ಒಟ್ಟು 45 ಕಡೆಗಳಲ್ಲಿ , 18 ದಾಸರು , 45 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನಾವೂರ ಅಗ್ರಹಾರದ ಕಟ್ಟೆ ಮುಖ್ಯಪ್ರಾಣ) ಕರವ ಪಿಡಿಯೋ ಜಾಣ ಘಟ್ಯಾಗಿರಲಿ ಕರುಣಾ ದುಷ್ಟ ಭಾವನೆಯನ್ನು ದೂರವೋಡಿಸಿ ಮನೋ- ಭೀಷ್ಟವ ದಯಮಾಡು ದುರಿತಾಬ್ಧಿ ಕಾರಣ ಪ. ಕೋಳಾಲ ಜನರಮೇಲ್ಕರುಣಾ ಕಟಾಕ್ಷಧಿ ಕೋಳಾಲ ಕರಯುಗದಿ ಪಿಡಿದು ಬಂದು ನೀಲ ಮೇಘನ ತೆರದಿ ಶೋಭಿಸುತಾಗ್ರ- ಮಾಲೆಯ ಶಿಖರದಲಿ ರಾಜಿಸುವ ಕೃಷ್ಣನ ಲೀಲೆಗಳಿಗನುಕೂಲನಾಗಿ ಸುಲೋಲ ನೇತ್ರಾವತಿ ಸರಿದ್ವರ ಕ- ಪಿಲದೊಳು ಪುಟ್ಟಾಲಯದೊಳನುಗಾಲ ನಿಂತ ಕೃಪಾಲವಾಲಾ 1 ಪ್ರಾಚೀನ ಯುಗದಿ ಮಾರೀಚ ವೈರಿಯ ಸೇರಿ ನೀಚ ರಕ್ಕಸರ ಗೆದ್ದೆ ದ್ವಾಪರದಲ್ಲಿ ಕೀಚಕ ಕುಲವ ಗೆದ್ದೆ ಕ್ಷಮೆಯೊಳು ತಿದ್ದೆ ಸೂಚಿಸಿದ ದೇವೋತ್ತಮರ ಬಲು ಸೂಚನೆಯ ಕೈಗೊಂಡು ಕಲಿಮಲ ಮೋಚನೆಯಗೊಳಿಸಿಲ್ಲಿ ನಿಂದು ನಿ- ರೋಚನಾತ್ಮಜ ವರದನೊಲಿಸುವ 2 ಕಾಯ ವಾಕ್ಕøತಾನಂತಾ ಪರಧಾಮ- ನೇನೊಂದನೆಣಿಸದಿರು ಕೃಪಾಪಾತ್ರ ನಾನೆಂದು ನೆನೆಸುತಿರು ಅಭಿಮಾನ ತೋರು ಪಾದ ಪಂಕಜ ಮಾನಿ ಕರುಣಿಸಹೀಂದ್ರ ಗಿರಿವರ ಶ್ರೀನಿವಾಸನ ಮುಖ್ಯಮಂತ್ರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅನಂತಗಿರಿವಿಠಲ | ಪಾಲಿಸೋ ಇವಳಾ ಪ ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ. ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ 1 ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ 2 ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ 3 ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ 4 ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ಕøತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಆನಂದಾನಂತ ವಿಠಲ ನೀನಿವನ ಸಲಹೊ ಪ ಜ್ಞಾನಿಜನ ಸುಪ್ರೀಯ ನೀನೆಂದು ಭಿನ್ನವಿಪೆ ಅ.ಪ. ಪ್ರಾಚೀನ ದುಷ್ಕರ್ಮ ನಿಚಯದಿಂದಲಿ ಬಳಲಿಸ್ವೋಚಿತ ಸುಕರ್ಮಕ್ಕೆ ಅವಕಾಶ ವಿರದೇ |ವಾಚಿಸುತಲೀ ನಿನ್ನ ನಾಮಾಮೃತವ ಸವ್ಯಸಾಚಿ ಸಖನೇ ನಿನ್ನ ಮೊರೆಯ ಹೊಕ್ಕವನಾ 1 ಕರ್ಮ ಆಧೀನ ನಿನದಲ್ಲೆ |ನೀದಯದಿ ಸಂಚಿತವ ಮೋದದಲಿ ಕಳೆದು |ವೇದಗಮ್ಯನೆ ಹರಿಯೆ ಭೇದಮತ ಸುಜ್ಞಾನ ಭೋದಗೈವುದು ಎಂದು ಪ್ರಾರ್ಥಿಸುವೆ ನಿನ್ನಾ 2 ಮಂತ್ರನಿಲಯರ ನಿರುತ ಸ್ವಾಂತದಲಿ ಭಜಿಸುತ್ತಸಂತ್ರಸ್ತಸಜ್ಜನರ ಪೊರೆಯೆ ಮೊರೆಯಿಡುತ |ಭ್ರಾಂತ ಮಾಯಾತ್ಮ ತೊರೆದು ಅಂತರಂಗದಿ ಮಧ್ವಅಂತರಾತ್ಮನ ಭಜಿಪ ಸಂತದಾಸನ್ನಾ 3 ಅಂಬರ ಸುವಾಣಿಯಿಂದಂಬೆ ರಮಣನು ರುದ್ರಬಿಂಬ ನರಹರಿ ನೀನೆ ಇಂಬಿನಂಕಿತವನಂಬಿ ಬಂದಿಹಗಿತ್ತು ಸಂಭ್ರಮದಿ ಕರುಣಿಸಿಹೆಬಿಂಬ ಕ್ರಿಯ ಸುಜ್ಞಾನ ತುಂಬು ಇವನಲ್ಲೀ 4 ದೋಷದೂರನೆ ಹರಿಯೆ ದಾಸನ ಸದ್‍ಹೃದಯ ದಾಶಯದಿ ತವರೂಪ ಲೇಸು ತೋರೆಂಬಾ |ಮೀಸಲು ಪ್ರಾರ್ಥನೆಯ ಸಲಿಸೆಂದು ಭಿನ್ನವಿಪೆವಾಸುಕೀ ಶಯನ ಗುರು ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಏನು ದುಷ್ಕøತ ಫಲವೋ ಸ್ವಾಮಿ ಶ್ರೀನಿವಾಸನೆ ಪೇಳೋ ಪ. ಏನು ಕಾರಣ ಭವಕಾನನದೊಳು ಬಲು ಹಾನಿಯಾಗಿ ಅವಮಾನ ತೋರುವದಿದು ಅ.ಪ. ಹಂಬಲವೂ ಹಿರಿದಾಯ್ತು ಎನ್ನ ನಂಬಿಕೆಯೂ ಕಿರಿದಾಯ್ತು ಸಂಭ್ರಮವಲ್ಲ ಕುಟುಂಬಿಗೆರೆನ್ನಯ ಹಂಬಲಿಸರು ನಾನೆಂಬುವದೇನಿದು 1 ಹಣವಿಲ್ಲಾ ಕೈಯೊಳಗೆ ಸ- ದ್ಗುಣವಿಲ್ಲಾ ಮನದೊಳಗೆ ಜನಿತಾರಭ್ಯದಿ ತನುಸುಖವಿಲ್ಲೈ ಘನದಾಯಾಸವ ಅನುಭವಿಸುವದಾಯ್ತು 2 ಪೋದರೆಲ್ಲ್ಯಾದರು ಅಪ- ವಾದವ ಪೇಳ್ವರು ಜನರು ಆದರವಿಲ್ಲೈ ಶ್ರೀಧರ ತವ ಚರ- ಣಾಧಾರವೆ ಇನ್ನಾದರೂ ಕೃಪೆಯಿಡು 3 ಗೋಚರವಿಲ್ಲೆಲೊ ರಂಗ ಎನ್ನ ಪ್ರಾಚೀನದ ಪರಿಭಂಗ ನಾಚಿಕೆ ತೋರದ ಯಾಚಕತನವ- ನ್ನಾಚರಿಸುವ ಕಾಲೋಚಿತ ಬಂದುದು 4 ಸೇರಿದೆನೆಲೊ ರಂಗ ಕೃಪೆ ದೋರೆನ್ನೊಳ್ ನರಸಿಂಗ ಭಾರವೆ ನಿನ್ನ ಮೈದೋರಿ ರಕ್ಷಿಸುವುದು ನಾರದನುತ ಲಕ್ಷ್ಮೀನಾರಾಯಣ ಗುರು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏನು ದುಷ್ಕøತ ಫಲವೋ ಸ್ವಾಮಿ ಶ್ರೀನಿವಾಸನೆ ಪೇಳೋ ಪ. ಏನು ಕಾರಣ ಭವಕಾನನದೊಳು ಬಲು ಹಾನಿಯಾಗಿ ಅವಮಾನ ತೋರುವದಿದು ಅ.ಪ. ಹಂಬಲವೂ ಹಿರಿದಾಯ್ತು ಎನ್ನ ನಂಬಿಕೆಯೂ ಕಿರಿದಾಯ್ತು ಸಂಭ್ರಮವಲ್ಲ ಕುಟುಂಬಿಗೆರೆನ್ನಯ ಹಂಬಲಿಸರು ನಾನೆಂಬುವದೇನಿದು 1 ಹಣವಿಲ್ಲಾ ಕೈಯೊಳಗೆ ಸ- ದ್ಗುಣವಿಲ್ಲಾ ಮನದೊಳಗೆ ಜನಿತಾರಭ್ಯದಿ ತನುಸುಖವಿಲ್ಲೈ ಘನದಾಯಾಸವ ಅನುಭವಿಸುವದಾಯ್ತು 2 ಪೋದರೆಲ್ಲ್ಯಾದರು ಅಪ- ವಾದವ ಪೇಳ್ವರು ಜನರು ಆದರವಿಲ್ಲೈ ಶ್ರೀಧರ ತವ ಚರ- ಣಾಧಾರವೆ ಇನ್ನಾದರೂ ಕೃಪೆಯಿಡು 3 ಗೋಚರವಿಲ್ಲೆಲೊ ರಂಗ ಎನ್ನ ಪ್ರಾಚೀನದ ಪರಿಭಂಗ ನಾಚಿಕೆ ತೋರದ ಯಾಚಕತನವ- ನ್ನಾಚರಿಸುವ ಕಾಲೋಚಿತ ಬಂದುದು4 ಸೇರಿದೆನೆಲೊ ರಂಗ ಕೃಪೆ ದೋರೆನ್ನೊಳ್ ನರಸಿಂಗ ಭಾರವೆ ನಿನ್ನ ಮೈದೋರಿ ರಕ್ಷಿಸುವುದು ನಾರದನುತ ಲಕ್ಷ್ಮೀನಾರಾಯಣ ಗುರು5
--------------
ತುಪಾಕಿ ವೆಂಕಟರಮಣಾಚಾರ್ಯ
ಒಂದು ಪಥವ ಹೊಂದಲರಿಯರೀ ಮನುಜರು ಇಂದಿರೇಶನ ಪಾದವ ಕಾಣದೆ ಕೆಡುವರು ಧ್ರುವ ಒಂದರೆ ಘಳಗಿ ನಾನೆವೆ ಮಾಡಿದೆನೆಂಬರು ಒಂದರೆ ಘಳಗಿ ಪ್ರಾಚೀನವೆಂಬರು ಒಂದರೆ ಘಳಗಿ ಈಶ್ವರ ಸೂತ್ರವೆಂಬರು ಒಂದರೆ ಘಳಗಿ ತಾ ಏನೋ ಎಂತೆಂಬರು 1 ಒಮ್ಮೆ ಜಾಗೃತಿಯೊಳಿದೇ ನಿಜವೆಂಬರು ಖರೆ ಎಂಬರು ಒಮ್ಮೆ ಸುಷುಪ್ತ್ತಿಯೊಳಿದೇ ಸತ್ಯವೆಂಬರು ಒಮ್ಮೆ ಇದರ ಶುದ್ಧಿ ತಿಳಿಯದಂತಿಹರು 2 ಒಂದು ತಿಳಿದರ ಸಕಲವು ಒಂದಾಗಿ ದೋರುವದು ಒಂದರೊಳಗ ಸಕಳ ದೊರೆಕೊಂಬುದು ಒಂದಾಗಿ ಸಲಹುವ ಮಹಿಪತಿ ಸ್ವಾಮಿಯ ತಂದೆ ಸದ್ಗುರು ಭಾಸ್ಕರ ಕೋಟಿ ತೇಜನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಮಲ | ಭಜಿಸಿ ಬದುಕಿರೋನಿಜ ಸುಜ್ಞಾನ ಹರಿಭಕ್ತಿ | ನಿಜಕೆ ತರುವರೋ ಪ ಸಂತ ಶ್ರೀನಿವಾಸನಹಂ | ಮತಿಯ ವಿಚಾರಾಚಿಂತಿಸದೆ ಒಲಿದಂಥ | ಶಾಂತ ಚಿತ್ತರಾ ||ಕಂತುಹರ ಸುತನಂಶ | ಜಾತರಿಹರಾಅಂತೆ ತೋರಿ ದಾಸ ದೀಕ್ಷೆ | ಪಂಥ ವಿತ್ತರಾ 1 ಮಂಗಳದುತ್ಸವಕಾಗಿ | ಸಂಘ ಬರ್ಲಾಗಿಮಂಗಳ ಭಕ್ಷವು ಮಂಡಿಗಿ | ಮಾಳ್ಪರಿಲ್ಲಾಗಿಭಂಗ ಭೀತಿ ಅಧಿಪಗೊದಗಿ | ಚಿಂತಿಸಲಾಗಿಅಂಗ ವೇಷ ಬದಲಾಗಿ | ಬಂದ ತಾನಾಗಿ2 ಗ್ರಂಥ ಸುಧಾಭಿಧ ಬಲ್ಲ | ಸಂತ ಸುಬ್ಬಣ್ಣಸಂತ ವಿಜಯದಾಸಗಿಂಥ | ಗ್ರಂಥವೆಲ್ಲಣ್ಣಅಂತೆ ದಾಸಗಪರೋಕ್ಷ | ಕಂತೆ ಕಾಣಣ್ಣಚಿಂತಿಸುತ್ತ ಪ್ರವಚನ | ಭ್ರಾಂತ ನಿದ್ದನ 3 ಬಂದು ವಿಜಯದಾಸರಾಗ | ತೊಂದರೆ ಯೋಗ ಛಂದದಿಂದ ನೀಗಿ ಭಕ್ಷ | ಮಾಡಿದ ರಾಗ |ಬಂದು ಸುಧಾ ಕೇಳುತಿರಲು | ಆಚಾರ್ಯರಾಗ ಸಂದೇಹವ ಪಡುತಲಿ | ಮೌನವಿರಲಾಗ 4 ಪಾಚಕನ ತೆರ ಬಂದ | ಭೃಗುವಿನಂಶನುನೀಚ ನೀರಿನವನ ಶಿರದಿ | ಚಾಚಿ ಕೈಯ್ಯನ್ನುಬಾಚಿ ಬಿಡಿಸೆಂದ ಅವರ | ಸಂಶಯವನ್ನುವಾಚೀಸೀದ ಅನುವಾದ | ನೀರಿನವನೂ5 ಪೇಚಿಗೆ ಸುಬ್ಬಣ್ಣ ಸಿಕ್ಕಿ | ಮನದಿ ತಪಿಸೀ |ಯಾಚಿಸೀದ ಕ್ಷಮೆಯನ್ನು | ಬಹಳ ಪ್ರಾರ್ಥಿಸಿ ||ಸೂಚಿಸಲು ಶೈವನಿದ್ದ | ಬೇಲೂರು ವಾಸಿಪ್ರಾಚೀನದ ಸ್ಮøತಿ ಬಂತು | ನಂಜುಂಡ ನೆನಿಸಿ 6 ಪಾಣಿ ಇಟ್ಟು ಶಿರದಲ್ಲಿ | ಆಶೀರ್ವದಿಸಿವೇಣುಗೋಪ ದಾಸರಲ್ಲಿ ಅಂಕಿತ ಕೊಡಿಸಿ ||ಸಾಣೆ ಇಟ್ಟಂತಾಯಿತವನ | ಜ್ಞಾನದ ಅಸಿಮಾಣದಲೆ ವಿಜಯ ಕವಚ | ಮಾಡಿದ ಸೂಸಿ 7 ದಾಸಕೂಟ ಜನರೆಲ್ಲ | ಬಿಡದೆ ಪಾಡುವವ್ಯಾಸವಿಠಲ ರಚಿತೆನ್ನ | ವಿಜಯ ಕವಚವಲೇಸು ನೆರೆ ನಂಬಿದೆನ್ನ | ವಿಠಲ ಸ್ತೋತ್ರವಮೀಸಲಾಗಿ ಪಾಡುವರು | ಸ್ತೋತ್ರವೆಲ್ಲವ 8 ವರ್ಷ ಸೌಮ್ಯ ಕಾರ್ತೀಕದಿ | ಸೇವಿಸುತ್ತಿರೆದರ್ಶನಿತ್ತು ಸ್ವಪ್ನದಲ್ಲಿ | ಧೈರ್ಯಕೊಟ್ಟಾರೆಹರ್ಷವಿತ್ತು ದಾಸಕಾರ್ಯ | ಸಾಗಿಸುತ್ತಾರೆದರ್ಶದಿನ ಪುಷ್ಯ ನೃಹರಿ | ಯಾತ್ರೆಯಿತ್ತಾರೆ 9 ವಿತ್ತ ನಿತ್ಯ | ಇಲ್ಲದಿನ ವೊಲ್ಲೆ ||ಮೂರ್ತಿ ಬಿಂಬ ತೋರಿ ಎಂದು | ಕೇಳುವ ಸೊಲ್ಲೆಸಾರ್ಥಕವ ಮಾಡಿರೆಂದು | ಪ್ರಾರ್ಥಿಸೆ ಬಲ್ಲೆ 10 ಸುಜನ ಸಂಗ | ವಿತ್ತು ಸುಶೀಲಕಾವ ದಾಸ ಜನರನ್ನು | ಹೃದಯ ವಿಶಾಲಗೋವ ಪರಿಪಾಲ ಗುರು | ಗೋವಿಂದ ವಿಠಲನತೀವರದಿ ಭಜಿಸಿ ಕಳೆದ | ಮಾಯಾಪಟಲ11
--------------
ಗುರುಗೋವಿಂದವಿಠಲರು
ಕರ ಪಿಡಿಯೊ ಬೇಗಾ ಪ ಸಿರಿ | ಮಾಧವನೆ ಭಿನ್ನವಿಪೆಕಾದುಕೊ ಬಿಡದಿವನ | ಹೇ ದಯಾಪೂರ್ಣ 1 ಪ್ರಾಚೀನ ಕರ್ಮಗಳ | ಯೋಚಿಸಲು ಯನ್ನಳವೆಮೋಚ ಕೇಚ್ಛೆಯ ತೋರೊ | ಕೀಚಕಾರಿ ಪ್ರೀಯನೀಚೋಚ್ಛ ತರತಮವ | ವಾಚಿಸಿವನಲಿ ನಿಂತುವಾಚಾಮ ಗೋಚರನೆ ಸಾಕ್ಷಿ ವೇದ್ಯಾ 2 ಭಾಗವತ ಪೀಯೂಷ | ವೇಗ ಉಣಿಸುತಲಿವನನೀಗೊ ಭವರೋಗವನು | ನಾಗಾರಿವಾಹಾಜಾಗರ ಸ್ವಪ್ನದಲಿ | ನೀಗಿ ಭ್ರಮವೆರಡನ್ನುಜಾಗು ಮಾಡದೆ ಸಲಹೋ ಭೊಗಿಶಯನಾ 3 ಭವ | ಅಂಬುಧಿಯ ದಾಂಟಿ ನೀ-ಲಾಂಬು ದಾಭ ಹರಿ ಹೃದಯಾಂಬರದಿ ತೋರಿಇಂಬಿಟ್ಟು ಭಕ್ತನ್ನ | ಸಲಹೆ ಬಿನ್ನವಿಪೆ ಕೃ-ಪಾಂಬುಧಿಯೆ ತವ ಪಾ | ದಾಂಬುಜದಲಿಡುವೆ 4 ಭಾವ ಕ್ರಿಯ ದ್ರವ್ಯದೊಳು | ಅದ್ವಯನು ನೀನೆಂಬಭಾವದನುಭವವಿತ್ತು | ಇವನ ಪಾಲಿಪುದುಕಾವ ಕರುಣಿಯೆ ಗುರು | ಗೋವಿಂದ ವಿಠ್ಠಲನೆಗೋವತ್ಸಧ್ವನಿದಾವು | ಧಾವಿಸೂವಂತೆ 5
--------------
ಗುರುಗೋವಿಂದವಿಠಲರು
ಕಾಣದೆ ಸುಳ್ಳೆ ಬಡಿದಾಡ್ವಿರ್ಯಾಕಣ್ಣ ನಾನ್ಹೋಗತನ ನಿಮಗೆ ಮುಕ್ತಿಯಿಲ್ಲಣ್ಣ ಪ ಪ್ರಾಚೀನ ಹಿರಿಯರ ಸಾಕ್ಷಿಕೊಡುವೆ ನಿಮಗೆ ಜ್ಞಾನದಿಂ ಕೇಳಿ ತಿಳೀಬಹುದಣ್ಣ ಅ.ಪ ಘನವಂತ ಸತ್ಯವ್ರತ ಭೃಗು ಗಾರ್ಗೆಯರು ಇನಿಸುತಿಳಿಯದೆ ವಿಶ್ವಾಮಿತ್ರನು ಘನಶ್ರಮಬಟ್ಟರು ಮುನಿ ವರದನಾರದರು ದಿನದಿನ ತ್ರಿಣಿಯರು ದರ್ಶನಿದ್ದವರು ಜನಕ ರಾಜರ್ಷಿಯು ಮುನಿ ಅತ್ರಿಮಹಿಮರು ನಾನ್ಹೋಗತನ ಮುಕ್ತಿ ಸಿಗದೆ ಬಳಲಿದರು 1 ಸನಕಾದಿ ಸಾನಂದ ಮಹರ್ಷಿಗಳು ಮುನಿಶ್ರೇಷ್ಠ ಬಲ್ಲಿದ ವಾಲ್ಮೀಕಾದಿಗಳು ಶೌನಕಶುಕಭರದ್ವಾಜಮುನಿಗಳು ಗಣನೆಯಿಲ್ಲದ ಮಿಕ್ಕ ಪತಿತಮೋಕ್ಷಿಗಳು ಪುರಂದರ ಜ್ಞಾನಿಗಳಿವರ್ಗೆಲ್ಲ ನಾನ್ಹೋಗತನ ಮುಕ್ತಿ ಆಗಿಲ್ಲ ಕೇಳೋ 2 ನಾನ್ಹೋಗದದಕಜ ಕಳಕೊಂಡ ಶಿರವ ನಾನು ಹೋಗಿದ್ದರೆ ಅಳಿತಿದ್ದಿಲ್ಲೆಲವೋ ಖೂನವಿಲ್ಲದೆ ಕೂಗಿ ಕೆಡಬೇಡಿ ನೀವು ಭವ ಹೊಂದಿರಿ ಗೆಲವು ನಾನ್ಹೋದಮೇಲೆ ಜಾನಕಿ ಶ್ರೀರಾಮ ಮಾಣದೆ ಕೊಡುವನು ಮುಕ್ತಿ ಸಂಪದವ 3
--------------
ರಾಮದಾಸರು
ಕಾಯ ಬೇಕಿವಳಭಯ ಕೃತು ಭಯನಾಶ | ದಯದೋರೊ ಶ್ರೀಶ ಪ ವಾದೀಭ ಮೃಗರಾಜ | ವಾದಿರಾಜರ ದಯದಿಸಾಧನಕೆ ಹೆದ್ದಾರಿ | ನೀ ದಯದಿ ತೋರೀಮೋದ ತೀರ್ಥರ ಸಮಯ | ಧ್ಹಾದಿಯಲಿ ನಡೆವಂತೆಹೇ ದಯಾಂಬುಧಿ ಚೆನ್ನ | ಆದರಿಸೋ ಘನ್ನ 1 ಚಂದ್ರ ಸಮ ಸಂಕಾಶ | ಸಂಧಿಸಲು ಸ್ವಪ್ನದಲಿಇಂದು ಭಾಗ ನಿವಾಸ | ಸಂದರ್ಶನಿತ್ತೂ ಕಂದಿದ್ದ ಕನ್ಯೆಗೇ | ನಂದ ದಾಯಕನಾಗಿಸುಂದರನೆ ನರರೂಪಿ | ಸಂಧಿಸಿದೆ ಭಾಗ್ಯ 2 ಚಂದ್ರ ವದನೆಯು ಲಕುಮಿ | ಮಂದಿರಕೆ ಬರುತಲ್ಲೆನಿಂದಿರಲು ಸೌಭಾಗ್ಯ | ಸಂಧಿಸದೆ ಇಹುದೇಇಂದಿರಾರಾಧವಪದ | ಮಂದಸ್ಮಿತಾನನನೆಮಂದಿಯೊಳಗೀ ಶಿಶುವ | ಛಂದಾಗಿ ಸಲಹೋ 3 ಹರಿಗುರು ಸದ್ಭಕ್ತಿ | ಪರತತ್ವ ಸುಜ್ಞಾನ ಕರುಣಿಸುತ್ತ ಸಂತೈಸು | ಸುರ ವರೇಣ್ಯಾ |ಮರುತಾಂತರಾತ್ಮ ನಿ | ನ್ಹೊರತು ಅನ್ಯರ ಕಾಣೆಪರಿ ಹರಿಸೊ ಪ್ರಾಚೀನ | ಕರ್ಮಾಂಧ ಕೂಪಾ 4 ಭಾವಜ್ಞ ನೀನಾಗಿ | ಭಾವದೊಳು ಮೈದೋರೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಗುರು ರಾಘವೇಂದ್ರ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತ ಕಳೆದು | ವೈರಾಗ್ಯ ಕೊಡುತಾಅ.ಪ. ಪ್ರಾಚೀನ ದುಷ್ಕರ್ಮ | ಮೋಚಕೇಚ್ಛೆಯ ಮಾಡಿಕೀಚಕಾರಿಯ ಮತದಿ | ದೀಕ್ಷೆಯನೆ ಕೊಟ್ಟುನೀಚೋಚ್ಛ ತರತಮವೆ | ವಾಚಿಸುತ ಇವಳಲ್ಲಿವಾಚಾಮಗೋಚರನ | ಭಕ್ತಿಯನೆ ಕೊಡುತಾ 1 ಸಾಧುಸಂಗವ ಕೊಟ್ಟು | ಸಾಧನೆಯ ಗೈಸುವುದುಯಾದವೇಶನ ಪ್ರೀತಿ | ಸಾಧನೆಯ ಗುರಿಯಾಮಾಧವನೆ ಪರನೆಂಬೋ ಬೋದ ಸಂತತಕೊಟ್ಟುಕಾದುಕೋ ಶ್ರೀಹರಿಯೆ | ಬಾದರಾಯಣನೆ 2 ಸರುವ ಕರ್ಮಗಳೆಲ್ಲ ಹರಿ ಮಾಡಿ ಮಾಡಿಸುವಬರುವ ತತ್ಸುಖ ದುಃಖ | ಸಮತೆಯಲಿ ಎಂಬಾವರಮತಿಯ ಕರುಣಿಸುತ | ಪರಿಹರಿಸು ಭವಬಂಧಕರುಣಾಳು ಗುರುರೂಪಿ | ಪೊರೆಯ ಬೇಕಿವಳಾ 3 ಮನಸೀನ ಚಾಂಚಲ್ಯ | ವನೆ ನೀನು ಕಳೆಯುತ್ತಕ್ಷಣಕನಂತಪರಾಧ | ಎಣಿಸದಲೆ ಹರಿಯೆದೀನನಾಥನಾದ ಹರಿ | ಜ್ಞಾನ ದಂಕುರವಿತ್ತುಘನ ದಯಾವಾರಿಧೇ | ಪೊರೆಯ ಬೇಕಿವಳಾ 4 ವ್ರಜ ಕುಂದ ವರದ ಹರಿಯೇನೊಂದವಳಿಗಾನಂದ | ಸಂಧಿಸಲು ಪ್ರಾರ್ಥಿಸುವೆಇಂದಿರಾರಾಧ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಛೀ ಛೀ ಬಿಡು ಸಂಸಾರಾಬ್ಧಿಯ ದಾಂಟಲು ನಾವೆಯಚಾಚು ಛೂ ಛೂ ಎಂದರು ಸರ್ವನು ಒಂದಿಷ್ಟು ನಾಚಿಕೆಯಿಲ್ಲ ಈಸು ಪ ಬಿಡುವುದೆ ಲೇಸು ಗಾದಿಯು ತಿಳಿಯದು ಈಸು ಪ್ರಾಚೀನ ಕರ್ಮವಿ ದೀಸು ತಾರಕ ಮಂತ್ರವ ಸೂಸು 1 ಹೊನ್ನಿನ ಬಳಿಯಲಿ ಸರ್ವಾಭರಣವು ಚಿನ್ನವು ಎನಿಸದ ಹಾಗೆ ಚೆನ್ನಾಗಿ ತೋರುವಹಾಗೆ ಕಣ್ಣಲಿ ಕಾಣುವುದೆಲ್ಲ ಕಡೆಯಲಿ ನುಣ್ಣಗೆ ಲಯವಾದಹಾಗೆ ರೂಪನು ತಾನಾದ ಹಾಗೆ 2 ರೇಚಕ ಪೊರಕ ಕುಂಭಕವಿರವನು ಸಾಧಿಸು ನಿನಗದು ಊಚು ಗೋಚರ ದೊಳು ಲಘುತೋಚು 3
--------------
ಕವಿ ಪರಮದೇವದಾಸರು
ಜಗತ್ಸಾರ ವಿಠಲ | ನೀನಿವಳ ಸಲಹೊ ಪ ಬಗೆಬಗೆಯಲಿಂ ನಿನ್ನ | ದಾಸ್ಯಕಾಂಕ್ಷಿಪಳಅ.ಪ. ಭಯದೋರಿ ಸ್ವಪ್ನದಲಿ | ಜಯದೇವಿಸುತ ಪ್ರಾಣದಯೆ ಪಡೆಯಲನುವಾಗ್ಯೆ | ಭಯವನು ತೋರ್ದೇಹಯಮೊಗನೆ ನಿನ್ನಂಥ | ದಯೆ ಪೂರ್ಣರಿನ್ನುಂಟೆನಯವಿನಯ ದಿಂದಿರ್ಪ | ಕನ್ಯೆಯನು ಸಲಹೊ 1 ವ್ಯಾಜ ಕರುಣೇಗೋಜು ಸಂಸøತಿಯಳಿಯೆ | ಬಾಜಿಸುತ ಮನದಲ್ಲಿನೈಜರೂಪವ ತೋರೊ | ಹೇ ಜನಾರ್ದನನೇ 2 ನೂಕಿ ಸಂತಾಪಗಳ | ಲೌಕಿಕ ಸುಭೋಗ ವೈದೀಕ ವೆನಿಸೋ ಹೇ ಕೃ | ಪಾಕರನೇ ದೇವಾಜೋಕೆಯಿಂದಿವಳ ನೀ ಸಾಕಬೇಕೆಂದೆಂಬವಾಕು ಮನ್ನಿಸಿ ಕಾಯೊ | ಶ್ರೀ ಕರಾರ್ಚಿತನೇ 3 ನೀಚೋಚ್ಚ ತರತಮದ | ಸೂಕ್ಷ್ಮ ಸುಜ್ಞಾನಗಳವಾಚಿಸಿವಳಲಿ ನಿಂತು | ಕೀಚಕಾಂತಕನುತಪ್ರಾಚೀನ ಕರ್ಮಗಳ | ಮೋಚಕನು ನೀ ಸವ್ಯಸಾಚಿ ಸಖನೇ ಇವಳ | ಪೇಕ್ಷೆಗಳ ನೀಯೋ 4 ದೇವವರ ಭವ್ಯಾತ್ಮ | ಪಾವನವು ತವ ಸ್ಮøತಿಯನೀ ವೊಲಿದು ಸರ್ವತ್ರ | ಸರ್ವ ಕಾಲದಲೀಈ ವುದನೆ ಬಿನ್ನವಿಪೆ | ಬಾವಜ್ಞ ಸಲಿಸುವುದುಕಾವ ಕರುಣಾಳು ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ನಾರಿಯರಲಿ ಮಾದರಿಯೆಂದೆನಿಸಿರಮ್ಮ ಮೂರುಕುಲಕೆ ಕೀರುತಿಯನು ತನ್ನಿರಮ್ಮ ಸೇರಿದ ಪತಿಮಂದಿರವನುದ್ಧರಿಸಿರಮ್ಮ ಬೇರೆ ಜನಕೆ ಸೋದರಿಯೆಂದರಿಯಿರಮ್ಮ ಅಬಲೆಯರಿರಬಹುದು ದೇಹ ಶಕುತಿಯಲಿ ಪ್ರಬಲಸ್ಥಾನ ನಿಮಗಿಹುದು ಸಮಾಜದಲ್ಲಿ ಶುಭಪರಂಪರೆಗಳ ಪತಿಗೆ ಕೋರಿರಮ್ಮ ಲಭಿಸುವುದತಿಸುಲಭದಿ ಪರಲೋಕವಮ್ಮ ಗೃಹಿಣಿಯೇ ಗೃಹವೆಂಬ ಮಾತನರಿಯಿರಮ್ಮ ಗಹನದ ಸಂಸಾರಪಥವ ಜರಿಯಬೇಡಿರಿ 10 ವಹಿಸಿರಿ ಗೃಹಕೃತ್ಯಗಳನು ಆದರದಲ್ಲಿ ಸಹಿಸಿರಿ ಸುಖದು:ಖಗಳನು ಖೇದವಿಲ್ಲದೆ ಶ್ರದ್ಧೆಯಿರಲಿ ಗೃಹಿಣಿಯ ಕಾರ್ಯದಲಿ ಸರ್ವದ ಸ್ಪರ್ಧೆಯ ಮಾಡಬೇಡಿ ಪುರುಷಗುಚಿತ ಕಾರ್ಯದಿ ತಿದ್ದಿರಮ್ಮ ವಿನಯದಿಂದ ಪತಿಯ ದೋಷವÀ ಹದ್ದಿನಂತೆ ಕಾಯಿರಮ್ಮ ಪತಿಯ ಶ್ರೇಯವ ದೈವದತ್ತವಿಹುದು ನಿಮ್ಮ ಮುಖದ ಕಾಂತಿಯು ಸೇರಿಸಿ ಫಲವೇನು ವಿವಿಧ ಸುಣ್ಣಬಣ್ಣವ ಹೂವುಗಳನು ಕಸಕಲದರ ಗಂಧವಿರುವುದೆ ಯಾವ ಕೃತಕ ಬೇಕಿದೆ ಸ್ವಭಾವ ಶೋಭೆಗೆ 20 ಅನುಗಾಲವು ಊರಿಗೆ ಉಪಕಾರಿಯಾದರು ಮನೆಗೆ ಮಾರಿಯಾಗಬೇಡಿರಮ್ಮ ಎಂದಿಗು ವಿನಯವಿರಲಿ ನಡೆನುಡಿಯಲಿ ಸರ್ವ ಜನರಲು ಪ್ರಣಯ ಸರಸ ಬೇಡಿರಮ್ಮ ಬಂಧು ಜನರಲಿ ದುಡಿದು ದಣಿದು ಉಶ್ಶೆನುತಲಿ ಬರುವ ಪತಿಯಲಿ ಕಿಡಿಕಿಡಿಯಾಗಲಿ ಬೇಡಿರಿ ತರಲು ಮರೆತರೆ ಬಡತನವಿರಬಹುದು ಸದ್ಯ ನಿಮ್ಮ ಪಾಲಿಗೆ ಅಡಿಗಡಿಗದನಾಡಬೇಡಿ ಒಡೆಯನೆದುರಲಿ ನೆರೆಮನೆ ವೆಂಕಮ್ಮನೊಂದು ಸೀರೆ ಕೊಂಡರೆ ಗುರು ಗುರುಗುಟ್ಟುತಲಿ ನೋಡಬೇಡಿ ಪತಿಯನು 30 ಮರುಕದಿ ಸಂತೈಸಲವನು ಮನವು ಕರಗದೆ ಸೆರೆಸೆರೆ ಕಣ್ಣೀರುಗಳನು ಸುರಿಸಬೇಡಿರಿ ತುಳಸಿಯ ಪೂಜೆಯನು ಮಾಡ ಮರೆಯಬೇಡಿರಿ ಕೆಲಸಗಳನು ದಿಟ್ಟತನದಿ ಮಾಡಿ ಮುಗಿಸಿರಿ ಕಲಿಯಿರಿ ಸಂಸಾರದಲಿ ನೆಪ್ಪು ನೇರವ ಹಳಿಯಬೇಡಿರಮ್ಮ ನೀವು ನೆರೆ ಹೊರೆ ಜನರ ಉಳಿಸಿ ಬಳಸಿರಮ್ಮ ತಂದ ಧಾನ್ಯವ ತಿಳಿಸಬೇಡಿ ಮನೆಯ ಗೋಪ್ಯ ಪರರಿಗೆಂದಿಗು ಕಾಲ ಕಳೆಯಬೇಡಿ ಕೆಲಸವಿದ್ದರೆ ಪ್ರಳಯ ಮಾಡಬೇಡಿ ಸಣ್ಣ ಪುಟ್ಟ ಮಾತಿಗೆ 40 ಸೊಟ್ಟ ಬೈತಲೆಯನು ತಗೆಯಲಿಷ್ಟಪಡದಿರಿ ಅಷ್ಟವಕ್ರದುಡುಪುಗಳನು ಧರಿಸಬೇಡಿರಿ ರಟ್ಟು ಮಾಡಬೇಡಿರಮ್ಮ ರೂಪು ರಚನೆಯ ಸಿಟ್ಟು ಮಾಡಬೇಡಿ ಮುದಿಯ ಬುದ್ಧಿವಾದಕೆ ಶ್ರವಣ ಮಾಡಿರಮ್ಮ ಹರಿಯ ಕಥೆಗಳನುದಿನ ಶ್ರವಣ ಮಾಡುವಾಗ ಹರಟೆ ನಿದ್ರೆ ಬೇಡವು ಕಿವಿಯ ಕಚ್ಚಬೇಡಿರಮ್ಮ ಪರರ ವಾಕ್ಯಕೆ ಲವಲವಿಕೆಯು ಬೇಡಿರಮ್ಮ ಚಾಡಿ ಚುದ್ರದಿ ರೂಢಿಯಿಲ್ಲದಿರುವ ನಡತೆ ಬೇಡಿರೆಂದಿಗು ಮೂಢರೆನಿಸಬೇಡಿ ಹಾಡುಹಸೆಯ ಕಲಿಯದೆ 50 ಪಾಡುಪಡುತ ಪತಿಗೆ ಹರುಷನೀಡಿ ಗೃಹದಲಿ ಪ್ರೌಢವಿದ್ಯೆ ಕಲಿತು ದುಡಿಯಬೇಡಿ ಪರರಿಗೆ ಬಣ್ಣವಿಲ್ಲದಿರುವುದು ಬಂಗಾರವಲ್ಲವು ಕಣ್ಣಿಗೆ ಹಿತವಲ್ಲದು ಶೃಂಗಾರವಲ್ಲವು ಉಣಲು ತಾ ದೊರೆಯದಿರಲು ಸಂಪತ್ತಲ್ಲವು ಅನ್ನ ಮಾಡಲರಿಯದಿರಲು ಹೆಣ್ಣದಲ್ಲವು ದುಂದುಗಾರಿಕೆಯನು ಕಲಿಯಬೇಡಿರೆಂದಿಗು ಮುಂದೆ ಕಾಲಚಕ್ರಗತಿಯನು ಮನದಿ ಯೋಚಿಸಿ ಬಂದ ಮಾತುಗಳನು ಬಾಯಿತಡೆದು ಆಡಿರಿ ನಂದಗೋಕುಲವನೆ ಮಾಡಿ ಗೃಹವ ನಗುತಲಿ 60 ಬಳಕೆಯಲ್ಲದಿರುವ ಕಲೆಯ ಕಲಿಯಬೇಡಿರಿ ಕಲಿಸಿರಮ್ಮ ಕೆಲಸಕಾರ್ಯ ಮಕ್ಕಳುಗಳಿಗೆ ಗಳಿಸಿರಮ್ಮ ಪುಣ್ಯಕೀರ್ತಿ ತಿಳಿಯಮನದಲಿ ಸುಲಭವು ಸಾಧನವು ನಿಮಗೆ ಪುಣ್ಯಲೋಕಕೆ ಮನವತಿ ಚಂಚಲತೆಯನ್ನು ಹೊಂದಬಿಡದಿರಿ ಅನುಮತಿ ಕೊಡಬೇಡಿ ದುಷ್ಟ ಜನರ ಬೋಧೆಗೆ ಘನಮತಿಯನು ಪೊಂದಿ ಸತಿಯ ಮಾರ್ಗ ತೋರಿರಿ ಗುಣವತಿಯೆಂದೆನಿಸಿರಮ್ಮ ಹಿರಿಯ ಜನರಲಿ ದುಡುಕಿನ ಹೆಣ್ಣೆಂದು ಹೆಸರು ಪಡೆಯಬೇಡಿರಿ ಸಿಡುಕಿನ ಮೋರೆಯನು ತೋರಬೇಡಿ ಜನರಿಗೆ 70 ಒಡಕಿನ ಬಾಯವಳು ಎಂದು ಎನಿಸಬೇಡಿರಿ ಕೆಡುಕ ಕೋರಬೇಡಿ ಕೋಪದಿಂದ ಪರರಿಗೆ ಧ್ವನಿಯು ಮಧುರವಿರಲಿ ನಿಮ್ಮ ಮಾತುಕಥೆಯಲಿ ಕೆಣಕಬೇಡಿ ಮರೆತುಬಿಟ್ಟ ಜಗಳ ಕದನವ ಇಣಕಿ ನೋಡಬೇಡಿ ಪರರ ನಡೆನುಡಿಗಳನು ಸಾರಥಿಯೆಂದೆನಿಸಿರಿ ಸಂಸಾರ ರಥದಲಿ ವೀರರಮಣಿಯೆಂಬ ದಿವ್ಯ ಕೀರುತಿ ಬರಲಿ ನಾರಿಯರಲಿ ಮಾದರಿಯನು ಪಡೆದು ತೋರಿದ ಭಾರತ ಭೂಮಾತೆಗೆ ಪ್ರತಿಬಿಂಬವೆನಿಸಿರಿ 80 ದೇಶಸೇವೆಯೆಂದು ರಾಜಕೀಯ ಬೇಡಿರಿ ಮೋಸ ಹೋಗಬೇಡಿ ಆಸೆ ತೋರುವ ನುಡಿಗೆ ಕಾಯ ಕ್ಲೇಶ ಬೇಡಿರಿ ಭಾಷಣ ಬಹಿರಂಗದಲ್ಲಿ ಭೂಷಣಲ್ಲವು ಸಿರಿರಮಣಗೆ ತುಳಸಿಗಿಂತ ಪುಷ್ಪವಿಲ್ಲವು ಹಿರಿಯತನಕೆ ಸತ್ಯಕ್ಕಿಂತ ಯುಕ್ತಿಯಿಲ್ಲವು ಅರಸಿ ನೋಡೆ ತಾಯಿಗಿಂತ ನಂಟರಿಲ್ಲವು ಕರಿಮಣಿ ಸಮ ನಾರಿಜನಕೆ ನಗಗಳಿಲ್ಲವು ದಾಸರ ನುಡಿ ಧರ್ಮಗಳ ಪ್ರಕಾಶ ಮಾಡಿತು ಸ್ತ್ರೀ ಸಮೂಹದಿಂದ ನಾಶವಾಗದುಳಿದವು 90 ಆ ಸುಧಾಮ ಸತಿಯರೆ ಈ ದೇಶದ ಸೊಬಗು ಮಾಸದಂತೆ ರಕ್ಷಿಸಿ ಪ್ರಾಚೀನ ನಡತೆಯ ನುಡಿಯಬೇಡಿರಮ್ಮ ಪರರ ವಂಚನೆನುಡಿಯ ಕೊಡಲಿ ಹಾಕಬೇಡಿರಮ್ಮ ಕುಳಿತ ಕೊಂಬೆಗೆ ಇಡಲಿಬೇಡಿ ಮತ್ಸರವನು ದೀರ್ಘ ಕಾಲದಿ ಪುಡಿಯನಿಡಲಿಬೇಡಿರಮ್ಮ ಪುಣ್ಯ ಕಾರ್ಯಕೆ ಸಣ್ಣನುಡಿಗಳೆಂದು ತಿಳಿಯಬೇಡಿರಿವುಗಳ ಭಿನ್ನ ಭಿನ್ನ ದೇಶಕಾಲದನುಭವಗಳಿದು ಬಣ್ಣವತಿಶಯೋಕ್ತಿಯಲ್ಲ ಅರಿತು ನೋಡಿರಿ ಘನ್ನ ಸುಗುಣಭರಿತ ಶ್ರೀ ಪ್ರಸನ್ನ ಸಲಹುವ 100
--------------
ವಿದ್ಯಾಪ್ರಸನ್ನತೀರ್ಥರು
ನಿನ್ನ ದಾಸರ ದಾಸ ನಾನಯ್ಯ-ಹರಿ- ಯನ್ನನುಪೇಕ್ಷಿಪರೇನಯ್ಯ ಪ ಕಾಮಕ್ರೋಧಗಳಿನ್ನೂ ಬಿಡಲಿಲ್ಲ-ನಿನ್ನ- ಪ್ರೇಮವೆನ್ನೊಳುಕಾಲಿಡಲಿಲ್ಲ ತಾಮಸಬೀಜವ ಸುಡಲಿಲ್ಲ1 ಆಚಾರದಲಿ ಕಾಲಗತಿಯಿಲ್ಲ-ಬಲು-ನೀಚರ ಸಂಗಕೆ ಮಿತಿಯಿಲ್ಲ ಪ್ರಾಚೀನ ಕರ್ಮಕ್ಕೆ ಚ್ಯುತಿಯಿಲ್ಲ-ಇದ- ಗೋಚರಪಡಿಸುವ ಮತಿಯಿಲ್ಲ 2 ದೇಹದಿ ಬಲವಿಲ್ಲವಾದರೂ-ವ್ಯಾ- ಮೋಹವು ಬಿಡದಲ್ಪವಾದರೂ ಗೇಹದಿ ಸುಖವಿಲ್ಲದಿದ್ದರು-ಈ ಸೋಹಮೆಂಬುದಕಿಲ್ಲ ಬೆಸರು 3 ದಾಸರ ಸಂಗದೊಳಾಡಿಸು-ಹರಿ-ವಾಸರವ್ರತದೊಳು ಕೂಡಿಸು ವಾಸುದೇವನೆ ನಿನ್ನ ಪಾಡಿಸು-ಸಿರಿವಾಸನಾಮದ ಸವಿ ಯಾಡಿಸು4 ಶರಣವತ್ಸಲನಹುದಾದರೆ-ಘನ-ಕರುಣಾರಸನಿನಗುಳ್ಳರೆ ವಿಠಲ ನೀನೆ ನಮ್ಮದೊರೆ 5
--------------
ಸರಗೂರು ವೆಂಕಟವರದಾರ್ಯರು