ಒಟ್ಟು 52 ಕಡೆಗಳಲ್ಲಿ , 28 ದಾಸರು , 45 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ವೇದಾಂತದೇಶಿಕರು ವೇದಾಂತ ಗುರು ಸಾರ್ವಭೌಮ ಜ್ಞಾನ ಬೋಧಾನುಕೂಲ ನಿಸ್ಸೀಮ ಪ ಆದಿನೋಡು ಅನಾದಿಯೆನ್ನುತ ಬೋಧೆಗೊಳಿಸುಪದೇಶ ಮಾಡಿದ ಸಾಧುಶಿಖರನೆ ಸರ್ವತಂತ್ರನೆ ವಾದಭೀಕರ ವೈಷ್ಣವೋ ನಿಜ 1 ದ್ವಿದಳ ದಾಸನ ಕೈದಸಿದ ನಿಜ ಪದವಿನೋಡೆಂದೆನುತ ಮನಸನು ಕದಿವ ಕಳ್ಳರ ಕೊಂದು ಹಿಡಿಯೆಂ ದೊದಗಿತ್ತನು ಮೊದಲಿನಕ್ಷರಾ2 ಮೂರು ಬಿಡು ನೀ ಮೂರು ಹಿಡಿ ಕೇ ಳಾರು ಚಕ್ರವ ದಾಂಟಿ ತ್ರಿಕುಟಿಯ ಸೇರಿ ಸಂಪದವಾರಿಯೊಳಗದ್ದು ತೋರಿದ ಪರಮಾತ್ಮ ಪರತರ 3 ಎಂಟು ಹಾರಿಸಿ ಎಂಟುಲಿಪಿಯನು ಗಂಟು ಮಾಡೆಂದೆನುತ ನನ್ನೊಳ ಗುಂಟುಮಾಡಿಯು ತೋರಿದ ವೈ ಕುಂಠನಾಥನ ನನ್ನೊಳಗ ನಿಜ 4 ಶುದ್ಧ ಹಂಸನ ಮಾಡಿ ನನಗಾ ಚಿದ್ವಿವೇಕದ ಕವಚ ತೊಡಿಸಿದ ಸತ್ಸ್ವರೂಪಾಚಾರ್ಯನಹುದೆಲೊ ಮದ್ಗುರುವೆ ಶ್ರೀ ತುಲಶೀರಾಮಾ 5
--------------
ಚನ್ನಪಟ್ಟಣದ ಅಹೋಬಲದಾಸರು
ಆನಂದವಾ ನೋಡು ನೀ ವಿಚಾರಿಸಿ ಏನೊಂದುಮಿಲ್ಲಾಗಿ ತಾನೆ ತಾನಾಗಿಹ ಪ ಅನಿಸಿಕೆ ತೋರಿಕೆ ಅಡಗುತಲಿರುತಿರೆ ತನಿನಿದ್ರೆಯೆನಿಸದ ಘನಪದವಾಗಿಹ ಮನಸಿನಿಂದಾಚೆಗೆ ನಿಜವಾಗಿ ನೆಲಗೊಂಡ 1 ಇದೇ ಬ್ರಹ್ಮಾನಂದವು ನೋಡೈ ಸದಾ ನಿರ್ವಿಕಲ್ಪವಾಗಿರುವಾ ಆ ಸ್ಥಿತಿಯನೆ ಗುರುತಿಸಿ ಅನುಭವಿಸುತದನಾ ಮರಳಿ ಜಾಗರದಲಿ ನೆನೆಸಿ ಆ ಸ್ಥಿತಿಯನು ಮರಣರಹಿತವದು ಅದೇ ಪರಮಾತ್ಮನುಗುರುಶಂಕರನು ಪೇಳ್ದ ಅದೇ ತಾನು ಎನ್ನುತ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಎಂತಾದರು ಮಾಳ್ಪುದು ಏಕಾದಶಿ ಇಂಥಾ ವ್ರತವದಾವುದು ಕಂತುಜನಕ ಲಕ್ಷ್ಮೀಕಾಂತನೊಲಿದು ನಿರ್ಮ- ಲಾಂತಃಕರಣದಿ ನಲಿವ ಮಹಾಂತ ಪದವನೀಪ ಪ. ಕೋಟಿ ಕೋಟಿ ಜನ್ಮದ ಪಾತಕಗಳ ಕೋಟಲೆ ಬಿಡಿಸುವುದು ಆಟ ಪಾಟಗಳಿಂದಲಾದರು ನಿದ್ರೆಯ ದುರಿತ ಮಹಾಟವಿ ದಹಿಸುವ 1 ಹತ್ತೊಂದು ಕರಣದಿಂದ ಘಳಿಸಿದ ನಿ- ವತ್ರ್ಯ ಪಾತಕಗಳಿಂದ ನಿತ್ಯ ನರಕದೊಳಗೊತ್ತೆಗೊಳಿಪರ ಮೇ- ಲೆತ್ತಿ ರಕ್ಷಿಪ ಪರಮೋತ್ತಮ ವ್ರತವನ್ನು 2 ವರುಷದೊಳೊಂದಾದರು ಮಾಡಲು ಸರ್ವ ಪುರುಷಾರ್ಥಗಳೀವುದು ಸರಸಿಜನಾಭ ಶ್ರೀವೆಂಕಟಾಚಲಪತಿ ಕರುಣಾಸ್ಪದವಾದ ಹರಿದಿನ ವ್ರತವನ್ನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಏಳು ಪಂಡರಿವಾಸ ಏಳು ಶ್ರೀ ದೇವೇಶ ಏಳು ಮುಕ್ತ ಗಿರೀಶ ಏಳು ಹೃದೇಶ ಪ. ಏಳು ಮೂಲೋಕದೀಶ ಏಳು ಹೃತ್ಪದವಾಸ ಏಳು ಏಳಯ್ಯ ಶ್ರೀಶಾ ಏಳು ಸರ್ವೇಶಾ ಅ.ಪ. ಗಂಗಾ ಭಾಗೀರಥಿ ತುಂಗಭದ್ರಾ ಯಮುನ ಸಂಗಮ ತ್ರೀವೇಣಿ ಸರಸ್ವತಿ ಸರಯೂ ಮಂಗಳೆ ಚಂದ್ರಭಾಗೆಯೋಳ್ ಕೂಡಿ ಸೇವಿಸೆ ರಂಗಾ ಬಾಗಿಲೋಳ್ ನಿಂತು ಕಾದಿಹಳಯ್ಯ 1 ಪುನಗು ಜವಾಜಿ ಕಸ್ತೂರಿ ಬೆರಸಿದ ಜಲ ನಿನಗೆ ತೈಲವನೊತ್ತಿ ಎರೆವೆನೆಂದು ಕನಕ ರತ್ನದಿ ಭೂಷಿತರಾದ ದೇವ ಕನ್ನಿಕೆಯರು ಕಾದಿಹರೈಯ್ಯ ಲಕುಮಿಪತಿ 2 ಪಂಚಬಾಣನ ಪಿತನೆ ಪಂಚಾಮೃತ ತಂದು ಪಂಚಕನ್ನೆಯರು ಎರೆವೆನೆಂದು ಮಿಂಚು ಕೋಟಿಯತೇಜಾಭರಣ ಪೀತಾಂಬರ ಪಂಚ ರೂಪಗೆ ಉಡಿಸಿ ಶೃಂಗರಾಗೈಯುವರು 3 ಕಸ್ತೂರಿ ತಿಲಕವು ಕನಕಾಂಬರದ ಶಾಲು ಸುತ್ತಿದ ಮುಂಡಾಸು ಶೃಂಗರಿಸಿ ಮತ್ತೆ ಕಾಸಿದ ಹಾಲು ಹಣ್ಣು ಸಕ್ಕರೆ ಕೊಟ್ಟು ಎತ್ತಿ ಬೆಳಗುವ ಮುತ್ತಿನಾರುತಿ ವಿಠಲ 4 ಪಾಪರಹಿತ ಏಳು ಪಾವನ್ನ ರೂಪ ಏಳು ಗೋಪಾಲಕೃಷ್ಣವಿಠಲ ಹರಿ ಏಳು ಶ್ರೀಪದ್ಮಭವಮುಖರಾಪಾರ ಮುನಿಗಳು ರೂಪ ನೋಡಲು ಇಲ್ಲಿ ಕಾದಿಹರೇಳಯ್ಯ5
--------------
ಅಂಬಾಬಾಯಿ
ಕೇಳೆನ್ನ ಚಿನ್ನಾ ಮನವೇ ಪ ಮನವೇ ಮೈಮರೆವದು ಗುಣವೇ | ಮತ್ತು ಬಹ ಈ ದಿನವೇ | ವ್ಯರ್ಥದ ಗುಣವಾದನುವೇ 1 ಭ್ರಾಂತರ ಪರಿನಾನಾ | ಮಾ | ರ್ಗಾಂತರಾ ಸೇರಿ ಹೋಗದೆ | ಸಿಂತರ ಬ್ಯಾಗ ಕೂಡಲೋ ಸಂತರಾ 2 ಕುದಿವ ತಾಪವಳಿದು ಮೃದು | ವಾದಾ ಮಹಿಪತಿ ಪದವಾ | ಪಡಿ ಮುದವಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೀವಾ ತಿಳಿ ತಿಳಿ ನಿಜದರಿವಾ ಪ ಶಾಂತಮಯಾ ಆನಂದನಿಕಾಯ ಮನಸಿನ ಮೂಲದಾ ಘನಪದವಾ ಅ.ಪ. ಕಲ್ಪನಾಜಾಲದಾ ನಾಶದ ಸ್ಥಿತಿಯೇ ಪರಮಸೌಖ್ಯದಾ ನಿಧಿಯನು ನೀನೇ ಮನದಲಿ ಯೋಚಿಸಿ ತಿಳಿನಿನ್ನಾ 1 ಜನನಮರಣದಾ ಸಂಕಲೆ ಹರಿಯೋ ಘನವಿವೇಕದಾ ಬಲದಲಿ ತಿಳಿಯೋ ಸನ್ನುತ ಶಂಕರಗುರುಬೋಧಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ತಂದೆ ಮುದ್ದುಮೋಹನ ದಾಸರಾಯರ ಪದವ ಪೊಂದಿದವರಿಗೆ ಕಷ್ಟವೆ ಪ. ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ ತಂದು ತೋರುವರು ಮನದಿ | ಮುದದಿ ಅ.ಪ. ಅತಿಶಯದ ತಪದಿಂದ ಪತಿತ ಪಾವನನಂಘ್ರಿ ಮತಿವಂತರಾಗಿ ಭಜಿಸಿ ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ ಪಥವನ್ನೆ ಕೊನೆಗಾಣಿಸಿ ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ ಅತಿ ಅದ್ಭುತವ ತೋರಿಸಿ ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ ಗತಿಯ ಮಾರ್ಗವ ತೋರ್ವರು | ಇವರು 1 ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು ಭೂವಲಯದೊಳು ಮೆರೆವರು ಆವಕಾಲದಲಿ ಸುಖಾನಂದಭೋಗಿಗಳು ಪಾವನ ಸುಚರಿತ್ರರು ದೇವ ನರಹರಿ ಕರುಣ ಪೂರ್ಣವಾಗಿ ಪಡೆದು ಭಾವಶುದ್ಧಿಯಲಿಪ್ಪರು ಈ ವಿಧದ ಇವರ ಚರ್ಯೆಯನರಿಯುವರನರಿಯೆ ಕಾವ ಭಕ್ತರ ಕರುಣಿಯ | ದೊರೆಯ 2 `ತ' ಎನಲು ತಪಸಿಯಹ `ದೇ' ಎನಲು ದೇಹ ಶುದ್ಧಿ `ಮು' ಎನಲು ಮುಕ್ತನಾಗ್ವ `ದು' ಎನ್ನಲು ದುರ್ಜನರು ದೂರವಾಗಿರುತಿಹರು `ಮೋ' ಎನಲು ಮೋಕ್ಷದಾರಿ `ಹ' ಎನಲು ಹರಿಬಂದು `ನ' ಎನಲು ನರ್ತಿಸುವ `ದಾ' ಎನಲು ದಾರಿದ್ರನಾಶ `ಸ' ಎನಲು ಸತ್ವಗುಣಿ `ರಾಯ' ಎನೆ ಪದವಾಳ್ವ `ರು' ಎನಲು ಋಜುಮಾರ್ಗಿಯು | ಸುಖಿಯು 3 ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ - ಯರೆಂತೆಂದು ಜಪಿಸೆ ಪಾರುಗಾಣಿಸಿ ಭವದ ಬಂಧನವ ಬಿಡಿಸುವರು ದೇವಾಂಶ ಸಂಭೂತರು ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ ಸಾರಿ ಭಜಿಪರಿಗೆ ಸತತ ನಾರಸಿಂಹನ ಚರಣ ಸೇರಿಸಿ ಹೃದಯದಲಿ ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ 4 ಅಪಾರ ಅದ್ಭುತದ ಕರ್ಮಗಳ ನಡೆಸಿಹರು ಪಾಪಿ ಜನಗಳ ಪೊರೆವರು ರೂಪ ರೂಪಾಂತರದಿ ತೋರ್ಪರು ಸುಜನರಿಗೆ ಶ್ರೀಪತಿಯ ವರ ಭಕ್ತರು ಕೋಪತಾಪಗಳಿಂದ ನಿರ್ಲೇಪರಾಗಿಹರು ತಾಪತ್ರಯಗಳ ಕಡಿವರು ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು ಗೋಪ್ಯದಿಂದಲಿ ಇತ್ತರು | ಇವರು5
--------------
ಅಂಬಾಬಾಯಿ
ತಿಳಿ ತಿಳಿ ನೀ ತಿಳಿ ತಿಳಿ ನೀ ಅಳಿಯದಾಗಿಹ ಸ್ಥಿರಪದವಾ ಪ ತೋರಿ ಅಡಗುವ ಜಗಕಾಧಾರ ತೋರಿಕೆ ಅಡಗಲು ತಾನುಳಿವಾ ಪಾರಮಾರ್ಥವೆ ತಾನೆನುತಾ 1 ಅನಿಸಿಕೆಯೆಲ್ಲವು ಪುಸಿಯಿಹುದೆಂದು ಘನಾನುಭವವಾ ನೀ ಪಡೆಯುತಲಿ ಅನುದಿನ ಮನನವ ಮಾಳ್ಪುದು ನಿನ್ನೋಳು ಅನುಭವವಾ ದೃಢಪಡಿಸೈ ವಿನುತ ಶಂಕರಗುರುನುಡಿಯಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ನಾ ಪೊಗಳೆಲು ನಿನ್ನಾಗಾನಾ ಪರಿಪೂರ್ಣಾ ಸತ್ಯಜ್ಞಾನಾ ಗುರುಮೂರ್ತಿ ಎನಗೆ ದಾನಾ ನೀಡಿದೆ ನೀ ದಿವ್ಯಜ್ಞಾನಾ ಅವಿಚಾರದಿಂದ ತೊಳಲಿ ಭವಭಾಧೆಯಿಂದ ಬಳಲಿ ಕಿವಿಗೊಡದೆ ನಿನ್ನನುಡಿಗೆ ಭುವನದಲಿ ದುಃಖಿಯಾದೆ ಶಿವ ನೀನೆ ಎಂದು ಪೇಳಿ ಸವನಿಸಿದೆ ಮೋಕ್ಷಪದವಾ ಏನೆಂದು ಪಾಡಲಯ್ಯಾ ನಾನೆಂಬ ಭಾವವಡÀಗಿ ನೀ ನಾನೆ ಎಂಬ ತಿಳಿವು ಘನವಾಗಿನೆಲಿಸಿತೀಗ ಏನೊಂದು ತೋರದಯ್ಯಾ ನಾನಾತ್ವವೆಂಬ ಭಾವ ಈ ಸೋಹವೆಂಬ ಪದವ ಲೇಸಾಗಿ ಬೋಧಿಸಿದ ನೀ ಆಶಾನಿವಾಸೆ ನೀಗಿ ನಾ ಶಾಂತನಾದೆ ಮನದಿ ನೀ ಸಚ್ಚಿದಾತ್ಮಗುರುವೇ ಶಂಕರನೆ ಕಲ್ಪತರುವೆ
--------------
ಶಂಕರಭಟ್ಟ ಅಗ್ನಿಹೋತ್ರಿ
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ನೀನೇ ಶ್ರಾದ್ಧದನ್ನವನುಂಡವಾ ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ ಪ ಬಾಣಸಿಗಾದವರು ನೀನೋ ನಾರಾಯಣಿಯೋ ಕ್ಷೋಣಿಯೊ ರವಿಯೋ ಜಾಹ್ನವಿಯೊ ರತಿಯೋ ವಾಣಿಯೋ ಸುರಧೇನುವೋ ಬಂದಾತಧನಂಜಯನೂ ತಾನೆ ಎನ್ನ ಆದ್ದಾಗಾಯ ತೆಲೆದೇವಾ1 ತಿಳಿದೆ ನಾನೀಗ ನಿನ್ನನು ಕೂಡೆ ಬಂದಿದ್ರ್ದ ಬಿಳಿಯ ಚುಟ್ಟಿನ ಯೆಣ್ಣೆಗೆಂಪಿನವನೂ ಕುಳಿತವನು ಕೈಯಪುಸ್ತುಕದವನು ಕಂಕುಳೊಳ ಗಿಳಿದ ಮಡಿಗಡೆಯವರಾರು ಪೇಳೆಲೆ ದೇವಾ 2 ಆವಾವ ಸ್ಥಾನಕಾರಾರ ನೇಮಿಸಿದೆ ನೀ ದೇವಾ ಉಪಾಧ್ಯರಾರಭಿಶ್ರವಣವನು ಪೇಳ್ದ ಕೋವಿದರಾರು ಶ್ರೀವೈಷ್ಣವರಾರೆಲೆದೇವ 3 ಜನನ ಸ್ಥಿತಿಲಯಕೆ ಕಾರಣಭೂತನೋರ್ವ ನೀ ನೆನುತ ವೇದಾಂತಗಳು ಪೊಗಳುತಿರಲೂ ಇನಿತಕ್ಕೆ ಯೆಂದನ್ನದಗಳು ಕುಡಿತೇಪಾಲ್ಗೇ ಮನವ ಸೋತುದ ಬಿಡುವೆಯಾ ನಿತ್ಯತೃಪ್ತಾ 4 ಗುರುಗಳಂದದಲಿ ಶ್ರೀವೈಷ್ಣವ ನೀನಾಗಿ ಶರಣನಾ ಪಿತೃಗಳಿಗೇ ಶ್ರಾಧ್ಧವನುಂಡುದದೂ ಪಿರಿಯದಾಯ್ತು ಎನ್ನ ನೂರೂಂದು ಕುಲಕೆಲ್ಲಾ ಪರಮಪದವಾಯ್ತು ವೈಕುಂಠಚೆನ್ನಿಗರಾಯಾ 5
--------------
ಬೇಲೂರು ವೈಕುಂಠದಾಸರು
ನೀರಜಾಕ್ಷನೆ ಚಾರುರೂಪನೆಸೇರಿ ಚಿತ್ತದೊಳು ಮೋರೆ ತೋರಿಸೀಗಾ ಪ ಎಷ್ಟು ಭಕ್ತರಾಭೀಷ್ಟ ನೀಡಿದಿವೃಷ್ಣಿವರ್ಯನೆ ಭೆಟ್ಟಿ ಪಾಲಿಸೀಗಾ 1 ಮುಷ್ಠಿ ಅವಲಿಯಾ ಕೊಟ್ಟ ವಿಪ್ರಗೆ ಕೊಟ್ಟೆ ಸಂಪದವಾಭೀಷ್ಟದಾಯಕನೆ 2 ಇಂದಿರೇಶನೆ ಬಂಧ ಮೋಚನೆ ಗೈದು ಬಂದು ಕಾಯೋ ನಂದ ಬಾಲಕನೇ 3
--------------
ಇಂದಿರೇಶರು
ಪರಸೌಖ್ಯ ಪ್ರದ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತವೆಲ್ಲ | ದೂರ ಓಡಿಸುತಾ ಅ.ಪ. ಅಚ್ಯುತ ಕ್ಷಿತಿ ರಮಣ ಸೇವಾ 1 ಸಾಧನಕೆ ಸಹಕಾರಿ | ಸಾಧು ಜನ ಸತ್ಸಂಗನೀ ದಯದಿ ಒದಗಿಸುತ | ಕಾಪಾಡೊ ಹರಿಯೇ |ಮೋದ ತೀರ್ಥರ ಮತವ | ಭೋಧಿಸುತ ಇವಳೀಗೆಮೋದ ಪಾಲಿಸಿ ಹರಿಯೆ ಉದ್ಧಾರ ಮಾಡೋ2 ಮಾತೃದತ್ತವು ಎನ್ನೆ | ವೆಂಕಟೇಶನ ಪೂಜೆಸಾರ್ಥಕೆನಿಪುದು ಹರಿಯೆ | ಪಾರ್ಥ ಸಾರಥಿಯೇಕಾರ್ತಸ್ವರ ಮೊದಲಾದ | ಅರ್ಥಗಳ ಯೋಚಿಸಳುವಾರ್ತೆ ಎನ್ನನು ಭವವು ಆರ್ತರುದ್ಧರಣಾ 3 ತಂದೆ ಮುದ್ದು ಮೋಹನ್ನ | ಗುರುವನುಗ್ರಹವಿಹುದುಇಂದು ನಿಮ್ಮದಿ ನಮಿಸಿ | ಅಂಕಿತದ ಪದವಾಛಂದದಲ್ಯುದ್ಧರಿಸಿ | ಉಪದೇಶಿಸುತ್ತಿಹೆನುಮಂದನುದ್ಧಟ ತನವ | ತಂದೆ ಮನ್ನಿಪುದೋ 4 ಇಂದು ಮುಖಿ ಹೃದಯದಾ | ಅಂಬರದಿ ಪ್ರಕಾಶಿಸೆನೆನಂದ ತೀರ್ಥಸುವಂದ್ಯ | ಪ್ರಾರ್ಥಿಸುವೆ ನಿನಗೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಗುರು ಗೋ-ವಿಂದ ವಿಠ್ಠಲ ಎನ್ನ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಪರಿಹರಿಸು ದಯಾನಿಧಿ ಶರಣರ ಸಂಕಟವಾ ಧರೆಯ ತಳದಿ ನಾ ಪರಮಧೀನನು ಮರೆಯದಿಯೋ ಪದವಾ ಪ ಜಲದೊಳಗೆ ಪೊಕ್ಕರೂ ನಿನ್ನ ಬಿಡುವನಲ್ಲಾ ಬಲುಬೆಟ್ಟದ ಬುಡದೊಳು ಕುಳಿತರು ಪಿಡಿವೆನಲ್ಲಾ ನೆಲವಿಡಿದು ಕೋರೆಯಲಿ ತೋರ್ದರು ಅರಿವೆನಲ್ಲಾ ಗಲವರೆಗೆ ಸಿಂಹಮೊಗ ಧರಿಸಿದರೂ ಸರಿ ಬೆಚ್ಚಿ ಬೆವರೋನಲ್ಲಾ 1 ಸರಿ ತಿರಕನಂತೆ ನೀ ತಿಳಿದರೂ ಬಿಡುವನಲ್ಲಾ ಕರತಳದಿ ಕೊಡಲಿಯ ಪಿಡಿದರೂ ಸರಿವನಲ್ಲಾ ನೆರೆ ಧರಿಸಿ ಜಟವನ ಪೊಕ್ಕರೂ ಬಿಡುವನಲ್ಲಾ ಕರದಿ ಚಕ್ರವ ಪಿಡಿದು ತೋರಲೆಂದೆಂದಿಗುಜ್ವಲನಲ್ಲಾ 2 ವಸನಗಳಿಲ್ಲದೆ ನುಸುಳನರಿದೆನಲ್ಲಾ ಎಸೆವ ಸಮತುರಗವೇರಿ ಪೋಗಲು ಬಿಡುವನಲ್ಲಾ ದಶರೂಪಿ ನಿನ್ನನು ಬಿಡುವ ಶರಣನಲ್ಲಾ ಕುಸುಮನಾಭ ಶಿರಿ ನರಸಿಂಹವಿಠ್ಠಲ ಆಲಿಸೆನ್ನ ಸೊಲ್ಲಾ 3
--------------
ನರಸಿಂಹವಿಠಲರು
ಪಾಲಿಸು ಪರಮಪಾವನ ಪದ್ಮಾವತೀರಮಣ ಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ. ಪಾಹಿಪಾರ್ಥಸಾರಥಿಅ.ಪ. ಮದನಜನಕ ಮಹಿಮಾಂಬುಧಿ ನಿನ್ನ ಪದಕಮಲವ ನಾ ಸ್ಮರಿಸದೆ ಎನ್ನ ಮದಮುಖತನವನು ಒದರುವದೆನ್ನ ಪದುಮನಾಭ ರಕ್ಷಿಸು ನೀ ಮುನ್ನ ಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧ ಉದುಭವಿಸುವುದು ನಿಜವೇ ಭಕ್ತವಾತ್ಸಲ್ಯ ಇದಕೆ ನೀ ಊನ ತರುವೆ ಸಾಕು ಈ ಮರವೆ ಒದಗಿಸು ಸರ್ವಮನಸಿನೊಳ್ ಪುದು- ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ- ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತ ಮಧುಸೂದನ ಮಂದರಗಿರಿಧರ ನೀ- ರದ ನಿಭ ನಿರ್ಮಲ ನಿಜರೂಪ ಗುಣ ಸದನಾಚ್ಯುತ ರವಿಕುಲದೀಪ ನಿರ- ವಧಿ ಆನಂದ ರಸಾಲಾಪ ಬುಧಜನೋಪಲಾಲಿತ ಲೀಲಾಯತ ಉದಧಿಶಾಯಿ ಮಾನದ ಮಧುಸೂದನ1 ನಾಮಸ್ಮರಣೆಯೆ ನರಕೋದ್ಧಾರ ನೇಮವಿಲ್ಲೆಂಬುದು ನಿನ್ನ ವಿಚಾರ ಸಾಮಾರ್ಥದ ಗುಣಕೆಲ್ಲನುಸಾರ ಪಾಮರ ಮನಕಿದು ಈ ಗುಣಭಾರ ಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿ ಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬ ಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊ ಸಾಮಗಾನಲೋಲ ಸುಜನ ಸ್ತೋಮ ಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬ ತಾಮಸ ಪರಿಹರಿಸಿ ಜ್ಞಾನೋದಯದ ಸದಾನಂದ ಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆ ನೀ ಮಾಡುವುದೆಲ್ಲವು ಸಹಜ ಗುಣ ಧಾಮಾಶ್ರಿತ ನಿರ್ಜರಭೂಜ ಸುಜನ ಸ್ತೋಮಾರ್ಕಾಮಿತ ವಿಭ್ರಾಜ ಶ್ರೀಮಚ್ಛೇಷಾಚಲ ಮಂದಿರ ಸು- ತ್ರಾಮಾರ್ಚಿತ ಸದ್ರಾಮ ಶ್ರೀರಾಮ2 ಉಡುವ ಸೀರೆಯ ಸೆಳೆಯಲು ದ್ರುಪಜೆಯ ಕೊಡಲಿಲ್ಲವೆ ಬಹುವಸನ ಸಂತತಿಯ ಹಿಡಿಯವಲಕ್ಕಿಗೆ ದ್ವಾರಕ ಪತಿಯ ಕಡು ಸರಾಗವಾಯ್ತಿಂದಿನ ಪರಿಯ ಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನ ಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟ ಕೊಡು ದಯವಿಟ್ಟು ಮುದದಿ ಕರುಣಾವುದಧಿ ಕಡುಲೋಭಿತನ ಬಿಡು ಮಹರಾಯ ಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತ ಕರ್ಮ ವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯ ಒಡೆಯ ಶ್ರೀ ಲಕ್ಷ್ಮೀನಾರಾಯಣ ನಡುನೀರೊಳು ಕೈಬಿಡುವೆಯ ನೀ ತೊಡಕೊಂಡ ಬಿರುದೇನಯ್ಯ ಈ ಕಡು ಕೃಪಣತನ ಸಾಕಯ್ಯ ಪೊಡವಿಯೊಳಗೆ ಪಡುತಿರುಪತಿಯೆಂಬ ದೃಢಕಾರ್ಕಳದೊಡೆಯ ಶ್ರೀನಿವಾಸನೆ3
--------------
ತುಪಾಕಿ ವೆಂಕಟರಮಣಾಚಾರ್ಯ