ಒಟ್ಟು 33 ಕಡೆಗಳಲ್ಲಿ , 14 ದಾಸರು , 30 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು 1 ಜರೆಯಸುತನ ಬಾಧೆಯು ಘನವಾಗುತಿರಲು ಜಲದೊಳು ದ್ವಾರಕಾಪುರವ ನಿರ್ಮಿಸಿದ 2 ಯದುನಂದನ ತನ್ನಗ್ರಜ ಬಲರಾಮನ ಕೂಡ ಮುದದಿಂದಾವಾಸ ಯಾದವರ ಸಹಿತಾಗಿ3 ಇರುತಿರೆ ರುಕುಮ ತನ್ನನುಜೆ ಸಹಿತಾಗಿ ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4 ಅಕ್ಕರದನುಜೆ ರುಕ್ಮಿಣೀದೇವಿಗಿನ್ನು ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5 ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6 ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ ಘನಮಹಿಮಗೆ ಓಲೆ ಬರೆದಳು ಲಿಖಿತ 7 ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8 ಎಂದೆಂದಿಗೆನ ಕೂಡಾನಂದವ ಬಟ್ಟು ಇಂದೆ ಕೈಬಿಟ್ಟು ದೂರಿಂದ ನೋಡುವರೆ 9 ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10 ಸರ್ವರ್ವಂದಿತ ನಿನ್ನ ಅರಮನೆದ್ವಾರ ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11 ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12 ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13 ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14 ಪಾದ ಉರಗ ಮೆಟ್ಟಿದ ಪಾದ ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15 ಬರೆದ ಓಲೆಗೆ ಹಚ್ಚಿ ಅರೆದರಿಷಿಣವ ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16 ಜಗದೀಶಗೆ ಪತ್ರವ ಜಾಣೆ ತಾ ಬರೆದು ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17 ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18 ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19 ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20 ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ- ಕಂಚುಕ ತೊಟ್ಟು 21 ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22 ಹಾರ ಪದಕದ ಮಧ್ಯ ಮೇಲಾದೇಕಾವಳಿಯು ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23 ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24 ಝಗಝಗಿಸುತ ಬಂದಳು ಜಗದ ಮೋಹಿನಿಯು ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25 ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26 ಸುತ್ತ ಮುತ್ತೈದೇರು ಕತ್ತಿಕೈ ಭಟರು ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27 ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28 ಹಿರಿಯ ಮುತ್ತೈದೇರಿಗೆ ಮರದ ಬಾಗಿನವ ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29 ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30 ಮಂಗಳಗೌರಿಯೆದುರಿಗೆ ಮುತ್ತೈದೇರು ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31 ಮಂಗಳಾಂಗನು ನಿನ್ನ ಪತಿಯಾಗಲೆಂದು ಮಂಗಳಸೂತ್ರ ಬಂಧನ ಮಾಡಲು ನಗುತ 32 ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ- ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33 ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ- ಹರನ ಶ್ರೀಧರನ ಕೊಡುವೆನೀ ದೇವರನು 34 ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ- ವತ್ಸಲ ಬಂದನೆಂದೆಚ್ಚರಿಸಿದರು35 ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36 ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ ರುಕ್ಮಿಣಿಯ ಸ್ವೀಕಾರ ಮಾಡಿದನು 37 ರಥವು ಮುಂದಕೆ ಸಾಗೆ ಪಥವು ತೋರದಲೆ ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38 ಬಂದ ರುಕುಮನ ಗಡ್ಡ ಮಂಡಿ ಸವರುತಲಿ ಬಂಧನ ರಥಕೆ ಮಾಡಿದ ನಂದಸುತನು 39 ವಾರೆನೋಟದಿ ನೋಡಿ ಮೋರೆ ತಗ್ಗಿಸಿದ ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40 ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41 ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ಆ) ಶ್ರೀಕೃಷ್ಣ ಲೀಲೆ 25 ಇಂದಿನಿರುಳಿನ ಕನಸಿನಲ್ಲಿ ಬಂದುಮುಂದೆ ನಿಂದುದ ಕಂಡೆನೆ ಗೋವಳನ ಪ ಅಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆಜಾಣನಂಗಜನ ಪಿತನ ಕೈಯ ವೇಣುಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆವಾಣಿಯ ರಚನೆ ಎಲ್ಲಿಯು ಈ ಗೋವಳನಾ1 ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳಗೋಪಿಯರ ಮೇಲೆ ಕಡೆಗಣ್ಣಚೆಲ್ಲುತೊಯ್ಯನೆ ನಡೆದ ಗೋವಳನ 2 ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿತುತ್ತುರೂ ತೂರು ತೂರೆನುತಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿಮೊತ್ತದ ಗೋಪಿಯರನೆಲ್ಲ ಗೋವಳನ 3 ಎಸಳು ಕಂಗಳ ಢಾಳ ಶಶಿ ನೊಸಲ ತಿಲಕಎಸೆವ ಬಿಂಬಾಧರದಪೊಸ ಮುತ್ತಿನೋಲೆ ಮೂಗುತಿ ಹೊನ್ನುಡಿ ಘಂಟೆಎಸೆವ ನೂಪುರ ಹಾಹೆಯ ಗೋವಳನ 4 ಉಂಗುಟದಲಿ ಗಂಗೆಯಂಗಾಲಲವುಂಕೆತುಂಗವಕ್ಷದ ಲಕ್ಷುಮೀಮಂಗಳ ಮಹಿಮ ಭುಜಂಗಶಯನ ಸಿರಿರಂಗವಿಠ್ಠಲ ನೆರೆದ ಗೋವÀಳನ 5
--------------
ಶ್ರೀಪಾದರಾಜರು
ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ಪ ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ 1 ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ 2 ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ 3 ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ 4 ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ5
--------------
ಹರಪನಹಳ್ಳಿಭೀಮವ್ವ
ಆಲದೆಲೆಯ ಮ್ಯಾಲೆ ಮಲಗಿದ್ದಾದಿಕೇಶವ(ನ) ನೋಡ ಬನ್ನಿರಾಲದೆಲೆಯ ಮ್ಯಾಲೆ ಕೃಷ್ಣ ಬಾಲರೂಪ ಧರಿಸಿ ಅಂಧಕಾರ ಪ್ರಳಯ ಜಲದ ಒಳಗೊಂದಾಲದೆಲೆÉಯ ಮ್ಯಾಲೆ ಕೃಷ್ಣ ಪ ಪ್ರಳಯ ಕಾಲದಲ್ಲೆ ಹರಿಯು ಸರ್ವ ಜೀವರನೆಲ್ಲ ತನ್ನ ಉದರದೊಳಗಿಂಬಿಟ್ಟುಕೊಂಡು ಛಲವ ಮಾಡದಂತೆ ರಂಗ ಬೆರಳು ಬಾಯೊಳಗಿಟ್ಟು ಚೀಪುತ ಹರಳು ಮಾಣಿಕ್ಯದರಳೆಲೆ ಮಾಗಾಯಿ ಕೌಸ್ತುಭ ಕಟಿಸೂತ್ರ ಕರುಣ ಸಾಗರಗಿನ್ನು ವರ ವೈಕುಂಠವಾಸ ಒಂದಾಲದೆಲೆಯ ಮ್ಯಾಲೆ 1 ಅಷ್ಟು ಜೀವರನೆಲ್ಲ ತನ್ನ ಹೊಟ್ಟೆಯೊಳಗಿಂ ಬಿಟ್ಟು ಕೊಂಡು ಸೃಷ್ಟಿ ಲಯಕೆ ಕರ್ತನಾದ ಶ್ರೇಷ್ಠ ಸುಂದರಾಂಗ ತನ್ಹೆಬ್ಬೆಟ್ಟು ಬಾಯೊಳ ಗಿಟ್ಟು ಚೀಪುತ ವಕ್ಷಸ್ಥಳದಿ ಹೆಚ್ಚಿನ ಶ್ರೀವತ್ಸ ತೋರುತ ಉತ್ತಮ ವೈಜ(ಯಂ)ತಿ ವಜ್ರ ಕೆತ್ತಿದ ಕಿರೀಟ ಲಕ್ಷ್ಮೀಚಿತ್ತ ಚೋರನಾದ ಪರಮಾತ್ಮ ಪರಮ ಹರುಷದಿಂ ದ್ವೊಂದಾಲದೆಲೆಯ ಮ್ಯಾಲೆ 2 ಗಂಧ ಕಸ್ತೂರಿ ಪರಿಮಳ ಸುಗಂಧವಾದ ಕುಸುಮ ಕೆಲದಿ ಹೊಂದಿ ಕಟ್ಟಿದ ತುಳಸಿಮಾಲಿಕಿಂದೆ ಪರಮ ಶೋಭಿತವಾದ ಬಂದಿ ಕಂಕಣ ಬಾಹುಪ್ಪುರಿಗಳು ದುಂಡುಮುತ್ತಿನ ಕೂದಲ ಕಾಂತಿ ಕದಪಿಲೆಸೆಯಲು ಅಂದಿಗೆ ಪಾಗಡ ಗೆಜ್ಜೆ ಚೆಂದವಾದ ನಾದಗಳಿಂದ ಇಂದುಕೋಟಿ ರವಿಯ ತೇಜ ಮಂದಹಾಸ ಮುಖದ ಹರಿ ಒಂದಾಲದೆಲೆಯ ಮ್ಯಾಲೆ 3 ಥಳಥಳಿಸುವಂತ್ಹೊಳೆವೊ ಚಕ್ರ ಧವಳವರಣ ಶಂಖ ಕರದಿ ಹವಳದುಟಿಯು ಹರಿಯ ಪದ್ಮ ದಳಗಳಂತಕ್ಷಿಗಳ ಚೆಲುವ ಅರುಣನಂತೆ ಚರಣ ಕರದಲ್ಲಿ ಒತ್ತುವೊ ಸಿರಿಯ ಪರಮಪುರುಷ ನೋಡಿ ಸರಸದಿ ಜರ ಪೀತಾಂಬರ ನಾಭಿಕಮಲಕ್ಕೊಲೆವೊ ಒಡ್ಯಾಣವನೆ ಇಟ್ಟು ಹಲವು ಸೂರ್ಯರಂತೆ ಲಕ್ಷ್ಮೀರಮಣ ಶ್ಯಾಮವರಣ ಹರಿ ಒಂದಾಲದೆಲೆಯ ಮ್ಯಾಲೆ 4 ಅಳಕÀನಂದನ ಪಿತನು ತಾ ಘ- ನೋದಕÀದೊಳು ತಾ ರಂಗ ಚಾಮರ ಎಣಿಕಿಲ್ಲದೆ ಮಾ ಣಿಕ್ಯದಾಭರಣ ಫಣಿಪಮಂಚಶಯನ ನೀಲ ಕನಕರತ್ನ ಬಿಗಿದ್ಹಾಸಿಕೆಯಲಿ ಪಂಚಶರನ ಜನಕ ಜಗವ ನಿಟ್ಟು ತನ್ನಲ್ಲಿ ಅಳಕಗೂದಲು ಚೆಂಡಿಕೆಲ್ಲೆ ಅರಳುಮಲ್ಲಿಗೆ ಸುತ್ತಿಹರಿಗೆ ಝಳಕು ಮಿಂಚಿನಂತೆ ಜಗಕÉ ಬೆಳಕಿನÀಲಿ ಭೀಮೇಶ ಕೃ ಷ್ಣೊಂದಾಲದೆಲೆಯ ಮ್ಯಾಲೆ 5
--------------
ಹರಪನಹಳ್ಳಿಭೀಮವ್ವ
ಆವಿರ್ಭವಿಸಿದಳಾಗ ಜಗನ್ಮಾತೆ | ಅಖಿಲಾಂಡ ವಿಖ್ಯಾತೆ ಪ ದೇವದಾನವರು ತಾವೊಡಗೂಡುತ ಲಾವುದಧಿಯಮದಿಸÀುತ್ತಿರಲದರೊಳು ಅ.ಪ ಪೊಳೆವ ಬೆರಳುಂಗುರ ಶೋಭಿತಪಾದ | ಧರಿಸಿದ ಸುರುಚಿರ ರುಳಿಯು ಅಂದಿಗೆ ಗೆಜ್ಜೆಯ ನಾದ | ಕಟಿಯಲಿ ನೋಡೆ ಥಳಥಳವಾದ ಶೃಂಗಾರವಾದ | ಒಡ್ಯಾಣದ ಮೋದ ದಲಿ ತಾನಿಟ್ಟಿಹ ಚಲುವಿಕೆಯಿಂದಲಿ ಸಲೆ ಬೆಳಗುತಲಿ ನಳಿನಲೋಚನೊಳು 1 ಕರಿರಾಜನ ಕರದಂತೆ ಒಪ್ಪುವ ಕರವು | ಬೆರಳಲಿ ನೋಡೆ ಪರಿಶೋಭಿಸುತಿಹ ಮಾಣಿಕ್ಯದುಂಗುರವು | ರಾರಾಜಿಸುವ ಹರಡಿ ಕಂಕಣಗಳು ಬಲು ಸುರುಚಿರವು | ಪರಿಕಿಸೆ ಸುಂದರವು ಪರಿ ಸರಗಳು ಕೊರಳೊಳು ಶೋಭಿಸೆ ತರಣಿ ಕಾಂತಿಯನು ತಿರಸ್ಕರಿಸುತ್ತಲಿ 2 ಮಂದಸ್ಮಿತ ಪರಿಶೋಭಿತ ಶುಭವದನ | ಆನಂದಸದನ ಕುಂದಕುಟ್ಮಲದಂತಿಹ ಸಮರದನ | ಸಂತಾಪಾರ್ದನ ಬಂಧುರ ಚಂಪಕ ನಾಸಿಕದ ಹದನ | ಏಂ ಪೇಳಲಿ ಅದನ ಮಂದರಾದ್ರಿಧರ ಕರಿಗಿರೀಶನ ಎಂದೆಂದಗಲದ ಸುಂದರಾಬ್ಜಮುಖಿ3
--------------
ವರಾವಾಣಿರಾಮರಾಯದಾಸರು
ಇಲ್ಲಿ ಬಾ ಇಲ್ಲಿ ಬಾ ಮೆಲ್ಲ ಮೆಲ್ಲನೆ ಹೆಜ್ಜೆಯನಿಕ್ಕುತ ಪುಲ್ಲನಾಭ ಗೋಪಾಲಕೃಷ್ಣ ಗೊಲ್ಲರೊಡಗೂಡಿ ಪ. ಪಾಲು ಮೊಸರು ಬೆಣ್ಣೆ ಕೊಡುವೆ ಬಾ ಗೋಲಿ ಗುಂಡು ಗಜಗನೀಡುವೆ ಬಾ ಆಲಯ ಪೊಕ್ಕು ಧೂಳಿ ಮಾಡಲು ಬ್ಯಾಡ 1 ಅಂಗಳದೊಳು ಬಾ ಬೆಳದಿಂಗ ತೋರುವೆನು ರಂಗು ಮಾಣಿಕ್ಯದುಂಗರ ನಿಡುವೆನು ಮಂಗಳಾಂಗನೆ 2 ಮೃದನಯ್ಯನೆ ಬಾ ಸುದತಿಯರೊಡಗೂಡಿ ಬಾ ಸಡಗರದಿ ನೀ ಬಾ ಕಾಳೀಮರ್ಧನಕೃಷ್ಣ ಬಾ 3
--------------
ಕಳಸದ ಸುಂದರಮ್ಮ
ಈ ಧರಣಿಯೊಳ್ ಹದಿನಾರು ಸಾವಿರ ಮಂದಿ ಆಳುತ ದ್ವಾರಕೆಯಲ್ಲಿ ವಿನೋದದಿ ಕುಳಿತಿದ್ದ ಹರಿಯು 1 ಅಂಬುಜೋದ್ಭವನ ಅಂಕದಲುದಿಸಿದ ಸುತ ಚೆಂದ ಚೆಂದ ವೀಣೆ ಪಿಡಿದು ಕಂದರ್ಪಪಿತ (ನಲ್ಲಿಗೆ) ನಲಿನಲಿದಾಡುತ ಬಂದ ನಾರಂದ ಹರುಷದಲಿ2 ಬಂದ ನಾರಂದನ ಕಂಡು ಕಮಲನಾಭ ಚೆಂದದಿಂದಲಿ ಅಘ್ರ್ಯ ಪಾದಪೂಜೆಯ ಮಾಡಿ ನಾ- ರಂದಗೆ ಎರಗಿದನಾಗ3 ದೇವಾಧಿದೇವನೆ ದೇವಲೋಕದಿ ಸುತ್ತಿ ಈ ಪಾರಿಜಾತವ ತಂದೆ ದೇವಿ ರುಕ್ಮಿಣಿಗೀಗ ಮುಡಿಸೆಂದು ನಾರಂದ ಸ್ವಾಮಿಯ ಚರಣಕ್ಕರ್ಪಿಸಿದ 4 ತಕ್ಷಣದಿ ಜಗನ್ಮಾತೆ ಮಾಲಕ್ಷುಮಿ ಸಾಕ್ಷಾತ ಶ್ರೀನಾರಾಯಣನು ವಕ್ಷಸ್ಥಳದಲಿ ಹೊಂದಿರುವ ರುಕ್ಮಿಣಿಯನು ಸ್ತೋತ್ರ ಮಾಡಿದನು ನಾರದನು 5 ಕಡಲಶಯನ ಕಡೆಗಣ್ಣ ನೋಟಗಳಿಂದ ಕಡುಮುದ್ದು ಸುರಿವೊ ರುಕ್ಮಿಣಿಯ ಬಡನಡುವಿನ ಭಾಮಿನಿರನ್ನೆ ಬಾರೆಂದು ತೊಡೆಯ ಮ್ಯಾಲಿಟ್ಟ ಶ್ರೀಕೃಷ್ಣ 6 ದುಂಡುಮಲ್ಲಿಗೆ ಗೊಂಡ್ಯ ಚೌರಿ ರಾಗಟೆ ಜಡೆ- ಅಂಗನೆ ರುಗ್ಮಿಯಾಲಿಂಗನೆ ಮಾಡುತ ರಂಗ ತಾ ಮುಡಿಸಿದ ಸತಿಗೆ 7 ಸರಿಸವತೇರ ಬಿಟ್ಟು ಸುರಪಾರಿಜಾತವ ಗರುವಿಕೆಯಿಂದ ನೀ ಮುಡಿದೆ ಹರದಿ ಸತ್ಯಭಾಮೆ ಕೇಳಿ ಮುನಿದರಿನ್ನು ಅರಿಯೆನು ನಾ ಇದಕೆ ಉಪಾಯ 8 ಗಾಡಿಕಾರನು ಕೃಷ್ಣ ಆಡುವೊ ಮಾತನು ಕೇಳಿ ರುಕ್ಮಿಣಿ ನಗುತಿರಲು ಓಡುತ ಬಂದು ನಾರದ ಸತ್ಯಭಾಮೆ- ಗಲ್ಲದ ವಾರ್ತೆಗಳರುಹಿದನು 9 ಅಲ್ಲಿಂದ ದೇವಲೋಕವ ಸುತ್ತಿ ತಂದೇನೆ ಚೆಲ್ವೆನಗೆ ತಕ್ಕ ಕುಸುಮ ಗೊಲ್ಲ ಕೃಷ್ಣನ ಕೈಯಲ್ಲಿ ಕೊಟ್ಟರೆ ತನ್ನ ನಲ್ಲೆ ರುಕ್ಮಿಣಿಗೆ ಮುಡಿಸಿದನು 10 ಕೇಳುತ ಭಾಮೆ ತಲ್ಲಣಿಸಿ ಕೋಪಗಳಿಂದ ಹೇಮಮಾಣಿಕ್ಯದ್ವಜ್ರಾಭರಣ ಹಾರ ಪದಕ ಕಠಾಣಿಮುತ್ತನೆ ಚೆಲ್ಲಿ ಭೂಮಿಲಿ ಬಿದ್ದೊ ್ಹರಳಿದಳು 11 ಮಲ್ಲಿಗೆ ದವನ ಕ್ಯಾದಿಗೆ ಶಾವಂತಿಗೆ ಬಿಟ್ಟು ಒಲ್ಲೆನೆಂದೊರೆಸಿ ಕಸ್ತೂರಿಯ ವಲ್ಲಭನೊಲ್ಲದೀ ಸೊಗಸ್ಯಾತಕೆನುತಲಿ ಗಲ್ಲದ್ವಿಳ್ಯವನುಗುಳಿದಳು 12 ಸರ್ಪನಂದದಿ ಉಸುರ್ಹಾಕುತ ಭಾಮೆ ತಾ ನೇತ್ರದಿ ಜಲವ ಸುರಿಸುತಲಿ ಸರ್ಪಶಯನನೊಲ್ಲದೀ ದೇಹವ್ಯಾಕೆಂದು ಪಟ್ಟೆ ಮಂಚದಲೊರಗಿದಳು 13 ನಿಂತು ನೋಡುತ ಸತ್ಯಭಾಮೆ ಮಾಡುವೊದು ಇ- ನ್ನೆಂತು ಮಾಡಲಿಯಿದಕೆಂದು ಅಂತರಂಗದಲಿ ಯೋಚನೆ ಮಾಡಿ ನಾರಂದ ಶ್ರೀ- ಕಾಂತನ ಮನೆಮಾರ್ಗ ಹಿಡಿದ 14 ತಿರುಗಿ ಬಂದ್ಹರಿಯ ಮುಂದರುಹಿದ ನಾರಂದ ತೊರೆವೋಳು ತನ್ನ ಪ್ರಾಣವನು ಮರುಗುತ ಸೊರಗಿ ಬಿದ್ದಿರುವೊ ಭಾಮೆಯ ನೋಡಿ ಕರುಣವಿಲ್ಲೇನೊ ಶ್ರೀ ಕೃಷ್ಣ 15 ಮುನಿಯ ಮಾತನು ಕೇಳಿ ಮುಗುಳು ನಗೆಯ ನಕ್ಕು ಪರಿ ಬವಣೆಗೆ ಒಳಗಾದೆ ಧರೆಯ ಒಳಗೆ ಇಬ್ಬರ್ಹೆಂಡರಾಳುವೋರಿನ್ನು ಪರಮ ಮೂರ್ಖರು ಅವರೆಂದ 16 ಹೊದ್ದ ಪೀತಾಂಬರ ಅಲೆಯುತ ಶ್ರೀಕೃಷ್ಣ ಹದ್ದನೇರದೆ ನಡೆಯುತಲಿ ಮುದ್ದು ರುಕ್ಮಿಣಿಯ ಮುಂದಕೆ ಕರೆದ್ಹೇಳದೆ ಎದ್ದು ಬಂದನು ಭಾಮೆಮನೆಗೆ 17 ಅರ್ಕನಂತ್ಹೊಳೆಯುತ ಹೊಕ್ಕ ತನ್ನರಮನೆ ಕಕ್ಕಬಿಕ್ಕ್ಯಾಗಿ ನೋಡುತಲಿ ದಿಕ್ಕು ದಿಕ್ಕಿಗೆ ಬಿದ್ದಾಭರಣವಾರಿಸಿ ರತ್ನ ದೆಕ್ಕಿಲೇ(?) ಬಂದು ತಾ ಕುಳಿತ 18 ಮಿಂಚು ಸೂರ್ಯಗೆ ಮಿಗಿಲಾಗಿದ್ದ ಮುಖ ಬಾಡಿ ಸಂಪಿಗೆ ಸರವ ಈಡ್ಯಾಡಿ ಚಿಂತೆಮಾಡುವರೆ ಚಿನ್ನದ ಗೊಂಬೆ ಏಳೆಂದು ಮಂಚದ ಮ್ಯಾಲೆ ತಾ ಕುಳಿತ 19 ಬೆವರಿದ್ದ ಮುಖವ ಮುಂಜೆರಗಿಲಿಂದೊರೆಸುತ ಹ- ರವಿದ ಹಾರ ಹಾಕುತಲಿ ಪರಮ ಪ್ರೀತಿಲಿ ತನ್ನ ಕರಗಳಿಂದ್ಹಿಡಿದೆತ್ತೆ- ನ್ನರಗಿಳಿ ಏಳೆಂದೆಬ್ಬಿಸಿದ 20 ಸಿಟ್ಟಿಲಿಂದೆದ್ದು ಶ್ರೀ ಕೃಷ್ಣನ ಒಳೆಯಿಕ್ಕೆ ಬಿಟ್ಟವರಾರು ಈಗೆನುತ ದೃಷ್ಟಿ ತೆಗೆದು ಕೋಟಿಸೂರ್ಯ ಪ್ರಕಾಶನ ಇ- ಕ್ಕದ್ಹಾಗೆವೆಯ ನೋಡಿದಳು 21 ಇಷ್ಟು ಕ್ರೋಧಗಳ್ಯಾತಕೀ ಚಾಡಿ ನಾರಂದ ಹಚ್ಚಿ ಹೋದನೆ ಕದನವನು <ಈಔಓಖಿ size=
--------------
ಹರಪನಹಳ್ಳಿಭೀಮವ್ವ
ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು ಕಂತುಪಿತ ಶ್ರೀಕೃಷ್ಣ ಮೂರುತಿಯಾ ಪ. ಅಂತರಂಗದಲಿ ನಿಂತು ಪೊರೆಯುವ ಏಕಾಂತ ಮೂರುತಿಯ ಕರುಣಾನಿಧಿಯಾ ಅ.ಪ. ಆಲದೆಲೆಯ ಮೇಲೆ ಮಲಗಿದ ಸಿಂಧು ನಲಿಯುತ ಕನಕನ ಕಿಂಡಿಯಲಿ ನಿಂದು ಒಲಿದು ವರಗಳನೀವ ಗುಣಸಿಂಧು 1 ಕಂಠದಲಿ ಮುತ್ತಿನಹಾರ ವಜ್ರದಂಗಿಯ ಅಲಂಕಾರ ಕಂಟೀಪದಕ ವಿಸ್ತಾರ ಕರದಲಿ ವಜ್ರದುಂಗೂರ ಸೊಂಟಪಟ್ಟಿಯ ಕಟ್ಟಿದಾ ಚಂದ ನಾಭೀ ಕಮಲದಾನಂದ 2 ಕಡೆಕಣ್ಣು ಕಂಗಳಾ ನೋಟ ಕಸ್ತೂರಿ ಲಲಾಟ ಕುಡಿಹುಬ್ಬುಗಳ ನೀಟಾ ವಜ್ರಮಾಣಿಕ್ಯದ ಕಿರೀಟ ಪಿಡಿದಿರುವ ಕಡಗೋಲು ಕರದಿ ರುಕ್ಮಿಣೀಶ ವಿಠಲ 3
--------------
ಗುಂಡಮ್ಮ
ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ ಕಳ್ಳರಿಗೆ ಕಳ್ಳನಂತೆ - ಬೆಳ್ಳಕ್ಕಿಯಂದದಿ ಡಂಭಅ ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ1 ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ 2 ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ 3
--------------
ಕನಕದಾಸ
ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ ಕೊಂಡು ಮುದ್ದಿಸಿದಳೆ ಯದುನಾಥನ್ನ ಪ ಪಾಲವಾರಿಧಿ ಮಧ್ಯದಲ್ಲಿ ಶ್ರೀದೇವಿ ಸಹಿತ್ವೊಂ ದಾಲದೆಲೆಯ ಮ್ಯಾಲಾಡುತಲಿ ಕಾಲಬೆರಳು ಕಟಬಾಯಲಿ ಚೀಪುವ ನೀಲವರ್ಣದಲಿ ತನ್ನ ಬಾಲನೆಂದೆನುತ 1 ಕೋಟಿ ಸೂರ್ಯದ ಕಾಂತಿ ಹರಣಮಾಡುವ ಮುಖ ಕಿ- ರೀಟ ಕೌಂಸ್ತುಭ ಮಣಿಯಾಭರಣ ಹಾಟಕಾಂಬರನುಟ್ಟ ನಾಟಕಧಾರಿ ಕಿ ಸಾರಥಿ ಪಕ್ಷಿರಾಟವಾಹನನ 2 ಚೆನ್ನವಾಗೀರೇಳು ಲೋಕವನು ತನ್ನುದರದೊಳಡಗಿಸಿ ಪನ್ನಂಗಶಾಯಿ ಪರಮಾತ್ಮನ್ನ ಚಿನ್ನ ಮಾಣಿಕ್ಯದ ತೊಟ್ಟಿಲೊಳಿಟ್ಟು ತೂಗುತ ಎನ್ನ ಕಂದ ನೀ ತೋಳನ್ನಾಡೆಂದೆನುತ 3 ಕಡಗ ಕಿರುಗೆಜ್ಜೆ ಚರಣದಿಂದಲಿ ನಡೆಯುತಲಿ ಬಂದು ದಧಿ- ಗಡಿಗೆ ತಾ ಒಡೆದನೆ ಕಡಗೋಲಿಂದ ಹಿಡಿದು ಕಟ್ಟಲು ಒರಳೆಳೆದ್ವಿಮಳಾರ್ಜುನ ಗಿಡವ ಕೆÀಡಹಿ ಮುಕ್ತಿಕೊಡುವ ಶ್ರೀ ಕೃಷ್ಣನ 4 ಭವ ಭಯ ನಾಶ ಮಾಡುವಾತ ಭುವ- ನೇಶ ಹದಿನಾಲ್ಕು ಲೋಕದ ವಾಸ ರಾಸಕ್ರೀಡೆಲಿ ವ್ರಜದ್ವನಿತೆಯರ ಸಂತೋಷಬಡಿಸಿದ ಭೀ- ಮೇಶ ಕೃಷ್ಣನ ಮುಖ5
--------------
ಹರಪನಹಳ್ಳಿಭೀಮವ್ವ
ಕಂಡೆ ಕನಸಿನಲಿ ಕಾರುಣ್ಯ ಮೂರುತಿ ಹರಿಯ ಪ ಪುಂಡರೀಕಾಕ್ಷ ಪುರುಷೋತ್ತಮನ ಸಿರಿಯ ಅ.ಪ ಚಂಡು ರನ್ನದ ತಾಯ್ತಿ ಮಲುಕು ಅರಳೆಲೆ ಹೊನ್ನಗೊಂಡೆಗಳ ಬಿಗಿದ ಶಿಖಿ ದಾರದೆಡೆಯದುಂಡು ಮಲ್ಲಿಗೆಯ ಪರಿಮಳವು ಘಮಘಮಿಪ ಅಳಿ-ವಿಂಡುಗಳ ಜರಿವಂಥ ಸುಳಿಗುರುಳಿನಿರವ1 ಸಿರಿ ನಾಮ ಕಸ್ತೂರಿ ತಿಲಕದಎಸೆವ ಕುಡಿ ಹುಬ್ಬುಗಳ ಕುಂಡಲದ ಕಾಂತಿಗಳದÉಸೆದೆಸೆಗೆ ಬೆಳಗುತಿಹ ವರದೀಪ್ತಿಗಳನು 2 ಕೆತ್ತನೆಯ ಪದಕೆ ಕೆಲಬಲಕೆ ಒಲಿದಾಡುತಿಹಮುತ್ತು ಮಾಣಿಕದ ಹುಲಿಯುಗುರು ಸರದ ಮಣಿ ಒತ್ತಿನಲಿ ಶಿರಿವತ್ಸ ವೈಯಾರದಿರವ 3 ತÉೂೀಳ ಬಳೆ ತಾಯ್ತಿ ಕಡಗ್ಹವಳ ಕಂಕಣವಾಕು ನೀಲ ಮಾಣಿಕ್ಯದ ಬೆರಳುಂಗುರಗಳ ಸಾಲು ಗಂಟೆಗಳ ರಂಜಿಸುವ ಕಾಂತಿಗಳ ಈ- ರೇಳು ಭುವನಗಳ ಧರಿಸಿದ ಉದರವನು 4 ಬಟ್ಟದೊಡೆಗಳಿಗೆ ಬಿಗಿದುಟ್ಟ ಚಲ್ಲಣ ಮೈಯ ತೊಟ್ಟ ಜರತಾರದಂಗಿಯ ಚರಣದಿ ಕಾಲ ಕಡಗಗಳ ದಟ್ಟಡಿಯನಿಡುತ ಬಹ ಪುಟ್ಟ ಗೋಪಾಲಕನ 5 ಬಾಲಕನು ಕರೆಯೆ ಬಹು ಕಂಬದಲಿ ಬಂದೊಡೆದು ಬಾಲಕನ ತರಿದು ಸಾಂದೀಪಗಿತ್ತ ಬಾಲೆ ಚೀರಿದರೆ ಅಕ್ಷಯವಿತ್ತ ದೇವಕಿಯ ಬಾಲಕನ ಬಹು ಬಗೆಯ ಲೀಲೆಗಳನೆಲ್ಲ 6 ಪೊಗಳಲೆನ್ನಳವಲ್ಲ ಪೊಸಬಗೆಯ ಮಹಿಮೆಗಳ ಅಘಹರನ ಅಗಣಿತದ ಗುಣ ಗಣಗಳ ನಿಗಮ ನಿಕರಕೆ ಮೈಯಗೊಡದ ಉಡುಪಿನ ಕೃಷ್ಣ ನೊಗುಮಿಗೆಯ ಉನ್ನತದ ವೈಯಾರಗಳನು 7
--------------
ವ್ಯಾಸರಾಯರು
ಕಡೆಗೋಲ ತಾರೆನ್ನ ಚಿನ್ನವೆ- ಮೊಸರೊಡೆದರೆ ಬೆಣ್ಣೆಬಾರದು, ಮುದ್ದುರಂಗ (ಮಗುವೆ ಪಾ) ಅಣ್ಣನ ಒಡಗೊಂಡು ಬಾರೈಯ-ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣದ ಸರವನ್ನು ಕೊರಳಲ್ಲಿ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ 1 ಪುಟ್ಟ ಬಚ್ಚಿಯ ತಂದು ನಿನ್ನಯ ಚಿನ್ನದತೊಟ್ಟಿಲ ಕಾಲಿಗೆ ಕಟ್ಟಿಸುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ ಮುತ್ತಿನ ಸರವನೀವೆ 2 ಬಡವರ ಭಾಗ್ಯದ ನಿಧಿಯೆ ಗೋಕುಲ-ದೊಡೆಯನೆ ಮಾಣಿಕ್ಯದ ಹರಳೆಕಡುಮುದ್ದು ಉಡುಪಿನ ಬಾಲಕೃಷ್ಣಯ್ಯದÀುಡುಕು ಮಾಡುವರೇನೊ ಪೆಂಗಳೊಳುರಂಗ3
--------------
ವ್ಯಾಸರಾಯರು
ಕಾಮನ ಪಿತ ಕೃಷ್ಣ ಕಾಮಿನಿಯಾದನು ಕಾಮನ ಪಿತ ಕೃಷ್ಣ ಕಾಮಿನಿ ಆಗುವೊ ಕಾರಣ ಕೇಳಿರಿ ಕಾಮಿಸಿ ಶ್ರೀಹರಿ ಆ ಮಹಾಸುರರಿಗೆ ಸುಧೆಯನ್ಹಂಚುಣಿಸಲು ಶ್ರೀ ಮಾಯಾಪತಿಯು ತಾ ಸ್ತ್ರೀಯಾದ ಚೆಲುವಿಕೆ ಪ ರುಳಿ ಲುಲ್ಲು ಗೆಜ್ಜೆ ಪೈಜಣ ಪಾಗಡವನಿಟ್ಟು ಚರಣದಿ ಕಾಲುಂಗರ ಪಿಲ್ಯ ಮೆಂಟಿಕೆ ಝಣ ಝಣ ನಾದ ಕಾಳಿಯ ಫಣ ತುಳಿದಂಥ ಖಳರ ಮರ್ದನ ದಿವ್ಯ ತರುಣಿ ತಾನಾದನು 1 ಸೆರಗು ನಿರಿಯು ಜರತಾರಿ ಪೀತಾಂಬರ ಬಿಡಿ ಮುತ್ತಿನುಡಿಗಂಟೆ ನಡುವಿನ್ವೊಡ್ಯಾಣ ಸಡಗರದಿಂದ್ವೊಪ್ಪೊ ತಾಳಿ ಪದಕವಿಟ್ಟು ಮೃಡನ ಪ್ರಿಯನು ಮುದ್ದು ಮಡದಿ ತಾನಾದನು 2 ಕಂಚುಕ ತೋಳಿನಲ್ವಂಕಿ ಬÁಜುಬಂದು ಮಿಂಚಿನಂದದಿ ನಲಿದಾಡುತ ಗೊಂಡ್ಯವು ಕಂಕಣ ತೋಡ್ಯ ವಜ್ರದ್ವಾರ್ಯ ಹರಡಿಯು ಪಂಚ ಬೆರಳಿನಲ್ಲುಂಗುರವನಿಟ್ಟು ಸೊಬಗಲಿ 3 ಚಿಂತಾಕು ಸರಿಗೆ ಚಿನ್ನದ ಗುಂಡು ಹವಳವು ಕೆಂಪು ಏಕಾವಳಿ ಮಲಕು ತಾಯಿತ ಮುತ್ತು ಮಿಂಚುವೋ ಪದಕ ಮುತ್ತಿನ ಕಟ್ಟಾಣಿಯು ಪಂಚರತ್ನದ ಹಾರ ಪರಮಾತ್ಮಗಲೆಯುತ4 ಉಂಗುರ ಕೂದಲು ಶೃಂಗಾರ ಕ್ಯಾದಿಗೆ ಚಂದ್ರ ಚೌರಿ ಜಡೆಬಂಗಾರ ರಾಗಟೆ ಮುಂದೆ ಮುತ್ತಿನದಂಡೆ ಮುಡಿಯಲ್ಲೆ ಒಪ್ಪಿದ ದುಂಡು ಮಲ್ಲಿಗೆ ದÉೂೀಷದೂರನಿಗಲೆವುತ 5 ವಾಲೆ ಬುಗುಡಿ ಬಾಳ್ಯ ಚಳತುಂಬು ಚಂದ್ರ ಮುರುವು ಚಿನ್ನದ ಕಡ್ಡಿ ಕಿವಿಯಲ್ಲಿ ಕುಂದಣ ಕುಸುರು ವಜ್ರಗಳು ಕೆಂಪ್ಹೊಳೆವಂಥ ದುಂಡು ಮುತ್ತಿನ ಮುಕುರ್ಯವ ಮೂಗಿನಲ್ಲಿಟ್ಟು 6 ಅಚ್ಚ ಮುತ್ತಿನ ದಂಡೆ ಕುಚ್ಚು ತೊಂಡಿಲುಗಳು ಹಚ್ಚೆಯ ಬೊಟ್ಟು ಕಸ್ತೂರಿ ಕುಂಕುಮನಿಟ್ಟು ಪಚ್ಚೆ ಮಾಣಿಕ್ಯದರಳೆಲೆ ಚಂದ್ರ ಸೂರ್ಯರು ನಿತ್ಯ ತೃಪ್ತನು ನೀಲವರ್ಣದಂತ್ಹೊಳೆಯುತ 7 ಆ ಮಹಾವೈಕುಂಠಪುರದರಸಾದ ಈ ಮಹಾ ರಜತ- ಪೀಠ ಪುರದಲಿ ಬಂದು ಪ್ರೇಮದಿ ನಿಂತು ನೋಡುತ ಬಂದ ಜನರಿಗೆ ಕಾಮಿತ ಫÀಲ ಮುಕ್ತಿ ಕೊಡುವ ಕಮಲಾಪತಿ 8 ಅಷ್ಟಯತಿಗಳಿಂದಲಿ ಪೂಜೆಯಗೊಂಬೊ ಲಕ್ಷ್ಮಿಯ ಪತಿಯು ಸ್ತ್ರೀರೂಪವ ಧರಿಸಿರೆ ದೃಷ್ಟಿಂದೆ ನೋಡದಿನ್ನಿರುವೋರೆ ಭೀಮೇಶ- ಕೃಷ್ಣ ನಿನ್ನ ಮನದಲ್ಲಿಟ್ಟು ಸ್ತುತಿಸುವೆನು 9
--------------
ಹರಪನಹಳ್ಳಿಭೀಮವ್ವ
ಕೃಷ್ಣ ರುಕ್ಮಿಣಿ ವಿವಾಹದೈದು ದಿನದಲ್ಲಿ ಅರ್ಥಿ(ಯಿಂ)ಂದೋಕುಳಿಯನಾಡಿ ಕುಂಕುಮ ಗಂಧ ಬುಕ್ಕಿ ್ಹಟ್ಟಲೂ(ಲುರು?) ಟಣಿಯ ಮಾಡಿ ಆರತಿನೆತ್ತಿ ಮುತ್ತೈದೇರು ಪಾಡಿ ವೀಳ್ಯಗಳ ನೀಡಿ ಸರ್ಪಶಯನನು ತನ್ನ ಸತಿಯ ಎತ್ತಿ ಬರುವೋ ಕಾಲದಲ್ಲಿ ಚಿಕ್ಕ ಸುಭದ್ರೆ ತಾ ಬಾಗಿಲು ಕಟ್ಟಿ ತಾ ನಗುತ ನುಡಿದಳು 1 ಪಟ್ಟದರಸಿಕೂಡ ಮತ್ತೆಲ್ಲಿ ಪಯಣ ಈ ವಾರ್ತೆ ಹೇಳುವುದೆನಗೆ ಕೇಳುವೆ ಕೊಟ್ಟು ಎನಮನ ಕಾಮಿತಾರ್ಥವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 2 ನಾರಿಮಣಿಯೆ ನವರತ್ನದ ಹೆರಳು ಬಂ- ಗಾರ ರಾಗಟೆಯು ಗೊಂಡ್ಯ ಕಂಕಣ ವಂಕಿ ದ್ವಾರಾ ಹರಡಿಯು ಚೆಂದ ಒಪ್ಪುವ ಗೆಜ್ಜೆ ನಾಗಮುರಿಗೆಯು ಕಾಲ ಪೈಜಣ ಗೆಜ್ಜೆ ರುಳಿ ವೈಡೂರ್ಯದ್ವೊಡ್ಯಾಣವನೆ ಮಾಣಿಕ್ಯದ್ವಾಲೆ ಮೋಹನ್ಮಾಲೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 3 ಪಚ್ಚಮಾಣಿಕದ ಗೊಂಡ್ಯಗಳು ಬಾಜುಬಂದು ರತ್ನಹ್ಹೆರಳುಬಂಗಾರ ಕಂಕಣವಂಕಿ ಹಸ್ತಕಡಗವು ದ್ವಾರ್ಯ ಪುತ್ಥಳಿ ಏಕಾವಳಿಯ ಸರ ಚಿಂತಾಕು ಸರಿಗೆ ತೆತ್ತಿಸಿಯರಚಂದ್ರರಾಗಟೆÉ ಮತ್ತೆ ಎನಗಮ್ಮಯ್ಯಕೊಡುವಳು ಅರ್ಥಿಯಿಂದೀಗೆನ್ನ- ಮನೋರಥ ದಂiÀiಮಾಡಣ್ಣಯ್ಯ ಶ್ರೀಕೃಷ್ಣಯ್ಯ 4 ಹರದಿ ನಿನಗೆ ಹವಳದ ಕಾಲ್ವಜ್ರದ ಮಂಚ ಜರದ ಸುಪ್ಪತ್ತಿಗೆಯು ಹಾಸಿಕೆ ಲೋಡು ವರಪೀಠ ವಸನಂಗಳು ಚ- ಪ್ಪರ ಮಂಚಕ್ಕೊಲೆವೋ ಮುತ್ತಿನ ಗೊಂಚಲು ರವಿಪೋ- ಲ್ವ ರಥವು ಕರಿತುರಗ ಕರೆವೆಮ್ಮೆ ಗೋವ್ಗಳು ತರತರದ ಛತ್ತರಿಗೆ ಚಾಮರ ಜರತಾರಂಚಿನ ಸೀರೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 5 ಪನ್ನಂಗಶಯನ ಕೇಳೆನ್ನ ಗಲ್ಲದಲೊಪ್ಪೋ ಸಣ್ಣ ಮುತ್ತಿನ ಗೊಂಚಲು ದ್ರಾಕ್ಷಿಯ ಬಳ್ಳಿ ಹೊನ್ನಾ ್ವಲೆ ಸರಪಳಿಯು ಹೊಸ ಪ್ರೀತಿಯಲಿನ್ನು ನಾ ಬೇಡಿದ್ದು ಕೊಡುವನು ಮನ್ಮಥನ ಪಿತ ಎನ್ನ ಮನೋರಥ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 6 ಮುದ್ದು ಸುಭದ್ರ ಮೇಲಾದ ಜೊತೆಯ ಮುತ್ತು ವÀಜ್ರ ಕೆಂಪನು ಕೆತ್ತಿಸಿ ಕೊಡುವೆನೀಗ ತಿದ್ದಿ ಮಾಡಿದ ಮೂಗುತಿ ಪಾರ್ಥನ ರಥಕಿದ್ದು ಆಗುವೆ ಸಾರಥಿ ನಡೆಸುವೆನು ಕೀರ್ತಿ ಉಗ್ರಸೇನಗೆ ಹೇಳಿ ಇದರೊಳ- ಗರ್ಧ ರಾಜ್ಯವ ಕೊಡಿಸಿ ನಾ ನಿನ್ನುದ್ದ ಹಣ ಬಿಡು ತಂಗಿ ಕೋಮಲಾಂಗಿ 7 ಅಚ್ಚುತ ಬಲರಾಮರೆಂಬೊ ಎನಗೆ ಜೋಡು ಹೆಚ್ಚಿನ ಭುಜಗಳಿನ್ನು ಯಶೋದ ದೇವಕ್ಕಿ ರೋಹಿಣೀದೇವೇರು ಇರಲು ತಂದೆ ಶ್ರೇಷ್ಠನಾದ್ವಸುದೇವನು ನೀ ಕೊಡುವುದೇನು ಮುತ್ಯನಾಗಿದ್ದುಗ್ರಸೇನನು ಮತ್ತೆ ನಾ ಬೇಡಿದರೆ ಈ ಕ್ಷಣ ಕೊಟ್ಟು ಬಿಡನೇ- ನಧರ್À ರಾಜ್ಯವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 8 ಎಷ್ಟು ಹೇಳಿದರು ಸನ್ಮತವಿಲ್ಲೆ ಸುಭದ್ರೆ ಮತ್ತೇನು ಕೊಡಲೆ ನಾನು ಮನಕೆ ಬೇಕಾದಿಷ್ಟವ ಬೇಡೆ ನೀನು ಭಾರ ಎಷ್ಟು ತಡೆಯಲಾರೆನೆ ನೀನು ಕೈಬಿಟ್ಟು ಬಿಡುವೆನು ಬೆಟ್ಟವನು ಕಿರು ಬೆಟ್ಟಿಲಿಂದೆ ಎತ್ತಿನಿಂತಿದ್ದೇಳು ದಿವಸ ಕದವ ಬಿಡು ತಂಗಿ ಕೋಮಲಾಂಗಿ 9 ಪಕ್ಷಿವಾಹನ ನಿನ್ನ ಚೊಚ್ಚಲಮಗಳ ಎನ್ನಚ್ಛದ ಅಭಿಮನ್ಯುಗೆ ಮಾಡುವುದು ಅ- ಪೇಕ್ಷವಾಗೇದೆ ಎನಗೆ ಬೇಡುವೆನು ನಿಶ್ಚಯ ಮಾಡಿ ಜನರೊಳಗೆ ಕೊಡು ಕೀರ್ತಿ ನಿನಗೆ ಪಟ್ಟದರಸಿಯ ಸಹಿತ ನೀ ಒಡಂಬಟ್ಟು ಎನಗ್ವಚನವನೆ ಪಾಲಿಸು ಕಟ್ಟಿದ್ಹಾದಿಯ ಬಿಟ್ಟು ಪೋಗುವೆ ದಯಮಾಡಣ್ಣಯ್ಯ ನೀ ಕೃಷ್ಣಯ್ಯ 10 ತರವಲ್ಲೆ ರುಕ್ಮಣಿ ಬೀಗತನವ ಭಾಳ ಪರಿ- ಯಾಲೋಚನೆ ಮಾಡು ರುಕುಮನ ಗಡ್ಡ ಶಿರ ಪಟ್ಟಿ ಪನ್ನಿ ನೋಡು ದೊರೆ ಶಿಶುಪಾಲ ವರನವಸ್ಥೆಯ ಕೊಂಡಾಡು ಧೈರ್ಯವನೆ ಮಾಡು ಬರೆದು ಓಲೆಯ ಕಳಿಸಿ ಎನ್ನ ಕರೆಸಿ ಬೆನ್ನ ್ಹತ್ತೋಡಿಬಂದ ಬಿರುದನರಿಯೇ ನ್ವರ ಶುಭಾಂಗಿನಿ ಕದವ ಬಿಡು ತಂಗಿ ಕೋಮಲಾಂಗಿ 11 ಕೃಷ್ಣ ಸುಭದ್ರೆ ಮಾತುಗಳ ರುಕ್ಮಿಣಿ ಕೇಳಿ ಮತ್ಯಾತಕೆನ್ನ ದೂರು ಯತಿಗಳ ಬೆನ್ನ ್ಹತ್ತಿ ಹೋದವರು ದಾರು ಕೃತ್ಯವ ನಡೆಸಿದರೆನ್ನ ನಾದಿನೇರು ಚಿತ್ರಾಂಗಿಯೇರು ಹಸ್ತಿನಾವತಿ ಅರಸು ಧರ್ಮರು ಹೆಚ್ಚಿನ್ಹಿರಿ ಯಣ್ಣಯ್ಯ ಭೀಮನು ಪಾರ್ಥಸುತ ಎನ್ನ ಸೋದರಳಿಯಗೆ ಕೊಟ್ಟೇನು ತೌರುಮನಿಗ್ಹೆಣ್ಣು 12 ರಂಗ ಸುಭದ್ರೆ ಮಾತಿಗೆ ಬಪ್ಪಿ ್ವ್ವಳ್ಯವ ಕೊಟ್ಟು ಚಂದ್ರಗಾವಿಯ ಕುಪ್ಪಸ ಜರದ ಪೀ- ತಾಂಬ್ರದುಡುಗೊರೆ ಕೊಡುತ ಮುತ್ತಿನ ಹಾರ ತಂದು ಕೊರಳಿಗೆ ಹಾಕುತ ರುಕ್ಮಿಣಿಯ ಸಹಿತ ಬಂದ ಭೀಮೇಶ ಕೃಷ್ಣ ಪಾರ್ಥನ ರಂಭೆ ಕನ್ಯವಗೆದ್ದಳೆನುತಲಿ ಸಂಭ್ರಮದಿ ದೇವೇಂದ್ರ ಬ್ಯಾಗನೆ ಚೆಂದದÀಲ್ಹೂಮಳೆಯ ಕರೆದರು 13
--------------
ಹರಪನಹಳ್ಳಿಭೀಮವ್ವ
ತ್ರಿಮೂರ್ತಿಗಳ ಲಾಲಿ ಜೋಜೋ ಬಾಲಕೃಷ್ಣ ಜೋಗುಳವ ಹಾಡುತ್ತ ತೂಗುವೆ ನಾ ಪ. ನವರತ್ನ ಖಚಿತದ ತೊಟ್ಟಿಲ ಕಟ್ಟಿ ನಾಗಸಂಪಿಗೆ ಜಾಜಿ ಮಾಲೆಯನ್ಹಾಕಿ ನಾಲ್ಕುವೇದದ ಸರಪಣಿ ಬಿಗಿದು ನಾಗಶಯನನ ಮಲಗಿಸಿ ಬೇಗ ರಾಗದಿ ಅನುಸೂಯ ಪಾಡಿ ತೂಗಿದಳು ಜೋ 1 ಮುತ್ತು ಮಾಣಿಕ್ಯದ ತೊಟ್ಟಿಲ ಕಟ್ಟಿ ಮುತ್ತು ಪವಳದ ಸರಪಣಿ ಬಿಗಿದು ಮುದದಿ ಮಲ್ಲಿಗೆ ಜಾಜಿ ಪುಷ್ಪವ ಕಟ್ಟಿ ಮುಕ್ತ ಬ್ರಹ್ಮನ ಮಲಗಿಸಿ ಬೇಗ ಅರ್ತಿಲಿ ಅನಸೂಯ ತೂಗಿದಳಾಗ 2 ನೀಲ ಮಾಣಿಕ್ಯದ್ವಜ್ರತೊಟ್ಟಿಲ ಕಟ್ಟಿ ಮೇಲೆ ಕೆಂಪಿನ ಸರಪಳಿ ಬಿಗಿದು ಮಾಲತಿ ಮಲ್ಲಿಗೆ ಮಾಲೆಯ ಕಟ್ಟಿ ನೀಲಕಂಠನ ಮಲಗಿಸಿ ಬೇಗ ಬಾಲನ ಅನಸೂಯ ತೂಗಿದಳಾಗ 3 ಈ ಪರಿಯಿಂದಲಿ ತೂಗುತಿರೆ ತಾಪಸ ಅತ್ರಿಋಷಿಯಾಗ ಬರೆ ಭೂಪರ ತೊಟ್ಟಿಲು ಕಾಣ ಬರೆ ಪರಿ ಶಿಶುಗಳು ಯಾರೆನ್ನುತಾ ಶ್ಚರ್ಯದಲಿ ಸತಿಯ ಕೇಳುತಾ 4 ನಮ್ಮ ಪುಣ್ಯದ ಫಲ ವದಗಿತೆಂದು ಮುನ್ನ ತ್ರಿಮೂರ್ತಿಗಳು ಶಿಶುರೂಪದಿ ಬಂದು ತನ್ನ ಪತಿಯ ಕೂಡ ಅರುಹುತಲೆ ಚಿನ್ನರ ತೂಗುತ್ತ ಹರುಷದಿ ಚೆನ್ನ ಶ್ರೀ ಶ್ರೀನಿವಾಸನ್ನ ತೂಗಿದಳು 5
--------------
ಸರಸ್ವತಿ ಬಾಯಿ