರಂ ಗದಗದ್ಗಿಸಿ ಸ್ಛುರಿತಾಧರೆಗಚ್ಚಗ ತಾನೆಂದನುಉಚ್ಚಾರದೊಳಗೊಂದು ನಿನ್ನ ಮನದ ಮಚ್ಚಾಟ ಬೇರೆಂದಳು 22ಪದನಾರಿ ಪತಿಯ ಬಿಟ್ಟು ದೂರದಿ ಕುಳಿತಳುವಾರೆ ನೋಟದ ಬೆಡಗಿನಲಿಜಾರಿದ ಸೆರಗೆದೆಗೇರಿಸಿ ಹೊದ್ದು ಮುರಾರಿಗೆ ವಾರೆ ಮುಖದಿರುಹಿ 23ಕಪಟನಾಟಕ ನಿನ್ನ ಮಾಯವಗಾಧವುಕಪಟಗಿತ್ತಿಗೆದಿವ್ಯಕುಸುಮಅಪಮಾನ ಸತ್ಯಳಿಗೆಮಾನಬಂಗಾರಿಗೆಚಪಲತೆ ತಿಳಿಯದು ನಿನ್ನ 24ಶ್ಲೋಕಕೇಳ್ನಾರೀಮಣಿ ನಾರದ ಕುಸುಮದ ಅರಳೊಂದು ಪಾದಾಬ್ಜಕೆನಲ್ವಿಂದರ್ಪಿಸಲಾಗ ಯೋಚಿಸಿದೆ ನಾ ಚೆಲ್ವ ಅಮರ್ಭೂರುಹಬಲ್ವಿಂದೀ ನಗರಕ್ಕೆ ನಿನ್ನ ಮನೆಯಂಗಳದೊಳು ಸ್ಥಾಪಿಸುವಉಲ್ಲಾಸಂ ಪಿಡಿದಿರ್ದೆ ನಾಕುಸುಮಜೇಷ್ಠಳ್ಗೀಯೆ ನೀ ಮುನಿವರೆ25ಹೂವೊಂದಾಕೆಗೆ ಕೊಟ್ಟೆ ಸಾಕು ತರುವ ನಿವಾರಿಸಿ ವಜ್ರಿಯಗರ್ವಿಂ ನಿನ್ನಿದಿರಲ್ಲಿ ಕೊಂಡು ಬಹೆ ನಾ ಭವ್ಯಾಂಗಿ ಕೇಳ್ಭಾಮಿನಿದಿವ್ಯಾಮೋದಮಯ ದ್ರುವiಂ ಸುರರಿಗಂ ಸೇವ್ಯಾದುದ ನಿನ್ನಯಭವ್ಯಂಗಳದೊಳಗಿಟ್ಟು ಮೆಚ್ಚಿಸುವೆ ನಾ ನವ್ಯಾದ್ಭುತಂನೋಡುನೀ26ಬಿನ್ನಣೆ ಮಾತಲ್ಲ ನಿನ್ನಾಣೆಭಾವಕಿಇನ್ನು ದುಮ್ಮಾನವೇಕೆನ್ನುತಾಚೆನ್ನಿಗರರಸನು ರಮಣಿಯ ನಳಿತೋಳಚೆನ್ನಾಗಿ ಸೆಳೆದಪ್ಪಿಕೊಳುತ 27ಎನ್ನ ಶಪಥÀವಿದು ನಿನ್ನೆತ್ತಿ ಖಗವೇರಿಕನ್ನೆ ಶಚಿಯ ಮನೋಹರನಮನೆಗೆ ಹೋಗಿ ವಿಜಯರವದಿ ತಂದುರನ್ನದತರುನಿನಗೀವೆ ನಾ 28ಶ್ಲೋಕಹೀಗೆಂದಾಕೆಯಮೆಚ್ಚಿಸಿದನುಆ ವಿಯೋಗಿಯಸಂಯೋಗಿಯಭೋಗಭಾಗಾಶೆಯ ನಿಯತಿ ಸುಖಿಯಾ ತ್ರೈಗೇಹ ಸಂಸ್ಥಾನಿಯಾಯೋಗೇಶೇಶ್ವರ ತನ್ನ ಪಾಶ್ರ್ವದಿ ದಿವಿಪ ನಾಗೇಶೈರ್ವಂದಿಯಾಶ್ರೀಗೋವಿಂದ ಮನುಷ್ಯರ ತೆರದಲಿ ಹೀಂಗಾಡಿದ ಲೀಲೆಯ 29ಬಾ ಸತ್ರಾಜಿತ ಗರ್ಭಸಿಂಧು ಸುಮಣಿ ಬಾ ಸೋಮಬಿಂಬಾನನೆಬಾ ಸೌಂದರ್ಯದವಾರಿಧಿಪರಮೆ ಬಾ ಬಾ ಸತ್ಯಭಾಮೆ ರಮೆಬಾ ಸಂಧ್ಯಾರುಣದಂಬಕಿ ಸುಕಬರೆ ಬಾ ಸ್ವಚ್ಛ ಬಿಂಬಾಧರೆಬಾ ಸದ್ರತ್ನದ ಭೂಷಣೆ ಪ್ರಸನ್ನವಾಗೆ ಸರ್ವತೋಷಾಂಗನೆ 30ಪದನಿನಗಾಗಿ ವೇದ ಕದ್ದವನ ಕೊಂದೆನಿನಗಾಗಿ ನನ್ನುದಧಿಯಲ್ಲಿ ನಿನ್ನ ತಂದೆನಿನ್ನ ಕದ್ದವನ ಕೊಂದೆ ನೀ ಬರಲೆತ್ತಿದೆನಿನ್ನ ಭಾಗ್ಯದ ಸಖಿ ಹಿಡಿದೆ 31ನಿನ್ನ ಭಾರವ ತೆಗೆದೆ ನಿನಗಾಗ್ಯಟವಿಯಲ್ಲಿದ್ದೆನಿನ್ನಮುನಿಸುತಿಳಿಯ ಬಂದೆನಿನ್ನನೆ ಮೆಚ್ಚಿ ಅನ್ಯ ಕನ್ಯೇರ ವ್ರತವನಳಿದೆನಿನ್ನ ಪುಣ್ಯದ ಬೆಳಸ ಬೆಳೆದೆ 32ಶ್ಲೋಕಶ್ರೀಶೌರಿಸರಸೋಕ್ತಿಯಿಂದ ಸತಿಯ ಲೇಸಾಗಿ ಸಂತೈಸುತಆಸ್ಯಾಬ್ಜಾಂಕಿತ ಸ್ವೇದವನ್ನು ಸುಮುಖವನೊತ್ತಿ ಆರೈದನುಕೇಶ ನೇವರಿಸುತ್ತ ತಾ ಚತುಷ್ಕಪರ್ದಾ ಸತ್ಯಭಾಮಿನಿಗೆಶ್ರೀಶ ಮಂಡಿಸಿ ವೇಣಿಯಲ್ಲಿ ಇಡುವ ಭೂಷಣಗಳನಿಟ್ಟನು 33ಕಸ್ತೂರಿ ತಿಲಕಿಟ್ಟ ನೇತ್ರಯುಗಕೆ ಮತ್ತಂಜನವಿಟ್ಟನುವೃತ್ತಾದ ಸುಕಪೋಲದೊಳ್ಮಕರಿಕಾ ಪತ್ರಂಗಳನಿಟ್ಟನುಮುಕ್ತಾಹಾರಪ್ರವಾಳನೀಲಮಣಿಗಳ್ವತ್ತಾದ ಸ್ವರ್ಣಮಾಲಿಕಾರತ್ನಾಂಕಾಭರಣಿಟ್ಟನು ಯದುಪತಿ ಸತ್ಯಂಗನಾಪ್ರಿಯನು 34ಪದಮುಡಿಗೆ ಮಲ್ಲಿಗೆಯ ಮುಡಿಸಿದ ಮದನನಯ್ಯಮಡದಿಯೆದೆಗೆ ಮಲಯಜವಕಡು ನರ್ಮೋಕ್ತಿಗಳಲ್ಲಿ ಪೂಸಿದ ಘನಶ್ಯಾಮಬಿಡು ನಿನ್ನ ಖತಿಯೆಂದ ದೇವ 35ಕೋಟಿ ಚಂದ್ರಾರ್ಕ ಲಾವಣ್ಯನರ್ಧಾಂಗಿಗೆಕೋಟಿ ಕೋಟ್ಯಾಭರಣಿತ್ತನೋಟ ಬೇಟದಿ ಮನೋರಥವ ಪೂರೈಸಿದನಾಟಕಸೂತ್ರನಿರ್ಲಿಪ್ತ 36ಶ್ಲೋಕಇತ್ಯಾದಿ ಬಹುಮನ್ನಿಸಿ ಗರುಡನ ಹತ್ತಿದ ಸ್ವಸ್ತ್ರೀ ಸಹನಿತ್ಯಾನಂದಮಯ ಸ್ವರೂಪ ಅಮರಾವತಿಗೆ ಪೋಪನ್ನಕಪೃಥ್ವೀಜಾತನು ಮತ್ತನಾಗಿ ಅಮರರ್ಮೊತ್ತವ ಬಾಧಿಸಲುಇತ್ತೀ ಕಾರ್ಯವ ಬಿಟ್ಟು ಮುಂಚೆ ನಡೆದ ಜೆÉೂೀತಿಷ್ಮತಿಸ್ಥಾನಕೆ 37ಹೋಗಿ ಆ ನರಕನ್ನ ಸೀಳಿ ಭೌಮಿಜಗಿತ್ತನು ಭಾಗ್ಯವಸೌಗಂಧಿಯರ ಷೋಡಶ ಸಹಸ್ರರ ಯೋಗಾರ್ಹರಂ ತಂದನುಶ್ರೀ ಗೋಪೀಜನ ಮೋಹನಾಘಹರಣ ಹೋಗ್ವಾಗ ಸ್ವರ್ಧಾಮಕೆಆಗಿತ್ತಾಕುಂಡಲಅದಿತಿಗೆ ಮ್ಯಾಗಿಂದ್ರನಿಂ ಸಂಪೂಜ್ಯನು 38ಪದಶಚಿಯರಸನು ಪೂಜಿಸಿದ ಮೇಲೆ ರಾಣಿಯಉಚಿತಕೆಮಂದರತರುವಮುಚುಕುಂದವರದನು ತರುತಿರೆ ಅಮರರನಿಚಯಸಹಿತ ಕಾದಿದಿಂದ್ರ 39ಗರುಡನ ಗರಿಯ ಗಾಳಿಯಲೆಲ್ಲರೋಡಿಸಿಧÀರೆಗೆ ತಂದನು ದ್ವಾರಾವತಿಗೆಅರಸಿಯಂಗಳದೊಳು ನಿಲಿಸಿದ ತರುಮೂಲಸರಿ ಲೆತ್ತವಾಡುವ ಎಂದಳಾಗೆ 40ಶ್ಲೋಕಪಾರಿಜಾತದ ಮೂಲ ಚೈತ್ಯದಲ್ಲಿನ ಶ್ರೀರಂಗ ರತ್ನಾಸನಸಾರಿ ಇಬ್ಬರು ಲೆತ್ತವಾಡುವಹರಿನಾರೇರ ಮುಂದೆನ್ನನುಭೂರಿಮಾನಿಯಮಾಡುಸ್ವಾಮಿ ಎನಲು ಕಾರುಣ್ಯ ವಾರಿನಿಧಿಧಾರಿಣಿಯಲ್ಲಿ ಸ್ತ್ರೈಣನೆಂಬರು ಸಖಿ ಈ ರೀತಿ ಮಾಣೆಂದನು 41ನೀ ಲೆತ್ತವನು ವೃಕ್ಷ ಮೂಲದಲಿ ಎನ್ನೊಳಾಡ ಒಲ್ಲೆಂದರೆಮೇಲೀಅಂಬರಭೂಷಣೇಕೆ ವಿಭುವೆ ಮೇಲೀ ಶರೀರೇತಕೆಶ್ರೀಲೋಲ ಶರಣೇಚ್ಛದ ಎನಿಸುವ ನಿನ್ನ ಬಿರುದೇತಕೆಬಾಲೇರ್ಮುಂದಪಹಾಸ್ಯವಾಯಿತೆನುತ ಲೋಲಾಕ್ಷಿ ತಾ ಮುನಿದಳು42ಪದಹಂಸದುಪ್ಪಳದ ಸುಪ್ಪತ್ತಿಗೆ ಮಂಚದಿ ರಾಜಹಂಸಗಮನೆ ಮುನಿದು ಮಲಗೆಮಾಂಶಳು ಕದವನಿಕ್ಕಿದಳು 43ನೀನೆಂದ ಮಾತ ನಡೆಸುವೆ ಮುನಿಯದಿರುಮಾನಿನಿರನ್ನೆ ಕದತೆರೆಯೆಶ್ರೀನಾಥ ಹೀಗೆ ಮನ್ನಿಸಿ ಕದತೆರೆಸಿದ ದಯಾನಿಧಿ ಪ್ರಸನ್ವೆಂಕಟೇಶ 44ಶ್ಲೋಕಲಕ್ಷ್ಮೀ ಭೂರಮಣ ಭವಾಬ್ದಿಮಥನಪಕ್ಷೀಂದ್ರಸದ್ವಾಹನಮೋಕ್ಷಾಧೀಶವಿರಿಂಚಿವಾಯುಫಣಿಭೂ ತ್ರ್ಯಕ್ಷೇಂದ್ರ ದೇವಾಯನವಕ್ಷೋಜಾವರ ಸುಂದರಾಗ್ರಣಿ ವರಲಕ್ಷ್ಮೀ ಮನೋನಾಯಕರಕ್ಷಿಸಿದನು ಸ್ವಸ್ತ್ರೀಯ ನೆರೆದನು ಸಾಕ್ಷಾತ್ ಪ್ರಸನ್ವೆಂಕಟ45ಅನಂತಾಬ್ಬ ಭವಾಂಡ ಹುಟ್ಟಿ [ಸಿ] ಸ[ಲಹು] ವತಾನೇ ಬಯಲ್ಮಾಡುವತಾ ನಿರ್ಲಿಪ್ತ ಸದಾಗಮೈಕ ಸುವಿಜಯಾನಂದ ಪೂರ್ಣಾತ್ಮನುಈ ನಾಟ್ಯವನು ತೋರಿದ ಸುಜನರಿಗಾನಂದ ವೃದ್ಧಿಕರತಾನಾಡಿದನು ಲೆತ್ತವ ಸತಿಗೂಡಜ್ಞಾನಿಪ್ರಸನ್ವೆಂಕಟ 46ಪದಮಂಗಳಾತ್ಮಕ ವಿಶ್ವನಾಟಕವಾಡಿದ ಸತ್ಯಂಗನೆಯೊಳು ಲೆತ್ತದಾಟಅಂಗನೆಷೋಡಶ ಸಹಸ್ರರ ಸೋಲಿಸುವರಂಗ ಪ್ರಸನ್ನವೆಂಕಟೇಶ 47ಶ್ರೀ ಸುರವೃಕ್ಷತಳದಿ ರತ್ನಾಭರಣಮಯನೀ ಸೋತೆ ಸತ್ಯಭಾಮಿನಿಯೆಂದರೆಹರಿನೀ ಸೋತ್ಯೊ ಪ್ರಸನ್ನವೆಂಕಟೇಶ 48ಲೇಶ ಹಾಸದಿ ಜಗತ್ಪ್ಪ್ರಪಂಚವ ತೋರುತ್ತವಾಸುದೇವಪ್ರಕೃತಿ ಗೂಡಿಈ ಶೋಭಿಸುವ ದ್ವಾರಕಾ ನಗರದಲಿದ್ದಪ್ರಸನ್ವೆಂಕಟೇಶನ ನೋಡಿ 49ಅನಂತದೇಶದಿ ಅನಂತ ಕಾಲದಿಅನಂತ ಸದ್ಗುಣಸಾಂದ್ರದೀನ ದಯಾನಿಧಿ ಪ್ರಸನ್ನÉಂಕಟ ಕೃಷ್ಣಮನುಷ್ಯಲೀಲೆಯ ತೋರಿದ 50ಈ ಸತ್ಯಭಾಮಾವಿಲಾಸದ ಪದ್ಯಪದಲೇಸಾಗಿ ನರನಾರಿಯರುತೋಷಭರಿತರಾಗಿ ಪಾಡಲು ಸುಖವೀವಶ್ರೀಶ ಪ್ರಸನ್ನವೆಂಕಟೇಶ 51
--------------
ಪ್ರಸನ್ನವೆಂಕಟದಾಸರು