ಒಟ್ಟು 32 ಕಡೆಗಳಲ್ಲಿ , 24 ದಾಸರು , 31 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ಸಾನುರಾಗದಿ ಸಲಹೋ ವಾನರೋತ್ತಮ ಮಾರುತಿ ಪ ವಾಣಿಯ ಮುದಕೆ ಕ್ಷೋಣಿ ಕುಮುದಕೆÉ ಏಣಿಲಾಂಛನನೆನಿಸಿ ಗಾಣಧಾಳದಿ ತಾಣಗೈದಿಹ ಪ್ರಾಣದೇವನೆ ಅ.ಪ ಯುಗಯುಗದಲಿ ಜನಿಸಿ | ರಘುಕುಲೇಶನ ಸ್ತುತಿಸಿ ವಾರಿಧಿ ಲಂಘಸಿ || ಜಗದ ಜನನಿಗೆ ಕ್ಷೇಮತಿಳುಹಿದ ಒದೆದು ನಗರ ದಹಿಸಿದ | ಸುಗುಣ ನಾಲ್ಮೊಗ ಪದಾರ್ಹನೆ ಮುಗಿವೆ ಕರವನು ಅಘವ ಓಡಿಸಿ 1 ದ್ವಾಪರದಲ್ಲಿ ಬಹುಪಾಪಾತ್ಮಕರಾದ ಭೂಪಾಲರ ಧುರದಿ | ಕೋಪದಿ ಸಂಹರಿಸಿ ಸತಿಮಣಿ ದ್ರೌಪದಿಗೆ ಮುದವಿತ್ತು ಸೇವೆಯನು ಗೋಪತಿ ಶ್ರೀಕೃಷ್ಣ ಸಲಹಿದ ಭಾಪು ಭಾಪು ಪರಾಕ್ರಮಶಾಲಿ 2 ಬಂದು ಈ ಯುಗದಿ ಮಧ್ಯಮಂದೀರಾತ್ಮಜನಾಗಿ ಮಂದರ ಮತವ ಮುರಿದು || ಪರ | ನೆಂದು ವಿಜಯದಿ ದುಂದುಭಿ ಮೊಳಗಿಸಿದ ಕಾರಣ ಗುರುಗಂಧವಾಹನ 3
--------------
ಶಾಮಸುಂದರ ವಿಠಲ
ತತ್ವವಿವೇಚನೆ ಅಂತರಂಗದ ಕದವು ತೆರೆಯಿತಿಂದು ಪ ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಅ.ಪ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ 1 ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ 2 ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ ಜ್ಞಾನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ ಶೃಂಗಾರಸದನ 3 ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು | ಪರ ದಾರಿಗೆ ಪ್ರಾಣ ಜಯವಿಜಯರು || ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ | ಸರಸಿಜನಾಭನ ಅರಮನೆಯ ಸೊಬಗು 4 ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ | ರಮೆಧರೆಯರಿಂದಲಾಲಿಂಗಿತ್ವದಿ || ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- | ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ 5
--------------
ವಿಜಯದಾಸ
ಅಧ್ಯಾಯ :ನಾಲ್ಕು ಪದ್ಯ ಮುಂದೆ ತ್ರೇತಾಯುಗವು ಬಂದಂಥ ಕಾಲದಲಿ ಇಂದಿರೇಶನು ರಾಮಯೆಂದು ದಶರಥನಲ್ಲಿ ಕಂದನಾಗ್ಯವತರಿಸಿ ತಂದೆ ಆಜ್ಞದಿ ಸೀತೆಯಿಂದ ಲಕ್ಷ್ಮಣನಿಂದ ಚಂದಾಗಿ ಬಡಗೂಡಿ ವನ ಚರಿಸಿ ಬಂದ ಯಮುನಾದ್ರಿಯಲಿ ನೊಂದು ನೀರಡಿಸಿ ತನ್ನ ಬಾಣದಿಂದ ಭೇದಿಸಿದಾ|| 1 ತಡವು ಇಲ್ಲದೆ ಭೂಮಿ ಒಡೆದು ಬಂದಿತು ಆಗ ಕಡು ಭೋಗವತಿ ನಾರಿಯು ಗುಡದಂಥ ಸವಿನೀರು ಕುಡಿದು ನರನಂತೆ ದೃಢನಿದ್ರೆಗೊಂಡ ಜಗದೊಡೆಯ ರಾಘವನು|| ದೃಢವಾಗಿ ಬಹುಕಾಲ ಬಿಡದೆ ಅಲ್ಲಿರುವ ಆ ಮೃಡನ ರಾಣಿಯು ತಾನು ನಡೆದು ಬಂದಳು ಅಲ್ಲೇ ಶರಗರಾದಿ ಕೈಯಲ್ಲಿ ಹಿಡಿದು, ಆರತಿಯನ್ನು ದೃಢಭಕುತ ಲಕ್ಷಣನು ದೃಢ ನಿದ್ರಿಗೊಂಡಂಥ ಒಡಿಯಗೆಚ್ಚರ ಮಾಡಗೊಡದೆ ಆಕೆಯ ಕಂಡು ನುಡಿದನೀಪರಿಯ|| ಪದ ರಾಗ:ಭೈರವಿ ಅಟತಾಳ ಸ್ವರ ಋಷಭ ದಾವಾಕಿ ಪೇಳಮ್ಮಾ|| ಬಂದವಳು ನೀ ದಾವಾಕಿ|| ದಾವಾಕಿ ಪೇಳಮ್ಮಾ ದಾವ ರಾಜನ ಸತಿ ದಾವ ಕಾರಣದಿಂದ ಧಾವಿಸಿಲ್ಲಿಗೆ ಬಂದೆ|| ಪ ಸುಂದರಿ ವಾಣಿಯೋ|| ಅಥವಾ ಮುಶುಂದನ ರಾಣಿಯೋ|| ಇಂದ್ರನ ರಾಣಿಯೋ|| ಚಂದ್ರನ ರಾಣಿಯೋ|| ಚಂದ್ರಮುಖಿಯೇ ನೀನು ಚಂದಾಗಿ ಪೇಳಮ್ಮಾ|| 1 ಭಾತೃರಾದವರು ನಾವು|| ಪರಸ್ಪರ ಪ್ರೀತಿಯಿಂದಿರುವೆವು|| ಸೀತಾವಿರಹದಿಂದ ಸೋತುಬಂದೆವು ಇಲ್ಲೆ ಮಾತೇ ಮೌನವು ಬಿಟ್ಟು ಮಾತಾಡು ಬ್ಯಾಗನೇ|| 2 ಬ್ರಹ್ಮಚರ್ಯವೆಂಬುದು|| ಈ ಕಾಲಕ್ಕೆ ನಮ್ಮಲ್ಲಿ ಇರುವುದು|| ತಮ್ಮ ಲಕ್ಷ್ಮಣ ನಾನು ನಿರ್ಮಲ ಗುಣರಾಮ ನಮ್ಮಣ್ಣನಿವ ಪರಬ್ರಹ್ಮಾನಂತಾಧ್ರೀಶಾ|| 3 ಆರ್ಯಾ ಲಕ್ಷ್ಮಣ ನಾಡಿದ ಮಾತೂ|| ಲಕ್ಷಿಗೆ ತರಲಿಲ್ಲ ದೇವಿ ಮಾತಾಡಿದನೂ ಹೀಗೆಂದೂ|| ಪದ ರಾಗ:ಧನ್ಯಾಸಿ ಆದಿತಾಳ ನಡಿ ನಡಿ £ಡಿ ನೀನು || ನುಡಿಯದ ಭಾಗಿಯೇನು|| ನ || ನಡಿ ನಡಿ ಹಿಂದಕು ಬಡಿವಾರೇನಿದು ಬಿಡು ಬ್ಯಾಗನೆ ನಿನ್ನ ಎನಗೆ ಬಿಡದೆ ಬಾಣದಿಂದೊಡೆವೆನು ನಾನು| ಪ ಎಕಾಂತ ಸ್ಥಳಕೆ ಕಾಲಕೆ ಒಬ್ಬಾಕೆ ಬರುವದಿದು ದಿಂದ ನೀ ಬೇಕಾದಲ್ಲೆ|| 1 ವನವನ ಚರಿಸುಲವ ವನವಾಸಿಗಳಿಗೆ ವನುತಿಯ ಸಂದರ್ಶನ ನಮಗ್ಯಾಕಿದು ಗುಣವಂತಿಯೆ ಅರಕ್ಷಣ ನಿಲ್ಲದಲೆ 2 ಕಾಲದಲಿ ಗದ್ದಲ ಮಾಡದೆ ಬುದ್ಧಿವಂತೆಯೆ|| 3 ಅನುಜನ ಈಪರಿ ಸಿಟ್ಟು || ಅನುಸರಿಸುತಾ ಎದ್ದ ನಿದ್ರೆಯನು ಬಿಟ್ಟು || ವನುತಿಯ ನೋಡಿದ ರಾಮ|| ವಿನಯದಿ ಮಾತಾಡಿವನು ಗುಣಧಾಮ || 1 ಪದ ರಾಗ:ದೇಶಿ ಅಟತಾಳ ಸ್ವರ :ಷಡ್ಜ ದಾರ್ಹೇಳಮ್ಮಯಾ ಉದಾರ್ಹಳಗಿರುವೆ ನೀ || ದಾರ್ಹೇಳಮ್ಮಯ|| ದಾರಿಲ್ಲಿ ಸ್ಥಳದಲ್ಲಿ ದಾರನ್ಹುಡುಕುವಿ ನಿ|| ದಾ|| ಪ ವನದಲ್ಲೆ ಇರುವಂಥ ವನದೇವತೆಯೇ ನೀ|| ದಾ|| ಮನಿಯಲ್ಲೇ ಇರುವಂಥ ಮನಿದೇವತೆಯೋ ನೀ || ದಾ|| 1 ಪ್ರಾಯಶ ಶ್ರೀಹರಿ ಮಾಯಾರೂಪಿಯೋ ನೀನು || ದಾ|| ಆಯಾದ ವಿಲ್ಲದೆ ಬಾಯಿಲೆ ಬಿಚ್ಚಾಡು || ದಾ||2 ಕ್ಲೇಶ ವೋಡಿಸುವಂಥ ಈಶನ ರಾಣಿಯೋ || ದಾ|| ದೋಷರಹಿ ತಾನಂತಾಧ್ರೀಶನ ರಾಣಿಯೋ|| 3 ಆರ್ಯಾ ಕೋಮಲತರ ವಚನಗಳೂ || ರಾಮನ ಬಾಯಿಂದ ಮಾತಾಡಿದಳು ಹೀಗೆಂದೂ|| 1 ಪದ ರಾಗ:ದೇಶೀ ಆಟತಾಳ ಸ್ವರ :ಷಡ್ಜÀ ಕೇಳೋ ರಾಮನೆ ನಿನಗ್ಹೇಳುವೆ ಗುರುತವ || ಕೇಳೋ ರಾಮ|| ಕೇಳುತ ನಿನ್ನ ಮಾತು ಬಾಳ್ಹಾನಂದಾಯಿತು || ಕೇಳೋ|| ಪ ವನದೇವತೆ ಅಲ್ಲ ಮನಿಯ ದೇವತೆ ಅಲ್ಲ || ಕೇ|| ವನಜಾಕ್ಷ ತುಳಜಾಯಂದ್ಯನಿ ಕೊಂಬುವೆ ನಾನೂ || ಕೇ|| 1 ಮಾಯಾರೂಪಿಯು ಅಲ್ಲ ಆಯಾಸಯನಗಿಲ್ಲ ||ಕೇ|| ಮಾಯಾರಮಣ ನಿನ್ನ ತಾಯಿ ಯಂದ್ಯನಿಸುವೆ || ಕೇ|| 2 ಶುದ್ಧ ಚಿನ್ಮಯ ಅನಂತಾದ್ರಿರಮಣ ನೀನು || ಕೇ|| ಸಿದ್ಧಾಗಿ ನಾ ಯಮುನಾದ್ರಿಯಲ್ಲಿರುವೆನು||3 ಆರ್ಯಾ ಕಾಯಜ ಪಿತ ಕೇಳಿದನೂ|| ಹಾಯಿದು ಏನೆಂದೂ|| ಮಾತನಾಡಿದನೂ || ಆಯತಾಕ್ಷಿ ಆದವಳೂ || ತಾಯಿಯು ಎನಗ್ನಾಂಗಾದಿ ನೀ ಪೇಳೆ|| 1 ರಾಮನ ಮಾತಿಗೆ ತುಳಜಾ || ಪ್ರೇಮದಿ ಮಾತಾಡಿದಳು ತಾವಿರಜಾ || ರಾಮಗ ಕಥಿ ಆದಂತಾ|| ನೇಮಿಸಿ ಹೇಳಿದಳು ಪೂರ್ವ ವೃತ್ತಾಂತಾ|| 2 ಪದ್ಯ ರಾಮಕೇಳು ಪೂರ್ವದಲ್ಲಿ ಜಮದಾಗ್ನಿಯು ಪರಶುರಾಮನಾಗಿರುವಿ ನೀನಾ ಮಹಾಮುನಿ ಪತ್ನಿ ನಾಮದಲೆ ರೇಣುಕಿಯು ನೀ ಮಗನು ಎನಗಾದಿ ಭೂಮಿಯಲಿ ಪ್ರಾಖ್ಯಾತ ನಾಮತಿ ಕೃತವೀರ್ಯಜನು ಕಾಮಧೇನುವು ಬಯಸಿ ಆ ಮುನಿಯ ಕೊಂದಿರಲು ಆಮ್ಯಾಲ ಪತಿಯಿಂದ ನೇಮದಲಿ ಸಹಗಮನ ನಾ ಮಾಡಿದೆನು|| 1 ಪತಿಯ ಪ್ರೇಮದಲಿ ಸ್ಮರಿಸಿ ಪರಶುರಾಮನು ಎನ್ನಸ್ಮರಿಸಿ ಕೈಮುಗಿದು ಈ ಪರಿಯು ಮಾತಾಡಿದನು ವರ ಮಾತೆಯನು ಕೂಡಿ ಇರದೆ ನೀ ಹೋದಿ ಸಂದರ್ಶನವು ಎಂದಿನ್ನ ತ್ವರದಿ ನೀ ಹೇಳೆನಗೆ ಕೇಳುತಲೆ ತ್ವರದಿಂದ ನಾನು ಸುಂದರ ರೂಪವ ತೋರಿ ಈ ಪರಿಯು ಮಾತಾಡಿದೆನು ವರಪುತ್ರ ಕೇಳು ಮುಂದಿರುವ ತ್ರೇತಾಯುಗವು ಬರುತಿರಲು ಆಗ ಸಂದರ್ಶನವ ಕೊಡವೆ|| 2 ಹೀಗೆಂದು ಹೇಳಿದ್ಯಾಗ ಆತಗ ನಾನು ಈಗ ಆತನೇ ನೀನು ರಾಘವನು ಆಗಿರುವಿ || ಹಿಂಗೆನಲು ಮುಂದೆ ಆ ರಾಘವನು ಕೊಟ್ಟಳಾಗ ತುಳಜಾದೇವಿ ಬ್ಯಾಗ ನಿನ್ನ ಕಾರ್ಯ ಚನ್ನಾಗಿ ಆಗುವುದೆಂದು || ನಾಗವೇಣಿಯು ತಾನು ಹೋಗಿಬರುವೆನೆಂದು ಆಗ ಅಲ್ಲೇವೇ ಗುಪ್ತಾಗಿ ಇರುವುವಳು|| 3 ಪದ ರಾಗ:ಶಂಕರಾಭರಣ ಆದಿತಾಳ ಸ್ವರ :ಮಧ್ಯಮಾ ತಂದನು ಕೇವಳ್ಹಾಗ್ನಿಯ ಸಾಕ್ಷಿಯಿಂದೆ|| 1 ಆದರೂ ಇಷ್ಟಾರ್ಥಗಳು ಕೊಡುವೋದು|| 2 ವರದ ಶ್ರೀರಾಮ ವರವು ಕೊಟ್ಟಿರುವಂಥಾ ತುಳಜಾ ದೇವಿಯ ದಿವ್ಯ ಮಹಿಮೆ || ಹರುಷದಿ ಕೇಳಿದರೆ ಹರುಷವ ಕೊಡುವುದು ಪರಿಹರಿಸೋದು ಕಷ್ಟವೆಲ್ಲಾ 3 ಪುತ್ರರು ಆಗುವರು ಪೌತ್ರರು ಆಗುವರು ಸತ್ಯಮಾತಿದು ಭಾವವ ಬಿಟ್ಟು|| 4 ಗ್ರಂಥವೆಂಬುವದಿಂದು || ಎಂಥಾದಾದರೂ ಎನೂ ಸಂತೋಷ ನಮ್ಮ ಗುರುಗಳಿಗೆ|| ಸಂತರೆಂಬುವರಿಗೆ ಸಂತೋಷಾಗಲಿ ನಮ್ಮಾನಂತಾದ್ರೀಶನೆ ನುಡಿಸಿದಾ|| 5 ಆರ್ಯಾ ವರ ಕವಿತಾ ರZನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದೆನ್ನ ಉಪಾಯಾ || ಗುರುಕೃಪೆಯಿಂದಾಯಿತು ನಾಲ್ಕು ಅಧ್ಯಾಯಾ|| 1 ಪದ ರಾಗ:ಪೂರ್ವಿ ಅಟತಾಳ ಸ್ವರ:ಮಧ್ಯಮಾ ನಿತ್ಯ ಮಂಗಳವನು ಕೊಟ್ಟು ಸಲಹುವ ತಾಯಿಗೆ|| ಪ ಘನತರ ಕೈಲಾಸ ಮನಿಯು ಮಾಡಿದವಳಿಗೆ|| ಅನುದಿನ ಅಲ್ಲಿರುವಂಥಾಕಿಗೆ | ಅನುಭೂತಿ ತಪಸಿಗೆ ಅನುಕೂಲಾಗುವೆನೆಂದು ಅನುಮಾನಿಲ್ಲದೆ ಬಂದಿರುವಾಕಿಗೆ|| 1 ಅಷ್ಟಭುಜಗಳುಳ್ಳಂಥಾಕಿಗೆ || ಅಷ್ಟೆಶ್ಚರ್ಯದಿಂದಿರುವಾಕಿಗೆ|| ದುಷ್ಟದೈತ್ಯನ ಕೊಂದಂಥಾಕೆಗೆ|| 2 ಅಮಿತ ಮಹಿಮೆ ಉಳ್ಳಂಥಾಕೆಗೆ|| ಯಮುನಾದ್ರಿಯಲಿ ಬಂದಿರುವಾಕೆಗೆ|| ಗಮನದಿಂದಲಿ ರಾಮ ಶ್ರಮಬಟ್ಟು ಅಲ್ಲೇ ವಿಶ್ರಾಮಿಸಲು ದರ್ಶನ ಕೆÀೂಟ್ಟಾಕೆಗೆ|| 3 ಕಾಮಿತ ಫಲವನು ಕೊಡುವಾಕೆಗೆ|| ರಾಮನು ಸಾವಿರ ನಾಮದಿ ಸ್ತುತಿಸಲು|| ಪ್ರೇಮದಿವರವು ಕೊಟ್ಟಂಥಾಕಿಗೆ|| 4 ಚಿಂತಿಸುವರ ಮುಂದ ನಿಂತಾಕೆಗೆ|| ಸಂತೋಷವನು ಕೊಡುವಂಥಾಕಿಗೆ|| ಅಂತರಂಗದಲ್ಲಿಹ ಚಿಂತೆಯ ಬಿಡಿಸಿ|| ಅನಂತಾದ್ರೀಶನ ತೋರುವಂಥಾಕೆಗೆ|| 5
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಪದ:ರಾಗ:ಯರಕಲಕಾಂಬೋದಿ ತಾಳ:ಬಿಲಂದಿ, ಸ್ವರ ಷಡ್ಜ ದೇವಕಿಯಲಿ ಅವತರಿಸಿದ ದೇವಾಧೀಶನ ಕಂಡು ಆ ವಸುದೇವನು ಸ್ತುತಿಸಿದ ಕೇವಲ ಭಕುತಿಯಲಿ | ಲಾವಣ್ಯಾಂಬುಧಿಯನಿಸುವ ಭಯದಿಂದ || 1 ಲೋಕಾಧೀಶನೆ ನಿನ್ನ ಅತೌಕಿಕ ರೂಪಾವು ಕಂಡು ಆ ಕಂಸನ ಭಯದಲ್ಲಿ ನಾ ವ್ಯಾಕುಲಳಾಗಿರುವೆ| ಸಾಕೀಕಾಲಕ ಈ ಅಪ್ರಾಕೃತರೂಪವು ಎÀÀನಲು ಶ್ರೀಕಾಂತನು ಆಕ್ಷಣದಲಿ ಪ್ರಾಕೃತ ಶಿಶುವಾದಾ|| 2 ಆ ಕಾಲದಲ್ಯಾದುರ್ಗಾ ತಾ ಕಾಲವ ಕಳಿಯದಲೆ ಗೋಕುಲದಲ್ಲಿ ಪುರುಷೆಂದಾಕಿಯು ತಿಳಿಯದೆ ನಿದ್ರಿಲಯಲ್ಯಾಕ್ರಾಂತಾದಳು ಹುಟ್ಟಿರುವಾಕಿಯ ಮಹಿಮೆ ಇದು|| 3 ಪಟ್ಟಣದಲಿ ಸರ್ವರು ಭಯಬಿಟ್ಟು ನಡರಾತ್ರಿಯೋಳ್ ತಟ್ಟಲು ಬಹುನಿದ್ರಿ ಸೃತಿಗೆಟ್ಟು ಮಲಗಿರಲು | ಹÀುಟ್ಟಿದ ಬಾಲಕನ ನಾ ಬಚ್ಚಿಟ್ಟು ಬರುವೆನೆಂದ ಥಟ್ಟನೆ ನಡದನು ಕೃಷ್ಣನ ಘಡ್ದ್ಹಡದು ಶೌರಿ|| 4 ಕಾಲೊಳಗಿನ ಬೇಡಿಯು ತತ್ಕಾಲಕ ಕಡದಿತು ಬಾಗಿಲಕೀಲಿಗಳೆಲ್ಲಾ ಸಾಲ್ಹಿಡದಿಂದ್ಗರಂತೆ| ಬೈಲಾದವು ಬಾಗಿಲಗಳಾ ಕಾಲದಿ ಹೀಂಗಾದದ್ದು ಬಾಲಕ ಹರಿ ಬದಿಲಿದ್ದ ಮ್ಯಾಲೇನಾಶ್ಚರ್ಯ 5 ವಾಸದ ವೃಷ್ಟಿಯ ಮಾಡಲು ಶೇಷನು ಬೆನ್ನಿಲೆ ಬಂದು ಸೂಸಿ ಬಾಹುವ ಯಮುನಿ ವಾಸುದೇವನ ಕಂಡು ಘಾಸಿಯು ಮಾಡದೆ ಕೂಟ್ಟಳು ಅಸಮಯಕೆ ಹಾದಿ 6 ಗೋಕುಲಕ್ಹೋಗುತ ಶೌರಿಯು ಶ್ರೀ ಕೃಷ್ಣನ ಅಲ್ಲಿಟ್ಟು ಆ ಕನ್ನಿಕೆಯ ತಂದು ತನ್ನಕಿಯ ಬದಿಲಿಟ್ಟಾ| ಆ ಕಾಲಕ ಆ ಬೇಡಿಯ ತಾಕಾಲಗಳಲ್ಲಿತಟ್ಟು|| ಶ್ರೀ ಕಾಂತನ ಸ್ಮರಿಸುತಲೆ ಏಕಾಂತದಲ್ಲಿರುವಾ|| 7 ಬಾಗಿಲುಗಳು ಎಲ್ಲಾ ಮತ್ಥಾಂಗೆ ಕೀಲಿಗಳ್ಯಲ್ಲಾ ಬ್ಯಾಗನೆ ಆದವು ಮುಂಚಿನ್ಹಾಂಗೆ ತಿಳಿಗೂಡದೆ| ಆಗಾ ಕೂಸಿನ ಧ್ವನಿ ಛಂದಾಗಿ ಕಿವಿಯಲಿ ಬೀಳಲು ಬಾಗಿಲಕಾಯುವ ಭೃತ್ಯರು ಬ್ಯಾಗನೆದ್ದರು ಭಯದಿ|| 8 ಗಡಿಬಿಡಿಯಿಂದಲ್ಯವರು ಯಡವುತ ಮುಗ್ಗುತ ತ್ಯೋಡುತ ನಡಿದರು ನಿಂದಿರದಲೆ ಬಹುಸಡಗರದರಮನಿಗೆ| ಒಡಿಯಾನಂತಾದ್ರೀಶನ ಖಡುದ್ವೇಷ ಆಸವಗೆ ನುಡಿದರು ದೇವಕಿದೇವಿಯು ಹಡಿದಾಳೆಂತೆಂದು|| 9 ಪದ್ಯ ನುಡಿಯ ಕೇಳೀಪರಿಯ ಖಡುಪಾಪಿ ಕಂಸ ಗಡವಡಿಸಿ ಕೊಂಡೆದ್ದು ಭಯ ಬಡುವತಲೆ ಶ್ವಾಸವನು ಬಿಡುವುತಲೆ ಭರದಿಂದ ಎಡವುತಲೆ ಮುಗ್ಗುತಲೆ ನಡದನಾ ದೇವಕಿಗೆ ಕುಡು ಕೂಸು ಎಂತ್ಯಂದು ನುಡಿಕೇಳಿ ಮನದಲ್ಲಿ ಮಿಡುಕುತಲೆ ದೇವಕಿಯು ದೃಢವಾಗಿ ಕೈಯೊಳಗೆ ಹಿಡಿದು ಆಕೂಸಿನಾ ಕುಡದೆ ಕಂಸನ ಮುಂದೆ ನುಡಿದಳೀ ಪರಿಯು|| 1 ಪದ:ರಾಗ:ನೀಲಾಂಬರಿ ತಾಳ:ತ್ರಿವಿಡಿ ಕುಡಲಾರೆ ಕೂಸಿನ್ನನಾ ನಿನಗೆ || ಅಣ್ಣ ಕುಡಲಾರೆ ಒಡ್ಡಿ ಬೇಡುವೆ ಕಡಿ ಹುಟ್ಟ ಹೆಣ್ಣದು|| ಪ ಸೂಸಿಯು ನಿನಗೆ ಈಕಿ ತಿಳಿ ನೀನು | ಮತ್ತು ಹಸಗೂಸು ಎಂಬುವದರಿಯೇನು | ಇಂಥಾ ಶಿಶುವಿನಳಿದಾರೆ ಪಾಪ ಬರದೇನು| ವಸುಧಿ ಒಳಗೆ ಬಹು ಹೆಸರಾದವನೋ ನೀನು|| 1 ಹಿರಿಯಣ್ಣನಲ್ಲೇನೊ ನೀ ಎನಗೆ | ಸ್ವಲ್ಪ ಕರುಣಾವಿಲ್ಲವೋ ಎನ್ನೊಳು ನಿನಗೆ|| ಮಕ್ಕಳಿರಧಾಂಗ ಮಾಡಿದಿ ಮನಿಯೋಳಗೆ ಗುರುತಕ್ಕಿದು ಒಂದು ನೋಡಿ ಮರೆತೆನ್ಹಿಂದಿನ ದುಃಖ|| 2 ನಾ ಏನು ನಿನಗೆ ಮಾಡಿದೆ ಪೇಳು | ಬಹು ಬಾಯಿತಗುವೆ ಕೋಪವು ತಾಳು| ಇಂಥಾ ಮಾಯಾ ಮೋಹತಳಿಗಿ|| 3 ಪದ್ಯ ಅಪ್ಪ ಕುಡಲಾರೆಂದು ತಪ್ಪದಲೆ ಆ ಕೂಸಿನಪ್ಪಿಕೊಂಡಳುವಾಗ ಕಲ್ಲ ಮ್ಯಾಲಪ್ಪಳಿಸಲಾಕೂಸು ತಪ್ಪನ್ಹಾರಿತು ಮ್ಯಾಲೆ ಅಷ್ಟು ಚಿನ್ಹಿಗಳಂದ ಉಟ್ಟ ಪೀತಾಂಬರದಿ ತೊಟ್ಟ ಹೀಂಗೆ ಸ್ಪಷ್ಟಪೇಳಿದಳು| ಪದ ರಾಗ:ತೋಡಿ ತಾಳ ಬಿಲಂದಿ ಮಂದ ಮತಿಯೇ ಕಂದರನ್ನ ಕೂಂದರೇನು ಫಲವೂ| ಇಂದು ಎನ್ನ ಕೂಂದ ವ್ಯೂಲ ಮುಂದೆ ಬರುವದೇನು| 1 ವೈರಿ ಅನ್ಯರಲ್ಲಿ ಇನ್ನ ಬೆಳೆವುತಿಹನೊ| ಮುನ್ನ ಬಂದು ತನ್ನ ಬಲದಿ ನಿನ್ನ ಕೊಲ್ಲುವೊನು 2 ಅಂತಕನ್ನ ನಿಂತು ಕೊಲ್ಲುವ ಭ್ರಾಂತಿ ಬಿಡೆಲೊ ನೀನು| ಅನಂತಾನಂತಾದ್ರೀಶನಂತು ತಿಳುವದೇನೇ|| 3 ಪದ್ಯ ಆ ಮಹಾ ಪಾಪಿ ಗ್ಯಾಡೀ ಮಾತು ದೇವಿ ತಾ ಭೂಮಿಯಲಿ ಬಂದು ಬಹುಗ್ರಾಮದಲೆ ನಿಂತು ಬಹುನಾವು ಉಳ್ಳವಳಾಗಿ ಕಾಮಿತಾರ್ಥಗಳನ್ನೂ ಪ್ರೇಮದಲಿ ಕುಡುತಿಹಳು ನೇಮದಿಂದಾ|| ಆ ಮಾಯಿ ವಚÀನವನು ಪಾಮರನು ತಾ ಕೇಳಿ ರೋಮಾಂಚಗಳು ಉಬ್ಬಿ ನಾ ಮಾಡಿದಲ್ಲೆಂದು ನೇಮದಲಿ ಇಬ್ಬರಿಗೆ ನೇಮಿಸಿದ ಬೇಡಿಯನು ತಾ ಮೋಚನವು ಮಾಡಿ ಪ್ರೇಮದಿ ನುಡದಾ|| 1 ಪದ:ರಾಗ :ಸಾರಂಗ ಅದಿತಾಳ ಸ್ವರ ಮಧ್ಯಮ ಎಲೆ ತಂಗಿಯೆ ಎಲೊ ಶಾಲಕ ಬಲು ಪಾಪಿಯು ನಾನು| ಬಲು ಮಂದಿ ಮಕ್ಕಳನ ಛಲದಿಂದ ಕೊಂದೆ| ತಿಳಿಯದೆ ನಾ ಇಂಥ ಕೆಲಸಕ್ಕೆ ತೊಡಕಿ ಪರಿ ಪಾಪದ ಫಲ ಭೋಗಿಯು ಆದೆ|| 1 ಅಶರೀರದ ವಾಣಿಯು ಹುಸಿ ಅಯಿತು ಇಂದು ವಸುಧಿಯೋಳಿರುವಾ ಮಾನುಷರಾ ಪಾಡೇನು|| ಶಶಿಮುಖಿ ನಾನಿಮ್ಮ ಶಿಶುಗಳ ಕೂಂದೆ||2 ಅಮಿತಾ ಅಪರಾಧಾಯಿತು ಕ್ಷಮಾ ಮಾಡಿರಿ ನೀವು|| ವಿಮಲ ಮನಸಿನಿಂದ ನಮಿಸಿದೆ ನಿಮಗೆ|| ಕಮಲೋದ್ಭವ ಬರದಂಥಾ ಕ್ರಮ ತಪ್ಪದು ಎಂದು ಶ್ರಮಯಾತಕ ಸುಖದುಃಖವ ಸಮಮಾಡಿರಿ ನೀವು|| 3 ತಿಳಗೇಡಿಯು ಆ ಕಂಸ ತಿಳಿಹೇಳಿಪರಿಯು ಸ್ಥಳಬಿಟ್ಟು ತಾ ತನ್ನ ಸ್ಥಳಕ್ಹೋದನು ಬ್ಯಾಗೆ\ ಬ್ಯಳಗಾಗಲು ಎಲ್ಲಾರಿಗೆ ತಿಳಿಸೀದನು ಆಗೆ ಹೊಳುವಾ ದೇವಿಯ ಮಾತುಗಳನೆಲ್ಲ ಬಿಡದೆ || 4 ಖಳರಂದರು ನಾವಿನ್ನ ಇಳಿಯೊಳ್ಹುಟ್ದರುವಾ| ಉಳದಾ ಬಾಲಕೃಷ್ಣಕರನ್ನ ಕೊಲ್ಲು ವುದ ಸತ್ಯಾ| ತಿಳದೀಪರಿ ಅವರನ್ನ ಕಳಸೀದ ಕಂಸಾ ಚಲುವಾನಂತಾದ್ರೀಶನ ಕೊಲ್ಲವೊದು ಎಂದು|| 5 ಪದ್ಯ ಮುಂದ ಗೋಕುಲದಲ್ಲಿ ನಂದಗೋಪನು ತನ್ನ ಕಂದನಾ ಮುಖವನ್ನು ಛಂದದಲಿ ನೋಡಿ ಆನಂದ ಹಿಡಿಸದೆ ತಾನು ಬಂದ ಬಂದವರಿಗ್ಯಾನಂದ ಬಡಸಿದ ಮನಕ ಬಂದದ್ದು ಕೂಟ್ಟು| ನಂದನಂದನನ ವದನೇಂದು ದರ್ಶನಕಾಗಿ ಬಂಧು ಬಾಂಧವರೆಲ್ಲ ಬಂದು ಒದಗಿದರಲ್ಲೆ ದುಂದುಬಿಯು ಮೊದಲಾದ ಛಂದಾದ ವಾದ್ಯಗಳು ಒಂದಾಗಿ ನುಡದÀವಾನಂದದಿಂದಾ| ಗೀತ ಬಲ್ಲವರು ಸಂಗೀತವನು ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ತಾತನವ ತನ್ನಲ್ಲೆ ಜಾತನಾಥಂಥವಗೆ ಜಾತಕರ್ಮವು ಮಾಡಿ ಪ್ರೀತನಾದಾ| ಪ್ರೀತಗೋಕುಲದಲ್ಲಿ ನೂತನೈಶ್ವರ್ಯಗಳು ಜಾತವಾದವು ಸರ್ವಜಾತಿಗಳಿಗ್ಯಾದರೂ ಯಾತಕ್ಕೂ ಕಡಿಮಿಲ್ಲ ಸೋತಂಥ ದಾರಿದ್ರ್ಯ ಯಾತಕಿರುವದು ರಮಾನಾಥ ಇರಲು|| 1 ಸ್ಥಿರ ಮನಸಿನಿಂದಲ್ಲೆ ಸ್ಥಿರವಾಗಿ ಕುಳಿತು ಈ ಚರಿತವನು ಕೇಳಿದವರ ಪರಿಪರಿಯ ಅಭಿಲಾಷ ಪರಿಪೂರ್ಣವಾಗುವದು ಚರಿಸದಲೆ ಅವರಲ್ಲಿ ಸ್ಥಿರಳಾಗಿ ಇರುವವಳು ವರಮಹಾಲಕ್ಷ್ಮೀ| ಧರಿಯೊಳಗ ಇರುವಂಥ ವರಕವೀಶ್ವರರಂತೆ ಸ್ಥಿರವಲ್ಲ ಗೋಕುಲದಲ್ಲಿ ತ್ವರ ಅವನೇ ಮುಗಿಸಿದಿಲ್ಯರಡು ಅಧ್ಯಾಯಾ|| 2 “ಶ್ರೀ ಕೃಷ್ಣಾರ್ಪಣ ಮಸ್ತು” ಎರಡನೆಯ ಅಧ್ಯಾಯವು ಸಂಪೂರ್ಣವು”
--------------
ಅನಂತಾದ್ರೀಶ - ಕಥನಕಾವ್ಯಗಳು
ಕೊಡಬೇಕು ದಾನಗಳ ಸತ್ಕಾರ್ಯಕೆಬಿಡಬೇಕು ಕೈಸಡಿಲು ಮೋಕ್ಷಸಾಧನೆಗೆ ಪಬೇಡದಲೆ ಕೊಡುವವರು ರೂಢಿಯೊಳಗುತ್ತಮರುಬೇಡಿದರೆ ಕೊಡುವ ದಾನಿಯು ಮಧ್ಯಮಬೇಡಿದರು ಕಾಡಿದರು ಕೊಡದವರು ಅಧಮರುಕೊಡೆದೆ ಬಡಬಡಿಸುವವರು ಮೂರ್ಖ ಅಧಮಾಧವುರು 1ದುಡ್ಡು ಇದ್ದರೆ ಮಾತ್ರ ದೊಡ್ಡವರು ಅನಬೇಡದುಡ್ಡಿದ್ದು ದಾನ ಧರ್ಮವು ನಡೆಯಬೇಕುದುಡ್ಡು ಕಾಯುವ ಸರ್ಪಕ್ಕೆ ಇಹ'ಲ್ಲ ಪರ'ಲ್ಲಬಿದ್ದು ಹೋದರೆ ಅವರ ಬಾಯೊಳಗೆ ಮಣ್ಣು 2ಧನಿಕರಿಗೆ ಭೂಷಣವು ದಾನಧರ್ಮವು ಸದಾಧನ'ದ್ದ ಜಿಪುಣತಾ ಜೀವಂತ ಹೆಣವುಧನ'ದ್ದು ದಾನಮಾಡುವ ಪುಣ್ಯವಂತರಿಗೆಘನಮ'ಮ ನಮ್ಮ ಭೂಪತಿ'ಠ್ಠಲನೊಲಿಯುವನು 3ತಾುಯ ಹರಕೆ
--------------
ಭೂಪತಿ ವಿಠಲರು
ಕ್ಷೇತ್ರ ದರ್ಶನ ಉಡುಪಿಯ ಯಾತ್ರೆಯ ಮಾಡಿ - ಉಡುಪಿಯಾ ಪ ಉಡುಪಿಯ ಯಾತ್ರೆಯನ್ನೆ ಮಾಡಿ | ಭಕ್ತಿಮುಡುಪಿತ್ತು ಪ್ರಮೋದ ಬೇಡಿ | ಆಹನಡುದೇಹ ದೋಳೀಹ | ನಡುನಾಡಿ ಕಮಲದಿಒಡೆಯ ಶ್ರೀ ಕೃಷ್ಣನ್ನ | ಧೃಡ ಭಕ್ತಿಯಿಂ ಭಜಿಸಿ ಅ.ಪ. ಆನಂದ ತೀರಥ ಸರಸಿ | ಯೊಳುಮೀನನಾಗಿ ಬಹು ಈಸಿ | ಹರಿಧ್ಯಾನದಿ ಸ್ನಾನ ಪೊರೈಸಿ | ಮತ್ತೆಮೌನವೆಂಬಾಸನ ಹಾಸಿ | ಆಹಮೂಧ್ರ್ನಿ ಲಲಾಟದೋಳ್ | ಗೋಣು ಮಧ್ಯೋದರಸ್ಥಾನಾದಿಯಲಿ ಹರಿ | ಧ್ಯಾನ ನಾಮವ ಹಚ್ಚಿ 1 ಮಧ್ವ ಕಿಂಕರನೆಂಬೊ ದೊಂದು | ಹರಿವಿದ್ವೇಷಿಗಳ ಬಡಿವೊದೆಂದು | ಮತ್ತೆಸದ್ವೈಷ್ಣವರ ಸೇರ್ವೋದೊಂದು | ಇನ್ನುಬುದ್ಧಿಪೂರ್ವಕ ಹರಿ ಪರನೆಂದು | ಆಹಶ್ರದ್ಧಾಳು ವೆಂದೆನಿಪ | ಮುದ್ದು ಮುದ್ರೆಗಳೈದುತಿದ್ದಿ ವಿಸ್ತರಿಸೂತ | ಕೃದ್ದೋಲ್ಕಾದಿಯನೆನೆ 2 ಸಂಧ್ಯಾ ಮೂಡಿಹುದು ನೀ ನೋಡು | ಕಾಲಮುದ್ಹಿಂದಾಗದಲೆ ನೀ ಮಾಡು | ಯಾವದೊಂದು ಮಂತ್ರಾರ್ಥವ ನೋಡು | ಇನ್ನುಸಂಧ್ಯಾ ನಾಮಕನ ಕೊಂಡಾಡು | ಆಹಛಂದದಿ ನಿನ ಜ್ಞಾನ | ಮುಂದು ಮುಕ್ಕಿಲು ಒಪ್ಪಮಂದೇಹ ದೈತ್ಯರ | ಮಂದಿಯ ಕೊಲ್ಲುತ 3 ಕಂಟಕ ಕಳೆದು ಶರೀರ | ಮಧ್ಯಮಂಟಪ ಚಿಂತಿಸೊ ಧೀರ | ಅದಕೆಎಂಟರ್ಧ ಮತ್ತೊಂದು ದ್ವಾರ | ಕಾಯ್ವಭಂಟ ಮಾರುತನ ವ್ಯಾಪಾರ | ಆಹಎಂಟ್‍ಟಾರು ನಾಲ್ಕು ಸ್ತಂಭ ಮಧ್ಯದಿ ಲಕ್ಷ್ಮಿಮಂಟಪ ಚಿಂತಿಸಿ ಒಂಟಿಯಾಗೊ ಮನದಿ 4 ಕೆಳ ಮುಖಾಬ್ಜವನೇ ನೀ ನೋಡೀ | ಮಂತ್ರಮೂಲದಿಂದ ಮೇಲು ಮಾಡಿ | ಅಲ್ಲಿಇಳೆಯಾಣ್ಮನನ ಚಿಂತೆ ಮಾಡಿ | ಸರ್ವಅಲಂಕಾರ ದಿಂದೊಡಗೂಡೀ | ಆಹನೆಲೆಸೀಹ ಕೃಷ್ಣನ್ನ | ಒಲಿಸೆ ಭಕ್ತಿಯಿಂದಸ್ಥಳ ತನ್ನ ಅರಮನೆ | ಯೊಳು ಕೊಟ್ಟು ಸಲಹುವ 5 ನಿತ್ಯ ಸ್ತವನ | ಆಹಇಂಬಿಟ್ಟು ಸ್ತೋತ್ರದಿ | ಉಂಬುಡುವೋ ಸರ್ವಬಿಂಬನೋಳರ್ಪಿಸಿ | ಸಂಭ್ರಮದಲ್ಲಿರು 6 ಮಧ್ವ ಸರೋವರ ಸ್ನಾನ | ಭಕ್ತಿಶುದ್ಧದಿ ಶ್ರೀಕೃಷ್ಣಧ್ಯಾನ | ಮಾಡೆಹೃದ್ಯನು ಹೃದ್ಯದಿಷ್ಠಾನ | ದಲ್ಲಿಸಿದ್ಧಿಸೂವನು ಗುಣ ಪೂರ್ಣ | ಆಹಮುದ್ದು ಕೃಷ್ಣನು ಗುರು | ಗೋವಿಂದ ವಿಠಲನುಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ 7 ತೀರ್ಥ ಕ್ಷೇತ್ರ ಮಾಲಾ 1952 ರಲ್ಲಿ ಇಡೀ ಭರತ ವರ್ಷದಲ್ಲಿ ಪ್ರದಕ್ಷಿಣಾಕಾರವಾಗಿ ಹೊರಟು ಆಸೇತು ಹಿಮಾಚಲ ಪರ್ಯಂತವಿರುವ ಅನಂತ ತೀರ್ಥ ಕ್ಷೇತ್ರಗಳಲ್ಲಿ ಈ ಅಲ್ಪಾಧಿಷ್ಠಾನದ ಯೋಗ್ಯತಾಪ್ರಕಾರ ಬಿಂಬನು ಮಾಡಿ ಮಾಡಿಸಿದ ಯಾತ್ರಾ ಪ್ರಕರಣವೂ, ಮತ್ತೆ, 1954 ರಲ್ಲಿ ಉಡುಪಿ ಇತ್ಯಾದಿ ಪಶ್ಚಿಮ ಕ್ಷೇತಗಳ ಮತ್ತು 1957 ರಲ್ಲಿ ಮಲಖೇಡದಲ್ಲಿ ಬೃಹತೀ ಸಹಸ್ರವಾದಾಗ ಆಕಡೆ ಹೋದಾಗ ನೋಡಿದ ಅನೇಕ ಕ್ಷೇತ್ರಗಳ ಮತ್ತು 1961 ರಲ್ಲಿ ಸ್ವಾದಿ, ದ್ವಾರಕ, ಪುಷ್ಕರ, ಬದರಿ (ದ್ವಿತೀಯಾವರ್ತಿ) ಹೋಗಿ ಬಂದಾಗ ನೋಡಿದ ಯಾತ್ರಾ ಪ್ರಕರಣಗಳ ಜ್ಞಾಪಕಾರ್ಥವಾಗಿ ಈ ತೀರ್ಥಕ್ಷೇತ್ರಮಾಲಾ ಅಸ್ಮದ್ಗುರ್ವಂತರ್ಗತ ಬಿಂಬ ಮೂರುತಿ ಪ್ರೇರಿಸಿದಂತೆ ಬರೆಯಲ್ಪಡುತ್ತೆ :-
--------------
ಗುರುಗೋವಿಂದವಿಠಲರು
ಘಟನೆಯನು ಮಾಡಿಸೈ ಘಟೋತ್ಕಚ ಜನಕಾ ಪ ಘಟದೊಳಗೆ ಸುಧೆಯಿಟ್ಟು ಮದ್ಯವೆಂತೆಂದು ಪೇಳಿದರೆ ಮಧ್ವದೂತರು ಒಡಂಬಡುವರೇ ಮಧ್ಯಮಾಧಮರಿಗಿದುಅಲ್ಲದೇ 1 ಪರಮ ಪುರುಷನೆ ಕೇಳು ಪರಮತದ ಮತಿಯ ಕೆಡಿಸು ನಿನ್ನ ಪ್ರೇಮಾಖ್ಯ ಕರುಣಕವಚ ತೊಡಿಸು ಜನುಮ ಜನುಮಕ್ಕೆ ಇದೇ ಬೇಡಿಸು 2 ಕಾಯನೇ ನಾನೆಂಬಂಥ ಅಜ್ಞಾನ ಪಟು ಬಿಡಿಸೊಸುಜ್ಞಾನವಿತ್ತು ಸಲಹೊ ತಂದೆವರದಗೋಪಾಲವಿಠ್ಠಲನಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಚಿಂತಯಾಮಿ | ರಘುರಾಮಂ | ಸುತ ಕೌಸಲ್ಯೋದರಜಂ |ಸಂತತ ಶರಣರ ಕೃಪಾ | ಪಾಂಗವೀಕ್ಷಾ ಹಸಿತಂ ಪ ಸರಿ ಗ ಸರೀ | ಮಪ ಧಪ ಧಾ | ರಿಸ ನಿಧ ನಿಧ | ಪಮ ಗರಿ ಸದದ್ರುತ - ಸರಿಮಾ ಗರಿ | ಮಪ ದಾಪಮ | ಪಧಸಾ ನಿಧ | ನಿಧ ಪದಪಧ ||ಗರಿ ಸಧ | ``ರಿ ಸ ಧಾ ಸ | ಧಾ ಗ ರಿ ನಿಧಮ | ಗರಿಸಧ | ರವಿ ಕುಲಾನ್ವಯತಿಲಕಂ | ಋಷಿ ವಿಶ್ವಾಮಿತ್ರ ಕೃತಹವನ ಹೋಮ, ಬಾಧಾಗ್ರಸ್ತ | ವಿಮೋಚನ, ಶೀಲಂಅವನಿಜೆ ವೈವಾ, ಹಕ್ಕಾನೀತಂ | ಲಕ್ಷ್ಮಣ ಸಹ, ವಿಧಿಲಾಗ5ನಂ |ಶಿವಧನುವಂ, ಮುರಿದು ರಾಜ | ರುಗಳ ಗರ್ವಹರ | ಶ್ರೀರಾಮಂ 1 ಮಗ ಸಾ ನಿóದ | ನಿóಸಾ ರಿಗಮ | ನಿಧ ಮಾಗರಿ | ಗಮ ಪಗರಿಸದ್ರುತ - ನಿಧನಿಸ ರಿಗಮ ಧನಿಪಧ | ನಿಸ ನಿಧ ನಿಸರಿಗ ಮಗಸನಿ ||ಗರಿಸಧ, ರಿಸ ಧಾ, ಸ ಧಾಆ, ಗರಿ || ನಿದಮ | ಗರಿಸಧ || ರಾಗ - ಧನ್ಯಾಸಿ : ಅನುಜ ಸತಿಸಹ | ವನವಾಸಂ |ನಿಶಿಚರ ಹನನ | ಶೂರ್ಪನಖಿ | ನಾಸಛೇದಂ | ಚರಿತಂ 2 ರಾಗ :ಧಾನಿಸಿ :ನಿಸ ಗಾಮ ಪ | ಗಮ ಪಾನಿಸ | ರಿಸ ರಿನಿ ಸಪ | ಧಪಗಾರಿಸನೀ ಸ ಗ ಮಪ ಗಾ ಮಪನಿಸ | ಪಾ ನಿಸ ಗರಿ ಸನಿಧಪ ನಿಸಗರಿಸಧಾ, ಆರಿಸ ಧಾಸ, ಧಾ, ಗರಿ ನಿಧಮ ಗರಿಸದ || ರಾಗ - ಪರ | ಮಾನುಗ್ರಹ ಶೀಲಂ ರಾಮಂ 3 ಗಾ ಪ ಗರಿ, ಗರಿ ಸಧಸರಿ | ಗಾಪ ದಸದಪ ಗರಿ ಸರಿಗಪಗಗ, ರಿಸ | ರಿಗ, ರಿರಿಸ ಧ | ಸರಿಗರಿ ನಪಗಪ ಧಪಧಸ |ಗರಿಸಧಾ, ಆರಿಸ ಧಾ, ಸದಾ, ಗರಿನಿಧಮ, ಗರಿಸದ || ರಾಗ ಪೂರ್ವಕಲ್ಯಾಣಿ : ಲೇಸು ಕಪಿಗಳ ನಿಚಯ | ಸೀತಾಕೃತಿ ಹುಡುಕುತ |ಆ ಸಮೀರನು | ವಾರಿಧಿಯನು | ಹಾರಿ ಲಂಕೆಯ ಪುರದಲ್ಲಿಅಣುರೂಪದಿ ಹುಡುಕುತ | ಸೀತಾಕೃತಿಯ | ಕಂಡನುದೇಶ ಪುಚ್ಛಾಗ್ನಿಯಲಿ | ದಹಿಸಿ ಸೀತೆ | ವಾರ್ತೆ ಪೇಳಿದನು 4 ಗಾಮಗರಿಸ | ಧ ಸರಿ ಗಮ | ಪಾ ಧಪಸ | ನಿಧಪ ಮಗರಿ |ಗಮಪ ಮಾಪಗಾ | ಮರೀಗ | ಸಾರಿಗಆಮ ಪಧ ಪಸಾ ನಿ |ಗರಿಸಧಾ, ಆಸಧಾ ಸಧಾ ಗರಿ ನಿಧ ಮ ಗರಿಸಧ || ರಾಗ :ಮುಖಾರಿ : ಸತಿ ಪರಿವಾರ ಪುಷ್ಪಕವಿ | ಸ್ವಪುರ ಖೊರಟ 5 ಪಾ ಮಗರಿ | ಸಾ ನಿಧ ಸರಿ | ಮಾಗರಿಸ | ರಿಮ ಪದ ನಿಧ ಸಾ ಸನಿ ಧಪ ಪಾ | ಮಗರಿಸ | ನಿಧಸರಿ ಮಪನಿಧ ಮಪಧಸ ||ಗರಿಸಧಾ ಆರಿಸ ಧಾಅಸ | ಧಾಅ ಗರಿ ನಿಧಮ ಗರಿಸಧ || ರಾಗ ಮಧ್ಯಮಾವತಿ : ಸುರರು ಭಾರ ಕಳೆದ5ುರು ಗೋವಿಂದ ವಿಠಲ 6 ರೀ ಮರಿ ಮಪ | ನೀ ಪಮ ಪನಿ ಸಾ ರಿಸನಿ | ಪಪ ಮಮರಿ ಸ || ರೀಪಮ ರಿಸನಿಪ ರಿಮಪಾ || ರಾಗ :ಪೂರ್ವಕಲ್ಯಾಣಿ || ಧಪ ಸಾ ನಿಧಪಮ | ಮಪಗರಿರಾಗ :ಮೋಹನ || ಸರಿಮಾ ಗರಿ ಸರಿಗಾ | ಪಗರಿ ಸರಿ ಪದಸ ರಾಗ :ಮುಖಾರಿ | ರೀ ಸದಾ ಪದಪ ಗಾರಿ ಸರಾಗ :ನಾಟಿಕುರಂಜಿ || ನಿಸ ಮಗ ಧನಿ ಪಧನಿಸ ರಾಗ : ಸಾವೇರಿ || ಗರಿ ಸದಾ ರಿಸ ಧಾ ಸ | ಧಾ ಗ ರಿ ನಿದಮ ಗರಿಸದ
--------------
ಗುರುಗೋವಿಂದವಿಠಲರು
ಜಯದೇವಿ ತನಯಗೆ ಮಂಗಳಂ ಶುಭ ಮಂಗಳಂ ಯುಗ ಯುಗದಿ ಪುಟ್ಟಿ | ಜಿಗಿದು ಗಗವ ಮೆಟ್ಟಿ ಹಗಲೊಡೆಯನ ಫಲ ಬಗೆಯ ಬಕ್ಷಿಸಿ ಮಿಗೆ ಭಕುತಿಲಿಂದ ರಘುಪನೊಲಿಸಿನಾ ಲ್ಮೊಗನ ಪದವಿ ಪಡೆದ ಸುಗುಣ ನಿಧಿಗೆ 1 ಪುನಃ ದ್ವಾಪರದಲ್ಲಿ ಇನಜನ ತನುಜಗೆ ಅನುಜನೆಂದೆನಿಸಿ ಹರಿಯಾಜ್ಞೆಯಿಂದಲಿ ಮಣಿಮಂತ ಮೊದಲಾದ ದನುಜರ ಗಣವೆಲ್ಲ ರಣದೊಳು ಹಣಿದಂಧ ಘವವೀರನೆ 2 ಬಂದು ಭೂಮಿಯಲ್ಲಿ ಮಧ್ಯಮಂದಿರ ನಂದನನಾಗಿ ಮಂದ ಮಾಯ್ಗಳ ಮತ ಖಂಡಿಸುತಲಿ ಶಿಂಧುತೀರದಿ ಮೆರೆವ ಇಂದುಕ್ಷೇತ್ರದಿ ಶಾಮ ಸುಂದರ ಸ್ಥಾಪಿಸಿದಾನಂದಮುನಿಗೆ 3
--------------
ಶಾಮಸುಂದರ ವಿಠಲ
ಜಾಣಿ ರಂಗಯ್ಯನ ಕಾಣದೆ ನಿಲ್ಲದು ಮನ ವಾಣಿ ರಮಣನ ಪಿತನ ವೇಣದಿ ಕರೆತಾರಮ್ಮ ಪ. ಜರಿಯ ಸುತನು ತಾನು ಜಗಳಕೆ ಬಾಹೋನೆಂದು ಕರೆಸಿದ ವಿಶ್ವಕರ್ಮನ ಕರೆಸಿದ ವಿಶ್ವಕರ್ಮನ ದ್ವಾರಕಾವಿಪುರನಿರ್ಮಿಸೆಂದ ಕ್ಷಣದಾಗೆ ಜಲದೊಳು1 ತಳಿರು ತೋರಣನಿವಹ ಮೇರುವಿಗೆ ಪೊನ್ನ ಕಳಸ ಮೇರುವಿಗೆ ಪೊನ್ನ ಕಳಸ ಕನ್ನಡಿ ಮನೋಹರವಾಗಿದ್ದು ಸಟಿಯಿಲ್ಲ2 ದ್ವಾರಕಾಪುರದ ಶೃಂಗಾರ ವರ್ಣಿಸಲು ಮೂರು ಕಣ್ಣವಗೆ ವಶವಲ್ಲಮೂರು ಕಣ್ಣವಗೆ ವಶವಲ್ಲ ನಾಲ್ಕು ಮುಖದವಗೆ ಬಲುಮಿಗಿಲು3 ಹದಿನಾರು ಸಾವಿರ ಚದುರೆಯರ ಮಂದಿರ ಮದನನಯ್ಯನ ಮನೆಮಧ್ಯಮದನನಯ್ಯನ ಮನೆಮಧ್ಯ ದ್ವಾರಕೆಅದ್ಬುತವಾಗಿ ಬೆಳಗಿದೆ 4 ಶಿಶುಪಾಲ ದಂತವಕ್ತ್ರ ಮೊದಲಾದ ಮಹಾಅಸುರರನ್ನೆಲ್ಲ ಅಳುಹಿದ ಅಸುರರನ್ನೆಲ್ಲ ಅಳಿದು ದ್ವಾರಕೆಯಲ್ಲಿನಸು ನಗುತಿದ್ದ ನರಹರಿ 5 ಸತ್ಯದಿ ರುಕ್ಮಿಣಿ ಸತ್ಯಭಾಮಾದೇವಿ ವಾರಿಜ ಮುಖಿ ಷಣ್ಮಹಿಷೇರಸಹಿತಾಗಿಷಣ್ಮಹಿಷೇರ ಸಹಿತಾಗಿಕಾರುಣ್ಯಸಿಂಧು ರಾಮೇಶ ಕುಳಿತಿದ್ದ 6 ಶ್ರೀ ರಮಾರಮಣನಾದ ಶ್ರೀ ಕೃಷ್ಣನ ಅರಮನೆಗೆಸುಭಧ್ರೆ ಮುಯ್ಯ ತರುತಾಳೆಸುಭಧ್ರೆ ಮುಯ್ಯ ತರುತಾಳೆÀಹಸ್ತಿನಾವತಿಯ ಭೂಸುರರೆಲ್ಲ ಬರತಾರೆ7
--------------
ಗಲಗಲಿಅವ್ವನವರು
ತತ್ವ ಚಿಂತನೆ ಮಧ್ಯಮತವೇ ದೊಡ್ಡದೆಂದು ತಿಳಿದು ಮನ ಶುದ್ಧಿಯಿಂದ ಮತವನನುಸರಿಸೋ ಪ ಶ್ರೀ ಮಧ್ವಮತದಲ್ಲಿ ಹರಿಯೇ ಸವೋತ್ತಮ ಭೇದಪಂಚ ಜಗತೆರಡು ಸತ್ಯ ಶ್ರೀ ಬ್ರಹ್ಮಾದಿಗಳೆಲ್ಲ ಹರಿಪರಿವಾರರು ತಾರತಮ್ಯವೇ ಸದಾ ಇವರಲ್ಲಿ 1 ಮುಕ್ತಿ ಎಂಬುದು ನಿಜಾನಂದದ ಅನುಭವ ಭಕ್ತಿಯೆಂಬುದೇ ದೊಡ್ಡ ಸಾಧನವು ಅಕ್ಷಾನುಮಾಗಮ ಮೂರು ಪ್ರಮಾಣ ಶ್ರೀ ಲಕ್ಷ್ಮೀಶನೇ ಸರ್ವಶ್ರುತಿವೇದ್ಯನು 2 ಸ್ವತಂತ್ರ ಪರತಂತ್ರ ಎರಡು ತತ್ವಗಳು ಸ್ವತಂತ್ರ ತತ್ವವು ಹರಿಯೊಬ್ಬನೇ ಪ ರತಂತ್ರ ಮಿಕ್ಕಿದ್ದಲ್ಲಾ ಇದಕೆ ಪ್ರಮಾಣವು `ಏಷ ಸರ್ವೇಶ್ವರ ' ವೆನ್ನುತ ಶ್ರುತಿಯು 3 ಹರಿಯೇ ಸರ್ವೋತ್ತಮ ತದನು ರಮಾದೇವಿ ವಿಧಿ ಪ್ರಾಣರಿವರಿಬ್ಬರು ತದನು ಸರಸ್ವತಿ ಭಾರತೇರಿಬ್ಬರು ಶಿವ ಶೇಷ ಗರುಡ ಶ್ರೀ ಹರಿನಾರೇರು 4 ಸೌಪರ್ಣಿ ಪಾರ್ವತಿಯರು ಸಮ ಶಕ್ರ ಕಾಮರು ಸಮ ಸ್ಮರರಮಣಿ ಗುರು ಶಚಿ ಮನು ದಕ್ಷ ಸಮರು ಆ ಮಾನವಿ ಪ್ರವಹ ಯಮೇಂದ್ವರ್ಕ ಸಮರೈವರು 5 ನಿಖಿಲ ದಿವಿಜರಲ್ಲಿ ಈ ವಿಧ ತಾರತಮ್ಯ ನಿಖಿಲ ಸುರೋತ್ತಮ ಹರಿಯೊಬ್ಬನೇ ಮಿಕ್ಕವರಲವೆಂದು ಇಂದ್ರಿಯೇಭ್ಯಃ ಪರಃ ದ್ವಾವಿಮಾ ಇತ್ಯಾದಿ ಶ್ರುತಿವಚನ 6 ಈಶ್ವರ ಜಡ ಭೇದ ಜೀವ ಜಡಕೆ ಭೇದ ಜೀವ ಜೀವಕೆ ಭೇದ ಜಡ ಜಡಕೆ ಜೀವೇಶರಿಗೆ ಭೇದ ಈಶ ಲಕ್ಷ್ಮೀ ಭೇದ ಪರತಂತ್ರ ಚಿತ್ಪರ ಜೀವ ಶಬ್ದ 7 ಬ್ರಹ್ಮವಿಚಾರ ತತ್ಜ್ಞಾನಕೆ ಸಾಧನ ಜ್ಞಾನಪ್ರಸಾದಕೆ ಇದು ಮುಕ್ತಿಗೆ ಆದ ಕಾರಣದಿಂದ ಶಮದಮಯುತನಿಗೆ ಬ್ರಹ್ಮ ಜಿಜ್ಞಾಸವು ಕರ್ತವ್ಯವು 8 ಜಿಜ್ಞಾಸ್ಯಬ್ರಹ್ಮನು ಜೀವನಲ್ಲವೊ ಜಗ ತ್ಕಾರಣತ್ವವು ಜೀವಗೆಲ್ಲಿಹುದೊ ರುದ್ರಾದಿಗಳು ಜಗತ್ಕಾರಣರಲ್ಲವೊ ಶಾಸ್ತ್ರವೇದ್ಯನೆ ಜಗತ್ಕಾರಣನು 9 ಉಪಕ್ರಮಾದಿಗಳ ವಿಚಾರ ಮಾಡಲು ಸರ್ವ ಶಾಸ್ತ್ರ ತಾತ್ಪರ್ಯಗೋಚರ ಹರಿಯೆ ಅಕ್ಷಾದ್ಯವೇದ್ಯನ ಜ್ಞೇಯನಾಗುವ ಹರ್ಯ ವಾಚ್ಯನೆಂಬುವುದದು ಸರಿಯಲ್ಲವೊ10 ಆನಂದಮಯ ಮೊದಲಾದ ವಾಚ್ಯನು ಮತ್ತೆ ಸರ್ವಗತತ್ವಾದಿ ಲಿಂಗಯುತ ದ್ಯುಭ್ವಾದಿಗಳಿಗಾಧಾರನು ಅವ್ಯಕ್ತ ಜ್ಯೋತಿರಾದಿ ಶಬ್ದ ಮುಖ್ಯಾರ್ಥನು 11 ದೋಷವರ್ಜಿತ ಹರಿ ವಿಷಯವಿರಕ್ತಿ ಭಕ್ತ್ಯು ಪಾಸನದಿಂದಲೆ ಅಪರೋಕ್ಷನೊ ಇಂತು ಪ್ರಸನ್ನನು ಮುಕ್ತಿಯನೀವನು ಎಂಬುವುದೆ ಸರ್ವ ಶಾಸ್ತ್ರಾರ್ಥವೊ 12 ವರನಾಮಗಿರಿ ನರಹರಿಯ ಪಾದಾಂಬುಜ ನಿರತ ಹೃದಯನಾಗಿ ಅನುದಿನದಿ ಧರಣಿ ಸುರನು ಇದ ಪೇಳಲು ನರಹರಿ ಚರಣಕಮಲ ಭಕ್ತಿ ಪೊಂದುವನು 13
--------------
ವಿದ್ಯಾರತ್ನಾಕರತೀರ್ಥರು
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು
ನಂದ ತೀರಥರಾಯ ಅಸ್ಮದ್ಗುರೋರ್ಗುರು ಕಾಯ ಪೊರೆಯಯ್ಯ ಜೀಯಾ ಪ ಪಾದ ಕಮಲಕೆ ನಂದ ಮಧುಕರ ನಂದದಲಿ ನಿಜ ಮಂದ ಜನರಿಗೆ ನಂದ ಕೊಡುವಾ ಮೂರ್ತಿ ಆನಂದಕಾರಿಯೆ ಅ.ಪ ಮಧ್ಯಮನಿ ದ್ವಿಜನಲ್ಲಿ ಉದ್ಭವಿಸಿ ನೀನೂ ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ - ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ ಶುದ್ಧ ಶ್ರೀ ಹರಿಮತದ ಶುಭ ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ ಸಿದ್ಧಗಣಕಧಿನಾಥನೆಂದೂ ಪ್ರ - ಸಿದ್ಧಗೈಸಿದಿ ಶುದ್ಧ ಮೂರುತಿ 1 ಬದರಿಕಾಶ್ರಮವನ್ನು ಐದಿದ್ಯೊ ಮುದದಿ ಪದುಮನಾಭನನ್ನು ಬಲಗೈಸಿ ನಿನ್ನ ಬದಿಗ ಜನರಿಗಿನ್ನೂ ಸುವಾಕ್ಯ ದಿಂದಲಿ ಪೇಳಿದದು ನಿಜ ಪದುಮನಾಭನೆ ಪರಮದೈವನು ಪದುಮೆ ಮೊದಲು ಬ್ರಹ್ಮಾಂತ ಜೀವರ ಪದದಿ ಗುಣದ ತಾರತಮ್ಯವ ಹೃದಯ ಮಂದಿರದಲ್ಲಿ ಪೇಳಿದ 2 ಘನ್ನಮಹಿಮನೆ ಎನ್ನಮನ ವಚನ ಕಾಯದಿ ಇನ್ನು ಮಾಡುವುದನ್ನು ಸ್ವೀಕರಿಸಿ ಹರಿಗೆ ಮುನ್ನ ನೀಡೆಲೊ ಚೆನ್ನವಾಗಿ ನಿಜಫಲ ನಿನ್ನ ಜನರೀಗಿನ್ನ ನೀಡಯ್ಯ ಮುನ್ನ ನಿನ್ನ ಒಳಗೆ ನಿರುತ ಇರುವ ಘನ್ನ ಗುರುಜಗನ್ನಾಥವಿಠಲನ ಎನ್ನ ಮನದಲಿ ತೋರಿಸೆಂದು ನಿನ್ನ ಪದಯುಗವನ್ನು ಭಜಿಸಿದೆ 3
--------------
ಗುರುಜಗನ್ನಾಥದಾಸರು
ನಂದಪುತ್ರನ ಆಜ್ಞೆಯಿಂದಲುದ್ಧವ ಬ್ಯಾಗ ಬಂದು ಗೋಕುಲ ಹೊಕ್ಕಾನಂದದಿಂದಲಿ 1 ಬಾಲನ್ವಾರ್ತೆಯ ಕೇಳೆಶೋದ ಗೋಪನು ಕೊಂ- ಡಾಡಿ ಗುಣಗಳ ಮನಕೆ ತಾಳಿದರ್ಹರುಷವ 2 ತಾಪ ಬಿಡದಲೆ ಅಗಲಿ ಶ್ರೀಪತಿ ಕಾಣದೆ ಸಂತಾಪದಿಂದಿರೆ 3 ಸತಿಯರೆಲ್ಲರು ಗೋಪಿಸುತನ ಪಾಡುತ ದಧಿಯ ಮಥಿಸಿ ಕದವನೆ ತೆಗೆಯೆ ರಥವ ಕಂಡರು 4 ದಾವ ಕಾರಣ ನಮ್ಮ ಭಾವಭಕ್ತಿಗೆ ಸ್ವಾಮಿ ತಾನೆ ಬಂದಾನೋ ತನ್ನಕ್ರೂರನ ಕಳಿಸ್ಯಾನೊ 5 ಭದ್ರೆರೆಲ್ಲರೂ ಕೂಡಿ ಎದ್ದು ಬರುತಿರೆ ಮಧ್ಯಮಾರ್ಗದಿ ಅಲ್ಲುದ್ಧವನ ಕಂಡರು 6 ಕಾಂತೇರೆಲ್ಲರು ಕೂಡೇಕಾಂತ ಸ್ಥಳದಲ್ಲಿ ನಿಂತು ಕಂತುನಯ್ಯನು ಲಕ್ಷ್ಮೀಕಾಂತ ಕ್ಷೇಮವೆ 7 ಇಂದಿರೇಶನ ಬಿಟ್ಟಗಲಿ ವ್ರಜದೊಳು ಕಾಲ ಹಿಂದೆ ಕಳೆವೋದ್ಹ್ಯಾಗಿನ್ನ ್ಹಗಲು ಇರುಳನೆ 8 ಮುಂದೆ ಕಾಣದೆ ನೇತ್ರ ಅಂಧಕರಂದದಿ ಮು- ಕ್ಕುಂದನಿಂದಲಿ ರಹಿತರೆಂದಿಗಾದೆವೊ 9 ತೊಡಿಗೆ ಬಂಗಾರ ಶಿರದಿ ಮುಡಿವೊ ಮಲ್ಲಿಗೆ ದೇಹ- ಕ್ಕುಡಿಗೆ ಭಾರವೊ ಬಿಟ್ಟು ಪೊಡವಿಗೊಡೆಯನ 10 ಉದ್ಧವ ನಾವು ಜಾಳು ಸ್ತ್ರೀಯರು ಒಲ್ಲದೆ ಕಾಳಿಮರ್ದನ ಕಾಲಲೊದ್ದು ಪೋದನು 11 ಜಾರಸ್ತ್ರೀಯರುಯೆಂದು ನಗದಿರುದ್ಧವ ಬಿಗಿದ ಮೋಹಪಾಶದಿ ಈ ವಿಚಾರ ಮಾಡಿದ 12 ಬಲೆಯಗಾರಗೆ ಸಿಕ್ಕು ಬಳಲಿದಾಕ್ಷಣ ಅದರ ಕೊ- ರಳ ಕೊಯ್ಯದೆ ಅವಗೆ ಕರುಣ ಬರುವುದೆ 13 ಎಷ್ಟು ಹೇಳಲೊ ಅವನ ಗಟ್ಟಿಯೆದೆಗಳ ಒಲ್ಲದೆ ಬಿಟ್ಟು ನಮ್ಮನು ಮಧುರಾಪಟ್ಟಣ ಸೇರಿದ 14 ಭ್ರಮರಕುಂತಳೆ ಒಂದು ಭ್ರಮರಕಾಣುತ ಬ್ಯಾಡ ಕಮಲನಾಭನ ವಾರ್ತೆ ಕಿವಿಗೆ ಸೊಗಸದು 15 ಮದನಮೋಹನ ಹೋಗಿ ಮಧುರಾಪುರಿಯಲಿ ಅಲ್ಲಿ ಚÉದುರೆರಿಂದಲಿ ಅವಗೆ ಸೊಗಸು ಸಮ್ಮತ 16 ಕ್ರೂರನೆನ್ನದೆ ಇವಗಕ್ರೂರನೆನುತಲಿ ದಾರ್ಹೆಸರಿಟ್ಟರೋ ನಮಗೆ ತೋರಿಸೊ ಅವರನು 17 ಯಾತಕ್ಹೇಳುವಿ ಅವನ ವಾರ್ತೆ ಸೊಗಸದು ಹರಿಯು ಪ್ರೀತಿ ವಿಷಯನು ನಮಗೆ ಘಾತಕನೆನಿಸಿದ 18 ಜಲನ ಭೇದಿಸಿ ಹಯನ ಕೊಂದು ವೇದವ ಹ್ಯಾಗೆ ಹರಣ ಮಾಡಿದ 19 ಕ್ಷೀರ ಮಥನವ ಮಾಡಿ ಸ್ತ್ರೀಯರೂಪದಿಂದಸುರರ ಮೋಹಿಸಿದ್ವಂಚನೆ ನಮಗೆ ಪೂರ್ಣ ತಿಳಿಸಿದ 20 ಭೂಮಿ ಬಗಿದನು ತನ್ನ ಕ್ವಾರೆಯಿಂದಲಿ ನಮ್ಮನ್ನು ಸೀಳಿ ಪೋದರೆ ಇನ್ನೀ ಘೋರ ತಪ್ಪುವುದು21 ಕಂದ ಕರೆಯಲು ಕಂಬದಿ ಬಂದು ಸಲಹಿದನೆಂದು ನಂಬಿ ಕೆಟ್ಟೆವೊ ಇನ್ನಿವನ ಹಂಬಲ ಸಾಕಯ್ಯ 22 ಕೊಟ್ಟ ದಾನವ ಬಲಿಯ ಕಟ್ಟಿ ಪಾಶದಿಂದವನ ಮೆಟ್ಟಿದ ಪಾತಾಳಕಿಂಥಾಕೃತ್ಯಮರುಂಟೇನೊ 23 ಕೊಡಲಿ ಕೈಯ್ಯೊಳು ಪಿಡಿದು ಹಡೆದ ಮಾತೆಯ ಶಿರವ ಕಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 24 ಬಂದ ಸತಿಯಳ ಮೋರೆ ಅಂಗ ಕೆಡಿಸಿದ ತ- ನ್ನಂಗನೆ ಕಾಣದೆ ತಿರುಗಲೆಮಗೆ ಸನ್ಮತ 25 ಪತಿಯ ಸುತರನೆ ಬಿಟ್ಟೆವಶನ ವಸನವ ಅಗಲಿದ್ವಸುನಂದನಗೆ ನಮ್ಮೆಲ್ಲರುಸುರು ಮುಟ್ಟಲ್ಯೊ 26 ಬೌದ್ಧರೂಪದಿ ಸ್ತ್ರೀಯರ ಲಜ್ಜೆಗೆಡಿಸಿದನೆಂಬೊ ಸುದ್ದಿ ಬಲ್ಲೆವೊ ನಾವಿಲ್ಲಿದ್ದವರುದ್ಧವ 27 ಕಲಿಯ ಮನಸಿರೆ ಇವಗೆ ಕಲ್ಕ್ಯನೆಂಬೋರೊ ಕತ್ತಿ ಪಿಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 28 ಬ್ಯಾಡವೆನುತಲಿ ಅವಗೆ ಬೇಡಿಕೊಂಡೆವೊ ಗಾಡಿಕಾರನು ನಮ್ಮ ನೋಡದ್ಹೋದನು 29 ನಮ್ಮ ವಚನವ ಹೋಗಿ ಮನ್ನಿಸುದ್ಧವ ಪನ್ನಂಗಶಯನನ ಪಾದಕ್ಕಿನ್ನು ನಮಿಸೆವೊ 30 ಬಿಟ್ಹ್ಯಾಗಿರುವೊಣೋ ಭೀಮೇಶಕೃಷ್ಣನ ನಮ್ಮ ದೃಷ್ಟಿಗೆ ತೋರಿಸೊ ಮುಕ್ತಿ ಕೊಡುವೊ ದಾತನ31
--------------
ಹರಪನಹಳ್ಳಿಭೀಮವ್ವ
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ