ಒಟ್ಟು 32 ಕಡೆಗಳಲ್ಲಿ , 22 ದಾಸರು , 32 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೀಗೆ ಮೊರೆ ಇಡಲೋ | ನಿನ್ಹೊರತಿನ್‍ಆರೀಗೆ ಮೊರೆ ಇಡಲೋ ಪ ಮಾರ ಜನಕೆ ಹರೇ ಅ.ಪ. ಭಾರ ಬೆನ್ನಿಲಿ ಪೊತ್ತುಧಾರುಣಿಯನೆ ಚಿಮ್ಮಿ | ದುರುಳನ ತಂದೆಯೋ 1 ಕರವ ಚಾಚಿದೆ ದೇವಾ 2 ಪರಶುವ ಸಿಡಿದು ನೀ | ತರಿದೆಯೊ ತಾಯ್ ಕೊರಳಶರದಿಯ ಬಂಧಿಸಿ | ದುರುಳರ ತರಿದೆಯೋ 3 ಪೂಥಣಿ ಶಕಟ ಧೇನುಕ ವತ್ಸ ಭಂಜನಮಥಿಸಿ ಕಂಸನ ನಿನ್ನ ಮಾತಾಪಿತರ ಕಾಯ್ದೆ 4 ಬೆತ್ತಲೆ ತಿರುಗಿ ನೀ | ಉತ್ತಮ ಹಯವೇರಿವತ್ತಿ ದುರುಳನ ಶಿರ | ಕತ್ತರಿಸಿದೆ ದೇವಾ 5 ಆರತ ಜನ ನಿನ್ನ | ಈ ರೀತಿ ಪೇಳ್ವರುವಾರುತೆ ಕೇಳಿ ನಾ | ಮೊರೆಯಿಟ್ಟು ಅರುಹುವೆ 6 ಮುರಹರ ಶ್ರೀಕೃಷ್ಣ | ಗುರು ಗೋವಿಂದ ವಿಠಲಸರುವ ದೇವೋತ್ತಮ | ಕರುಣದಿ ಸಲಹೆನ್ನ 7
--------------
ಗುರುಗೋವಿಂದವಿಠಲರು
ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು 1 ಜರೆಯಸುತನ ಬಾಧೆಯು ಘನವಾಗುತಿರಲು ಜಲದೊಳು ದ್ವಾರಕಾಪುರವ ನಿರ್ಮಿಸಿದ 2 ಯದುನಂದನ ತನ್ನಗ್ರಜ ಬಲರಾಮನ ಕೂಡ ಮುದದಿಂದಾವಾಸ ಯಾದವರ ಸಹಿತಾಗಿ3 ಇರುತಿರೆ ರುಕುಮ ತನ್ನನುಜೆ ಸಹಿತಾಗಿ ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4 ಅಕ್ಕರದನುಜೆ ರುಕ್ಮಿಣೀದೇವಿಗಿನ್ನು ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5 ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6 ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ ಘನಮಹಿಮಗೆ ಓಲೆ ಬರೆದಳು ಲಿಖಿತ 7 ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8 ಎಂದೆಂದಿಗೆನ ಕೂಡಾನಂದವ ಬಟ್ಟು ಇಂದೆ ಕೈಬಿಟ್ಟು ದೂರಿಂದ ನೋಡುವರೆ 9 ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10 ಸರ್ವರ್ವಂದಿತ ನಿನ್ನ ಅರಮನೆದ್ವಾರ ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11 ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12 ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13 ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14 ಪಾದ ಉರಗ ಮೆಟ್ಟಿದ ಪಾದ ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15 ಬರೆದ ಓಲೆಗೆ ಹಚ್ಚಿ ಅರೆದರಿಷಿಣವ ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16 ಜಗದೀಶಗೆ ಪತ್ರವ ಜಾಣೆ ತಾ ಬರೆದು ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17 ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18 ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19 ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20 ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ- ಕಂಚುಕ ತೊಟ್ಟು 21 ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22 ಹಾರ ಪದಕದ ಮಧ್ಯ ಮೇಲಾದೇಕಾವಳಿಯು ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23 ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24 ಝಗಝಗಿಸುತ ಬಂದಳು ಜಗದ ಮೋಹಿನಿಯು ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25 ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26 ಸುತ್ತ ಮುತ್ತೈದೇರು ಕತ್ತಿಕೈ ಭಟರು ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27 ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28 ಹಿರಿಯ ಮುತ್ತೈದೇರಿಗೆ ಮರದ ಬಾಗಿನವ ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29 ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30 ಮಂಗಳಗೌರಿಯೆದುರಿಗೆ ಮುತ್ತೈದೇರು ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31 ಮಂಗಳಾಂಗನು ನಿನ್ನ ಪತಿಯಾಗಲೆಂದು ಮಂಗಳಸೂತ್ರ ಬಂಧನ ಮಾಡಲು ನಗುತ 32 ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ- ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33 ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ- ಹರನ ಶ್ರೀಧರನ ಕೊಡುವೆನೀ ದೇವರನು 34 ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ- ವತ್ಸಲ ಬಂದನೆಂದೆಚ್ಚರಿಸಿದರು35 ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36 ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ ರುಕ್ಮಿಣಿಯ ಸ್ವೀಕಾರ ಮಾಡಿದನು 37 ರಥವು ಮುಂದಕೆ ಸಾಗೆ ಪಥವು ತೋರದಲೆ ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38 ಬಂದ ರುಕುಮನ ಗಡ್ಡ ಮಂಡಿ ಸವರುತಲಿ ಬಂಧನ ರಥಕೆ ಮಾಡಿದ ನಂದಸುತನು 39 ವಾರೆನೋಟದಿ ನೋಡಿ ಮೋರೆ ತಗ್ಗಿಸಿದ ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40 ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41 ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ಶ್ರೀಮದ್ರಾಮಾಯಣ ಮಂಗಳಂ ಮಂಗಳಂ ಮಹಾನುಭಾವಗೆ ಮಂಗಳಂ ಲೋಕಮಾತೆ ಸೀತೆಗೆ ಮಂಗಳಂ ಶತ್ರುಘ್ನ ಭರತಗೆ ಮಂಗಳಂ ಸೌಮಿತ್ರಿರಾಮಗೆ ಪ ದಶರಥನ ಉದರದಲಿ ಜನಿಸುವೆನೆಂದು ವರವನಿತ್ತ ರಾಮಚಂದ್ರಗೆ 1 ಭರತಸಹವಾಗಿ ಜನಿಸಿದ ರಾಮಚಂದ್ರಗೆ 2 ಜಾತಕರ್ಮವು ನಾಮಕರಣವು ಚೌಲ ಉಪನಯನಗಳ ಮಾಡಿ ವಿಶ್ವಾ ಮಿತ್ರರೊಡನೆ ಸಕಲ ವಿದ್ಯವ ಕಲಿಯೆ ಪೊರಟ ರಾಮಗೆ3 ಬಲ ಅತಿಬಲವೆಂಬ ವಿದ್ಯವ ವಿಶ್ವಾಮಿತ್ರರೊಡನೆ ಕಲಿತು ಅಶ್ವಿನಿದೇವತೆಗಳಂದದಿ ಬಂದ ಸೌಮಿತ್ರಿರಾಮ್ರಗೆ 4 ಭರದಲಿ ಅನಂಗನಾಶ್ರಮವನು ಪೊಕ್ಕು ಸರಯು ನದಿಯನು ದಾಟಿ ಬರದೂಷಣಜಾ ದೇಶದೊಳಗುಳ್ಳ ತಾಟಕಾಂತಕ ರಾಮಚಂದ್ರಗೆ 5 ಅಸ್ತ್ರವನ್ನು ಗ್ರಹಿಸಿ ಬೇಗನೆ ಸಿದ್ಧಾಶ್ರಮಕ್ಕೆ ನಡೆತಂದು ಸುಭಾಹುವ ನು ಸಂಹರಿಸಿ ಭರದಿ ಮಾರೀಚನ ಹಾರಿಸಿದ ರಾಮಗೆ 6 ವಿಶ್ವಾಮಿತ್ರರ ಯಜ್ಞ ಪಾಲಿಸಿ ಕುಶನ ವಂಶವಿಸ್ತಾರವ ಕೇಳಿ ಆಸರ [ಯು]ನದಿಯ ದಾಟಿ ಭರದದಿತಿಯಾಶ್ರಮಕೆ ಬಂದ ರಾಮಗೆ 7 ಮರುತ್ತ ಜನ್ಮವ ಕೇಳಿ ಅಹಲ್ಯೆಯನ್ನು ಪಾವನ ಮಾಡಿ ಬಂದ ರಾಮಗೆ 8 ಜನಕ ವಂದಿಸಿ ಧನ್ಯನೆನ್ನಲು ವಿಶ್ವಾಮಿತ್ರರು ವೃತ್ತಾಂತ ಹೇಳಿ ಧನುವ ತರಿಸಲು ನೋಡಿ ಕ್ಷಣದಿಮುರಿದಾ ರಾಮಚಂದ್ರಗೆ 9 ಕರವ ಪಿಡಿದು ಪೊರಟ ರಾಮಗೆ 10 [ಬೇಗ]ಮಾತಾಪಿತರ ಮಾತನಡೆಸಿ ಪ್ರೀತಿತೋರಿದ ಸೀತಾರಾಮಗೆ 11 ಕಂಡವರ ಮನದಲ್ಲಿ ರಮಿಸುವ ಪುಂಡರೀಕಾಕ್ಷನಿಗೆ ರಾಜ್ಯವ ಕೊಡುವೆನೆ[ನುತ] ದಶರಥ ವ್ರತವನಾಚರಿಸಿದ ರಾಮಚಂದ್ರಗೆ 12 ಕೈಕೆ ಪೂರ್ವದ ವರವ ಸ್ಮರಿಸಿ ಭರತನಿಗೆ ರಾಜ್ಯವನು ಬೇಡಿ ರಾಮನರ ಣ್ಯಕ್ಕೆ ಪೋಗೆನೆ ಬೇಗ ಪೊರಟ ಶ್ರೀರಾಮಚಂದ್ರಗೆ 13 ಮಾತೆಯನು ಬಹುವಿಧದಿ ಮನ್ನಿಸಿ ಪಿತನ ಪ್ರತಿಜ್ಞೆಯನು ಪಾಲಿಸಿ ಸೀತೆಲಕ್ಷ್ಮಣರೊಡನೆ ವನವಾಸಕ್ಕೆ ಪೊರಟ ರಾಮಚಂದ್ರಗೆ 14 ಪುರದ ಜನರನು ಸಂತವಿಟ್ಟು ಗುಹನ ಸಖ್ಯದಿ ನದಿಯ ದಾಟಿ ಭರದಿ ಭಾರದ್ವಾಜರ ಕಂಡು ಚಿತ್ರಕೂಟಕ್ಕೆ ಬಂದ ರಾಮಗೆ 15 ಅರಸು ಸ್ವರ್ಗವನೈದೆ ಭರತನಕರಸಿ ಕರ್ಮವನೆಲ್ಲ ಕಳೆದು [ವರ] ಮಾತೆಗೆ ಭಾಷೆ ಕೊಟ್ಟು ತಮ್ಮನಾಲಿಂಗಿಸಿದ ರಾಮಗೆ 16 ಭರತನಂಕದೊಳಿಟ್ಟು ಪ್ರೇಮದಿ ಮನ್ನಸಿ ಮೃದುವಾಕ್ಯದಿಂದ ಗುರುಗಳನುಮತದಿಂದ ಪಾದುಕೆಯಿತ್ತು ಕಳುಹಿದ ರಾಮಚಂದ್ರಗೆ 17 ಬೇಗನೆ ಚಿತ್ರಕೂಟವ ಬಿಟ್ಟು ಅತ್ರಿ ಯಾಶ್ರಮಕೆ ಬಂದು ಅಂಗರಾಗಾರ್ಪಣವನೆಲ್ಲ ಅಂಗೀಕರಿಸಿದ ರಾಮಚಂದ್ರಗೆ 18 ದಂಡಕಾರಣ್ಯವನ್ನು ಪೊಕ್ಕು ಉದ್ದಂಡವಿರಾಧನ್ನ ಕೊಂದು ಕಂಡು ಇಂದ್ರನ ಶರಭಂಗರಿಗೆ ಮುಕ್ತಿಯನಿತ್ತ ಶ್ರೀರಾಮಚಂದ್ರಗೆ 19 ಋಷಿಗಳಿಗೆ ಅಭಯವನು ಇತ್ತು ಲೋಕಮಾತೆಯ ನುಡಿಯ ಕೇಳಿ ಋಷಿಮಂಡಲವನು ಪೊಕ್ಕು ಬಂದು ಸುತೀಕ್ಷ್ಣರ ಕಂಡ ರಾಮಗೆ 20 ಅಸ್ತ್ರವನು ಕೊಡಲು ಗ್ರಹಿಸಿ ಪಂಚವಟಿಗೆ ಬಂದ ರಾಮಗೆ 21 ಶೂರ್ಪನಖಿ ರಘುಪತಿಯ ಮೋಹಿಸೆ ಕರ್ಣನಾಸಿಕವನ್ನು ಛೇದಿಸಿ ದುರುಳ ಖರದೂಷಣರ ಕೊಂದು ಸತಿಯನಾಲಿಂಗಿಸಿದ ರಾಮಗೆ 22 ದುರುಳ ಖಳನು ಜಾನಕಿಯ ಕದ್ದೊಯ್ಯೆ ಮಾರಿಚನ್ನ ಕೊಂದು ಬರುತ ಮಾರ್ಗದಿ ಗೃಧ್ರರಾಜಗೆ ಮುಕ್ತಿಯಿತ್ತ ಶ್ರೀರಾಮಚಂದ್ರಗೆ 23 ಕಬಂಧನಾ ವಾಕ್ಯವನು ಕೇಳಿ ಮಾರ್ಗದಲಿ ಅಯಮುಖಿಯ ಭಂಗಿಸಿ ಶಬರಿ ಭಕ್ತಿಯೊಳಿತ್ತ ಫಲವನು ಸವಿದು ಮುಕ್ತಿಯನಿತ್ತ ರಾಮಗೆ 24 ಸೀತೆಯರಸುತ ಮಾರ್ಗದಲಿ ಋಷ್ಯಮೂಕಪರ್ವತವ ಸೇರಿ ಪಂ ಪಾತೀರದಿ ತಮ್ಮನೊ[ಂದಿ]ಗೆ ನಿಂತ ಶ್ರೀರಘುರಾಮಚಂದ್ರಗೆ 25 ಪಂಪಾಪುಳಿನದ ವನವಕಂಡು ಪಂಕಜಾಕ್ಷಿಯ ನೆನೆದು ವಿರಹ [ತಾಪದರೆ] ಬಂದ ಆಂಜನೇಯಗೆ ಸಖ್ಯ ನೀಡಿದ ರಾಮಚಂದ್ರಗೆ 26 ಅಭಯವನು ಇತ್ತು ರವಿಜಗೆ ಏಳು ತಾಳೇಮರವ ಛೇದಿಸಿ ದುಂ ದುಭಿಯ ಕಾಯವನು ಒಗೆದ ಇಂದಿರಾಪತಿ ರಾಮಚಂದ್ರಗೆ 27 ಇಂದ್ರಸುತನು ರವಿಜನೊಡನೆ ದ್ವಂದ್ವಯುದ್ಧವ ಮಾಡುತಿರಲು ಒಂದುಬಾಣದಿಂದ ವಾಲಿಯ ಕೊಂದು ಕೆಡಹಿದ ರಾಮಚಂದ್ರಗೆ 28 ಮುದ್ರೆಯುಂಗುರವಿತ್ತು [ಅ]ಸಾಧ್ಯ ಇವನೆಂತೆಂದ ರಾಮಗೆ 29 ಬೆಳೆದ ಹನುಮಗೆ 30 ಶತ್ರುಪಟ್ಟಣವ ಕಂಡು ಛಾಯೆಯ ಕುಟ್ಟಿ ಸುರಚಿಯುಪಾಯದಿಮನ್ನಿ ಸುತ್ತ ಮೈನಕನ ಭರದಲಿ ಲಂಕಿಣಿಯನಡಗಿಸಿದ ಹನುಮಗೆ 31 [ವೀರ] ಹನುಮಗೆ 32 ದುರುಳ ರಾ ವಣನ ನಿಂದಿಸಿ ಪುರವಸುಟ್ಟಾ ವೀರಹನುಮಗೆ 33 ಸೀತೆಯೊಡನೆ ಗುರುತಕೇಳಿ ಸಮುದ್ರತೀರಕೆ ಬಂದು ಬೇಗನೆ ಜಾಂಬ ವಂತ ಅಂಗದರ ಕೂಡಿ ಮಧುವನವ ಭಂಗಿಸಿದ ಹನುಮಗೆ 34 ಕಂಡೆ ಲೋಕಮಾತೆಯನನ್ನೆನ್ನುತ ಬಂದು ಮುದದಿ ವಂದಿಸಿ ಇತ್ತ ಹನುಮನನಾಲಿಂಗಿಸಿದವಗೆ 35 ಬಂದ ರಾಮಗೆ 36 [ಭಕ್ತ] ವಿಭೀಷಣಗೆ ಅಭಯವನಿತ್ತು ಶರಧಿಗೆ ಸೇತುವೆಯನ್ನು ಬಂಧಿಸಿ ಮುತ್ತಿ ಲಂಕಾಪುರವ ಸಂಧಿಗೆ ಅಂಗದನ ಕಳುಹಿಸಿದ ರಾಮಗೆ 37 ಇಂದ್ರ[ಜಿತ್ತು]ವೊಡನೆ ಕಾದಿ ಸರ್ಪಾಸ್ತ್ರದಿಂದ ಬಿಡಿಸಿಕೊಂಡು [ಆ]ದುರುಳ ರಾವಣನ ನಡುಗಿಸಿ ಕಿರೀಟವನು ಭಂಗಿಸಿದ ರಾಮಗೆ 38 ಕುಂಭಕರ್ಣನ ತುಂಡುತುಂಡಾಗಿ ಕೊಂದುಕೆಡಹಿದ ರಾಮಚಂದ್ರಗೆ 39 ಕೊಂದು ವಜ್ರದಂಷ್ಟ್ರ ಆಕಂಪ ದೇವಾಂತಕ ನರಾಂತಕರನ್ನು ಮ ಹೋದರ ಮಹಾಪಾಶ್ರ್ವ ಅತಿಕಾಯ ತ್ರಿಶಿರಸ್ಸನ್ನು ಕೊಂದ ರಾಮಗೆ 40 ಮಾಯೆಯುದ್ಧದಿ ಮೇಘನಾಥನು [ಅನುಜನ] ಬ್ರಹ್ಮಾಸ್ತ್ರದಲಿ ಕಟ್ಟಲು ವಾಯುನಂದನನಿಂದ ಸಂಜೀವನವ ತರಿಸಿದ ರಾಮಚಂದ್ರಗೆ 41 ಮಾಯಾಸೀತೆಯ ಶಿರವನರಿಯಲು ವಿಭೀಷಣನ ಉ ಪಾಯದಿಂದ ಇಂದ್ರಜಿತ್ತು ಶಿರವಕಡಿದ ತಮ್ಮನಾಲಂಗಿಸಿದ ರಾಮಗೆ 42 ಮೂಲಬಲವನು ಕಡಿದು ರಾವಣನೊಡನೆ ಯುದ್ಧವ ಯೋಚಿಸೆ ಕಡಿದ ರಾಮಗೆ 43 ರಾವಣಾನೆಂಬ ಗಂಧಹಸ್ತಿಯ ರಾಮಕೇಸರಿ ಬಂದು ಮುರಿಯಲು ಸುರರು ಶಿರದಿ ಧರಿಸಿದ ರಾಮಚಂದ್ರಗೆ 44 ವಿಭೀಷಣಗೆ ಪಟ್ಟವನು ಕಟ್ಟಿ ಸೀತೆಯೊಡನೆ ಪ್ರತಿಜ್ಞೆ ಮಾಡಿ ರೆ ಬ್ರಹ್ಮರುದ್ರಾದಿಗಳು ಸ್ತುತಿಸಲು ತಂದೆಗೆರಗಿದ ರಾಮಚಂದ್ರಗೆ 45 ಸೀತೆಯಂಕದೊಳಿಟ್ಟು ಕಪಿಗಳಸಹಿತ ಪುಷ್ಪಕವೇರಿ ಭರದಿ [ಬ ರುತ್ತ] ಭಾರದ್ವಾಜರಿಗೆರಗಿ ಭರತನ ಮನ್ನಿಸಿದ ರಾಮಗೆ 46 ಕೈಕೆಸುತ ಕೈಮುಗಿದು ಕಿಶೋರ ಭಾರವ ತಾಳಲಾಗದೆಂದಾ ಳುತ [ಲಾ]ಯಿತ್ತ ರಾಜ್ಯವನ್ನು ಕೊಡಲು ಗ್ರಹಿಸಿದ ರಾಮಚಂದ್ರಗೆ 47 ಉಟ್ಟ ಮಡಿಯ ಜಟೆಯನುತಾ ಶೋಧಿಸೆ ಸೀತೆ ಸಕಲಾಭರಣ ತೊಟ್ಟು ಸುಗ್ರೀವ ಸಕಲರೊಡನೆ ರಥವನೇರಿದ ರಾಮಚಂದ್ರಗೆ 48 ಸರಮೆಪತಿ ಸೌಮಿತ್ರಿ ಚಾಮರ ಪಿಡಿಯೆ ಶತ್ರುಘ್ನ ಛತ್ರಿಯನು ಭರತ ಸಾರಥ್ಯವನು ಮಾಡಲು ಪುರಕೆತೆರಳಿದ ರಾಮಚಂದ್ರಗೆ 49 ರಾಜಗೃಹವನು ತೋರಿ ರವಿಜಗೆ ಶರಧಿಯುದಕಗಳೆಲ್ಲ ತರಿಸಿ [ವಿ ರಾಜಿಸಿ] ಪೀಠದಿ ಸೀತೆಯೊಡನೆ ವೊಪ್ಪಿದಾ ರಘುರಾಮಚಂದ್ರಗೆ 50 ವಸಿಷ್ಠ ಮೊದಲಾದ ಸಪ್ತ ಋಷಿಗಳು ಲಕ್ಷ್ಮೀಪತಿಗಭಿಷೇಕ ಮಾಡಲು ರಾಮಚಂದ್ರಗೆ 51 ಪಾದ ಪಿಡಿದಿಹ ರಾಮಚಂದ್ರಗೆ
--------------
ಯದುಗಿರಿಯಮ್ಮ
ಎಂತಹುದೊ ನಿನ್ನಯ ಭಕುತಿ ಎನಗೆ - ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಪ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು 1 ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ 2 ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ 3 ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ ಮಾತಾಪಿತರನುಜರೆಂಬಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು 4 ಇನಿತುಪರಿಯಲಿ ನಾನು ಹಲುಬಿದೊಡೆನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯುನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟಕನಕಾದ್ರಿಯೊಳು ನೆಲಸಿದಾದಿಕೇಶವರಾಯ 5
--------------
ಕನಕದಾಸ
ಒಬ್ಬನೆ ದಾಸ ಹುಟ್ಟಿದವನಿವ | ನೊಬ್ಬನೆದಾಸ ಪ ಸೂರಿ ತಾಯಿತಂದೆಗಳಿಂದಾಯಿತು ಅ.ಪ ನಾಲ್ಕು ವರ್ಷದವರೆವಿಗೂ ಮಾತಾಪಿತರು ಪಾಲನೆಗೈದರು ಬಳಿಕ ಕಾಲಾಧೀನವನೈದಿದರವರಾ ಮೇಲೆ ನಡೆದ ಕಥೆಯನು ಬಿನ್ನೈಸುವೆ 1 ದ್ವಾದಶ ವರುಷ ಪರಿಯಂತವು ಮಾತುಳನ ಗೃಹದಿ ಬೆಳೆದು ಪಾದವೂರದೆ ದೇಶವÀ ತಿರುಗುತ- ಲಾದುದು ಇಪ್ಪತ್ತುನಾಲ್ಕು ವರುಷವು 2 ಶ್ರೀರಮಣ ಗುರುದ್ವಾರದಲಿ ಇಪ್ಪತ್ತು ಮೂರನೆಯ ವರುಷದಲಿ ಸಾರವ ತಿಳುಹಿಸಿ ಅನುಗ್ರಹಿಸಿದನ- ಪಾರ ಸುಗುಣನಿಧಿ ಕೈಪಿಡಿದೆನ್ನನು 3 ಹರಿನಾಮಬಲದಿಂದಲಿಪ್ಪತ್ತೈದು ವರುಷದ ಮೊದಲು ಸುಕೃತದಿಂ ಹರಿಸೇವೆಗಳಿಂ ನೆರೆದ್ರವ್ಯಗಳಿಸಿ ನಲವತ್ತು ವರುಷವಾಯಿತು 4 ನಲವತ್ತೊಂದನೆ ವರ್ಷಮೊ- ದಲು ಬಲು ಜನಗಳ ಬೇಡಿ ಕಳೆದಿತು ಐವತ್ತಾರು ವರ್ಷಗಳು 5 ಮಧ್ವರಾಯರೆ ನಮ್ಮ ತಂದೆಯು ಮಧ್ವರಾಯರೆ ನಮಗೆ ಗುರು ಮಧ್ವರಾಯರೆ ಉದ್ಧಾರಕರ್ತರು ಪದ್ಮನಾಭಗತಿ ಪ್ರೀತ್ಯಾಸ್ಪದರು 6 ಬೆಂಡಾಗಿರುವುದು ಶರೀರ- ಧರ್ಮವು ಬೇರೊಬ್ಬರ ಕಾಣೆ ಉಂಡುಟ್ಟು ತೆಗೆಯುವ ವಿಷಯದಿ ಊರಿನವರ ದೂರುವುದಿನ್ಯಾಕೆ 7 ಹರಿನಾಮದ ಬಲದಿಂದ ಗಳಿಸಿದುದು ಹರಿಗೆ ಪ್ರೀತಿಯಾಯಿತು ಪರರು ವ್ಯರ್ಥವಾಗಸೂಯೆ ಪಟ್ಟರೆ ದುರಿತವ ಪ್ರಯೋಜನವು ಸತ್ಯವಿದು 8 ಏನು ಕೋರುವುದು ಸಾಕು ಸೀತಾಪತಿ ಗುರುರಾಮವಿಠ್ಠ- ಲನ ಸೀಮೆ ಈಗಲು ಮುಂದಕು ಇರಬೇಕು9
--------------
ಗುರುರಾಮವಿಠಲ
ಕಡಲಶಯನ ಹರಿಯ ತೊಡೆಯಲ್ಲಿ ಮಡದ್ಯೇರಿಬ್ಬರು ಕುಳಿತು ಪ ಪನ್ನಂಗಶಯನ ಕೇಳೆ ಸ್ವಾಮಿ ನೀ ಎನ್ನ ಮನೆಗೆ ಏಳೊ ನಿನ್ನ ಪಾದಕ್ಕೆ ಎರಗುವೆನೆಂದು ಭಾಮೆ ಕೈ- ಯನ್ನು ಮುಗಿದಳಾಗ 1 ಎನ್ನ ಮನೆಯಲ್ಲಿದ್ದ ಶ್ರೀಹರಿ- ಯನ್ನು ಕರೆಯಲವರ ಕಣ್ಣೇಸೆನುತಲಿ ಕರ್ಣಿ(ನ್ಯೆ?) ರುಕ್ಮಿಣಿ ಕೋಪ- ವನ್ನು ಧರಿಸಲಾಗ 2 ಎಷ್ಟು ಹಣವ ನೀನು ಕೃಷ್ಣಗೆ ಕೊಟ್ಟು ಕೊಂಡಿ ಹೇಳೆ ದಿಟ್ಟತನದ ಮಾತಾಡೋ ರುಕ್ಮಿಣಿ ನಿನ್ನ ಶ್ರೇಷ್ಠತನವೇನ್ಹೇಳೆ 3 ಹತ್ತು ಆರು ಸಾವಿರದಷ್ಟ ಭಾರ್ಯೇರವೊಳಗೆ ಸತ್ಯಭಾಮೆ ಉತ್ಕøಷ್ಟ ಚೆಲುವೆಯೆಂದು ಕೃಷ್ಣ ನಿನ್ನಲ್ಲಿಹನೆ4 ಹದಿನಾಲ್ಕು ಲೋಕದಲಿ ಹರಿ ಪಾದಾಂಬುಜವ ಕಾಂಬುವೋರಿಲ್ಲೆ ಯದುನಾಥನ ಎದೆ ಮ್ಯಾಲ್ಹತ್ತಿರುವೋದು ಇದು ಸೋಜಿಗವಲ್ಲೆ 5 ಇಷ್ಟೆ ಸೋಜಿಗವೆಂದು ಆಡಲು ದಿಟ್ಟೆ ನಿನಗೆ ಅರಿದೆ ಅಷ್ಟದಿಕ್ಪಾಲಕರನೆ ಓಡಿಸಿ ವೃಕ್ಷ ಕಿತ್ತು ಒದರು(ರುವು?) ದಲ್ಲೆ 6 ಜಲಪ್ರಳಯ ಕಾಲದಲಿ ಜನರಿಲ್ಲದ ಅಂಧಕಾರದಲಿ ಎಲೆಯಾಗಾ ಪರಮಾತ್ಮನ ಮನವ ನೀ ಮೊ- ದಲೆ ಒಲಿಸಿಕೊಂಡೆ 7 ಕಾದು ಸೇವಿಸೆ ಹರಿಯ ಪಾದದ- ಲ್ಲಾದರವಿಲ್ಲದಲೆ ದಾನ ಮಾಡುತ ಮುನಿಹಿಂದಟ್ಟಿದರ್ಹರಿ ಹ್ಯಾಗೆ ಬರುವನ್ಹೇಳೆ 8 ಮೂರು ಲೋಕದ ದೊರೆಯ ಮೂರೆಲೆ ತುಳಸಿ- ಸರಿಯ ಮಾಡಿ ಮುಕುತಿದಾಯಕ ಕೈವಶವಾ- ಗಿರಲು ನೀ ಸಕಲ ಮಾಯವ ಬಲ್ಲೆ 9 ಪಟ್ಟದ್ವೊಲ್ಲಭೆ ನಾನು ಕೃಷ್ಣಗೆ ಮೆಚ್ಚಿ ಬಂದೆಯೆ ನೀನು ಅಚ್ಚುತ ತಾ ಪರಮಾನುಗ್ರ(ಹ)ವ ಮಾಡಿ ಬಂ- ದಿಚ್ಛೆಲಿರುವ ತಾನು10 ಮಾತಾಪಿತರು ಅನುಜನನ್ವಂಚಿಸಿ ಈತಗ್ವಾಲೆಯ ಬರೆದು ಯಾತಕಂಜಿಕೆ ವಲಿಸ್ಯೋಡಿ ಬಂದವಳೆಂದು ಕೀರ್ಹೊಗಳುವುದಲ್ಲೆ 11 ತಂದು ಕೊಡಲು ಮಣಿಯ ಸಭೆಯೊಳು ಅಂದು ತಗ್ಗಿಸಿ ತಲೆಯ ನಿಂದ್ಯದ ಮಾತಿಗೆ ತಂದು ನಿಮ್ಮಯ್ಯ ಮುಂದಿಟ್ಟು ಪೋದನೆ ನಿನ್ನ 12 ಕೇಳೊ ಕೇಳೊ ನುಡಿಯ ನೀನೀ- ರೇಳು ಲೋಕದ ಒಡೆಯ ಹೇಳೋ ಬುದ್ಧಿ ನಿನ್ನಯ ವಲ್ಲಭೆ ಮಾತಾ- ಡೋಳೊ ನಿರ್ಭಿಡೆಯ 13 ರಕ್ಕಸಾಂತಕ ಕೇಳೊ ನಿನ್ನ ಚಿಕ್ಕವಲ್ಲಭೆ ಮ(ಹಿ)ಮೆ ಉಕ್ಕಿ ಉಕ್ಕಿ ಎನ್ನ ಮ್ಯಾಲೆ ಬರಲು ನಿನ- ಗಕ್ಕರ ತೋರುವುದೆ 14 ಆರ್ಯಳೆಂದು ನಾನು ತಾಳಿದೆ- ನಕ್ಕ ರುಕ್ಮಿಣಿ ಮಾತ ಏರಿ ಏರಿ ಏನ್ನಮ್ಯಾಲೆ ಬರಲು ಇದು ನ್ಯಾಯವೇನೊ ನಿನಗೆ 15 ನಾಲ್ಕು ತೋಳಿನಿಂದ ಆಲಿಂಗಿಸಿ ಕಾಂತೆಯರಿಬ್ಬರನು ಯಾತಕಿಂಥ ಕದನವು ಘನವಾಯಿತು ಸಾಕು ಸಾಕುಯೆನುತ16 ವಾರಿಜಾಕ್ಷ ಕೇಳೋ ನಾರದ- ರ್ಹೂಡಿದರೀ ಜಗಳ ಪಾರಿಜಾತ ಸರಿಸವತಿಗೆ ಕೊಟ್ಟ- ರಿನ್ಯಾರು ಸೈರಿಸೋರ್ಹೇಳೊ 17 ನಂದನವನ ತರುವ ನಾ ತಂದಿಟ್ಟೆನಂಗಳದಲ್ಲೆ ಅಂದಿಬ್ಬರನಾನಂದವ ಬಡಿಸಿದ ಚೆಂದದಿಂದಲಿ ನಗುತ 18 ಭಾಮೆ ರುಕ್ಮಿಣಿ ಸಹಿತ ನಡುವೆ ಭೀಮೇಶ ಕೃಷ್ಣನು ಕುಳಿತ ಕಾಮನಯ್ಯನ ಚರಿತ್ರೆಯ ಪಾಡ- ಲಮೃತ ಪಾನವು ನಿರುತ 19
--------------
ಹರಪನಹಳ್ಳಿಭೀಮವ್ವ
ಕರ್ಮ ಬೆನ್ನ್ಹತ್ತಿ ಕಾಡಲು ನೀ ಮಾಡುವುದೇನೊ ರಂಗ ಪ ಕೊಟ್ಟು ಕುದಿದೆನು ಮನದಿ ಇಟ್ಟ್ಹಂಗಿಸಿದೆ ಜವÀದಿ ಬಿಟ್ಟುಂಡೆನತಿಥಿಗಳೆಷ್ಟೆಷ್ಟೋ ನಾನು ಕೆಟ್ಟ ಕೃತ್ಯವ ಮಾಡಿ ಕೊಟ್ಟೆ ಪರರಿಗನಿಷ್ಟ ನಿಷ್ಠವಂತರ ಕಂಡು ನಿಷ್ಠೂರವಾಡಿದೆ 1 ಮತಿಭ್ರಷ್ಟನಾಗಿ ಪರಸತಿಯರಿಗೆ ಮನಸೋತೆ ಇತರ ವನಿತೆಯ ಗರ್ಭ ಪತನಗೈಸಿದೆನೊ ಕೃತಿಮಥನದಿ ಬಲುಹಿತಬೋಧವನೆ ಬೋಧಿ ಸುತ ನಾಶಗೈದೆನ್ನಹಿತಕಾಗಿ ಪರರ 2 ಕೊಡುವರಿಗೆ ಕಿಡಿಯಿಟ್ಟೆ ಬಡವರನು ಬಳಲಿಸಿದೆ ಒಡನುಡಿದ ಭಾಷೆಯ ನಡೆಸಲಿಲ್ಲೊಂದು ಒಡಗೂಡಿರ್ದರರೊಳು ಕೆಡಕುಹುಟ್ಟಿಸಿ ನಾನು ಜಡತನದಿ ದಿನಗಳೆದೆ ಕಡುಭ್ರಷ್ಟನಾಗಿ 3 ಪರಧನಪಹರಿಸಿದೆ ಪರರ ಗೃಹ ಮುರಿದೆನು ವರ ಮಾತಾಪಿತರ ಬಲ್ಪರಿಯಿಂ ನೋಯಿಸಿದೆ ಗುರುಹಿರಿಯರ ಜರೆದೆ ಪರನಿಂದೆಗೆಳಿಸಿದೆ ಗರುವದಿಂ ಚರಿಸಿದೆ ಶರಣಜನರೊಂದಿಸದೆ 4 ಕೃಪಣತ್ವ ಕಳಿಲಿಲ್ಲ ಚಪಲ ಚೇಷ್ಟಳಿಲಿಲ್ಲ ಚಪಲಾಕ್ಷನ ದಿನದಿ ಉಪವಾಸ ಗೈಯಲಿಲ್ಲ ಸುಪಥದಿ ಮನವಿಟ್ಟು ಶಪಿಸುತಲೆಡೆವಿಡದೆ ಜಪಿಸಿ ಶ್ರೀರಾಮಪಾದ ಕೃಪೆಯ ಪಡೆದವನಲ್ಲ 5
--------------
ರಾಮದಾಸರು
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ ಕಾಯೆನ್ನ ಸಿರಿಯ ನಲ್ಲ ಪ ಕಾಲ ವಿಪರೀತದಿ ಅ ಅತ್ತೆಯ ಸೊಸೆ ಬಯ್ವಳು - ಪುತ್ರರು ತಮ್ಮಹೆತ್ತ ತಾಯಿಯ ಬಿಡುವರುಉತ್ತಮ ಗರತಿಗೆ ಅಪವಾದ - ಅವಿವೇಕಿಗಳುಎತ್ತ ನೋಡಲು ಹೆಚ್ಚಿ ಹೆದರಿಸಿತುನ್ಮತ್ತತನದಲಿ ಮನೆಯ ರಚಿಸುವರುಭಕ್ತಿಯೆಂಬುದ ಬಯಸದಿರುವರುಕತ್ತಲಾಯಿತು ಕಲಿಯ ಮಹಿಮೆ 1 ನಿತ್ಯ ನೇಮವು ನಿಂತಿತು - ಹೋಯಿತಲ್ಪಜಾತಿಗೈಶ್ವರ್ಯ ಭೋಗಭಾಗ್ಯಧಾತರಾದವರಿಗೆ ಧಾರಣೆ ಪಾರಣೆಜಾತಿನೀತಿಗಳೆಲ್ಲ ಒಂದಾಗಿಪಾತಕದಿ ಮನವೆರಗಿ ಮೋಹಿಸುತಮಾತಾಪಿತೃ ಗುರು ದೈವ ದ್ರೋಹದಿಭೂತಳವು ನಡ ನಡುಗುತಿಹುದು 2 ಬಿನ್ನಣ ಮಾತುಗಳು ಮತ್ತೆ ಮತ್ತೆಘನ್ನ ಮತ್ಸರ ಕ್ರೋಧಗಳುಅನ್ಯಾಯದಿಂದ ಅರ್ಥವ ಗಳಿಸುವರುತನ್ನ ಕಾಂತನ ಬಿಟ್ಟು ಸ್ತ್ರೀಯರುಅನ್ಯರಿಗೆ ಮನವೆರಗಿ ಮೋಹಿಪರುಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-ಸನ್ನ ಶ್ರೀ ನೆಲೆಯಾದಿಕೇಶವನೆ 3
--------------
ಕನಕದಾಸ
ಕಾಯವಿದು ನಿತ್ಯವೆಂದು ನೆಚ್ಚಬೇಡ ಮಾಯಾಕಾರ್ಯನಾಗಿ ಮೆರೆವುದಿದು ತಿಳಿದುನೋಡಾಕಾಯವಳಿವ ಮುನ್ನ ಹರಿಯ ಕೃಪೆಯ ಜೋಡ ತೋಡುನಾಯಬಾಯತುತ್ತ ನಂಬಿ ಬೆರೆಯ ಬೇಡ ಪಮಾತಾಪಿತೃರೇತಸ್ಸಿಂದ ಪತನವಾಗಿ ಪಂಚಭೂತಕಾರ್ಯದಿಂದ ಸ್ಥೂಲಾಕಾರವಾಗಿರೇತಸ್ಸು ರಕ್ತಗಳಾರು ಕೋಶವಾಗಿ ಕರ್ಮಜಾತಕಾಯ ಹೀಗೆ ತೋರುತಿಪ್ಪುದಾಗಿ 1ಹುಟ್ಟಿ ಬೆಳೆದು ನಲಿದು ಮುಪ್ಪಿನಿಂದ ಕ್ಷೈಸಿ ಕಡೆಗೆನಷ್ಡವಾಗಿ ಹೋಗಿ ಮಣ್ಣಿನೊಳಗೆ ಬೆರಸಿಇಷ್ಟೂ ಪರಿಯೊಳಾರು ವಿಕಾರವ ತೋರಿಸಿ ವಂದಿಷ್ಟೂ ಫಲವಿಲ್ಲದಂತೆ ುದಕೆ ಭ್ರಮಿಸಿ 2ಕಾಲಕರ್ಮ ಪಂಚಭೂತ ಮಿಳಿತವಾಗಿ ಇದಕೆಮೂಲವಾದ ಕರ್ಮವೆ ಪ್ರಧಾನವಾಗಿಢಾಳಿಸುವಾತ್ಮನ ತೇಜಾಧಾರವಾಗಿ ಕರ್ಮತೇಲಲಾಗಿ ದೀಪದಂತೆ ಪೋಪುದಾಗಿ 3ಬತ್ತಿಯನ್ನು ಎಣ್ಣೆಮುಗಿವ ಸಮಯಕಾಗಿ ಎಣ್ಣೆಯೂಮತ್ತೆ ತಂದು ತುಂಬೆ ದೀಪ ಪೋಗದಾಗಿಇತ್ತೆರದ ಕರ್ಮದಿಂದ ಚಕ್ರವಾಗಿ ಜನ್ಮಮೃತ್ಯುಗಳೀ ದೇಹಕ್ಕವಧಿುಲ್ಲವಾಗಿ 4ತೈಲಮಿಶ್ರವರ್ತಿಯಗ್ನಿ ಸಮ್ಮೇಳದಿಂದಾ ದೀಪಬಾಳಿಬೆಳಗುವುದು ತೈಲದಾಧಾರದಿಂದಾತೈಲಮುಗಿಯೆ ದೀಪ ಕೆಟ್ಟು ಹೋಹ ಛಂದದಂತೆಕೇಳು ದೇಹವೀಪರಿಯೊಳಿಹುದರಿಂದಾ 5ಹುಟ್ಟಿದಲ್ಲಿ ಸೂತಕವು ಹೊಂದಿದಲ್ಲಿ ಸೂತಕವುಮುಟ್ಟಿವಸ್ತುಗಳುಚ್ಚಿಷ್ಟಂಗಳಹವೂನಟ್ಟನಡುವೆ ಬಂದದೆಂದು ಶಿಷ್ಟರಿದ ಮನ್ನಿಸರುನಷ್ಟವಾಗಿ ಕಡೆಗೆ ತಾನು ಹೋಹ ದೇಹವೂ 6ತಾನು ಬಂದ ಬಗೆಯು ತನಗೆ ತಿಳಿಯದಿದ್ದರೂ ನಿನ್ನಸೂನು ಬಂದ ಬಗೆಯ ನೋಡಿ ತಿಳಿದುಕೊಂಡಾರುಹೀನನಾದ ಕಾಯವಭಿಮಾನಿಸದಿರು ಮುಂದೆಶ್ರೀನಾಥನ ಪದವ ಭಜಿಸಿ ಸುಖದಿಂದಿರುತಿರು 7ಮನವೆ ಮಿಥ್ಯದೇಹದಭಿಮಾನವೇತಕೆ ಬಹುಜನುಮ ಜನುಮದಲ್ಲಿ ದುಃಖದಗೆ ನೂಕೆಕೊನೆಗೂ ಹೀಗೆ ಬಂಧವನ್ನು ಕೊಡುವದಕ್ಕೆ ಮಚ್ಚಿಜಿನುಗುವಿರಿಕೆಯೇನು ಇನ್ನೂ ಬಿಡದೆ ಬಯಕೆ 8ಘೋರರೂಪಾಪಾರಸಂಸಾರಾಂಬುಧಿಯನ್ನೂಮೀರಲೇರು ವೆಂಕಟೇಶನಾಮನಾವೆಯನ್ನುಧೀರಗುರು ವಾಸುದೇವರಂಘ್ರಿಯನ್ನು ಬೇಗಸಾರುವ ವಿವೇಕತನವಂದು ಚೆನ್ನೂ 9ಕಂ|| ಜೀವನು ವಿರತಿಯ ಸಾಧಿಪಭಾವಧಿ ಮನದೊಡನೆ ಕಾಯವ ನೆಚ್ಚದಿರೆನ್ನುತಕೈವಲ್ಯದ ಪಥವ ಪೇಳಲುಜೀವನೊಳಾಡಿದುದು ಕಾಯವಚ್ಚರಿಯೆನ್ನಲೂ
--------------
ತಿಮ್ಮಪ್ಪದಾಸರು
ಕೆಡಬ್ಯಾಡೆಲೊ ಪ್ರಾಣಿ ಕೆಡಬ್ಯಾಡಾ ನಮ್ಮ ಕಡಲಶಯನನ ಭಜನೆ ಬಿಡಬ್ಯಾಡಾ ಪ ಪರನಿಂದೆ ಮಾಡಿ ಕೆಡಬ್ಯಾಡಾ ನನ್ನ ಸರಿಯಾರಿಲ್ಲೆಂದು ಮೆರೆಯ ಬ್ಯಾಡಾ ಪರಹೀನತಾ ಮಾಡಿ ನೀ ಕೆಡಬ್ಯಾಡಾ ಶ್ರೀ ಹರಿ ಸರ್ವೋತ್ತಮನೆನದೆ ಕೆಡಬ್ಯಾಡಾ 1 ಪರದ್ರವ್ಯವನಪಹರಿಸಲಿ ಬ್ಯಾಡಾ ದಿವ್ಯ ಪರಸತಿಯರ ಮೋಹಕ್ಕೊಳಗಾಗ ಬ್ಯಾಡಾ ದುರಿತ ಕಾರ್ಯಕೆ ಮನಕೊಡಬ್ಯಾಡಾ ಒಳ್ಳೆ ಪರ ಉಪಕಾರ ಮಾಡದೇ ಕೆಡಬ್ಯಾಡಾ 2 ಮಾತಾಪಿತರ ಸೇವೆ ಬಿಡಬ್ಯಾಡಾ ಯಮ ದೂತರಂದದಿ ಅವರನು ಕಾಡಬ್ಯಾಡಾ ಕೆಟ್ಟ ಮಾರ್ಗವ ಹಿಡಿದು ಹೋಗಬ್ಯಾಡಾ ನಿನ್ನ ಸತಿಸಂತರಾಮೋಹಕ್ಕೊಳಗಾಗಬ್ಯಾಡಾ 3 ದುಷ್ಟ ಮಾತುಗಳಾಡಬ್ಯಾಡಾ ನೀನು ಕಳ್ಳರ ಸಹವಾಸ ಮಾಡಲಿ ಬ್ಯಾಡಾ ಒಳ್ಳೆತನವ ಬಿಡಬ್ಯಾಡಾ ನಮ್ಮ ಫುಲ್ಲನಾಭನ ದಾಸನಾಗದಿರಬ್ಯಾಡಾ 4 ಸತ್ಯ ಮಾತಾಡದೇ ಕೆಡಬ್ಯಾಡಾ ಸರ್ವೋತ್ತಮ ಹನುಮೇಶ ವಿಠಲನ ನಾಮಾ ಪಾದ ಬಿಡಬ್ಯಾಡಾ ಒಳ್ಳೆ ಉತ್ತಮ ಪದಕೆ ವೈದಿಡುವನೋ ಮೂಢಾ 5
--------------
ಹನುಮೇಶವಿಠಲ
ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ. ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ ಜ್ಞಾತಿ ಬಾಂಧವರ ಮತ್ಸರ ಮರೆವೆ ಮಾತಾಪಿತರುಗಳ ಸೇವೆಗೈವೆ ಈ ತನು ನಿನ್ನ ಚರಣಕರ್ಪಿಸಿರುವೆ 1 ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ ಮಾಧವ ನಿನ ನಾಮವೆಂದಿಗೂ ಮರೆಯೆ ವೇದಬಾಹಿರರೊಡನಾಡಿ ಮೆರೆಯೆ ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2 ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ ಜ್ಞಾನ ಮಾತುರವಿತ್ತು ಕಾಯಬೇಕಲ್ಲ ನೀ ನನ್ನ ಸಲಹೊ ಲಕ್ಷ್ಮೀ ನಲ್ಲ ಶ್ರೀನಿವಾಸ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ತೊಲಗು ನೀ ತೊಲಗಿನ್ನು ಅಭಿಮಾನವೆಅಲೆಬಡಿಸದಿರೆನ್ನನೂ ಹಲವು ಜನರಕಾಲಕೆಳಗೆ ನಿಲ್ಲಿಸಿಯನ್ನ ಹೊಲೆಗೆಲಸವ ಮಾಡಲೆಳಸಿ ನೆಗ್ಗಿದೆಯಲ್ಲ ಪಸತಿಸುತ ಪೋಷಣೆಯು ಮುಖ್ಯವು ಮಾತಾಪಿತೃಗಳಾರಾಧನೆಯು ಬಳಗ ಬಂಧು ತತಿಗಳ ಮನ್ನಣೆಯು ಕುಲ ಜಾತಿ ದೇವತೆಯ ಪೂಜಿಪ ಹಬ್ಬವು ಬಿಡಕೂಡದುವ್ರತ ಉಪವಾಸವಾರತಿಯಕ್ಷತೆಯು ಮುಂಜಿಯುಸುತೆಗೆ ಮದುವೆಯೆಂದು ಮತಿಗೆಡಿಸಿದೆಯಲ್ಲ 1 ಅರೆಘಳಿಗೆಯು ನಿಲ್ಲಲು ವೇಳೆಯ ಕೊಡದೆರಗಿಸಿ 'ಷಯದೊಳು ನಾನಾ ಬಗೆಹರುಬಿಗೆ ಹರುಸಲು ಮನವನೀಕೊರಗಿಸಿ ಕುಣಿಸುತಲು ಒಂದೇ ಕ್ಷಣಹರಿನಾಮ ಸ್ಮರಣೆಗೆ ತೆರಹುದೋರಿಸದಾಯುಹರಿದು ಪೋಗುವ ಹಾಗೆ ಕರಗಿಸಿದುದೆ ಸಾಕು 2ಶ್ರವಣಕೆ ಮನ'ತ್ತೆಯಾ ನಾಮ ಸ್ಮøತಿ ಸ'ಯ ಸೇ'ಸಬಿಟ್ಟೆಯ ಸಜ್ಜನರೊಳೊಂದುವ ದಾರಿಯ [ತೋರಿ]ದೆಯ ಎಂದಾದರು ಶಿವಸೇವೆಗಳ ತಂದೆಯ 'ೀಗಾಗುವ ಹವಣನರಿಯದೆ ಸಂಗವ ಮಾಡಿ ನಿನ್ನೊಳಗ'ವೇಕವನು ಪಡೆದವನಾದೆನಯ್ಯಯ್ಯೊ 3ಕಂಡವರೊಡವೆಯನು ತಂದು ಕರೆದು'ಂಡು ಬಳಗವನ್ನು ಮನ್ನಿಸಿಯವರ್ಕೊಂಡಾಡೆ ಹರುಷವನು ತೋರಿಸಿ ಬಹಭಂಡಾಟನಡತೆಯನು ಕರೆಸಿಯನ್ನಗುಂಡಿಗೆ ನೂಕಿಸೆ ಕಂಡೆ ನಿನ್ನಾಟವಮೊಂಡಮುಂಡೇದೆನ್ನೀ ಕೂಗಕೇಳಿ ಬೇಗ 4ಶ್ರೌತ ಸ್ಮಾರ್ತದ ಬಟ್ಟೆಯ ಹೊಂದುವರೆ ನೀನೋತು ಮಾರ್ಗವ ತೊಟ್ಟೆಯ ಅನ್ಯಾಯದ ರೀತಿಯ ನೀ ಬಿಟ್ಟೆಯ ನರಕಬಪ್ಪ ಭೀತಿಯ ನೀತೊಟ್ಟೆಯ ಯೇನೆನ್ನದೆಲೆಕಾತರಿಸುತ ಕಾಮಕಾತು ಕ್ರೋಧವ ಮಾಡಿಮಾತಿಗಾದರು ಒಮ್ಮೆ ಸೋತವನಾದೆಯ 5ಕಲಹವ ಜನರೊಳಗೆ ಗಂಟಿಕ್ಕಿತುತೊಲಗಿಸಿ ಬಯಲೊಳಗೆ ನಿಲ್ಲಿಸಿಯೆನ್ನಹಲವು ಬಗೆಯ ಮಾತಿಗೆ ಗುರಿಯ ಮಾಡಿಬಳಲಿ ಬಾಡುವ ರೀತಿಗೆ ಕಂಗೆಡಿಸಿದೆಕಾಲದೊಳು ಧನದೊಳು ಬಲದೊಳು ಛಲದೊಳುನೆಲೆಗೊಂಡು ನೀಯೆನ್ನ ಥಳಿಸಿದುದೇ ಸಾಕು 6ಅರಿಯದಾದೆನು ನಿನ್ನನು ಅದರಿನಿಂದಹುರಿದೆ ನೀನೆನ್ನುವನು ಚಿಕ್ಕನಾಗಪುರದೊಳಗಜ್ಞರನು ರಕ್ಷಿಸಲಾಗಿಗುರುವಾಸುದೇವಾರ್ಯನು ನೆಲಸಿಹನುಮರೆಯೊಕ್ಕೆರಗಿ ನಿನ್ನ ಪರಿಯ ಪೇಳಲು ಜ್ಞಾನದುರಿಯೊಳು ದ'ಪನೆಚ್ಚರ ನಿಲಬೇಡಿನ್ನು 7
--------------
ವೆಂಕಟದಾಸರು
ನಂದನಂದನ ಅರವಿಂದದಳಾಕ್ಷನೆ ವಂದಿಸುವೆ ಪಾದಾರವಿಂದಗಳಿÀಗೀಗ ಪ ಪದುಮನಾಭನೆ ನಿನ್ನ ಪಾದಭಕುತಿಯೊಳಿಟ್ಟು ಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆ ಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾ ಕಾಲ 1 ಭೂತಳದೊಳು ಸಲಹೋ ದಾತರೆಲ್ಲಿಹರಿನ್ನು ಮಾತುಳಾಂತಕನೆ ಈ ಮಾತ ಪೇಳೆನಗೆ ಮಾತಾಪಿತರು ಮೊದಲಿಲ್ಲ ಇನ್ನನ್ಯರಿಲ್ಲ ಅ- ನಾಥನೆಂದೆನ್ನ ಕಯ್ಯ ಪ್ರೀತಿಂದೆ ಹಿಡಿ ಪ್ರಿಯ 2 ವಾಸುಕೀಶಯನನ ವರವ ಪಡೆಯದೆ ನಾ ಮೋಸಹೋದೆನೊ ಈ ಸಂಸಾರದೊಳು ಸಿಲ್ಕಿ ಶ್ರೀಶ ನೀ ಸಲಹೊ ಭೀಮೇಶ ಕೃಷ್ಣನೆ ಎನ್ನ ಘಾಸಿ ಮಾಡದೆ ಹೃಷಿಕೇಶ ಕರುಣದಿಂದ 3
--------------
ಹರಪನಹಳ್ಳಿಭೀಮವ್ವ
ನಿನ್ನನೆ ನಂಬಿದೆ ನೀರಜನಯನ ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ 1 ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ 2 ನಿನ್ನ ನಾಮವೆ ಎನಗೆ ಅಮೃತವೆಂಬೆ ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ ನೀನೆ ಎನಗೆ ಪರದೈವಯೆಂಬೆ 3
--------------
ರಾಮದಾಸರು
ಪಂಡರಿನಾಥ ಪಾವನ ಸುಚರಿತ ಪ ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತಅ.ಪ. ಮಾತಾಪಿತನು ಭ್ರಾತನು ಹಿತನು ನಾಥನು ಜ್ಞಾತನು ಸಂತಾರಕನು ಮತಿಯೂ ನೀನೆ ಗತಿಯೂ ನೀನೆ ಕಾತರ ವ್ಯಾತರದು ಬೀತುದು ದೇವ 1 ತನುಮನಧನಗಳ ನಿನಗರ್ಪಿಸಿದೆ ಎನಿತಾದರು ಇಡು ಅನುಮಾನಿಸಿದೆ ಜನರ ನಿಂದನೆ ಮೇಣಾನಂದನೆ ಮಾನ ಅವಮಾನ ನಿನ್ನದು ದೇವ 2 ಚಿಂತೆಯ ಮರೆದೆ ಭ್ರಾಂತಿಯ ತೊರೆದೆ ಸಂತರ ಚರಣವನಾಂತೆ ದೃಢದೆ ಸ್ವಾಂತವು ಮೋದವಾಂತುದು ಶ್ರೀದ ಸಂತತ ಶ್ರೀಕಾಂತ ನಿಶ್ಚಿತ ದೇವ 3
--------------
ಲಕ್ಷ್ಮೀನಾರಯಣರಾಯರು