ಒಟ್ಟು 97 ಕಡೆಗಳಲ್ಲಿ , 42 ದಾಸರು , 93 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

1. ಗಜೇಂದ್ರಮೋಕ್ಷ ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ಘೋರ ಭವದುಃಖ ಸಂಹಾರಾಯ ಪ ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ- ತಾ ಶುಂಡಾಲನಾದನರಸ 1 ಕ್ಷೀರಸಾಗರ ತಡದೊಳೈವತ್ತು ಯೋಜನ ವಿ- ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ ವಾರಣೀಂದ್ರನು ಮೆರೆದನು 2 ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ ಕಂಡಿತು ಪಾನಾಭಿಲಾಷೆಯಿಂದ ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸವೆಂದುಗ್ರಕೋಪದಿಂ ನೆಗಳು ಏನೆಂಬೆನಾಕ್ಷಣದೊಳು 3 ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ ಸೆಳೆದುದು ಬಿಡದೆ ನೆಗಳವು ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಚಿಂತಿಸುತ ಮತ್ತ್ಯಾರು ತನಗೆನುತಲಿ 4 ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು ಮುಕುಂದ ಮುನಿವೃಂದವಂದ್ಯಾ ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ ಮಾಯಾಪ್ರಬಂಧದಿ ನೆಗಳಿನಿಂ 5 ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ ಪರಮೇಷ್ಠಿ ಪರಮಪುರುಷಾ ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರಂಜನ ನಿರಾಧಾರ ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6 ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ ದಂತಿವದನನ ನೆಗಹಿದಾ 7 ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ ಕುಂಡಲದಿಂದ ಮಿಗೆ ಶೋಭಿಸುತಲೆಸೆದನು ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ ಅಮರರೊಲುಮೆಗೆ ನೆರೆದನೋಲೈಸುತ 8 ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು [ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ ಸಿರಿ ಮೊಗದ ಪೀತಾಂಬರದಾಲಂಕೃತದ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9 ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10 ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ- ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ಬಿಜಯಂಗೈದ ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
--------------
ಬೇಲೂರು ವೈಕುಂಠದಾಸರು
ಪ್ರಥಮ ವಚನ ಕಾಂತಿಯಿಂದಿರುವ | ಚಕ್ರ ಪದುಮ ಗದೆ | ಅದರೊಳಗೆ ಬಿದ್ದಿರುವ ಪರಮಪವಿತ್ರ ತ್ಯುಬುಗಳ ತೆಗೆದು | ನೇತ್ರದೊಳಗೊತ್ತಿ | ಪರಿಮಳವಾದ ಗಂಧಗಳಿಂದ ಅಲಂಕೃತ | ಸಿರಿದೇವಿ ವರದೊಡೆಯ ಮೇಲಿದ್ದು | ಕರಕಮಲದಲೊತ್ತುವ | ದಿನವೆ ಪರಮ ಪುಣ್ಯೋದಯ ಪ ಪಾದ | ಸರಸೀರುಹ ಸರಸದಿಂ ಕೊಂಡಾಡಿ | ನೆರಳಿ ಮರಳೀ ಸೌಖ್ಯದಾನಂದ | ಶರಧಿಯೊಳು ಮುಣುಗಿ ಮುಣುಗಿ ಏಳುತ | ಸೌಖ್ಯದಾನಂದ ಭಕ್ತಿಭಾವಗಳಿಂದ ಕರುಣಾಳು ಕೃಷ್ಣ ತ್ವರಿತದಲಿ ತನ್ನ ಸೇವಕ ಜನರೊಳಗೆ | ಸೇರಿಪ್ಪ ನಾ ಅರಿಯನು ನಾನೊಂದು ಸ್ತೋತ್ರ ಮಾಡುವದಕ್ಕೆ | ವರವ್ರಜ ತರುಣಿಯರು ಏನು ಪುಣ್ಯವ ಮಾಡಿದರೊ | ಸರುವದಾ ಹರಿಯನ್ನು ಕಾಣುವರು ಕಂಗಳಲಿ | ಪರಿಹಾಸ್ಯ ನುಡಿಯಲ್ಲ | ಪರಮ ಪವಿತ್ರರಿಗೆ ದೊರೆ | ಸಿರಿ ವಿಜಯವಿಠ್ಠಲನು | ಕರವಿಡಿದು ಎನ್ನಭೀಷ್ಟವನಿತ್ತು | ಪರಿಪಾಲಿಸಬೇಕೆಂದು ಭಕ್ತ ಕೇಳಿದನು 1 ದ್ವಿತೀಯ ವಚನ ಜಲಜನಾಭನÀ ರಥದ ದಡದ ಮೇಲೆ ನಿಲ್ಲಿಸಿ | ಜಲದೊಳಗೆ ತಾ ಮುಳುಗಿ ಅಕ್ರೂರ ಕಣ್ಣು ತೆರೆಯೆ | ಕಲುಷವರ್ಜಿತನಾದ ಕೃಷ್ಣ | ಹಲಧರನ ಸಹ ಮೇಳ ಸಂಭ್ರಮದಿ | ಜಲದೊಳಗೆ ತಾ ಕಂಡು | ನಾ ಪೇಳಿದ ಮಾತು ನಡಿಸಿ | ಬಲವಂತದಲಿ ಬಿದ್ದ ಭವರೋಗ ವೈದ್ಯನ ಮಾತೆ | ಲಲನಾಮಣಿಗೆ ಏನು ಹೇಳುವೆನು | ಸುಲಭವಾಗಿ ಎಮಗೆ ಅಭೀಷ್ಟಪ್ರದವಿದು | ಎಂದೆನುತ ತಂದೆ ನಂದಗೋಪನು | ಯೋಚಿಸಿ ಮನದಲಿ ಚಿಂತೆಯಗೊಂಡು | ಹನುಮೇಶ ವನಜಾಕ್ಷ | ಘನಮಹಿಮ ಎನ್ನ ಮನದ ಚಿಂತೆಯನು ಹನನವ ಮಾಡಿ ಎನ್ನ ಕೈಪಿಡಿಯಲಾಗದೆ ಈಗ ಎನುತ | ಮೇಲೇಳೆ ಸನಕ ಸನಂದನ ಸನತ್ಕುಮಾರ ಸಹ | ವನಜ ಸಂಭವ ಜನಕ ವೈಕುಂಠಪತಿ ಕೃಷ್ಣ | ಕನಕ ರಥದ ಮೇಲೆ ನಿಂತಿದ್ದು ತಾ ಕಂಡು | ಕರವೆರಡು ಜೋಡಿಸಿ | ಭರದಿ ಭಕ್ತಿಯಗೊಂಡು | ನರಜನ್ಮ ಹುಳು ನಿನ್ನ ಮಹಿಮೆಗಳ ಅರಿಯದೆ | ಜಲದೊಳಗೆ ನೀ ಬಿದ್ದಿ ಎನುತಲೀ ಯೋಚಿಸಿದೆ | ಚರಣದ ಮಹಿಮೆಗಳ | ಮರಣದಲಿ ಅಜಮಿಳಗೆ ದಯಮಾಡ ಬೇಕೈ | ಅರ್ಭಕ ಪ್ರಹ್ಲಾದ ನಿಜಮುನಿ ಶುಕಾಚಾರ್ಯರಂತೆ | ಅಪ್ರಾಕೃತ ಅಕಲಂಕ ಚರಿತ ಅಮರೇಂದ್ರ ವಂದಿತ | ಪಾಲಾ ವಿಜಯನ ರಥವನ್ನು ಸಾರಥಿಯಾಗಿ ದಯಾಸಮುದ್ರ ವಿಜಯವಿಠ್ಠಲನೇ2 ತೃತೀಯ ವಚನ ಅರವಿಂದನಾಭ ಕೃಷ್ಣ ಅಖಿಲಜನ ಪರಿಪಾಲ | ಕೃಪಾ ಸಮುದ್ರ | ಕಳತ್ರ | ಪರಿಪಾಲಿಸಬೇಕೆನ್ನ | ಪಾವನ ಚರಿತ್ರ | ಸುರಪತಿಗೆ ಅಸುರರ ಬಲನೀಗಿ ಆ | ವಿರಂಚಿ ಬಳಿಗೆ | ಶರಣೆಂದು ವರವೊಂದು ಕೇಳಿದೆ ವೈಕುಂಠಪತಿ ಕೃಷ್ಣ | ಕಂಟಕ ಕಂಸಾದಿಗಳ ಗೆಲಿದು | ಪಾದ | ಸರಸಿಜದೊಳು ಚಿತ್ತವಿರುವಂದದಲಿ | ಪರಮ ದಯಾಕರ ನಿನ್ನ ಮಹಾ ಮಹಿಮೆಗಳ | ಗರ್ವಿಷ್ಠನಾಗಿ ಮಲಗಿದವನಲ್ಲಿ | ಕೇಳ್ವ | ತ್ವರಿತದಲಿ ದಯಮಾಡಿ | ಭರದಿ ಪಾಲಿಸಬೇಕೆನ್ನ | ಭಕ್ತಜನ ವತ್ಸಲನೆ ಎನಲಾ ಮಾತಿಗೆ | ಇನ ಇಂದಿರೆ ಅರಸ | ಹನುಮೇಶ ಕನಕಮಯವಾದ ಪೀತಾಂಬರ | ಜನಿವಾರ | ಅನೇಕ ಅತರಿಗಳ ಗೆಲಿವ ಕನಕಮಯ | ಕಿರೀಟ ಚತುರ್ಭುಜ | ಕಟಕ ರತ್ನಮಯದುಂ | ಗುರ ವಾಹನ ಚಕ್ರವರ್ತಿಗೆ ತನ್ನ ನಿಜರೂಪವ3 ಚತುರ್ಥ ವಚನ ಆನಂದತೀರ್ಥ ಮುನಿವಂದ್ಯ | ಜ್ಞಾನಿಗಳ ವಲ್ಲಭ | ದೀನಜನ ಮಂದಾರ ನಾ | ನಿನ್ನ ಮೊರೆಹೊಕ್ಕು ಧೇನಿಸಲರಿಯೆ | ಆನೆಯನು ಆದರದಿ ಕಾಯ್ದ ಶ್ರೀನಿವಾಸ | ಸಾನುರಾಗದಿ ಪ್ರಹ್ಲಾದಗೊಲಿದ ಶ್ರೀನಿಧಿ ನರಸಿಂಹ | ಅನಾದಿ ಕಾಲದಿ ತಂದೆ ಬಂಧು ಬಳಗವು ಎಂದೆ | ಮಾನಿನಿ ದ್ರೌಪದಿ ಮೊರೆ ಇಟ್ಟಾಗ ಧ್ವನಿ ಕೇಳಿ | ಮಣಿ ಲಕುಮಿಗ್ಹೇಳದೆ | ಆನಂದಮಯನು ಅಕ್ಷಯವಿತ್ತು ಆಗ ಪರಿಪಾಲಿಸಿದಿ ಅದರಂತೆ | ಮಾನಹೀನನೆಂದು ನಿರಾಕರಿಸದೆ | ಧ್ಯಾನಕ್ಕೆ ಒಳಗಾಗಿ | ಮೌನಿಜನರನು ಕಾವ ಕ್ಷೋಣೀಶ ಮಾಣಿಕ್ಯ ಮಕುಟ ಕುಂಡಲಧರ | ಸಿರಿ ತುಳಸಿ | ಪರಿಮಳ ಸಿರಿಗಂಧ ಉದರದಲಿ ಬೆಳಗುವ | ಉಪೇಂದ್ರ ನಾಮ ಕೃಷ್ಣ ಉರಗೇಶಶಯನಾ | ನಿನ್ನ ದಾಸರದಾಸನೆಂದೆನುತ | ಕಾಣಸಿ ನಿನ್ನ ನಿಜರೂಪ | ನಿನ್ನ ಸ್ತೋತ್ರ ಮಾಡುವ ಭಕ್ತಗಣದೊಳಗೆ ನಿಲ್ಲಿಸೊ | ನಿನ್ನ ಮತ್ತೊಂದು ಪದಾರ್ಥ ಕೇಳುವವನಲ್ಲ | ತೀರ್ಥ ತೀರ್ಥಗಳಲ್ಲಿ ಮುಳುಗಿ ಬಂದವನಲ್ಲ | ಸಾರ್ಥಕವಾದಂಥ ಕೃತ್ಯ ಮಾಡುವನಲ್ಲ | ಸಾಧುಜನಸಂಗದಲಿ ಸೇರಿ ಪಾಡಿದವನಲ್ಲ | ಈ ನುಡಿ ಸತ್ಯವೇ ಲೇಸು ಪುಸಿಯಲ್ಲ | ಮಲ್ಲಮಲ್ಲರ ಗೆಲಿದ ಮಾಧವನು ನೀನಲ್ಲದೆ ಇನ್ನೊಂದು ದೈವವಿಲ್ಲದ ಮಧ್ವ ಮುನಿ ಹೃದಯಾಟ್ಟ ಪೀಠದೊಳು ವಾಸ ಮಾಡುವ ದೊರೆ ಉದ್ಧರಿಸಬೇಕೆನ್ನ ವಿಜಯವಿಠ್ಠಲನೆ 4 ಐದನೇ ವಚನ ಕರಿಯಬೇಕೆನ್ನ ಹಿರಿಯರೂ | ಇಡಲಾಗದ ಮನಸು ಸರ್ವದಾ ನಿನ್ನ | ಚರಣಾರವಿಂದ ದ್ವಂದ್ವದಲಿ | ಭರದಿಂದ ಮುದ್ರೆಯನಿಟ್ಟ | ತುತಿ ಮಾಡುವೆ ನಿನ್ನ | ಮುಚಕುಂದ ವರದ ನಿತ್ಯಾನಂದ ವಿಗ್ರಹ | ಸರಸಿರುಹಾಕ್ಷ ಸಜ್ಜನ ಪರಿಪಾಲಾ | ಪೂಜ್ಯ ಅವಗುಣ ವರ್ಜ ಅಕಳಂತ | ಮಹಾನುಭಾವ ಮಧ್ವೇಶ | ಈ ನುಡಿಯು ಪುಸಿಯಲ್ಲ | ಕರ ಪಿಡಿದು ಕಾಯ್ವರನ ಕಾಣೆ ಚರಣಾವಿಂದವನು ಭಜಿಪ ವೀಣೆ | ಈ ಕ್ಷೋಣಿಯೊಳಗೆನ್ನ ನರಜನ್ಮವು ಬಾರದೆ ಪರಿಪಾಲಿಸಬೇಕೆನ್ನ | ಪರಮ ಪವಿತ್ರ ಪಂಕೇರುಹನೇತ್ರ ಸಂಕಟಗಳ ಕಳೆದು | ಸೌಖ್ಯಪದ ವೈಕುಂಠದೊಳಗೆನ್ನ ನಿಲ್ಲಿಸೊ | ಭರದಿಂದ ನಿನ್ನ ನಾಮದ ಭಂಡಾರ ಕದ್ದ ಕಳ್ಳನೆನೆಸಿ | ಅರವಿಂದನಾಭ ನಿನ್ನ ಅಮರನೇ ವೈಕುಂಠ | ಕಾರಾಗೃಹದೊಳಗೆ ವಾಸ ಮಾಡಿಸು ದೇವ ಕೋಟಿ | ವರುಷಕೆ ಇದುವೆ ಎನಗೆ ಹರುಷ ಆನಂದಮಯ | ಇನ್ನೋರ್ವನಿಲ್ಲ ವಿಜಯವಿಠ್ಠಲನೇ 5
--------------
ವಿಜಯದಾಸ
(ಊ) ಆತ್ಮನಿವೇದನೆ ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ 1 ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ 2 ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ವೀರನಾರಾಯಣಸಾಕು ಬಿಡಿಸಯ್ಯ ನರಜನ್ಮದ ಗಂಟು 3
--------------
ವೀರನಾರಾಯಣ
(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು
ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು ಪ ಅಂಜಿಸೊದ್ಯಾಕ‌ಘ ಭಂಜಕನೆನಿಸಿ ನೀ ಕಂಜನಾಭನ ಭಕ್ತಿ ಪಂಜರದೊಳಿಡದೇ ಅ.ಪ ಹೊಂದÀದೀ ನರಜನ್ಮವ ಇಂದಿರೇಶನು ಎಲ್ಲ ಹೊಂದೀ ಹೊದರಿಯದ ಮಂದಮತಿಯನು 1 ಬಿಂಬ ಮೂಡಲು ಪ್ರತಿಬಿಂಬ ಮಾಡುವುದೆಂದು ಶಂಬರಾರಿಯ ಪಿತನ ನಂಬದ ಢಂಬಿಯೊಳಂ ಜಿಸೋದ್ಯಾತಕಯ್ಯಾ2 ಶ್ರೀ ನರಹರಿಪಾದ ಧ್ಯಾನವ ಮಾಡದೆ ಬುದ್ಧಿ ಹೀನನಾದವಗೆ ಸುಜ್ಞಾನ ಕೊಡದೆ ಸುಮ್ಮನಂ ಜಿಸೋದ್ಯಾತಕಯ್ಯಾ 3
--------------
ಪ್ರದ್ಯುಮ್ನತೀರ್ಥರು
ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು 1 ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು 2 ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು 3 ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ | ಕೊಳದ ಯಿದ್ದ ಹೀನ ನರನು 4 ಪೊಡವಿಯರಸ ಕೇಶವನ್ನ | ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು |5 ಸಿರಿ | ವಿಠ್ಠಲನ ಮುಂದೆ ತಂದು | ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು6 ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ | ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು 7 ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ | ಕಂಸಾರಿ ಎನದ ಹೀನ ನರನು 8 ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು | ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು 9 ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ | ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು 10 ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ | ಸೊಲ್ಲು ಪೇಳಿ ಬಾಳದವನು 11
--------------
ವಿಜಯದಾಸ
ಅವತಾರತ್ರಯ ಅಕ್ಷಯ ನೀನಾಮೃತಂ ಕುಕ್ಷಿಯೊಳಗೆ ಪೂರ್ಣವಾಗಿಹ ಅಕ್ಷಯಾಂತಕನೀಕ್ಷಿಪುದು ಸುಜನರು ಪ ಇಕ್ವಾಕು ಕುಲಾಧ್ಯಕ್ಷ ರಾಘವನಾ ಶಿಕ್ಷೆಯಲಿ ಪ್ರಾಣ ರಕ್ಷಕನೆÉಂದರುಹಲು ಧರೆಗೆ ತಕ್ಷಣದಿ ಮರುದ್ವಾಕ್ಷ ಮರಕಟ ಕೃತಿಯ ತೋರಿ ಜಲಧಿಯನೆ ಪಾರಿ ರಕ್ಷಕೇಂದ್ರನ ಪುರಸೇರಿ ರಕ್ಕಸಿಯದೆಡೆಯಲಿ ಜನನಿಗೊಂದಿಸಿ ಲಕ್ಷಣದುಂಗುರವ ತೋರಿ ರಕ್ಷಸದಕ್ಷರವನಳಿದಾ 1 ಯದುಕುಲದೊಳುದಯಿಸೆÉ ಹರಿಯು ತದನರಿತು ವಾಯು ಉದಭವಿಸಿ ಭೀಮಾಭಿಧಾನದಿ ಮುದಗೊಳಿಸಲಿಳೆಗೆ ಕುದಿಯುವ ಬಕ ಹಿಡಿಂಬರರಳಿದು ಕೀಚಕನ ಸದೆದು ಅಧಮಕಾರವ ಕುಲವನಳಿದು ವಧಿಸಿzಖಿಲ ಬಲವ ತೋರಿ ಮುದವ ಬೀರಿ ಧರೆಯ ಜನಕೆ ಯಶವ ಗಳಿಸಿದವನ ಇಹಕೆ ಚರಕೆ2 ಗುರುವಾಗವತರಿಸಿ ಧರೆಯ ಸುಜನರು ಕರುಣಾಬ್ಧಿ ಹರಿಯು ಧರೆಯೊಳುಡುಪಿ ಪುರದಿ ಜನಿಸಲಿ ಸುರರಿಗೆ ತಿಳಿಯಲು ಹರಿಯ ಮತವ ಸೃಜಿಸಲಿಳೆಯಲು ತದಾಜ್ಞೆಯ ಕೇಳಲು ಭರದಿ ಮಧ್ವನಾಮ ಪಡೆದು ಹರಿಮತವ ಪಿಡಿಯ ಬೋಧಿಸಲು ನರಸಿಂಹವಿಠಲನ ಸ್ಮರಣೆಯಗೈದು ನರಜನ್ಮ ಸಾರ್ಥಕವು ಪರಮಪದವ ಗೈದು 3
--------------
ನರಸಿಂಹವಿಠಲರು
ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ಸುವಿನೋದವ ಪಡೆದರು ಸುರನರಜನರು ಪ ಪವನಸುತರ ಮತ ಭುವಿಯಲಿ ಸುಲಭದಿ ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ ಗುರು ಬ್ರಹ್ಮಣ್ಯರ ವರಪದ ಕಮಲಗಳ ಪರತÀರ ಭಕುತಿಯಲಿ ಪರಿಪರಿ ಸೇವಿಸಿ ಗುರುಕರುಣದಲಿ ಹರುಷವ ಪೊಂದುತಲಿ ವರವ ಪಡೆದ ಭೂಸುರ ರಾಮಾರ್ಯರ ವರಸತಿಯುದರದಿ ವಹ್ನಿಪುರದೊಳವ ತರಿಸುವ ಧರೆಯೊಳು ಸುಜನಗಣವನು ದ್ಧರಿಸಲು ಮುದದಲಿ ಸಿರಿಪತಿಭಕುತನು 1 ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ ಯತಿಯಾಶ್ರಮವಹಿಸಿ ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ ಅತಿ ಸುಲಭದ ಶ್ರುತಿಗಳ ಸಾರವ ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು 2 ಗಜಗಹ್ವರ ದೇಶದ ನರಪತಿಗಳಿಗೆ ನಿಜವರ ಕರುಣದಲಿ ವಿಜಯಾಭ್ಯುದಯಗಳನು ಸತತ ಪೊಂದಿಸುತ ರಜತಕನಕ ನವಮಣಿಗಣಯುತ ವಾ ರಿಜವನು ಪೋಲುವ ಸಿಂಹಾಸನದಲಿ ಸುಜನ ಸಮೂಹಕೆ ನಿಜಪದಯುಗಳಾಂಬುಜ ಸೇವೆ ನೀಡಲು 3 ನಂದತೀರ್ಥರ ವರಶಾಸ್ತ್ರಗಳನ್ನು ಚಂದದಿ ವಿವರಿಸಲು ಚಂದ್ರಿಕಾ ನ್ಯಾಯಾಮೃತ ಮೊದಲಾದ ಗ್ರಂಥಗಳನು ರಚಿಸಿ ಮಂದಜನಕೆ ಮುಚುಕುಂದನ ಶುಭಗುಣ ವೃಂದಗಳನು ಸುಖದಿಂದ ಬೋಧಿಸಲು ಅಂದಪದಗಳನು ರಚಿಸುತ ಶುಭಗುಣ ಸಾಂದ್ರನ ಭಜನಾನಂದ ಪೊಂದಿಸಲು 4 ವಿಜಯೀಂದ್ರ ವಾದಿರಾಜ ಮೊದಲಾದ ನಿಜವರ ಶಿಷ್ಯರುಗಳ ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ ಪುರಂದರ ಸುಜನ ಶಿರೋಮಣಿ ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ ವಿಜಯಸಾರಥಿಯು ಪ್ರಸನ್ನನಾಗಲೆಂದು 5
--------------
ವಿದ್ಯಾಪ್ರಸನ್ನತೀರ್ಥರು
ಆತ್ಮನಿವೇದನೆ ಮನವೇ ನಿನ್ನಯ ನಿಜಮೂಲ ನೀನೋಡು ಸಮರಸವನೆಗೂಡು || ಚಾಲ || ವಿಷಯವಾಸನೆಗಳ ನಿಶಿದು ಹೋಗಲಿ ಕುಳ ಅಸಮ ಸಾಹಸಿಯಾಗಿ ನಿಜಸುಖದೊಳಗೆ ಪ ಹಿಂದೆ ಬಹು ಜನ್ಮದೊಳು ನೀ ತೊಳಲಿ ವಾಸನೆಯೊಳು ಬಳಲಿ ಇಂದೆ ನೀ ಬಂದೆ ನರಜನ್ಮದಲಿ ಎಚ್ಚರು ನಿನಗಿರಲಿ ಮುಂದೆ ಸಿಕ್ಕುವ ನಿಜವಿಲ್ಲದರಲ್ಲಿ ಆ ನಿಮಿತ್ಯದಲೀ ನಿಜದೊಳತಿ ಛಂದದಿ ನಿಲ್ಲೈ 1 ಗುರುಪಾದ ಕಮಲದ ಸೇವೆಯ ಮಾಡಿ ಇಷ್ಟಾರ್ಥವ ಬೇಡಿ ದೃಢದೀ ಅದರಲ್ಲಿ ನಲಿನಲಿಹಾಡಿ ಸತ್ ಶಬ್ದವ ಗೂಡಿ ಮೂಧ್ರ್ನಿಯಲಿ ಲೋಲ್ಯಾಡಿ ದೃಢತರವದಗಿ ನಿರಂತರ 2 ಭಕ್ತಿಭಾವವನೆ ದೃಢಮಾಡು ಸದ್ಧರ್ಮವಗೂಡು ಯುಕ್ತಿಯಿಂದಲೀ ಸಾಧನೆಮಾಡು ಗುರುಪದದೊಳಗಾಡು ವಿ ರಕ್ತಿ ನಿಜವಾಗಿ ಹುರಿಯನೆ ಮಾಡು ಸತ್ಸಂಗದೊಳಾಡು ಅನುರಕ್ತನಾಗಿ ನಿಜ 3 ಕಾಷ್ಠದೊಳಗಿಂದಾ ಅಗ್ನಿಯ ಪುಟ್ಟು ಕಾಷ್ಠವನೆ ಸುಟ್ಟು ಉತ್ಕøಷ್ಟ ಚಿತ್ತವನೆ ಪುಟವಿಟ್ಟು ಜಡಭಾವನೆ ಬಿಟ್ಟು ಥಟ್ಟನೇ ಜ್ಞಾನಾಗ್ನಿ ಪುಟವಿಟ್ಟು ಕ್ಷಡ್ರಿಪುಗಳ ಸುಟ್ಟು ಸದ್ಗುರುವಿನೊಳ್ ಇಟ್ಟ ಶಾಂತಿ ನಿಜ 4
--------------
ಶಾಂತಿಬಾಯಿ
ಇತ್ತೆ ಏತಕ್ಕೆ ಈ ನರಜನ್ಮವ ಸತ್ಯ ಸಂಕಲ್ಪ ಹರಿ ಎನ್ನ ಬಳಲಿಸುವುದಕೆ ಪ. ಬಂಧುಬಳಗವ ಕಾಣೆ ಇಂದಿರೇಶನೆ ಭವದಿ ಬೆಂದು ನೊಂದೆನೊ ನಾನು ಸಿಂಧುಶಯನ ಬಂದ ಭಯಗಳ ಬಿಡಿಸಿ ನೀನೆ ಪಾಲಿಸದಿರಲು ಮಂದಮತಿಗೆ ಇನ್ನು ಮುಂದೆ ಗತಿ ಏನೊ 1 ಕಾಣದಲೆ ನಿನ್ನನು ಕಾತರಿಸುತಿದೆ ಮನವು ತ್ರಾಣಗೆಡÀುತಲಿ ಇಹುದೊ ಇಂದ್ರಿಯಗಳೆಲ್ಲ ಪ್ರಾಣಪದಕನೆ ಸ್ವಾಮಿ ಶ್ರೀನಿವಾಸನೆ ದೇವ ಜಾಣತನವಿದು ಸರಿಯೆ ಫಣಿಶಾಯಿಶಯನ 2 ಸಾಧನದ ಬಗೆಯರಿಯೆ ಸರ್ವಾಂತರ್ಯಾಮಿಯೆ ಮಾಧವನೆ ಕರುಣದಲಿ ಕಾಯಬೇಕೊ ಹಾದಿ ತೋರದೊ ಮುಂದೆ ಮುಂದಿನಾ ಸ್ಥಿತಿಯರಿಯೆ ಛೇದಿಸೊ ಅಜ್ಞಾನ ಹೇ ದಯಾನಿಧಿಯೆ 3 ಸರ್ವನಿಯಾಮಕನೆ ಸರ್ವಾಂತರ್ಯಾಮಿಯೆ ಸರ್ವರನು ಪೊರೆಯುವನೆ ಸರ್ವರಾಧೀಶ ಸರ್ವಕಾಲದಿ ಎನ್ನ ಹೃದಯದಲಿ ನೀ ತೋರೊ ಸರ್ವ ಸಾಕ್ಷಿಯೆ ಸತತ ಆನಂದವೀಯೊ 4 ಆನಂದಗಿರಿನಿಲಯ ಆನಂದಕಂದನೆ ಆನಂದ ಗೋಪಾಲಕೃಷ್ಣವಿಠ್ಠಲಾ ಆನಂದನಿಲಯ ಶ್ರೀ ಗುರುಗಳಂತರ್ಯಾಮಿ ನೀನಿಂದು ಸರ್ವತ್ರ ಕಾಯಬೇಕಯ್ಯ 5
--------------
ಅಂಬಾಬಾಯಿ
ಇದು ಯಾತರ ಬಾಳೋಣಾ | ಮನವೇಗತಿ ಹಾದಿಯಾ ನೆನೆದೇನಾ ಪ ನರಜನ್ಮದಲಿ ಬಂದು ಪರಿಪರಿಯಲಿ ನೊಂದು | ಬರಿಯಾವಡಲ ಹೊರೆದೇನಾ 1 ತಲೆವೂರಿ ತಪಗೂಡಿ ಹಲವ ಕಾಲವ ಮಾಡಿ | ನೆಲೆಯ ಲೇಶವ ಪಡೆದೇನಾ 2 ತಂದೆ ಮಹಿಪತಿ ನಂದನ ಸಾರಥಿ ಹೊಂದುವದು ಇನ್ನಾರೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದ್ದರೇನು ಇಲ್ಲದಿದ್ದರೇನು ಬುದ್ಧಿಯಿಲ್ಲದವನು ಬಾಳಿದ್ದರೇನು ಪ ಮಕ್ಕಳಿಲ್ಲದ ಮನೆಯು ಅರಮನೆ ಆದರೇನು ತಕ್ಕ ದಾನವ ಕೊಡದ ಧನವಿದ್ದರೇನು ದುಃಖ ಸುಖಗಳನು ಕೇಳದ ನೆಂಟರಿದ್ದರೇನು ಅಕ್ಕರದಿ ತಾನೊಬ್ಬ ಉಂಡರಾಗುವುದೇನು 1 ನರಜನ್ಮ ದೊರೆತಾಗ ಹರಿಯ ನೆನೆಯದಿರೇನು ಪಾತಕಿ ಆಗಿ ಬಾಳಿದ್ದರೇನು ದುರಿತ ಕಾರ್ಯದೊಳಿದ್ದ ಬುದ್ಧಿಹಾಕಿದರೇನು ಕರುಣರಹಿತನು ತಾನು ಅರಸಾದರೇನು 2 ಮಾತು ಕೇಳದ ಮಗನು ಮನೆಯಲ್ಲಿ ಇದ್ದರೇನು ಸೋತು ನಡೆಯದ ಬಂಟತನವಿದ್ದರೇನು ನೀತಿ ತಿಳಿಯದೆ ಹರಿಯ ಕಥೆಯ ಕೇಳಿದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನು 3 ವೇದವನೋದದಾ ವಿಪ್ರನಾದರು ತಾನು ದ್ವಾದಶಿ ನಾಮವನು ಬಡಕೊಂಡರೇನು ಹಾದರಕೆ ಮೆಚ್ಚಿದಾ ಚಲ್ವೆ ಆದರೇನು ಆದಿ ತಿಳಿಯದೆ ಬೂದಿ ಬಡಕೊಂಡರೇನು 4 ಶರಣು ಬಂದವರ ಅನ್ಯರಿಗೊಪ್ಪಿಸದೇ ತಾನು ಕೊರಳ ಕೊಯಿದವನ ಧನ ಸೆಳೆದರೇನು ವರದ ಹನುಮೇಶ ವಿಠಲನಂಘ್ರಿಗಳ ನುತಾ ಸ್ಮರಿಸದಲೇ ನೂರೊರುಷ ಬಾಳಿದರೇನು 5
--------------
ಹನುಮೇಶವಿಠಲ
ಈ ಊರೋಳ್ಳೇದು ಪ ದೇವರ ಕೃಪೆ ಒಂದಾದರೆ ಸಾಕು ಅ.ಪ ತಂಟೆ ಮಾಳ್ಪ ಭಂಟರೈವರ ಗೆದ್ದರೆ ತಾನೆಲ್ಲಿದ್ದರು ಭಯವಿಲ್ಲಣ್ಣ 1 ಜಲತೃಣ ಕಾಷ್ಠಕೆ ವಸತಿ ಈ ಊರು ಬಲು ಸಜ್ಜನಗಳ ನೆರೆ ಈ ಊರು ಫಲಗಳುಂಟು ಮಾಡುವುದೀ ಊರು ಹೊಲಗದ್ದೆ ತೋಟಗಳಿಹ ಊರು 2 ಕೇಳಿದ ಪದಾರ್ಥ ದೊರೆಯುವ ಊರು ವೇಳೆಗೆ ಅನುಕೂಲವು ಈ ಊರು ತಾಳ ಮೇಳ ವಾದ್ಯಗಳಿಹ ಊರು ಸೂಳೆ ಬೋಕರಿಗೆ ಕಷ್ಟದ ಊರು 3 ಕಷ್ಟಪಡುವ ನರ ಭ್ರಷ್ಟನಲ್ಲವೇ ಮೂರು ಬಿಟ್ಟು ತಿರುಗುವ ಜನರಿಗೆ 4 ನರಜನ್ಮವೆಂಬ ಊರಿಗೆ ಬಂದು ಗುರುರಾಮವಿಠ್ಠಲನ ಕರುಣನ ಪಡದರೆಕರತಲಾಮಲಕವಿದು ಕೈವಲ್ಯಕೆ 5
--------------
ಗುರುರಾಮವಿಠಲ
ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಪ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು1 ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಕೇಳೆಲವೊ ಮರ್ಕಟ 2 ಹಾಳು ಹರಟೆಗೆ ಹೋಗಬೇಡ ನೀ ಕಂಡ | ಕೂಳನು ತಿಂದು ಒಡಲ್ಹೊರಿಯಬೇಡ || ಕಾಲ ವ್ಯರ್ಥ ಕಳಿಯ ಬೇಡ ನಮ್ಮ | ಶ್ರೀ ಹರಿಯ ದಯಮಾಡ 3 ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ | ಮಣ್ಣುಕೂಡಿದವರ ನೀ ನೋಡಾ || ಅನ್ಯ ಶಾಸ್ತ್ರವನೋದಬೇಡಾ ನಮ್ಮ | ಬೋಧ ಮೈ ಮರೆತಿರಬೇಡಾ 4 ಗೋ ವಿಪ್ರರ ಸೇವೆ ಮಾಡು ಸೋಹಂ | ಭಾವಗಳನು ಬಿಟ್ಟು ದಾಸತ್ವ ಕೊಡು || ಕೇವಲ ವೈರಾಗ್ಯ ಮಾಡು ವಿಜಯ || ಲಜ್ಜೆಯ ಈಡ್ಯಾಡೊ5 ನಾನು ಎಂಬುದು ಬಿಡು ಕಂಡ್ಯ ಎನ್ನ | ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ || ಜ್ಞಾನಿಗಳ ಒಳಗಾಡು ಕಂಡ್ಯ ವಿಷಯ | ಬೀಳುವಿ ಯಮಗೊಂಡಾ 6 ಕಷ್ಟ ಪಡದೆ ಸುಖಬರದು ಕಂ- | ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು || ದುಷ್ಟ ವಿಷಯ ಆಶೆ ಜರಿದು ವಿಜಯ- | ಕೂಗೆಲವೊ ಬಾಯಿ ತೆರೆದು 7
--------------
ವಿಜಯದಾಸ
ಎಂತಹುದೊ ನಿನ್ನಯ ಭಕುತಿ ಎನಗೆ - ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಪ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು 1 ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ 2 ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ 3 ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ ಮಾತಾಪಿತರನುಜರೆಂಬಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು 4 ಇನಿತುಪರಿಯಲಿ ನಾನು ಹಲುಬಿದೊಡೆನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯುನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟಕನಕಾದ್ರಿಯೊಳು ನೆಲಸಿದಾದಿಕೇಶವರಾಯ 5
--------------
ಕನಕದಾಸ