ಒಟ್ಟು 35 ಕಡೆಗಳಲ್ಲಿ , 24 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಇದೆ ಇದೆ ಉಡುಪಿಪುರ ನಮ್ಮ ಪದುಮನಾಭನು ನೆಲೆಸಿರುವ ಮಂದಿರ ಪ. ಬಂದ ಆಯಾಸಗಳೊಂದು ಕಾಣಿಸದಿನ್ನು ಸಿಂಧು ತಡಿಯಲಿಪ್ಪ ಪಟ್ಟಣ ನೋಡೆ ಸುಂದರ ಗೋಪುರ ಅಂದವಾಗಿಹ ಬೀದಿ ಬಂದೆವೆ ಗುರು ಹಿರಿಯರ ಕೃಪೆಯಿಂದ 1 ಮೊದಲೆ ತೋರುವುದು ಶ್ರೀ ರಾಘವೇಂದ್ರ ಮಠ ಅದರ ಬದಿಯಲ್ಲೆ ಕೃಷ್ಣಪುರ ಮಠವು ಅದರೆದರಲ್ಲೆ ಶಿರೂರು ಶ್ರೀಗಳ ಮಠ ಎದುರೆ ಕಾಣುವುದೆ ಕನಕ ಮಂಟಪವು 2 ಕಿಂಡಿಯಲ್ಲಿ ನೋಡಿ ಪುಂಡರಿಕಾಕ್ಷನ ಕಂಡು ವಂದಿಸಿ ಮಹಾದ್ವಾರಕೆ ಬನ್ನಿ ಮಂಡೆ ಬಾಗಿಸಿ ಬನ್ನಿ ಮಹಾಪ್ರದಕ್ಷಿಣಿಗಾಗಿ ಕಂಡು ಸಾಗಿರಿ ಮುಂದೆ ಕಾಣೂರು ಮಠವ 3 ಎರಡನೆಯ ಬೀದಿಯಲಿ ಬಲದ ಮಹಾದ್ವಾರ ಗಿರಿಜೆಯರಸ ಚಂದ್ರೇಶ್ವರನ ಗುಡಿ ಎರಗಿ ಮುಂದ್ವರಿಯೆ ಎಡದಲ್ಲಿ ಸೋದೆಯ ಮಠ ಅ ದರ ಪಕ್ಕವೆ ಪುತ್ತಿಗೆ ಮಠ ನೋಡಿ 4 ಬರಬರುತ ಬೀದಿ ಎರಡು ಪಕ್ಕಗಳಲ್ಲಿ ಇರುವ ಅಂಗಡಿ ಸಾಲು ವ್ಯಾಸಾದಿ ಮಠಗಳ್ ನಿರರುತಿ ಕೋಣದಿ ಆದಮಾರು ಮಠ ಅ ದರ ಪಕ್ಕವೆ ಪೇಜಾವರ ಮಠವೆನ್ನಿ 5 ಮುಂದೆ ಒಂದೆರಡ್ಹೆಜ್ಜೆಯಿಂದ ಬರಲು ಅಲ್ಲಿ ಸುಂದರವಾದ ಪಲಿಮಾರು ಮಠ ಅಂದ ನೋಡುತ ಸಾಗಲರ್ಧ ಪ್ರಥಮ ಬೀದಿಯಿಂದ ಬಲಗಡೆ ತಿರುಗೆ ಅನಂತೇಶ್ವರ 6 ಚತುರ ಬೀದಿಯ ಮಧ್ಯೆ ರಾಜಿಸುತಿಹ ಗುಡಿ ಅತಿ ಉನ್ನತವಾದ ಗರುಡಸ್ಥಂಭ ಪ್ರಥಮ ಪ್ರದಕ್ಷಿಣೆ ದ್ವಾರ ದರ್ಶನಗಳು ಗತಿಸಿ ಪೋದುವು ನಮ್ಮ ಪಾಪರಾಶಿಗಳು 7 ನಡೆಯಿರಿ ನಡೆಯಿರಿ ಕೃಷ್ಣನ ಮಠದೆಡೆ ಬಡಿಯುತಲಿಹರು ನಗಾರಿಗಳು ತಡೆಯದೆ ತೆಗೆವರು ಮಹಾದ್ವಾರವೀಗಲೆ ಒಡೆಯ ಕೃಷ್ಣನ ನೋಡ ಬಲ್ಲಿರೆಲ್ಲ 8 ಬೆಳಗು ಝಾವದ ನಾಲ್ಕು ತಾಸಿನ ಭೇರಿಯು ಒಳಗೆ ಪೋಗಿರಿ ಎಂದು ಕೂಗುತಿದೆ ಬಲು ಬೇಗ ಸ್ನಾನ ಮಾಡುತ ಮಧ್ವಸರಸಿನೋಳ್ ಚಲುವ ಕೃಷ್ಣನ ನೋಡ ಬನ್ನಿರೆಲ್ಲ 9 ಮುನಿವರರೆದ್ದು ಸ್ನಾನವಗೈದು ಉಷಃಕಾಲ ಘನಪೂಜೆಗೈದು ಪೊಂಗಲು ದೋಸೆಯ ಮುನಿವರದಗೆ ನೈವೇದ್ಯವರ್ಪಿಸಿ ತಮ್ಮ ಮನದಣಿಸುತ್ತಲಾನಂದಿಪರು 10 ಬಾಲತೊಡಿಗೆಯನಿಟ್ಟ ಬಾಲರೂಪನ ನೋಡಿ ನೀಲಮೇಘಶ್ಯಾಮ ನಿರ್ಮಲಾತ್ಮ ಆಲಯದೆಡಬಲ ಗರುಡ ಮುಖ್ಯಪ್ರಾಣ ಓಲೈಸೆ ಗೋಪಾಲಕೃಷ್ಣವಿಠಲನ 11
--------------
ಅಂಬಾಬಾಯಿ
ಅಧ್ಯಾಯ ಐದು ಲೋಕ ಮೋಹಕ: ಪಾತು ಮಾಧವ: ಧ್ವನಿ ರಾಗ:ಯರಕಲ ಕಾಂಬೋದಿ ಅಟತಾಳ ತಿರುಗಿ ವೇಂಕಟಗಿರಿ ಏರಲು ಪ ಪದ್ಮನಾಭನ ಸ್ಮರಿಸಿ ಬಿದ್ದಳು ಮೂರ್ಛಿತಳಾಗಿ ಸದ್ದು ಮಾಡಿದರಲ್ಲಿ ಇದ್ದ ಗೆಳತಿಯರೆಲ್ಲ ಮುದ್ದು ಮುಖದವಳೆ ನೀ ಎದ್ದು ಮಾತಾಡೆಂದರು ಪದ್ಮಿನಿಯು ತಾ ಕೇಳಿ ಎದ್ದು ನುಡಿಯದೆ ಇರಲು ಸಿದ್ಧಮಾಡಿ ಬೇಗೊಬ್ಬ ಬುದ್ಧಿವಂತೆಯ ಕಳುಹಿ ಗದ್ದಲಮಾಡದೆ ಅಂದಣವನು ತರಿಸಿ ಪದ್ಮ ಗಂಧಿಯ ಕೊಂಡು ಎದ್ದು ನಡೆದರು ಪುರಕೆ ಸುದ್ದಿ ಹರಡಿತು ಅಲ್ಲಿ ಗದ್ದಲಾಯಿತು ಬಹಳ 1 ಬಂದಳಲ್ಲಿಗೆ ತಾಯಿ ಅಂದಳೀಪರಿ ನೋಡಿ ಇಂದು ಎಲ್ಲಿಗೆ ಚಿಕ್ಕ ಕಂದಮ್ಮ ನೀ ಪೋಗಿದ್ದೆ ಇಂದು ಬಾಡಿಹುದೇಕೆ ಇಂದು ಮೈಯೊಳು ಜ್ವರ ಬಂದಿಹುದೇಕಮ್ಮಯ್ಯ ಮುಂದೆ ಮಾತಾಡದಿರಲು ತಂದೆ ಕೇಳಿದನಾಗ ಸುಂದರಿಯಳೆ ದಾರೇನಂದರಮ್ಮಯ್ಯ ನಿನಗೆ ಅಂದು ಅವರನು ಬಿಡದೆ ಕೊಂದು ಹಾಕುವೆ ಪೇಳು ಅಂದ ಮಾತಿಗೆ ತಾನು ಒಂದು ಮಾತಾಡಲೊಲ್ಲಳು 2 ತಿಳಿಯಲೊಲ್ಲದು ಎಂದು ಬಳಲಿ ಆಕಾಶರಾಜ ಕಳವಳಿಸುತ ಕರೆಕಳಿಸಿ ಬಲ್ಲವರನು ತಿಳಿಯಬಲ್ಲವರೆಲ್ಲ ತಿಳಿದು ಹೇಳಿರಿ ಎಂದ ಕೆಲವರೆಂದರು ಪಿತ್ತ ತಲೆಗೆ ಏರಿಹುದೆಂದು ಕೆಲವರೆಂದರು ಭೂತ ಬಲಿಯ ಚಲ್ಲಿರಿ ಎಂದು ಕೆಲವರೆಂದರು ಗ್ರಹಗಳ ಬಾಧೆ ಇರುವದು ಉಳಿದ ಮಂದಿಗೆ ಮತ್ತೆ ತಿಳಿಯಲಾಗದಾಯಿತು ಚಲುವನಂತಾದ್ರೀಶನ ಚಲುವಿಕೆಯನೆ ಕಂಡು 3 ವಚನ ಬಹುಶೋಕವನು ಮಾಡುತಲಿ ತಾ ಕರಿಸಿ ಕೇಳಿದನು ನಾಕೇಶಗುರು ಹೀಗೆ ತಾ ಕೇಳುತಲಿ ನುಡಿದ ಆಕಾಶನೃಪ ಚಿಂತೆಯಾಕೆ ಬ್ರಾಹ್ಮಣರ ಏಕಾದಶಾವರ್ತಿ ಏಕಚಿತ್ತದಲಿ 1 ಲೇಸಾಗಿ ತಿಳಿಯೆಂದು ಉರ್ವೀಶ ಭಕುತಿಯಂ ಆಸನಾದಿಗಳಿಂದ ಭೂಸುರರಿಗೆ ಅರ್ಪಿಸಿ ಸಂತೋಷವನು ಮಾಡಿರಿ ಎಂದು ಆಶು ಕಳುಹಿದನಗಸ್ತೇಶ್ವರನಾಲಯಕೆ 2 ಧ್ವನಿ ಕೇವಲ ಚಿಂತೆಯಿಂದಲೇ ದೇವಿಬಕುಲಾವತಿ ತಾನು1 ಪರಿವಾಣದಲ್ಲಿಟ್ಟುಕೊಂಡು ಇದ್ದಲ್ಲೆ ಗೋವಿನಂತೆ 2 ಆಲಯದಿ ಜಗತ್ಪಾಲಯ ಮಲಗಿದ್ದು ಕಂಡು ಬಾಲೆ ತಾಮಾತಾಡಿದಳು ಇಂದು 3 ಹೆಚ್ಚಿನ ವರಹ ಅಚ್ಯುತ ವಾಮನ ಏಳೊ 4 ಉದ್ಧರಿಸಿದಾತನೆ ಏಳೊ ಮುದ್ದು ಹಯವದನ ಏಳೋ 5 ಕೊಡದೆ ಸೃಷ್ಟಿಕರ್ತನು ಹರಿವಾಣ ಕೆಳಗಲ್ಲೆ ದಿಟ್ಟನಡೆದಳು ಬದಿಯಲಿ6 ಎನುತ ಮುಸುಕ ಕಂಡು ಅಂತ:ಕರಣದಿ ನುಡಿದಳು7 ಧ್ವನಿ ರಾಗ:ಕಾಪಿ ಅಟತಾಳ ಯಾಕೆ ಮಲಗಿದೆ ನೀ ಏಳೋ ಅಣ್ಣಯ್ಯಾ ವೇಂಕಟ ಯಾಕೆ ಮಲಗಿದೆ ಏಳೋ ಏನು ಚಿಂತೆಯು ಪೇಳೊ ಲೋಕ ಸಾಕುವ ದಯಾಳೋ ಅಣ್ಣಯ್ಯ ವೇಂಕಟಪ ಬಾಳ ಬಳಲಿದಿಯೊ ಹಸಿದು ಮಾತಾಡದಂಥ ಮೂಲ ಕಾರಣವೇನಿದು ಹಾಲುಸಕ್ಕರೆ ತುಪ್ಪಾಯಾಲಕ್ಕಿ ಪರಮಾನ್ನ ಬಾಲಯ್ಯ ನೀನು ಉಣಲೇಳೋ 1 ವಟದೊಳು ಹೆಬ್ಬುಲಿಯ ಕಂಡಂಜಿದಿಯೇನೊ ನೆಲೆಯು ತಿಳಿಯದು ನಿನ್ನ ಪ್ರಳಯ ಕಾಲಕ್ಕೆ ಆಲದೆಳೆಯೊಳು ಮಲಗಿದವನೋ2 ಹಗಲ್ಹೊತ್ತು ಮಲಗಿದ ದವನಲ್ಲೊ ಹೆತ್ತತಾಯಿ ಆಣೆ ಸತ್ಯವಾಣಿ ನೀಪೇಳೋ ಚಿತ್ತ ವ್ಯಾಕುಲವು ಯಾಕೆ3 ಕೊಂಬುವರೋಮುನ್ನ ಇಂದು ಮೋಹಿತನಾಗಿರುವಿ4 ಬಾಹುವದುಕಂಡು ಮರಳು ಮಾಡಿದಳೋ ನಿನ್ನ 5 ತಕ್ಕ ಉಪಾಯಾ ಅಕ್ಕರವಾಗುವದೆನಗೆ 6 ಎನ್ನ ಮುಂದೆ ನೀ ಸಂಶಯ ಬಿಡು ಚನ್ನಿಗನಂತಾದ್ರೀಶನೆ 7 ವಚನ ಕಣ್ಣೀರುವರಸುತಲೆದ್ದು ಕೀರವಾಣಿಯೇಕೇಳು ಘೋರು ದು:ಖವ ತನಗೆ ಆರಿಗುಸರಲಿ ನಾನು ಆರಿ ಹೇಳುವೆ ನಿನಗೆ ಸಾರಾಂಶ ಮಾತು 1 ನೀನೆ ಎನಗ್ಹಿರಿಯಣ್ಣ ನೀನೆಗಜರಾಜೇಂದ್ರ ವರಧ್ರುವರಾಯ ನೀನು ಸರ್ವವು ಅಭಿಮಾನ ರಕ್ಷಕಳು 2 ಎಂಬೋರನ್ಯಾರನು ನಾ ಎನ್ನ ಮನಸ್ಸಿನ ಅರಣ್ಯದೊಳು ರೂಪ ಲಾವಣ್ಯ ಮುಖವು ಹುಣ್ಣಿಮೆಯ ಚಂದ್ರ 3 ಕಣ್ಣಮೂಗಿಲೆ ಸಂಖ್ಯೆ ಜನ್ಮದಲಿ ಮಾಡಿದ್ದು ಅನ್ಯಾಯದಲಿ ಎನ್ನ ಪ್ರಾಣವನು ಬಿಟ್ಟಿತು ಉಳಿದೆ ಮುನ್ನವಳ ಹೊರತು ಮನ ಉಣ್ಣಲೊಲ್ಲದು ನಿದ್ರೆ ಕಣ್ಣಿಗಿನ್ನೆಲ್ಲಿ 4 ನೀನು ಎಂದದು ಮೋಹಿಸುವಂಥ ಜಾಣೆಯನು ಕಳೆದಂಥ ಮಾನಿನಿಯ ಇರಲುನಾನು ಬದುಕುವನಲ್ಲ ಖೂನ ಪೇಳುವೆನು 5 ಯಾನ ಬರುವದು ಹೆಚ್ಚು ಉಂಟು ಕ್ಷೋಣಿಯಲಿ ಕಟ್ಟಿ, ದಾನದೊಳು ಸಾಹಸ್ರದಾನ ಪಾತ್ರರಿಗೆ ತಿಳಿ ಒಂದು ಕಲ್ಯಾಣ ಕಟ್ಟಿದರೆ 6 ಧ್ವನಿ ರಾಗ:ಸಾರಂಗ ಭಿಲಂದಿತಾಳ ಬಕುಲಾದೇವಿ ತಾ ನುಡಿದಳು ಆ ಕಾಲಕ್ಕೆ ಹೀಗೆ ದೇವಾಧೀಶನೆ ನಿನ್ನ ಕೇವಲ ಮರುಳು ಈವತ್ತಿಗೆ ಮಾಡಿದಳು ಯಾವಕೆ ಅವಳು 1 ಪೂರ್ವಜನ್ಮದಲಾಕೆ ಯಾವಕೆ ಬಂದಿಹಳು ಆ ವಾರ್ತೆ ಪೇಳೊ 2 ಇಂಥ ಮಾತನು ಲಕ್ಷ್ಮಿಕಾಂತಾ ಚಿಂತಿಸಿ ನುಡಿದಾ 'ಶ್ರೀಮದನಂತಾದ್ರೀಶ’ 3 ವಚನ ತಾ ವನದರಲಿರುತಿರಲು ದೇವಿಯನು ಅಪಹರಿಸಿ ತಾ ಒಯ್ಯ ಬೇಕೆಂಬೋ ಭಾವದಲಿ ಬಂದಾ ಆ ವೇಳೆಯಲಿ ಅಗ್ನಿದೇವ ಪತ್ನಿಯಲ್ಲಿದ್ದ ಶ್ರೀ ವೇದವತಿಯನ್ನು ದೇವೇಂದ್ರನ ಸಹಿತ ಆವಾಹನ ಮಾಡಿ ತಾ ವಾಸಮಾಡಿದಳು ಕೈಲಾಸದಲ್ಲಿ1 ಮುಂದೆ ರಾಮನು
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಯಾಡಿ ಬಂದ್ಯೋ ಮುದ್ದು ರಂಗಯ್ಯಾ ನೀ - * ನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಪ ಆಲಯದೊಳಗೆ ನೀನಾಡದೆ ಬೆಣ್ಣೆ ಪಾಲು ಸಕ್ಕರೆಯನೊಲ್ಲದೆ ಚಿಕ್ಕ ಬಾಲೇಯರೊಳು ನೀನಾಡದೆ ಬಾಲಯ್ಯ ನೀಯೆನ್ನ ಕಣ್ಣ ಮುಂದಾಡದೆ 1 ಬಿಟ್ಟ ಮುತ್ತಿನ ಬೊಗಸೆ ಕಂಗಳು ಫಣಿಯೊಳಿಟ್ಟ ಕಸ್ತೂರಿ ತಿಲಕ ಗಂಧವು ದಿಟ್ಟತನದಿ ಬರುವ ಅಂದವು ಮುದ್ದು ಕೃಷ್ಣ ನೀಯೆನ್ನ ಕಣ್ಣ ಮುಂದಾಡದೆ 2 ಅಷ್ಟದಿಕ್ಕಲಿ ಅರಸಿ ಕಾಣದೆ ಬಾಳ ದೃಷ್ಟಿಗೆಟ್ಟೆನೊ ನಿನ್ನ ನೋಡದೆ - ನ್ನೆಷ್ಟು ಪೇಳಲಿ ಹೇಳಬಾರದೆ ಶ್ರೀದ - ವಿಠಲ ನೀಯೆನ್ನ ಕಣ್ಣ ಮುಂದಾಡದೆ 3
--------------
ಶ್ರೀದವಿಠಲರು
ಎಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀಎಲ್ಲ್ಯಾಡಿ ಬಂದ್ಯೋ ಎನ್ನ ಕಣ್ಣಮುಂದಾಡದೆ ಪ ಆಲಯದೊಳಗೆ ನೀನಾಡದೆ ಚಿನಿ-ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕಬಾಲರೊಡನೆ ಕೂಡ್ಯಾಡದೆ ಮುದ್ದುಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ1 ಬಟ್ಟ್ಟಮುತ್ತಿನ ಬೊಗಸೆ ಕಂಗಳು ಪಣಿಯೊ-ಳಿಟ್ಟ ಕಸ್ತೂರಿ ತಿಲಕದಂದವುದಿಟ್ಟತನದಿ ಕೂಡ್ಯಾಡಲುಪುಟ್ಟ ಕೃಷ್ಣಯ್ಯ ನೀ ಎನ್ನ ಕಣ್ಣ ಮುಂದಾಡದೆ2 ಅಷ್ಟ ದಿಕ್ಕಲಿ ಅರಸಿ ಕಾಣದೆ ಬಹಳದೃಷ್ಟಿಗೆಟ್ಟೆನು ನಿನ್ನ ನೋಡದೆ ಇ-ನ್ನೆಷ್ಟು ಹೇಳಲಿ ಕೇಳಬಾರದೆ ರಂಗ-ವಿಠಲ ನೀ ಎನ್ನ ಕಣ್ಣ ಮುಂದಾಡದೆ3
--------------
ಶ್ರೀಪಾದರಾಜರು
ಏತಕೆ ಒಣಭ್ರಾಂತಿ ತಿಳಿಯದು ಮೂರುದಿನದ ಸಂತಿ ನೀತಿಗೆಟ್ಟು ಸತಿಮೋಹದಿ ಕುಳಿತೆಮದೂತರೆಳೆಯುವಾಗೇನಂತಿ ಪ ಬರುವಾಗೊರ್ವಬಂದಿ ಬರುತಲೆ ಮಂದಿ ಮಕ್ಕಳೆಂದಿ ಇರು ಇರುತೆಲ್ಲ ನನ್ನದೆಂದಿ ಮರೆವಿನ ಆಲಯದೊಳು ನಿಂದಿ ಕರುಣವಿಲ್ಲದೆತುಸು ಹೆಡತಲೆಮೃತ್ಯು ಮುರಿದು ತಿನ್ನುವಾಗ್ಯಾರಿಲ್ಲ ಹಿಂದೆ 1 ತನುಜನರು ಇವರು ಧನಕನಕಿರುವತನಕ ಹಿತರು ಜನಕಜನನಿಯರು ಕೊನೆಗೆ ಸಂಗಡ ಬರರ್ಯಾರು ಕನಿಕರವಿಲ್ಲದೆ ಕಾಲದೂತರು ಘನಬಾಧೆಪಡಿಸಲು ಬಿಡಿಸರೋರ್ವರು 2 ಭೂಮಿ ಸೀಮೆಯೆಲ್ಲ ಈ ಮಹರಾಜ್ಯ ಭಂಡಾರ ಸುಳ್ಳು ಪಾಮರ ಸಂಸಾರ ಕಾಮಿಸಿ ಕೆಡಬೇಡೇಲೆ ಮಳ್ಳ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಭಜಿಸಿ ಭವಗೆಲಿದು ನೀ ಬಾಳೋ3
--------------
ರಾಮದಾಸರು
ಗೋವಿಂದಾಷ್ಟೋತ್ತರ ನಾಮಾವಳಿ ಹೃದ್ಗತ ತಮನಾಶ ಗೋವಿಂದ | ಎನ್ನಹೃದ್ಗುಹದೊಳು ತೋರೋ ಗೋವಿಂದ ಪ ಅಲವ ಮಹಿಮ ಹರಿ ಗೋವಿಂದ | ನಮ್ಮಅಲವ ಭೋದರ ಪ್ರೀಯ ಗೋವಿಂದ ||ಆಲಯದೊಳು ನಿಲ್ಲೊ ಗೋವಿಂದ | ಹೃ-ದಾಲಯದಲಿ ತೋರೊ ಗೋವಿಂದ 1 ಇಕ್ಷುಚಾಪನ ಪಿತನೆ ಗೋವಿಂದ | ನೀನಿಕ್ಷುಧನ್ವಾರಿ ನುತ ಗೋವಿಂದ ||ಈಕ್ಷಿಸೋ ಕರುಣದಿ ಗೋವಿಂದ | ನಿ-ನ್ನೀಕ್ಷಿಸ ಲೋಶವೇನೊ ಗೋವಿಂದ 2 ಉರಗ ಶಯನನೆ ಗೋವಿಂದ | ನಮ್ಮಉರಗಾಯಿ ವೈಕುಂಠ ಗೋವಿಂದ ||ಊರೂರು ಚರಿಸಿದೆ ಗೋವಿಂದ | ನಿ-ಮ್ಮೂರಿಗೆ ಕರೆದೊಯ್ಯೊ ಗೋವಿಂದ 3 ಋಗಾದಿ ತ್ರಯಿಮಯಿ ಗೋವಿಂದ | ಹರಿಋಗ್ವಿನುತನೆ ಗುರು ಗೋವಿಂದ ||Iೂಕ್ಷ ಸದ್ವಿನುತನೆ ಗೋವಿಂದ | ಹರಿIೂಕಾರ ಪ್ರತಿಪಾದ್ಯ ಗೋವಿಂದ 4 ಏತತ್ತೆನಿಸಿಯು ಹೃದ್ಗ ಗೋವಿಂದ | ನೀ ನೇತಕೆ ಕಾಣಿಯಾಗಿಹೆ ಗೋವಿಂದ ||ಐತದಾತ್ಮ್ಯಕ ಸರ್ವ ಗೋವಿಂದ | ನೀನೈತರುವುದು ಮನಕೆ ಗೋವಿಂದ 5 ಸತಿ ಗೋವಿಂದ | ನೀನೌತು ಕೊಂಡಿಹದೇಕೊ ಗೋವಿಂದ 6 ಅಂಗಾಂಗಿ ಭಾವದಿ ಗೋವಿಂದ | ನೀನಂಗಾಂಗದಿ ಕ್ರೀಡಿಪೆ ಗೋವಿಂದ ||ಅಹರರ್ಹಮನದಲಿ ಗೋವಿಂದ | ನೀಅಹರಹರ್ವಿಹರಿಸೋ ಗೋವಿಂದ 7 ಕಪಿಲಾತ್ಮ ಶ್ರೀ ಹರಿ ಗೋವಿಂದ | ನಮ್ಮಕಪಿವರ ಪೂಜ್ಯನೆ ಗೋವಿಂದ ||ಖಪತಿಗಮನ ಗುರು ಗೋವಿಂದ | ಜಗಖರ್ಪರ ಸೀಳಿದ ಗೋವಿಂದ 8 ಗರುಡಧ್ವಜನೆ ಬಾರೋ ಗೋವಿಂದ | ಜಗಂಗರುವವ ಕಳೆಯೊ ಗೋವಿಂದ ||ಘರ್ಮಾಸ ಸಮಂತಾತು ಗೋವಿಂದ | ಸೂಕ್ತಘರ್ಮಕ್ಕೆ ವಿಷಯನೆ ಗೋವಿಂದ 9 ಓಂಕಾರ ಪ್ರತಿಪಾದ್ಯ ಗೋವಿಂದ | ಪಾ-ಙ್ತವು ಜಗವೆಲ್ಲ ಗೋವಿಂದ ||ಚರ್ಮದೊಳುದ್ಗೀಥ ಗೋವಿಂದ | ಇದ್ದುಚರ್ಮ ಲಾವಣ್ಯದ ಗೋವಿಂದ 10 ಛಂದಸ್ಸಿನಿಂಛನ್ನ ಗೋವಿಂದ | ನಾಗಿಛಂದೋಭಿಧನೆನಿಪೆ ಗೋವಿಂದ ||ಜಂಗಮ ಚರವ್ಯಾಪ್ತ ಗೋವಿಂದ | ಎಮ್ಮಜಂಗುಳಿಗಳ ಕಳೆಯೊ ಗೋವಿಂದ 11 ಝಷ ರೂಪಿ ಕಮಠನೆ ಗೋವಿಂದ | ನಮ್ಮಝಷ ಕೇತುಪಿತ ಕಾಯೊ ಗೋವಿಂದ ||ಜ್ಞಾನ ಜ್ಞೇಯ ಜ್ಞಾತೃ ಗೋವಿಂದ | ಪ್ರ-ಜ್ಞಾನ ಘನನೆನಿಪೆ ಗೋವಿಂದ 12 ಟಂಕಿ ಎಂಬುವನೆ ಗೋವಿಂದ | ನಮ್ಮಾಟಂಕವ ಕಳೆಯೋ ಗೋವಿಂದ ||ಠಕ್ಕು ಠವಳಿಗಾರ ಗೋವಿಂದ | ನಮ್ಮಠಕ್ಕಸಿ ಹಾಕದಿರು ಗೋವಿಂದ 13 ಡರಕೊ ಡರ್ಯಾಭಿಧ ಗೋವಿಂದ | ನಮ್ಮೆಡರನು ಪರಿಹರಿಸೊ ಗೋವಿಂದ ||ಢಣ ಢಣ ನಾದದಿ ಗೋವಿಂದ | ಬಲುಢಣಿರೆಂಬೊ ವಾದ್ಯದಿ ಗೋವಿಂದ 14 ಣನಾಮ ವಾಚ್ಯನೆ ಗೋವಿಂದ | ಪ್ರ-ಣಮನ ಮಾಡುವೆನೋ ಗೋವಿಂದ ||ತರುಣಾರ್ಕ ಪ್ರಭೆಯ ಗೋವಿಂದ | ನಮ್ಮತರುಣಿ ದ್ರೌಪದಿ ವರದ ಗೋವಿಂದ 15 ಥರಥರವರ್ಣನೆ ಗೋವಿಂದ | ಬಲ್ಪ್ರಮಥನ ಶೀಲನೆ ಗುರು ಗೋವಿಂದ ||ದರ ಕಂಬುಧರನೆ ಗೋವಿಂದ | ತ್ರಿ-ದಶರ ಪರಿಪಾಲ ಗೋವಿಂದ 16 ಧರ್ಮಸು ಗೋಪ್ತನೆ ಗೋವಿಂದ | ಸ-ಧ್ದರ್ಮ ನಾಮಕ ಗುರು ಗೋವಿಂದ ||ನರೆಯಣಾಭಿಧ ಗುರು ಗೋವಿಂದ | ನಮ್ಮನರಸಖನೆನಿಸಿಹೆ ಗೋವಿಂದ 17 ಪರಮ ಪುರುಷ ಗುರು ಗೋವಿಂದ | ಕಾಯೊಪರಮಾನಂದ ಪ್ರದನೆ ಗೋವಿಂದ ||ಫಲರೂಪನು ನೀನೆ ಗೋವಿಂದ | ಇದೆಫಲಿತಾರ್ಥವೊ ಗುರು ಗೋವಿಂದ 18 ಬಗೆ ಬಗೆ ಕರ್ಮಗಳ್ ಗೋವಿಂದ | ಮಾಡಿಬಗೆ ಬಗೆ ಲೀಲನೆ ಗೋವಿಂದ ||ಭರ್ಗ ರೂಪಿಯೆ ಗುರು ಗೋವಿಂದ | ನಮ್ಮಭರ್ಮ ಗರ್ಭನ ಪಿತ ಗೋವಿಂದ 19 ಮದಜನಕಮಜ್ಜದಿ ಗೋವಿಂದ | ನಮ್ಮಮದನ ಗೋಪಾಲನೆ ಗೋವಿಂದ ||ಯಜ್ಞ ಭುಗ್ಯಜ್ಞನೆ ಗೋವಿಂದ | ಮತ್ತೆಯಜ್ಞ ಸಾಧನ ನೀನೇ ಗೋವಿಂದ 20 ರಣದೊಳರ್ಜುನ ಪಾಲ ಗೋವಿಂದ | ಹಗರಣವನೆ ಕಳೆಯೊ ಗೋವಿಂದ ||ಲವಕುಶ ಪಿತನೆನಿಪೆ ಗೋವಿಂದ | ನೀನಲವಪೂರ್ಣ ಮಹಿಮ ಗೋವಿಂದ 21 ವರ್ಣಗಳ್ಧ್ವನಿಗಳು ಗೋವಿಂದ | ಸರ್ವವರ್ಣಿಪುದು ನಿನ್ನ ಗೋವಿಂದ ||ಶರೊ ಆಭಿಧ ಜೀವನ್ನ ಗೋವಿಂದ | ಮೀಟಿಶರೀರಾಖ್ಯನೆನಿಸುವೆ ಗೋವಿಂದ 22 ಷಡ್ಗುಣ ಪರಿಪೂರ್ಣ ಗೋವಿಂದ | ನೀನೆಷಡ್ವಾದಿ ಸ್ವರ ವ್ಯಾಪಿ ಗೋವಿಂದ ||ಸತ್ತಾದಿ ಪ್ರದ ರೂಪಿ ಗೋವಿಂದ | ನೀನೆಸತ್ತತ್ವ ಪ್ರತಿಪಾದ್ಯ ಗೋವಿಂದ 23 ಹರಿ ಹರಿ ಎಂದರೆ ಗೋವಿಂದ | ಪಾಪಹರಿ ಸೂವಿ ನೀನೇ ಗೋವಿಂದ ||ಳಾಳೂಕ ಆಭಿಧ ಗೋವಿಂದ | ಕಾಯೊಳಕಾರ ಪ್ರತಿಪಾದ್ಯ ಗೋವಿಂದ 24 ಕ್ಷಮಿಸೆನ್ನ ಅಪರಾಧ ಗೋವಿಂದ | ಬಲಿಕ್ಷಮೆಯನಳೆದ ಗುರು ಗೋವಿಂದ ||ಕ್ಷಮಕ್ಷಾಮಾಭಿಧ ಗುರು ಗೋವಿಂದ | ನೀಲಕ್ಷುಮಿ ಸಹ ನೆಲಸೊ ಗೋವಿಂದ 25 ಜ್ಞಾನಗಮ್ಯನೆ ಗುರು ಗೋವಿಂದ | ತತ್ವಜ್ಞಾನವ ಪಾಲಿಸೋ ಗೋವಿಂದ ||ಜ್ಞಾನಿಗೆ ಪ್ರಿಯತಮ ಗೋವಿಂದ | ನಿನಗೆಜ್ಞಾನಿ ಜನರು ಪ್ರಿಯರು ಗೋವಿಂದ 26 ಏಕ ಪಂಚಾಶತು ಗೋವಿಂದ | ವರ್ಣಏಕಾತ್ಮ ಮಾಲೇಯ ಗೋವಿಂದ ||ಲೋಕೈಕನಾಥ ಗುರು ಗೋವಿಂದ | ವಿಠಲಸ್ವೀಕರಿಸೆನ್ನ ಕಾಯೋ ಗೋವಿಂದ 27
--------------
ಗುರುಗೋವಿಂದವಿಠಲರು
ಜಾತಿಭ್ರಷ್ಟ ಹೊಲೆಮಾದಿಗರಿವರಲ್ಲವೇನೋ ನೀತಿಬಾಹಿರರಾಗಿ ಆಚರಿಸುವವರು ಪ ಪನ್ನಂಗಶಯನ ಉನ್ನತ ಕತೆ ಕೀರ್ತ ನ್ಯನ್ನು ಕೇಳೆನೆ ಮುಖವನ್ನು ಹಿಂತಿರುವಿ ಭಿನ್ನ ಬೇಸರಿಲ್ಲದೆ ಅನ್ಯಜನ ಸುದ್ದಿಯೊಳು ಕುನ್ನಿಯಂದದಿ ದಿನಗಳನ್ನು ಕಳೆವವರು 1 ಆಲಯದ ಸತಿಯಳ ತಾಳದೆ ತುಸುತಪ್ಪು ತಾಳಿಯನ್ಹರಕೊಂಡು ದಾಳೀಯ ಹೊಡೆದು ಮೇಲುಜಾತಿಲಿ ಹುಟ್ಟಿ ಕೀಳು ಸೂಳೇರಿಗೊಲಿದು ಹೇಳಿದತೆರ ಕುಣಿದು ಬೀಳುಗಳೆವವರು 2 ಸದ್ಧರ್ಮಕಾರ್ಯಕ್ಕೆ ಇದ್ದುದ ಸಲ್ಲಿಸೆನಲು ಕದ್ದು ತಂದುಕೊಡುವೆವೆಂದಬದ್ಧ ನುಡಿಯುವವರು ಬದ್ಧ್ದ........ಬಂದು ಒದ್ದು ಕೂಡ್ರಿಸಲಾಗ ಸದ್ದಿಲ್ಲದೆ ತಂದು ಬೇಡಿದ್ದು ಕೊಡುವವರು 3 ಜ್ಞಾನಿಗಳು ಬಂದರೆ ಗೋಣೆತ್ತಿನೋಡದೆ ಹೀನಜನರಿಗೆ ಬಹುಮಾನ ಕೊಡುವವರು ಧ್ಯಾನ ದಾಸರ ತರದಿ ಜ್ಞಾನದ ಮಾತ್ಹೇಳಿ ಗೇಣ್ಹೊಟ್ಟಿಗೆ ಪರರ ಗೋಣು ಮುರಿವವರು 4 ತಾಸಿನ ಮೋಜೆಂಬ ನಾಶನ ಜಗಮಾಯ ಮೋಸನರಿಯದೆ ಯಮಪಾಶದೊಳು ಬಿದ್ದು ದಾಸಜನಪ್ರಿಯ ಜಗದೀಶ ಶ್ರೀರಾಮನ ಧ್ಯಾಸಮುರಿದು ದು:ಸ್ಸಹವಾಸದಿರುವವರು 5
--------------
ರಾಮದಾಸರು
ನದಿಗಳು ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ ನೀ ಮುದ್ದು ಮಂಗಳಾಂಗನ ಮುಖ ತೋರಿಸೆ ಗಂಗಾದೇವಿ ಪ ವಾಮನನಖದಿಂದ ಒಡೆದÀು ಬ್ರಹ್ಮಾಂಡ ಬಹಿರಾವರಣದಿಂದಿಳಿದೆಯೆ ಬಹಿರಾವರಣದಿ ಇಳಿದು ನಿರಂಜನ ಆಲಯದೊಳು ಬಂದೆ ಭರದಿಂದ1 ಹರಿಪಾದೋದಕವಾಗಿ ಹರಿದು ಬಂದೆಯೆ ನೀನು ಹರನ ಜಟೆಯಲ್ವಾಸವ ಮಾಡಿ ಹರನ ಜಟೆಯಲ್ವಾಸವ ಮಾಡಿ ನೀ ಮೇರುಗಿರಿಯಲ್ಲಿ ನಾಲ್ಕು ಸೀಳಾದೆಯೆ 2 ಜಕ್ಷು ಭದ್ರಾ ಸೀತಾ ಎಂಬ ಮೂವರ ಬಿಟ್ಟು ಭರತಖಂಡಕೆ ಬಂದೆ ಬಹುದೂರ ಭಾಗಮ್ಮ ಪ್ರತ್ಯಕ್ಷ ಅಳಕನಂದನ ತಾಯಿ 3 ಸಾಗರನರಸಿ ಪ್ರಯಾಗದಿ ಮರದ ಬಾಗಿಣವನು ಕೊಂಬೆ ವೇಣಿಯ ದಾನ ಕೊಂಬೆ ವೇಣಿಯ ದಾನ ಮುತ್ತೈದೇ- ರಾಗಿರೆಂದ್ಹರಸಿ ಪೂಜೆಯಗೊಂಬೆ 4 ಸಗರನ ಮಕ್ಕಳ ಅಗಿವೆ ಕಡಿವೆನೆಂದು ಭಗೀರಥನ್ಹಿಂದೆ ಬಂದೆಯೆ ನೀನು ಭಗೀರಥನ್ಹಿಂದೆ ಬಂದೆಯೆ ಹಿಮಾಲಯ ದಾಟಿ ಜಾಹ್ನವಿ 5 ಗಮನ ಮಾಡುವ ಗಂಗಾ ಸಮನಾಗಿ ಹರಿದೆ ಸಂಗಮಳಾಗಿ ಸಮನಾಗಿ ಹರಿದೆ ಸಂಗಮಳಾಗಿ ತ್ರಿವೇಣಿ ಯುಗಳ ಪಾದಗಳಾರು ತೋರಿಸೆ 6 ಭೀಷ್ಮನ ಜನನಿ ಭೀಮೇಶ ಕೃಷ್ಣನ ಪುತ್ರನ(ತ್ರಿ ನೀ?) ದೋಷವ ಕಳೆದÀು ಸಂತೋಷದಿ ದೋಷವ ಕಳೆದÀು ಸಂತೋಷದಿ ಸಾಯುಜ್ಯ ಬ್ಯಾಸರದಲೆ ಕೊಟ್ಟು ಸಲಹಮ್ಮ 7
--------------
ಹರಪನಹಳ್ಳಿಭೀಮವ್ವ
ನಮ್ಮ ರಂಗ ಮಧುರೆಗೆ ನಡೆತರಲು ಪ ಮಥುರೆಗೆ ನಡೆತರಲು ಅತಿ|ಹರುಷದಲಿ ಅಕ್ರೂರನೊಡನೆ| ರಥದಲಿ ಕುಳಿತು ಫಡ ಫಡಫಡಲೆಂದು| ಪಥದಲಿ ನಡಸ್ಯಾಡುತಲಿ 1 ಬಿಲ್ಲಹಬ್ಬದ ನೆವದಲ್ಲಿ|ಫುಲ್ಲಲೋಚನ ಮೋಹನ ಕೃಷ್ಣ| ಇಲ್ಲಿಗೆ ಬಂದನು ಎನುತಲಿ ಕೇಳಲು| ಎಲ್ಲರು ನಡೆದರು ನೋಡಲಾಗಿ 2 ಆಲಯದೊಳಗೆ ನಿಲ್ಲದೇ|ಬಾಲಕಿಯರು ತಮತಮ್ಮ| ಚಾಲವರುತಿಹಾ ತೊಟ್ಟಿಲೊಳಗಿನಾ|ಬಾಲಕರಿಗೆ ಮೊಲೆಗುಡದೆ 3 ಒಬ್ಬಳು ಅರೆಯಣ್ಣೆತಲೆಯಲಿ|ಒಬ್ಬಳು ತಿಗರವ ಹಚ್ಚಿದ ಮೈಯಲಿ ನಡೆದರು ಸಂಭ್ರಮದಿಂದ4 ಅಚ್ಚಮೈಯಲಿ ಕುಳಿತಿರೆ ಒಬ್ಬಳು|ಬಚ್ಚಲೊಳಗೆ ಮಜ್ಜಕನಾಗಿ ಅಚ್ಯುತನಾತುರದಿಂದಲಿ ಒಬ್ಬಳು ಎಚ್ಚರ ದೇಹದ ಬಿಟ್ಟು ನಡೆದಳು 5 ಎಲೆಳುಶಿಶುವೆಂದು ಬಗಲಿಲಿ|ಅಳತೆಯ ಮಾನವನಿರಿಸಿಕೊಂಡು| ನೆಲೆನೊಡದೇ ನಡೆದಳೊಬ್ಬಳು|ಚೆಲುವ ಕೃಷ್ಣನ ನೋಡಲಾಗಿ6 ಕದವನು ಒತ್ತಿಮುಂದಕ|ಒದಗದಿ ಕೆಲವರು ಮಾಳಿಗೆ ಏರಿ| ಸದಮಲಾನಂದಗ ತಲೆಯನು|ಬಾಗಿ ಪದುಮಕರವ ಮುಗಿದು7 ದಣ್ಣನೆ ನೋಡೀ ನೋಡುತಾ|ಕಣ್ಣುಪಾರಣೆ ಮಾಡಿಕೊಂಡು| ಮುನ್ನಿನ ದೋಷವ ಕರಗುವ ಪರಿಯಲಿ| ಪುಣ್ಯ ಸಾಮಗ್ರಿಯ ಮಾಡಿದರಂದು 8 ಕಂಡಾ ಪರಿಯ ರೂಪವಾ| ಧರಿಸಿಕೊಂಡು ಅಂತರಂಗದಲಿ|ತ್ವರಿತದಿಂದಲಿ ಧ್ಯಾಯಿಸುತಾ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ 1 ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ2 ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ3 ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ 4 ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ5
--------------
ವ್ಯಾಸರಾಯರು
ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ ವ್ಯಾಳಿಗೆ ಒದಗಿಸೋ ಹರಿಯೆ ಮರಿಯೆ ಪ ಕಾಲನ ದೂತರು ಕಠಿಣರೆ ಸರಿ ವ್ಯಾಳಿಯು ಹೇಳಿ ಕೇಳಿ ಬರುವದಲ್ಲ ಆಲಯದವರ ಶಕುತಿಯಲ್ಲೇನೋ ಲಾಲಿಸಬೇಕೇನೊ ಎನ್ನ ಬಿನ್ನಪ 1 ಕಾಲನ ಸ್ಥಿತಿಯೆಂತು ಮೇಷದ ಗುಂಪಿಗೆ ತೋಳದ ಪರಿಯೆಂದು ನಾ ಕೇಳಿ ಬಲ್ಲೆ ಕಾಳು ಕಪಟೆ ತಿಂಬ ಮೂಷಕಗಳಿನ್ನು ಕಾಲ ಭುಜಂಗದಂತೆ ಕಂಡು ಬಲ್ಲೆನೊ2 ಹೇಸಿ ವಿµಯವೆಂಬಾ ಮಡಿವಿನೊಳಗೆ ವೈದು ಮೋಸಗೊಳಿಸುವ ಸ್ಥಿತಿಯು ಮನಸಿನ ಪರಿ ತಿಳಿದಿನ್ನು ಈ ಸಮಯಕ್ಕೆ ನಾಮ ಒದಗಿಸಯ್ಯ 3
--------------
ವ್ಯಾಸತತ್ವಜ್ಞದಾಸರು
ನಿಲ್ಲ ಬಾ ನಿಲ್ಲ ಬಾ ಮೆಲ್ಲಮೆಲ್ಲನೆ ಹೆಜ್ಜೆನಿಟ್ಟುನಿಲ್ಲ ಬಾರೋ ಕೃಷ್ಣಾ ನಿಲ್ಲ ಬಾರೋ ಪ ದುಷ್ಟ ಪೂತನಿಯ ದೊಡ್ಡ ಹೊಟ್ಟೆಯೊಳಾಡಿದಿ ಮಂದಿದೃಷ್ಟಿ ತಾಕಿಹುದೊ ರಕ್ಷೆನಿಟ್ಟು ಮುದ್ದಿಸುವೆ 1 ಆಲಯದಂಗಳದೊಳು ಲೀಲೆ ಮಾಡುವಿಯೊ ಕೆಟ್ಟಬಾಲೆಯರ ಗಾಳಿ ಸೋಕಿಹುದೋ ಹಣ್ಣು ನಿವಾಳಿಸಿಒಗೆವೆ ಕೃಷ್ಣ 2 ಇಂದಿರೇಶ ನಿನ್ನ ಬಹುಮಂದಿ ನೋಡುವರೋ ದೃಷ್ಟಿಇಂದು ಆಗಿಹುದೊ ಮಾಳ್ಪೆ ಕದಲಾರತಿಯ ಕೂಸೆ 3
--------------
ಇಂದಿರೇಶರು
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ಪ ನೀ ದೇಹದೊಳಗೊ ನಿನ್ನೊಳು ದೇಹವೊ ಹರಿಯೆಅ ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ1 ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆ ಎರಡು ಜಿಹ್ವೆಯೊಳಗೊಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ 2 ಕುಸುಮದಲಿ ಗಂಧವೋ ಗಂಧದಲಿ ಕುಸುಮವೋಕುಸುಮ ಗಂಧಗಳೆರಡು ಆಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿಕೇಶವರಾಯಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ 3
--------------
ಕನಕದಾಸ