ಒಟ್ಟು 116 ಕಡೆಗಳಲ್ಲಿ , 31 ದಾಸರು , 109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷಿತಿಪರನ ಸ್ಮರಿಸಿ ಜನರು ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು ಪುತರಾದ ವರನೆ ಕೃಪವನಧಿ ಹರಿವೊಲಿವಾ ಪ ಬಲಿ ವಿಭೀಷಣ ರಂಧ್ರಗಣ ರಂತಿರೇವತ ಮಲಯಧ್ವಜ ರಾಮಭೋಜಾ ಯದು ಬಲಗಿರಿಕ ಗಾಂಧಾರ ಗಯಸೇತು ಈಶ್ವರ ಕುಲಿಶಧ್ವಜ ಸಗರ ವೀರಾ ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು ಕುಕ್ಷಿ ಯದು ಭೂಷಣ1 ಅಸಮಂಜ ಸಂಜನಾಭಾ ವಸುದತ್ತ ಸೌಗಂಧಿಮಣಿ ಮುಕ್ತಕೇಸರೆ ನಿಸಿದಮಣಿ ವಾಹನಾ ಮಹವೀರ್ಯ ಕ್ಷೇಮಕ ಹಸ್ತಿ ವಸು ಅರಿಹಹೇಮಗರ್ಭ 2 ಕುಕುಸ್ಥ ಇಕ್ಷ್ವಾಕು ಮರುತ ಮುನಿಚೈತ್ರರಥ ವಿಕುಕ್ಷಿ ಸುರಥ ಆರಾವಾಚಿ ಶೃತಿ ಕೀರ್ತನ ಹುಶದಿಪ್ತಕೇತ ಸುವುತವಿಭಾವ ಸು ಶಕುತಿ ಶಿಖಿ ಸಾರ್ವಭೌಮಾ ಸುಖಸೇನ ಭಗೀರಥ ಅಜಮಾನು ಸ್ವರ್ಭಾನು ರುಕ್ಮಾಂಗದ ವಿರಾಜ 3 ಪುರಮೀಢ ಸುಮೀಢ ಭದ್ರಾಶ್ವ ರಮಣಕಾ ಹರಿಧರ್ಮನೇತ್ರ ಸುನೇತ್ರಕೇತುಮಾಲ ಪುರೋರವ ಮಿತ್ರಮನ ಜಯಸೇನ ಶುಭವರ್ಮ ಧರಯತೀ ಪುಣ್ಯದ್ರವಿಣೌ ಕರವೀರ ಸಾವೀರ ಪೌಷ್ಯಕೇಸರಿ ಸಿಂಗ ಮರುರುಕ್ಷ ಪ್ರದೀಪ ದಿಲೀಪ ಅಷ್ಟಕಕಂಪ ಅರಣಿ ಭೂಮನ್ಯು ಪ್ರಥಮಾಹವೀರ್ಯ ಸುರದತ್ತ ಹರಿವೀರಮನ್ಯು ವಿಶ್ವಾ 4 ಸುಮತಿ ಸುಂಹರ ರಘು ಮುಚಕುಂದ ದಶರಥ ಸುಮನ ದುಷ್ಯಂತ ಸಂಯಾತಿ ಹಂಸಧ್ವಜ ದಮಯಂತ ನೀಲಾಂಗ ಧರ್ಮಾಂಗದ ಶಮಲ ವಿಮರ ರವಿಕಾಂತ ನಹುಷ ದ್ರುಮಿಳ ಪದ್ಮಾಶತಾಯುಧ ಮಯೂರಧ್ವಜ ಪ್ರಮಿಲ ಕೀರ್ತಿವಾನ ತೊಂಡವಾನ ವಿದಗರ್ಭ ಅಮಿತ ಪರಾಕ್ರಮ ನಭಾಗಂಬರೀಷ ಸೌಮಿತ್ರ ಕಾರ್ತವೀರ್ಯಾ 5 ಪರಮೇಷ್ಟಿ ಮಣಿನಾಭ ಚೋಳ ತ್ರಿಶಂಖ ಶಂಖಣ ಶಂಖ ಮಣಿಕೇತ ಪಾಂಚಜನ್ಯ ಧನಂಜಯ ಕಾಶಿ ಸುಕಾಂತಕುಶ ಕುಶನಾಭ ಮಣಿಸೇನ ಪಾಂಡವ ಜಂಬುನದಿ ದಿವ್ಯರಥ ವನ ಕಕ್ಷಸೇನ ಜಾಕ್ಷಿತ ಪರಿಕ್ಷಿತ ದೃಂಹ್ಯ ಅನು ಅನಾಯುಪದಾತೀ 6 ಹರಿಶ್ರವ ಉತ್ತಾನಪಾದ ಕುಂಡಲಗಜ ಯವನಾಶ್ವರಾಜ ನೀಲಧ್ವಜ ಸುರವೃತ್ತ ಕವೇರ ಆಯು ದೃಢಾಯು ವಿಶಾಲ ಪ್ರತಿ ಶ್ರವ ಚಿತ್ರವೀರ್ಯ ಸುಭಗಾ ಕವಿವಂಗ ಅಂಗ ಕೋಶಲ ಹೇಮಗರ್ಭ ಶುಚಿ ವಿಕುಂಠ ಸುರಭೀ ಸೂ ಹವಿ ಅಭಿರಾಜ ಸುಹಿಜಾ 7 ಶಿಂಧು ಶುಭವರ್ನ ಸಿರ್ಯಾತಿ ಯಯಾತಿ ಸತ್ಯ ಸಂಧ ರೋಹಣ ಸಾಹದೇವ ವಾಪೀ ನಂದನ ಸುಮನ್ಯು ಸ್ವರ್ಭಾನು ಪಿಪ್ಪಲರವಿ ಚಂದ್ರಹಾಸ ಅಶ್ವವಂತ ಶಬಲಾಶ್ವ ಅಣು ಚಂದ್ರವರ್ಣ ಚಪನ ಸತ್ಯ ಸಯಾತಿ ಬಲ ವೃಂದ ವಿಷ್ಣುವರ್ಧನ 8 ಸಂತತದಲಲ್ಲೆಣಿಸಿದರೆ ಪಾರಗಂಡವರಾರು ಚಿಂತನೆಗೆ ತೋರಿದುದು ಸಾರಿದೆನು ಚನ್ನಾಗಿ ಸಂತರು ಕೇಳಿ ಲಾಲಿಸೀ ಪಿಂತೆ ಬಲು ಜನನದಾ ದುರಿತೌಘ ಪೋಗುವದು ಸಂತೋಷವಾಗುವುದು ಪರಿಸಿದ ಜನಕೆ ನಿತ್ಯ ಕಂತುಪಿತ ವಿಜಯವಿಠ್ಠಲನ ಚರಣಾಂಬುಜವ ಸಂತತಿ ಸಹಿತ ಕಾಂಬರೂ 9
--------------
ವಿಜಯದಾಸ
(ಅನಂತಪದ್ಮನಾಭ ಪ್ರಾರ್ಥನೆ) ಚಿಂತಿತದಾಯಿ ನಿರಂತರ ಸುಖದಾನಂತಪದ್ಮನಾಭಾ ಸಕಲಸುಜನಾಂತರ ಫಲದಾ ಪ. ಯಾಕೆಂದರೆ ಪೂರ್ಣಾ ನಂದನೀನೊಲಿಯಲು ಎಂದಿಗು ಕುಂದನು ಹೊಂದದಲಿರುವೆ ಸುಂದರ ವಿಗ್ರಹ ಸುಲಭದಿ ಸಕಲಾನಂದ ವಾರಿಧಿಯೊಳಿಳಿವೆ ಭವ ಬಂಧನ ಬಿಡಿಸುವ ದೊರೆ ನಿನ್ನರಿಯದೆ ಮಂದ ಬುದ್ಧಿಯಿಂದಿರುವುದು ಥರವೆ1 ನೀಲಾಳಕ ಪರಿಶೋಭಿತ ಮುಖಕಮಲಾಲಿಸು ಬಿನ್ನಪವÀ ಲೀಲಾಮೃತರಸ ಕುಡಿಸುತ ಕರುಣದಿ ಪಾಲಿಸು ವರಸುಖವಾ ಪದದೊಳಗಿರಿಸಿದ ದುರಿತ 2 ಹೆಂಡತಿ ಜನಿಸಿದ ಮನೆಯೊಳಗಿರುವುದೆ ಪುಂಡರೀಕನಾಥಾ ಪಂಡಿತರುಗಳಿದ ಕಂಡರೆ ನಗರೆ ಬ್ರಹ್ಮಾಂಡಕೋಟಿಭಾಸಾ ಅಂಡಲೆಯದೆ ಹೃನ್ಮಂಡಲದೊಳು ಶುಭಕುಂಡಲ ರಮೆಯೊಡಗೊಂಡು ಬೇಗದಲಿ ನಿಭ ಕುಂಡಲಿಗಿರಿಗ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಬಂಟ್ವಾಳದ ವೆಂಕಟೇಶ ದೇವರನ್ನು ನೆನೆದು) ವಂದಿಸುವೆನು ಶ್ರೀನಿವಾಸ ಶ್ರೀ ವೆಂಕಟೇಶ ವಂದಾರುನಿಚಯಮಂದಾರ ಸದಾ- ಪ. ನಂದೈಕನಿಧಿವಿಲಾಸ ಚಂದ್ರಾದಿತ್ಯಸಹಸ್ರಪ್ರಕಾಶ ಹೊಂದಿದೆ ನಿನ್ನ ಪರೇಶ ಶ್ರೀ ವೆಂಕಟೇಶ 1 ಶಾಂತಾತ್ಮನಿಯಮ ಸಂತಾಪಪ್ರಶಮ ಸಂತಜನಮನೋಲ್ಲಾಸ ಭ್ರಾಂತಿಜ್ಞಾನವಿತಾನವಿನಾಶ ಚಿಂತನೀಯ ನಿರ್ವಿಶೇಷ ಶ್ರೀ ವೆಂಕಟೇಶ 2 ಶ್ರೀಧರಾಚ್ಯುತ ಸುಮೇಧನಾಮಕ ಪ- ಯೋಧಿಶಯನ ಪರಮೇಶ ನಿತ್ಯ ನಿರ್ದೋಷ ಸಾಧು ಕೌಸ್ತುಭಮಣಿಭೂಷ ಶ್ರೀ ವೆಂಕಟೇಶ3 ನೀರಜನಾಭ ನೀಲಾಭ್ರದಾಭ ಶ್ರೀರಾಮ ತ್ರಿದಶಗಣಪೋಷ ಪ್ರಾರಬ್ಧಕರ್ಮ ಬೋಧೋದ್ಭಾಸಾ- ಪಾರಮಹಿಮ ಜಗದೀಶ ಶ್ರೀ ವೆಂಕಟೇಶ 4 ನೇತ್ರಾವತಿ ಸುಪವಿತ್ರಚಿತ್ರಸು- ಕ್ಷೇತ್ರ ವಟಪುರನಿವಾಸ ಕರ್ತ ಲಕ್ಷ್ಮೀನಾರಾಯಣನೀತ ಪಾರ್ಥಸಾರಥಿ ಪೃಥಗೀಶ ಶ್ರೀ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ ಅಕ್ಷಯತರ ಸುವಚನ ಲಸಿತವದನ ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ ದೈತ್ಯ ಸಂಕುಲಘಾತ ಪ್ರಾಣನಾಥ ಸುರಸಿದ್ಧ ಸಂಪ್ರೀತ ಮಾರತಾತ ಗೋಪಾಲ ಕುಲರತ್ನದೀಪ ಗೋಕುಲ ಶರಣ ಗೋಪಿಕಾಜನಮನದ ತಾಪಶಮನ ಲೀಲಾ ವಿಭೂತಿಯುಗನಿರತ ಸುಹಿತ ನೀಲಾಂಬರಾವರಜ ರಾಜರಾಜ ಕಾಲಾಂಬುದಾಕಾರ ಖಲಕುಠಾರ ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ
--------------
ನಂಜನಗೂಡು ತಿರುಮಲಾಂಬಾ
ಅಧ್ಯಾಯ ಎರಡು ಪದ:ರಾಗ:ಯರಕಲಕಾಂಬೋದಿ ತಾಳ:ಬಿಲಂದಿ, ಸ್ವರ ಷಡ್ಜ ದೇವಕಿಯಲಿ ಅವತರಿಸಿದ ದೇವಾಧೀಶನ ಕಂಡು ಆ ವಸುದೇವನು ಸ್ತುತಿಸಿದ ಕೇವಲ ಭಕುತಿಯಲಿ | ಲಾವಣ್ಯಾಂಬುಧಿಯನಿಸುವ ಭಯದಿಂದ || 1 ಲೋಕಾಧೀಶನೆ ನಿನ್ನ ಅತೌಕಿಕ ರೂಪಾವು ಕಂಡು ಆ ಕಂಸನ ಭಯದಲ್ಲಿ ನಾ ವ್ಯಾಕುಲಳಾಗಿರುವೆ| ಸಾಕೀಕಾಲಕ ಈ ಅಪ್ರಾಕೃತರೂಪವು ಎÀÀನಲು ಶ್ರೀಕಾಂತನು ಆಕ್ಷಣದಲಿ ಪ್ರಾಕೃತ ಶಿಶುವಾದಾ|| 2 ಆ ಕಾಲದಲ್ಯಾದುರ್ಗಾ ತಾ ಕಾಲವ ಕಳಿಯದಲೆ ಗೋಕುಲದಲ್ಲಿ ಪುರುಷೆಂದಾಕಿಯು ತಿಳಿಯದೆ ನಿದ್ರಿಲಯಲ್ಯಾಕ್ರಾಂತಾದಳು ಹುಟ್ಟಿರುವಾಕಿಯ ಮಹಿಮೆ ಇದು|| 3 ಪಟ್ಟಣದಲಿ ಸರ್ವರು ಭಯಬಿಟ್ಟು ನಡರಾತ್ರಿಯೋಳ್ ತಟ್ಟಲು ಬಹುನಿದ್ರಿ ಸೃತಿಗೆಟ್ಟು ಮಲಗಿರಲು | ಹÀುಟ್ಟಿದ ಬಾಲಕನ ನಾ ಬಚ್ಚಿಟ್ಟು ಬರುವೆನೆಂದ ಥಟ್ಟನೆ ನಡದನು ಕೃಷ್ಣನ ಘಡ್ದ್ಹಡದು ಶೌರಿ|| 4 ಕಾಲೊಳಗಿನ ಬೇಡಿಯು ತತ್ಕಾಲಕ ಕಡದಿತು ಬಾಗಿಲಕೀಲಿಗಳೆಲ್ಲಾ ಸಾಲ್ಹಿಡದಿಂದ್ಗರಂತೆ| ಬೈಲಾದವು ಬಾಗಿಲಗಳಾ ಕಾಲದಿ ಹೀಂಗಾದದ್ದು ಬಾಲಕ ಹರಿ ಬದಿಲಿದ್ದ ಮ್ಯಾಲೇನಾಶ್ಚರ್ಯ 5 ವಾಸದ ವೃಷ್ಟಿಯ ಮಾಡಲು ಶೇಷನು ಬೆನ್ನಿಲೆ ಬಂದು ಸೂಸಿ ಬಾಹುವ ಯಮುನಿ ವಾಸುದೇವನ ಕಂಡು ಘಾಸಿಯು ಮಾಡದೆ ಕೂಟ್ಟಳು ಅಸಮಯಕೆ ಹಾದಿ 6 ಗೋಕುಲಕ್ಹೋಗುತ ಶೌರಿಯು ಶ್ರೀ ಕೃಷ್ಣನ ಅಲ್ಲಿಟ್ಟು ಆ ಕನ್ನಿಕೆಯ ತಂದು ತನ್ನಕಿಯ ಬದಿಲಿಟ್ಟಾ| ಆ ಕಾಲಕ ಆ ಬೇಡಿಯ ತಾಕಾಲಗಳಲ್ಲಿತಟ್ಟು|| ಶ್ರೀ ಕಾಂತನ ಸ್ಮರಿಸುತಲೆ ಏಕಾಂತದಲ್ಲಿರುವಾ|| 7 ಬಾಗಿಲುಗಳು ಎಲ್ಲಾ ಮತ್ಥಾಂಗೆ ಕೀಲಿಗಳ್ಯಲ್ಲಾ ಬ್ಯಾಗನೆ ಆದವು ಮುಂಚಿನ್ಹಾಂಗೆ ತಿಳಿಗೂಡದೆ| ಆಗಾ ಕೂಸಿನ ಧ್ವನಿ ಛಂದಾಗಿ ಕಿವಿಯಲಿ ಬೀಳಲು ಬಾಗಿಲಕಾಯುವ ಭೃತ್ಯರು ಬ್ಯಾಗನೆದ್ದರು ಭಯದಿ|| 8 ಗಡಿಬಿಡಿಯಿಂದಲ್ಯವರು ಯಡವುತ ಮುಗ್ಗುತ ತ್ಯೋಡುತ ನಡಿದರು ನಿಂದಿರದಲೆ ಬಹುಸಡಗರದರಮನಿಗೆ| ಒಡಿಯಾನಂತಾದ್ರೀಶನ ಖಡುದ್ವೇಷ ಆಸವಗೆ ನುಡಿದರು ದೇವಕಿದೇವಿಯು ಹಡಿದಾಳೆಂತೆಂದು|| 9 ಪದ್ಯ ನುಡಿಯ ಕೇಳೀಪರಿಯ ಖಡುಪಾಪಿ ಕಂಸ ಗಡವಡಿಸಿ ಕೊಂಡೆದ್ದು ಭಯ ಬಡುವತಲೆ ಶ್ವಾಸವನು ಬಿಡುವುತಲೆ ಭರದಿಂದ ಎಡವುತಲೆ ಮುಗ್ಗುತಲೆ ನಡದನಾ ದೇವಕಿಗೆ ಕುಡು ಕೂಸು ಎಂತ್ಯಂದು ನುಡಿಕೇಳಿ ಮನದಲ್ಲಿ ಮಿಡುಕುತಲೆ ದೇವಕಿಯು ದೃಢವಾಗಿ ಕೈಯೊಳಗೆ ಹಿಡಿದು ಆಕೂಸಿನಾ ಕುಡದೆ ಕಂಸನ ಮುಂದೆ ನುಡಿದಳೀ ಪರಿಯು|| 1 ಪದ:ರಾಗ:ನೀಲಾಂಬರಿ ತಾಳ:ತ್ರಿವಿಡಿ ಕುಡಲಾರೆ ಕೂಸಿನ್ನನಾ ನಿನಗೆ || ಅಣ್ಣ ಕುಡಲಾರೆ ಒಡ್ಡಿ ಬೇಡುವೆ ಕಡಿ ಹುಟ್ಟ ಹೆಣ್ಣದು|| ಪ ಸೂಸಿಯು ನಿನಗೆ ಈಕಿ ತಿಳಿ ನೀನು | ಮತ್ತು ಹಸಗೂಸು ಎಂಬುವದರಿಯೇನು | ಇಂಥಾ ಶಿಶುವಿನಳಿದಾರೆ ಪಾಪ ಬರದೇನು| ವಸುಧಿ ಒಳಗೆ ಬಹು ಹೆಸರಾದವನೋ ನೀನು|| 1 ಹಿರಿಯಣ್ಣನಲ್ಲೇನೊ ನೀ ಎನಗೆ | ಸ್ವಲ್ಪ ಕರುಣಾವಿಲ್ಲವೋ ಎನ್ನೊಳು ನಿನಗೆ|| ಮಕ್ಕಳಿರಧಾಂಗ ಮಾಡಿದಿ ಮನಿಯೋಳಗೆ ಗುರುತಕ್ಕಿದು ಒಂದು ನೋಡಿ ಮರೆತೆನ್ಹಿಂದಿನ ದುಃಖ|| 2 ನಾ ಏನು ನಿನಗೆ ಮಾಡಿದೆ ಪೇಳು | ಬಹು ಬಾಯಿತಗುವೆ ಕೋಪವು ತಾಳು| ಇಂಥಾ ಮಾಯಾ ಮೋಹತಳಿಗಿ|| 3 ಪದ್ಯ ಅಪ್ಪ ಕುಡಲಾರೆಂದು ತಪ್ಪದಲೆ ಆ ಕೂಸಿನಪ್ಪಿಕೊಂಡಳುವಾಗ ಕಲ್ಲ ಮ್ಯಾಲಪ್ಪಳಿಸಲಾಕೂಸು ತಪ್ಪನ್ಹಾರಿತು ಮ್ಯಾಲೆ ಅಷ್ಟು ಚಿನ್ಹಿಗಳಂದ ಉಟ್ಟ ಪೀತಾಂಬರದಿ ತೊಟ್ಟ ಹೀಂಗೆ ಸ್ಪಷ್ಟಪೇಳಿದಳು| ಪದ ರಾಗ:ತೋಡಿ ತಾಳ ಬಿಲಂದಿ ಮಂದ ಮತಿಯೇ ಕಂದರನ್ನ ಕೂಂದರೇನು ಫಲವೂ| ಇಂದು ಎನ್ನ ಕೂಂದ ವ್ಯೂಲ ಮುಂದೆ ಬರುವದೇನು| 1 ವೈರಿ ಅನ್ಯರಲ್ಲಿ ಇನ್ನ ಬೆಳೆವುತಿಹನೊ| ಮುನ್ನ ಬಂದು ತನ್ನ ಬಲದಿ ನಿನ್ನ ಕೊಲ್ಲುವೊನು 2 ಅಂತಕನ್ನ ನಿಂತು ಕೊಲ್ಲುವ ಭ್ರಾಂತಿ ಬಿಡೆಲೊ ನೀನು| ಅನಂತಾನಂತಾದ್ರೀಶನಂತು ತಿಳುವದೇನೇ|| 3 ಪದ್ಯ ಆ ಮಹಾ ಪಾಪಿ ಗ್ಯಾಡೀ ಮಾತು ದೇವಿ ತಾ ಭೂಮಿಯಲಿ ಬಂದು ಬಹುಗ್ರಾಮದಲೆ ನಿಂತು ಬಹುನಾವು ಉಳ್ಳವಳಾಗಿ ಕಾಮಿತಾರ್ಥಗಳನ್ನೂ ಪ್ರೇಮದಲಿ ಕುಡುತಿಹಳು ನೇಮದಿಂದಾ|| ಆ ಮಾಯಿ ವಚÀನವನು ಪಾಮರನು ತಾ ಕೇಳಿ ರೋಮಾಂಚಗಳು ಉಬ್ಬಿ ನಾ ಮಾಡಿದಲ್ಲೆಂದು ನೇಮದಲಿ ಇಬ್ಬರಿಗೆ ನೇಮಿಸಿದ ಬೇಡಿಯನು ತಾ ಮೋಚನವು ಮಾಡಿ ಪ್ರೇಮದಿ ನುಡದಾ|| 1 ಪದ:ರಾಗ :ಸಾರಂಗ ಅದಿತಾಳ ಸ್ವರ ಮಧ್ಯಮ ಎಲೆ ತಂಗಿಯೆ ಎಲೊ ಶಾಲಕ ಬಲು ಪಾಪಿಯು ನಾನು| ಬಲು ಮಂದಿ ಮಕ್ಕಳನ ಛಲದಿಂದ ಕೊಂದೆ| ತಿಳಿಯದೆ ನಾ ಇಂಥ ಕೆಲಸಕ್ಕೆ ತೊಡಕಿ ಪರಿ ಪಾಪದ ಫಲ ಭೋಗಿಯು ಆದೆ|| 1 ಅಶರೀರದ ವಾಣಿಯು ಹುಸಿ ಅಯಿತು ಇಂದು ವಸುಧಿಯೋಳಿರುವಾ ಮಾನುಷರಾ ಪಾಡೇನು|| ಶಶಿಮುಖಿ ನಾನಿಮ್ಮ ಶಿಶುಗಳ ಕೂಂದೆ||2 ಅಮಿತಾ ಅಪರಾಧಾಯಿತು ಕ್ಷಮಾ ಮಾಡಿರಿ ನೀವು|| ವಿಮಲ ಮನಸಿನಿಂದ ನಮಿಸಿದೆ ನಿಮಗೆ|| ಕಮಲೋದ್ಭವ ಬರದಂಥಾ ಕ್ರಮ ತಪ್ಪದು ಎಂದು ಶ್ರಮಯಾತಕ ಸುಖದುಃಖವ ಸಮಮಾಡಿರಿ ನೀವು|| 3 ತಿಳಗೇಡಿಯು ಆ ಕಂಸ ತಿಳಿಹೇಳಿಪರಿಯು ಸ್ಥಳಬಿಟ್ಟು ತಾ ತನ್ನ ಸ್ಥಳಕ್ಹೋದನು ಬ್ಯಾಗೆ\ ಬ್ಯಳಗಾಗಲು ಎಲ್ಲಾರಿಗೆ ತಿಳಿಸೀದನು ಆಗೆ ಹೊಳುವಾ ದೇವಿಯ ಮಾತುಗಳನೆಲ್ಲ ಬಿಡದೆ || 4 ಖಳರಂದರು ನಾವಿನ್ನ ಇಳಿಯೊಳ್ಹುಟ್ದರುವಾ| ಉಳದಾ ಬಾಲಕೃಷ್ಣಕರನ್ನ ಕೊಲ್ಲು ವುದ ಸತ್ಯಾ| ತಿಳದೀಪರಿ ಅವರನ್ನ ಕಳಸೀದ ಕಂಸಾ ಚಲುವಾನಂತಾದ್ರೀಶನ ಕೊಲ್ಲವೊದು ಎಂದು|| 5 ಪದ್ಯ ಮುಂದ ಗೋಕುಲದಲ್ಲಿ ನಂದಗೋಪನು ತನ್ನ ಕಂದನಾ ಮುಖವನ್ನು ಛಂದದಲಿ ನೋಡಿ ಆನಂದ ಹಿಡಿಸದೆ ತಾನು ಬಂದ ಬಂದವರಿಗ್ಯಾನಂದ ಬಡಸಿದ ಮನಕ ಬಂದದ್ದು ಕೂಟ್ಟು| ನಂದನಂದನನ ವದನೇಂದು ದರ್ಶನಕಾಗಿ ಬಂಧು ಬಾಂಧವರೆಲ್ಲ ಬಂದು ಒದಗಿದರಲ್ಲೆ ದುಂದುಬಿಯು ಮೊದಲಾದ ಛಂದಾದ ವಾದ್ಯಗಳು ಒಂದಾಗಿ ನುಡದÀವಾನಂದದಿಂದಾ| ಗೀತ ಬಲ್ಲವರು ಸಂಗೀತವನು ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ತಾತನವ ತನ್ನಲ್ಲೆ ಜಾತನಾಥಂಥವಗೆ ಜಾತಕರ್ಮವು ಮಾಡಿ ಪ್ರೀತನಾದಾ| ಪ್ರೀತಗೋಕುಲದಲ್ಲಿ ನೂತನೈಶ್ವರ್ಯಗಳು ಜಾತವಾದವು ಸರ್ವಜಾತಿಗಳಿಗ್ಯಾದರೂ ಯಾತಕ್ಕೂ ಕಡಿಮಿಲ್ಲ ಸೋತಂಥ ದಾರಿದ್ರ್ಯ ಯಾತಕಿರುವದು ರಮಾನಾಥ ಇರಲು|| 1 ಸ್ಥಿರ ಮನಸಿನಿಂದಲ್ಲೆ ಸ್ಥಿರವಾಗಿ ಕುಳಿತು ಈ ಚರಿತವನು ಕೇಳಿದವರ ಪರಿಪರಿಯ ಅಭಿಲಾಷ ಪರಿಪೂರ್ಣವಾಗುವದು ಚರಿಸದಲೆ ಅವರಲ್ಲಿ ಸ್ಥಿರಳಾಗಿ ಇರುವವಳು ವರಮಹಾಲಕ್ಷ್ಮೀ| ಧರಿಯೊಳಗ ಇರುವಂಥ ವರಕವೀಶ್ವರರಂತೆ ಸ್ಥಿರವಲ್ಲ ಗೋಕುಲದಲ್ಲಿ ತ್ವರ ಅವನೇ ಮುಗಿಸಿದಿಲ್ಯರಡು ಅಧ್ಯಾಯಾ|| 2 “ಶ್ರೀ ಕೃಷ್ಣಾರ್ಪಣ ಮಸ್ತು” ಎರಡನೆಯ ಅಧ್ಯಾಯವು ಸಂಪೂರ್ಣವು”
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಏಳು ಜ್ಞಾಪಿತೋ ಬಕುಲಾವಾಕ್ಯಾಚ್ಛುಕ ಜೀವಾನು ಮೋದಿತಃ ಭೂಪೇನ ನಿಶ್ಚಿತೋ ಮಾಯಾದ್ವಿಪಹಾ ಯೋವರೋ ಹರಿಃ ವಚನ ಅರಸಿ ತನ್ನ ತೊಡೆಯಲಿರುವ ಪರಿಯು ಮಾತಾಡಿದಳು ಕೊರವಿ ಮಾತಿನರಗಿಳಿಯೆ ನೀನು ಅರಸಿ ಮಾತಿಗೆ ಬಾಯ ತೆರೆದು ಮಾತಾಡದಲೆ ಪರಮಗಂಭೀರ ಳಾಗಿರುವ ಪದ್ಮಾವತಿಯ ಕರಪಿಡಿದು ಏಕಾಂತ ದಲಿ ಕೇಳಿದಾಗ ಪರಮ ಅಂತ:ಕರಣೆ ಪರವಶದಿ ಆಗ 1 ರಾಗ:ಭೈರವಿ ಅಟತಾಳ ನಾ ಕೊಡಲೋಪ ಪ್ರೀತಿಯ ಮಗಳೆ ನಿನ್ನ ಮಾತಿಗೆ ಹೊರ್ತಿಲ್ಲ ಖ್ಯಾತೀಲೆ ವೇಂಕಟನಾಥ ನೆಂತೆನಿಪಗೆ ಅ.ಪ ಅರಸಗೆ ಪೇಳಲ್ಯೊ ನಾ ಬಲ್ಲಂಥ ಹಿರಿಯರ ಕೇಳಲ್ಯೊ ಸರಿ ಬಂದವರ ನೋಡಿಕಳಹಲ್ಯೊ 1 ಮಂದಿಯ ಕೇಳಲ್ಯೋ ನಾ ಕೊಡಲಾರದೆ ಜರಿಯಲÉ್ಯೂೀ 2 ಮಿತ್ರೇರ ಸಂಗತಿಯೋ ಅದು ಮಿಥ್ಯವೋ 3 ವಚನ ಕಾಮಜನಕರ ಸ್ಮರಿಸುತಲೆ ಜನರಮುಂದ್ಹೇಳುವದಕನು ಬಂದದÀು ತಾನೆ ಅನು ಅಪಹಾಸ್ಯವನು ಒಬ್ಬರನೋವು ತನಗೆಂಬುವದÀು ಹೇಳುವದಕನುಮಾನವ್ಯಾಕೆ 1 ರಾಗ:ನೀಲಾಂಬರಿ ಭಿಲಂದಿತಾಳ ಪತಿ ಅವನ ಸರಿಯಿಲ್ಲವನಿಯೊಳಗ ಅವನೇ ಜಗಜ್ಜೀವನನೆ ಪ ಮಂಜುಳಮಾತಿಗೆ ರಂಜ ಪಾದ ಕಂಜಕೆ ಅರ್ಪಿಸು ಅಂಜುವದ್ಯಾಕಮ್ಮ ಅಂಜನಾದ್ರೀಶಗೆ ಅಂಜಲುಬೇಡ ನಿರಂಜನೆ ಭಯಭಂಜನೆ 1 ಹೂವಿನ ತೋಟಕೆ ಪೋಗಲು ಚಿತ್ತಪಲ್ಲಟವಾಗಿ ನೀಟಾಗಿ ನಿರ್ಮಿಸಿ ಆಟವಮಾಡುವ ಕಪಟ ನಾಟಕನೆ 2 ಭೂಷಣ ಉರದಲ್ಲಿ ಶ್ರೀವತ್ಸವು ಚಲ್ವಿಕೆ ನೋಡಲು ಎಲ್ಲ ಜ್ಯೋತಿಗಳವನಲ್ಲಿ ನಿವಾಳಿಸಿ ಚಲ್ಲವುದು ಅಲ್ಲೇನಿಲ್ಲೆಂದು ಮತ್ತೆಲ್ಲಿ ಹಂಬಲಿಸದೆ ಅಲ್ಯವಗರ್ಪಿಸು ಆಹ್ಲಾದದಿಂದಲ್ಲೇ ಬಲ್ಲಿದನಾಂತಾದ್ರಿಯಲ್ಲಿರುವ ಎನ್ನೊಲ್ಲಭನೆ ಪ್ರಾಣದೊಲ್ಲಭನೆ 3 ವಚನ ಮಗಳಿಗÉಂದಳು ನಾ ನಿನ್ನ ಜಗ ಗಗನ ರಾಜನ ರಾಣಿ ಸುಗುಣ ಬಕುಲಾ ಬರುವರ ಕೂಡಿ ಬರುವಳಾ ಅಗಸಿಯೊಳಗೆ 1 ಹೊರಳಿ ನೋಡಿದ ಬರುವಳಿವಳ್ಯಾರೆಂದು ಕೊರವಿ ಕರೆಸಿದಳು ಬೇಗ ಸರಸಿ- ಎಂದು ಸುರಿಸಿ ಅಮೃತದ ವಾಣಿ ಬೆರೆಸಿ ಸ್ನೇಹವ ಮತ್ತೆ ತರಿಸಿ ರತ್ನದಪೀಠ ಇರಿಸಿ ಕೂಡೆಂದು ಕುಳ್ಳಿರಿಸಿ ಕೇಳಿದಳಾಗ ಹರುಷದಿಂದಾ2 ರಾಗ:ಗೌರಿ ಆಟತಾಳ ಲಲನೆ ನೀ ದಾರಮ್ಮ ಹೆಸರೇನು? ಶೇಷಾ ಚಲವಾಸಿ ಬಕುಲಾವತಿ ನಾನು 1 ಎಲ್ಲಿಗ್ಹೋಗುವೆ ಮುಂದೆ ನೀನು? ತಿಳಿ ಇಲ್ಲಿಗೆ ಬಂದೆ ನೇಮಿಸಿ ನಾನು 2 ನಿನ್ನ ಮನದ ಕಾರ್ಯಗಳೇನು? ಮುಖ್ಯ ಕನ್ಯಾರ್ಥಿಯಾಗಿ ಬಂದೆನು ನಾನು 3 ದಾವಾತ ವರನಾಗಿರುವನು?ದಿವ್ಯ ದೇವ ನೆಂದೆನಿಸುವ ತಿಳಿ ನೀನು4 ಕೃಷ್ಣವೇಣಿಯೆ ಅವನ್ಹೆಸರೇನು? ಶ್ರೀ ಕೃಷ್ಣನೆಂದೆನಿಸುವ ತಿಳಿ ನೀನು5 ತಾಯಿ ತಂದೆಗಳೆಂಬುವರಾರು?ತಿಳಿ ದೇವಕಿ ವಸುದೇವರು ಅವರು 6 ಚಂದಾಗಿ ಕುಲದಾವದ್ಹೇಳಮ್ಮ ಶುಭ ಚಂದ್ರಮನ ಕುಲಕೇಳಮ್ಮ 7 ಶ್ರೇಷ್ಠವಾಗಿಹ ಗೋತ್ರದಾವದು?ವಾ ಶಿಷ್ಠ ನಾಮಕವಾಗಿರುತಿಹುದು 8 ನಕ್ಷತ್ರ ಪೇಳು ಪನ್ನಗವೇಣಿ ಶ್ರವಣ ನಕ್ಷತ್ರ ತಿಳಿ ರಾಜನ ರಾಣಿ 9 ವಿದ್ಯೆಯಿಂದ ಹ್ಯಾಂಗಿರುವ? ಬ್ರಹ್ಮ ವಿದ್ಯೆಯಿಂದಲಿ ಗಮ್ಯ ಎನಿಸುವ 10 ಧನವಂತನೇನಮ್ಮ ಗುಣನಿಧಿಯೇ? ಬಹು ಧನವಂತರಾಗುವರವನಿಂದೆ 11 ಕಣ್ಣುಮೂಗಿಲೆ ಹ್ಯಾಗಿರುವವ?ಕೋಟಿ ಮನ್ಮಥ ಲಾವಣ್ಯ ಎನಿಸುವ 12 ಹೆಣ್ಣಿನ ಮನಸೀಗೆ ಬಂದೀತೇ? ಅವನ ಕಣ್ಣಿಲಿ ಕಂಡರೆ ತಿಳಿದೀತೆ 13 ಅದಾವು ದಿವಸೆಷ್ಟು ಪೇಳಮ್ಮಾ?ಇಪ್ಪ- ತ್ತೈದರ ಮೇಲಿಲ್ಲ ತಿಳಿಯಮ್ಮ 14 ಚಿಕ್ಕಂದು ಮದುವೆ ಇಲ್ಯಾಕಮ್ಮ?ಅವನ ತಕ್ಕ ಹೆಂಡತಿ ಇರುತಿಹಳಮ್ಮ 15 ಮುಖ್ಯಳಿರಲು ಮದುವ್ಯಾಕಮ್ಮ?ತಿಳಿ ಮಕ್ಕಳಿಲ್ಲದ ಕಾರಣವಮ್ಮ 16 ನೇಮದಿಂದಿರುತಿಹ ತಾನೆಲ್ಲಿ ತಿಳಿ ಶ್ರೀಮದನಂತಾದ್ರಿಯಲಿ 17 ರಾಗ:ಯರಕಾಲ ಕಾಂಬೋದಿ ಭಿಲಂದಿತಾಳ ಕಾಂತನ ಮುಂದ್ಹೇಳಿದಳೇ ಅಂತರಂಗದೊಳು ಚಿಂತೆ ಮಾಡಲು ಬೇಡ ಕೇಳು ಸಂತೋಷದ ಸುದ್ದಿ 1 ಕೊರವಿ ಬಂದಿದ್ದಳು ಮರಗುತ ಮಲಗಿದ ಕೊರವಿ ಕಾಲ್ಗುಣದಿ 2 ಪರಿ ಕೊರವಿ ನಾಡ ಸಖಿಯರ ಕೂಡಿ ಪ್ರೌಢ ಪುರುಷನ 3 ಪ್ರಾಕೃತ ಪುರುಷನಲ್ಲ ಜ್ವರಮಗಳಿಗೆ ಬಂತೆಂದು ಕಾಮಜ್ವರವಂತೆ ಕೇಳು 4 ನಾಶಾವಾಯಿತು ಇನ್ನು ನಿತ್ಯನಿವಾಸಿಯೆನಿಸುವ ಅವಗೆ ತೋಷದಿ ಕೊಟ್ಟರೆ ಜ್ವರ ನಿಶ್ಯೇಷ ಹೋಗುವದು 5 ಎನ್ನ ಮನೆಯಲಿ ಚೆನ್ನಾಗಿ ಪೇಳುವಳು ಚೆನ್ನಿಗವನನ್ಯಾರೆಂದು 6 ಪೇಳುವಳು ಇನ್ಯಾತಕೆ ಸಂಶಯ ಮಾಡಿನ್ನು ಶುಭಶೀಘ್ರಾ 7 ವಚನ ಸಂಭ್ರಮದಿ ಆನಂದವೆಂಬ ತುಂಬ ರೋಮಗಳುಬ್ಬಿ ರಂಭೆ ಪೂರ್ವದ ಪುಣ್ಯ ಎಂಬುವರು ಮುಕ್ತ ಬಹಳ ಗಂಭೀರ ಅಂಬುಜೋದ್ಬವ ಪಿತನ ತುಂಬಿ ಕುಳಿತದ್ದು ಕಣ್ಣುತುಂಬ ನೋಡೇನು ಎಂದು ಅಂಬುಜಾಕ್ಷಿ 1 ಆಕಾಶಪರಿವೃಡನು ಕ್ಲೇಶದ ಮಗಳಿದ್ದಲ್ಲೆ ನಡೆದು ಒಡೆದು ಆಡಿದನು ಹರುಷ ಹಿಡಿಯಲಾಗದು ನಿನ್ನೊಳು ನೀನೆ ಮಿಡುಕಿ ಬೇಡ ಎನ್ಹಡೆದವ್ವನೆ ನೀನು ಮೂಡಲಗಿರಿ ಒಡೆಯ ವೇಂಕಟಪತಿಗೆ ಕೊಡುವೆ ನಿನ್ನ 2 ಶುಭ ಪತ್ರವನು ಕೊಟ್ಟು ಬೃಹಸ್ಪತಿಯು ವೃತ್ರಾರಿ ಧರಿತ್ರೀಯಲ್ಲೀ ಪೃಥ್ವೀಶ ತಾನು ನತಿಸಿ ವಿಧಿಯುಕ್ತ ಪೂಜೆ ಉತ್ತಮನೆ ನೀ ಕೇಳು ಸತ್ಯ ನಿತ್ಯ ನೀನೆ 3 ಪನ್ನಗಾಚಲದಲ್ಲಿ ನಿನ್ನ ಅನುಮತಿಯಿಂದ ಬಿನ್ನಹದ ನುಡಿ ಕೇಳಿ ಮನಸಿಗೆ ಹರುಷ ಪೇಳುವೆ ಕೇಳು ಚನ್ನಾಗಿ 4 ನಿತ್ಯ ಅವನ ಆ ವಿಸ್ತಾರವೆಲ್ಲ ಪಂಚಕೋಶದಲಿ ಇಲ್ಲಿರುವ ಅವನೇ ಶ್ರೀ ಶುಕಾಚಾರ್ಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಒಂಬತ್ತು ಶ್ರೀ ವಾಣೀಭಾರತೀ ಗೌರೀ ಶಚೀಭಿಃಸ್ನಾಪಿತೋವತಾತ್| ಕುಚೀರಾಲ್ಲಬ್ಧ ವಿತ್ತೋರ್ಚನ್ ವಿಪ್ರಾನ್ ಲಕ್ಷ್ಮೀಪ್ರಿಯಂಶರಃ|| ವಚನ ಪರಮೇಷ್ಠಿ ಮಾಡಿದನು ಸರಸ್ವತಿಯು ಮೊದಲಾದ ಶೃಂಗರಿಸಿಕೊಂಡರು ತಾವು ವರನಾಗಿ ಶೋಭಿಸಿದ ವರ ಹರುಷದಲಿ ನಾಲ್ಕು ವರಕಲಶಗಳನಿಟ್ಟು ವರ ರತ್ನ ಸುರಗಿಯನು ಸುತ್ತಿ ಶ್ರೀಹರಿಗೆ ಸುರರೊಡೆಯ ಬೇಗಿನ್ನು ಮಜ್ಜನ ಮಾಡು ಹರಿಯೆ ನೀನು 1 ರಾಗ:ನೀಲಾಂಬರಿ ಆದಿತಾಳ ಕೇಳೀ ಕಂದಗಂದನು ಶೋಕ ದಲಿ ನೊಂದು ಮನದಲಿ1 ಹಿರಿಯರೆಂಬವರಾರೆನಗೆ ಹರುಸವರಾರಿಲ್ಲ ಅಕ್ಕರವಿಲ್ಲಾ 2 ಅಕ್ಕರದಿಂದ ಪೂಸೆ ಹಿಕ್ಕಿ ಎರೆಯುವದಕ್ಕೆ ಅಕ್ಕ ತಂಗಿಯರಾರಿಲ್ಲ ಅಕ್ಕರವಿಲ್ಲಾ 3 ಬಿಡದ ಕರ್ಮಕ್ಕೆ ಮಾಡುವದು ಬಿಡುವದೆ ಇದು 4 ತಂದೆ ತಾಯಿಗಳಿಲ್ಲದೆ ನೊಂದು ಬಳಲಿದೆ 5 ವಚನ ಎಂದಿಗಾದರು ನಿನಗೆ ತಂದೆ ಬರುವರು ಮಂದಿ ಚಂದೇನೊ ನಿನಗೆ ಇದು ಎಂದಿಗಗಲದೆ ನಿನ್ನ ಸಂದೇಹವ್ಯಾಕೆ ನಗುತ ಮುಂದಿರುವ ತನ್ನ ನೋಟದಿಂದ ನೋಡಿದನು 1 ತಿಳಿದು ತರಸಿದಳು ತೈಲವನು ಹರುಷದಲೆದ್ದು ತಿಳಿದು ತ್ವರದಿ ವರರತ್ನ ಪೀಠದಲ್ಲಿ ಹರಿಣಾಕ್ಷಿ ತಾ ಬಂದು ಸರಸಾದಸಂಪಿಗೆಯ ಹರಸಿದಳು ಹೀಗೆ2 ಮಂಡಿತನೆ ಭಕ್ತರಿಗುದ್ದಂಡ ವರ ಸಂತತಿ ಉದ್ದಂಡ ನಾಯಕನೆ ಭೂಮಂಡ ಕೂಡಿಕೊಂಡು ನಿನ್ನ ಈ ಲೇಪಿಸಿದಳಾ ಜಗದ್ವಾಪಕನ ಎರೆವಳು ತಾಪಿತೋ ದಕÀದಿ ಸಂತಾಪ ಹಾರಕಳು 3 ಗಂಧಪರಿಮಳದಿಂದ ಚಂದಾಗಿ ತಿರೆ ತಂದಳಾರತಿದೇವಿ ಚಂದದಾರತಿ ಒಡಗೂಡಿ ಮುಕುಂದನ ಫಣಿಗೆ ಆರತಿ ಬೆಳಗಿ ಮುಂದೆ ಮತ್ತೆರ ಸುಂದರಾಂಗಿಯು ತನ್ನ ಹರಿವಾಣದ್ಹಿಂದಿಟ್ಟು ಎತ್ತಿ ಕಲಶವೃಂದದಿಂದೋ ಕುಳಿಯ ಚಂದಾಗಿ ಎರೆವಳಾನಂದದಲ್ಲಿ ಸುಂದರಿಯರಿಂದ ಕೂಡಿ 4 ಮೈವರಿಸಿ ಸುತ್ತ ವಸ್ತ್ರ ಪೀತಾಂಬರವ ಬಹುಭಕ್ತಿಯಲಿ ಗಿರಿಜೆ ಸುತ್ತ ಕೇಶಗಳೆಲ್ಲ ತನ್ನ ಪುತ್ರಿ ಭಾಗೀ ಮೆಟ್ಟಿ ಪತ್ನಿಯಳ ಉತ್ತಮಾಸನದಲ್ಲಿ ಹತ್ತಿಕುಳಿತ5 ರಾಗ:ನೀಲಾಂಬರಿ ಆದಿತಾಳ ಎಲ್ಲರು ಬಂದರು ಬಹು ಉಲ್ಹಾಸದಿಂದಲ್ಲೆ ಅವನ ಚಲ್ವಿಕೆಯ ನೋಡುತಲೆ ಅಲ್ಲೆ ಕುಳಿತರು 1 ಚಂದದ ಚಾಮರಗಳ ಪಿಡಿದರು 2 ಕೊಟ್ಟಳು ವಿಚಿತ್ರದ ಕನ್ನಡಿ3 ಚೆನ್ನಾಗಿ ಹಚ್ಚಿಕೊಂಡ ಚನ್ನಿಗ ತಾನು 4 ಮುದದಿಂದ್ಹೀಗೆಂದಳು ಸೊಸೆಗೆ ಮುದು ಮಗನಿಗೆ ಕುಂಕುಮ ಹಚ್ಚು ಮದಗಜಗಮನೆ 5 ಫಣಿಗೆ ತಿದ್ದಿ ಕುಂಕುಮ ವನ್ನಿಟ್ಟಳು ಮುದ್ದು ಸುರಿಯುತ 6 ಮುಂದಲ್ಲೆ ಕುಬೇರಕೊಟ್ಟ ಚಂದದಾಭರಣಗಳಿಟ್ಟು ಸಂಧ್ಯಾನು- ಷ್ಠಾನವ ವಿಧಿಯಿಂದ ಮಾಡಿದ 7 ಪುಣ್ಯಾಹ ವಾಚನಕೆ ಕುಳಿತಾ ಪುಣ್ಯಾತ್ಮನು ತಾನು 8 ಒಡಗೂಡಿ ಕುಳಿತಳಲ್ಲೆ ಸಡಗರದಿಂದ 9 ಮತ್ತಲ್ಲೆ ವಶಿಷ್ಠ ಮುನಿಯು ಮುತ್ತಿನ ರಾಸಿಗಳಿಂದ ಉತ್ತಮ- ಗದ್ದಿಗೆಯ ಬರೆದ ಕ್ಲಪ್ತದಿಂದಲಿ 10 ವಿಧಿಯಿಂದ ಮಾಡಿಸಿದನÀು ವಿಧಿಸುತ ತಾನು11 ಸಂಭ್ರಮದಿಂದಲ್ಲೆ ಕೊಟ್ಟ ತಾ ಬ್ರಹ್ಮದೇವ 12 ದೇವಾಧಿದೇವಗೆ ಕೊಟ್ಟರಾ ವೇಳೆಯಲ್ಲಿ 13 ಮುತ್ತಿನ ಅಕ್ಷತೆ ಇಟ್ಟು ಮುತ್ತೈದೆರಲ್ಲೆ 14 ನುಡಿದ ಕುಲದೇವಿ ಯಾವಕೆ ನಿನಗೆ ಶ್ರೀನಾಥಪೇಳೋ 15 ಹಲವು ಕಾಲದಲ್ಲಿ ಎನ್ನ ಕುಲಪುರೋಹಿತನಾದ ಮೇಲೆ ಕುಲದೇವಿ ಯಾವಕೆ ಅರಿಯೆ ಮುನಿನಾಥ ನೀನು 16 ಕುಲಪುರೋಹಿತ ನೆನಿಸುವೆನೊ ಶ್ರೀನಾಥನಿನಗೆ17 ಕುಲದೇವಿ ಎನಗೆ ಉಂಟು ಮುನಿನಾಥ ಕೇಳೊ 18 ಯಾವರೂಪ ದಿಂದೆಸೆವಳು ಶ್ರೀನಾಥ ಪೇಳೊ19 ವೃಕ್ಷರೂಪದಿಂದ ಅಮಿತಾದ ಫಲಕೊಡುವಳಯ್ಯ ಮುನಿನಾಥ ಕೇಳೊ20 ವೃಕ್ಷ ಎಲ್ಲಿ ಇರು ತಿಹುದು ಪೇಳೋ ಶ್ರೀನಾಥ ನೀನು 21 ಇರುತಿಹುದು ವೃಕ್ಷ ಮುನಿನಾಥ ಕೇಳೊ 22 ಸಹಿತ ತ್ವರದಿ ನಡೆದ ಕುಲದೇವಿಯ ಕರೆವುದಕೆ 23 ವಚನ ಕ್ರಮದಿಂದ ಪೂಜಿಸುತ ದಯಮಾಡು ನಮಗೆ ಕುಲ ಅಮಿತ ಕಾರ್ಯವನು ಕ್ರಮ 'ಶಮಿಶಮಮೇ' ಎಂತೆಂಬ ಮಾಡಿ ಕುಲದೇವತೆಯಾ ಮಾಡಿ ನುಡಿದವು ಆಗ ಸೂರಾಡುತಲೆ ಬಂದ ಗಾಢನೆ ಸ್ನೇಹ ಸಂರೂಢನಾಗಿ 1 ವರಹದೇವನೆ ಎನ್ನವರ ಧರಣಿದೇವಿಯ ಕೂಡಿ ಸರಸಾಗಿ ಎಲ್ಲರಿಗೆ ಹರಿಯೆ ನೀನು ಹರಿ ಅಂದಮಾತಿಗೆ ಆ ಹಿರಿಯಳೆಂತೆಂದು ತಿಳಿ ಎನ್ನ ಇರುವೆ ಕೃಷಿ ಕಾರ್ಯದಲಿ ನಿರತನಾಗಿ 2 ಎಲ್ಲ ಈ ಪರಿಕೇಳಿ ಫುಲ್ಲನಾಭನು ಅವನ ಒಲಿದಾಜ್ಞೆಯ ಕೊಂಡು ಉಲ್ಲಾಸಬಟ್ಟು ಮನದಲ್ಲಿ ಕುಲದೇವತೆಯ ಅಲ್ಲಿ ಸ್ಥಾಪನೆ ಮಾಡಿ ನಿಲ್ಲದಲೆ ಸ್ವಸ್ಥಾನದಲಿ ಬರುತಾ ರಮಾ ವಲ್ಲಭನು ನುಡಿದನಾಗಲೆ ಈ ಪರಿಯು ಎಲ್ಲರ್ಹೊರಡಿರಿ ಇನ್ನು ಸುಳ್ಳ್ಯಾಕೆ ತಡ ದೂರದಲ್ಲೆ ಇರುತಿಹದು ಬಲ್ಲಿ ದಾಕಾಶಪುರ ಇಲ್ಲಿದ್ದ ಬಾಲಕರು ಎಲ್ಲ ವೃದ್ಧರು ಮತ್ತೆ ಮೆಲ್ಲಗ್ಹೋಗಲಿ ಮುಂದೆ ನಿಲ್ಲದಲೆ ಸಾಗಿ3 ತನ್ನ ತಂದೆಯ ವಚನವನ್ನು ಕೇಳೀಪರೀ ಮುನ್ನ ನುಡಿ ದನು ಬ್ರಹ್ಮ ಪುಣ್ಯಪುರುಷನೆ ಕೇಳು ಪುಣ್ಯಾಹ ವಾಚನವ ಚೆನ್ನಾಗಿ ನೀ ಮಾಡಿ, ಮುನ್ನ ಆಕುಲದೇವಿಯನ್ನು ಸ್ಥಾಪನೆಮಾಡಿ, ಉಣ್ಣದಲೆ ಪೋಗುವುದುಚಿತವಲ್ಲಾ ಸಣ್ಣ ಬಾಲರು ಮತ್ತೆ ಹೆಣ್ಣು ಮಕ್ಕಳು ದೇಹಹಣ್ಣಾಗಿ ಇರುವ ಬಹು ಪುಣ್ಯ ಶೀಲರು ಮತ್ತೆ ನೀನ್ನ ಕುಲ ಬಾಂಧವರು ಮಾನ್ಯ ಮುನಿಗಳು ಎಲ್ಲ ಉಣ್ಣದಲೆ ಹಸಿವೆಯಲ್ಲಿ ಬಣ್ಣಗೆಟ್ಟಿಹರು 4 ತನ್ನ ತನಯನ ವಚನವನ್ನು ಕೇಳೀ ಪರಿಯಮುನ್ನ ಶ್ರೀಹರಿನುಡಿದ ಎನ್ನ ಪುತ್ರನೆ ಕೇಳು ಎನ್ನ ಕಾರ್ಯಕೆ <ಈಔಓಖಿ ಜಿಚಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 ಜ್ಞಾನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಆ. ಧನ್ವಂತರಿ ಅಂತರಂಗದ ರೋಗ ಚಿಂತೆ ಪರಿಹರಿಸಿ ಮೋಕ್ಷಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ಪ ಸುರರು ಅಸುರರು ಕೂಡಿ ಶರಧಿಯಾ ಮಥಿಸಲುಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ 1 ಇಂದ್ರ ನೀಲಾಂಭ್ರಣಿ ಸನ್ನಿಭರೂಪಚಂದ್ರ ಮಂಡಲದೊಳು ನಿಂತು ರಾಜಿಸುವಿ 2 ಯೋಷಿತ ರೂಪದಿ ಸುಧೆಯನು ಕೊಟ್ಟುಪೋಷಿಸಿದೆಯೋ ಇಂದಿರೇಶ ದಿವಿಜರಾ 3
--------------
ಇಂದಿರೇಶರು
ಆನಂದ ಗಂಭೀರ ನೀಲಾಂಗ ರಂಗ ಭಂಜನ ಹರೇ ಹರೇ ಪ ಮುನಿಜನ ವಂದಿತ | ವನರುಹ ಲೋಚನ ಘನ ನೀಲಾಂಬುದಸಮಾ ಹರೇ ಅ.ಪ ವನಜನಯನ ಹರಿಕೇಶವ ಮಾಧವ ಕನಕಾಂಬರಧರ ಗೋಪಾಲ ದನುಜ ಕುಲಾಂತಕ ಧೇನುಕ ಸಂಹಾರ ಅನಂತ ಶ್ರೀಧವ ಶ್ರೀಬಾಲಾ 1 ಭುವನಮನೋಹರ ಮುರಳೀಧೃತಕರ ಭವಸಾಗರದೂರ ನಮೋ ನಮೋ ಪವನಾತ್ಮಜಕರ ಮಾಂಗಿರಿನಾಯಕ ತವಸೇವಿತಪದ ನಮೋ ನಮೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದಿರೆ ಮನೋಹರ ಭಕ್ತಲಲಾಮ ಸಿಂಧುಸದನ ತ್ರಿಜಗದೋದ್ದಾಮ ಪ ಮಂದರಮಂದಿರ ಮೇಘ ಶ್ಯಾಮ ಕುಸುಮ ಅ.ಪ ಅಮಿತ ಲೀಲ ಸಗುಣನಿರ್ಗುಣ ಮಹಿಮಜಾಲ ಸುಜನ ಪಾಲ ಕಾಲ 1 ಪರತರಪಾವನ ಕರುಣಾಂತರಂಗ ಮಾಧವ ಪರಿಭವ ಭಂಗ ಸಿರಿ ನರಸಿಂಗ ಮರಣರಹಿತ ಪ್ರಭುವರ ನೀಲಾಂಗ2 ಗೋಕುಲಪತಿ ಗೋಪಾಲಶೀಲ ವ್ಯಾಕುಲಪರಿಹರ ವೇಣುಲೋಲ ಕಾಕುದನುಜ ಸಂಹಾರ ವಿಶಾಲ ಲೋಕಪಾವನೆ ವರ ದೇವಕಿ ಬಾಲ 3 ಯೋಗಿ ವಂದಿತ ವನಜ ಸಂಭವಾದಿ ಸುರಮುನಿವಿನುತ ಚಿನುಮಯ ಚಿದ್ರೂಪ ಚಿತ್ಕಳಾಭರಿತ ಜನಕತನುಜೆಪತಿ ವಿಮಲಚರಿತ 4 ಗೋಕುಲನಾಯಕ ಶ್ರೀಕೃಷ್ಣನಮೋ ವೈಕುಂಠನಾಯಕ ಶ್ರೀ ವಿಷ್ಣು ನಮೋ ಲೋಕನಾಯಕ ಶ್ರೀನಿವಾಸ ನಮೋ ಭಕುತಿದಾಯಕ ಶ್ರೀರಾಮ ನಮೋ5
--------------
ರಾಮದಾಸರು
ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಪ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ1 ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ2 ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹÀರನ3 ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ ದಿವ್ಯ ಮಿರುಗುವಾಭರಣದಿಂದಲಿ ನಿಂದಿಹನಾ 4 ಶಾಮವರ್ಣ ಚತುರ್ಭುಜನಾ ನಿಜ ಕಾಮಿನಿ ಸಂಗಡ ನಲಿದಾಡುವನಾ ಹೇಮ ಗಿರಿಯಲಿದ್ದವನಾ ದೇವ ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ5
--------------
ವಿಜಯದಾಸ
ಉದಯದಲೆದ್ದು ಶ್ರೀಹರಿಯ ನಾಮಂಗಳನು | ವದನದಿಂದುಚ್ಚರಿಸಿ ಪಾಡುವ ನರರು ದುರಿ | ಮುದದಿಸದಮಲಾನಂದ ಸುಖವ ಪ ಕೃಷ್ಣ ಕಮಲೇಶ ಕಂಜಾಕ್ಷ ಕರುಣಾಬ್ಧಿ ಶ್ರೀ | ವಿಷ್ಣು ವಿರಂಚಿಪಿತ ವಿಮಲ ವಿಶ್ವೇಶ ಭ್ರಾ | ತುಷ್ಣಿಕರ ಕೋಟಿತೇಜಾ || ವೃಷ್ಣಿ ಕುಲತಿಲಕ ವೃಂದಾವನ ವಿಹಾರಿ ಗೃಹ | ಜಿಷ್ಣು ಸುರಸೇವೆ ಸಜ್ಜನ ಪ್ರಿಯ ಸರ್ವೇಶನ | ಅಭಿಮಾನಿ ಎಂದು1 ಪರಮ ಪುರುಷೋತ್ತಮ ಪರಂಧಾಮ ಪರಬ್ರಹ್ಮ | ಪರಮಾತ್ಮ ಪರಂಜ್ಯೋತಿ ಪರತರಾನಂದ ಗುಣ ಪರಿಪೂರ್ಣ | ಪದ್ಮನಾಭ | ಮುರಮಥನ ಮದನಮೋಹನ ಮುರಲಿಲೋಲ ಮಧು | ಹರಹಲಾಯುಧ ಹಯವದನ ಸ್ಮರಹರಾರ್ಚಿತ | ಚರಣ ಸಚರಾಚರ ವ್ಯಾಪ್ತ ಚಿದ್ವನರೂಪ ಚಾರುಚರಿತ ಚಲರದಹಿತನೆಂದು 2 ಕಾಮಜಿತರೂಪ ಕೌಸ್ತುಭಧಾರಿ ತ್ರಿ | ಧಾಮ ತ್ರಿವಿಕ್ರಮ ತ್ರಿಕಾಲಙ್ಞ ತ್ರಿಜಗನುತ | ಹರಣ || ಶುಭ | ನಾಮ ನಾರದ ಪ್ರಿಯ ನಾರಾಯಣ ಜನಕ | ಕಾಮಪೂರಿತನೆಂದ 3 ಅನಿರುದ್ಧ ಧೋ ಕ್ಷಜಾಕ್ಷರತೀತಕ್ಷಯ ಗದಾಂ | ಪವನಜ ಪ್ರಿಯ ನರಕಾಂತಕಾ | ಗಜಗತಿಪ್ರದ ಗರುಡಗಮನ ಗೋವಿಂದ ಗೊ | ವ್ರಜಪಾಲ ವನಮಾಲಿ ವಸುದೇವಸುತ ಶಾರಂಗಿ | ಕುಜಹರ ಕಿರೀಟಧರ ಜಂಭಾರಿಧೃತ ಚತುರ್ಭುಜ ಭುವನ ಭರಿತನೆಂದು4 ಶ್ರೀರಂಗ ಮುನಿಸಂಗ ಸುರತುಂಗ ಗೋಪಾಂಗ | ನಾರಿಮಣಿ ನೀಲಾಂಗ ಕಾಳಿಂಗ ಮದಭಂಗ | ಸಹಕಾರನೆಂದು | ನೂರೆಂಟು ನಾಮಾವಳಿಯ ರತ್ನಮಾಲಿಕೆಯ | ನಾರುಧರಿಸುವರವರ ಇಷ್ಟಾರ್ಥಗಳ ಕೊಟ್ಟು | ಸಹಕಾರ ನಿಜಪದವಿತ್ತು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನಳವೆ ಯೋಗದಭ್ಯಾಸ ಹರಿಯೇ ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ ಅವ್ಯಯಾನಂದ ಮಾಂಗಿರಿರಂಗ ವಿಠಲ 1 ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು ಕರ್ಮದೊಳಗುತ್ಸಾಹವಿರಲದೇ ಸುರಿನೀರು ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ ನಿರ್ಮಲತೆಯೇ ಫಲವು ಇದು ಕರ್ಮಯೋಗ 2 ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು ಭಕ್ತಜನರ ಸೇವೆಯೇ ಮೇಲೆರೆವ ನೀರು ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ ಮುಕ್ತಿಯೇ ಫಲಮಿದೆ ಭಕ್ತಿಯೋಗ3 ಆಸನವೇ ಬೀಜ ಪ್ರಾಣಾಯಾಮವೇ ಬೇರು ಆಸೆಯಿಂ ಗೈವ ದಿನಚರ್ಯೆಯೇ ನೀರು ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ ಭಾಸಿಪಾ ಫಲಮಿದೆ ಹಟಯೋಗವಯ್ಯ 4 ಯಮನಿಯಮಗಳೆ ಬೀಜಧಾರಣವೆ ತಾಂಬೇರು ಕ್ರಮಮಾದಘ್ರಣಿದಾನ ಮೇಲೆರೆವ ನೀರು ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ ಕ್ರಮಸಮಾಧಿಯೆ ಫಲವು ಇದು ರಾಜಯೋಗ 5 ವರವಿವೇಕ ಬೀಜ ವೈರಾಗ್ಯವೇ ಬೇರು ಗುರುಕರುಣಮೆಂಬುದೇ ಮೇಲೆರೆವ ನೀರು ಪರಬ್ರಹ್ಮ ಜ್ಞಾನವೇ ಪರಿಮಳಿಸುವ ಪುಷ್ಪ ವರಮೊಕ್ಷವೇ ಫಲವು ಇದು ಜ್ಞಾನಯೋಗ 6 ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ ತ್ಯಾಗ ಮಾಡುವ ನಿಯಮವೆನಗಸಾದ್ಯ ಆಗಾಗ ನಿನ್ನ ನಾಮಂಗಳನು ಪೇಳ್ವುದೇ ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಓಡಿಬಾ ಬಾ ರಂಗ ಆಡುಬಾ ನೀಲಾಂಗ ಪಾಡಿ ಪೊಗಳುವೆ ರಂಗ ಶ್ರೀಪಾಂಡುರಂಗ ಪ ಬೇಡುವೆನೊ ಮಾರಾಂಗ ನೋಡಿನಲಿವೆನೊರಂಗ ನೀಡು ವರಂಗಳ ರಂಗ ಶ್ರೀಕರಾಂಗ ಅ.ಪ ಬಡ ಮೌನಿಗಳು ನಿನ್ನ ಪಿಡಿಯ ಬಂದಿಹರೆನ್ನ ತೊಡೆಯ ಮೇಲಿರೋ ಚಿನ್ನ ಮುದ್ದುಮೋಹನ್ನ ಬೆಡಗ ತೋರುತೆ ಚೆನ್ನ ಚೆಲುವ ಬಾ ರನ್ನ ಒಡೆಯ ಮಾಂಗಿರಿಯ ಚೆನ್ನಿಗ ನಂಬಿಹೆನೊ ನಿನ್ನ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್